ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 10, 2013

ನೋ ಕಿಂಗ್ ಮೇಕರ್ ಓನ್ಲೀ ’ಕ್ವೀನ್’ ಮೇಕರ್ !!

 ಚಿತ್ರ ಋಣ:ಅಂತರ್ಜಾಲ 
ನೋ ಕಿಂಗ್ ಮೇಕರ್ ಓನ್ಲೀ , ’ಕ್ವೀನ್’ ಮೇಕರ್ !!

ಹದಿನೈದು ವರ್ಷಗಳ ಹಿಂದಿನ ಜಾಯಮಾನದ ಜಗತ್ತು ಇಂದಿನದಲ್ಲ; ತಂತ್ರಜ್ಞಾನದಲ್ಲಿ ಮನೋವೇಗ ಹುಟ್ಟಿ, ನಿನ್ನೆಯದೇ ಬಹಳ ಹಳತಾಗಿಬಿಡುವಷ್ಟು ತ್ವರಿತಗತಿಯ ಕಾಲಮಾನವಿದು. ಅಪ್ಪ-ಅಮ್ಮ ಮಕ್ಕಳಿಗೆ ಹೇಳಿಕೊಡುವ ಕಾಲ ಹಿಂದಿನದಾಗಿದ್ದರೆ, ಬಾಲ್ಯವನ್ನು ಕಳೆದು ಮಿಕ್ಕ ಜೀವನದಲ್ಲಿ ಅಪ್ಪ-ಅಮ್ಮ ಮಕ್ಕಳಿಂದಲೇ ಅರಿಯಬೇಕಾದ ಹಲವು ವಿಷಯಗಳು ಕಾಣಿಸುತ್ತಿವೆ. ಅದೊಂದು ಕಾಲಕ್ಕೆ ಚುನಾವಣೆಯ ನೀತಿ ಸಂಹಿತೆಗಳ ಮಹತ್ವ ಪ್ರಜೆಗಳಿಗೆ ಗೊತ್ತೇ ಇರಲಿಲ್ಲ; ಚುನಾವಣೆಯ ದಿನದ ಬೆಳಗಿನವರೆಗೂ ಅಭ್ಯರ್ಥಿಗಳ ಅಬ್ಬರದ ಪ್ರಚಾರ ನಡೆಯುತ್ತಿತ್ತು. ಹಳ್ಳಿಹಳ್ಳಿಗಳ ಮೂಲೆಯಲ್ಲೂ ಚುನಾವಣೆಗಳ ಮುದ್ರಿತ ವಾಲ್ ಪೋಸ್ಟರುಗಳು, ಪೇಂಟ್ ಮಾಡಿ ಹಾಳುಗರೆದ ಗೋಡೆಗಳು. [ಈಚೆಗೆ ಬಂದಿದ್ದು ಪ್ಲಾಸ್ಟಿಕ್ ಪತಾಕೆಗಳು, ಪ್ಲೆಕ್ಸ್ ಕಟೌಟು-ಬ್ಯಾನರುಗಳು.]  ಚುನಾವಣೆ ಮುಗಿದಾನಂತರ ವಾರಗಳ ಕಾಲ ಮತಪೆಟ್ಟಿಗೆಗಳ ಸಾಗಾಣಿಕೆ. ಅಲ್ಲಿ ಮುದ್ರಿತ ಮತಪತ್ರಗಳನ್ನು ತೆಗೆದು ಎಣಿಸುವಿಕೆ, ಅವುಗಳನ್ನು ಆಕಾಶವಾಣಿಯ ಮುಖಾಂತರ ಅರ್ಧರ್ಧ ಗಂಟೆಗೊಮ್ಮೆ ಬಿತ್ತರಿಸುವ ಕ್ರಮ..ಇವೆಲ್ಲಾ ಇದ್ದವಷ್ಟೇ? ಈಗ ವಿದ್ಯುನ್ಮಾನದ ಮತಯಂತ್ರ! ’ಪೀಂಕ್’ ಅನ್ನಿಸಿಬಿಟ್ಟರೆ ಮುಗಿಯಿತು; ಲೆಕ್ಕಾಚಾರವೂ ಬಹಳ ಸುಲಭ. ಅರ್ಧದಿನದಲ್ಲಿ ಎಲ್ಲಾ ಸ್ಪರ್ಧಿಗಳ ಹಣೆಬರಹ ಪ್ರಕವಾಗಿಬಿಡುತ್ತದೆ.

