ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 10, 2013

ನೋ ಕಿಂಗ್ ಮೇಕರ್ ಓನ್ಲೀ ’ಕ್ವೀನ್’ ಮೇಕರ್ !!

 ಚಿತ್ರ ಋಣ:ಅಂತರ್ಜಾಲ 
ನೋ ಕಿಂಗ್ ಮೇಕರ್ ಓನ್ಲೀ , ’ಕ್ವೀನ್’ ಮೇಕರ್ !!

ಹದಿನೈದು ವರ್ಷಗಳ ಹಿಂದಿನ ಜಾಯಮಾನದ ಜಗತ್ತು ಇಂದಿನದಲ್ಲ; ತಂತ್ರಜ್ಞಾನದಲ್ಲಿ ಮನೋವೇಗ ಹುಟ್ಟಿ, ನಿನ್ನೆಯದೇ ಬಹಳ ಹಳತಾಗಿಬಿಡುವಷ್ಟು ತ್ವರಿತಗತಿಯ ಕಾಲಮಾನವಿದು. ಅಪ್ಪ-ಅಮ್ಮ ಮಕ್ಕಳಿಗೆ ಹೇಳಿಕೊಡುವ ಕಾಲ ಹಿಂದಿನದಾಗಿದ್ದರೆ, ಬಾಲ್ಯವನ್ನು ಕಳೆದು ಮಿಕ್ಕ ಜೀವನದಲ್ಲಿ ಅಪ್ಪ-ಅಮ್ಮ ಮಕ್ಕಳಿಂದಲೇ ಅರಿಯಬೇಕಾದ ಹಲವು ವಿಷಯಗಳು ಕಾಣಿಸುತ್ತಿವೆ. ಅದೊಂದು ಕಾಲಕ್ಕೆ ಚುನಾವಣೆಯ ನೀತಿ ಸಂಹಿತೆಗಳ ಮಹತ್ವ ಪ್ರಜೆಗಳಿಗೆ ಗೊತ್ತೇ ಇರಲಿಲ್ಲ; ಚುನಾವಣೆಯ ದಿನದ ಬೆಳಗಿನವರೆಗೂ ಅಭ್ಯರ್ಥಿಗಳ ಅಬ್ಬರದ ಪ್ರಚಾರ ನಡೆಯುತ್ತಿತ್ತು. ಹಳ್ಳಿಹಳ್ಳಿಗಳ ಮೂಲೆಯಲ್ಲೂ ಚುನಾವಣೆಗಳ ಮುದ್ರಿತ ವಾಲ್ ಪೋಸ್ಟರುಗಳು, ಪೇಂಟ್ ಮಾಡಿ ಹಾಳುಗರೆದ ಗೋಡೆಗಳು. [ಈಚೆಗೆ ಬಂದಿದ್ದು ಪ್ಲಾಸ್ಟಿಕ್ ಪತಾಕೆಗಳು, ಪ್ಲೆಕ್ಸ್ ಕಟೌಟು-ಬ್ಯಾನರುಗಳು.]  ಚುನಾವಣೆ ಮುಗಿದಾನಂತರ ವಾರಗಳ ಕಾಲ ಮತಪೆಟ್ಟಿಗೆಗಳ ಸಾಗಾಣಿಕೆ. ಅಲ್ಲಿ ಮುದ್ರಿತ ಮತಪತ್ರಗಳನ್ನು ತೆಗೆದು ಎಣಿಸುವಿಕೆ, ಅವುಗಳನ್ನು ಆಕಾಶವಾಣಿಯ ಮುಖಾಂತರ ಅರ್ಧರ್ಧ ಗಂಟೆಗೊಮ್ಮೆ ಬಿತ್ತರಿಸುವ ಕ್ರಮ..ಇವೆಲ್ಲಾ ಇದ್ದವಷ್ಟೇ? ಈಗ ವಿದ್ಯುನ್ಮಾನದ ಮತಯಂತ್ರ! ’ಪೀಂಕ್’ ಅನ್ನಿಸಿಬಿಟ್ಟರೆ ಮುಗಿಯಿತು; ಲೆಕ್ಕಾಚಾರವೂ ಬಹಳ ಸುಲಭ. ಅರ್ಧದಿನದಲ್ಲಿ ಎಲ್ಲಾ ಸ್ಪರ್ಧಿಗಳ ಹಣೆಬರಹ ಪ್ರಕವಾಗಿಬಿಡುತ್ತದೆ.

ಹೇಗೆ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದವೋ, ಹೇಗೆ ಕಟ್ಟಡ ನಿರ್ಮಾಣದಲ್ಲಿ ಹೊಸ ಹೊಸ ವಿಧಾನ-ವೈಖರಿ-ಮಾರ್ಪಾಡು-ವಿನ್ಯಾಸಗಳು ಕಂಡವೋ, ಹೇಗೆ ನವನವೀನ ಮಾದರಿಯ ಮೂಲವಸ್ತುವಿನ ಬಟ್ಟೆಗಳು ಸಿದ್ಧಗೊಂಡವೋ ಹಾಗೆಯೇ ಮನುಷ್ಯ ಜನಾಂಗದ ಈ ತಲೆಮಾರುಗಳಲ್ಲಿನ ಬುದ್ಧಿಮಟ್ಟದ ಅಂತರ ಬಹಳವಾಗಿದೆ. ಯಾವ ಅಪ್ಪನೂ ತನ್ನ ಮಗ ತನ್ನಂತೆಯೇ ಆಗಲಿ ಎಂದು ಬಯಸುವುದಿಲ್ಲ, ಮಕ್ಕಳು ತಮಗಿಂತಾ ಹೆಚ್ಚಿನ ಮಟ್ಟವನ್ನು ಸಾಧಿಸಲಿ ಎಂಬುದೇ ಎಲ್ಲಾ ಪಾಲಕರ ಸಹಜ ಅನಿಸಿಕೆ. ಅಂದೆಂದೋ ಅಂದಕಾಲತ್ತಿಲ್ ಹೆಂಡಕುಡಿಸಿದರೆ-ಹಣ ಕೊಟ್ಟರೆ ಮತಹಾಕುತ್ತಿದ್ದ ಆ ಅಪ್ಪ-ಅಮ್ಮಗಳು ಇಂದಿಲ್ಲವೇ ಇಲ್ಲ. ನಾನಾ ಪಕ್ಷಗಳ ಹುರಿಯಾಳುಗಳು ಚುನಾವಣಾ ಸಮಯದಲ್ಲಿ ತಮಗೆ ಕೊಡುವುದು ಅವರ ರಾಜಕೀಯ ಜೀವನದಲ್ಲಿ ಅವರಿಗೆ  ಹುರಿಗಡಲೆ ಇದ್ದಂತೆಯೇ ಎಂಬುದನ್ನು ಜನ ಅರಿತಿದ್ದಾರೆ. ಗೆದ್ದಮೇಲೆ ಹಸಿರುತೋಟವನ್ನು ಹೊಕ್ಕು ಮೇಯಬಲ್ಲ ಬಸವ, ಆ ಖಯಾಲಿಯಲ್ಲಿ ಒಂದಷ್ಟು ಖರ್ಚುಮಾಡಿದ್ದನ್ನು ಆಮೇಲೆ ಮತ್ತೆ ಪರೋಕ್ಷ ಪ್ರಜೆಗಳಿಂದಲೇ ವಸೂಲುಮಾಡುತ್ತದೆ ಎಂಬುದನ್ನು ಅರ್ಥೈಸಿಕೊಳ್ಳದಷ್ಟು ದಡ್ಡರಲ್ಲ ಇವತ್ತಿನ ನಮ್ಮ ಸಮಾಜದ ಜನ. 

ಒಂದು ಮಾತನ್ನು ಕೇಳಿ: ಪ್ರಬುದ್ಧರಾದವರಿಗೆ ಜಾತಿ-ಮತವೆಲ್ಲ ಬರುವುದು ಒಂದು ಹಂತದವರೆಗೆ ಮಾತ್ರ.
ಸಾಮಾಜಿಕ ಜೀವನದಲ್ಲಿ ಅವುಗಳನ್ನೇ ಹಿಡಿದುಕೊಂಡು ಮೆರೆಯಲು ಹೊರಟರೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ರಾಜಕೀಯದಲ್ಲಿರುವವರಿಗೆ ಸಮಷ್ಟಿಪ್ರಜ್ಞೆ ಬೇಕು. ತಾನು ತನ್ನ ಜಾತಿ ಬಲದಿಂದಲೇ ಗೆಲ್ಲುತ್ತೇನೆ ಎಂದುಕೊಳ್ಳುವುದು ದುರಹಂಕಾರವಾಗುತ್ತದೆ; ಹಾಗಾದರೆ ಜಾತಿಯನ್ನು ಬಿಟ್ಟು ಬೇರೇ ಜಾತಿಗಳವರು ನಿಮಗೆ ಬೇಡವೇ? ಅಥವಾ ಜಾತಿಯನ್ನೇ ನೆಚ್ಚಿಕೊಂಡರೆ, ಗೆದ್ದಮೇಲೂ ನೀವು ನಿಮ್ಮ ಜಾತಿಯವರಿಗಾಗಿ ಮಾತ್ರ ಬೇಕಾದ ಕೆಲಸಗಳನ್ನು ಮಾಡಿಕೊಡುವುದಿಲ್ಲ ಎಂಬುದು ಯಾವ ಗ್ಯಾರಂಟ್ರ್ಇ? ರಾಮಕೃಷ್ಣ ಹೆಗಡೆಯವರು ಪ್ರತಿನಿಧಿಸಿದ್ದು ಸಮಾಜದ ಅತಿಚಿಕ್ಕದೆನಿಸಿದ ಬ್ರಾಹ್ಮಣ ಸಮುದಾಯ; ಆದರೆ ಅವರು ಜಾತಿ ಬಲದಿಂದ ಗೆದ್ದಿರಲಿಲ್ಲ ಅಥವಾ ಬ್ರಾಹ್ಮಣರಿಗಾಗಿ ಯಾವುದೇ ಕೆಲಸ-ಕಾರ್ಯಗಳನ್ನು ಪ್ರತ್ಯೇಕವಾಗಿ ಮಾಡಿಕೊಡಲಿಲ್ಲ; ಜಾತೀವಾದ ತೆಗೆದುಕೊಂಡು ಹೋದರೆ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಅನುಭವಿಕರು ಹೇಳಿದ್ದಾರೆ. ಹಾಗಂತ ಬಂಗಾರಪ್ಪನವರೇ ಬ್ರಾಹ್ಮಣರಿಗೆ ಕೆಲಮಟ್ಟಿಗೆ ಉಪಕಾರ ಮಾಡಿದ್ದರು! ಅದೂ ಕೂಡ ಓಲೈಕೆಯಲ್ಲ, ಮಾಡಬೇಕು ಅನ್ನಿಸಿ ಮಾಡಿದ್ದು ಎಂದು ಕೆಲವರು ಹೇಳುತ್ತಾರೆ.  

ಸದ್ಯ ಶಾಸಕರಾಗಲಿರುವ ವೈ.ಎಸ್.ವಿ ದತ್ತಾರವರು ಹೇಳಿದಹಾಗೇ ಜನ ಜಾತಿ, ಮತ, ಹೆಂಡ-ಹಣ, ತೋಳ್ಬಲ ಇವನ್ನೆಲ್ಲಾ ನೋಡುವುದು ಕೆಲವು ಸೀಮಿತ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ; ಅಲ್ಲಿ ಮಾತ್ರ ಬುದ್ಧಿ ಇನ್ನೂ ಅನಾದಿಕಾಲದಲ್ಲೇ ಇದೆ. ತಿಪ್ಪರಲಾಗ ಹಾಕಿದರೂ ದತ್ತಾ ಅವರು ಜಾತಿ ಬಲದಿಂದ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ, ಹಾಗಾದರೆ ಅವರಿಗೆ ಯಾರು ಮತಗಳನ್ನು ಕೊಟ್ಟರು? ಶ್ರೀಸಾಮಾನ್ಯನ ಜೊತೆಗೆ ರೈಲಿನಲ್ಲಿ, ಬಸ್ಸಿನಲ್ಲಿ ಓಡಾಡುವ ದತ್ತರ ಜೊತೆ ಹತ್ತುವರ್ಷಗಳ ಹಿಂದೊಮ್ಮೆ ಕಡೂರಿನಿಂದ ರೈಲಿನಲ್ಲಿ ಪ್ರಯಾಣಿಸಿದ್ದೆ. ನನಗವರ ಪರಿಚಯ ಇರಲಿಲ್ಲ, ಅವರಿಗೆ ನನ್ನ ಪರಿಚಯ ಇರುವುದಂತೂ ದೂರದ ಮಾತು. ಒಂದಷ್ಟು ಜನ ಅವರೊಡನೆ ಪ್ರೀತಿಯಿಂದ, ಸಲುಗೆಯಿಂದ ಮಾತನಾಡುತ್ತಿದ್ದರು. ಅವರ ಜೊತೆ ಹೆಂಡತಿ-ಮಕ್ಕಳು-ಒಬ್ಬ ಅಜ್ಜಿ [ಅವರ ತಾಯಿಯೇ ಇರಬೇಕು] ಇವರೆಲ್ಲಾ ಇದ್ದರು. ಕಾರಿನಲ್ಲಿ ಬೆಂಗಳೂರಿಗೆ ಹಾಯಾಗಿ ಬರುವುದನ್ನು ಬಿಟ್ಟು ಎಲ್ಲರಂತೇ ರೈಲನ್ನೇರಿದ ಅವರು ರಾಜಕೀಯದ ವ್ಯಕ್ತಿ ಎಂಬುದು ಟಿವಿಯಲ್ಲಿ ಕಂಡಾಗಲೇ ಗೊತ್ತಾಗಿದ್ದು. ಊರಿನಲ್ಲಿ ಊರಿನ ಮಗನಾಗಿ ಬೆರೆಯುವ ವ್ಯಕ್ತಿಯನ್ನು ಜನ ಒಪ್ಪದೇ ಹೋದಾರೇ? ಆ ಜನಪ್ರಿಯತೆಯ ಫಲ ಅವರಿಗೀಗ ದಕ್ಕಿದೆ; ಉಳಿಸಿಕೊಳ್ಳುವ ಜವಾಬ್ದಾರಿ ಇದೆ-ಉಳಿಸಿಕೊಳ್ಳಬಹುದೆಂಬ ನಿರೀಕ್ಷಣೆ ಕೂಡ ಇದೆ.

[ಪಕ್ಷಗಳ ಯಜಮಾನರ ಜಾತಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡು] ಜಾತೀ ಪ್ರಾಬಲ್ಯವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಲಿಂಗಾಯತರು ಜಾಸ್ತಿ ಇರುವೆಡೆಗಳಲ್ಲೆಲ್ಲಾ ಕೆ.ಜೆ.ಪಿಯೇ ಬರಬೇಕಾಗಿತ್ತು, ಒಕ್ಕಲಿಗರು ಜಾಸ್ತಿ ಇರುವ ಕಡೆಗಳಲ್ಲೆಲ್ಲಾ ಜೆ.ಡಿ.ಎಸ್ಸೇ ಬರಬೇಕಾಗಿತ್ತು. ಇನ್ನು ಮಿಕ್ಕುಳಿದ ಪಕ್ಷಗಳಲ್ಲಿ ಅಲ್ಲಲ್ಲಿಯ ಸ್ಥಾನಿಕ ಅಭ್ಯರ್ಥಿಗಳ ಜಾತಿಗಳನ್ನಾಧರಿಸಿ ಆಯ್ಕೆ ನಡೆಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ ಎಂದಾಗ ಪ್ರಜೆಗಳ ನಿರೀಕ್ಷೆ ಇನ್ನೇನೋ ಇದೆ ಎಂಬುದು ವ್ಯಕ್ತ; ಅಂದರೆ ಪ್ರಜೆಗಳು ಜಾತೀವಾದಿಗಳಾಗಿ ಮತ ಹಾಕುವುದಿಲ್ಲ, ಅವರಿಗೆ ಉತ್ತಮ ಸರಕಾರ ಮತ್ತು ಉತ್ತಮ ಆಡಳಿತದ ಅಪೇಕ್ಷೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಕಾಂಗ್ರೆಸ್ಸು ಉತ್ತಮ ಆಡಳಿತ ನೀಡುವ ಪಕ್ಷ ಎಂದು ಅವರು ಮತಹಾಕಿದರೇ? ದೇವರಾಣೆಗೂ ಇಲ್ಲ! ನೀರೇ ಇಲ್ಲದ ಪ್ರದೇಶದಲ್ಲಿ ರಾಡಿ ನೀರನ್ನೂ ಜನ ಸಹಿಸಿ ಸ್ವೀಕರಿಸುತ್ತಾರೆ ಹೇಗೋ ಅಧಿಕಾರದಲ್ಲಿದ್ದ ಭ್ರಷ್ಟರಿಂದ ಬೇಸತ್ತ ಜನತೆ ಅನಿವಾರ್ಯವಾಗಿ ಒಪ್ಪಿಕೊಂಡ ಪಕ್ಷ ಕಾಂಗ್ರೆಸ್ಸೇ ಹೊರತು ಕಾಂಗ್ರೆಸ್ಸೆಂಬುದು ಆಯ್ಕೆಯ ಪಕ್ಷವಲ್ಲ!! 

ಸ್ವಾತಂತ್ರ್ಯಾನಂತರ ಐದು ದಶಕಗಳಕಾಲ ಚೆನ್ನಾಗಿ ಮೆದ್ದ ಆ ಜನ ಅಧಿಕಾರದಲ್ಲಿದ್ದಾಗ, ಆರ್.ಟಿ.ಐ ಎಂದರೇನೆಂದೇ ಪ್ರಜೆಗಳಿಗೆ ಗೊತ್ತಿರಲಿಲ್ಲ. ಕಳೆದ ಸರ್ತಿ ಬಿಜೆಪಿ ಅಧಿಕಾರಕ್ಕೆ ಬಂದ ಸಮಯದಲ್ಲೇ ಅದು ಅಂಗೀಕೃತವಾಗಿದ್ದು, ಹಗ್ಗಕಡಿಯುವ ಹನುಮಂತಣ್ಣಗಳಿಗೆ ತೊಂದರೆಯಾಯ್ತು! ಮಗ್ಗುಲಲ್ಲಿ ನಿಂತು ಬಸಿದುಕೊಳ್ಳುವ ಕುಮಾರಣ್ಣನಂಥವರಿಗೆ ಆಟವಾಡುವುದಕ್ಕೆ ಆಸ್ಕರವಾಯ್ತು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಗೆದ್ದ ಬಿಜೆಪಿಯನ್ನು ಅಧಿಕಾರ ಲಾಲಸೆಯಿಂದ ಪೀಡಿಸಿದ ಕುಮಾರಸ್ವಾಮಿಯ ಸರ್ಕಸ್ ಕಂಪನಿಯನ್ನು ಜನತೆ ಮರೆಯುವುದಿಲ್ಲ. ಯಾರೋ ಒಂದಷ್ಟು ಜನ ಈ ಸರ್ತಿ ಮುಖಬಿಡೆಯಕ್ಕೆ ಬಸಿರಾಗಿ ಮತಚಲಾಯಿಸಿದ್ದರೂ, ಕುರುಡು ಅಭಿಮಾನದಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆಮಾಡಿದ್ದರೂ ಜನತೆಗೆ ’ಕುಮಾರ ಲೀಲೆಗಳು’ ಅರ್ಥವಾಗಿಬಿಟ್ಟಿವೆ! ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂಬ ತಂತ್ರವನ್ನು ಜನ ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ.

ಜೆಡಿಎಸ್ ಅಧಿಕಾರದಲ್ಲಿದ್ದಾಗ ಭೂಕಬಳಿಕೆ ಆಗಲಿಲ್ಲವೇ? ಅನಧಿಕೃತ ಗಣಿಗಾರಿಕೆ ನಡೆದಿಲ್ಲವೇ? ಇನ್ನೂ ಅಸಂಖ್ಯ ಲಾಬಿಗಳು ನಡೆದಿವೆ. ಆದರೆ ಅವು ಕಡತಗಳಲ್ಲಿದ್ದು ಈಗ ಅಲ್ಲಲ್ಲೇ ಹೆಗ್ಗಣಬಿಲಗಳಲ್ಲಿ ಏನೂ ಸಿಗದಂತೇ ಅಪ್ಡೆಟ್ ಆಗಿಬಿಟ್ಟಿವೆ ಯಾಕೆಂದರೆ ಯಾವುದೂ ಆನ್ ಲೈನ್ ನಲ್ಲಿ ಸಿಗುತ್ತಿರಲಿಲ್ಲ!! ಆನ್ ಲೈನ್ ಮಾಹಿತಿಗಳನ್ನು ಕಲೆಹಾಕಲು ದೊಡ್ಡದೊಂದು ಟೀಮ್ ಬಿಟ್ಟು ಅದನ್ನು ಸಮರ್ಪಕವಾಗಿ ದುರುಪಯೋಗ ಮಾಡಿಕೊಂಡು ಸರ್ಕಸ್ಸು ಆರಂಭಿಸಿದ್ದು ಕುಮಾರಸ್ವಾಮಿ!! ನಂತರ ನಡೆದ ಕುದುರೆವ್ಯಾಪಾರ, ’ಆಪರೇಶನ್ ಕಮಲ’ ಎಲ್ಲಕ್ಕೂ ಮೂಲಕಾರಣ ಕುಮಾರಣ್ಣ ಎಂಬುದನ್ನು ಜನ ಅಷ್ಟುಬೇಗ ಹೇಗೆ ಮರೆತಾರು? ಕಂಡರಾಗದಿದ್ದ ಬಿಜೆಪಿ ಜನರೊಟ್ಟಿಗೆ ಸಮ್ಮಿಶ್ರ ಸರಕಾರ ಆರಂಭಿಸಲು ಮೊದಲಿಟ್ಟ ಕುಮಾರಣ್ಣನ ಸರ್ಕಸ್ ಕಂಪನಿಯ ನಾಟಕಗಳಿಗೆ, ಹಿನ್ನೆಲೆಯಲ್ಲಿ ಟವೆಲ್ ಮುಚ್ಚಿಕೊಂಡು ಭಾಗವತಿಕೆ ಮಾಡಿದ್ದ ಅನುಭವಿಯೊಬ್ಬರು ತನಗೆ ಏನೂ ಗೊತ್ತಿಲ್ಲವೆಂಬಂತೇ ನಾಟಕವಾಡಿದ್ದೂ ಕೂಡ ಜನರಿಗೆ ತಿಳಿದೇ ಇದೆ. ಅಧಿಕಾರದಲ್ಲಿದ್ದಾಗ ಕಣ್ಣೊರೆಸುವ ತಂತ್ರ ಹೆಣೆದು ಕೆಲವೆಡೆ ’ಗ್ರಾಮವಾಸ್ತವ್ಯ’ ಆರಂಭಿಸಿದ್ದ ಕುಮಾರ, ಬಡವರ ಆ ಮನೆಗಳಿಗೆ ಹೋಗುವಾಗ, ತಿಂಗಳುಗಳಕಾಲ ಮೊದಲೇ ಅನುಯಾಯಿಗಳು ಸಕಲ ಸೌಲತ್ತುಗಳನ್ನೂ ಕಲ್ಪಿಸುತ್ತಿದ್ದು, ವಾಸ್ತವ್ಯದ ಮರುದಿನ ಜಾತ್ರೆಮುಗಿದ ಜಾಗದಂತೇ ಅಲ್ಲಿ ಹಾಕಲಾಗುತ್ತಿದ್ದ ಫ್ಯಾನು, ಕಾಟು ವಗೈರೆ ಎಲ್ಲವನ್ನೂ ಹೊತ್ತೊಯ್ಯುತ್ತಿದ್ದರು! ತಮ್ಮ ಪಾಡಿಗೆ ತಾವಿದ್ದ ಬಡಜನರಿಗೆ ಇದೊಂದು ಹೊಸ ಉಪದ್ವ್ಯಾಪ ಕಾಡುತ್ತಿತ್ತೇ ಹೊರತು ಉಪಕಾರವೇನೂ ಆಗಲಿಲ್ಲ.

ಆರಾರು ತಿಂಗಳಿಗೆ ಅದರ ವಿರುದ್ಧ ಇದರ ವಿರುದ್ಧ ಅಂತ ಪಾದಯಾತ್ರೆ ಹೊರಡುತ್ತಿದ್ದ ಕಾಂಗ್ರೆಸ್ಸಿಗರದು ಇನ್ನೊಂದು ತೆರನಾದ ಡೊಂಬರಾಟ. ಹಾದಿಯುದ್ದಕ್ಕೂ ಡ್ರೈ ಫ್ರೂಟ್ಸ್ ಕೋಸಂಬರಿ ಮೆಲ್ಲುತ್ತಾ ಮಜವಾಗಿ ಕಾಲಹರಣಮಾಡಿದ ಅವರಿಗೆ ಅದೊಂದು ಸುಲಭದ ಅಸ್ತ್ರವಾಗಿ ಮಾರ್ಪಟ್ಟಿತ್ತು. ರಾಜ್ಯದಲ್ಲಿ ಹಿಂದೆ ಕಾಂಗ್ರೆಸ್ಸೇ ಅಧಿಕಾರದಲ್ಲಿರುವಾಗ ಮಾಡಿದ ತಪ್ಪುಗಳಿಗೆ, ಈಗಲೂ ಕೇಂದ್ರದಲ್ಲಿ ಅವರು ನಡೆಸುತ್ತಿರುವ ಲಾಬಿಗಳಿಗೆ ಅವರಲ್ಲಿ ಉತ್ತರವಿಲ್ಲ. ಗುಡ್ಡದಮೇಲಿನ ದನವನ್ನು ಗೋದಾನಮಾಡುವ ಹಾಗೇ ಎದುರಿಗೆ ಕಾಣುವ ಆಡಳಿತಾರೂಢ ಪಕ್ಷಗಳ ತಪ್ಪುಗಳನ್ನು ಮಾತ್ರ, ತಾವೇನೋ ಮಹಾಸಂಭಾವಿತರು ಎನ್ನುವ ಹಾಗೇ ಜನತೆಗೆ ಅವರು ಓರಿಸುತ್ತಲೇ ಇದ್ದರು. ಐದು ದಶಕಗಳಲ್ಲಿ ಕಾಂಗ್ರೆಸ್ಸು ಸಾಧಿಸಿದ್ದೇನು ಎಂದರೆ ರಾಜಕೀಯ ಕ್ರಿಯಾಶಕ್ತಿಗೆ ಅದು ಏನೇನೂ ಅಲ್ಲ. ಯಾವ ರಾಜ್ಯ, ಯಾವ ದೇಶ ಈ ದಿನಗಳಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಮುಂದುವರಿದ ಸ್ವಾವಲಂಬೀ ದೇಶ ಎನಿಸಬಹುದಿತ್ತೋ ಅದನ್ನು ಅಸಾಧ್ಯವೆಂದು ಸಾಧಿಸಿದ್ದೇ ಕಾಂಗ್ರೆಸ್ಸಿಗರ ಮಹಾಸಾಧನೆ!!!  ಇನ್ನುಳಿದಂತೇ ಮಿತ್ರ ಪ್ರಭಾಕರ ನಾಯಕ್ ಅವರು ಒದಗಿಸಿದ ಕಾಂಗ್ರೆಸ್ಸಿನ ಸಾಧನೆಗಳು ಇಂತಿವೆ:
 
2013 - VVIP Chopper Scam
2012 - Coal Mining scandal - INR 1,070,000 crore
2012 - Karnataka Wakf Board Land scam – INR 200,000 crore
2012 - Andhra Pradesh land scandal – INR 100,000 crore
2012 - Service Tax and Central Excise Duty scam - INR 19,159 crore
2012 - Gujarat PSU financial irregularities - INR 17,000 crore
2012 - Maharashtra stamp duty scandal – INR 640 crore
2012 - Ministry of External Affairs gift scandal
2012 - Himachal Pradesh pulse scandal
2012 - Flying Club fraud - INR 190 crore
2012 - Jammu and Kashmir PHE scandal
2012 - Jammu and Kashmir recruitment scandal
2012 - Jammu and Kashmir examgate
2012 - Jammu and Kashmir Cricket Association scandal - Approximately INR 50 crore
2012 - Andhra Pradesh liquor scandal
2011 - UP NRHM scandal - INR 10,000 crore
2011 - ISRO's S-band scam
2011 - KG Basin Oil scam
2011 - Goa mining scam
2011 - Bellary mining scam
2011 - Bruhat Bengaluru Mahanagara Palike scam - INR 3,207 crore
2011 - Himachal Pradesh HIMUDA housing scam
2011 - Pune housing scam
2011 - Pune land scam
2011 - Orissa pulse scam - INR 700 crore
2011 - Kerala investment scam - INR 1,000 crore
2011 - Maharashtra education scam – INR 1,000 crore
2011 - Mumbai Sales Tax fraud - INR 1,000 crore
2011 - Uttar Pradesh TET scam
2011 - Uttar Pradesh MGNREGA scam
2011 - Orissa MGNREGA scam
2011 - Indian Air Force land scam
2011 - Tatra scam - INR 750 crore
2011 - Bihar Solar lamp scam - INR 40 crore
2011 - BL Kashyap - EPFO scam - INR 169 crore
2011 - Stamp Paper scam - INR 2.34 crore
2010 - 2G spectrum scam and Radia tapes controversy
2010 - Adarsh Housing Society scam
2010 - Commonwealth Games scam
2010 - Uttar Pradesh food grain scam
2010 - LIC housing loan scam
2010 - Belekeri port scam
2010 - Andhra Pradesh Emmar scam – INR 2,500 crore
2010 - Madhya Pradesh MGNREGA scam – INR 9 crore
2010 - Jharkhand MGNREGA scam
2010 - Indian Premier League scandal
2010 - Karnataka housing board scam
2009 - Madhu Koda mining scam
2009 - Goa's Special Economic Zone (SEZ) scam
2009 - Rice export scam - INR 2,500 crore
2009 - Orissa mining scam - INR 7,000 crore
2009 - Sukhna land scam - Darjeeling
2009 - Vasundhara Raje land scam
2009 - Austral Coke scam - INR 1,000 crore
2008 - Cash for Vote Scandal
2008 - Hasan Ali black money controversy
2008 - The Satyam scam
2008 - State Bank of Saurashtra scam – INR 95 crore
2008 - Army ration pilferage scam - INR 5,000 crore
2008 - Jharkhand medical equipment scam - INR 130 crore
2006 - Kerala ice cream parlour sex scandal
2006 - Scorpene Deal scam
2006 - Navy War Room Spy Scandal
2006 - Punjab city centre project scam – INR 1,500 crore
2005 - IPO scam
2005 - Oil for food scam
2005 - Bihar flood relief scam - INR 17 crore
2004 - Gegong Apang PDS scam
2003 - Taj corridor scandal
2003 - HUDCO scam
2002 - Stamp paper scam - INR 20,000 crore
2002 - Provident Fund (PF) scam
2002 - Kargil coffin scam[120]
2001 - Ketan Parekh securities scam
2001 - Barak Missile scandal
2001 - Calcutta Stock Exchange scam
2000 - India-South Africa match fixing scam
2000 - UTI scandal - INR 32 crore
1997 - Cobbler scandal
1996 - Hawala scandal
1996 - Bihar land scam - INR 400 crore
1996 - SNC lavalin power project scandal - INR 374 crore
1996 - Bihar fodder scandal - INR 950 crore
1996 - Sukh Ram telecom equipment scam
1996 - C R Bhansali scandal - INR 1100 crore
1996 - Fertiliser import scandal - INR 133 crore
1995 - Purulia arms drop case
1995 - Meghalya forest scam - INR 300 crore
1995 - Preferential allotment scandal – INR 5,000 crore
1995 - Yugoslav Dinar scandal - INR 400 crore
1994 - Sugar import scandal
1992 - Harshad Mehta securities scandal-INR 5,000 crore
1992 - Palmolein Oil Import Scandal, Kerala
1992 - Indian Bank scam - INR 1,300 crore
1990 - Airbus scam
1989 - St Kitts forgery
1987 - Bofors Scam
1981 - Cement Scandal including A R Antulay - INR 30 crore
1976 - Kuo oil scam - INR2.2 crore
1974 - Maruti scam
1971 - Nagarwala scam - INR 60 lakh
1965 - Kaling tubes scam
1964 - Pratap Singh Kairon scandal
1962 - National Defense Fund (during Chinese War)
1960 - Teja loan scam - INR 22 crore
1958 - The Mundhra scam - INR 1.2 crore
1956 - BHU funds misuse - INR 50 lakh
1951 - Cycle import scandal
1948 - Jeep scam - INR 80 lakh
1947 - INA Treasure Scam (transported from
Japan to India, and got looted)


