ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 30, 2012

ಕಾಯ್ಕಿಣಿ ಮಾಸ್ತರು ಜಯಂತಣ್ಣ ಮತ್ತು ಗೋಕರ್ಣದ ಕಡಲು

ಚಿತ್ರದಲ್ಲಿ ಎಡಗಡೆಯಲ್ಲಿ ಕೂತಿರುವವರು ಗೌರೀಶ್ ಕಾಯ್ಕಿಣಿ ಮತ್ತು ಬಲಗಡೆ ಇರುವವರು ಗಿರೀಶ್ ಕಾರ್ನಾಡ್
 [ಚಿತ್ರಗಳ ಕೃಪೆ: ಅಂತರ್ಜಾಲ ]
ಕಾಯ್ಕಿಣಿ ಮಾಸ್ತರು ಜಯಂತಣ್ಣ ಮತ್ತು ಗೋಕರ್ಣದ ಕಡಲು
[ ಆಗಿಹೋದ ಮತ್ತು ಈಗಲೂ ಇರುವ ಕವಿ-ಸಾಹಿತಿಗಳ ಕುರಿತ ಕಥಾಹಂದರದ ೮ನೇ ಕಥೆಗೆ ಸ್ವಾಗತ ]
"ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂದಿದ್ದಾನೆ ಪಂಪ! ಕರ್ನಾಟಕದ ಅಷ್ಟೇ ಏಕೆ ದೇಶದ ಕಾವ್ಯ-ಸಾಹಿತ್ಯದಲ್ಲೇ ಇಷ್ಟೊಂದು ತಾಯ್ನೆಲದ ಪ್ರೇಮವನ್ನು ಇಟ್ಟುಕೊಂಡ ಕವಿ ಇನ್ನೊಬ್ಬನಿರಲಿಕ್ಕಿಲ್ಲ. ಪಂಪನ ಜನನ ಉತ್ತರಕರ್ನಾಟಕದ ಭಾಗದಲ್ಲೇ ಆಯ್ತೆನ್ನಲಾದರೂ ಆತ ಉಳಿದಿದ್ದು ಬೆಳೆದಿದ್ದು ಕದಂಬರ ರಾಜಧಾನಿ ಬನವಾಸಿಯಲ್ಲಿ. ಒಂದೆರಡಲ್ಲ ಆರಂಕುಶವಿಟ್ಟರೂ ನಾನು ಅಂಜಿ ಬನವಾಸಿಯನ್ನು ಮರೆಯಲು ಸಾಧ್ಯವಿಲ್ಲ...ಕೋಗಿಲೆಯಾಗಿಯಾದರೂ ಪರವಾಗಿಲ್ಲ, ಮರಿದುಂಬಿಯಾದರೂ ಅಡ್ಡಿಯಿಲ್ಲ ಒಟ್ನಲ್ಲಿ ಬನವಾಸಿಯಲ್ಲೇ ಜನನವಾಗಬೇಕು ಎಂಬುದು ಪಂಪನ ಅಪೇಕ್ಷೆಯಾಗಿತ್ತು. ಹಚ್ಚಹಸಿರಿನ ನಿಸರ್ಗವನ್ನೂ ಸಂಪದ್ಭರಿತ ಸಮೃದ್ಧ ಕಾಡನ್ನೂ ಹೊಂದಿದ್ದ ನಾಡು ಕವಿಗಳಿಗೆ ಇಷ್ಟವಷ್ಟೇ? ಬನವಾಸಿಗೆ ಹೋದಾಗಲೆಲ್ಲಾ ಪಂಪನ ಕುರುಹುಗಳನ್ನು ಹುಡುಕುವ ಮನಸ್ಸಾಗುತ್ತದೆ; ಹುಡುಕುತ್ತೇನೆ. ಬನವಾಸಿಯ ಏಕಮಾತ್ರ ಉಳಿಕೆಯಾದ ಮಧುಕೇಶ್ವರ ದೇವಸ್ಥಾನದಲ್ಲಿ ಪಂಪ ಎಲ್ಲಾದರೂ ಕೂತಿದ್ದ ಜಾಗ ಸಿಗಬಹುದೇ ಎಂದು ತಡಕಾಡುತ್ತೇನೆ. ಪಂಪನ ಕೃತಿಗಳು ಮಾತ್ರ ಲಭ್ಯವೇ ಹೊರತು ಪಂಪನದ್ದಾದ ಇನ್ನೇನೂ ಉಳಿದಿಲ್ಲ.