ಹೇಗೆ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದವೋ, ಹೇಗೆ ಕಟ್ಟಡ ನಿರ್ಮಾಣದಲ್ಲಿ ಹೊಸ ಹೊಸ ವಿಧಾನ-ವೈಖರಿ-ಮಾರ್ಪಾಡು-ವಿನ್ಯಾಸಗಳು ಕಂಡವೋ, ಹೇಗೆ ನವನವೀನ ಮಾದರಿಯ ಮೂಲವಸ್ತುವಿನ ಬಟ್ಟೆಗಳು ಸಿದ್ಧಗೊಂಡವೋ ಹಾಗೆಯೇ ಮನುಷ್ಯ ಜನಾಂಗದ ಈ ತಲೆಮಾರುಗಳಲ್ಲಿನ ಬುದ್ಧಿಮಟ್ಟದ ಅಂತರ ಬಹಳವಾಗಿದೆ. ಯಾವ ಅಪ್ಪನೂ ತನ್ನ ಮಗ ತನ್ನಂತೆಯೇ ಆಗಲಿ ಎಂದು ಬಯಸುವುದಿಲ್ಲ, ಮಕ್ಕಳು ತಮಗಿಂತಾ ಹೆಚ್ಚಿನ ಮಟ್ಟವನ್ನು ಸಾಧಿಸಲಿ ಎಂಬುದೇ ಎಲ್ಲಾ ಪಾಲಕರ ಸಹಜ ಅನಿಸಿಕೆ. ಅಂದೆಂದೋ ಅಂದಕಾಲತ್ತಿಲ್ ಹೆಂಡಕುಡಿಸಿದರೆ-ಹಣ ಕೊಟ್ಟರೆ ಮತಹಾಕುತ್ತಿದ್ದ ಆ ಅಪ್ಪ-ಅಮ್ಮಗಳು ಇಂದಿಲ್ಲವೇ ಇಲ್ಲ. ನಾನಾ ಪಕ್ಷಗಳ ಹುರಿಯಾಳುಗಳು ಚುನಾವಣಾ ಸಮಯದಲ್ಲಿ ತಮಗೆ ಕೊಡುವುದು ಅವರ ರಾಜಕೀಯ ಜೀವನದಲ್ಲಿ ಅವರಿಗೆ  ಹುರಿಗಡಲೆ ಇದ್ದಂತೆಯೇ ಎಂಬುದನ್ನು ಜನ ಅರಿತಿದ್ದಾರೆ. ಗೆದ್ದಮೇಲೆ ಹಸಿರುತೋಟವನ್ನು ಹೊಕ್ಕು ಮೇಯಬಲ್ಲ ಬಸವ, ಆ ಖಯಾಲಿಯಲ್ಲಿ ಒಂದಷ್ಟು ಖರ್ಚುಮಾಡಿದ್ದನ್ನು ಆಮೇಲೆ ಮತ್ತೆ ಪರೋಕ್ಷ ಪ್ರಜೆಗಳಿಂದಲೇ ವಸೂಲುಮಾಡುತ್ತದೆ ಎಂಬುದನ್ನು ಅರ್ಥೈಸಿಕೊಳ್ಳದಷ್ಟು ದಡ್ಡರಲ್ಲ ಇವತ್ತಿನ ನಮ್ಮ ಸಮಾಜದ ಜನ. 

ಒಂದು ಮಾತನ್ನು ಕೇಳಿ: ಪ್ರಬುದ್ಧರಾದವರಿಗೆ ಜಾತಿ-ಮತವೆಲ್ಲ ಬರುವುದು ಒಂದು ಹಂತದವರೆಗೆ ಮಾತ್ರ.
ಸಾಮಾಜಿಕ ಜೀವನದಲ್ಲಿ ಅವುಗಳನ್ನೇ ಹಿಡಿದುಕೊಂಡು ಮೆರೆಯಲು ಹೊರಟರೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ರಾಜಕೀಯದಲ್ಲಿರುವವರಿಗೆ ಸಮಷ್ಟಿಪ್ರಜ್ಞೆ ಬೇಕು. ತಾನು ತನ್ನ ಜಾತಿ ಬಲದಿಂದಲೇ ಗೆಲ್ಲುತ್ತೇನೆ ಎಂದುಕೊಳ್ಳುವುದು ದುರಹಂಕಾರವಾಗುತ್ತದೆ; ಹಾಗಾದರೆ ಜಾತಿಯನ್ನು ಬಿಟ್ಟು ಬೇರೇ ಜಾತಿಗಳವರು ನಿಮಗೆ ಬೇಡವೇ? ಅಥವಾ ಜಾತಿಯನ್ನೇ ನೆಚ್ಚಿಕೊಂಡರೆ, ಗೆದ್ದಮೇಲೂ ನೀವು ನಿಮ್ಮ ಜಾತಿಯವರಿಗಾಗಿ ಮಾತ್ರ ಬೇಕಾದ ಕೆಲಸಗಳನ್ನು ಮಾಡಿಕೊಡುವುದಿಲ್ಲ ಎಂಬುದು ಯಾವ ಗ್ಯಾರಂಟ್ರ್ಇ? ರಾಮಕೃಷ್ಣ ಹೆಗಡೆಯವರು ಪ್ರತಿನಿಧಿಸಿದ್ದು ಸಮಾಜದ ಅತಿಚಿಕ್ಕದೆನಿಸಿದ ಬ್ರಾಹ್ಮಣ ಸಮುದಾಯ; ಆದರೆ ಅವರು ಜಾತಿ ಬಲದಿಂದ ಗೆದ್ದಿರಲಿಲ್ಲ ಅಥವಾ ಬ್ರಾಹ್ಮಣರಿಗಾಗಿ ಯಾವುದೇ ಕೆಲಸ-ಕಾರ್ಯಗಳನ್ನು ಪ್ರತ್ಯೇಕವಾಗಿ ಮಾಡಿಕೊಡಲಿಲ್ಲ; ಜಾತೀವಾದ ತೆಗೆದುಕೊಂಡು ಹೋದರೆ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಅನುಭವಿಕರು ಹೇಳಿದ್ದಾರೆ. ಹಾಗಂತ ಬಂಗಾರಪ್ಪನವರೇ ಬ್ರಾಹ್ಮಣರಿಗೆ ಕೆಲಮಟ್ಟಿಗೆ ಉಪಕಾರ ಮಾಡಿದ್ದರು! ಅದೂ ಕೂಡ ಓಲೈಕೆಯಲ್ಲ, ಮಾಡಬೇಕು ಅನ್ನಿಸಿ ಮಾಡಿದ್ದು ಎಂದು ಕೆಲವರು ಹೇಳುತ್ತಾರೆ.  