ಅಟಲ್ ಬಿಹಾರಿ ವಾಜಪೇಯಿಯಂತಹ ಮುತ್ಸದ್ಧಿ, ೨೪ ಪಕ್ಷಗಳನ್ನು ಸೇರಿಸಿ ಹೊಲಿದ ಕೌದಿಯನ್ನೇ ಹೊದ್ದುಕೊಂಡು ದೇಶಕ್ಕೆ ದಕ್ಷಿಣೋತ್ತರ, ಪೂರ್ವಪಶ್ಚಿಮ ಭಾಗಗಳನ್ನು ನೇರವಾಗಿ ಸಂಧಿಸುವ ಸುಲಭದ ಮಾರ್ಗಗಳನ್ನು ನಿರ್ಮಿಸಿದ್ದರಿಂದ ಇಂದು ಇಡೀ ದೇಶವೇ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದೆ, ಬಳಸಿಕೊಳ್ಳುತ್ತಿದೆ. ಹಾಗಾದರೆ ವಾಜಪೇಯಿ ಅಧಿಕಾರಕ್ಕೆ ಬರುವವರೆಗೆ ಕಾಂಗ್ರೆಸ್ಸಿಗರಿಗೆ ಅದನ್ನು ಸಾಧ್ಯಮಾಡಲಾಗುತ್ತಿರಲಿಲ್ಲವೇ? ಇದ್ದ ನಾಲ್ಕೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಹಿಂದೆ ದಶಕಗಳಕಾಲ ಕಾಂಗ್ರೆಸ್ಸಿಗರು ಸಾಧಿಸಲಾರದ ವಿಶೇಷಗಳನ್ನು ಹಲವುಪಕ್ಷಗಳ ನಾಯಕನಾಗಿ ವಾಜಪೇಯಿ ಸಾಧಿಸಿ ತೋರಿಸಿದರಲ್ಲಾ..ಬಹುಮತ ಪಡೆದು ಏಕಪಕ್ಷವಾಗಿ ಹಲವು ಸರ್ತಿ ಗೆದ್ದ ಕಾಂಗ್ರೆಸ್ಸಿಗೇಕೆ ಅದು ಸಾಧ್ಯವಾಗಿರಲಿಲ್ಲ?  ಕೇಂದ್ರದಲ್ಲೂ ರಾಜ್ಯದಲ್ಲೂ ಕಾಂಗ್ರೆಸ್ಸು ಸಾಧಿಸಿದ್ದು ಅಷ್ಟಕ್ಕಷ್ಟೆ. ಕಳೆದೈದು ವರ್ಷಗಳಲ್ಲಿ, ನಾವೇನೇ ಅಂದರೂ ಕರ್ನಾಟಕದಲ್ಲಿ ಬಹಳ ಬದಲಾವಣೆಗಳೂ ಅಭಿವೃದ್ಧಿ ಕಾರ್ಯಗಳೂ ನಡೆದಿವೆ ಎಂಬುದನ್ನು, ಒಂದು ರೌಂಡು ಹೋಗಿ ಬಂದಮೇಲೆ ನಾವೆಲ್ಲಾ ಒಪ್ಪಲೇಬೇಕಾಗುತ್ತದೆ. 

ಒಂದುಕಡೆ ಹರಿದುಹೋಗುತ್ತಿದ್ದ ಪಕ್ಷವನ್ನು ಪುನಃ ಹೊಲಿಗೆ ಹಾಕಿ ಸರಿಪಡಿಸಿಕೊಳ್ಳುತ್ತಾ, ಪಕ್ಷದೊಳಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂದೋ ಮಂತ್ರಿಸ್ಥಾನ ದೊರಕಲಿಲ್ಲವೆಂದೋ ಉದ್ಭವಿಸುತ್ತಿದ್ದ ಬಣಗಳನ್ನು ನಿಭಾಯಿಸಿಕೊಳ್ಳುತ್ತಾ, ಕುಮಾರಸ್ವಾಮಿ ಹರಾಜಿಗೆ ಕರೆದ ಕುದುರೆಗಳನ್ನು ಮತ್ತೆ ಮರಳಿ ಲಾಯಕ್ಕೆ ಕರೆದು ತಂದುಕೊಳ್ಳುತ್ತಾ, ಆರ್ಥಿಕ ಮುಗ್ಗಟ್ಟು ಎದುರಾದಾಗ ಹಲವು ಯೋಜನೆಗಳನ್ನು ಮುಂದಿಟ್ಟು ವಿದೇಶೀ ಬಂಡವಾಳಗಳನ್ನು ಪಡೆಯುತ್ತಾ ಸರಕಾರ ನಿಭಾಯಿಸಿದ್ದಕ್ಕೆ ಯಡ್ಯೂರಪ್ಪನವರಿಗೆ ಒಂದು ಸೆಲ್ಯೂಟು; ಇದೇ ಕೆಲಸವನ್ನು ಕುಮಾರಸ್ವಾಮಿಯೇ ಆಗಿದ್ದರೂ ಮಾಡಲಾಗುತ್ತಿತ್ತು ಎಂಬುದನ್ನು ನಾನು ಸುತರಾಂ ಒಪ್ಪಿಕೊಳ್ಳುವುದಿಲ್ಲ! ಆ ವಿಷಯದಲ್ಲಿ ಯಡ್ಯೂರಪ್ಪ ಒಬ್ಬ ದಕ್ಷ ನಾಯಕ ಎಂಬುದರಲ್ಲಿ ಅನುಮಾನವಿಲ್ಲ. ಮೇಲಾಗಿ ಈ ಹಿಂದೆ ಯಾವ ಮುಖ್ಯಮಂತ್ರಿಯೂ ಕಂಡರಿಯದಂತಹ ತಿರುವು-ತೊಂದರೆ-ಪೇಚಾಟಗಳನ್ನು ಅನುಭವಿಸಿಯೂ ಜಯಿಸಿದ್ದು ಯಡ್ಯೂರಪ್ಪ ಮಾತ್ರ! ಆದರೆ ಅವರ ಮಗ್ಗುಲ ಹುಣ್ಣುಗಳೇ ಅವರಿಗೆ ಮುಳುವಾದವು ಎಂಬುದು ವಿಷಾದನೀಯ. ತಮ್ಮೊಳಗಿನ ಒಳಜಗಳಗಳಿಂದ ಮುಖ್ಯಮಂತ್ರಿಯನ್ನು ಜೈಲಿಗೆ ಕಳಿಸಿದ್ದರ ಜೊತೆಗೇ, ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಮೇಲೂ ಮತ್ತೆ ಮರಳಿ ಮುಖ್ಯಮಂತ್ರಿ ಪಟ್ಟವೋ ಪಕ್ಷದ ಅಧ್ಯಕ್ಷಗಿರಿಯೋ ಸಿಕ್ಕದಂತೇ ನೋಡಿಕೊಂಡವರು ಇಂದು ಮರದಕೆಳಗೆ ಬಿದ್ದ ಮಂಗನಂತಾಗಿದ್ದಾರೆ. ಯಡ್ಯೂರಪ್ಪ ಇರದಿದ್ದರೆ ಬಿಜೆಪಿಗೆ ಏನಾಗುತ್ತದೆ ಎಂಬುದೂ ಮತ್ತು ಬಿಜೆಪಿಯನ್ನು ತೊರೆದರೆ ಯಡ್ಯೂರಪ್ಪ ಏನೆಂಬುದೂ ಪರಸ್ಪರ ಆಯಾ ಪಕ್ಷಗಳಿಗೆ ಗೊತ್ತಾಗಿದೆ. ಪಕ್ಷ ಒಡೆಯುವ ಮುನ್ನ ಯಡ್ಯೂರಪ್ಪ ತೀರಾ ’ಶೋಭಾ’ಯಮಾನವಾಗದಿದ್ದರೆ ಪರಿಸ್ಥಿತಿ ಸ್ವಲ್ಪ ಬದಲಿರುತ್ತಿತ್ತೋ ಏನೋ. 

ಏನೇ ಇರಲಿ, ಇಷ್ಟೆಲ್ಲಾ ಪುರಾಣ ಕೊರೆದದ್ದು ಕಾಂಗ್ರೆಸ್ಸು ಎಂಬುದು ನೆಚ್ಚಿನ ಆಯ್ಕೆಯಲ್ಲಾ ಅನಿವಾರ್ಯದ ಆದೇಶ ಎಂಬುದಕ್ಕಾಗಿ. "ಜನ ನಮ್ಮನ್ನು ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ಸು ಅಂದರೆ ಉತ್ತಮ ಆಡಳಿತ ಎಂಬುದು ಜನರಿಗೆ ಗೊತ್ತು" ಎಂದು ಮೀಸೆ ನೀವಿಕೊಳ್ಳುವ ಕಾಂಗ್ರೆಸ್ಸಿಗರು, ’ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬುದನ್ನು ಪ್ರತಿಬಿಂಬಿಸುವ ಜನ. "ಹಿಂದೆ ದಶಕಗಳ ಕಾಲ ನೀವು ನಮ್ಮನ್ನು ಆಳಿದ್ದೀರಿ, ಆಗ ನಿಮ್ಮ ತಪ್ಪುಗಳೂ ಹೇರಳವಾಗಿದ್ದವು. ಅದಕ್ಕೇ ಅಧಿಕಾರದಿಂದ ನಿಮ್ಮನ್ನು ಕೆಳಗಿಳಿಸಿದ್ದೆವು. ನಿಮ್ಮ ಬದಲಿಗೆ ಬಂದವರು ನಿಮ್ಮನ್ನೇ ಅನುಸರಿಸುತ್ತಾ ಹೊರಟರು. ಹೀಗಾಗಿ ಅವರಿಗೂ ಸ್ವಲ್ಪ ನಮ್ಮ ಬಿಸಿ ತಟ್ಟಬೇಕು ಎಂಬ ಸಲುವಾಗಿಯೂ, ನಮಗೆ ಇನ್ನಾವ ಆಯ್ಕೆಯೂ ಇಲ್ಲದ ಕಾರಣಕ್ಕಾಗಿಯೂ ಕಾಂಗ್ರೆಸ್ಸಿಗರಾದ ನಿಮಗೆ ಇನ್ನೊಮ್ಮೆ ಅಧಿಕಾರ ನೀಡುತ್ತಿದ್ದೇವೆಯೇ ಹೊರತು ಇದು ನಮ್ಮ ನೆಚ್ಚಿನ ಆಯ್ಕೆಯಲ್ಲ" ಎಂಬುದು ಜನತೆಯ ಸಂದೇಶವಾಗಿದೆ.

ಚುನಾವಣೆಯಲ್ಲಿ ಮಲಗಿದವರು, ಮಗ್ಗುಲತಿರುವಿಕೊಂಡು, ಚಾದರ ಝಾಡಿಸಿಕೊಂಡು ಅದರಲ್ಲಿರುವ ತಿಗಣೆ, ಜಿರಲೆಗಳನ್ನು ಓಡಿಸಿಕೊಳ್ಳುತ್ತಾ, ತಮ್ಮ ಅಧಿಕೃತ ಧರ್ಮಪತ್ನಿಯನ್ನೂ ಮತ್ತು ಅನಧಿಕೃತ ಅಧರ್ಮಪತ್ನಿಯರುಗಳನ್ನೂ ತತ್ಸಂಬಂಧೀ ಪುತ್ರ-ಪೌತ್ರಾದಿಗಳನ್ನೂ ಸಂಭಾಳಿಸುತ್ತಾ, ಕಳೆದೈದು ವರ್ಷಗಳಲ್ಲಿ ತಾವು ಮಾಡಿದ್ದ ತಪ್ಪುಗಳನ್ನು ಈ ಮುಂದಿನ ಐದು ವರ್ಷಗಳಲ್ಲಿ ಲೆಕ್ಕಾಹಾಕಿಕೊಳ್ಳಬೇಕಾದ  ಕಾಲ ಇದಾಗಿದೆ. ನೆನಪಿರಲಿ ಕನ್ನಡದ ಜನ ನಿಮಗೆಲ್ಲಾ ಬುದ್ಧಿ ಕಲಿಸುವಷ್ಟು, ಬುದ್ಧಿವಂತರಾಗಿದ್ದಾರೆ ಹಾಂ..!

Saturday, May 4, 2013

ಕೊಡುವ ಸರಕು ಚೆನ್ನಾಗಿದ್ದರೆ ಕೊಳ್ಳುವ ಗಿರಾಕಿಗಳು ಇದ್ದೇ ಇರುತ್ತಾರೆ

 ಚಿತ್ರಗಳ ಋಣ: ಅಂತರ್ಜಾಲ 
ಕೊಡುವ ಸರಕು ಚೆನ್ನಾಗಿದ್ದರೆ ಕೊಳ್ಳುವ ಗಿರಾಕಿಗಳು ಇದ್ದೇ ಇರುತ್ತಾರೆ
                                                                --(C)ವಿ.ಆರ್.ಭಟ್, ಹಡಿನಬಾಳ

ಒಂದೇ ಮಣ್ಣಿನಲ್ಲಿ ಮಾವು, ಬೇವು, ಹೊಂಗೆ, ನೇರಳೆ, ಹಲಸು, ಬಾಳೆ, ಸೀಬೆ, ಕಿತ್ತಳೆ ಎಲ್ಲವೂ ಬೆಳೆಯುತ್ತವೆ. ಅದೇ ಮಣ್ಣಿನಲ್ಲಿ ಜಾಜಿ, ಜೂಜಿ, ಮಲ್ಲಿಗೆ, ಸಂಪಿಗೆ, ಕೇದಿಗೆ, ಇರುವಂತಿಗೆ, ಸೇವಂತಿಗೆ, ಕಾಕಡ ಮೊದಲಾದ ಹೂಗಿಡಗಳೂ ಬೆಳೆಯುತ್ತವೆ. ಎಲ್ಲದರ ಬಣ್ಣ, ಆಕಾರ, ಗಾತ್ರ, ಪರಿಮಳ, ರುಚಿ ಮೊದಲಾದ ಅಂಶಗಳಲ್ಲಿ ಭಿನ್ನತೆಯಿದೆ, ವೈಶಿಷ್ಟ್ಯವಿದೆ. ಅದೇ ರೀತಿಯಲ್ಲಿ ಹುಟ್ಟಿದ ಪ್ರತೀ ಜೀವಿಯಲ್ಲೂ ಅದರದ್ದೇ ಆದ ಪ್ರತಿಭೆಯಿದೆ! ಅದರಲ್ಲೂ ವಿಕಸಿತ ಮೆದುಳನ್ನು ಹೊಂದಿರುವ ಮನುಷ್ಯರಲ್ಲಿ, ಗುಣ-ನಡತೆ-ವಿದ್ಯೆ-ಸಂಸ್ಕಾರ-ಸಾಮರ್ಥ್ಯ-ಶ್ರಮ-ಕಾರ್ಯದಕ್ಷತೆಯೇ ಮೊದಲಾದ ಹಲವು ಅಂಶಗಳಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ. ಯಾರೂ ನಿಷ್ಪ್ರಯೋಜಕರಲ್ಲ, ಆದರೆ ಅವರವರ ಮಟ್ಟಿಗೆ ಅವರು ಅವರದೇ ಆದ ಪ್ರತಿಭೆಯಿಂದ ಪ್ರಯೋಜವನ್ನು ಪಡೆಯಲಿಕ್ಕೆ ಸಂಯಮ ಬೇಕು, ಛಲಬೇಕು, ನಿರ್ದಿಷ್ಟ ಗುರಿ ಬೇಕು, ಗುರಿ ತಲ್ಪಲು ಆಯ್ದುಕೊಂಡ ಮಾರ್ಗ ಉತ್ತಮವಾಗಿದ್ದು ಅದರಲ್ಲಿ ತಲ್ಲೀನತೆಯುಂಟಾಗುವಂತಿರಬೇಕು. ಮಾಡುವ ಕೆಲಸದಿಂದ, ಸುತ್ತಲ ಸಮಾಜದಲ್ಲಿ ಸಂಬಂಧಿಸಿದ ಗಿರಾಕಿಗಳ ಹೃದಯದ ಬಿಲ್ಲನ್ನು ಹೆದೆಯೇರಿಸಿ, ಝಲ್ಲೆಂದು ಒಮ್ಮೆ ಆ ಸಿಂಜಿನಿಯನ್ನು ನಾವು ಝೇಂಕರಿಸಿಬಿಟ್ಟರೆ, ’ಮೊಗೆಂಬೋ ಖುಷ್ ಹುವಾ’ ಎಂದುಕೊಳ್ಳುವಂತೆಯೇ ಬಹುಕಾಲ ಅವರಲ್ಲಿ ಅದರ ಸದ್ದು ಅನುರಣನಗೊಳ್ಳುತ್ತಲೇ ಇರಬೇಕು.

ಕೆಲವು ವಿಷಯಗಳಲ್ಲಿ ನಟ ಶಾರುಖ್ ಖಾನ್ ಹೇಳಿಕೆಗಳನ್ನು ನಾನು ಒಪ್ಪಿಕೊಳ್ಳದಿದ್ದರೂ, ಆತನ ಒಂದು ಹೇಳಿಕೆಯನ್ನು ಮೆಚ್ಚಿದ್ದೇನೆ. ಒಮ್ಮೆ ಆತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಾರೋ ಸಿರಿವಂತರ ಮದುವೆ ಪಾರ್ಟಿಯಲ್ಲಿ ನರ್ತನಮಾಡಲು ಬಂದಾಗ, ಮಾಧ್ಯಮದವರು ಕೇಳಿದ್ದರು:"ನೀವೊಬ್ಬ ಖ್ಯಾತ ನಾಯಕನಟ, ಈ ರೀತಿ ಮದುವೆ ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡುವುದು ನಿಮ್ಮ ಘನತೆಗೆ ಕಮ್ಮಿಯಲ್ಲವೇ?" ಅದಕ್ಕೆ ಶಾರುಖ್ ಕೊಟ್ಟ ಉತ್ತರ ಹೀಗಿದೆ:"ನಾನೊಬ್ಬ ನಟ, ನಟನೆ-ಡ್ಯಾನ್ಸ್ ಎಲ್ಲಾ ನನ್ನಲ್ಲಿರುವ ಮಾರಾಟಮಾಡಬಲ್ಲ ಸರಕು. ನರ್ತನದಿಂದ ಅಥವಾ ನಟನೆಯಿಂದ ಉತ್ತಮ ಸಂಭಾವನೆ ಸಿಗುವುದಾದರೆ ಅದನ್ನೇಕೆ ತಿರಸ್ಕರಿಸಲಿ?" ಶಾರುಖ್ ರೀತಿಯಲ್ಲೇ ಹಲವು ಕಲಾವಿದರು ತಮ್ಮ ತಮ್ಮ ಪ್ರತಿಭೆಗಳನ್ನು ಆದಾಯವಾಗಿ ಪರಿವರ್ತಿಸಿಕೊಳ್ಳಲು ಎಲ್ಲೆಲ್ಲಿ ಅವಕಾಶ ಸಿಗುವುದೆಂದು ನೋಡುತ್ತಿರುತ್ತಾರೆ. 

ಹತ್ತು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟಂಟ್ ಒಬ್ಬರ ಕಚೇರಿಯಲ್ಲಿ ಕುಳಿತಿದ್ದೆ. ಅವರ ಮೇಜಿನಮೇಲೆ ’ನೆವರ್ ಗಿವ್-ಅಪ್’ ಎಂಬ ಚಿತ್ರವಿತ್ತು. ಚಿತ್ರದಲ್ಲಿ ಕೊಕ್ಕರೆ ಕಪ್ಪೆಯನ್ನು ನುಂಗಲು ಮುಂದಾಗಿದೆ, ಕೊಕ್ಕರೆಯ ಕುತ್ತಿಗೆಯನ್ನು ತನ್ನೆರಡೂ ಮುಂಗಾಲುಗಳಿಂದ ಕಪ್ಪೆ ಬಿಗಿಯಾಗಿ ಹಿಸುಕಿದೆ. ಅರೆಕ್ಷಣ ನನ್ನ ಮನಸ್ಸನ್ನು ಅದು ಸೆಳೆದಿತ್ತು. ಚಿತ್ರ ತಮಾಶೆಯಾಗಿದೆ, ಆದರೆ ಸಂದೇಶ ಬಲವಾಗಿದೆ. ಹಲವರು ಹಲವಾರು ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ; ಆದರೆ  ಮಾಡುವ ಯಾವೊಂದೂ ಕೆಲಸಗಳು ಅವರ ಮನಸ್ಸಿಗೆ ನೆಮ್ಮದಿ ನೀಡುವುದಿಲ್ಲ. "ಯಾಕೆ ಮಾಡುತ್ತೀರಿ" ಎಂದು ಕೇಳಿದರೆ "ಏನೋ ಸಂಬಳ ಸಿಗುತ್ತದಲ್ಲಾ, ಹೊಟ್ಟೆಪಾಡು" ಎನ್ನುತ್ತಾರೆ. ಹೊಟ್ಟೆಪಾಡಿಗಾಗಿ ಮಾತ್ರ ಕೆಲಸಮಾಡಿದರೆ ಆ ಕೆಲಸದಲ್ಲಿ ಶ್ರದ್ಧೆ ಇರುವುದಿಲ್ಲ. ಯಾವಾಗ ಕೆಲಸದಲ್ಲಿ ಶ್ರದ್ಧೆ ಇರುವುದಿಲ್ಲವೋ ಆ ಕೆಲಸ ಉತ್ತಮವಾಗಿ ನಡೆಯುವುದು ಸಾಧ್ಯವೇ ಇಲ್ಲ. ಹಳ್ಳಿಯಿಂದ ಬಂದ ಪದವೀಧರ ಹುಡುಗನೊಬ್ಬ ಬಹಳಕಾಲ ಯಾವುದೂ ಕೆಲಸ ಸಿಗದ ಕಾರಣಕ್ಕೆ ಹೋಟೆಲ್ ಒಂದರಲ್ಲಿ ವೇಟರ್ ಆಗಿ ಸೇರಿಕೊಂಡ. ತಮ್ಮ ಹಳ್ಳಿಯ ಕಡೆಯ ಯಾರಾದರೂ ತಾನಿರುವ ಹೋಟೆಲಿಗೆ ಬಂದರೆ ತನ್ನನ್ನು ಆಡಿಕೊಳ್ಳುವುದಿಲ್ಲವೇ ಎಂಬ ಅಳುಕಿನ ಜೊತೆಗೆ ತಾನು ಪದವೀಧರನಾಗಿಯೂ ಈ ಕೆಲಸ ಮಾಡಬೇಕೆ ಎಂಬ ಕೊರಗು ಅವನನ್ನು ಬಾಧಿಸುತ್ತಿತ್ತು. ಪ್ರತೀ ರಾತ್ರಿಯೂ ಮತ್ತೆ ಕೆಲಸದ್ದೇ ಚಿಂತೆ. ಹಗಲಾದರೆ ಹೋಟೆಲಿಗೆ ಬರಬೇಕು, ಬೇರೇ ಯಾವ ಕೆಲಸವನ್ನೂ ಹುಡುಕಲು ಅವಕಾಶ ಸಿಗುತ್ತಿರಲಿಲ್ಲ. ತೊಳಲಾಟಗಳ ಮಧ್ಯೆ, ಗಿರಾಕಿಗಳನ್ನು ಆದರಿಸುವಲ್ಲಿ ಅವನಿಗೆ ಯಾವುದೇ ಆಸ್ಥೆಯೂ ಇರಲಿಲ್ಲ. ಆರ್ಡರ್  ಬರೆದುಕೊಳ್ಳುವಾಗ ತಪ್ಪಾಗಿ ಕೆಲವು ಐಟೆಮ್ ಗಳನ್ನು ಸೇರಿಸಿಬಿಡುತ್ತಿದ್ದ, ಕೆಲವನ್ನು ಮರೆತು ಬರೆಯದೇ ಬಿಡುತ್ತಿದ್ದ. ಆ ಮೇಲೆ ಗಿರಾಕಿಗಳಲ್ಲಿ ಸಾರಿ ಕೇಳುತ್ತಿದ್ದ. ಇದು ಅಶ್ರದ್ಧೆಗೆ ಉದಾಹರಣೆ.

ಪ್ರತೀ ವ್ಯಕ್ತಿಗೂ ತನ್ನ ಅಂತರ್ಗತ ಅನಿಸಿಕೆಗಳಲ್ಲಿ ತಾನು ಇಂಥಾ ಕೆಲಸವನ್ನು ತುಂಬಾ ಚೆನ್ನಾಗಿ ನಿಭಾಯಿಸಬಲ್ಲೆ ಎಂದು ಗೊತ್ತಿರುತ್ತದೆ. ಕೆಲಸ ಯಾವುದೇ ಆಗಲಿ, ಆ ಕೆಲಸ ಇಷ್ಟವಾಗುವುದಾದರೆ, ಅದು ಸಮಾಜಘಾತುಕ ಕೆಲಸವಲ್ಲ ಎಂದಾದರೆ ಅದನ್ನು ಮಾಡಬಹುದಾಗಿದೆ. ಚೆನ್ನಾಗಿ ನಿಭಾಯಿಸಲು ಬರುವ ಕೆಲಸಕ್ಕೆ ಕೆಲವೊಮ್ಮೆ ಅವಕಾಶ ಸಿಗುವುದು ತಡವಾಗಬಹುದು, ಆದರೂ ಅಂತಹ ಅವಕಾಶಗಳಿಗಾಗಿ ಸದಾ ಹುಡುಕಾಟ ನಡೆಸುತ್ತಲೇ ಇರಬೇಕು. ಚೆನ್ನಾಗಿ ಮಾಡುತ್ತೇನೆ ಎಂದುಕೊಳ್ಳುವ ಆ ಕೆಲಸದಲ್ಲೂ ನೈಪುಣ್ಯ ಸಾಧಿಸಲು ಸಾಧನೆ ಮಾಡಬೇಕು. ಶಿಲ್ಪಿಯ ಮನದಲ್ಲಿ ಮೂಡಿದ ಸುಂದರ ವಿಗ್ರಹ ಮೊದಲು ಆತನಿಗೆ ಮಾತ್ರ ಗೊತ್ತು! ಸಾವಿರ ಚೇಣುಗಳನ್ನು ತಿಂದ ಶಿಲೆ ಮೂರ್ತಿಯಾಗಿ ಅನಾವರಣಗೊಳ್ಳುವವರೆಗೆ ಶಿಲ್ಪಿಯ ಕೆಲಸಕ್ಕೆ ಬೆಲೆಯೇ ಇರುವುದಿಲ್ಲ. ಮೂರ್ತಿ ಪರಿಪೂರ್ಣವಾದಮೇಲೆ ಶಿಲ್ಪಿಯ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ!  ಸಿದ್ಧಗೊಳ್ಳುವ ಮೂರ್ತಿಯನ್ನು ಯಾರೋ ಕಿಡಿಗೇಡಿಗಳು ಭಗ್ನಗೊಳಿಸಲೂ ಬಹುದು. ಕಲೆಯ ರಸಾನುಭವ ಇಲ್ಲದವರು ಆ ಭವ್ಯ ಮೂರ್ತಿಯನ್ನು ಕಂಡರೂ ಭಾವರಹಿತರಾಗಿ ನಡೆದುಕೊಳ್ಳಬಹುದು. ಮೂರ್ತಿ ಕಡೆಯುವ ಶಿಲ್ಪಿಯ ಮನದಲ್ಲಿ ಮೂರ್ತಿಯ ಚಿತ್ರಣ ಅಸ್ಪಷ್ಟವಾಗಿದ್ದರೆ ಫಲಶ್ರುತಿಯಾಗಿ ತಯಾರಾಗುವ ಮೂರ್ತಿಯೂ ಅನಿರ್ದಿಷ್ಟ ಲಕ್ಷಣಗಳನ್ನು ಹೊಂದಿರುತ್ತದೆ; ಆಗ ಮೂರ್ತಿ ಸುಂದರವೆಂದಾಗಲೀ, ಇಂಥದ್ದೇ ವಿಗ್ರಹ ಎಂದಾಗಲೀ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 

ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಮನೆಯ ಮಹಡಿಯಲ್ಲೇ ರಂಗೋಲಿಗಳನ್ನು ಪ್ರದರ್ಶಿಸಿದ್ದರು. ವಾರವಾದರೂ ಒಬ್ಬನೇ ಒಬ್ಬ ವೀಕ್ಷಕನೂ ಸುಳಿದಿರಲಿಲ್ಲ. ಮುಂಬೈ ಕಡೆಯಿಂದ ರಂಗೋಲಿಯ ಪರಿಕರಗಳನ್ನು ತರಿಸಿಕೊಂಡು, ತಿಂಗಳುಗಟ್ಟಲೆ ಸಮಯ ವ್ಯಯಿಸಿ, ಗಣೇಶ, ರಾಮಾಯಣ, ವಿವೇಕಾನಂದ, ಠಾಗೋರ್, ಭಗತ್ ಸಿಂಗ್, ಶಂಕರಾಚಾರ್ಯರೇ ಮೊದಲಾದ ಹಲವು ವ್ಯಕ್ತಿ, ವಿಷಯಗಳ ಕುರಿತು  ರಚಿಸಿದ ರಂಗೋಲಿಗಳು ಅತಿವಿಶಿಷ್ಟವಾಗಿದ್ದವು, ಬಣ್ಣದ ಛಾಯಾಚಿತ್ರಗಳಂತೇ ಸ್ಫುಟವಾಗಿ ರೂಪವನ್ನು ಪರಿಪಕ್ವವಾಗಿ ಬಿಂಬಿಸಿದ್ದವು. ಅಷ್ಟೊಂದು ಸಮಯ, ಹಣ, ಶ್ರಮ ಎಲ್ಲವನ್ನೂ ವ್ಯಯಿಸಿ ನಡೆಸಿದ ಕೆಲಸವನ್ನು ಯಾರೂ ಗಮನಿಸದಿದ್ದರೆ ಹೇಗೆ? ಹಿತೈಷಿಗಳೊಬ್ಬರ ಸಲಹೆಯ ಮೇರೆಗೆ, ಗಣ್ಯರಿಂದ ಪ್ರದರ್ಶನವನ್ನು ಉದ್ಘಾಟಿಸಿದರು. ಮಾಧ್ಯಮಗಳವರನ್ನೂ ಕರೆದರು. ಯಾವಾಗ ಸುದ್ದಿ ಬಿತ್ತರಗೊಂಡಿತೋ ಆಗಿನಿಂದ ಸುಮಾರು ೧೫-೨೦ ದಿನಗಳ ತನಕ ನಿತ್ಯ ನೂರಾರು ಜನ ಬಂದು ವೀಕ್ಷಿಸಿದರು. ಅವರ ಕಲೆಯನ್ನು ಅಸ್ವಾದಿಸುವುದರ ಜೊತೆಗೆ ಅದನ್ನು ಕಲಿಸಿಕೊಡುವಂತೇ ಕೆಲವು ಹೆಂಗಸರು ಕೇಳಿಕೊಂಡರು. ಆಸಕ್ತರಿಗೆ ಅದನ್ನು ಕಲಿಸುವ ವೃತ್ತಿಯಲ್ಲಿ ರಂಗೋಲಿ ಪ್ರದರ್ಶಿಸಿದ ಮಹಿಳೆ ತೊಡಗಿಕೊಂಡಿದ್ದಾರೆ. ರಂಗೋಲಿ ಬರೆಯುವುದು ಅವರಿಗೆ ತೃಪ್ತಿ ನೀಡುವುದರ ಜೊತೆಗೆ ಆದಾಯವನ್ನೂ ನೀಡುತ್ತಿದೆ. ಅಕಸ್ಮಾತ್, ಸಂಯಮ ಕಳೆದುಕೊಂಡು ಬರೆದ ರಂಗೋಲಿಗಳನ್ನು ಅಳಿಸಿಬಿಟ್ಟಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. 

ಅಬ್ರಹಾಂ ಲಿಂಕನ್ ತನ್ನ ಯೌವ್ವನದಲ್ಲಿ, ಮೊದಲಿಗೆ ಹೋದದ್ದು ಕ್ಯಾಪ್ಟನ್ ಆಗಿ ಯುದ್ಧ ಭೂಮಿಗೆ, ಅಲ್ಲಿ ಹುದ್ದೆ ನಿಭಾಯಿಸುವಲ್ಲಿ ಅವರು ವಿಫಲವಾದರು. ನಂತರ ಉದ್ಯಮದಲ್ಲಿ ತೊಡಗಿ ಅಲ್ಲೂ ಸಾಫಲ್ಯ ಕಾಣಲಿಲ್ಲ. ಅನಂತರ ಸ್ಪ್ರಿಂಗ್ ಫೀಲ್ಡ್ ಎಂಬಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿ, ಆ ವೃತ್ತಿಯಲ್ಲೂ ದೇಡಗತಿ ಹತ್ತಲಿಲ್ಲ. ’ಎಲ್ಲಾ ಬಿಟ್ಟ ಭಂಗಿ ನೆಟ್ಟ’ ಎಂಬ ರೀತಿಯಲ್ಲಿ ರಾಜಕಾರಣಕ್ಕೆ ಧುಮುಕಿದ ಅವರು ಪ್ರಥಮವಾಗಿ ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಅಲ್ಲಿನ ಕಾಂಗ್ರೆಸ್ಸಿಗೆ ನಾಮನಿರ್ದೇಶಿತ ವ್ಯಕ್ತಿಯಾಗಿ ಆಯ್ಕೆಯಾಗ ಬಯಸಿ ಅದರಲ್ಲೂ ಯಶಸ್ಸು ಕಾಣಲಿಲ್ಲ. ಜನರಲ್ ಲ್ಯಾಂಡ್ ಆಫೀಸ್ ಕಮಿಶನರ್ ಆಗಿ ನೇಮಕಗೊಳ್ಳಲು ಸಲ್ಲಿಸಿದ ಅರ್ಜಿಯೂ ತಿರಸ್ಕೃತವಾಯ್ತು. ೧೮೫೪ ರಲ್ಲಿ ಸೆನೇಟ್ ಸದಸ್ಯರಾಗಲು ಪ್ರಯತ್ನಿಸಿ ನಕಾರಾತ್ಮಕ ಫಲಶ್ರುತಿ ಪಡೆದರು. ೧೮೫೬ ರಲ್ಲಿ ಉಪಾಧ್ಯಕ್ಷರಾಗಲು ಪ್ರಯತ್ನಿಸಿ ವೈಫಲ್ಯ ಅನುಭವಿಸಿದರು. ೧೮೫೮ ರಲ್ಲಿ ಮತ್ತೆ ಸೆನೇಟ್ ಸದಸ್ಯಸ್ಥಾನಕ್ಕೆ ಯತ್ನಿಸಿ ಆಗಲೂ ಸಹ ಆಯ್ಕೆಗೊಳ್ಳಲಿಲ್ಲ. ಆದರೆ, ತಡವಾಗಿಯಾದರೂ, ಅಮೇರಿಕಾ ಸಂಯುಕ್ತ ಸಂಸ್ಥಾನದ ೧೬ನೇ ಅಧ್ಯಕ್ಷರಾಗಿ ಆಡಳಿತ ನಡೆಸಿದರು ಎಂಬುದು ಗಮನಾರ್ಹ.

ವಿನ್ ಸ್ಟನ್ ಚರ್ಚಿಲ್ ೬ನೇ ತರಗತಿಯಲ್ಲೇ ಅನುತ್ತೀರ್ಣರಾದರು. ಸಾರ್ವಜನಿಕ ಕಚೇರಿಯಲ್ಲಿ ಆಡಳಿತಾತ್ಮಕ ಹುದ್ದೆ ನಿರ್ವಹಿಸಲು ಸ್ಪರ್ಧಿಸಿ ಸೋಲುತ್ತಲೇ ದಿನಗಳೆದ ಅವರು ೬೨ ನೇ ವಯಸ್ಸಿನಲ್ಲಿ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದರು. ಚಾರ್ಲ್ಸ್ ಡಾರ್ವಿನ್ ವೈದ್ಯಕೀಯ ವಿದ್ಯಾರ್ಜನೆಯನ್ನು ಕೈಬಿಟ್ಟಾಗ ಅವರ ತಂದೆ " ನೀನು ಯಾವುದಕ್ಕೂ ಲಾಯಕ್ಕಲ್ಲ. ನೀನೊಬ್ಬ ಗುರಿಕಾರ, ನಾಯಿಗಳನ್ನೂ ಹೆಗ್ಗಣಗಳನ್ನೂ ಹೊಡೆಯುವವ" ಎಂದು ಮೂದಲಿಸಿದರು. ಅವರ ಶಿಕ್ಷಕರು, ಬಂಧು-ಬಳಗ ಎಲ್ಲರೂ ಸಹ, ಡಾರ್ವಿನ್ ತೀರಾ ದಡ್ಡ ವ್ಯಕ್ತಿ ಎಂದುಕೊಂಡರು; ಕಾಲಾನಂತರದಲ್ಲಿ ಡಾರ್ವಿನ್ ವಿಕಾಸವಾದವನ್ನು ಮಂಡಿಸಿದ್ದು ಎಲ್ಲರಿಗೂ ತಿಳಿದೇ ಇದೆ. "ನೀನೊಬ್ಬ ಯಾವುದನ್ನು ಕಲಿಯಲೂ ಆಗದ ಶುದ್ಧ ಮೂರ್ಖ" ಎಂದು ಶಾಲೆಯಲ್ಲಿ ಬೈಸಿಕೊಳ್ಳುತ್ತಿದ್ದ ಥಾಮಸ್ ಎಡಿಸನ್, ನಾನ್-ಪ್ರೊಡಕ್ಟಿವ್[ನಿರುತ್ಪನ್ನಶೀಲ] ಕೆಲಸಗಾರನೆನಿಸಿಕೊಂಡು ಎರಡು ಕಂಪನಿಗಳ ಕೆಲಸಗಳಿಂದ ಹೊರದೂಡಲ್ಪಟ್ಟಿದ್ದರು. ವಿದ್ಯುತ್ ಬಲ್ಬ್ ಸಂಶೋಧಿಸುವುದಕ್ಕೂ ಮುನ್ನ ಸಾವಿರ ಸರ್ತಿ ಅದನ್ನು ಪ್ರಯತ್ನಿಸಿ ಅನುತ್ತೀರ್ಣರಾಗಿದ್ದರು. "ಸಾವಿರ ಸರ್ತಿ ಯಶಸ್ಸು ಕಾಣದ್ದರ ಹಿಂದೆ ನಿಮಗೆ ಏನನ್ನಿಸುತ್ತಿತ್ತು?" ಎಂದು ಸಂದರ್ಶಕ ಕೇಳಿದ ಪ್ರಶ್ನೆಗೆ "ನಾನು ಅನುತ್ತೀರ್ಣನಾಗಲಿಲ್ಲ, ಬೆಳಕಿನ ಬಲ್ಬ್ ಎಂಬುದು ಸಾವಿರ ಹಂತಗಳಲ್ಲಿ ಆವಿಷ್ಕಾರಗೊಂಡಿದೆ" ಎಂದರಂತೆ!

ಐನ್ ಸ್ಟೀನ್ ತನ್ನ ನಾಲ್ಕನೇ ವರ್ಷದ ವರೆಗೆ ಮಾತನ್ನೇ ಆಡಲಿಲ್ಲ ಮತ್ತು ಏಳನೇ ವಯಸ್ಸಿನವರೆಗೆ ಓದಲೇ ಇಲ್ಲ! ಬುದ್ಧಿಮಟ್ಟದಲ್ಲಿ ಸಾಮಾನ್ಯ ಮಕ್ಕಳಿಗಿಂತಾ ತೀರಾ ಕೆಳಗಿನವನು ಎಂದು ತಂದೆ-ತಾಯಿ ಚಿಂತಿಸುತ್ತಿದ್ದರೆ, "ನಿಮ್ಮ ಮಗ ತುಂಬಾ ನಿಧಾನ, ಯಾರಜೊತೆಗೂ ಬೆರೆಯುವವನಲ್ಲ, ಕೆಲಸಕ್ಕೆ ಬಾರದ ಕನಸುಗಳಲ್ಲಿ ತೇಲಾಡುವ ಗುರಿಯಿಲ್ಲದ ಮೂರ್ಖ" ಎಂದವರು ಅವನ ಶಿಕ್ಷಕರು. ಮಾಮೂಲೀ ಶಾಲೆಯಿಂದ ಹೊರದಬ್ಬಲ್ಪಟ್ಟ ನಂತರ ’ಝುರಿಚ್ ಪಾಲಿಟೆಕ್ನಿಕ್ ಸ್ಕೂಲ್’ ನಲ್ಲಿ ಪ್ರವೇಶ ದೊರೆಯಲಿಲ್ಲ. ನಂತರ ನಿಧಾನವಾಗಿ ಮಾತನಾಡಲು ಬರೆಯಲು-ಓದಲು ಕಲಿತ ಬಾಲ ಐನ್ ಸ್ಟೀನ್ ಸ್ವಲ್ಪ ಗಣಿತಗುಣಿತಗಳನ್ನೂ ಮಾಡತೊಡಗಿದ. ಐನ್ ಸ್ಟೀನ್ ಬಗ್ಗೆ ಮುಂದೇನಾಯ್ತೆಂದು ಬಿಡಿಸ ಹೇಳಬೇಕಿಲ್ಲವಲ್ಲ! ಲೂಯಿ ಪ್ಯಾಸ್ಚರ್ ಒಬ್ಬ ಅತೀ ಸಾಮಾನ್ಯ ವಿದ್ಯಾರ್ಥಿಯಾಗಿದ್ದು ೨೨ ವಿದ್ಯಾರ್ಥಿಗಳಿದ್ದ ಚಿಕ್ಕ ಗುಂಪಿನಲ್ಲೇ ೧೫ನೇ ಸ್ಥಾನದಲ್ಲಿ ಉತ್ತೀರ್ಣನಾಗುತ್ತಿದ್ದರು. ಹೆನ್ರಿ ಫೋರ್ಡ್ ಗೆ  ಓದಲು-ಬರೆಯಲು ಬರುತ್ತಿರಲಿಲ್ಲ. ೫ ಸರ್ತಿ ಉದ್ಯಮದಲ್ಲಿ ಸಂಪೂರ್ಣ ವಿಫಲರಾಗಿದ್ದ ಹೆನ್ರಿ ಫೋರ್ಡ್ ನಂತರ ವಾಹನಗಳನ್ನು ತಯಾರಿಸಿ ಖ್ಯಾತನಾಮರಾದರು.

ಮೋಜಿನ ವಿಷಯ ಕೇಳಿ. ವಾಲ್ಟ್ ಡಿಸ್ನಿಯವರು ಒಮ್ಮೆ ಒಬ್ಬ ದಿನಪತ್ರಿಕೆಯ ಸಂಪಾದಕರಿಂದ "ಯಾವುದೇ ಊಹೆಯಾಗಲೀ ಕಲ್ಪನೆಯಾಗಲೀ ಇಲ್ಲದ ನಿರುಪಯುಕ್ತ ವ್ಯಕ್ತಿ" ಎಂದು ಬೈಸಿಕೊಂಡಿದ್ದರು. ಡಿಸ್ನಿ ಲ್ಯಾಂಡ್ ಕಟ್ಟುವ ಮೊದಲು ಅನೇಕಬಾರಿ ಅವರು ದಿವಾಳಿಯಾಗಿದ್ದರು! ಒಂದಷ್ಟು ಕಾಕಪೋಕ ಜನರ ಅಡ್ಡೆಯಾಗುತ್ತದೆ ಎಂಬ ಹೇಳಿಕೆನೀಡಿ  ಅನ್ ಹೀಮ್ ನಗರಪಾಲಿಕೆ ಡಿಸ್ನಿ ಪಾರ್ಕ್ ಗೆ ಜಾಗ ನೀಡಲು ನಿರಾಕರಿಸಿತ್ತು. ಡಿಸ್ನಿ ಲ್ಯಾಂಡ್ ಬಗ್ಗೆ ಈಗ ಯಾರಿಗೆ ತಿಳಿದಿಲ್ಲ? ಅದರಂತೆಯೇ ಹಾಲೀವುಡ್ಡಿನ ಪ್ರಮುಖ ಜನರೆಲ್ಲಾ ಒಂದುಕಾಲದಲ್ಲಿ ಚಾರ್ಲಿ ಚಾಪ್ಲಿನ್ ರ ಹಾಸ್ಯ ಅರ್ಥಹೀನವೆಂದು ಹೀಗಳೆದಿದ್ದರು. ಅದೆಲ್ಲಾ ಹಾಗಿರಲಿ, ಬೀಥೋವನ್ ಪ್ರಥಮವಾಗಿ ವಯೋಲಿನ್ ನುಡಿಸಲು ಆರಂಭಿಸಿದ್ದು ಎದ್ದೋಡಿ ರಾಗಗಳಿಂದ; ಅಪಸ್ವರಗಳ ಅಲೆಯನ್ನು ಕೇಳಲಾರದೇ ಕೇಳುತ್ತಿದ್ದ ಶಿಕ್ಷಕರು "ಭರವಸೆಯಿಡಲಾಗದ ಕೆಟ್ಟ ಸಂಗೀತ ನಿರ್ದೇಶಕ" ಎಂದು ಹೆಸರಿಸಿದ್ದರು. ಸ್ವತಃ ಕಿವುಡನಾಗಿದ್ದ ಬಿಥೋವನ್ ಶ್ರೋತ್ರಗಳಿಗೆ ಮುದನೀಡಬಲ್ಲ ಐದು ಸ್ವರಮೇಳನಗಳನ್ನು ಒದಗಿಸಿದ್ದಾರೆ. 

ನಮ್ಮ ಭಾರತದಲ್ಲೇ ತೆಗೆದುಕೊಳ್ಳಿ: ಕ್ರೀಡಾಪಟು ಮಾಲತಿ ಹೊಳ್ಳ ಇದ್ದಾರೆ, ಕೃತಕ ಕಾಲಿನಲ್ಲಿ ನಿಬ್ಬೆರಗಾಗುವಂತೇ ನರ್ತಿಸುವ ಸುಧಾ ಚಂದ್ರನ್ ಇದ್ದಾರೆ. ದಿ. ಪುಟ್ಟರಾಜ ಗವಾಯಿಗಳು ಕುರುಡರಾಗಿದ್ದರೂ ಶ್ರೇಷ್ಠ ಸಂಗೀತಗಾರರಾಗಿದ್ದರು-ಕಳೆದುಹೋಗಿದ್ದ ಚೊಂಬು ಅದೆಲ್ಲೋ ಸದ್ದು ಹೊರಡಿಸಿದಾಗ, ಸದ್ದನ್ನೇ ಆಲಿಸಿ ಅದು ತಮ್ಮ ಆಶ್ರಮದ ಚೊಂಬು ಎಂದು ಗುರುತಿಸಿದ್ದರು.  ಇದೂ ಅಲ್ಲದೇ ಕೈಗಳಿಲ್ಲದೇ ಕಾಲಿನಿಂದಲೇ ಚಿತ್ರಗಳನ್ನು ಬರೆಯುವ ಕಲಾವಿದರಿದ್ದಾರೆ. ಅಂದರೆ ಅಂಗವೈಕಲ್ಯ ಎಂಬುದು   ಇಂಥವರಿಗೆ ಅಡ್ಡಿಯಾಗಿ ಕಾಣಲೇ ಇಲ್ಲ. ಅವರಲ್ಲೆಲ್ಲಾ ಇದ್ದಿದ್ದು ಒಂದೇ: ಅತೀವ ಶ್ರದ್ಧೆ. ಗಣಿತಜ್ಞ ರಾಮಾನುಜನ್ ಕುಬ್ಜರಾಗಿದ್ದರು ಮತ್ತು ಜಾಸ್ತಿ ಓದಿದವರೂ ಕೂಡ ಅಲ್ಲ. ಉದರಂಭರ್ಣೆಗಾಗಿ ಮದ್ರಾಸ್ ಏರ್ ಪೋರ್ಟಿನಲ್ಲಿ   ಕಾರಕೂನನಾಗಿ ಕೆಲಸ ಮಾಡುತ್ತಿದ್ದರು. ಆದರೆ ಮನಸ್ಸಿನೊಳಗೆ ಗಣಿತದ ಸೂತ್ರಗಳು ಪಟಪಟ ಪಟಪಟನೆ ಮೂಡುತ್ತಿದ್ದವು; ಮೂಡಿದ ಸೂತ್ರಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಗಣಿತದ ಮೇಲಿನ ಸಂಶೋಧಕ ಬುದ್ಧಿ ಅವರನ್ನು ವಿದೇಶಕ್ಕೆ ಕರೆದೊಯ್ದಿತು. ಬಡತನದಲ್ಲಿ ಬೀದಿ ದೀಪದಲ್ಲಿ ಓದಿ ಎಂಜಿನೀಯರ್ ಆಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಅಣೆಕಟ್ಟು ನಿರ್ಮಿಸಲು ಹೇಳಿಕೊಡುವ ಗುರು ಯಾರೂ ಇರಲಿಲ್ಲ! ಸೀಮೆಂಟ್ ಸರಿಯಾಗಿ ಆವಿಷ್ಕಾರ ಆಗಿಲ್ಲದ ಆ ದಿನಗಳಲ್ಲಿ  ಸುಣ್ಣ-ಮಣ್ಣು-ಬೆಲ್ಲ-ಕೋಳಿಮೊಟ್ಟೆ ಇಂಥಾದ್ದನ್ನು ಮಿಶ್ರಣಮಾಡಿ ಕನ್ನಂಬಾಡಿ ಕಟ್ಟೆ ಕಟ್ಟಿದರು; ಆ ಕಟ್ಟೆ ಇಂದಿಗೂ ಗಟ್ಟಿಯಾಗಿದೆ! ಅವರ ಕೊಡುಗೆಗಳು ಜಗದ್ವಿಖ್ಯಾತವಾಗಿದ್ದು ಅವರಲ್ಲಿನ ಎಂಜಿನೀಯರ್ ತಾದಾತ್ಮ್ಯತೆಯಿಂದ ತನ್ನ ಕೆಲಸಗಳಲ್ಲಿ ತೊಡಗಿಕೊಂಡು ಯಶಸ್ಸು ಪಡೆದಿದ್ದಕ್ಕಾಗಿ.      

’ನೆವರ್ ಗಿವ್ ಅಪ್’ ಚಿತ್ರ ನೀಡಿದ ಸಂದೇಶದ ಆಳಕ್ಕೆ ಇಳಿಯುತ್ತಾ ಇಳಿಯುತ್ತಾ, ಇನ್ನೊಂದು ಮನಕಲಕುವ ಘಟನೆಯನ್ನು ತಿಳಿದುಕೊಂಡೆ: 
 

ಆಯೇಷಾ ಮಹಮ್ಮದ್ ಜಾಯ್ ಎಂಬ ಅಪ್ಘಾನಿಸ್ತಾನದ ಹೆಣ್ಣುಮಗಳ ಕಿವಿ-ಮೂಗುಗಳನ್ನು ಕ್ರೂರಿಯಾದ ಆಕೆಯ ಗಂಡ ಕತ್ತರಿಸಿಹಾಕಿದ್ದ. ಟೈಮ್ ಮ್ಯಾಗಝಿನ್ ನ ಮುಖಪುಟ ವರದಿಯಲ್ಲಿ ಕಾಣಿಸಿಕೊಂಡ ಈ ಮಹಿಳೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಕ್ಕೆ ಜಾಗತಿಕ ಮಟ್ಟದ ಗುರುತಾದಳು. ಹೇಗೋ ಕಷ್ಟಪಟ್ಟು ಅಪ್ಘಾನಿಸ್ತಾನದಿಂದ ಅಮೇರಿಕಾ ತಲ್ಪಿದ ಆಕೆ, ಅಲ್ಲಿನ ನುರಿತ ವೈದ್ಯರ ಸಹಾಯದಿಂದ, ಮರುಸೃಷ್ಟಿಕಾರಕ ಶಸ್ತ್ರಚಿಕಿತ್ಸೆಗಳಿಂದ ಮತ್ತೆ ಕಿವಿ-ಮೂಗುಗಳನ್ನು [ಸ್ವಲ್ಪ ವಿಭಿನ್ನವಾಗಿದ್ದರೂ]ಪಡೆದುಕೊಳ್ಳುವಲ್ಲಿ ಯಶಸ್ಸು ಪಡೆದು ಜೀವನ ನಡೆಸುತ್ತಿದ್ದಾಳೆ. ಗಂಡನ ದೈನಂದಿನ ದೈಹಿಕ-ಮಾನಸಿಕ ದೌರ್ಜನ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇ ಕಿವಿ-ಮೂಗುಗಳನ್ನು ಕತ್ತರಿಸಲು ಕಾರಣವಾಗಿತ್ತಂತೆ! ೧೨ ವರ್ಷದ ಬಾಲೆಯಾಗಿದ್ದ ಅವಳನ್ನು, ಸಾಲ ತೀರಿಸುವ ಸಲುವಾಗಿ ಆಕೆಯ ತಂದೆ, ನಂತರ ಆಕೆಯ ಗಂಡನೆನಿಸಿದ್ದ ತಾಲಿಬಾನಿ ಉಗ್ರನಿಗೆ ಮಾರಿಬಿಟ್ಟಿದ್ದನಂತೆ. ಕುರಿದೊಡ್ಡಿಯಲ್ಲಿ ಮಲಗುವಂತೇ ಮಾಡುತ್ತಿದ್ದ ಗಂಡನ ಚಿತ್ರಹಿಂಸೆ ಸಹಿಸಲಸಾಧ್ಯವಾಗಿತ್ತಂತೆ. ಗಂಡನನ್ನು ಬಿಟ್ಟು ಓಡಿಹೋಗಿ ಇನ್ನೆಲ್ಲಾದರೂ ಬದುಕಿಕೊಳ್ಳಲು ಯತ್ನಿಸಿದ ಆಕೆಯನ್ನು ಹುಡುಕಿ ಅಟ್ಟಿಸಿಕೊಂಡು ಬಂದ ಉಗ್ರನ ಮನೆಯವರು ಹತ್ತಿರದ ಪರ್ವತಶ್ರೇಣಿಯಲ್ಲೇ ಸೆರೆಹಿಡಿದಿದ್ದರಂತೆ. ಓಡಿಹೋಗಲು ಪ್ರಯತ್ನಿಸಿದ್ದಕ್ಕೆ ಶಿಕ್ಷೆಯಾಗಿ ಸ್ಥಳದಲ್ಲೇ ಆಕೆಯ ಕಿವಿ-ಮೂಗುಗಳನ್ನು ಕತ್ತರಿಸಿ- ರಕ್ತಸ್ರಾವವಾಗಿ ಸಾಯಲು ಬಿಟ್ಟಿದ್ದರಂತೆ ಉಗ್ರ ಮತ್ತು ಅವನ ಬಳಗದವರು. ಸಾವರಿಸಿಕೊಂಡು ತೆವಳುತ್ತಾ ತನ್ನ ಅಜ್ಜನ ಮನೆಯನ್ನು ಸೇರಿಕೊಂಡ ಆಕೆಯನ್ನು, ಆಕೆಯ ತಂದೆ ಬಹಳ ಪ್ರಯಾಸಪಟ್ಟು ಅಮೇರಿಕಾದ ಅಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾದನಂತೆ. ಹತ್ತು ವಾರಗಳ ಕಾಲ ಆಸ್ಪತ್ರೆಯಲ್ಲೇ ಉಳಿದ ಆಯೇಶಾಳಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯ್ತಂತೆ.

ಸಿ.ಎನ್.ಎನ್ ಚಾನೆಲ್ ಗೆ ಮಾಹಿತಿ ನೀಡಿದ ಆಕೆ ಹೇಳಿದ್ದು : "ಅವರು ಕಿವಿ-ಮೂಗುಗಳನ್ನು ಕತ್ತರಿಸಿಹಾಕಿದಾಗ ನಾನು ಸತ್ತುಹೋಗಿದ್ದೆ ಎಂದುಕೊಂಡಿದ್ದೆ! ಮಧ್ಯರಾತ್ರಿಯಲ್ಲಿ ನನಗೆ ಎಚ್ಚರವಾಗಿ ಮೂಗಿನಲ್ಲಿ ತಣ್ಣೀರು ಬಂದಂತಹ ಅನುಭವ ಆಯ್ತು. ನಾನು ಕಣ್ತೆರೆದೆನಾದರೂ ರಕ್ತಸಿಕ್ತ ಕಣ್ಣಿನಿಂದ ಏನನ್ನೂ ನೋಡಲು ಸಾಧ್ಯವಾಗಲಿಲ್ಲ."

೨೦೧೦ರಲ್ಲಿ ಗ್ರಾಸ್ಮನ್ ಬರ್ನ್ ಫೌಂಡೇಶನ್ ಎಂಬ ಸಂಸ್ಥೆ, ಅಕೆಯನ್ನು ಅಪ್ಘಾನಿಸ್ತಾನದಿಂದ ಅಮೇರಿಕಾಕ್ಕೆ ಕದ್ದು ಸಾಗಿಸಿತಂತೆ. ಅಲ್ಲಿ ನ್ಯೂಯಾರ್ಕ್ ನಗರದ ಸಮಾಜಸೇವಕ ಸ್ತ್ರೀಯರು ಅವಳನ್ನು ಸ್ವೀಕರಿಸಿ. ಅವಳ ಚಿಕಿತ್ಸೆ, ಪುನರ್ವಸತಿ, ಮುಂದಿನ ಕಲಿಕೆ ಎಲ್ಲದಕ್ಕೂ ಏರ್ಪಾಟು ಮಾಡಿದರಂತೆ. ಅಮೇರಿಕಾಕ್ಕೆ ಬಂದ ಕೆಲಸಮಯದಲ್ಲೇ ಅವಳನ್ನು ಸಂದರ್ಶಿಸಿದ ಟೈಮ್ಸ್ ಮ್ಯಾಗಜಿನ್, ಅವಳ ಬಗ್ಗೆ ಪ್ರಕಟಿಸಿದ ಲೇಖನ ಓದಿ, ಅಪ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗತಿಕಮಟ್ಟದಲ್ಲಿ ಚರ್ಚೆಗಳಾದವು. ನಂತರ ನಡೆದ ಸಂಕೀರ್ಣ ಶಸ್ತ್ರ ಚಿಕಿತ್ಸೆಯಲ್ಲಿ, ಸಿಲಿಕಾನ್ ಬಳಸಿಕೊಂಡು ಅವಳ ಹಣೆಯನ್ನು ಪುಗ್ಗೆಯಂತೇ ಹಿಗ್ಗಿಸಿ, ಅಲ್ಲಿ ದ್ರವಪದಾರ್ಥವನ್ನು ತುಂಬಿ, ಹೆಚ್ಚಿಗೆಯಾಗುವ ಚರ್ಮವನ್ನು ಅಲ್ಲಿಂದ ತೆಗೆದುಕೊಂಡು, ಇನ್ನಷ್ಟನ್ನು ಆಕೆಯ ತೋಳುಗಳಿಂದ ತೆಗೆದುಕೊಂಡು, ಹೊಸದಾಗಿ ಮೂಗನ್ನು ಸಿದ್ಧಪಡಿಸಿದರು. ಶಸ್ತ್ರಕ್ರಿಯೆಯ ನಂತರದ ಜೀವನದಲ್ಲಿ ಪ್ರಥಮಬಾರಿಗೆ ಟೆಲಿವಿಷನ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ತಾನು ಸಂತೋಷವಾಗಿದ್ದು ತನ್ನ ಕಥೆಯನ್ನು ಎಲ್ಲೆಡೆ ಬಿತ್ತರಿಸುವ ಮೂಲಕ ಜಗತ್ತಿನ ಜನರಲ್ಲಿ ತಮ್ಮತನದಲ್ಲಿ ಭರವಸೆ ಬೆಳೆಸಿಕೊಳ್ಳುವುದರ ಬಗ್ಗೆ ಹೇಳಬಯಸಿದ್ದೇನೆ ಎಂದಿದ್ದಾಳೆ. ಅದರಲ್ಲೂ ದೌರ್ಜನ್ಯಗಳಿಂದ ಬಳಲುವ ಮಹಿಳೆಯರು ಎದೆಗುಂದದೇ ಹೆಚ್ಚಿನ ಭರವಸೆಯನ್ನು ಇಟ್ಟುಕೊಳ್ಳಬೇಕೆಂದು ತಿಳಿಸಿದ್ದಾಳೆ.       

ಯಾವುದೋ ಕ್ಷುಲ್ಲಕ ಕಾರಣಗಳಿಗೆ, ಮನಸ್ಸಿನ ಯಾವುದೋ ದುರ್ಬಲ ಕ್ಷಣಗಳಲ್ಲಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನೂ, ವೃತ್ತಿಪರರನ್ನೂ ಕಾಣುತ್ತೇವೆ. ದೇಶದ ಅಪ್ರತಿಮ ಬಿಲ್ಲುಗಾರ್ತಿಯೋರ್ವರು ಆತ್ಮಹತ್ಯೆಮಾಡಿಕೊಂಡರೆಂದು ವರದಿಯಾಗಿದೆ. ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರವಲ್ಲ; ಆತ್ಮಹತ್ಯೆಯಿಂದ ಸಮಸ್ಯೆಗಳು ಮುಂದಿನ ಜನ್ಮಗಳಲ್ಲಿ ಇನ್ನೂ ಬಿಗಡಾಯಿಸಿ ಆ ವಿಷವರ್ತುಲದಿಂದ ಬಿಡುಗಡೆಯೇ ಇರುವುದಿಲ್ಲ. ಹುಟ್ಟಿದ ಪ್ರತೀ ವ್ಯಕ್ತಿಯೂ ಒಂದಿಲ್ಲೊಂದು ದಿನ ಅವನದೇ/ಅವಳದೇ ಆದ ಪ್ರತಿಭೆಯನ್ನು ಹೊರಜಗತ್ತಿಗೆ ತೋರ್ಪಡಿಸುವ ಅವಕಾಶಗಳು ಒದಗುತ್ತವೆ. ಸಾವಿರ ಅಡಿಗಳ ಆಳಕ್ಕೆ ಹೋದ ಗಣಿಯಲ್ಲಿ ಇನ್ನೇನು ಒಂದೆರಡು ಅಡಿ ಹೋದರೆ ಚಿನ್ನದ ಅದಿರು ದೊರೆಯಬಹುದಾದ ಸನ್ನಿವೇಶಗಳು ಇರುತ್ತವೆ; ಸಿಗುವುದಿಲ್ಲವೆಂಬ ವಿಷಾದದ ಛಾಯೆ ಆವರಿಸಿದರೆ ಪ್ರಯತ್ನ ನಿಂತು ಹೋಗುತ್ತದೆ, ಗಣಿಯನ್ನು ಮುಚ್ಚಲಾಗುತ್ತದೆ ಅಲ್ಲವೇ? ನೆವರ್ ಗಿವ್ ಅಪ್ ಎಂಬ ಚಿತ್ರವನ್ನು ಸದಾ ಇಟ್ಟುಕೊಳ್ಳಿ, ಯಶಸ್ಸು ಸಿಗದೇ ಬೇಸರವಾದಾಗ ತೆಗೆದು ನೋಡಿ.

ಇನ್ನೊಂದನ್ನು ಹೇಳಲು ಮರೆತೆ: ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ನಿತ್ಯವೂ ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ. ಮನಸ್ಸು, ಬುದ್ಧಿ-ಚಿತ್ತ-ಅಹಂಕಾರಗಳಿಂದ ಕೂಡಿದೆ. ಮನಸ್ಸಿನ ಮರೆಯಲ್ಲಿ ಅಡಗಿರುವ ಆತ್ಮ ಅದಮ್ಯ ಚೇತನವಾಗಿದೆ, ಅದಕ್ಕೆ ಅದ್ಭುತ ಶಕ್ತಿಯಿದೆ. ಆ ಶಕ್ತಿಯನ್ನು ಪ್ರಚುರಗೊಳಿಸಲು ನಮ್ಮ ನಮ್ಮ ಮನಸ್ಸಿಗೆ ನಾವೇ ಧನಾತ್ಮಕ ಸಂದೇಶಗಳನ್ನು ಕೊಡುತ್ತಿರಬೇಕು. ಇದೇ ಕಾರಣಕ್ಕಾಗಿ ನಮ್ಮ ಪೂರ್ವಜರು ನಾಮ ಜಪವನ್ನೂ ಹೇಳಿದ್ದಾರೆ. ಪ್ರತಿನಿತ್ಯ ಆಗಾಗ ಯಶಸ್ಸು ಪಡೆಯುತ್ತೇನೆ ಎಂದು ಮನಸ್ಸಿಗೆ ಹೇಳಿಕೊಳ್ಳುತ್ತಿರುವುದರಿಂದ ಮನಸ್ಸಿನ ಖಿನ್ನತೆ ದೂರವಾಗುತ್ತದೆ. ಮನಸ್ಸು ಪುನಶ್ಚೇತನ ಪಡೆಯುತ್ತದೆ. ಜೀವನದ ಹೆಜ್ಜೆಗಳ ಸಾಲು ಸೋಲಿನದಲ್ಲ, ಅವು ಕಲಿಕೆಯ ಸೋಪಾನ. ಮಗು ನಡೆಯಲು ಕಲಿಯುವಾಗ ಎಡವುತ್ತದೆ, ಬಿದ್ದು ಬಿದ್ದು ಎದ್ದು ಎದ್ದು ಅಂತೂ ನಿಂತು, ಛಲದಿಂದ ನಡೆಯುವುದನ್ನು ಅಭ್ಯಾಸಮಾಡಿಕೊಳ್ಳುತ್ತದೆ. ಮಗುವಿನ ಆ ಪ್ರಯತ್ನವೇ ಎಲ್ಲದಕ್ಕೂ ಮಾದರಿಯಾಗಿದೆ. ನಿಮ್ಮಲ್ಲಿನ ಯಾವುದೋ ಸರಕಿಗೆ ಡಿಮಾಂಡ್ ಬರುತ್ತದೆ, ಅದು ಯಾವ ಸರಕು ಎಂಬುದು ನಿಮ್ಮ ಅಂತರಂಗಕ್ಕೆ ಗೊತ್ತಾಗಿರುತ್ತದೆ.  ಬೇಡದ ಹಲವು ಸರಕುಗಳ ರಾಶಿಯ ಆಳದಿಂದ ಆ ಉತ್ತಮ ಸರಕನ್ನು ಮೇಲಕ್ಕೆ ತೆಗೆಯಿರಿ. ನಿಮ್ಮ ಆ ಪ್ರತಿಭೆ ಪ್ರಕಾಶಿತವಾದಾಗ ನಿಮಗೆ ಆದಾಯವೂ ಸಿಗುತ್ತದೆ, ಮಾನ-ಸನ್ಮಾನವೂ ದೊರೆಯುತ್ತದೆ. ಸೋ, ನೆವರ್ ಗಿವ್-ಅಪ್!!       
     

Monday, April 29, 2013

ಯಕ್ಷಚಂದ್ರನ ಸುವರ್ಣ ಸಂಭ್ರಮದ ಹೊನಲಲ್ಲಿ !

ಚಿತ್ರಋಣ: ಅಂತರ್ಜಾಲ 
ಯಕ್ಷಚಂದ್ರನ ಸುವರ್ಣ ಸಂಭ್ರಮದ ಹೊನಲಲ್ಲಿ !

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತ ಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ |
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗ ವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ||

ತುಂಬಿದ ಸಭೆಯ ವೇದಿಕೆಯಲ್ಲಿ ಯಕ್ಷರಂಗದ ಹಿರಿಯ ಕೋಗಿಲೆಯೊಂದು ಕಲರವವನ್ನು ಹೊರಡಿಸಿತ್ತು! ಇಂತಹ ಕಲರವವನ್ನು ನಾನಂತೂ ಕೇಳದೇ ಸರಿಸುಮಾರು ೧೫ ವರ್ಷಗಳೇ ಕಳೆದುಹೋಗಿವೆ. ಹಲವರಿಗೆ ಪೂರ್ವಜನ್ಮದ ಸ್ಮರಣೆಯಾದ  ಹಾಗೇ ಭಾಸ; ಕಾರಣವಿಷ್ಟೇ ಇಂದಿನ ಭಾಗವತರಲ್ಲಿ ವೃತ್ತಿ ತಾದಾತ್ಮ್ಯತೆ, ಅಕ್ಷರಶುದ್ಧ ಉಚ್ಚಾರ, ಲಯಗಳ ಏರಿಳಿತ, ತಾಳದ ಗಚ್ಚು, ಶಾರೀರದ ಏರಿಳಿತ, ನೂರಕ್ಕೆ ನೂರು ಯಕ್ಷರಂಗದ ರಾಗಗಳನ್ನು ಬಳಸಿಕೊಳ್ಳುವ ಪರಿ, ಆ ತಿಟ್ಟುಗಳನ್ನು ಉಳಿಸಿಕೊಳ್ಳುವ ಪರಿ ಕಾಣಿಸುತ್ತಿಲ್ಲ-ಇದು ಇಂದಿನ ಬಡಗು ತಿಟ್ಟಿನ ಪ್ರೇಕ್ಷಕರ ದುರ್ದೈವ. ಪೂರ್ಣರಾತ್ರಿ ಯಕ್ಷಗಾನವನ್ನು ನೋಡುತ್ತಿದ್ದ ನಮಗೆ ೩ ತಾಸಿನ ಸಮಯಮಿತಿ ಯಕ್ಷಗಾನ ’ಅನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಎಂಬ ರೀತಿಯಲ್ಲಿ ಆಗಿಬಿಟ್ಟಿದೆ! ಅದರಲ್ಲೂ ಹಣದ ಗಂಟಿಗೇ ಅಂಬಿನ ಅಲಗನ್ನು ಗುರಿಯಾಗಿಸಿಕೊಂಡು ಏರ್ಪಡಿಸುವ ಹಲವು ಪ್ರಸಂಗಗಳ ಸಮ್ಮಿಶ್ರ ಸಮಯ-ಕಲಾಪ ಯಕ್ಷಗಾನಕ್ಕೆ ಮಾರಕವಾಗಿ ಪರಿಣಮಿಸಿಬಿಟ್ಟಿದೆ. ಇಂತಹ ಹೊತ್ತಿನಲ್ಲಿ ನಿಜನೆಲೆಯ ಯಕ್ಷಗಾನ ಯಾವುದು ಎಂಬುದನ್ನು ಹೆಕ್ಕಿ ತೆಗೆಯುವುದು ಬೆಣ್ಣೆಯ ಮೇಲಿನ ಕೂದಲನ್ನು ಹೆಕ್ಕಿತೆಗೆವಂತಹ ಕೆಲಸ.

ಕಾರ್ಯಕ್ರಮದ ಆದಿಯಲ್ಲಿ ಆರಂಭಗೊಂಡ ’ಹಿಮ್ಮೇಳ ವೈಭವ’ದ ಆದಿಯಲ್ಲಿ, ಹಾದಿ ಸುಗಮಗೊಳಿಸೆಂದು ಮಹಾಕವಿ ಕುಮಾರವ್ಯಾಸ ರಚಿತ ಭಾಮಿನಿಯನ್ನು ಶ್ರುತಪಡಿಸಿದವರು ನೆಬ್ಬೂರು ಭಾಗವತರು. ವಯಸ್ಸಿನಿಂದ ಹಣ್ಣಾದರೂ ಕಂಠವನ್ನು ಅದೇ ಗತಿಯಲ್ಲಿ ಕಾಪಿಟ್ಟುಕೊಂಡು ಇಂದಿಗೂ ಹಾಡಬಲ್ಲ ಆ ಚೈತನ್ಯಕ್ಕೆ ನಮಸ್ಕಾರ.  ಮಿಕ್ಕೆಲ್ಲಾ ಕಲೆಗಳಿಗೆ ಆರಾಧ್ಯ ದೈವವಿದ್ದಂತೇ ಯಕ್ಷಗಾನಕ್ಕೊಬ್ಬ ಆರಾಧ್ಯ ದೈವನಿದ್ದಾನೆ: ಆತನೇ ಗಣಪ. ಯಕ್ಷಗಾನದ ಸೃಷ್ಟಿಗೆ ಪ್ರೇರಿತನಾದ ಗಣಪ ಅದಕ್ಕೆ ಕರ್ತೃವಾಗಿ ಆತ ಬಳಸಿಕೊಂಡ ಪಾರ್ತಿ ಸುಬ್ಬನಿಂದ ಹಿಡಿದು ಕಳೆದ ಶತಮಾನದಲ್ಲಿ ಆಗಿಹೋದ ಮಹಾಮಹಾ ಕಲಾವಿದರೆಲ್ಲರೂ ಅದನ್ನು ಅನುಸರಿಸಿ ಬಂದಿದ್ದರು. ಸರಳ ಜೀವನಕ್ಕೆ ಒಗ್ಗಿಕೊಂಡಿದ್ದ ಅಂದಿನ ಯಕ್ಷಗಾನದ ಕಲಾವಿದರಿಗೆ ತುರ್ತಾಗಿ ಮತ್ತೆಲ್ಲಿಗೋ ಹಾರುವ ತರಾತುರಿಯ ವ್ಯವಹಾರ ಇರಲಿಲ್ಲ. ಹರಿಕಥೆಯಂತೆಯೇ, ಮಹಾವಿಷ್ಣುವಿನ ದಶಾವತಾರಗಳು ಮತ್ತು ಪುರಾಣಗಳ ಪುಣ್ಯಕಥಾನಕಗಳನ್ನು ಯಕ್ಷಗಾನದ ಕವಿಗಳು ಸೊಬಗಿನ ಸೋಬಾನೆ, ಭಾಮಿನಿ, ಸೋಬಾನೆ, ಚೌಪದಿ ಮೊದಲಾದ ಛಂದಸ್ಸುಗಳನ್ನು ಬಳಸಿ ವಿರಚಿಸಿದರು; ಸ್ವರ-ತಾಳ-ಲಯಬದ್ಧವಾಗಿ ಆಂಗಿಕ, ವಾಚಿಕ, ಶಾಬ್ದಿಕ, ಸಾತ್ವಿಕ ಮೊದಲಾದ ಅಭಿನಯದ ಮಟ್ಟುಗಳನ್ನು ಬಳಸಿ, ಕುಳಿತ ಪ್ರೇಕ್ಷಕರಿಗೆ ಕಥಾಹಂದರವನ್ನು ರಂಜನೀಯವಾಗಿ ಉಣಬಡಿಸುವುದು ದೇವರ ಸೇವೆ ಎಂಬರ್ಥದಲ್ಲಿ ಯಕ್ಷಗಾನ ನಡೆದುಬಂತು.

ಹಿಂದಕ್ಕೆ ಕಲಾವಿದರು, ಚೌಕಿಯಲ್ಲಿ ಇಟ್ಟ ಗಣಪತಿಯ ಮರದ ವಿಗ್ರಹ/ಚಿತ್ರಪಟ/ಕಿರೀಟಕ್ಕೆ ಹೂವಿಟ್ಟು, ಧೂಪ-ದೀಪಾರತಿಗಳನ್ನು ಬೆಳಗಿ, ಹಣ್ಣು-ಕಾಯಿ ಸಮರ್ಪಿಸುತ್ತಿದ್ದರು. ತಮ್ಮ ಕಲಾಸಮಯ ನಿರ್ವಿಘ್ನವಾಗಿ ಸಂಪನ್ನಗೊಳ್ಳುವುದಕ್ಕೆ ಸಾಕ್ಷೀಭೂತನಾಗಿ ರಂಗಕ್ಕೆ ಖುದ್ದಾಗಿ ಬರುವಂತೇ ನೀಡುವ ಆಹ್ವಾನವದು. ಪೂಜೆಯಿಂದ ಸಂಪ್ರೀತನಾದ ಗಣಪತಿ ಚೌಕಿಯಿಂದ ರಂಗಕ್ಕೂ ತರಲ್ಪಟ್ಟು ಮತ್ತೆ ಪೂಜೆಗೊಳ್ಳಲ್ಪಡುತಿದ್ದ.  ಬಾಲಗೋಪಾಲ ವೇಷದವರು ನರ್ತಿಸಿ ಸಭಾಮಧ್ಯದ ಪೀಠದಲ್ಲಿರಿಸಿದ ಗಜಮುಖನಿಗೆ ಆರತಿ ಬೆಳಗಿ ತೆರಳಿದಮೇಲೆ, ಸಭಾಲಕ್ಷಣವೆಂಬ ಪೂರ್ವರಂಗದ ಕಾರ್ಯಕ್ರಮದಲ್ಲಿ ಸ್ತ್ರೀವೇಷಧಾರಿಗಳು ಗಣಪನನ್ನು ಹಾಡಿಹೊಗಳುವ ರೀತಿಯಲ್ಲಿ ನುತಿಸಲಾಗುತ್ತಿತ್ತು. ನಂತರ ತೆರೆಕುಣಿತ, ಆಮೇಲೆ ಒಡ್ಡೋಲಗ, ಹೀಗೇ ಕ್ರಮಕ್ರಮವಾಗಿ ಯಕ್ಷಗಾನದ ಪೂರ್ವರಂಗ ಪ್ರಕಾರಗಳು ಮುಗಿದು, ಕುಳಿತ ಪ್ರೇಕ್ಷಕರ ಮನಸ್ಸನ್ನು ಯಕ್ಷಗಾನದಲ್ಲಿ ತಲ್ಲೀನಗೊಳಿಸುವೆಡೆಗೆ ಕಾರ್ಯಗತವಾಗುತ್ತಿದ್ದವು. ಇಂದು ಪೂರ್ವರಂಗದ ಮಾತೇ ಇಲ್ಲ. ಪಶ್ಚಿಮರಂಗ ಅರ್ಥಾತ್ ಮುಕ್ತಾಯದಲ್ಲೂ ತರಾತುರಿ, ಒಂದೇ ಮಂಗಳ ಶ್ಲೋಕವನ್ನು ಹೇಳಿದರೂ ಹೇಳಿದರೆ ಬಿಟ್ಟರೂ ಬಿಟ್ಟರೆ. ಆಟ ಮುಗಿದಾನಂತರ ಮತ್ತೆ ಗಣಪತಿ ಪೂಜೆ ಚೌಕಿಯಲ್ಲಿ; ಹಿಡಿದ ಕಾರ್ಯವನ್ನು ನಿರ್ವಿಘ್ನವಾಗಿ, ಯಥಾಯೋಗ್ಯವಾಗಿ ಸಂಪನ್ನಗೊಳಿಸಿಕೊಟ್ಟಿದ್ದಕ್ಕೆ ಆಭಾರಿಗಳಾಗಿ ಗೋಪಾಲವೇಷದವರಿಂದ ಹಿಡಿದು ಪ್ರಮುಖ ವೇಷಧಾರಿಗಳವರೆಗಿನ ಎಲ್ಲಾ ಕಲಾವಿದರೂ ಭಾಗವಹಿಸುತ್ತಿದ್ದರು.               

ಶಿಷ್ಟಕಲೆಯಾದ ಯಕ್ಷಗಾನವನ್ನು ಪ್ರಾಯಶಃ ಹುರಿದುಂಬಿಸಿದ್ದು ಗಣಪನ ಅಲಂಕಾರಗಳೇ ಎನ್ನಬೇಕು. ಗಣಪನ ಚಿತ್ರಗಳಲ್ಲಿ, ಮೂರ್ತಿಗಳಲ್ಲಿ ನಾವು ಕಾಣುವ ಅನೇಕ ಆಭರಣಗಳನ್ನು ಯಕ್ಷಗಾನ ಬಳಸಿಕೊಂಡಿದೆ. ಮೇಲಾಗಿ, ಕುಣಿತದಲ್ಲಿ ಅಪ್ಪನನ್ನೂ ಮೀರಿಸಿದ ಮಹಾನಿಪುಣ ನೃತ್ಯಗಾರ ಗಣಪತಿ ಎಂಬುದು ಹಲವರ ಅಭಿಮತ. ಮೃದಂಗವನ್ನು ಬಡಿದುಕೊಳ್ಳುತ್ತಾ ತಾನೇ ನರ್ತಿಸುವ ವಿಗ್ರಹಗಳೂ ಕೂಡ ನೋಡಸಿಗುತ್ತವೆ.

ವಾದ್ಯಂ ವಾದಯಿತುಂ ಸಮಾಂಕುಶಧರಾ
ಸಂತ್ಯುತ್ಸುಕಾ ವಾದಕಾ |

ಎಂದು ಇಡಗುಂಜಿ ಗಣಪತಿಯನ್ನು ದಿವಂಗತ ವಿದ್ವಾನ್ ಬ್ರಹ್ಮಶ್ರೀ ಊರಕೇರಿ ಗಜಾನನ ಶಾಸ್ತ್ರಿಗಳು ಬರೆದ ಸುಪ್ರಭಾತ ಸ್ತೋತ್ರದಲ್ಲಿ ಹೇಳಿದ್ದಾರೆ. ಗಣಪತಿಯ ಹೆಸರನ್ನು ಎತ್ತಿಕೊಂಡು ನಡೆಸುವ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸ್ಫೂರ್ತಿ ಸಿಗುವುದು ಸುಳ್ಳಲ್ಲ.

|| ಬಾಹುಭ್ಯಾಂ ನಮತಿ ಸಂಪತತ್ರೈಃ ದ್ಯಾವಾ ಪೃಥಿವೀ ಜನಯಂ ದೇವ ಏಕಃ ||

--ಎಂಬ ವೇದಮಂತ್ರ ದೇವರು ಒಬ್ಬನೇ ಎಂಬುದನ್ನು ಪುಷ್ಟೀಕರಿಸುತ್ತದೆ; ಎಂದಮೇಲೆ ಅಪ್ಪನೂ-ಅಮ್ಮನೂ-ಮಗನೂ ಅವನೇ, ದೇವರಂತಹ ಏಕಪಾತ್ರಾಭಿನಯಧಾರಿಯನ್ನು ಇನ್ನೆಲ್ಲಿ ಕಾಣಲು ಸಾಧ್ಯ? ಹೀಗಿದ್ದರೂ, ಸರಕಾರದಲ್ಲಿ ಒಂದೊಂದು ಕಾರ್ಯಕ್ಕೆ ಒಂದೊಂದು ಇಲಾಖೆ ಇರುವಹಾಗೇ, ದೇವರ ಆಡಳಿತದಲ್ಲಿ ಆತನೇ ಬಹುರೂಪಿಯಾಗಿ ಹಲವುಸ್ತರಗಳಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬುದನ್ನು ನಾವು ಗ್ರಹಿಸಬೇಕು. ಇರಲಿ, ಯಕ್ಷಗಾನವನ್ನು ಸಮಯಮಿತಿಗೆ ಅಳವಡಿಸುವ ಪ್ರಯತ್ನವನ್ನು ಪ್ರಥಮವಾಗಿ ಮಾಡಿದವರು ಕೆರೆಮನೆ ಶಂಭು ಹೆಗಡೆಯವರು. ಆಗಲೇ ಲೋಪಗಳಾಗಬಹುದು ಎಂದು ಮಹಾಬಲ ಹೆಗಡೆಯವರು ಅದನ್ನು ಒಪ್ಪುತ್ತಿರಲಿಲ್ಲ. ಈಗೀಗ ಬರುಬರುತ್ತಾ, ಅಂತಹ ಹಿರಿಯ ಕಲಾವಿದರೆಲ್ಲ ಅಳಿದಮೇಲೆ, ’ಮುಂಡೇ ಮದುವೆಯಲ್ಲಿ ಉಂಡವನೇ ಜಾಣ’ಎಂಬರೀತಿಯಲ್ಲಿ, ತೀರಾ ಅರ್ಜೆಂಟಾಗಿ ಮನಸ್ಸಿನ ಬಾಯಿಗೆ ಏನನ್ನೋ ತುರುಕಲು ಪ್ರಯತ್ನಿಸುತ್ತಾರೆ. ಕಥೆಯ ಹಿನ್ನೆಲೆಯಾಗಲೀ, ಕಥೆಯಲ್ಲಿ ಬರಬೇಕಾದ ಪೂರಕ ಪಾತ್ರಗಳಾಗಲೀ ಕಾಣಿಸದೇ ಇರುವುದರಿಂದಲೂ, ಹಲವು ಪದ್ಯಗಳನ್ನು ಹಾರಿಸಿಬಿಡುವುದರಿಂದಲೂ ಪ್ರೇಕ್ಷಕರಿಗೆ ನವರಸಗಳ ಅನುಭವ ಸಿಕ್ಕುವುದೂ ಇಲ್ಲ, ಕಥಾ ಸಂದರ್ಭದ ಅರ್ಥ ದಕ್ಕುವುದೂ ಇಲ್ಲ!!

"ಡಾಕ್ಟ್ರೇ, ಬಾಳ ಹೊಟ್ಟೆನೋವು ಮಾತ್ರೆ ಕೊಡಿ, ಇವತ್ತೇ ಒಂದು ಮದುವೆ ಊಟಕೂಡ ಉಂಟು ಮಾರಾಯ್ರೆ" ಎಂದು ಯಾರೋ ಒಬ್ಬಾತ ವೈದ್ಯರಲ್ಲಿ ಹೇಳಿದ್ದನ್ನು ಅವರು ಪ್ರಸ್ತಾಪಿಸಿದ್ದು ನೆನಪಿಗೆ ಬಂತು. ಸಂಘಟಕರಲ್ಲಿ ಬಹುತೇಕರಿಗೆ ದುಡ್ಡಿನ ಮೇಲೆ ಕಣ್ಣಿದ್ದರೆ, ಯುವಕಲಾವಿದರಿಗೆ ಪ್ರಸಂಗ ಮುಗಿಸ್ ಹೊತ್ತಾಕಿ, ಬೇರೇ ಪ್ರಸಂಗ ಅಲ್ಲೇರ್ ಆಜೂಬಾಜುಗೆಲ್ಲಾದರೂ ಇದ್ದರೆ ಅಲ್ಲೂ ನಟಿಸುವ ಆಸೆ [ಅವರಿಗೂ ಹಣದಮೇಲೆ ಪ್ರೀತಿ!] ಕೆಲವು ಕಲಾವಿದರ ಕಾಲ್ ಶೀಟು ಎಂಬುದು ಸಿನಿಮಾ ಹೀರೋಗಳ ಕಾಲ್ ಶೀಟುಗಳಿಗಿಂತಲೂ ಸಮಯದ ಅಭಾವಕ್ಕೆ ಒಳಪಟ್ಟಿದ್ದು! ಬೆಳಿಗ್ಗೆ ಮಂಗಳೂರಿನಲ್ಲಿ ಆಟವಿದ್ದರೆ, ರಾತ್ರಿ ಬೆಂಗಳೂರಿನಲ್ಲಿ, ಮಾರನೇದಿನ ಬೆಳಿಗ್ಗೆ ಕುಂದಾಪ್ರದಲ್ಲಿ ಮಾರಾಯ್ರೆ! ೩೬೫ ದಿವಸಗಳಲ್ಲಿ, ಅಷ್ಟೂದಿನಗಳಲ್ಲೂ ಒಂದೋ ಅಥವಾ ಒಂದಕ್ಕಿಂತಾ ಹೆಚ್ಚೋ ಪಾತ್ರಗಳನ್ನು ಬುಕ್ ಮಾಡಿಕೊಳ್ಳುವ ನಟರು ಇದ್ದಾರೆ!!-ಎಂದಾಗ ಯಕ್ಷಗಾನದ ಪಾತ್ರದೊಳಗೆ ಅವರ ತಾದಾತ್ಮ್ಯತೆ ಎಂಥದ್ದು? ಮೇಲಾಗಿ ಕಲಾವಿದರಿಗೆ ಇಲ್ಲದ ಚಟಗಳ ಅವಲಂಬನೆ ಎಂಬುದು ಎಲ್ಲಾ ಪ್ರೇಕ್ಷಕರಿಗೂ ಗೊತ್ತಿರುವ ಸೂಪರ್ ಸೀಕ್ರೆಟ್ಟು!

ಪಟ್ಟಾಭಿಷೇಕದ ದಶರಥನನ್ನೋ, ರಾಮ ನಿರ್ಯಾಣದ ರಾಮನನ್ನೋ, ಹರಿಶ್ಚಂದ್ರನನ್ನೋ, ಕರ್ಣನನ್ನೋ ಇಂದು ಚಿತ್ರಿಸಲು ಶಂಭು ಹೆಗಡೆಯವರಂತಹ ನಟರೇ ಇಲ್ಲ. ಭೀಷ್ಮ, ಜಮದಗ್ನಿ, ಕೃಷ್ಣ, ಬಿಲ್ಲಹಬ್ಬದ ಕಂಸ ಮೊದಲಾದ ಪಾತ್ರಗಳಿಂದ ಬೆರಗು ಹುಟ್ಟಿಸುವ ಮಹಾಬಲ ಹೆಗಡೆಯಂಥವರಿಲ್ಲ. ಯಕ್ಷಗಾನ ಕಲೆಗೆ ತನ್ನದೇ ಆದ ಛಾಪನ್ನು ಕೊಟ್ಟಿದ್ದು ಕೆರೆಮನೆ ಮನೆತನದ ಹೆಗ್ಗಳಿಕೆ. ಅವರ ನೈತಿಕತೆ, ಚಟರಹಿತ ಜೀವನ ವಿಧಾನ ಮೊದಲಾದ ಅಂಶಗಳು ಬೇರೆಲ್ಲರಿಗೆ ಮಾದರಿ. ಸುಗಂಧದ ಸಂಸರ್ಗದಿಂದ ದುರ್ಗಂಧವೂ ಉಡುಗಿಹೋದಂತೇ, ಕೆರೆಮನೆ ಕಲಾವಿದರ ಹಾಗೂ ಅವರ ಮೇಳದ ಸಂಸರ್ಗದಿಂದ ಅನೇಕ ಕಲಾವಿದರು ಸುಸಂಕೃತರಾಗಿ ಬೆಳೆದಿದ್ದರು. ಕೆರೆಮನೆ ಶಿವರಾಮ ಹೆಗಡೆಯವರ ಸಮಕಾಲೀನರಾದ ಅಚ್ಚು-ರಾಮಪ್ಪಿ[ಲಕ್ಷ್ಮಣ ಹೆಗಡೆ-ರಾಮ ಹೆಗಡೆ] ಎಂಬ ಕಲಾವಿದ ಸಹೋದರರು ಹೊನ್ನಾವರ ತಾಲೂಕಿನ ಬೇರಂಕಿ ಗ್ರಾಮದ ಕೊಂಡದಕುಳಿ ಎಂಬ ಮಜರೆಯಲ್ಲಿ ಆಗಿಹೋದರು. ಅಚ್ಚು ಆಂಜನೇಯನ ವೇಷ ಧರಿಸಿ ವೇದಿಕೆಗೆ ಬಂದಾಗ, ವೇದಿಕೆಯ ಪಕ್ಕದ ಕಂಬಗಳನ್ನೇ ಹತ್ತಿ ತೋರಿಸುತ್ತಿದ್ದ ನೈಜ ಕಲಾತ್ಮಕತೆ ಇವತ್ತೆಲ್ಲಿದೆ? ರಾಮಪ್ಪಿಯವರ ವೇಷದ ತಿಟ್ಟು ಕೆರೆಮನೆ ಶಿವರಾಮ ಹೆಗಡೆಯವರ ವೇಷವನ್ನೇ ಹೋಲುತ್ತಿತ್ತು ಎಂಬುದು ಇಂದಿನ ವೃದ್ಧ ಪ್ರೇಕ್ಷಕರ ಹೇಳಿಕೆ. ಈ ಪೈಕಿ ರಾಮ ಹೆಗಡೆಯವರ ಮೊಮ್ಮಗನಾಗಿ ಇವತ್ತು ಪ್ರಬುದ್ಧ ಕಲಾವಿದನಾಗಿ ಬೆಳೆದು ನಿಂತ, ಸಭ್ಯ-ಸುಶೀಲ-ಸದಾಚಾರೀ ಸರಳ ವ್ಯಕ್ತಿ ಕೊಂಡದಕುಳಿ ರಾಮಚಂದ್ರ ಹೆಗಡೆ. 

ಮೊನ್ನೆ ಮೊನ್ನೆ ಗುಂಡಬಾಳಾದಲ್ಲಿ ರಾಮಚಂದ್ರ ಕಲಿಯುತ್ತಿದ್ದುದನ್ನು ಕಂಡಿದ್ದ ಅನೇಕರಿಗೆ ಅದು ಆಡಾಡ್ತಾ ಕಳೆದುಹೋದ ೩೦ ವರ್ಷ ಎಂಬುದು ಗಮನಕ್ಕೆ ಬರುವುದೇ ಇಲ್ಲ!! ಗುಂಡಬಾಳೆಯ ಮುಖ್ಯಪ್ರಾಣನೆದುರು  ಕೆಲವಾರು ವರ್ಷಗಳಕಾಲ ಪ್ರತೀ ಬೇಸಗೆಯ ನಾಕು ತಿಂಗಳು ಸೇವೆನಡೆಸಿದ ರಾಮಚಂದ್ರ, ಅಜ್ಜನ ಹೆಸರಿಗೆ ಹೊಸ ಗರಿಯನ್ನು ಮೂಡಿಸುವಲ್ಲಿ ಹಾದುಬಂದ ಹಾದಿ ಅಜಮಾಸು ೩೫ ವರ್ಷಗಳು. ಈ ಸುದೀರ್ಘ ಅವಧಿಯಲ್ಲಿ, ಯಕ್ಷಗಾನವನ್ನೇ ವೃತ್ತಿಯನ್ನಾಗಿಸಿಕೊಂಡು ನಡೆಸಿಬಂದ ಅವರಿಗೆ ಎದುರಾಗಿರಬಹುದಾದ ಆರ್ಥಿಕ ಸಂಕಷ್ಟಗಳನ್ನು ನಾವು ಗಮನಿಸಬೇಕು. ಇಂದು ಯಕ್ಷಗಾನ ಕಲಾವಿದರು ಹಣಕ್ಕಾಗಿ ತಮ್ಮ ಕಲೆಯನ್ನು ಮಾರಿಕೊಳ್ಳುವ ಉದ್ದೇಶದ ಹಿಂದೆ ಇರುವ ಕರಾಳ ಛಾಯೆ ಅದು. ರಾಮಚಂದ್ರರು ಹರೆಯದವರಾಗಿದ್ದಾಗ ಇಂದಿನಂತೇ ಮಳೆಗಾಲದಲ್ಲೂ ಆಗುತ್ತಿದ್ದುದ ಆಟಗಳು ಸಂಖ್ಯೆ ತೀರಾ ಕಮ್ಮಿ. ಕಲಾವಿದರಿಗೆ ಎಷ್ಟೋ ದಿನ ಹೊಟ್ಟೆಯಮೇಲೆ ತಣ್ಣೀರುಪಟ್ಟೆ! ಆರು ತಿಂಗಳು ಗಣನೀಯವಲ್ಲದ ಆದಾಯ, ಇನ್ನಾರು ತಿಂಗಳು ಆದಾಯ ರಹಿತ ವ್ಯವಸಾಯ! ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸಿಯೂ ಹೊಸ ಸಾಹಸಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಧ್ಯಯನ ಶೀಲರಾಗಿ ಯಕ್ಷಗಾನ ಕಲೆಯಲ್ಲಿ ಇರುವ ಕೊರತೆಗಳನ್ನು ನೀಗಿಸಲು ಉದ್ಯುಕ್ತರಾದವರಲ್ಲಿ ರಾಮಚಂದ್ರ ಹೆಗಡೆ ಕೂಡ ಒಬ್ಬರು.

ಬದಲಾವಣೆ ಬಯಸುವ ಯುವಪ್ರೇಕ್ಷಕರ ಸಿನಿಕತೆಗೆ ತಕ್ಕದಾಗಿ ಅದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ದಕ್ಷಿಣಕನ್ನಡದ ಕೆಲವು ಜನ ಹೊಸ ಹೊಸ ಸಾಮಾಜಿಕ ಪ್ರಸಂಗಗಳನ್ನು ಬರೆದರು. ಛಂದಸ್ಸು, ವ್ಯಾಕರಣ, ತಾಳಗತಿ ಎಲ್ಲದರಲ್ಲೂ ಯಡವಟ್ಟುಗಳನ್ನೇ ತುಂಬಿಸಿಕೊಂಡ ಅಂತಹ ಪ್ರಸಂಗಗಳು ಮೂಲ ಯಕ್ಷಗಾನದ ಧ್ಯೇಯೋದ್ದೇಶವನ್ನು ಗಾಳಿಗೆ ತೂರಿದವು. ನೈತಿಕತೆ, ವೈಚಾರಿಕತೆ, ಸತ್ಯನಿಷ್ಠ ನಡೆ ಮೊದಲಾದ ಧನಾತ್ಮಕ ಅಂಶಗಳನ್ನು ಬೋಧಿಸಬೇಕಾದ ಪ್ರಸಂಗಗಳ ಬದಲಾಗಿ, ಹಾದರ, ಅಪರಾಧ, ಕಾಮುಕತೆ ಇಂತಹ ಅಂಶಗಳನ್ನೇ ಟಿವಿ ಧಾರಾವಾಹಿಗಳಂತೇ ಬಿಂಬಿಸ ಹೊರಟಿದ್ದು, ಯಕ್ಷಗಾನದ ಮೇಲೆ ನಡೆದ ಅತ್ಯಾಚಾರ ಎಂದರೆ ತಪ್ಪಲ್ಲ. ಇಂತಹ ಸಾಮಾಜಿಕ ಪ್ರಸಂಗಗಳನ್ನು ಧಿಕ್ಕರಿಸಿ ಪೌರಾಣಿಕ ಪ್ರಸಂಗಗಳನ್ನೇ ಆಡುವ ಕಳಕಳಿಯನ್ನು ಉಳಿಸಿಕೊಂಡವರು ಅಂದಿಗೂ ಇಂದಿಗೂ ಕೆರೆಮನೆ ಮೇಳದವರು ಮಾತ್ರ! ಅಂತಹ ಪೌರಾಣಿಕ ಪ್ರಸಂಗಗಳನ್ನೇ ಆತುಕೊಳ್ಳುವ ಇನ್ನೊಬ್ಬ ಕಲಾವಿದನನ್ನು ನಾವು ಹುಡುಕಬಹುದಾದರೆ ಅದು ರಾಮಚಂದ್ರರಲ್ಲಿ. ೧೨-೧೩ ವರ್ಷಗಳ ಹಿಂದೆ ದಕ್ಷಿಣಕನ್ನಡದ ಕುಂಭಾಶಿಯಲ್ಲಿ ನೆಲೆಸಿ, ಅಲ್ಲಿಂದಲೇ ’ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ, ಕೊಂಡದಕುಳಿ, ಕುಂಭಾಶಿ’ ಎಂಬ ಮೇಳವೊಂದನ್ನು ಕಟ್ಟಿಕೊಂಡು ನಡೆಸುತ್ತಾ ಬರುತ್ತಿದ್ದಾರೆ; ಮೇಳದ ದಶಮಾನೋತ್ಸವವನ್ನೂ ಆಚರಿಸಿದ್ದಾರೆ. 

"ಪೂರ್ವರಂಗದ ಅಭಿನಯಕ್ಕೆ ಯಾರೂ ಸಿದ್ಧರಿಲ್ಲ" ಎಂಬ ಅವರ ಅನಿಸಿಕೆಯನ್ನು ಅವರು ಹೇಳಿದಾಗ ನಾನು ಕೇಳಬೇಕೆಂದಿದ್ದೆ: ಪೂರ್ವರಂಗವನ್ನು ಪ್ರಮುಖರಂಗದ ಸಹಕಲಾವಿದರೇ ನಿರ್ವಹಿಸುವಂತೇ ಮಾಡಿದರೇನಾಗುತ್ತದೆ? ಯಾರೂ ಇಲ್ಲ ಎಂಬ ಕ್ಷುಲ್ಲಕ ಕಾರಣ ಕೊಟ್ಟು ಶಿಷ್ಟ ಸಂಪ್ರದಾಯವನ್ನು ಮುರಿಯುವುದು ಔಚಿತ್ಯವೇ? ಪೂರ್ವರಂಗವಿಲ್ಲದ ಕಲೆ ಎಷ್ಟುಕಾಲ ತನ್ನ ಛಾಪನ್ನು ಇಟ್ಟುಕೊಂಡೀತು? ಕೆರೆಮನೆ ಮೇಳ ನಡೆಸುವ ಆಟಗಳಲ್ಲಿ ಇಂದಿಗೂ ತಕ್ಕಮಟ್ಟಿಗೆ ಪೂರ್ವರಂಗ ಇದೆಯಲ್ಲಾ? ಹಾಗೇ ಮಿಕ್ಕಿದ ’ಹೆಕ್ಕುಮೇಳ’ಗಳಲ್ಲೂ ಅದು ಆಗದು ಯಾಕೆ? "ರಾಮಚಂದ್ರ ತನ್ನದೇ ಮೇಳಕ್ಕೆ ಬದ್ಧನಾಗಿರಬೇಕು, ಅತಿಥಿ ಕಲಾವಿದನಾಗಿ ಕರೆದೆಡೆಗೆಲ್ಲಾ ಹೋಗಬಾರದು, ಅದರಿಂದ ತನ್ನ ಮೇಳದಲ್ಲಿ ಇರುವ ಕಲಾವಿದರಿಗೂ ಬದ್ಧತೆ ಇರುವುದಿಲ್ಲ, ಅವರನ್ನು ನಿಯಂತ್ರಿಸುವುದು ಕಷ್ಟಸಾಧ್ಯ" ಎಂದು ನೆಬ್ಬೂರು ಭಾಗವತರು ಹೇಳಿದ್ದು ಸರಿಯಾಗೇ ಇದೆ. ಪ್ರೇಕ್ಷಕ ಉತ್ತಮವಾದುದನ್ನು ಎಲ್ಲಿದ್ದರೂ ಹುಡುಕುತ್ತಾನೆ ಮತ್ತು ಅದನ್ನು ಹೇಗಾದರೂ ಪಡೆಯಲು ಪ್ರಯತ್ನಿಸುತ್ತಾನೆ. ಅತಿಥಿ ಕಲಾವಿದನಾಗಿ ಭಾಗವಹಿಸದ ಪಕ್ಷದಲ್ಲಿ ಯಾವ ಪ್ರೇಕ್ಷಕನೂ ವಂಚಿತನಾಗುವುದಿಲ್ಲ. ನಡೆಸುವ ಮೇಳದಲ್ಲಿ ಉತ್ತಮ ಕಲಾವಿದರನ್ನು ಇರಿಸಿಕೊಂಡರೆ ಎಲ್ಲರೂ ಅದೇ ಮೇಳದ ಪ್ರದರ್ಶನಗಳನ್ನೇ ನೋಡುತ್ತಾರೆ. ಇದಕ್ಕೊಂದು ರೂಪ ಬೇಕಾಗುತ್ತದೆ, ಕಲಾವಿದರಿಗೆ ನಿಗದಿತ ಸಂಬಳ ವಗೈರೆ ಪರಿಕಲ್ಪನೆಯಾಗಬೇಕಾಗುತ್ತದೆ, ಕಲಾವಿದರು ಮಾತುಕೊಟ್ಟಮೇಲೆ ಮೇಳಕ್ಕೆ ಬದ್ಧರಾಗಿರಬೇಕಾಗುತ್ತದೆ. ಇವತ್ತಿನ ಕಾಲಧರ್ಮಕ್ಕನುಸರಿಸಿ ಲಿಖಿತ ಒಡಂಬಡಿಕೆಯನ್ನೂ ಮಾಡಿಕೊಳ್ಳಬಹುದಾಗಿದೆ. ಹಾಗೊಮ್ಮೆ ಮೇಳಕ್ಕೊಂದು ರೂಪ ಬಂದರೆ ಆಗ ಹಾರುವ ಕಲಾವಿದರು ಹಾರಾಡದಂತಾಗುತ್ತದೆ! ಅವರೂ ನಡೆಯಲಿಕ್ಕೆ ಕಲಿಯುತ್ತಾರೆ ಮತ್ತು ಯಕ್ಷಗಾನದ ಮೂಲಸ್ರೋತ ಸತ್ವಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೆ.   

ಏನಾಗಿದೆ ಎಂದರೆ ಕೊಂಡದಕುಳಿಯವರಂತಹ ಕಲಾವಿದರು ಯಾರೊಡನೆಯೂ ವೈಷಮ್ಯವನ್ನು ಕಟ್ಟಿಕೊಳ್ಳಲು ಬಯಸುವುದಿಲ್ಲ, ವೈಷಮ್ಯ ತುಸುಮಟ್ಟಿಗೆ ಆದರೂ ಸಹಿಸಿಕೊಂಡು ಮೇಳವನ್ನು ಒಂದು ವಿಶಿಷ್ಟ ಸ್ವರೂಪಕ್ಕೆ ಒಗ್ಗಿಸುವ ಇಚ್ಛೆ ರಾಮಚಂದ್ರರಿಗಿದ್ದಂತಿಲ್ಲ. ಸಮಯಮಿತಿಯ ಮೇಳಗಳಲ್ಲಿ ಭಾಗವಹಿಸುವ ಕಲಾವಿದರು ಅಂತಹ ಅವಕಾಶಗಳು ಎಲ್ಲಿದ್ದರೂ ಅಲ್ಲಿಗೆ ಹಾರುತ್ತಾರೆ. ಬೆಳಿಗ್ಗೆ ಈ ಮೇಳದಲ್ಲಿ ಭಾಗವಹಿಸಿದ ಕಲಾವಿದನೇ ಸಂಜೆ ಇನ್ನೊಂದು ಮೇಳದ ಪ್ರದರ್ಶನದಲ್ಲಿ ಭಾವಹಿಸುತ್ತಾನೆ! ಆತ ಯಾವ ಮೇಳದವ ಎಂದು ಪ್ರೇಕ್ಷಕ ತಿಳಿಯಬೇಕು? ಸಿನಿಮಾ ನಟರಂತೇ ಬೇರೆ ಬೇರೇ ಬ್ಯಾನರುಗಳಡಿಯಲ್ಲಿ ಕೆಲಸಮಾಡುವ ಸಿನಿಕತೆ ಯಕ್ಷಗಾನ ಕಲಾವಿದರಲ್ಲಿ ಇರಬಾರದಲ್ಲ? ಕೊನೇಪಕ್ಷ ಹಿಡಿದ ಮೇಳದಲ್ಲಿ ಒಂದು ವರ್ಷವಾದರೂ ಇದ್ದು, ಅಲ್ಲಿಂದಾಚೆಗೆ ಬೇಲಿ ಹಾರದೇ ಬದ್ಧತೆಯನ್ನು ಮೆರೆದರೆ ಅದು ಮೇಳಕ್ಕೂ, ಕಲಾವಿದರಿಗೂ, ಯಕ್ಷಗಾನ ಕಲೆಗೂ ಕ್ಷೇಮ ಎಂಬುದು ನನ್ನಂತಹ ಹಲವರ ಅಭಿಪ್ರಾಯ.  

೫೦ ವರ್ಷಗಳಲ್ಲಿ ರಾಮಚಂದ್ರರು ನಡೆಸಿದ ಪಾತ್ರಗಳಿಗೂ ಉಳಿದ ಕಲಾವಿದರು ವಹಿಸಿದ ವೇಷಗಳಿಗೂ ಅಜಗಜಾಂತರವಿದೆ. ಪಾತ್ರವನ್ನು ಪೋಷಿಸುವುದಾದರೆ ಅದಕ್ಕೊಂದಷ್ಟು ಪೂರ್ವಸಿದ್ಧತೆ ಬೇಕು. ಪಾತ್ರಗಳನ್ನು ಪೋಷಿಸಲು ಸಾಕಷ್ಟು ಅಧ್ಯಯನಶೀಲರಾಗಿರಬೇಕು. ಮಹಾಕಾವ್ಯಗಳನ್ನು ಓದಿಕೊಂಡರೆ ಪಾತ್ರಗಳ ಒಳಹೊರಗಿನ ಮಹಿಮೆ ತಿಳಿಯುತ್ತದೆ. ಕೇವಲ ಅನ್ಯರು ವಹಿಸಿದ್ದ ಪಾತ್ರಗಳನ್ನು ನೋಡಿ, ಅವರ ಮಾತುಗಳನ್ನು ಕೇಳಿ, ಅನುಕರಿಸುವ ಜಾಯಮಾನದವರು ಪಾತ್ರಪೋಷಿಸಿದರೆ ಜನ ಬಹುಕಾಲ ಅದನ್ನು ಮೆಚ್ಚಲಾರರು. ಕಿವಿಗಡಚಿಕ್ಕುವಂತೇ ಒದರುವುದು, ಸುಗಮ ಸಂಗೀತದ ಮಾದರಿಯಲ್ಲಿ ಯಕ್ಷಗಾನದ ಹಾಡುಗಳನ್ನು ಹೇಳುವುದು, ತಾಳ-ಲಯಗಳ ತಪ್ಪುವಿಕೆ ಮೊದಲಾದವು ಇಂದಿನ ಭಾಗವತರನೇಕರ ಬಡಿವಾರದ ಬಂಡವಾಳ. ಚಪ್ಪಾಳೆಗಳ ಮಧ್ಯೆ ಇಂದ್ರಲೋಕದಿಂದ ಧರೆಗಿಳಿದಂತೇ  ರಂಗಕ್ಕೆ ಬಂದು ಆಸೀನರಾಗುವ ಕೆಲವು ಭಾಗವತರು ನಿಜಕ್ಕೂ ಯಕ್ಷಗಾನದ ಮೂಲರಸಕ್ಕೆ ಹಾಲಹಲವನ್ನು ಸೇರಿಸಿಬಿಟ್ಟಿದ್ದಾರೆ. ಯಕ್ಷಗಾನ ಒಂದು ವಿಭಿನ್ನ ಪ್ರಕಾರದ ಸಂಗೀತವೇ ಹೊರತು ಸಂಗೀತವೇ ಯಕ್ಷಗಾನವಲ್ಲ ಎಂಬುದನ್ನು ಅಂಥವರಿಗೆ ತಿಳಿಸಿಹೇಳುವವರು ಯಾರೂ ಇಲ್ಲ! ಬಡಾ ಬಡಗಿನ ಮಹೋನ್ನತ ತಿಟ್ಟುಗಳನ್ನು ಯಥಾವತ್ತಾಗಿ ನಿರೂಪಿಸುತ್ತಾ ಸಾತ್ವಿಕ ಭಾವದಿಂದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ರಾಮಚಂದ್ರರು ಯಶಸ್ಸು ಗಳಿಸಿದ್ದಾರೆ; ಅವರು ರಾಮನೂ ಆಗಬಲ್ಲರು, ರಾವಣನಾಗಿಯೂ ಅಷ್ಟೇ ಲೀಲಾಜಲವಾಗಿ ಅಭಿನಯಿಸಬಲ್ಲರು.

೫೦ನೇ ವಯಸ್ಸಿನ ಹೊಸ್ತಿಲಲ್ಲಿ, ಅಭಿಮಾನಿಗಳು ನಡೆಸಿದ ಕಾರ್ಯಕ್ರಮ ಸುಂದರವಾಗಿತ್ತು. ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ನಿನ್ನೆ ಅಂದರೆ ೨೮.೦೪.೨೦೧೩ ಭಾನುವಾರದಂದು ರಾಮಚಂದ್ರರ ಕಲಾಭಿಮಾನಿಗಳಿಗೆ ಸಂತಸ. ಸಭಾ ಕಾರ್ಯಕ್ರಮದಲ್ಲಿ ಅನೇಕ ಸಹಕಲಾವಿದರು ಒಡನಾಟದ, ಒಡಲಾಳದ ಅನುಭವಗಳನ್ನು ಹಂಚಿಕೊಂಡರು. ಮುಂಬೈನ ಪಲ್ಯ ಉಮೇಶ್ ಶೆಟ್ಟರು, ವಿಜಯವಾಣಿಯ ತಿಮ್ಮಪ್ಪ ಭಟ್ಟರು, ಆಕಾಶವಾಣಿಯ ದಿವಾಕರ ಹೆಗಡೆಯವರು, ಕೋಕಿಲವಾಣಿಯ ನೆಬ್ಬೂರು ನಾರಾಯಣ ಭಾಗವತರು, ಎನ್. ಆರ್. ಹೆಗಡೆಯವರು ಮೊದಲಾದವರು ಮಾತನಾಡಿದರು. ನಂತರ ಕೊಂಡದಕುಳಿಯವರಿಗೆ ಬಂಗಾರದ ಕಡಗ ತೊಡಿಸಿ, ಶಾಲುಹೊದೆಸಿ, ಬೆಳ್ಳಿಯ ಮೆರುಗಿನ ಕಿರೀಟ-ಸ್ಮರಣಿಕೆ-ಮಾನ ಪತ್ರ ನೀಡಿ ಸನ್ಮಾನ ನಡೆಯಿತು. ಕೊಂಡದಕುಳಿಯವರು ಭಾಗವಹಿಸಿದ ಯಕ್ಷಗಾನ ಪ್ರಸಂಗಗಳ ಡಿವಿಡಿ [ದೃಶ್ಯ ಸಾಂದ್ರಿಕೆ] ಬಿಡುಗಡೆಮಾಡಲಾಯ್ತು. ಸಭೆಯ ನಂತರದಲ್ಲಿ ’ಸತ್ಯವಾನ್ ಸಾವಿತ್ರಿ’ ಎಂಬ ಪೌರಾಣಿಕ ಪ್ರಸಂಗವನ್ನು ಆಡಿತೋರಿಸಿದರು.

ಸುವರ್ಣವರ್ಷವನ್ನು ತಲ್ಪಿದ ಕೊಂಡದಕುಳಿಯವರ ಸಾರ್ಥಕ ಸೇವೆ ಶತಕಾಲ ಮುನ್ನಡೆಯಲಿ, ಇನ್ನೂ ವಿವಿಧ ಆಯಾಮಗಳಲ್ಲಿ ಯಕ್ಷಗಾನದ ಮೆರುಗನ್ನು ಹೆಚ್ಚಿಸುವತ್ತ ಅವರ ಸಾತ್ವಿಕ ಕಳೆ ಜನರನ್ನು ರಂಜಿಸಲಿ, ಹಲವು ನ-ಕಾರಗಳ ಮಧ್ಯೆಯೂ, ತನ್ನಂತಹ ಭರವಸೆಯ ಕಲಾವಿದರನ್ನು ಹುಟ್ಟುಹಾಕುವ ಗುರು-ಶಿಷ್ಯ ವ್ಯವಸಾಯದ ಓಂಕಾರ ಅವರಿಂದ ಆಗಲಿ ಎಂಬುದು ಅಭಿಮಾನೀ ಬಳಗದ ಎಲ್ಲರ ಹಾರೈಕೆ, ಅಪೇಕ್ಷೆ ಮತ್ತು ನಿರೀಕ್ಷೆ ; ಈ ದನಿಯಲ್ಲಿ ನನ್ನ ದನಿಯೂ ಸೇರಿದೆ ಎಂದು ಹೊಸದಾಗಿ ಹೇಳಬೇಕಿಲ್ಲವಲ್ಲಾ?  

Friday, April 26, 2013

ಕಷ್ಟದಡವಿಯ ಕಳೆದು ಬೆಟ್ಟಹೊಳೆಗಳಹಾದು ...........

ಚಿತ್ರಋಣ : ಅಂತರ್ಜಾಲ 
ಕಷ್ಟದಡವಿಯ ಕಳೆದು ಬೆಟ್ಟಹೊಳೆಗಳಹಾದು .....

ಕಳೆದ ೬ ದಶಕಗಳ ಹಿಂದಿನ ಸ್ಥಿತಿಗತಿ ಇಂದಿನಂತಿರಲಿಲ್ಲ. ದೇಶದ ತುಂಬ ಬ್ರಿಟಿಷರ ಪಳೆಯುಳಿಕೆಗಳು ಕಾಣುತ್ತಿದ್ದವು. ನೈಸರ್ಗಿಕವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಭೌತಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಅನುಷಂಗಿಕವಾಗಿ, ಅನುವಂಶಿಕವಾಗಿ ಶ್ರೀಮಂತವಾಗಿದ್ದ ನಮ್ಮ ಭಾರತದ ಹೆಚ್ಚಿನ ಸಂಪತ್ತನ್ನು ಬ್ರಿಟಿಷರು ಕೊಳ್ಳೆಹೊಡೆದುಕೊಂಡು ಹೊರಟುಹೋಗುವುದರ ಜೊತೆಗೆ ಕ್ರೈಸ್ತ ಮಿಶನರಿಗಳನ್ನು ಸ್ಥಾಪಿಸಿ ತಮ್ಮ ಮತವನ್ನು ಪ್ರಚುರಗೊಳಿಸಿ ಹೋದರು. ರಾಜರುಗಳ ಆಳ್ವಿಕೆ ಅಳಿದು ಚಪ್ಪನ್ನೈವತ್ತಾರು ದೇಶಗಳು ಏಕಛತ್ರದಡಿಯಲ್ಲಿ ಆಳ್ವಿಕೆಗೆ ಒಳಪಡುವಂತಹ ಪ್ರಜಾತಂತ್ರಾಧಾರಿತ ಸರಕಾರ ಆಡಳಿತಕ್ಕೆ ಬಂತು. ಜನರಲ್ಲಿ ಪ್ರಾಮಾಣಿಕತೆ ಮತ್ತು ಜೀವನದ ಮೌಲ್ಯಗಳು ಅಧಿಕವಾಗಿದ್ದ ಕಾರಣ ಹಣಕ್ಕಾಗಿಯೇ ಎಲ್ಲವನ್ನೂ ಮಾಡುವ ಮನೋಭಾವನೆ ಇರಲಿಲ್ಲ; ಮರ್ಯಾದೆ ಎಂಬ ಪದಕ್ಕೆ ಬಹಳ ಬೆಲೆಯಿತ್ತು. ಕಾಡುಮೇಡುಗಳು ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದವು; ವನ್ಯಮೃಗಗಳೂ ಪಕ್ಷಿಗಳೂ ಉಂಡಲೆದು ಸುಖದಿಂದಿದ್ದವು. ಗಣಿಗಾರಿಕೆಯ ಅಬ್ಬರವಾಗಲೀ, ಕಾಡುಗಳ್ಳರ ಅಟ್ಟಹಾಸವಾಗಲೀ ಇರಲಿಲ್ಲ. ಇಂತಹ ಕಾಲಘಟ್ಟದಲ್ಲಿ, ಮಹಾರಾಷ್ಟ್ರದ ಸಜ್ಜನಗಡದಿಂದ ಕಾಲ್ನಡಿಗೆಯಲ್ಲೇ ಸಂತರೊಬ್ಬರು ಊರೂರು ದಾಟುತ್ತಾ ಕರ್ನಾಟಕದ ಶಿವಮೊಗ್ಗೆಯ ಸಾಗರ ಪ್ರಾಂತಕ್ಕೆ ಬಂದರು; ಅವರೇ ಭಗವಾನ್ ಶ್ರೀಧರ ಸ್ವಾಮಿಗಳು. 

ರಾಜಾಶ್ರಯದಲ್ಲೂ, ತದನಂತರ ಬ್ರಿಟಿಷರ ಆಳ್ವಿಕೆಯಲ್ಲೂ ಸಹ ಅಂಗಡಿಗಳ ಸುಂಕ ವಸೂಲಿ ಮಾಡಿಕೊಡುವ ಪತಕಿ[ಫಸಕೀ ಪದದ ಅಪಭ್ರಂಶ] ಎಂಬ ಮನೆತನದ ಕವಲೊಂದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರಿನಿಂದ ಹೈದರಾಬಾದ್ ನಗರಕ್ಕೆ ಬಂದು ನೆಲೆಸಿತ್ತು. ಸಮುದ್ರದ ನಂಟಿದ್ದರೂ ಉಪ್ಪಿಗೆ ಬಡತನ ಎಂಬಂತೇ ಸರಕಾರಕ್ಕೆ ಸುಂಕವನ್ನು ವಸೂಲುಮಾಡಿ ತಲ್ಪಿಸುತ್ತಿದ್ದರೂ ಬಡತನ ಎಂಬುದು ಈ ಕವಲಿಗೆ ಬಂದ ಪಿತ್ರಾರ್ಜಿತ ಆಸ್ತಿಯಾಗಿತ್ತು!  ಸರ್ಪಶಾಪದಿಂದ ನಿರ್ವಂಶವಾಗತೊಡಗಿದ್ದ ಪತಕಿ ಮನೆತನದ  ದೇಗಲೂರು ನಾರಾಯಣರಾವ್ ಪತಕಿ-ಕಮಲಾಬಾಯಿ ದಂಪತಿ, ಕುಲಪುರೋಹಿತರಾದ ಮಾರುತಿರಾಯರೆಂಬವರ ಸಲಹೆಯ ಮೇರೆಗೆ, ಗಾಣಗಾಪುರ ಕ್ಷೇತ್ರಕ್ಕೆ ತೆರಳಿ, ಭೀಮಾ-ಅಮರಜಾ ನದಿಗಳ ಸಂಗಮದಲ್ಲಿ ಸಂಕಲ್ಪ ಸ್ನಾನ ಪೂರೈಸಿ, ದತ್ತಸ್ವರೂಪಿ ನರಸಿಂಹ ಸರಸ್ವತಿಯವರ ನಿರ್ಗುಣ ಪಾದುಕಾ ದರ್ಶನವನ್ನು ಪಡೆದುಕೊಂಡು, ಗುರುಚರಿತ್ರೆ ಪಾರಾಯಣ, ಪ್ರದಕ್ಷಿಣೆ, ನಮಸ್ಕಾರ, ಮಧುಕರಿ ಭಿಕ್ಷೆ ಇವುಗಳಿಂದ ಶ್ರೀ ದತ್ತನ ಉಪಾಸನೆಯನ್ನು ಶ್ರದ್ಧಾ-ಭಕ್ತಿ ಪುರಸ್ಸರ ನೆರವೇರಿಸುತ್ತಿರಲಾಗಿ, ಅವರ ಅತೀವ ಭಕ್ತಿಗೆ ಒಲಿದ ಶ್ರೀದತ್ತಾತ್ರೇಯನು ದರ್ಶನವಿತ್ತು ಒಂದು ಪೂರ್ಣಫಲವನ್ನಿತ್ತು, "ನಿಮ್ಮ ಇಚ್ಛೆಯಂತೆಯೇ ನಿಮಗೆ ಲೋಕೋದ್ಧಾರಕ ಪುತ್ರನೊಬ್ಬ ಜನಿಸುತ್ತಾನೆ" ಎಂದು ಹರಸಿದನು. ಆನಂದತುಂದಿಲರಾದ ಪತಕಿ ದಂಪತಿ ವ್ರತಸಮಾಪ್ತಿ ನಡೆಸಿ, ಅನ್ನಸಂತರ್ಪಣೆ ಮಾಡಿ ಹೈದರಾಬಾದಿಗೆ ಹಿಂದಿರುಗಿದರು.

ಸ್ವಲ್ಪ ಕಾಲದಲ್ಲಿಯೇ ಕಮಲಾಬಾಯಿ ಗರ್ಭಿಣಿಯಾದರು. ಸಾಮಾನ್ಯ ಸ್ತ್ರೀಯರಿಗಿಂತ ವಿಲಕ್ಷಣವಾದ ಬಯಕೆಗಳು ಉದ್ಭವಿಸಿ, ಪುರಾಣ-ಪುಣ್ಯಕಥೆಗಳನ್ನು ಕೇಳುತ್ತಾ ಸತ್ಸಂಗವನ್ನೂ ದಾನ-ಧರ್ಮಗಳನ್ನೂ  ನಡೆಸುತ್ತಾ ದಿನಗಳೆದರು. ನವಮಾಸ ಸಮೀಪಿಸುವ ಹೊತ್ತಿಗೆ ಕಮಲಾಬಾಯಿಯವರ ತಾಯಿ ಬಯಾಬಾಯಿಯವರು ಮಗಳನ್ನು ಹೆರಿಗೆ-ಬಾಣಂತನಕ್ಕಾಗಿ ಗುಲ್ಬರ್ಗಾ ಸಮೀಪದ ಲಾಡ್ ಚಿಂಚೋಳಿಯಲ್ಲಿದ್ದ ತನ್ನ ಹಿರಿಯ ಮಗಳು ಚಂದೂಬಾಯಿಯ ಮನೆಗೆ ಕರೆತಂದರು. ಹಿರಿಯಳಿಯ ತ್ರ್ಯಂಬಕ ದೇಸಾಯಿಯವರು ಸೌಜನ್ಯ ಪೂರ್ವಕ ಸಹಕಾರವಿತ್ತು ಸೀಮಂತವನ್ನು ನೆರವೇರಿಸಿದರು. ಮಾರ್ಗಶೀರ್ಷ ಮಾಸ ಸಮೀಪಿಸಿತು. ಶಾಲಿವಾಹನಶಕೆ ೧೮೩೦ ಪ್ಲವಂಗನಾಮ ಸಂವತ್ಸರದ ಮಾರ್ಗಶೀರ್ಷ ಶುದ್ಧ ಪೌರ್ಣಮೀ ಗುರುವಾರ ೧೯.೧೦.೧೯೦೭ ರಂದು ಸಾಯಂಕಾಲ ೭:೨೩ ನಿಮಿಷಕ್ಕೆ ಸರಿಯಾಗಿ, ಕಮಲಾಬಾಯಿಯವರು ಪುತ್ರರತ್ನಕ್ಕೆ ಜನ್ಮವಿತ್ತರು. ಅಂದು ದತ್ತಜಯಂತಿಯಾದ್ದರಿಂದ ದತ್ತದೇವರ ಪಲ್ಲಕ್ಕಿ ದೇಸಾಯರ ಮನೆಯ ಮುಂದೆ ಅದೇ ಸಮಯಕ್ಕೆ ಬಂದು ನಿಂತಿತ್ತು!

ಮಗುವಿಗೆ ಸಮಯದಲ್ಲಿ ಜಾತಕರ್ಮವನ್ನು ನೆರವೇರಿಸಿ, ಕುಲದೈವ ವೆಂಕಟರಮಣನಲ್ಲಿ ಪ್ರಾರ್ಥಿಸಿಕೊಂಡಿದ್ದಂತೇ "ಶ್ರೀಧರ" ಎಂದು ನಾಮಕರಣ ಮಾಡಲಾಯ್ತು. || ನಿತ್ಯಮೇವ ಮೋಕ್ಷಶ್ರಿಯಂ ಧರತೀತಿ ಶ್ರೀಧರಃ ||-ಶ್ರೀಧರ ಎಂಬ ಹೆಸರಿನ ಔಚಿತ್ಯ ಇದಾಗಿದ್ದು, ಮಗುವಿಗೆ ಇದು ಅನ್ವರ್ಥವೂ ಆಗಿತ್ತು. ಹುಟ್ಟಿದ ಮಗುವಿಗೆ ೪ನೇ ತಿಂಗಳಲ್ಲಿ ಸೂರ್ಯದರ್ಶನ ಮಾಡಿಸಬೇಕೆಂಬ ಶಾಸ್ತ್ರದಂತೇ, ನಾರಾಯಣರಾವ್ ಪತಕಿಯವರು ಹೆಂಡತಿ-ಮಗುವನ್ನು ಹೈದರಾಬಾದಿನ ತನ್ನ ಮನೆಗೆ ಕರೆತಂದರು. ಕಣ್ಣಲ್ಲಿ ಕಣ್ಣಿಟ್ಟು ಮಗುವಿನ ಆರೋಗ್ಯ, ಬೆಳವಣಿಗೆ, ಆಟ-ಪಾಠಗಳ ಬಗ್ಗೆ ಎಲ್ಲತಾಯಂದಿರಂತೇ ಕಮಲಾಬಾಯಿಯವರೂ ನಡೆದುಕೊಂಡರೂ ದತ್ತನ ವರಪ್ರಸಾದದಿಂದ ಜನಿಸಿದ ಮಗುವಿನ ಮೇಲೆ ಭಕ್ತಿ ಪೂರಿತವಾಗಿ ನಡೆದುಕೊಳ್ಳುವ ಮಾತೃಪ್ರೇಮ ಅವರದಾಗಿತ್ತು. ಅಮ್ಮನಿಂದ "ರಾಜಾ" ಎಂದೇ ಕರೆಯಲ್ಪಡುತ್ತಿದ್ದ ಶ್ರೀಧರರು ಬಾಲ್ಯಸಹಜ ಚಟುವಟಿಕೆಗಳಲ್ಲಿ ತೊಡಗಿದ್ದರೂ ಮಗುವಿನಲ್ಲಿ ವಯೋಮಾನಕ್ಕೆ ಮೀರಿದ ಕೆಲವು ಬೌದ್ಧಿಕ ವೈಶಿಷ್ಟ್ಯಗಳು ಆಗಾಗ ಗೋಚರಿಸುತ್ತಿದ್ದವು.

ಅಣ್ಣ ತ್ರ್ಯಂಬಕ, ಅಕ್ಕ ಗೋದಾವರಿಗೂ ಹಾಗೂ ರೇಣುಕೆ[ನಾರಾಯಣ ರಾವ್ ಪತಕಿಯವರ ಗತಿಸಿಹೋಗಿದ್ದ ಹಿರಿಯ ಪತ್ನಿಯ ಮಗಳು]ಗೂ ’ರಾಜ’ ಕಣ್ಮಣಿಯಾಗಿದ್ದ; ಎಲ್ಲರೂ ರಾಜನನ್ನು ಎತ್ತಿ ಮುದ್ದಾಡುವವರೇ. ಆರನೇ ತಿಂಗಳಲ್ಲಿ ಅನ್ನಪ್ರಾಶನ ನಡೆದು, ವರ್ಷತುಂಬಿದಾಗ ವರ್ಧಂತಿಯೂ ನಡೆಯಿತು. ಬಂಧುಬಾಂಧವರು ಹಿರಿಯರು ಬಂದು ಆಶೀರ್ವದಿಸಿದರು. ಹೀಗಿರುತ್ತಾ ಶ್ರೀಧರನಿಗೆ ೩ನೇ ವರ್ಷ ತುಂಬುವಾಗ ತಂದೆ ನಾರಾಯಣ ರಾಯರು ಅಕಾಲಮೃತ್ಯುವಿಗೀಡಾದರು; ಗತಿಸಿದಾಗ ನಾರಾಯಣ ರಾಯರ ವಯಸ್ಸು ೫೦ ವರ್ಷ. ಪತಿಯ ಮರಣ ಕಮಲಾಬಾಯಿಯವರನ್ನು ಧೃತಿಗೆಡಿಸಿತು. ಹಿರಿಯಮಗ ತ್ರ್ಯಂಬಕನಿಗಿನ್ನೂ ೧೫-೧೬ ವಯಸ್ಸು, ಶ್ರೀಧರ ಮೂರುವರ್ಷದವ.  ೧೦ ವರ್ಷದ ಗೋದಾವರಿಗೆ ಅದಾಗಲೇ ಮದುವೆಯಾಗಿತ್ತು. ಎಳವೆಯಲ್ಲೇ ವಿದ್ಯಾಭ್ಯಾಸವನ್ನು ನಿಲ್ಲಿಸಿ ಜೀವನೋಪಾಯಕ್ಕಾಗಿ ದುಡಿದು ಸಂಸಾರ ನಿಭಾಯಿಸಬೇಕಾದ ಒತ್ತಡ ತ್ರ್ಯಂಬಕನ ಹೆಗಲಮೇಲೆ ಬಿತ್ತು. ತಾಯಿಯ ದುಗುಡ ಮತ್ತು ಕಣ್ಣೀರನ್ನು ಗಮನಿಸುತ್ತಿದ್ದ ಮುಗ್ಧ ಶ್ರೀಧರ "ಅಮ್ಮಾ ಯಾಕೆ ಅಳುತ್ತೀಯಾ? ಇಲ್ನೋಡಿಲ್ಲಿ...ಮ್ಯಾಂವ್ ಮ್ಯಾಂವ್ ...ಬೌಬೌ" ಎಂದು ಪ್ರಾಣಿಗಳ ಕೂಗನ್ನು ಅಣಕಿಸಿ ತೋರಿಸಿ ತಾಯಿಗೆ ಸಮಾಧಾನಮಾಡಲು ತೊಡಗುತ್ತಿದ್ದ. ’ರಾಜ’ನ ಬಾಲಲೀಲೆಗಳನ್ನು ನೋಡಿ ತಮ್ಮ ದುಃಖವನ್ನು ಆ ತಾಯಿ ತುಸು ಮರೆಯುತ್ತಿದ್ದರು.

ಹೀಗಿರುತ್ತಾ, ಊರಿನಲ್ಲಿ ಸಿಡುಬು ರೋಗ ಹಬ್ಬಿ ಅದು ಶ್ರೀಧರನನ್ನೂ ಸಂಪೂರ್ಣವಾಗಿ ಬಾಧಿಸಿತು. ತಾಯಿಯ ಅಕ್ಕರೆಯ ಆರೈಕೆಯಲ್ಲಿ ಅಂತೂ ಸಿಡುಬು ಗುಣವಾಯ್ತು. ಏಕಸಂಧಿಗ್ರಾಹಿಯಾದ ಶ್ರೀಧರ ತಾಯಿಯ ಜೊತೆ ಹರಿಕಥೆಗಳನ್ನು ಕೇಳಲು ಹತ್ತಿರದ ದೇವಸ್ಥಾನಗಳಿಗೆ ಹೋಗುತ್ತಿದ್ದ. ಹೈದರಾಬಾದಿನಲ್ಲಿ ಅವರು ವಾಸವಾಗಿದ್ದ ಮನೆಯ ಸಮೀಪದಲ್ಲಿ, ಸಮರ್ಥ ಪರಂಪರೆಗೆ ಸೇರ್ರಿದ ಶ್ರೀ ನಾರಾಯಣ ಮಹಾರಾಜರ ಮಠವೊಂದಿತ್ತು. ಈ ಸಂತರು ೧೨ ವರ್ಷಗಳ ಕಾಲ ಸಜ್ಜನಗಡದಲ್ಲಿ ತಪಸ್ಸುಮಾಡಿ ಶ್ರೀರಾಮನ ಸಾಕ್ಷಾತ್ಕಾರವನ್ನು ಮಾಡಿಕೊಂಡಿದ್ದರು. ಶ್ರೀಧರನ ತಂದೆಯ ಕಡೆಯ ಸಂಬಂಧದ ನಾಗೋಬರಾಯರ ಪತ್ನಿ ತ್ರಿವೇಣಿಬಾಯಿಯವರು ಈ ಸಂತ ಉಪದೇಶಾನುಗ್ರಹವನ್ನು ಪಡೆದಿದ್ದರು. ಆದ್ದರಿಂದ ಆಕೆಯೊಡನೆ ಕಮಲಾಬಾಯಿಯವರು ಶ್ರೀಧರನನ್ನು ಕರೆದುಕೊಂಡು ಮಠಕ್ಕೆ ಹೋಗಿಬರುತ್ತಿದ್ದರು. ಮಠದಲ್ಲಿ ಸಮರ್ಥರ ತೈಲಚಿತ್ರವು ಬಾಲಕನನ್ನು ಬಹುವಾಗಿ ಆಕರ್ಷಿಸಿತ್ತು; ಗಂಟೆಗಟ್ಟಲೆ ತದೇಕಚಿತ್ತದಿಂದ ಆ ಚಿತ್ರವನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದನಾ ಶ್ರೀಧರ.

ಮಠದಲ್ಲಿ ಪುರಾಣಿಕರು ರಾಮಾಯಣವನ್ನು ಹೇಳುತ್ತಿದ್ದರೆ, ಕಥಾಭಾಗವನ್ನು ಅಂದಿಗೆ ಮುಗಿಸಿ ಮುಂದಿನ ಭಾಗವನ್ನು ನಾಳೆ ಹೇಳುವೆನೆಂದರೆ ಬಿಡಲೊಲ್ಲ ಶ್ರೀಧರ. ರಾಮನಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಭಕ್ತಿಭಾವ ಶ್ರೀಧರನಿಗೆ. ದೇವಸ್ಥಾನ, ಪ್ರವಚನ, ನಾಮಸಂಕೀರ್ತನೆ, ಹರಿಕಥೆ ಇವುಗಳಲ್ಲೆಲ್ಲಾ ಬಾಲನಿಗೆ ಅತೀವ ಆಸಕ್ತಿ ಬೆಳೆಯಿತು. ಪ್ರವಚನದ ತತ್ವಗಳನ್ನು ಹೀರಿಕೊಂಡ ಶ್ರೀಧರ ಮನೆಗೆ ತೆರಳಿದ ನಂತರ ಆ ಪ್ರದೇಶದ ಮಕ್ಕಳಿಗೆ ತನ್ನ ಬಾಲಭಾಷೆಯಲ್ಲೇ ಪ್ರವಚನ ನಡೆಸುತ್ತಿದ್ದ; ’ರಾಮಲೀಲಾ’ ನಾಟಕ ನಡೆಸಿ ಅದರಲ್ಲಿ ರಾಮನ ಪಾತ್ರವನ್ನು ತಾನೇ ನಿರ್ವಹಿಸುತ್ತಿದ್ದ. "ಆಂಜನೇಯ ಚಿರಂಜೀವಿಯಂತೆ, ಆತ ಈಗ ಎಲ್ಲಿದ್ದಾನೆ? ರಾಮನಲ್ಲಿ ನಿಶ್ಚಲ ಭಕ್ತಿಯಿದ್ದರೆ ಆಂಜನೇಯನಂತೇ ನಾನೂ ಎತ್ತರಕ್ಕೆ ಜಿಗಿಯಬಹುದೇ?" ಎಂಬಿತ್ಯಾದಿ ಪ್ರಶ್ನೆಗಳನ್ನು ಅಮ್ಮನಲ್ಲಿ ಕೇಳುತ್ತಿದ್ದ.      

ಶ್ರೀಧರನ ಬಾಲ್ಯ ಮುಂದುವರಿದು ಶಾಲೆಗೆ ಸೇರಿಸಿದ್ದರು. ರಾಮನಾಮದ ಮಹಿಮೆಯನ್ನು ತಿಳಿದ ಶ್ರೀಧರ ಶ್ರೀರಾಮನಲ್ಲಿ ಅಚಲವಾದ ಶ್ರದ್ಧಾ-ಭಕ್ತಿಗಳನ್ನು ಹೊಂದಿದ್ದ. ಅಣ್ಣ ತ್ರ್ಯಂಬಕರು ಕುಲಪುರೋಹಿತರಾದ ಮಾರುತಿರಾಯರಲ್ಲಿ ವೇದಾಧ್ಯಯನ ಮಾಡಿ ಖ್ಯಾತ ಜ್ಯೋತಿಷಿಯೆನಿಸಿದ್ದರು; ನಾಲಿಗೆಯಲ್ಲಿ ಮತ್ಸ್ಯ ಚಿನ್ಹೆಯನ್ನು ಹೊಂದಿದ್ದ ಅವರು ಹೇಳಿದ್ದೆಲ್ಲಾ ನಿಜವಾಗುತ್ತಿತ್ತು. ತಮ್ಮ ಶ್ರೀಧರನಿಗೆ ೮ನೇ ವಯಸ್ಸಿನಲ್ಲಿ ಉಪನಯವನ್ನು ಅಮ್ಮನ ಅಣತಿಯಂತೇ ನೆರವೇರಿಸಿದರು ತ್ರ್ಯಂಬಕರು.  ೨೫-೨೬ ವಯಸ್ಸಿನ ತರುಣ ತ್ರ್ಯಂಬಕರು, ಪ್ಲೇಗಿನ ನಂತರ ಊರಿಗೆ ದಾಳಿಯಿಟ್ಟ ಗುದ್ದಮ್ಮನ ಬೇನೆ[ಇನ್ ಪ್ಲುಯೆಂಜಾ]ಗೆ ಬಲಿಯಾಗಿ ಹೋದರು. ಅಮ್ಮ ಮತ್ತೆ ಕಂಗಾಲಾದರು. ಇನ್ನೂ ಪ್ರಾಥಮಿಕ ೩ನೇ ತರಗತಿಯಲ್ಲಿ ಓದುತ್ತಿದ್ದ ಶ್ರೀಧರ ಸಂಸಾರದ ಭಾರವನ್ನು ಎಳೆಯಬಲ್ಲನೇ? ಪುತ್ರವಿಯೋಗದ ದುಃಖದೊಂದಿಗೆ ನಿತ್ಯದ ಅಶನಕ್ಕೂ ಪರಿತಾಪ ಪಡುವಂಥಾ ಸ್ಥಿತಿ ಕಮಲಾಬಾಯಿಯವರದ್ದಾಯ್ತು.

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರ ವಿಶೇಷತಾ |
ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಂ ||

ಪುತ್ರಶೋಕವೊಂದೆಡೆ, ಶ್ರೀಧರನ ಭವಿಷ್ಯದ ಚಿಂತೆ ಇನ್ನೊಂದೆಡೆ ಈ ಎರಡರ ನಡುವೆ ಕಮಲಾಬಾಯಿಯವರ ಮನಸ್ಸು ನುಗ್ಗಾಗಿಹೋಯ್ತು. ಮಗ ತ್ರ್ಯಂಬಕನನ್ನು ಕಳೆದುಕೊಂಡು ೬ ತಿಂಗಳೂ ಆಗಿರಲಿಲ್ಲ, ಅಷ್ಟರಲ್ಲೇ ಮಗಳ ಪತಿಯಮನೆಯಿಂದ ಮಗಳು ಗೋದಾವರಿ ಗತಿಸಿಹೋದ ಸುದ್ದಿ ಆಘಾತವನ್ನು ತಂದಿತ್ತು. ಚಿಂತೆಯಿಂದ ದಹಿಸಲ್ಪಡುತ್ತಿದ್ದ ಅಮ್ಮನ ಮನಸ್ಸನ್ನು ತನ್ನ ವಿವಿಧ ತತ್ವಬೋಧೆಗಳಿಂದ ಶ್ರೀಧರ ಸಮಾಧಾನಿಸಯತ್ನಿಸಿದರೂ ಚಿಂತೆ ಅವರನ್ನು ಪೂರ್ತಿಯಾಗಿ ಬಿಡಲೇ ಇಲ್ಲ. ಚಿಂತೆಯಿಂದ ಹುಟ್ಟಿದ ಬೇನೆಗಳು ಅವರ ಶರೀರ ಬಳಲುವಂತೇ ಮಾಡಿದವು. ಅಮ್ಮನ ಬಳಲುವಿಕೆಯನ್ನು ಕಂಡ ಶ್ರೀಧರನಿಗೆ ಇದ್ದ ಆಯ್ಕೆಗಳು ಎರಡು: ಒಂದೇ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಅಮ್ಮನ ಶುಶ್ರೂಷೆಯಲ್ಲಿ ತೊಡಗಬೇಕು ಅಥವಾ ಅಮ್ಮನನ್ನು ಬಿಟ್ಟು ಶಾಲೆಗೆ ಹೋಗಬೇಕು. ಮಾತೃಸೇವೆಗಿಂತ ಮಿಗಿಲಾದ ಕರ್ತವ್ಯ ತನಗಿಲ್ಲವೆಂದು ಬಗೆದ ಶ್ರೀಧರ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಅಮ್ಮನ ಆರೈಕೆಯಲ್ಲಿ ತೊಡಗಿಕೊಂಡ.

ಸನ್ ೧೯೨೧, ದುಂದುಭಿ ಸಂವತ್ಸರದ ಮಾರ್ಗಶೀರ್ಷ ಶುದ್ಧ ಅಷ್ಟಮಿ ಮಂಗಳವಾರ, ಮೃತ್ಯುಶಯ್ಯೆಯಲ್ಲಿರುವ ತಾಯಿಯ ತಲೆಯನ್ನು ಶ್ರೀಧರ ನೇವರಿಸುತ್ತಾ ಕುಳಿತಿದ್ದಾನೆ. ಅತನ ಪುಟ್ಟ ಕೈಗಳನ್ನು ತಮ್ಮ ಬಡಕಲು ಕೈಯ್ಯಿಂದ ಸವರಿ ಅತ್ಯಂತ ಪ್ರೇಮದಿಂದ ಎದೆಯಮೇಲಿಟ್ಟುಕೊಂಡ ಕಮಲಾಬಾಯಿಯವರು, "ರಾಜಾ! ಇನ್ನು ನಿನಗೆ ದೇವರೇ ರಕ್ಷಕ" ಎಂದು ಗದ್ಗದ ಸ್ವರದಿಂದ ಉದ್ಗರಿಸಿದರು. ಅದನ್ನು ಕೇಳಿಯೂ ಕೇಳದಂತಿದ್ದ ಶ್ರೀಧರ "ಅಮ್ಮಾ ನನ್ನಿಂದ ಯಾವ ಸೇವೆಯಾಗಬೇಕು ಹೇಳಮ್ಮಾ" ಅನ್ನುತ್ತಲೇ ಇದ್ದ. ಶ್ರೀಧರ ಯಾರೆಂಬುದನ್ನು ತನ್ನ ಅಂತರಂಗ ಅರಿತಿದೆಯೆಂಬುದರ ಕುರಿತು ಆ ತಾಯಿ ಮಾತನಾಡ ಹತ್ತಿದ್ದರು. ಶ್ವಾಸೋಚ್ವಾಸದ ಸೆಳೆತ ಜೋರಾಗಿದ್ದು ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ. ಹಾಗೆಯೇ ಸ್ವಲ್ಪ ಚೇತರಿಸಿಕೊಂಡು ಮೆಲ್ಲಗೆ, "ಶ್ರೀಧರ! ನನ್ನ ಮುದ್ದಿನ ಸಿರಿಧರ! ಮಗೂ ನೀನು ಜಗತ್ತಿನಲ್ಲಿನ ಎಲ್ಲ ಸ್ತ್ರೀಯರನ್ನೂ ನನ್ನಂತೆಯೇ ನೋಡಿ ಅವರ ಉದ್ಧಾರವನ್ನು ಮಾಡಬೇಕು. ಈ ಮುಂದೆ ನೀನು ಮಾಡುವ ಆ ಸೇವೆಯೇ ನನ್ನ ಅಖಂಡ ಸೇವೆ. ಯಾವ ಸ್ತ್ರೀಯನ್ನಾದರೂ ಸಮತ್ವದ ದೃಷ್ಟಿಯಿಂದ ನೋಡದೆ ಸ್ತ್ರೀಯೆಂಬ ಭೇದ ಕಲ್ಪನೆಯ ದೃಷ್ಟಿಯಿಂದ ನೋಡುವುದೇ ಪರಮಾರ್ಥಕ್ಕೆ ಧಕ್ಕೆ. ಶ್ರೀಧರಾ! ನಿನಗೆ ನಿರ್ಗುಣ ನಿಸ್ಪೃಹ ವೃತ್ತಿಯ ಸಮತ್ವ ಭಾವನೆಯ ಸರ್ವ ಪ್ರಕಾರವೂ ಗೊತ್ತಿರುವುದರಿಂದ ಹೆಚ್ಚು ಹೇಳುವುದೇನಿದೆ?

ನನಗೆ ಇನ್ನು ಯಾವ ಇಚ್ಛೆಯೂ ಇಲ್ಲ. ನನ್ನ ಅಂತ್ಯಕಾಲದ ಮಾತಿನಂತೆ ನಡೆದರೆ ವಂಶವು ಬೆಳೆಯುವುದು ಹೇಗೆ? ಎಂದು ಜನರು ಆಡಿಕೊಳ್ಳಬಹುದು. ಆದರೆ ಅದೆಲ್ಲವನ್ನೂ ನಾನು ಚೆನ್ನಾಗಿ ಯೋಚಿಸಿಯೇ ಹೇಳುತ್ತಿದ್ದೇನೆ. ನನ್ನ ಮುದ್ದಿನ ಕರುಳಕುಡಿಯನ್ನು ಜಗತ್ತಿನ ಉದ್ಧಾರ ಮಾಡಲೆಂದೇ ಭಾರತಾಂಬೆಯೆ ಮಡಿಲಲ್ಲಿ ಬಿಟ್ಟು ಹೋಗುತ್ತಿದ್ದೇನೆ! ನನ್ನ ಮಾತನ್ನು ನೀನು ಎಂದಿಗೂ ತೆಗೆದು ಹಾಕಿಲ್ಲ. ನಡೆಸುವೆಯೆಂಬ ದೃಢವಾದ ನಂಬಿಕೆ ನನಗಿದೆ" ಎಂದುಹೇಳಿ ಕ್ಷಣಕಾಲ ಸುಮ್ಮನಾದರು. "ಅಮ್ಮಾ ನಿನ್ನ ವಚನವನ್ನು ಪಾಲಿಸುತ್ತೇನೆ" ಎಂಬ ಶ್ರೀಧರನ ಪ್ರತಿಕ್ರಿಯೆಯನ್ನು ಕೇಳಿ ಕಮಲಾಬಾಯಿಯವರ ಮನದುಂಬಿಬಂತು. ತಡವರಿಸುತ್ತಾ, "ಶ್ರೀಧರಾ! ನನಗೆ ಯಾವ ಇಚ್ಛೆಯೂ ಉಳಿದಿಲ್ಲವಪ್ಪಾ, ನಾನು ಆನಂದಗೊಂಡಿದ್ದು ತೃಪ್ತಳಾಗಿದ್ದೇನೆ. ಅನಂತಾನಂತ ಸ್ವರೂಪದಲ್ಲಿ ಸೇರುತ್ತೇನೆ" -ಕ್ಷೀಣಸ್ವರದಲ್ಲಿ ಹೀಗೆ ಉಲಿಯುತ್ತಾ ಅನಂತದಲ್ಲಿ ಐಕ್ಯವಾದರು. ತಮ್ಮ ಬಂಧು-ಬಳಗದವರೊಡನೆ ೧೪ರ ಬಾಲಕ ಶ್ರೀಧರ ತಾಯಿಯ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನಡೆಸಿದ.

ತಾಯಿ, ತಂದೆ, ಅಕ್ಕ, ಅಣ್ಣ ಎಲ್ಲರನ್ನೂ ಕಳೆದುಕೊಂಡ ಶ್ರೀಧರ, ಚಿತ್ತಸ್ಥೈರ್ಯವನ್ನು ಕಳೆದುಕೊಳ್ಳದೇ, ದೊಡ್ಡಪ್ಪ ದೇಸಾಯರ ಸಹಕಾರದಿಂದ ಗುಲ್ಬರ್ಗಾದಲ್ಲಿ ತನ್ನ ಮಾಧ್ಯಮಿಕ ಓದಿಗಾಗಿ ಶಾಲೆಗೆ ಸೇರಿದ. ೬ನೇ ತರಗತಿಯಲ್ಲಿ ಶ್ರೀಧರನಿರುವಾಗ,  ತರಗತಿಯ ಮಕ್ಕಳಿಗೆ ಜೀವನದ ಧ್ಯೇಯಗಳನ್ನು ಬರೆಯುವಂತೇ ಶಿಕ್ಷಕರು ಸೂಚಿಸಿದರು. ಮನಸ್ಸಿನಲ್ಲಿ ಇದ್ದುದನ್ನು ಬರೆದರೆ ಉಳಿದವರ ಅಪಹಾಸ್ಯಕ್ಕೆ ಈಡಾದೇನೋ ಎಂಬ ಅಳುಕಿನಲ್ಲೇ ಶ್ರೀಧರ "To obtain complete grace of God and to serve mankind is the goal of my life" [ಪರಮಾತ್ಮನ ಸಂಪೂರ್ಣ ಕೃಪೆಯನ್ನು ಪಡೆಯುವುದು ಮತ್ತು ಜನಸೇವೆ ಮಾಡುವುದೇ ನನ್ನ ಗುರಿ] ಎಂದು ಎಂದು ಬರೆದೇಬಿಟ್ಟಿದ್ದ.  

ಶ್ರೀಧರನಿದ್ದವ ಭಗವಾನ್ ಸಮರ್ಥ ಶ್ರೀಧರಸ್ವಾಮೀ ಮಹಾರಾಜರೆನಿಸುವವರೆಗೆ ಶ್ರೀಧರರು ನಡೆದ ಹಾದಿ ಬಹಳ ದುರ್ಗಮವಾದುದು. ಅವರ ಹುಟ್ಟಿನಿಂದ ಮಾಧ್ಯಮಿಕ ಶಾಲೆಯ ವರೆಗಿನ ವಿಷಯವನ್ನು ಅತಿಸಂಕ್ಷಿಪ್ತವಾಗಿ ಹೇಳಲು ಹೊರಟ ಪ್ರಯತ್ನವೇ ಇಷ್ಟು ಉದ್ದದ ಲೇಖನಕ್ಕೆ ಕಾರಣವಾಯ್ತು. ಇಷ್ಟಿದ್ದೂ ಅವರ ಬಾಲಾಲೀಲೆಗಳನ್ನಾಗಲೀ, ಮಾಧ್ಯಮಿಕ ಶಾಲೆಯ ಮುಂದಿನ ಹಂತದ ವಿಷಯಗಳನ್ನಾಗಲೀ, ಸಾಧುಜೀವನ-ಎದುರಿಸಿದ ಪರೀಕ್ಷೆಗಳು-ಉಪವಾಸ-ಸಂನ್ಯಾಸ-ತಪಸ್ಸು-ಸಾಧನೆ-ಶಿಷ್ಯಾನುಗ್ರಹ-ಅಘಟಿತಘಟನಾ ಕೌತುಕಗಳ ಬಗ್ಗೆ ಬರೆಯುವುದು ಬಹಳ ವಿಸ್ತಾರದ ಇತಿಹಾಸದ ವಿಷಯ. [’ಸದ್ಗುರು ಭಗವಾನ್ ಶ್ರೀಶ್ರೀಧರ ಚರಿತ್ರೆ’ ಎಂಬ ಸಾಂಗ್ರಾಹ್ಯ ಗ್ರಂಥವು ವರದಹಳ್ಳಿಯ ಶ್ರೀಧರಾಶ್ರಮದಲ್ಲಿಯೂ ಮತ್ತು ಬೆಂಗಳೂರಿನ ವಸಂತಪುರದಲ್ಲಿರುವ ಶ್ರೀಧರ ಪಾದುಕಾ ಮಂದಿರದಲ್ಲಿಯೂ ಲಭ್ಯ, ಆಸಕ್ತ ಆಸ್ತಿಕ ಮಹಾಶಯರು ಅದನ್ನು ಖರೀದಿಸಿ ಓದಿಕೊಳ್ಳಬಹುದಾಗಿದೆ].ಶ್ರೀಧರರು ಪ್ರತೀ ಹಂತದಲ್ಲಿಯೂ ತಾನು ಭಗವಂತನ ಪ್ರತಿರೂಪವೆಂಬುದನ್ನು ತನ್ನ ಕೃತಿಗಳಿಂದಲೇ ಹೇಳಿದರೇ ವಿನಃ ನೇರವಾಗಿ ತನ್ನ ಬಗೆಗೆ ಹೇಳಿಕೊಳ್ಳಲಿಲ್ಲ. ಬಾಲ್ಯದ, ಪೂರ್ವಾಶ್ರಮದ ಕಷ್ಟಕೋಟಲೆಗಳು ಶ್ರೀಧರರ ವಿರಕ್ತಮಾರ್ಗಕ್ಕೆ ಸೋಪಾನವಾದವು. ತನ್ನ ವೈಯ್ಯಕ್ತಿಕ ದೇಹದ ಬಾಧೆಗಳನ್ನು ಮೀರಿ, ದೇಶದುದ್ದಗಲಕ್ಕೂ ಚಲಿಸಿ, ಬಹುಜನರ ತಾಪ-ತ್ರಯ [ಅಧಿದೈವಿಕ, ಅಧಿಭೌತಿಕ ಮತ್ತು ಆಧ್ಯಾತ್ಮಿಕ ಸಮಸ್ಯೆ]ಗಳನ್ನು ಬಗೆಹರಿಸಿದವರು.

ಸದ್ಗುರು ಭಗವಾನರು ೧೯೫೪ ರಲ್ಲಿ ಸಾಗರ ಪಟ್ಟಣದಿಂದ ೫ ಕಿ.ಮೀ. ದೂರದಲ್ಲಿರುವ ’ವದ್ದಳ್ಳಿ’ [ಒದ್ದಳ್ಳಿ]ಎಂಬ ದಂಡಕಾರಣ್ಯವನ್ನು ಏಕಾಂತಕ್ಕಾಗಿ ಆಯ್ದುಕೊಂಡರು. ಅಗಸ್ತ್ಯ ಮುನಿಗಳ ತಪೋಭೂಮಿಯಾಗಿದ್ದ ಆ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದುರ್ಗಾಂಬಾ ದೇವಸ್ಥಾನವಿದ್ದು, ರಕ್ಕಸರನ್ನು ದೇವಿ ತನ್ನ ಕಾಲಿನಿಂದ ಒದ್ದದ್ದರಿಂದ ’ವದ್ದಳ್ಳಿ’ ಎಂದು ಜನರ ಬಾಯಲ್ಲಿ ಅದು ನೆಲೆನಿಂತಿತು ಎನ್ನುತ್ತದೆ ಸ್ಥಳಪುರಾಣ. ಗುರುಗಳು ಅಲ್ಲಿಗೆ ಬಂದಾಗ, ದೇವಸ್ಥಾನದ ಮುಕ್ತದ್ವಾರದೊಳಹೊಕ್ಕು ಗರ್ಭಗುಡಿಯಲ್ಲಿ ಹೋಗಿ ಕುಳಿತುಕೊಳ್ಳುವ ಹುಲಿಗಳಿದ್ದವಂತೆ; ಆಗೀಗ ಹೆದರುತ್ತಲೇ ಬಂದು ಪೊಜೆಗೆ ಪ್ರಯತ್ನಿಸಿ ಹೋಗುತ್ತಿದ್ದ ಅರ್ಚಕರನ್ನು ಬಿಟ್ಟರೆ ಜನ ಓಡಾಡುವ ಜಾಗ ಅದಾಗಿರಲಿಲ್ಲ. ಹುಲಿಗಳನ್ನು ತಮ್ಮ ತಪೋಬಲದಿಂದ ಸ್ಥಳಾಂತರಿಸಿ ದೇವಿಯ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆಯುವಂತೇ ನೋಡಿಕೊಂಡು, ಅದೇ ದೇವಸ್ಥಾನದ ಹೊರಭಾಗದಲ್ಲಿ ಶ್ರೀಧರರು ತಮ್ಮ ವಸತಿ ಇಟ್ಟುಕೊಂಡು ಪ್ರವಚನಗಳನ್ನೂ ನಡೆಸಿದರು. ಕಾಲಾನಂತರ ಲೋಕಾಂತದಿಂದ ಏಕಾಂತಕ್ಕೆ ಭಂಗವುಂಟಾಗಬಾರದೆಂಬ ಅನಿಸಿಕೆಯಿಂದ ತಳಕುಟಿ, ಮಧ್ಯಕುಟಿ ಮತ್ತು ಶಿಖರಕುಟಿ ಎಂಬ ಮೂರು ಜಾಗಗಳಲ್ಲಿ ತಪಸ್ಸನ್ನು ನಡೆಸಿದರು. ಶಿಖರಕುಟಿಯ ಗುಹೆಯಪಕ್ಕದಲ್ಲಿ ಧರ್ಮಧ್ವಜವನ್ನು ಸ್ಥಾಪಿಸಿದರು. ರಾಮದೇವಸ್ಥಾನ, ಪುಷ್ಕರಣಿಗಳು, ವ್ಯಾಸಗುಹೆ, ಹಲವು ಯತಿಗಳ ಸಮಾಧಿಗಳು, ಆಂಜನೇಯನ ಸನ್ನಿಧಿ ಮೊದಲಾದ ವೈಶಿಷ್ಟ್ಯಗಳನ್ನು ಹೊಂದಿದ ವರದಹಳ್ಳಿ ಪ್ರಮುಖ ಧಾರ್ಮಿಕ ಕೇಂದ್ರವಾಗಲಿದೆಯೆಂದು ಗುರುಗಳು ಹೇಳಿದ್ದು, ಈಗ ಫಲಶ್ರುತಿ ಕಾಣುತ್ತಿದೆ.     

ಪರಮಾತ್ಮನ ಪೂರ್ಣ ಸಗುಣರೂಪವಾಗಿ ಪ್ರಕಟಗೊಂಡ ಶ್ರೀಧರ ಭಗವಾನರು, ಆದಿಶಂಕರರಂತೇ ಆಸೇತು ಹಿಮಾಚಲ ಹಲವು ಬಾರಿ ಯಾತ್ರೆನಡೆಸಿದರು, ದರ್ಶನಕ್ಕೆ ಬಂದ ಆರ್ತರ-ಬಡಜನರ-ರೋಗಿಷ್ಟರರೆಲ್ಲರಿಗೆ ಆಯಾಯ ಕ್ಷಣದಿಂದಲೇ ಅವರವರ ಯಾತನೆಗಳಿಂದ ಮುಕ್ತಿಯನ್ನು ಕರುಣಿಸಿದವರು. ಮೇಲ್ಕಂಡ ಅವರ ಛಾಯಾಚಿತ್ರವನ್ನು ಮೂಲಪ್ರತಿ-ದೊಡ್ಡಗಾತ್ರದಲ್ಲಿ ನೋಡಿದಾಗ ಎಡಮುಂಗುರುಳಲ್ಲಿ ಶಂಖದ ಆಕೃತಿ, ಬಲಗಿವಿಯಲ್ಲಿ ನಾರಸಿಂಹ ಮುಖದ ಆಕೃತಿ, ಬಲಗೈ ಹಸ್ತದಲ್ಲಿ ತ್ರಿಶೂಲಾಕೃತಿ ಇತ್ಯಾದಿಯಾಗಿ ಕೆಲವು ಆಕಾರಗಳು ಸ್ಪಷ್ಟವಾಗಿ ಗೋಚರಿಸುವುದನ್ನು ಕಾಣಬಹುದಾಗಿದೆ. ೫೦ ವರ್ಷಗಳ ಹಿಂದಿನ ಚಿತ್ರ  ಕೃತ್ರಿಮ ಸೃಷ್ಟಿಯಲ್ಲ, ತಿದ್ದಿದ್ದಲ್ಲ! ಪ್ರಮಾದಿ ಸಂವತ್ಸರದ ಚೈತ್ರ ವದ್ಯ ದ್ವಿತೀಯಾ ಗುರುವಾರ ದಿನಾಂಕ ೧೯-೦೪-೧೯೭೩ರಂದು ಬೆಳಗಿನ ೯ ಘಂಟೆಗೆ ತಮ್ಮ ಭೌತಿಕ ಶರೀರವನ್ನು ವಿಸರ್ಜಿಸಿದ ಸಮರ್ಥ ಶ್ರೀಧರರ ಆರಾಧನೆ [೨೭-೦೪-೨೦೧೩]ಯ ಪ್ರಯುಕ್ತ ಈ ಲೇಖನ. ಶ್ರೀಧರರು ಕನ್ನಡನಾಡಿನಲ್ಲಿ ಹುಟ್ಟಿದ್ದು ನಮ್ಮ ಅದೃಷ್ಟ, ಮೇಲಾಗಿ ಅವರ ತಪೋಭೂಮಿಯಾಗಿ ವರದಪುರವನ್ನು ಆಯ್ಕೆಮಾಡಿಕೊಂಡಿದ್ದು ಇನ್ನೊಂದು ಸೌಭಾಗ್ಯ. ಸ್ವಾನಂದಾಮೃತದಲ್ಲಿ ತೃಪ್ತರಾದ ಭಗವಾನರು ಸಕಲರ ಸರ್ವಾಭೀಷ್ಟಗಳನ್ನೂ ನೆರವೇರಿಸಲಿ ಎಂಬುದು ಈ ಸಂದರ್ಭದಲ್ಲಿ ಗುರುಗಳಲ್ಲಿ ಪ್ರಾರ್ಥಿಸಿ, ಮಾಡುವೆ ಹಾರೈಕೆಯಾಗಿದೆ.

ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ|
      ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||   

    

Sunday, April 21, 2013

ಆರಕ್ಕೇರುವ ರಭಸದಲ್ಲಿ ಆಳಕ್ಕೆ ಬೀಳಬಾರದಲ್ಲಾ

ಚಿತ್ರಋಣ : ಅಂತರ್ಜಾಲ 
ಆರಕ್ಕೇರುವ ರಭಸದಲ್ಲಿ ಆಳಕ್ಕೆ ಬೀಳಬಾರದಲ್ಲಾ
          
ಆಶಾವಾದವೇ ಮನುಷ್ಯನ ಬವಿಷ್ಯದ ಜೀವನಕ್ಕೆ ಊರುಗೋಲು. ಹಿಂದೆಂದೋ ಬೆಳೆತೆಗೆದ ಭೂಮಿಯಲ್ಲಿ, ಕಾಲಾನಂತರ ಬಿರುಬಿಸಿಲಿಗೆ ಕುದಿಕುದಿದು ಒಡೆಒಡೆದುಹೋದ ಗದ್ದೆಗಳ ನಡುವೆ ಕುಳಿತು, ಸುಕ್ಕುಗಟ್ಟಿದ ಚರ್ಮದ ಕುರುಚಲು ಗಡ್ಡದ ಮುಖವನ್ನು ಆಗಸದೆಡೆಮಾಡಿ, ಚಾಚಿದ ಹಸ್ತದ ನೆರಳಡಿಯಿಂದ ಕಣ್ಣುಗಳನ್ನು ಕೀಲಿಸುತ್ತಾ, ಬಾರದ ಮಳೆ ಬಂದೀತು ಎಂಬ ತುಂಬು ಹಂಬಲ ಹೊರುವ ರೈತ ಯಾವುದೋ ಅವ್ಯಕ್ತ ಶಕ್ತಿಯಲ್ಲಿ ಅವ್ಯಾಹತವಾಗಿ ತನ್ನ ಮೂಕಪ್ರಾರ್ಥನೆಯನ್ನು ಸಲ್ಲಿಸುತ್ತಲೇ ಇರುವುದು ಆಶಾವಾದಕ್ಕೆ ಉದಾಹರಣೆ; ಅಲ್ಲಿ ಬಯಕೆಗಳು ಸತ್ತಿಲ್ಲ, ಭಾವನೆಗಳು ಬತ್ತಿಲ್ಲ. ಆ ಭಾವನೆಗಳಿಗೆ ಕೆಲವೊಮ್ಮೆ ದೇವಕಳೆ ಬಂದೀತು; ಬಾರದ ಮಳೆ ಧಾರೆಧಾರೆಯಾಗಿ ಸುರಿದು ಜೀವಕಳೆ ತಂದೀತು; ಕಮರಿದ್ದ ಕುರುಚಲುಗಳುಗಳ ಹಳೆಬೇರುಗಳಲ್ಲಿ ನವಚೈತನ್ಯದ ಚಿಲುಮೆಯುಕ್ಕಿ ಚಿಗುರಿಕೊಂಡಾವು, ಉತ್ತು-ಬಿತ್ತು ಹಸಿರುಡುವ ಭೂಮಿಯಲ್ಲಿ ಬೆಳೆತೆಗೆದು ರೈತ ಸಮೃದ್ಧಗೊಂಡಾನು-ಸಂತೃಪ್ತಗೊಂಡಾನು. ಬಾರದ ಮಳೆ ಬರುವುದು ವಿಜ್ಞಾನದ ಚಮತ್ಕಾರಕ್ಕೆ ನಿಲುಕುವುದಿಲ್ಲ! ಮುಗ್ಧ ಭಾವನೆಗಳು ಎಲ್ಲಾ ಸಲ ಅರ್ಥಹೀನವಲ್ಲ.  

ನಗರದ ಬೀದಿಗಳಲ್ಲಿ ರಾಮನವಮಿ ಉತ್ಸವ ನಡೆಯುತ್ತದೆ. ಶ್ರೀರಾಮನಿಗೆ ಪೂಜೆ ಸಲ್ಲಿಸುವ ಭರದಲ್ಲಿ ಒಂದಷ್ಟು ಹಣ ಸಂಗ್ರಹಿಸಿ ಕೆಲವುಜನ ತೊಡಗಿಕೊಳ್ಳುತ್ತಾರೆ. ಸೌತೇಕಾಯಿ, ಕರಬೂಜ, ಬೆಲ್ಲ, ಬೇಳೆ, ಗಜ್ಜರಿ, ಉಪ್ಪು-ಲಿಂಬೆ-ಒಗ್ಗರಣೆ ಸಾಮಾನು, ಹಾರ-ಹೂವು-ಮಾವಿನೆಲೆಗಳ ತೋರಣ ಎಲ್ಲವೂ ಸಿದ್ಧಗೊಳ್ಳುತ್ತವೆ. ಅದೆಲ್ಲಿಂದಲೋ ನೀರನ್ನು ತರುತ್ತಾರೆ; ನೀರಿನ ಶುದ್ಧಾಶುದ್ಧತೆಯ ಬಗ್ಗೆ ತೀರಾ ಗಮನವಿಲ್ಲ; ಪಾತ್ರೆಗಳ ಶುಚಿತ್ವದ ಬಗ್ಗೆ ತಲೆಕೆಡಿಸಿಕೊಂಡವರಿಲ್ಲ. ಒಂದಷ್ಟು ಕೋಸಂಬರಿ ಕಲಸುತ್ತಾರೆ, ಒಂದಷ್ಟು ಪಾನಕ ಕದಡುತ್ತಾರೆ. ರಾಮನಿಗೆ ಹಣ್ಣು-ಕಾಯಿ ಇಟ್ಟು  ಸಾರ್ವಜನಿಕರಿಗೆ ಪಾನಕ-ಕೋಸಂಬರಿ ವಿತರಿಸುತ್ತಾರೆ. ಬಳಸಿದ ಪ್ಲಾಸ್ಟಿಕ್ ಡ್ರಮ್ ಗಳನ್ನು ನೋಡಿದರೆ ವಾಂತಿ ಬರುವಂತಿರುತ್ತದೆ. ಬೆವರು ಸುರಿಸುತ್ತಲೇ ಕಲಸುವ ಕೈಗಳನ್ನು ನೋಡಿದರೆ ಹೊಲಸು ಎನಿಸುತ್ತದೆ. ಬೇಡ ಎನ್ನಲಾಗದ ರಾಮಪ್ರಸಾದ; ತೆಗೆದುಕೊಂಡರೆ ಕುಟುಕುತ್ತದೆ ಒಳಗಿನ ಅಳುಕುವಾದ. ರಾಮೋತ್ಸವ ನಡೆಸುವ ಆ ಜನ ಅಲ್ಲೂ ಸಂಗ್ರಹಿಸಿದ ಹಣವನ್ನು ಉಳಿಸುತ್ತಾರೆ; "ನಾವೂ ಗಡ್ಜಾಗಿ ರಾಮೋತ್ಸವ ನಡೆಸಿದ್ದೇವೆ" ಎಂಬ ಆ ಜನ ಉಳಿದ ಹಣದಲ್ಲಿ ಎಣ್ಣೆ ಕುಡಿಯುತ್ತಾರೆ. ಪಾನಕ ಕುಡಿದ ಪಾಪದ ಮಗು ಸಾಯುತ್ತದೆ, ಎಣ್ಣೆಕುಡಿದ ’ದೊಡ್ಡಮಗು’ ಏನೂ ಗೊತ್ತಿಲ್ಲದವರಂತೇ ನಗುತ್ತದೆ. ಇದು ರಾಮನ ಹೆಸರಿಗೆ ಬಳಿಯುವ ಮಸಿಯೇ ಹೊರತು ರಾಮಸೇವೆಯಲ್ಲ. ರಾಮನಮೇಲಿರುವ ಭಕ್ತಿಭಾವಕ್ಕಿಂತಾ ರಾಮನ ನೆಪದಲ್ಲಿ ಕುಡಿತಕ್ಕೊಂದಷ್ಟು ಹಣ ಕಲೆಹಾಕುವುದು ಕೆಲವರ ಉದ್ದೇಶ. ಈ ಉದ್ದೇಶ ಊರಹಬ್ಬ, ಅಣ್ಣಮ್ಮದೇವಿಯ ಉತ್ಸವ, ಕನ್ನಡ ರಾಜ್ಯೋತ್ಸವ, ಗಣೇಶೋತ್ಸವ ಮೊದಲಾದ ಸಂದರ್ಭಗಳಲ್ಲೂ ಇರುತ್ತದೆ!  

ನಗರಗಳಲ್ಲಿ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಮಾಡಿಸಿಕೊಡುವವರ ಸಂಖ್ಯೆ ಹೆಚ್ಚಾಗಿದೆ. ಸುದ್ದಿಮಾಧ್ಯಮ ಮತ್ತು ಜಾಹೀರಾತು ವ್ಯವಹಾರದಲ್ಲಿ ತೊಡಗಿಕೊಂಡ ನಮಗೊಬ್ಬ ಒಮ್ಮೆ ದೂರವಾಣಿ ಕರೆಮಾಡಿದ್ದ. ಅಲ್ಲಿಗೆ ನಮ್ಮವರು ಹೋದಾಗ ತಿಳಿದದ್ದು: ಆತ ನಿತ್ಯವೂ ದಿನಪತ್ರಿಕೆಗಳಲ್ಲಿ ಕೆಲವು ಜಾಹೀರಾತುಗಳನ್ನು ಕೊಡುತ್ತಿದ್ದ. ಅವು ಪಾಸ್ ಪೋರ್ಟ್ ಮಾಡಿಸಿಕೊಳ್ಳುವ ವ್ಯಕ್ತಿಗಳ ವಿಳಾಸಗಳ ಬಗ್ಗೆಯೋ ಹೆಸರುಗಳ ಬಗ್ಗೆಯೋ ಇರುತ್ತಿದ್ದವು. ಹೆಚ್ಚಿನ ಪೂರ್ವಾಪರಗಳನ್ನು ಅರಿಯದೇ ಕೇವಲ ಹಣಕ್ಕಾಗಿ ಪಾಸ್ ಪೋರ್ಟ್ ಮಾಡಿಸಿಕೊಡುವುದು ಆತನ ಕೆಲಸ. ನೇರವಾಗಿ ಪಾಸ್ ಪೋರ್ಟ್ ಕಚೇರಿಗೆ ಹೋದರೆ ಸಮಯ ವ್ಯಯವಾದೀತು ಎಂದುಕೊಳ್ಳುವ ಜನರೊಟ್ಟಿಗೆ, ದುರುದ್ದೇಶಗಳಿಂದ ಬೇನಾಮಿ ವಿಳಾಸ-ಮಾಹಿತಿಗಳನ್ನು ನೀಡಿ ಪಾಸ್ ಪೋರ್ಟ್ ಮಾಡಿಸಿಕೊಳ್ಳುವ ಜನರೂ ಇರುತ್ತಾರೆ. ಅಂಥಾ ಜನ ದೇಶದ್ರೋಹದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇತ್ತೀಚೆಗೆ ತಿಳಿದುಬಂದಿದ್ದು ರಾಜಕಾರಣಿಗಳಲ್ಲಿ ಹಲವರು ನಾಲ್ಕೈದು ಪಾನ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಹೆಸರಿನಲ್ಲಿ ಸ್ವಲ್ಪ ಬದಲಾವಣೆಯಾದರೂ ಪಾನ್ ಕಾರ್ಡ್ ಬದಲಾಗುತ್ತದೆ; ಆದರೆ ಏಕವ್ಯಕ್ತಿ ಅನೇಕ ಪಾನ್ ಕಾರ್ಡ್ ಪಡೆಯುವುದು ಅಪರಾಧ ಎನ್ನುತ್ತದೆ ಕಾನೂನು.

ನಮ್ಮಲ್ಲಿ ಕಾನೂನು ಪಾಲಕರಾಗಬೇಕಾಗಿದ್ದ ರಾಜಕಾರಣಿಗಳೇ ಕಾನೂನು ಭಂಜಕರಾಗುತ್ತಾರೆ; ಮಿಕ್ಕುಳಿದವರು ಅವರನ್ನು ಅನುಸರಿಸುತ್ತಾರೆ. ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಕಾಳಸಂತೆ ರಾಜಾರೋಷವಾಗೇ ನಡೆಯುತ್ತಿದೆ. ದಿಢೀರ್ ಹಣಗಳಿಸುವ ಇಚ್ಛೆಯಿಂದ ಹಲವು ದಂಧೆಗಳು ಸಮಾಜದಲ್ಲಿ ನಡೆಯುತ್ತವೆ. ಅವುಗಳಲ್ಲಿ ಎಥಿಕ್ಸ್ ಇರುವುದಿಲ್ಲ, ಸಾಮಾಜಿಕ ಕಳಕಳಿಯಾಗಲೀ ಹಿತಾಸಕ್ತಿಯಾಗಲೀ ಇರುವುದಿಲ್ಲ. ನಮಗೆ ಇನ್ನೊಮ್ಮೆ ಮಸಾಜ್ ಪಾರ್ಲರ್ ಒಂದರಿಂದ ಜಾಹೀರಾತು ಪ್ರಕಟಿಸುವ ಸಲುವಾಗಿ ಕರೆಬಂದಿತ್ತು. ಕರಾಳ ದಂಧೆ ನಡೆಸುವವರು ನೇರವಾಗಿ ಯಾವುದನ್ನೂ ಹೇಳುವುದಿಲ್ಲ; ಹಾಗಂತ ಅವರಿಗೆ ಅಬ್ಬರದ ಪ್ರಚಾರ ಮತ್ತು ಅಗಣಿತ ಐಶ್ವರ್ಯದ ಹೆಬ್ಬಯಕೆ; ರಾತ್ರಿ-ಬೆಳಗಾಗುವುದರೊಳಗೆ ಅಚಾನಕ್ಕಾಗಿ ಸಿರಿವಂತರಾಗಿ ಮೆರೆಯುವ ಕನಸು. ಹೇಗಾದರೂ ಒಮ್ಮೆ ಕೋಟ್ಯಧಿಕ ಕಾಸನ್ನು ಕಲೆಹಾಕಿಬಿಟ್ಟರೆ ಆಮೇಲೆ ರಾಜಕಾರಣಕ್ಕೋ ಮತ್ತೊಂದಕ್ಕೋ ಜಿಗಿದು ಏನಾದರೂ ಮಾಡೋಣ ಎಂಬ ಇರಾದೆ ಕೂಡ. ಅದಕ್ಕೆ ಪೂರಕವಾಗಿ, ಇಂದಿನ ನಮ್ಮ ರಾಜಕಾರಣದಲ್ಲಿ ಕಾನೂನು ಉಲ್ಲಂಘಿಸಿ ಕರಾಳ ದಂಧೆಯನ್ನು ನಡೆಸಿದವರು ಅಥವಾ ಹಲವು ಕೊಲೆ-ಸುಲಿಗೆ ಮೊದಲಾದ  ಗುನ್ನೆಗಳಲ್ಲಿ ಪರೋಕ್ಷವಾಗಿ ಭಾಗಿಯಾದವರು ಬಹಳಮಂದಿ ಇದ್ದಾರೆ. ಕಾನೂನು ಸಾರುತ್ತದೆ: ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಅಪರಾಧಿಯೋ ಆಪಾದಿತನೋ ಕಳಂಕಿತನೋ ಆಗಿರಬಾರದು ಎಂದು. ಹಾಗೊಮ್ಮೆ ನೋಡಿದರೆ ಇಂದು ಟಿಕೆಟ್ ಪಡೆದ ಬಹಳ ಅಬ್ಯರ್ಥಿಗಳ ಕರಾಳಮುಖಗಳು ಗೋವಿನರೂಪವನ್ನು ಹೊತ್ತು ಚುನಾವಣೆಗೆ ಇಳಿದಿವೆ ಎನ್ನಬಹುದು; ಎಲ್ಲವೂ ಒಳಗಿನ ಡೀಲ್ ಗಳಲ್ಲೇ ಮುಗಿದು ಮುಚ್ಚಲ್ಪಡುತ್ತಿವೆ!      

ಹೆಚ್ಚಿನ ಮಸಾಜ್ ಪಾರ್ಲರ್ ಗಳಲ್ಲಿ ಏನು ನಡೆಯುತ್ತದೆ ಎಂಬುದನ್ನು ನೀವೂ ಬಲ್ಲಿರಿ. ಮಸಾಜ್ ಥೆರಪಿ ಆಯುರ್ವೇದದ ಒಂದು ಭಾಗವೇನೋ ಹೌದು. ಆದರೆ ಆಯುರ್ವೇದ ಅದನ್ನು ಮಾಂಸದ ಅಡ್ಡೆಗಳನ್ನಾಗಿ ಮಾಡಿಕೊಳ್ಳಲು ಹೇಳಿಲ್ಲ. ಅನೇಕ ಮಸಾಜ್ ಪಾರ್ಲರ್ ಗಳು ಮುಂದೆ ತೋರಿಸುವುದು ಒಂದು, ಹಿಂದೆ ನಡೆಸುವುದು ಇನ್ನೊಂದು. ಅಲ್ಲಿರುವ ಬೆಲೆವೆಣ್ಣುಗಳಿಗೂ ಹಣ ಜಾಸ್ತಿ ಬೇಕು. ನಡೆಸುವ ಮಾಲೀಕರಿಗಂತೂ ಹಣ ಎಷ್ಟಿದ್ದರೂ ಬೇಕು-ಹೇಗಾದರೂ ಬರಬೇಕು. ಆಯುರ್ವೇದದ ಪಂಚಕರ್ಮ ಚಿಕಿತ್ಸೆಯ ಭಾಗವಾದ ಮಸಾಜ್ ಥೆರಪಿ, ಹಲವು ವಿಕೃತ ಜನರಿಗೆ ಹೊಸದೊಂದು ದಂಧೆ ಸೃಷ್ಟಿಸಿಕೊಳ್ಳಲು ಅವಕಾಶ ನೀಡಿಬಿಟ್ಟಿತು. ಇಂದು ಅಂತಹ ಜನ ನಡೆಸುವ ಮಸಾಜ್ ಪಾರ್ಲರ್ ಗಳು ಆಯುರ್ವೇದದ ಹೆಸರಿಗೆ ಮಸಿಬಳಿಯುತ್ತಿವೆ. ನಿಜವಾದ ಆಯುರ್ವೇದದ ಪಂಚಕರ್ಮ ಚಿಕಿತ್ಸಾ ಮಳಿಗೆಗಳಿಗೂ ಮರ್ಯಾದಸ್ತರು ಹೋಗಲು ಅಂಜುತ್ತಾರೆ. 

ನಿತ್ಯಾನಂದ, ಕಾಳಿಸ್ವಾಮಿಗಳಂತಹ ಕಳ್ಳರನೇಕರು ಕಾವಿ ಧರಿಸಿ ಸನಾತನ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ. ಟಿವಿ ಸೀರಿಯಲ್ಲುಗಳು ಕುಟುಂಬ ಒಡೆಯುವ ಯೋಜನೆಗಳನ್ನೂ ಹೊಸತೆರನಾದ ಪಾತಕಗಳನ್ನು ನಡೆಸುವುದನ್ನೂ ದೃಶ್ಯರೂಪಕವಾಗಿ ತೋರಿಸುತ್ತಿವೆ; ಟಿವಿಗಳವರು ಅಪರಾಧಗಳನ್ನು ವೈಭವೀಕರಿಸಿ ತೋರಿಸಿ ’ಸಮಾಜೋದ್ಧಾರ’ಕ್ಕೆ ಹೊರಟಿದ್ದಾರೆ! ಜೀವಿಸಿರುವ ಗೋವಿನಂತಹ ಪ್ರಾಣಿಗಳ ಮೇಲೆ ಕಿಂಚಿತ್ತೂ ದಯೆಯಿರದ ಜನ, ಹದ್ದು-ಮಂಗ-ಬೆಕ್ಕು ಮೊದಲಾದ ಸತ್ತ ಪ್ರಾಣಿಗಳನ್ನು ಅಂತ್ಯಸಂಸ್ಕಾರಗೊಳಿಸುತ್ತಿದ್ದೇವೆ ಎಂದು ತೋರಿಸುವ ಮೂಲಕ ಟಿವಿಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಚಿಟ್ ಫಂಡ್ ಗಳಲ್ಲಿ, ಸಹಕಾರೀ ಬ್ಯಾಂಕುಗಳಲ್ಲಿ ಹಣದ ದುರ್ಬಳಕೆ ಕನ್ನಡಿಯ ಚಿತ್ರದಂತೇ ಕಾಣುತ್ತದೆ. ಒಂದೇ ನಿವೇಶನವನ್ನು ಹತ್ತುಮಂದಿಗೆ ಮಾರುವವರೂ ಹಲವು ವೇಷಗಳನ್ನು ಧರಿಸಿ ಸಜ್ಜನರಿಗೆ ನಾಮ ತೀಡುವವರೂ ಜಾಸ್ತಿಯಾಗಿದ್ದಾರೆ. ಎಲ್ಲೆಲ್ಲೂ ರಾಜಕೀಯದ ಅರಾಜಕತೆಯೇ ಕಾಣುತ್ತದೆ, ಭ್ರಷ್ಟರಲ್ಲದ ರಾಜಕಾರಣಿಗಳು ಸಿಗುವುದೇ ದುರ್ಲಭ. ಬಡತನವೆಂದು ಭಾಷಣ ಬಿಗಿಯುವ ಪುಢಾರಿಗಳು ಹಣ-ಹೆಂಡಗಳನ್ನು ನೀರಿನಂತೇ ವ್ಯಯಿಸುವುದನ್ನು ಕಂಡಾಗ ಅಂಬೇಡ್ಕರ್ ರಂತಹ ಉನ್ನತಮನಸ್ಕರು ಅಳುತ್ತಾರೆ. ಪ್ರಜಾಸತ್ತೆಯ ಕಥೆಯನ್ನು ಯಾರೋ ಹೇಳಿದಂತಾಗಿ ’ಹೀಗೂ ಉಂಟೇ?’ ಎನಿಸುತ್ತದೆ.  

ಆಹಾರವನ್ನು ವ್ಯಾಪಾರೀಕರಣಗೊಳಿಸಬಾರದು, ಅನ್ನ ದಾನದ ರೂಪದಲ್ಲಿ ಹಸಿದ ಹೊಟ್ಟೆಗಳನ್ನು ತಣಿಸಬೇಕು ಎಂದು ಸನಾತನ ಧರ್ಮದ ನೆಲೆಗಟ್ಟು ಹೇಳುತ್ತದೆ. ಅನ್ನವನ್ನು[ತಿಂದುಂಬ ಪದಾರ್ಥಗಳನ್ನು] ಮಾತ್ರ ವಿಕ್ರಯಿಸಬಾರದು ಎಂಬುದು ಅದರ ಅರ್ಥ. ಇಂದು ನಗರಗಳಲ್ಲಿ ಅಸಂಖ್ಯ ಫಾಸ್ಟ್ ಫುಡ್ ಜಾಯಿಂಟ್ ಗಳು ಅನ್ನವನ್ನು ವಿಕ್ರಯಿಸುತ್ತಿವೆ. ಅವುಗಳಲ್ಲಿ ಕೆಲಸಮಾಡುವ ಅಡಿಗೆಯವರು, ಅಡಿಗೆಯ ಪರಿಕರಗಳು, ಅಡಿಗೆಗೆ ಬಳಸುವ ತೈಲಪದಾರ್ಥಗಳು ಮತ್ತು ಕಚ್ಚಾ ಆಹಾರ ಸಾಮಗ್ರಿಗಳು, ಅಡಿಗೆಯ ಕೋಣೆ ಇವುಗಳನ್ನೆಲ್ಲಾ ನೋಡಿಬಿಟ್ಟರೆ, ಶುಚಿತ್ವ ಬಯಸುವವರು ಅಲ್ಲಿ ಆಹಾರವನ್ನು ಸ್ವೀಕರಿಸುವುದಿಲ್ಲ. ಬದುಕುವುದಕ್ಕಾಗಿ ಮಾತ್ರ ತಿನ್ನುವ ಜನ [ತಿನ್ನುವುದಕ್ಕಾಗಿಯೇ ಬದುಕುವವರಲ್ಲದ ಜನ] ಶುಚಿತ್ವಕ್ಕೆ ಬಹಳ ಮೌಲ್ಯ ಕೊಡುತ್ತಾರೆ. ಅಡಿಗೆ ತಯಾರಿಸುವ ಜನರಲ್ಲಿ ದುಡ್ಡಿಗಾಗಿ ಕೆಲಸಮಾಡುವ ಭಾವನೆಯಿದೆ, ತಯಾರಿಸಿದ ಅಡಿಗೆ-ಖಾದ್ಯಗಳನ್ನು ಮಾರಿ ಹಣಗಳಿಸಿಕೊಳ್ಳುವ ಭಾವನೆ ಮಾಲೀಕರಲ್ಲಿದೆ. ಹಣವನ್ನುಳಿದು ಬಾಕಿ ಭಾವನೆಗಳಿಗೆ ಬೆಲೆಯಿಲ್ಲದ ಆ ಜಾಗಗಳಲ್ಲಿ ಸಾರ್ವಜನಿಕರ ಹಿತಾಸಕ್ತಿ ಎಷ್ಟರಮಟ್ಟಿಗೆ ಬರಲು ಸಾಧ್ಯ?  

ರಸ್ತೆಬದಿಯಲ್ಲಿ ಮಾರುವ ಆಹಾರ ಪದಾರ್ಥಗಳ ತಯಾರಿಕೆಯ ಹಿನ್ನೆಲೆಯನ್ನಂತೂ ನೋಡಿದರೆ, ಗಿರಾಕಿಗಳಿಗೆ ದೇವರೇ ಗತಿ!! ಮುಂಬೈಯಲ್ಲಿ ನಡೆದ ಪಾನಿಪೂರಿಯ ವ್ಯಾಪಾರಿಯ ’ಉಚ್ಚಾಶಕ್ತಿ’ಯನ್ನು ಅನೇಕರು ಮಾಧ್ಯಮಗಳಲ್ಲಿ, ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ಗಮನಿಸಿದ್ದೀರಿ. ಬೀದಿಬದಿಯ ವ್ಯಾಪಾರಿಗಳಿಗೆ ಮನೆಯೆಂಬ ಜಾಗದಲ್ಲಿ ಯಾವುದೇ ಸೌಕರ್ಯಗಳಿರುವುದು ಕಮ್ಮಿ, ಇದ್ದರೂ ಅವರ ವ್ಯಾಪಾರೀ ಜೀವನಕ್ಕೆ ಅದನ್ನವರು ಬಳಸುವುದು ಕಮ್ಮಿ. ಅಂಥಾ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ಕೆಲಸ ಕಲ್ಪಿಸಿಕೊಡಬೇಕೇ ವಿನಃ ಅದಕ್ಕೆ ಪ್ರೋತ್ಸಾಹ ನೀಡುವುದು ತರವಲ್ಲ. ಸಂಬಂಧ ಪಟ್ಟ ಕಾರ್ಪೋರೇಟರ್ ಗಳು ಅದನ್ನು ಗಮನಿಸುವುದಿಲ್ಲ ಯಾಕೆಂದರೆ ಅವರಿಗೆ ಬೀದಿ ವ್ಯಾಪಾರಿಗಳಿಂದ, ತಳ್ಳುಗಾಡಿಗಳಿಂದ ಹಫ್ತಾ ಸಿಗುತ್ತದೆ. ಪೋಲೀಸರು ಪ್ರತೀ ಗಾಡಿಯಿಂದ ನಿತ್ಯವೂ ಹತ್ತಿಪ್ಪತ್ತು ರೂಪಾಯಿ ಕಿತ್ತುಕೊಂಡು ಆಶೀರ್ವದಿಸುತ್ತಾರೆ. ಈ ಆಟಗಳನ್ನು ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಮಲ್ಲೇಶ್ವರಂ ಮೊದಲಾದ ಕಡೆಗಳಲ್ಲಿ ನಾವು ಕಾಣಬಹುದಾಗಿದೆ.  

ಯಾವುದೋ ನೀರು ಯಾವುದೋ ಸಾರು
ಬಾಯಿಬಿಡಬೇಡ ಸಿಕ್ಕಿದ್ದು ಮಾರು

ಕಲಬೆರಕೆ ಎಣ್ಣೆ ಕ್ರತ್ರಿಮದ ಬೆಣ್ಣೆ
ಸತ್ತಪ್ರಾಣಿಗಳ ಕರುಳಡಿಯ ಗೊಣ್ಣೆ

ಯಾವುದೋ ಹಿಟ್ಟು ಒಂದಷ್ಟು ತಟ್ಟು
ಬಣ್ಣಗಳ ಜುಟ್ಟು ಆಕಾರ ಕೊಟ್ಟು 

ಕಾವಲಿಗೆ ಬಿಟ್ಟು ಕರಿದೆತ್ತಿ ಒಟ್ಟು
ಗಿರಾಕಿಗಳಿಗಿಟ್ಟು ಕೋಡ್ಬಳೆ ನಿಪ್ಪಟ್ಟು

ಬರುತಾರೆ ಸಾರು ಇಳಿತಾರೆ ತೇರು !
ತಿರುತಿರುಗಿ ಜೋರು ಬಿಸಿಯೆನುತ ಮಾರು 

ಧಾವಂತದ ಜೀವನ ಶೈಲಿಯಲ್ಲಿ ಮನೆಯಲ್ಲಿ ಸಿದ್ಧಪಡಿಸಿಕೊಳ್ಳಲಾಗದ ಅನಾನುಕೂಲತೆ ಕೆಲವರದಾದರೆ ರುಚಿಗಾಗಿ ಹಪಹಪಿಸಿ ಜೊಲ್ಲಿಳಿಸುವ ಪರಿ ಹಲವರದು. ಕೆಟ್ಟರೆ ಹೇಗೂ ಆಸ್ಪತ್ರೆಯಿದೆ! ಆಸ್ಪತ್ರೆಯಲ್ಲಿ ಮಲಗಿಕೊಳ್ಳಲು ಸಮಯವಿರುವಷ್ಟು ಮನೆಯಲ್ಲಿ ಅಡುಗೆಮಾಡಿಕೊಳ್ಳಲು ಇಲ್ಲ ಇಂದಿನ ಜನರಿಗೆ.

ಮನೆಯಲ್ಲಿ ತಯಾರಿಸುವ ಅಡುಗೆಗಳೇ ಮಲಿನಗೊಂಡಾವು ಎಂಬ ಕಾರಣಕ್ಕೆ ಹಲವು ಸರ್ತಿ ಅದನ್ನು ಮಡಿಯಲ್ಲೇ ತಯಾರಿಸಿ ಎಂದರು ಪೂರ್ವಜರು. ಸ್ನಾನಮಾಡಿ, ತೊಳೆದೊಣಗಿಸಿದ ಸ್ವಚ್ಛಬಟ್ಟೆಯುಟ್ಟು, ಕೈಗಳನ್ನು ಮತ್ತೆ ತೊಳೆದುಕೊಂಡು ಶುದ್ಧಗೊಳಿಸಿದ ಪಾತ್ರೆಗಳಲ್ಲಿ, ಶುದ್ಧವಾದ ಪ್ರದೇಶದಲ್ಲಿ, ಶುದ್ಧವಾದ ಪರಿಕರಗಳು-ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಆಹಾರ ಮಾತ್ರ ದೇವರಿಗೆ ಸಮರ್ಪಿಸಲು ಯೋಗ್ಯ ಎಂದುಬಿಟ್ಟರು! ಆದರ ಹಿಂದೆ ಇರುವ ವಿಜ್ಞಾನವನ್ನು ನಾವು ಗಮನಿಸಬೇಕು.

ಆಹಾರವಸ್ತುಗಳನ್ನು ಹೈಜೀನಿಕ್ ಆಗಿ ತಯಾರಿಸುತ್ತೇವೆ ಎಂಬ ಸೋಗಲಾಡಿತನದಲ್ಲಿ ಒಂದಕ್ಕೆ ಮೂರರಿಂದ ಹತ್ತುಪಟ್ಟು ಹೆಚ್ಚಿಗೆ ಹಣಪಡೆಯುವ ಜನ, ವೈದ್ಯಕೀಯದಿಂದ ಜನಸೇವೆಯ ಬದಲಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಪರೋಕ್ಷ ಸುಲಿಗೆ ನಡೆಸುವ ಜನ, ವಿದ್ಯೆಕಲಿಸುವ ನೆಪದಲ್ಲಿ ಅಲ್ಲಿಯೂ ಪರೋಕ್ಷ ಸುಲಿಗೆಗಿಳಿಯುವ ಜನ ಇವರೆಲ್ಲಾ ಇದ್ದಾಗ  ಅಲ್ಲೆಲ್ಲಾ ಢಾಳಾಗಿ ಕಾಣುವುದು ಆರಕ್ಕೇರುವ ಬಯಕೆಯೊಂದೇ.    

ದೈವ ಸೃಷ್ಟಿಯ ವೈಚಿತ್ರವನ್ನು ನೋಡಿ: ನದಿಗಳು ಹರಿಯುತ್ತವೆ-ಪರೋಪಕಾರಾರ್ಥವಾಗಿ, ಮರಗಿಡಗಳು ನೆರಳು-ಹಣ್ಣು ನೀಡುತ್ತವೆ-ಪರೋಪಕಾರ್ಥವಾಗಿ, ಕಾಮಧೇನುಗಳು ಹಾಲನ್ನು ಕೊಡುತ್ತವೆ-ಪರೋಪಕಾರಾರ್ಥವಾಗಿ, ಸೂರ್ಯ ಬೆಳಕು ಚೆಲ್ಲುತ್ತಾನೆ-ಪರೋಪಕಾರಾರ್ಥವಾಗಿ, ಭೂಮಿತಾಯಿ ಹಲವು ವಿಧದ ಸಸ್ಯೋತ್ಫನ್ನಗಳನ್ನು ನೀಡುತ್ತಾಳೆ-ಪರೋಪಕಾರಾರ್ಥವಾಗಿ..ಇಷ್ಟೆಲ್ಲಾ ಪರೋಪಕಾರಗಳನ್ನು ನಾವು ಗಮನಿಸಿಯೂ ಸ್ವಾರ್ಥಿಗಳಾಗಿದ್ದೇವೆ; ಪರರಿಗೆ ಪರೋಕ್ಷ ಹಿಂಸೆ ನೀಡುತ್ತಿದ್ದೇವೆ. ಮಾಡುವ ಕೆಲಸಗಳಲ್ಲಿ ಶ್ರದ್ಧೆಯಿರುವುದಿಲ್ಲ; ಕೆಲಸ ಮಾಡದೆಯೂ ಹಣದ ಥೈಲಿ ನಮ್ಮದಾಗಬೇಕೆಂಬ ಆಸೆ ಮಾತ್ರ ತಪ್ಪುವುದಿಲ್ಲ. ಪೂರ್ವಜರಲ್ಲಿ ಸ್ವಹಿತಾಸಕ್ತಿಗಿಂತ ಹೆಚ್ಚು ಪರಹಿತಾಸಕ್ತಿ ನೆಲೆಸಿತ್ತು. ಮಾಡುವ ಕೆಲಸಗಳನ್ನು ಪ್ರಾಮಾಣಿಕವಾಗಿ, ಪರಿಶುದ್ಧವಾಗಿ, ಭಾವನಾಪೂರ್ವಕವಾಗಿ ಮಾಡುತ್ತಿದ್ದರು. ಇಂದಿನ ಸಾಮಾಜದ ನಮ್ಮಲ್ಲಿ ಇರುವ ಭಾವನೆಗಳಿಗೂ ಪೂರ್ವಜರಲ್ಲಿ ಇದ್ದ ಸಮಾಜಿಕ ಭಾವನೆಗಳಿಗೂ ಅಜ-ಗಜಾಂತರವಿದೆ. ಹೇಗಾದರೂ ಮಾಡಿ ಆರಕ್ಕೇರುವ ನಮ್ಮ ಅಭಿಲಾಷೆಯ ಈಡೇರುವಿಕೆಗಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸಲೂ ನಾವು ಹೆದರುವುದಿಲ್ಲ, ಹಿಂದೆಬೀಳುವುದಿಲ್ಲ.

ಎಳವೆಯಲ್ಲಿ ನಾವೆಲ್ಲಾ ನಮ್ಮ ಶಾಲೆಯಲ್ಲಿ ಹಾಡಿಕೊಂಡು ಪ್ರಾರ್ಥಿಸುತ್ತಿದ್ದ ಹಾಡಿನ ಭಾಗ ಹೀಗಿದೆ :

ದೇವದೇವನೆ ಹಸ್ತಪಾದಗಳಿಂದಲೂ ಮನದಿಂದಲೂ
ನಾವುಮಾಡಿದ ಪಾಪವೆಲ್ಲವ ಹೋಗಲಾಡಿಸು ದೇವನೆ

ಕಾಯಾ, ವಾಚಾ, ಮನಸಾ [ತ್ರಿಕರಣಗಳಿಂದ] ಗೊತ್ತಿರದೇ ಮಾಡಿರಬಹುದಾದ ಪಾಪಗಳನ್ನು ದೇವರೆಂಬ ಶಕ್ತಿ ಪರಿಹರಿಸುತ್ತದೆ. ಗೊತ್ತಿದ್ದೂ ಮಾಡುವ ಪಾಪವನ್ನು ಹೋಗಲಾಡಿಸುವುದು ದೈವದ ನಿಯಮವಲ್ಲ, ನೀತಿಯಲ್ಲ. ನದಿಗಳನ್ನು ಮಲಿನಮಾಡುವುದು, ಸಾರ್ವಜನಿಕರಿಗೆ ಕಲಬೆರಕೆ ಆಹಾರಗಳನ್ನು ಪೊರೈಸುವುದು, ವಾಸಿಸುವ ದೇಶಕ್ಕೆ ದ್ರೋಹವೆಸಗುವಂಥಾ ಕೆಲಸಗಳನ್ನು ಪರೋಕ್ಷವಾಗಿ ಮಾಡಿಕೊಡುವುದು, ದಿಢೀರ್ ಶ್ರೀಮಂತಿಕೆಯ ಅಪೇಕ್ಷೆಯಲ್ಲಿ ಕರಾಳ ದಂಧೆಗಳನ್ನು ನಡೆಸುವುದು...ಇಲ್ಲೆಲ್ಲೂ ಉನ್ನತ ಭಾವನೆಗಳಿಲ್ಲ, ಸಾಮಾಜಿಕ ಕಳಕಳಿಯಿಲ್ಲ.

ಮೇಟಿವಿದ್ಯೆಯೇ ಭಾರತದ ಬೆನ್ನೆಲುಬು. ಕೋಟಿಗಟ್ಟಲೆ ಕೈಗಾರಿಕೆಗಳು ಮುಗಿಲೆತ್ತರಕ್ಕೆ ಬೆಳೆದರೂ, ವಿಜ್ಞಾನ ಎಷ್ಟೇ ಮುಂದುವರಿದರೂ ಹೊಟ್ಟೆಗೆ ತಿನ್ನುವುದು ಅನ್ನದಾತ ಬೆಳೆದ ಅನ್ನವನ್ನೇ. ನೀರಿಲ್ಲದಿದ್ದರೆ ಬೆಳೆಯಿರುವುದಿಲ್ಲ, ಬೆಳೆಯಿಲ್ಲದಿದ್ದರೆ ರೈತಜನರಿಲ್ಲ, ರೈತಜನರಿಲ್ಲದಿದ್ದರೆ ಅನ್ನವಿಲ್ಲ, ಅನ್ನವಿಲ್ಲದಿದ್ದರೆ ಜನಜೀವನ ಹೇಗೆ ನಡೆದೀತು?  ಬಾರದ ಮಳೆ ಬರಬೇಕಿದ್ದರೆ ಸಮಾಜದಲ್ಲಿ ನೈತಿಕತೆ ಹೆಚ್ಚಬೇಕು, ಪ್ರಕೃತಿಯಮೇಲಿನ ದೌರ್ಜನ್ಯ ಕಡಿಮೆಯಾಗಬೇಕು, ತಾನು-ತನ್ನವರು ಭಾವನೆಗಿಂತ ಎಲ್ಲರೂ ತಮ್ಮವರೇ ಎಂಬಂಥಾ ಭಾವನೆ ಬೆಳೆಯಬೇಕು. ಮಾಡುವ ಕರ್ತವ್ಯಕ್ಕೆ ಉತ್ತಮ ಮಾರ್ಗಗಳನ್ನೇ  ಆಯ್ದುಕೊಳ್ಳಬೇಕು. ಮಾಡುವ ಕೆಲಸಗಳಲ್ಲಿ ಅತ್ಯಂತ ಸ್ವಚ್ಛತೆ, ಶ್ರದ್ಧೆ ಮತ್ತು ಸಮರ್ಪಣಾ ಭಾವ ಬೇಕು. ಮಾಡುವ ಕೆಲಸ ದೇವರಸೇವೆ ಎಂಬಂತೆಯೇ ನಡೆಯಬೇಕು. ಕಣ್ಣೀರಿನ ಬದಲಿಗೆ ರೈತರ ಮೊಗದಲ್ಲಿ ನಗುವನ್ನು ಕಾಣಬೇಕು; ನವಯುವಕರು ಬೇಸರದಿಂದ ಮೇಟಿವಿದ್ಯೆಯನ್ನು ತೊರೆದು, ಕೆಲಸ ಅರಸುತ್ತಾ, ದೇಶಾಂತರ ಅಲೆದಾಡುವ ಪ್ರಮೇಯ ನಿಲ್ಲಬೇಕು.    

ಸ್ವಾತಂತ್ರ್ಯ ಪೂರ್ವದಲ್ಲಿ, ಗೋಪಾಲಕೃಷ್ಣ ಗೋಖಲೆಯವರು ಸಾರ್ವಜನಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಸಂಸ್ಥೆಗಳನ್ನು ಕಟ್ಟಿದ್ದರು. ಅದಕ್ಕೆ ದುಡಿಯುವ ಕೈಗಳಿಗೆ ಅವರ ಕುಟುಂಬ ನಿರ್ವಹಣೆಗೆ ತೊಂದರೆಯಾಗದಂತೇ ಗೋಖಲೆಯವರೇ ನೋಡಿಕೊಂಡರು. ಬ್ರಿಟಿಷರೇ ನಿಬ್ಬೆರಗಾಗಿ ಇಂತಹ ಸಮಾಜಸೇವೆಯನ್ನು ಎಲ್ಲೂ ಕಂಡಿಲ್ಲವೆಂದರು. ಗೋಖಲೆಯವರನ್ನು ಅಪಾರವಾಗಿ ಮೆಚ್ಚಿದ್ದ ಸಂತ ಡಿವಿಜಿಯವರು ಸ್ಥಾಪಿಸಿದ ’ಗೋಖಲೆ ಸಾರ್ವಜನಿಕ ಸಂಸ್ಥೆ’ಗೆ ಅಧ್ಯಕ್ಷರಿಲ್ಲ, ಅದನ್ನು ಕಾರ್ಯದರ್ಶಿಗಳೇ ನಡೆಸುತ್ತಾರೆ. "ಅಧ್ಯಕ್ಷರು ಯಾರು?" ಎಂದು ಕೇಳಿದರೆ "ಶ್ರೀರಾಮನೇ ಅಧ್ಯಕ್ಷ" ಎಂಬುತ್ತರ ಬರುತ್ತದೆ. ಹುಟ್ಟಿದಾರಭ್ಯ ಆ ಸಂಸ್ಥೆ ನಡೆಸಿದ ಸಮಾಜ ಸೇವೆ ಗಣನೀಯ. ಅಲ್ಲಿ ವ್ಯಯಿಸುವ ಪೈಸೆಪೈಸೆಯೂ ಸಾರ್ವಜನಿಕರಿಗೆ ತಲುಪುತ್ತದೆ. ಇಂತಹ ವಿಶ್ವತೋಮುಖ ಭಾವ ನಮ್ಮೆಲ್ಲರಲ್ಲಿ ಮೂಡಿದರೆ ನಮ್ಮ ಸ್ಥಿತಿ ಸಹಜವಾಗಿ ಆರಕ್ಕೇರೀತು. ನೀತಿ-ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಸ್ವೇಚ್ಛಾಚಾರಿಗಳಾಗಿ ಅಡ್ಡಮಾರ್ಗಗಳಿಂದ ಹಣಗಳಿಸಿದರೆ ಒಂದಿಲ್ಲೊಂದು ದಿನ ಆಳಕ್ಕೆ ಬೀಳಬೇಕಾದೀತು; ಸುನಾಮಿ, ಭೂಕಂಪ, ಕ್ಷಾಮ, ಅತಿವೃಷ್ಟಿ, ಜ್ವಾಲಾಮುಖಿ ಯಾವುದೋ ಘಟಿಸಿ, ಅನ್ಯಾಯದ ಸಂಪತ್ತನ್ನು ಅಳಿಸಿಹಾಕೀತು. ಅದು ಪ್ರಕೃತಿ ಧರ್ಮ. ರಕ್ಕಸ ಮನಸ್ಸಿನ ಮನುಷ್ಯರಿಗೆ ತಕ್ಕ ಪಾಠ ಕಲಿಸುವುದು ದೈವಕರ್ಮ.