ಇಂತಹ ಪಂಪನನ್ನು ಬೆಳೆಸಿದ ಉತ್ತರಕನ್ನಡ ಕರ್ನಾಟಕಕ್ಕೆ ದೇಶಕ್ಕೆ ಅನೇಕ ಗಣ್ಯರನ್ನು ಹೆತ್ತುಕೊಟ್ಟಿದೆ. ಹಲವು ರಂಗಗಳಲ್ಲಿ ಅನಾದಿಯಿಂದಲೂ ಅನೇಕ ಪ್ರತಿಭೆಗಳು ಅರಳಿ ಮರಳಿವೆ. ಒಬ್ಬೊಬ್ಬರದೂ ಮರೆಯಲಾಗದ ಮಹಾನುಭಾವ ಪಾತ್ರ! ಯಾರನ್ನೆಲ್ಲಾ ಸಮಾಜ ಗುರುತಿಸಿ ಯಾದಿಯಲ್ಲಿ ಕಾಣಿಸಿಕೊಂಡರೋ ಅವರೂ ಸೇರಿದಂತೇ ಇನ್ನೂ ಅನೇಕ ಎಲಮರೆಯ ಕಾಯಿಗಳು ಆಗಿಹೋಗಿದ್ದಾರೆ. ಜಿಲ್ಲೆಯುದ್ದಕ್ಕೂ ಆಗಿಹೋದ ಅಜ್ಞಾತ ಪ್ರತಿಭೆಗಳಿಗೆ ಲೆಕ್ಕವೇ ಇಲ್ಲ. ಅಂತಹ ಅಜ್ಞಾತ ಕವಿಗಳಲ್ಲಿ ದಿ| ವಿ.ಜಿ.ಭಟ್ಟರೂ ಒಬ್ಬರು. ಇವತ್ತಿನ ರೀತಿಯಲ್ಲಿ ಅಂತರ್ಜಾಲ ವಗೈರೆ ಇಲ್ಲದ ಆ ಕಾಲದಲ್ಲಿ ಬರೆದರೂ ಪ್ರಕಟಿಸದೇ ಹಾಗೇ ಬಿಟ್ಟು ಬರಹಗಳು ನಶಿಸಿಹೋದ ಘಟನೆಗಳೇ ಅನೇಕ. ಜಿಲ್ಲೆಯ ಜನಜೀವನದಲ್ಲಿ ಹೇಳಿಕೊಳ್ಳುವ ಸಿರಿವಂತಿಕೆಯಿರಲಿಲ್ಲ. ಏನೋ ತಕ್ಕಮಟ್ಟಿಗೆ ಹೊಟ್ಟೆ-ಬಟ್ಟೆಗೆ, ಹಾಸು-ಹೊದಕಲಿಗೆ ತೊಂದರೆಯಾಗದ ರೀತಿಯಲ್ಲಿ ಇದ್ದ ಕಾಲಮಾನ. ಆರ್ಥಿಕ ಬಡತನದಲ್ಲೇ ಜನರಿದ್ದರೂ ಸಾಂಸ್ಕೃತಿಕವಾಗಿ ನಮಗೇನೂ ಕಮ್ಮಿ ಇರಲಿಲ್ಲ. ಕರ್ನಾಟಕದಲ್ಲೇ ಅತ್ಯಂತ ಸುಸಂಸ್ಕೃತ ಜನರನ್ನುಳ್ಳ ಜಿಲ್ಲೆ ನಮ್ಮ ಉತ್ತರಕನ್ನಡ ಎಂದು ಎದೆತಟ್ಟಿಕೊಳ್ಳಲು ನನಗೆ ಬಹಳ ಹೆಮ್ಮೆ. ಜನ ಇಂದಿಗೂ ಮಾನ-ಮರ್ಯಾದೆಗೆ ಅಂಜುವವರು, ದೇವರು-ದಿಂಡರಲ್ಲಿ ಭಯ-ಭಕ್ತಿ ಇರುವವರು, ಹೆಚ್ಚಿನ ಜನ ಮುಗ್ಧರು, ಸರಳಜೀವಿಗಳು; ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನಿಂದ ಪಡೆದ ಬೆಳೆಸಾಲವನ್ನು ಸಮಯಕ್ಕೆ ತೀರಿಸುವುದರಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿರುವವರು! ತೀರಾ ಆಡಂಬರ ಡೊಂಬರಾಟ ಇಲ್ಲದ ಸಾದಾ ಸೀದಾ ಜನ ಮತ್ತು ಸಾದಾ ಸೀದಾ ಜೀವನ.   

ಆಗೊಂದು ಸಿಡಿಲು ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ

ಎಂದು ದೈವವನ್ನು ನೆನೆದ ನರಸಿಂಹಸ್ವಾಮಿಯವರ ಕವನದಂತೇ ಜಿಲ್ಲೆಯಲ್ಲಿ ಇಲ್ಲದ್ದೇ ಇಲ್ಲ. ಬೆಟ್ಟ-ಬೇಣ-ಬಯಲು-ಆಲಯ-ಕಾಡು-ಮೇಡು-ಭತ್ತದ ಗದ್ದೆ, ಬತ್ತದ ಬಾವಿ, ಭೋರ್ಗರೆವ ಕಡಲು, ನವಿಲು-ಗಿಳಿ-ಗೊರವಂಕ-ಕೋಗಿಲೆ-ಮಂಗಟ್ಟೆ ಎಲ್ಲಾ ವಿಧದ ಪಕ್ಷಿಗಳು ಹೀಗೆ ನಮ್ಮ ಉತ್ತರಕನ್ನಡ ಎಲ್ಲದರಲ್ಲೂ ತನ್ನತನವನ್ನೇ ಇಟ್ಟುಕೊಂಡಿದೆ.

ಅಡಕೆ ತೆಂಗು ಅಪ್ಪೆಮಿಡಿ ಗೊಜ್ಜು ತಂಬುಳಿ ಚಪ್ಪೆ
ಗಂಜಿ ಬಂಗಡೆ ತೂರೆ ಶಬ್ದ ಸೋಲುವ ಮೇರೆ
ಶಬ್ದ ಸೋಲುವ ಮೇರೆ ....

ಇದು ನಮ್ಮಲ್ಲಿನ ಕವಿಯೋರ್ವರ ಹಾಡಿನ ಒಂದು ಭಾಗ. ಕಥೆಗಾರ ಯಶವಂತ ಚಿತ್ತಾಲ ನಿಮಗೆ ಗೊತ್ತು, ಯಕ್ಷಗಾನಕ್ಕೆ ಪದ್ಮಶ್ರೀ ತಂದುಕೊಟ್ಟ ಚಿಟ್ಟಾಣಿ ಗೊತ್ತು, ಕೆರೆಮನೆ ಶಂಭುಹೆಗಡೆ-ಮಹಾಬಲ ಹೆಗಡೆ ಗೊತ್ತು, ಹಾಸಣಗಿ ಗಣಪತಿ ಭಟ್ಟರ ಸಂಗೀತ ಗೊತ್ತು, ಹಾಲಕ್ಕಿ ಹಾಡಿನ ಸುಕ್ರಿ ಬೊಮ್ಮ ಗೌಡ ಗೊತ್ತು, ಆಂಜನೇಯನ ಪಾತ್ರಕ್ಕೆ ಹೆಸರಾಗಿದ್ದ ಕುಮಟಾ ಗೋವಿಂದ ನಾಯ್ಕ ಗೊತ್ತು, ಮಾಜಿಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಗೊತ್ತು, ನಂದನ್ ನೀಲೇಕಣಿ ಗೊತ್ತು, ಅನಂತ್ ನಾಗ್-ಶಂಕರ್ ನಾಗ್ ಗೊತ್ತು ಇವರೆಲ್ಲಾ ಇಂದಿನ ಮತ್ತು ಇತ್ತೀಚಿನ ತಲೆಮಾರು. ಇದಕ್ಕೂ ಹಿಂದಿನ ತಲೆಮಾರಿನ ವಿಸ್ತಾರ ಬಹಳ ದೊಡ್ಡದು! ಇಂದಿನವರಿಗೆ ಹಿಂದಿನ ಕಥೆ ಹಿಡಿಸುವುದಿಲ್ಲಾ ಎಂಬ ಕಾರಣಕ್ಕಾಗಿ ತೀರಾ ಹಿಂದಿನ ಇತಿಹಾಸ ಕೆದಕಿಲ್ಲ. ಈ ಸಾಲಿನಲ್ಲಿ ನಿಮಗೆ ಗೊತ್ತಿರುವ ಇನ್ನೂ ಇಬ್ಬರೆಂದರೆ ಗೌರೀಶ ಕಾಯ್ಕಿಣಿ ಮತ್ತು ಅವರ ಮಗ ಜಯಂತ್ ಕಾಯ್ಕಿಣಿ. ’ಮುಂಗಾರು ಮಳೆ’ ಬಂದಿದ್ದೇ ಬಂದಿದ್ದು  ಅಪ್ಪನನ್ನೂ ಮಗ ಮೀರಿಸುವ ಜನಪ್ರಿಯತೆ ಪಡೆದಿದ್ದಾಗಿದೆ!  

ಉತ್ತರಕನ್ನಡದ ಸೊಗಡು ಕೇಳಿ : ಇಲ್ಲಿ ಎಲೆಯಡಿಕೆ ಹಾಕಿ ಪುರ್ರನೆ ಉಗುಳುವ ಜನ ಇದ್ದಾರೆ, ಗುಮ್ಟೆಪಾಂಗು ಬಡಿದು ಹಾಡುವವರಿದ್ದಾರೆ, ಸುಗ್ಗಿ ಕುಣಿವ ಮಂದಿ ಇದ್ದಾರೆ, ಖಾನಾವಳಿ ನಡೆಸುವ ಜನ ಇದ್ದಾರೆ, ಹೋಟೆಲ್ ಕಾಮತರಿದ್ದಾರೆ, ಕಿರಾಣಿ ಅಂಗಡಿ ಪೈಮಾಮ ’ತಾಜಾ ಉಪ್ಪಿನಕಾಯಿ ಹಪ್ಪಳ ಬಂದದೆ’ ಎಂದು ಬೋರ್ಡುಹಾಕಿರುತ್ತಾರೆ, ಮೀನು ಬುಟ್ಟಿ ಹೊತ್ತು ವಾಸನೆ ಹೊಮ್ಮಿಸುವ ಮೀನುಗಾರರಿದ್ದಾರೆ, ಕೊಂಕಣಿ, ಕೊಂಕಣ-ಮರಾಠಿ, ಮರಾಠಿ, ಕನ್ನಡ, ಹಿಂದಿ, ಉರ್ದು, ಹವಿಗನ್ನಡ ಭಾಷೆ ಬಳಸುವ ಜನ ಇದ್ದಾರೆ. ಅಡಕೆ ಮುಖ್ಯ ಬೆಳೆ, ತೆಂಗು, ಭತ್ತ, ಶೇಂಗಾ, ಕಬ್ಬು, ವೀಳ್ಯದೆಲೆ, ಬಾಳೆ ಇತ್ಯೇತ್ಯಾದಿ ನಾವು ಬೆಳೆಯದ ಬೆಳೆಗಳೇ ಇಲ್ಲ. ಕೆಲಮಟ್ಟಿಗೆ ಧಾನ್ಯಗಳನ್ನೂ ತರಕಾರಿಗಳನ್ನೂ ಬೆಳೆಯುತ್ತೇವೆ. ಜೇನು ಕೃಷಿ ಇದೆ, ಹೈನುಗಾರಿಕೆ ಇದೆ, ಬುಟ್ಟಿನೇಯುವುದು, ಮರದ ಕೆಲಸ ಹೀಗೇ ಪಟ್ಟಿ ಬರೆದರೆ ಹನುಮಂತನ ಬಾಲ! ಗುಡಿಗಾರರು ನಮ್ಮಲ್ಲಿ ಜಾಸ್ತಿ ಇದ್ದು ಸ್ವಲ್ಪ ಭಾಗ ಮಲೆನಾಡಿನ ಸಾಗರ-ಶಿವಮೊಗ್ಗಾ ಕಡೆಗಳಲ್ಲಿದ್ದಾರೆ. ನಮ್ಮಲ್ಲಿನ ವೀಳ್ಯೆದೆಲೆ, ಜಾಯಿಕಾಯಿ, ಕಾಳುಮೆಣಸು [ಅನಾದಿಯಿಂದಲೂ] ದೂರದ ವಿದೇಶಗಳಿಗೂ ಹೋಗುತ್ತವೆ! ಹಬ್ಬ ಬಂತೆಂದರೆ ಮನೆಮಂದಿ ಸೇರಿದಂತೇ ಇಡೀ ಜಿಲ್ಲೆಯ ತುಂಬಾ ಸಡಗರ ಉಕ್ಕಿ ಹರಿಯುತ್ತದೆ. ಹೊರಜಗತ್ತಿನ ಪರಿವೆಯೇ ಇಲ್ಲದ ರೀತಿಯಲ್ಲಿ ತಾವಾಯ್ತು ತಮ್ಮ ಕೆಲಸವಾಯ್ತು ಎಂದುಕೊಂಡು ಇದ್ದುಬಿಡುವಂಥಾ ಸಂಭಾವಿತ ಜನ ನಮ್ಮವರು. ಇಂಥಾ ನಮ್ಮ ಉತ್ತರಕನ್ನಡದಲ್ಲಿ ರಾಮಾಯಣ ಕಾಲದ ಪ್ರದೇಶ ಗೋಕರ್ಣ! ಭೂಕೈಲಾಸವೆಂದೂ ದಕ್ಷಿಣಕಾಶಿಯೆಂದೂ ರಾವಣನಿಂದ ಆತ್ಮಲಿಂಗ ತರಲ್ಪಟ್ಟು ಗಣೇಶನ ಉಪಕಾರದಿಂದ ನೆಲದಲ್ಲೇ ಅದು ಇಳಿದುನಿಂತ ಜಾಗವೆಂದೂ ಪ್ರಸಿದ್ಧವಾಗಿದೆ; ತೀರ್ಥಕ್ಷೇತ್ರವಾಗಿದೆ. ಕರ್ನಾಟಕವೂ ಸೇರಿದಂತೇ ದಕ್ಷಿಣ ಭಾರತದ ಅನೇಕ ಜನರ ಪಿತೃಗಳ ಪಿಂಡಪ್ರದಾನ/ಅಸ್ತಿವಿಸರ್ಜನೆ ನಡೆಯುವ ಕ್ಷೇತ್ರವೂ ಹೌದು.   

ಗೋಕರ್ಣದ ಕಡಲತಡಿಯಲ್ಲೇ ನಮ್ಮಲ್ಲಿನ ಅಚ್ಚ ಗಾಂವ್ಟಿ ಪರಿಸರದಲ್ಲಿ ಒಡಮೂಡಿದ ಮಾಸ್ತರು ದಿ|ಗೌರೀಶ್ ಕಾಯ್ಕಿಣಿಯವರು. ಇತ್ತೀಚೆಗೆ ಅವರ ಜನ್ಮಶತಾಬ್ದಿಯ ಉದ್ಘಾಟನೆ ನಡೆಯಿತು. ಕವಿ ಚನ್ನವೀರ ಕಣವಿ, ಸಾಹಿತಿಗಳಾದ ಗಿರಡ್ದಿ ಗೋವಿಂದರಾಜ, ವಿ.ಜಿ.ನಾಯ್ಕ, ಎಂ.ಡಿ. ವೇದೇಶ್ವರ ಮತ್ತು ಗೌರೀಶ್ ಕಾಯ್ಕಿಣಿಯವರ ಪತ್ನಿ ಶಾಂತಾ ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಕೇಳ್ಪಟ್ಟೆ, ಖುದ್ದಾಗಿ ಪಾಲ್ಗೊಳ್ಳಲಾಗಲಿಲ್ಲ. ’ಅವಮಾನವತಾವಾದ’, ’ನಾಸ್ತಿಕ ಮತ್ತು ದೇವರು’,ಮನೋವಿಜ್ಞಾನದ ರೂಪುರೇಷೆಗಳು’, ’ಸತ್ಯಾರ್ಥಿ’ ಇವು ಅವರ ಪ್ರಮುಖ ಕೃತಿಗಳು. ೨೦೦೨ ನವೇಂಬರ್ ೧೩ ರಂದು ಅವರು ಮಡಿದಾಗ ೬೨ ಕೃತಿಗಳು ಮಾತ್ರ ಪ್ರಕಟಗೊಂಡಿದ್ದವು. ಪ್ರಕಟಗೊಳ್ಳದೇ ಬಾಕಿ ಉಳಿದ ಕೃತಿಗಳನ್ನೂ ಸೇರಿಸಿ ಅವರ ಸಮಗ್ರ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ,  ’ಕಟಾಂಜನ’ ಎಂಬ ಸಂಸ್ಮರಣ ಗ್ರಂಥವನ್ನು ಪ್ರಕಟಿಸಿ, ಗೋಕರ್ಣದ ಮುಖ್ಯ ಬೀದಿಯಲ್ಲಿ ಆ ದಿನ ಮೆರವಣಿಗೆ ಮಾಡಲಾಯ್ತು ಎಂಬುದು ತಿಳಿದುಬಂತು; ಅತ್ಯಂತ ಸಂತಸದ ಸಂಗತಿ. ಈ ನೆನಪಿನಲ್ಲಿ ಒಮ್ಮೆ ನೆನಪಿಸಿಕೊಳ್ಳಲೇಬೇಕಾದ ನಮ್ಮ ಹೆಮ್ಮೆಯ ಬರಹಗಾರರು ಕಾಯ್ಕಿಣಿ ಮಾಸ್ತರು. ಅಕ್ಟೋಬರ್ ೧೨, ೧೯೧೨ ರಂದು ಗೋಕರ್ಣದಲ್ಲೇ ಜನಿಸಿ, ಧಾರವಾಡದಲ್ಲಿ ಕಾಲೇಜು ಓದಿ, ಬಂಕಿಕೊಡ್ಲ ಮತ್ತು ಗೋಕರ್ಣದ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ೧೯೩೭ ರಿಂದ ೧೯೭೬ರ ವರೆಗೆ ವೃತ್ತಿಬದುಕು ನಡೆಸಿದವರು ಕಾಯ್ಕಿಣಿ ಮಾಸ್ತರು.[ನೆನಪಿರಲಿ: ಮಾಸ್ತರು ಎಂದರೇ ನಮ್ಮಲ್ಲಿ ಮಾಸ್ತರರು ಎಂದಹಾಗೇ, ಅದು ಏಕವಚನವಲ್ಲ, ನಮ್ಮಲ್ಲಿನ ವಾಡಿಕೆ] ನಮ್ಕಡೆಗೆಲ್ಲಾ ಅವರಿಗೆ ಗೌರೀಶ್ ಮಾಸ್ತರು ಅನ್ನೋದಕ್ಕಿಂತಾ ಹೆಚ್ಚಾಗಿ ