ಕವಿ ಸ್ಮರಣೆಯಲ್ಲಿ ಬರೆದ ಕೆಲವು ಚುಟುಕಗಳು, ಹಿರಿಯ ಸ್ನೇಹಿತರೂ ಕವಿ-ಸಾಹಿತಿಗಳೂ ಆದ ಶ್ರೀ ಜಯಂತ್ ಕಾಯ್ಕಿಣಿಯವರಿಗೆ 'ಕುಸುಮಾಗ್ರಜ' ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಕೆಲವು ಕವಿ-ಸಾಹಿತಿಗಳನ್ನು ಕಲೆಹಾಕಿ ನೆನೆಸಲು ಪ್ರಯತ್ನಿಸಿದ ರೀತಿ.
ಕುಸುಮಾಗ್ರಜರು
ಕಾವ್ಯವನು ಬರೆದಂದು ಹಬ್ಬ ಕವಿಮನೆಯಲ್ಲಿ
ದಿವ್ಯ ಮಂಗಳ ಕೂಸ ಹಡೆದ ರೀತಿಯಲಿ
ಭವ್ಯ ಭಾರತದ ಕನಸನು ಹೊತ್ತು ತಾ ಬರೆವ
ನವ್ಯನೋವನು ಮರೆತು | ಜಗದಮಿತ್ರ
ಕುಸುಮಾಗ್ರಜರು
ಕಾವ್ಯವನು ಬರೆದಂದು ಹಬ್ಬ ಕವಿಮನೆಯಲ್ಲಿ
ದಿವ್ಯ ಮಂಗಳ ಕೂಸ ಹಡೆದ ರೀತಿಯಲಿ
ಭವ್ಯ ಭಾರತದ ಕನಸನು ಹೊತ್ತು ತಾ ಬರೆವ
ನವ್ಯನೋವನು ಮರೆತು | ಜಗದಮಿತ್ರ
ಧರ್ಮವೆಂಬುದು ಮನುಜಮತದ ತತ್ವವದಕ್ಕು
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ
![](https://blogger.googleusercontent.com/img/b/R29vZ2xl/AVvXsEhfsu59LSWcWG4t6zZwvOIkSPC6IPygxfZ6NnuhbOv-9G0nFNeY3Z9BUeBjw12h1hKNhHMH0Fma5vVRahYF5n_bfTiCzrtxMSGsgWvMikLKqj9L-tW9FiPk_lnA4-NUU8j5GtkXFAP6NDk/s320/df3eb62f9d3070bc.jpeg)
ಭಾರೀ ಗಾತ್ರದ ಕೊಡುಗೆ ಕನ್ನಡಮ್ಮನಿಗೆ
ಯಾರ ಹಂಗಿಲ್ಲದಲೆ ನಡೆದರವರದೇ ದಾರಿ
ಭೂರಿ ಭೋಜನ ತಲೆಗೆ | ಜಗದಮಿತ್ರ
![](https://blogger.googleusercontent.com/img/b/R29vZ2xl/AVvXsEj81hDcDU16J7q35lAN6kHVkh_YmdiD-1OJPH5_R3GnvPcqkiZXTADKUs48_CuGDEG9ZGQdFDaHQZzBRwV-C-mnOnK_oSlAJaFBc54vrReuNK55fWSqxD7q-oQPG7yvZIlQ0F8K7k50LFs/s320/bendre.jpeg)
ಚರಕದಲಿ ತೆಗೆದರದೊ ಹಲವು ನೂಲುಗಳ
ಮರಕತ ಮಾಣಿಕ್ಯ ವೇದ ವೇದಾಂತಗಳ
ಸರಕು ತುಂಬುತ ನೋಡು | ಜಗದಮಿತ್ರ
![](https://blogger.googleusercontent.com/img/b/R29vZ2xl/AVvXsEgR-uaei9vZLAovqI70r6rd7eklSa7FhELGXf7WdLHglgL6l7UJv1CIelOTPOoMr9QSyqIy0yS6cH4z4Im3gRqKejg4xRp1iiYhjccdj4zoEqg2zpjBIkrynlzo6zVgYQ0K0wQyvGJqW0s/s320/13282.jpg)
ಹರನ ಹೃದಯದಿ ಹರಿಯ ಕಂಡರದೋ ತಿಳಿದು
ಬರಿದೇ ಭಾಗವ ಮಾಡಿ ಪೂಜಿಸುವ ಜನರಲ್ಲಿ
ಗುರಿ ತೋರಿದರು ಹದದಿ | ಜಗದಮಿತ್ರ
![](https://blogger.googleusercontent.com/img/b/R29vZ2xl/AVvXsEhqArv8ETD8AHkNLTLEuYpO1hrsteSdzWuu2gCyiR4Qu1nA6GneyhkFW6GZ9C0c7PQerr38l4pPYKkmXLbuTZfMeGtVaOshQq29KFe3eHfeb9UQm1da8n2B3DPlPIminOPXlrrNkmqRpYw/s320/panje.jpeg)
ಮಂಗಳದ ಅಂಗಳಕೆ ಕಬ್ಬದಾವುಗಳ !
ಮಂಗಳೂರಿನ ಜನತೆ ಸತತ ನೆನೆಯುವಹಾಗೆ
ಬೆಂಗಳೂರನೂ ಮಿಳಿಸಿ | ಜಗದಮಿತ್ರ
![](https://blogger.googleusercontent.com/img/b/R29vZ2xl/AVvXsEjtqXo3dFlk0Etg64H-RM7Usqa23CzTSZjLAgOItV97A-jSi3l5PL17C5bLXflIpsPJnf37f1WgZFV8M_YgJjdQj612cpOCJl65zuGwtReBdM6RBVr0AXRHFN3RrkVQHYslb5KQZQBJ9yk/s320/JayanthKaikini1.jpg)
ಕಸುವಿನಲ್ಕಡೆದು ಕೊಡಲದುವೆ ಮಹಾಕಾವ್ಯ
ಹಸುವಿನಂದದಿ ಕವಿಯು ಉಪಕಾರಿ ಲೋಕದಲಿ
ಕುಸುಮಾಗ್ರಜರ ನುತಿಸು | ಜಗದಮಿತ್ರ