ಸದ್ಯ ಶಾಸಕರಾಗಲಿರುವ ವೈ.ಎಸ್.ವಿ ದತ್ತಾರವರು ಹೇಳಿದಹಾಗೇ ಜನ ಜಾತಿ, ಮತ, ಹೆಂಡ-ಹಣ, ತೋಳ್ಬಲ ಇವನ್ನೆಲ್ಲಾ ನೋಡುವುದು ಕೆಲವು ಸೀಮಿತ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ; ಅಲ್ಲಿ ಮಾತ್ರ ಬುದ್ಧಿ ಇನ್ನೂ ಅನಾದಿಕಾಲದಲ್ಲೇ ಇದೆ. ತಿಪ್ಪರಲಾಗ ಹಾಕಿದರೂ ದತ್ತಾ ಅವರು ಜಾತಿ ಬಲದಿಂದ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ, ಹಾಗಾದರೆ ಅವರಿಗೆ ಯಾರು ಮತಗಳನ್ನು ಕೊಟ್ಟರು? ಶ್ರೀಸಾಮಾನ್ಯನ ಜೊತೆಗೆ ರೈಲಿನಲ್ಲಿ, ಬಸ್ಸಿನಲ್ಲಿ ಓಡಾಡುವ ದತ್ತರ ಜೊತೆ ಹತ್ತುವರ್ಷಗಳ ಹಿಂದೊಮ್ಮೆ ಕಡೂರಿನಿಂದ ರೈಲಿನಲ್ಲಿ ಪ್ರಯಾಣಿಸಿದ್ದೆ. ನನಗವರ ಪರಿಚಯ ಇರಲಿಲ್ಲ, ಅವರಿಗೆ ನನ್ನ ಪರಿಚಯ ಇರುವುದಂತೂ ದೂರದ ಮಾತು. ಒಂದಷ್ಟು ಜನ ಅವರೊಡನೆ ಪ್ರೀತಿಯಿಂದ, ಸಲುಗೆಯಿಂದ ಮಾತನಾಡುತ್ತಿದ್ದರು. ಅವರ ಜೊತೆ ಹೆಂಡತಿ-ಮಕ್ಕಳು-ಒಬ್ಬ ಅಜ್ಜಿ [ಅವರ ತಾಯಿಯೇ ಇರಬೇಕು] ಇವರೆಲ್ಲಾ ಇದ್ದರು. ಕಾರಿನಲ್ಲಿ ಬೆಂಗಳೂರಿಗೆ ಹಾಯಾಗಿ ಬರುವುದನ್ನು ಬಿಟ್ಟು ಎಲ್ಲರಂತೇ ರೈಲನ್ನೇರಿದ ಅವರು ರಾಜಕೀಯದ ವ್ಯಕ್ತಿ ಎಂಬುದು ಟಿವಿಯಲ್ಲಿ ಕಂಡಾಗಲೇ ಗೊತ್ತಾಗಿದ್ದು. ಊರಿನಲ್ಲಿ ಊರಿನ ಮಗನಾಗಿ ಬೆರೆಯುವ ವ್ಯಕ್ತಿಯನ್ನು ಜನ ಒಪ್ಪದೇ ಹೋದಾರೇ? ಆ ಜನಪ್ರಿಯತೆಯ ಫಲ ಅವರಿಗೀಗ ದಕ್ಕಿದೆ; ಉಳಿಸಿಕೊಳ್ಳುವ ಜವಾಬ್ದಾರಿ ಇದೆ-ಉಳಿಸಿಕೊಳ್ಳಬಹುದೆಂಬ ನಿರೀಕ್ಷಣೆ ಕೂಡ ಇದೆ.

[ಪಕ್ಷಗಳ ಯಜಮಾನರ ಜಾತಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡು] ಜಾತೀ ಪ್ರಾಬಲ್ಯವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಲಿಂಗಾಯತರು ಜಾಸ್ತಿ ಇರುವೆಡೆಗಳಲ್ಲೆಲ್ಲಾ ಕೆ.ಜೆ.ಪಿಯೇ ಬರಬೇಕಾಗಿತ್ತು, ಒಕ್ಕಲಿಗರು ಜಾಸ್ತಿ ಇರುವ ಕಡೆಗಳಲ್ಲೆಲ್ಲಾ ಜೆ.ಡಿ.ಎಸ್ಸೇ ಬರಬೇಕಾಗಿತ್ತು. ಇನ್ನು ಮಿಕ್ಕುಳಿದ ಪಕ್ಷಗಳಲ್ಲಿ ಅಲ್ಲಲ್ಲಿಯ ಸ್ಥಾನಿಕ ಅಭ್ಯರ್ಥಿಗಳ ಜಾತಿಗಳನ್ನಾಧರಿಸಿ ಆಯ್ಕೆ ನಡೆಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ ಎಂದಾಗ ಪ್ರಜೆಗಳ ನಿರೀಕ್ಷೆ ಇನ್ನೇನೋ ಇದೆ ಎಂಬುದು ವ್ಯಕ್ತ; ಅಂದರೆ ಪ್ರಜೆಗಳು ಜಾತೀವಾದಿಗಳಾಗಿ ಮತ ಹಾಕುವುದಿಲ್ಲ, ಅವರಿಗೆ ಉತ್ತಮ ಸರಕಾರ ಮತ್ತು ಉತ್ತಮ ಆಡಳಿತದ ಅಪೇಕ್ಷೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಕಾಂಗ್ರೆಸ್ಸು ಉತ್ತಮ ಆಡಳಿತ ನೀಡುವ ಪಕ್ಷ ಎಂದು ಅವರು ಮತಹಾಕಿದರೇ? ದೇವರಾಣೆಗೂ ಇಲ್ಲ! ನೀರೇ ಇಲ್ಲದ ಪ್ರದೇಶದಲ್ಲಿ ರಾಡಿ ನೀರನ್ನೂ ಜನ ಸಹಿಸಿ ಸ್ವೀಕರಿಸುತ್ತಾರೆ ಹೇಗೋ ಅಧಿಕಾರದಲ್ಲಿದ್ದ ಭ್ರಷ್ಟರಿಂದ ಬೇಸತ್ತ ಜನತೆ ಅನಿವಾರ್ಯವಾಗಿ ಒಪ್ಪಿಕೊಂಡ ಪಕ್ಷ ಕಾಂಗ್ರೆಸ್ಸೇ ಹೊರತು ಕಾಂಗ್ರೆಸ್ಸೆಂಬುದು ಆಯ್ಕೆಯ ಪಕ್ಷವಲ್ಲ!! 

ಸ್ವಾತಂತ್ರ್ಯಾನಂತರ ಐದು ದಶಕಗಳಕಾಲ ಚೆನ್ನಾಗಿ ಮೆದ್ದ ಆ ಜನ ಅಧಿಕಾರದಲ್ಲಿದ್ದಾಗ, ಆರ್.ಟಿ.ಐ ಎಂದರೇನೆಂದೇ ಪ್ರಜೆಗಳಿಗೆ ಗೊತ್ತಿರಲಿಲ್ಲ. ಕಳೆದ ಸರ್ತಿ ಬಿಜೆಪಿ ಅಧಿಕಾರಕ್ಕೆ ಬಂದ ಸಮಯದಲ್ಲೇ ಅದು ಅಂಗೀಕೃತವಾಗಿದ್ದು, ಹಗ್ಗಕಡಿಯುವ ಹನುಮಂತಣ್ಣಗಳಿಗೆ ತೊಂದರೆಯಾಯ್ತು! ಮಗ್ಗುಲಲ್ಲಿ ನಿಂತು ಬಸಿದುಕೊಳ್ಳುವ ಕುಮಾರಣ್ಣನಂಥವರಿಗೆ ಆಟವಾಡುವುದಕ್ಕೆ ಆಸ್ಕರವಾಯ್ತು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಗೆದ್ದ ಬಿಜೆಪಿಯನ್ನು ಅಧಿಕಾರ ಲಾಲಸೆಯಿಂದ ಪೀಡಿಸಿದ ಕುಮಾರಸ್ವಾಮಿಯ ಸರ್ಕಸ್ ಕಂಪನಿಯನ್ನು ಜನತೆ ಮರೆಯುವುದಿಲ್ಲ. ಯಾರೋ ಒಂದಷ್ಟು ಜನ ಈ ಸರ್ತಿ ಮುಖಬಿಡೆಯಕ್ಕೆ ಬಸಿರಾಗಿ ಮತಚಲಾಯಿಸಿದ್ದರೂ, ಕುರುಡು ಅಭಿಮಾನದಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆಮಾಡಿದ್ದರೂ ಜನತೆಗೆ ’ಕುಮಾರ ಲೀಲೆಗಳು’ ಅರ್ಥವಾಗಿಬಿಟ್ಟಿವೆ! ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂಬ ತಂತ್ರವನ್ನು ಜನ ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ.

ಜೆಡಿಎಸ್ ಅಧಿಕಾರದಲ್ಲಿದ್ದಾಗ ಭೂಕಬಳಿಕೆ ಆಗಲಿಲ್ಲವೇ? ಅನಧಿಕೃತ ಗಣಿಗಾರಿಕೆ ನಡೆದಿಲ್ಲವೇ? ಇನ್ನೂ ಅಸಂಖ್ಯ ಲಾಬಿಗಳು ನಡೆದಿವೆ. ಆದರೆ ಅವು ಕಡತಗಳಲ್ಲಿದ್ದು ಈಗ ಅಲ್ಲಲ್ಲೇ ಹೆಗ್ಗಣಬಿಲಗಳಲ್ಲಿ ಏನೂ ಸಿಗದಂತೇ ಅಪ್ಡೆಟ್ ಆಗಿಬಿಟ್ಟಿವೆ ಯಾಕೆಂದರೆ ಯಾವುದೂ ಆನ್ ಲೈನ್ ನಲ್ಲಿ ಸಿಗುತ್ತಿರಲಿಲ್ಲ!! ಆನ್ ಲೈನ್ ಮಾಹಿತಿಗಳನ್ನು ಕಲೆಹಾಕಲು ದೊಡ್ಡದೊಂದು ಟೀಮ್ ಬಿಟ್ಟು ಅದನ್ನು ಸಮರ್ಪಕವಾಗಿ ದುರುಪಯೋಗ ಮಾಡಿಕೊಂಡು ಸರ್ಕಸ್ಸು ಆರಂಭಿಸಿದ್ದು ಕುಮಾರಸ್ವಾಮಿ!! ನಂತರ ನಡೆದ ಕುದುರೆವ್ಯಾಪಾರ, ’ಆಪರೇಶನ್ ಕಮಲ’ ಎಲ್ಲಕ್ಕೂ ಮೂಲಕಾರಣ ಕುಮಾರಣ್ಣ ಎಂಬುದನ್ನು ಜನ ಅಷ್ಟುಬೇಗ ಹೇಗೆ ಮರೆತಾರು? ಕಂಡರಾಗದಿದ್ದ ಬಿಜೆಪಿ ಜನರೊಟ್ಟಿಗೆ ಸಮ್ಮಿಶ್ರ ಸರಕಾರ ಆರಂಭಿಸಲು ಮೊದಲಿಟ್ಟ ಕುಮಾರಣ್ಣನ ಸರ್ಕಸ್ ಕಂಪನಿಯ ನಾಟಕಗಳಿಗೆ, ಹಿನ್ನೆಲೆಯಲ್ಲಿ ಟವೆಲ್ ಮುಚ್ಚಿಕೊಂಡು ಭಾಗವತಿಕೆ ಮಾಡಿದ್ದ ಅನುಭವಿಯೊಬ್ಬರು ತನಗೆ ಏನೂ ಗೊತ್ತಿಲ್ಲವೆಂಬಂತೇ ನಾಟಕವಾಡಿದ್ದೂ ಕೂಡ ಜನರಿಗೆ ತಿಳಿದೇ ಇದೆ. ಅಧಿಕಾರದಲ್ಲಿದ್ದಾಗ ಕಣ್ಣೊರೆಸುವ ತಂತ್ರ ಹೆಣೆದು ಕೆಲವೆಡೆ ’ಗ್ರಾಮವಾಸ್ತವ್ಯ’ ಆರಂಭಿಸಿದ್ದ ಕುಮಾರ, ಬಡವರ ಆ ಮನೆಗಳಿಗೆ ಹೋಗುವಾಗ, ತಿಂಗಳುಗಳಕಾಲ ಮೊದಲೇ ಅನುಯಾಯಿಗಳು ಸಕಲ ಸೌಲತ್ತುಗಳನ್ನೂ ಕಲ್ಪಿಸುತ್ತಿದ್ದು, ವಾಸ್ತವ್ಯದ ಮರುದಿನ ಜಾತ್ರೆಮುಗಿದ ಜಾಗದಂತೇ ಅಲ್ಲಿ ಹಾಕಲಾಗುತ್ತಿದ್ದ ಫ್ಯಾನು, ಕಾಟು ವಗೈರೆ ಎಲ್ಲವನ್ನೂ ಹೊತ್ತೊಯ್ಯುತ್ತಿದ್ದರು! ತಮ್ಮ ಪಾಡಿಗೆ ತಾವಿದ್ದ ಬಡಜನರಿಗೆ ಇದೊಂದು ಹೊಸ ಉಪದ್ವ್ಯಾಪ ಕಾಡುತ್ತಿತ್ತೇ ಹೊರತು ಉಪಕಾರವೇನೂ ಆಗಲಿಲ್ಲ.

ಆರಾರು ತಿಂಗಳಿಗೆ ಅದರ ವಿರುದ್ಧ ಇದರ ವಿರುದ್ಧ ಅಂತ ಪಾದಯಾತ್ರೆ ಹೊರಡುತ್ತಿದ್ದ ಕಾಂಗ್ರೆಸ್ಸಿಗರದು ಇನ್ನೊಂದು ತೆರನಾದ ಡೊಂಬರಾಟ. ಹಾದಿಯುದ್ದಕ್ಕೂ ಡ್ರೈ ಫ್ರೂಟ್ಸ್ ಕೋಸಂಬರಿ ಮೆಲ್ಲುತ್ತಾ ಮಜವಾಗಿ ಕಾಲಹರಣಮಾಡಿದ ಅವರಿಗೆ ಅದೊಂದು ಸುಲಭದ ಅಸ್ತ್ರವಾಗಿ ಮಾರ್ಪಟ್ಟಿತ್ತು. ರಾಜ್ಯದಲ್ಲಿ ಹಿಂದೆ ಕಾಂಗ್ರೆಸ್ಸೇ ಅಧಿಕಾರದಲ್ಲಿರುವಾಗ ಮಾಡಿದ ತಪ್ಪುಗಳಿಗೆ, ಈಗಲೂ ಕೇಂದ್ರದಲ್ಲಿ ಅವರು ನಡೆಸುತ್ತಿರುವ ಲಾಬಿಗಳಿಗೆ ಅವರಲ್ಲಿ ಉತ್ತರವಿಲ್ಲ. ಗುಡ್ಡದಮೇಲಿನ ದನವನ್ನು ಗೋದಾನಮಾಡುವ ಹಾಗೇ ಎದುರಿಗೆ ಕಾಣುವ ಆಡಳಿತಾರೂಢ ಪಕ್ಷಗಳ ತಪ್ಪುಗಳನ್ನು ಮಾತ್ರ, ತಾವೇನೋ ಮಹಾಸಂಭಾವಿತರು ಎನ್ನುವ ಹಾಗೇ ಜನತೆಗೆ ಅವರು ಓರಿಸುತ್ತಲೇ ಇದ್ದರು. ಐದು ದಶಕಗಳಲ್ಲಿ ಕಾಂಗ್ರೆಸ್ಸು ಸಾಧಿಸಿದ್ದೇನು ಎಂದರೆ ರಾಜಕೀಯ ಕ್ರಿಯಾಶಕ್ತಿಗೆ ಅದು ಏನೇನೂ ಅಲ್ಲ. ಯಾವ ರಾಜ್ಯ, ಯಾವ ದೇಶ ಈ ದಿನಗಳಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಮುಂದುವರಿದ ಸ್ವಾವಲಂಬೀ ದೇಶ ಎನಿಸಬಹುದಿತ್ತೋ ಅದನ್ನು ಅಸಾಧ್ಯವೆಂದು ಸಾಧಿಸಿದ್ದೇ ಕಾಂಗ್ರೆಸ್ಸಿಗರ ಮಹಾಸಾಧನೆ!!!  ಇನ್ನುಳಿದಂತೇ ಮಿತ್ರ ಪ್ರಭಾಕರ ನಾಯಕ್ ಅವರು ಒದಗಿಸಿದ ಕಾಂಗ್ರೆಸ್ಸಿನ ಸಾಧನೆಗಳು ಇಂತಿವೆ:
 
2013 - VVIP Chopper Scam
2012 - Coal Mining scandal - INR 1,070,000 crore
2012 - Karnataka Wakf Board Land scam – INR 200,000 crore
2012 - Andhra Pradesh land scandal – INR 100,000 crore
2012 - Service Tax and Central Excise Duty scam - INR 19,159 crore
2012 - Gujarat PSU financial irregularities - INR 17,000 crore
2012 - Maharashtra stamp duty scandal – INR 640 crore
2012 - Ministry of External Affairs gift scandal
2012 - Himachal Pradesh pulse scandal
2012 - Flying Club fraud - INR 190 crore
2012 - Jammu and Kashmir PHE scandal
2012 - Jammu and Kashmir recruitment scandal
2012 - Jammu and Kashmir examgate
2012 - Jammu and Kashmir Cricket Association scandal - Approximately INR 50 crore
2012 - Andhra Pradesh liquor scandal
2011 - UP NRHM scandal - INR 10,000 crore
2011 - ISRO's S-band scam
2011 - KG Basin Oil scam
2011 - Goa mining scam
2011 - Bellary mining scam
2011 - Bruhat Bengaluru Mahanagara Palike scam - INR 3,207 crore
2011 - Himachal Pradesh HIMUDA housing scam
2011 - Pune housing scam
2011 - Pune land scam
2011 - Orissa pulse scam - INR 700 crore
2011 - Kerala investment scam - INR 1,000 crore
2011 - Maharashtra education scam – INR 1,000 crore
2011 - Mumbai Sales Tax fraud - INR 1,000 crore
2011 - Uttar Pradesh TET scam
2011 - Uttar Pradesh MGNREGA scam
2011 - Orissa MGNREGA scam
2011 - Indian Air Force land scam
2011 - Tatra scam - INR 750 crore
2011 - Bihar Solar lamp scam - INR 40 crore
2011 - BL Kashyap - EPFO scam - INR 169 crore
2011 - Stamp Paper scam - INR 2.34 crore
2010 - 2G spectrum scam and Radia tapes controversy
2010 - Adarsh Housing Society scam
2010 - Commonwealth Games scam
2010 - Uttar Pradesh food grain scam
2010 - LIC housing loan scam
2010 - Belekeri port scam
2010 - Andhra Pradesh Emmar scam – INR 2,500 crore
2010 - Madhya Pradesh MGNREGA scam – INR 9 crore
2010 - Jharkhand MGNREGA scam
2010 - Indian Premier League scandal
2010 - Karnataka housing board scam
2009 - Madhu Koda mining scam
2009 - Goa's Special Economic Zone (SEZ) scam
2009 - Rice export scam - INR 2,500 crore
2009 - Orissa mining scam - INR 7,000 crore
2009 - Sukhna land scam - Darjeeling
2009 - Vasundhara Raje land scam
2009 - Austral Coke scam - INR 1,000 crore
2008 - Cash for Vote Scandal
2008 - Hasan Ali black money controversy
2008 - The Satyam scam
2008 - State Bank of Saurashtra scam – INR 95 crore
2008 - Army ration pilferage scam - INR 5,000 crore
2008 - Jharkhand medical equipment scam - INR 130 crore
2006 - Kerala ice cream parlour sex scandal
2006 - Scorpene Deal scam
2006 - Navy War Room Spy Scandal
2006 - Punjab city centre project scam – INR 1,500 crore
2005 - IPO scam
2005 - Oil for food scam
2005 - Bihar flood relief scam - INR 17 crore
2004 - Gegong Apang PDS scam
2003 - Taj corridor scandal
2003 - HUDCO scam
2002 - Stamp paper scam - INR 20,000 crore
2002 - Provident Fund (PF) scam
2002 - Kargil coffin scam[120]
2001 - Ketan Parekh securities scam
2001 - Barak Missile scandal
2001 - Calcutta Stock Exchange scam
2000 - India-South Africa match fixing scam
2000 - UTI scandal - INR 32 crore
1997 - Cobbler scandal
1996 - Hawala scandal
1996 - Bihar land scam - INR 400 crore
1996 - SNC lavalin power project scandal - INR 374 crore
1996 - Bihar fodder scandal - INR 950 crore
1996 - Sukh Ram telecom equipment scam
1996 - C R Bhansali scandal - INR 1100 crore
1996 - Fertiliser import scandal - INR 133 crore
1995 - Purulia arms drop case
1995 - Meghalya forest scam - INR 300 crore
1995 - Preferential allotment scandal – INR 5,000 crore
1995 - Yugoslav Dinar scandal - INR 400 crore
1994 - Sugar import scandal
1992 - Harshad Mehta securities scandal-INR 5,000 crore
1992 - Palmolein Oil Import Scandal, Kerala
1992 - Indian Bank scam - INR 1,300 crore
1990 - Airbus scam
1989 - St Kitts forgery
1987 - Bofors Scam
1981 - Cement Scandal including A R Antulay - INR 30 crore
1976 - Kuo oil scam - INR2.2 crore
1974 - Maruti scam
1971 - Nagarwala scam - INR 60 lakh
1965 - Kaling tubes scam
1964 - Pratap Singh Kairon scandal
1962 - National Defense Fund (during Chinese War)
1960 - Teja loan scam - INR 22 crore
1958 - The Mundhra scam - INR 1.2 crore
1956 - BHU funds misuse - INR 50 lakh
1951 - Cycle import scandal
1948 - Jeep scam - INR 80 lakh
1947 - INA Treasure Scam (transported from
Japan to India, and got looted)


ಅಟಲ್ ಬಿಹಾರಿ ವಾಜಪೇಯಿಯಂತಹ ಮುತ್ಸದ್ಧಿ, ೨೪ ಪಕ್ಷಗಳನ್ನು ಸೇರಿಸಿ ಹೊಲಿದ ಕೌದಿಯನ್ನೇ ಹೊದ್ದುಕೊಂಡು ದೇಶಕ್ಕೆ ದಕ್ಷಿಣೋತ್ತರ, ಪೂರ್ವಪಶ್ಚಿಮ ಭಾಗಗಳನ್ನು ನೇರವಾಗಿ ಸಂಧಿಸುವ ಸುಲಭದ ಮಾರ್ಗಗಳನ್ನು ನಿರ್ಮಿಸಿದ್ದರಿಂದ ಇಂದು ಇಡೀ ದೇಶವೇ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದೆ, ಬಳಸಿಕೊಳ್ಳುತ್ತಿದೆ. ಹಾಗಾದರೆ ವಾಜಪೇಯಿ ಅಧಿಕಾರಕ್ಕೆ ಬರುವವರೆಗೆ ಕಾಂಗ್ರೆಸ್ಸಿಗರಿಗೆ ಅದನ್ನು ಸಾಧ್ಯಮಾಡಲಾಗುತ್ತಿರಲಿಲ್ಲವೇ? ಇದ್ದ ನಾಲ್ಕೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಹಿಂದೆ ದಶಕಗಳಕಾಲ ಕಾಂಗ್ರೆಸ್ಸಿಗರು ಸಾಧಿಸಲಾರದ ವಿಶೇಷಗಳನ್ನು ಹಲವುಪಕ್ಷಗಳ ನಾಯಕನಾಗಿ ವಾಜಪೇಯಿ ಸಾಧಿಸಿ ತೋರಿಸಿದರಲ್ಲಾ..ಬಹುಮತ ಪಡೆದು ಏಕಪಕ್ಷವಾಗಿ ಹಲವು ಸರ್ತಿ ಗೆದ್ದ ಕಾಂಗ್ರೆಸ್ಸಿಗೇಕೆ ಅದು ಸಾಧ್ಯವಾಗಿರಲಿಲ್ಲ?  ಕೇಂದ್ರದಲ್ಲೂ ರಾಜ್ಯದಲ್ಲೂ ಕಾಂಗ್ರೆಸ್ಸು ಸಾಧಿಸಿದ್ದು ಅಷ್ಟಕ್ಕಷ್ಟೆ. ಕಳೆದೈದು ವರ್ಷಗಳಲ್ಲಿ, ನಾವೇನೇ ಅಂದರೂ ಕರ್ನಾಟಕದಲ್ಲಿ ಬಹಳ ಬದಲಾವಣೆಗಳೂ ಅಭಿವೃದ್ಧಿ ಕಾರ್ಯಗಳೂ ನಡೆದಿವೆ ಎಂಬುದನ್ನು, ಒಂದು ರೌಂಡು ಹೋಗಿ ಬಂದಮೇಲೆ ನಾವೆಲ್ಲಾ ಒಪ್ಪಲೇಬೇಕಾಗುತ್ತದೆ. 

ಒಂದುಕಡೆ ಹರಿದುಹೋಗುತ್ತಿದ್ದ ಪಕ್ಷವನ್ನು ಪುನಃ ಹೊಲಿಗೆ ಹಾಕಿ ಸರಿಪಡಿಸಿಕೊಳ್ಳುತ್ತಾ, ಪಕ್ಷದೊಳಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂದೋ ಮಂತ್ರಿಸ್ಥಾನ ದೊರಕಲಿಲ್ಲವೆಂದೋ ಉದ್ಭವಿಸುತ್ತಿದ್ದ ಬಣಗಳನ್ನು ನಿಭಾಯಿಸಿಕೊಳ್ಳುತ್ತಾ, ಕುಮಾರಸ್ವಾಮಿ ಹರಾಜಿಗೆ ಕರೆದ ಕುದುರೆಗಳನ್ನು ಮತ್ತೆ ಮರಳಿ ಲಾಯಕ್ಕೆ ಕರೆದು ತಂದುಕೊಳ್ಳುತ್ತಾ, ಆರ್ಥಿಕ ಮುಗ್ಗಟ್ಟು ಎದುರಾದಾಗ ಹಲವು ಯೋಜನೆಗಳನ್ನು ಮುಂದಿಟ್ಟು ವಿದೇಶೀ ಬಂಡವಾಳಗಳನ್ನು ಪಡೆಯುತ್ತಾ ಸರಕಾರ ನಿಭಾಯಿಸಿದ್ದಕ್ಕೆ ಯಡ್ಯೂರಪ್ಪನವರಿಗೆ ಒಂದು ಸೆಲ್ಯೂಟು; ಇದೇ ಕೆಲಸವನ್ನು ಕುಮಾರಸ್ವಾಮಿಯೇ ಆಗಿದ್ದರೂ ಮಾಡಲಾಗುತ್ತಿತ್ತು ಎಂಬುದನ್ನು ನಾನು ಸುತರಾಂ ಒಪ್ಪಿಕೊಳ್ಳುವುದಿಲ್ಲ! ಆ ವಿಷಯದಲ್ಲಿ ಯಡ್ಯೂರಪ್ಪ ಒಬ್ಬ ದಕ್ಷ ನಾಯಕ ಎಂಬುದರಲ್ಲಿ ಅನುಮಾನವಿಲ್ಲ. ಮೇಲಾಗಿ ಈ ಹಿಂದೆ ಯಾವ ಮುಖ್ಯಮಂತ್ರಿಯೂ ಕಂಡರಿಯದಂತಹ ತಿರುವು-ತೊಂದರೆ-ಪೇಚಾಟಗಳನ್ನು ಅನುಭವಿಸಿಯೂ ಜಯಿಸಿದ್ದು ಯಡ್ಯೂರಪ್ಪ ಮಾತ್ರ! ಆದರೆ ಅವರ ಮಗ್ಗುಲ ಹುಣ್ಣುಗಳೇ ಅವರಿಗೆ ಮುಳುವಾದವು ಎಂಬುದು ವಿಷಾದನೀಯ. ತಮ್ಮೊಳಗಿನ ಒಳಜಗಳಗಳಿಂದ ಮುಖ್ಯಮಂತ್ರಿಯನ್ನು ಜೈಲಿಗೆ ಕಳಿಸಿದ್ದರ ಜೊತೆಗೇ, ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಮೇಲೂ ಮತ್ತೆ ಮರಳಿ ಮುಖ್ಯಮಂತ್ರಿ ಪಟ್ಟವೋ ಪಕ್ಷದ ಅಧ್ಯಕ್ಷಗಿರಿಯೋ ಸಿಕ್ಕದಂತೇ ನೋಡಿಕೊಂಡವರು ಇಂದು ಮರದಕೆಳಗೆ ಬಿದ್ದ ಮಂಗನಂತಾಗಿದ್ದಾರೆ. ಯಡ್ಯೂರಪ್ಪ ಇರದಿದ್ದರೆ ಬಿಜೆಪಿಗೆ ಏನಾಗುತ್ತದೆ ಎಂಬುದೂ ಮತ್ತು ಬಿಜೆಪಿಯನ್ನು ತೊರೆದರೆ ಯಡ್ಯೂರಪ್ಪ ಏನೆಂಬುದೂ ಪರಸ್ಪರ ಆಯಾ ಪಕ್ಷಗಳಿಗೆ ಗೊತ್ತಾಗಿದೆ. ಪಕ್ಷ ಒಡೆಯುವ ಮುನ್ನ ಯಡ್ಯೂರಪ್ಪ ತೀರಾ ’ಶೋಭಾ’ಯಮಾನವಾಗದಿದ್ದರೆ ಪರಿಸ್ಥಿತಿ ಸ್ವಲ್ಪ ಬದಲಿರುತ್ತಿತ್ತೋ ಏನೋ. 

ಏನೇ ಇರಲಿ, ಇಷ್ಟೆಲ್ಲಾ ಪುರಾಣ ಕೊರೆದದ್ದು ಕಾಂಗ್ರೆಸ್ಸು ಎಂಬುದು ನೆಚ್ಚಿನ ಆಯ್ಕೆಯಲ್ಲಾ ಅನಿವಾರ್ಯದ ಆದೇಶ ಎಂಬುದಕ್ಕಾಗಿ. "ಜನ ನಮ್ಮನ್ನು ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ಸು ಅಂದರೆ ಉತ್ತಮ ಆಡಳಿತ ಎಂಬುದು ಜನರಿಗೆ ಗೊತ್ತು" ಎಂದು ಮೀಸೆ ನೀವಿಕೊಳ್ಳುವ ಕಾಂಗ್ರೆಸ್ಸಿಗರು, ’ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬುದನ್ನು ಪ್ರತಿಬಿಂಬಿಸುವ ಜನ. "ಹಿಂದೆ ದಶಕಗಳ ಕಾಲ ನೀವು ನಮ್ಮನ್ನು ಆಳಿದ್ದೀರಿ, ಆಗ ನಿಮ್ಮ ತಪ್ಪುಗಳೂ ಹೇರಳವಾಗಿದ್ದವು. ಅದಕ್ಕೇ ಅಧಿಕಾರದಿಂದ ನಿಮ್ಮನ್ನು ಕೆಳಗಿಳಿಸಿದ್ದೆವು. ನಿಮ್ಮ ಬದಲಿಗೆ ಬಂದವರು ನಿಮ್ಮನ್ನೇ ಅನುಸರಿಸುತ್ತಾ ಹೊರಟರು. ಹೀಗಾಗಿ ಅವರಿಗೂ ಸ್ವಲ್ಪ ನಮ್ಮ ಬಿಸಿ ತಟ್ಟಬೇಕು ಎಂಬ ಸಲುವಾಗಿಯೂ, ನಮಗೆ ಇನ್ನಾವ ಆಯ್ಕೆಯೂ ಇಲ್ಲದ ಕಾರಣಕ್ಕಾಗಿಯೂ ಕಾಂಗ್ರೆಸ್ಸಿಗರಾದ ನಿಮಗೆ ಇನ್ನೊಮ್ಮೆ ಅಧಿಕಾರ ನೀಡುತ್ತಿದ್ದೇವೆಯೇ ಹೊರತು ಇದು ನಮ್ಮ ನೆಚ್ಚಿನ ಆಯ್ಕೆಯಲ್ಲ" ಎಂಬುದು ಜನತೆಯ ಸಂದೇಶವಾಗಿದೆ.

ಚುನಾವಣೆಯಲ್ಲಿ ಮಲಗಿದವರು, ಮಗ್ಗುಲತಿರುವಿಕೊಂಡು, ಚಾದರ ಝಾಡಿಸಿಕೊಂಡು ಅದರಲ್ಲಿರುವ ತಿಗಣೆ, ಜಿರಲೆಗಳನ್ನು ಓಡಿಸಿಕೊಳ್ಳುತ್ತಾ, ತಮ್ಮ ಅಧಿಕೃತ ಧರ್ಮಪತ್ನಿಯನ್ನೂ ಮತ್ತು ಅನಧಿಕೃತ ಅಧರ್ಮಪತ್ನಿಯರುಗಳನ್ನೂ ತತ್ಸಂಬಂಧೀ ಪುತ್ರ-ಪೌತ್ರಾದಿಗಳನ್ನೂ ಸಂಭಾಳಿಸುತ್ತಾ, ಕಳೆದೈದು ವರ್ಷಗಳಲ್ಲಿ ತಾವು ಮಾಡಿದ್ದ ತಪ್ಪುಗಳನ್ನು ಈ ಮುಂದಿನ ಐದು ವರ್ಷಗಳಲ್ಲಿ ಲೆಕ್ಕಾಹಾಕಿಕೊಳ್ಳಬೇಕಾದ  ಕಾಲ ಇದಾಗಿದೆ. ನೆನಪಿರಲಿ ಕನ್ನಡದ ಜನ ನಿಮಗೆಲ್ಲಾ ಬುದ್ಧಿ ಕಲಿಸುವಷ್ಟು, ಬುದ್ಧಿವಂತರಾಗಿದ್ದಾರೆ ಹಾಂ..!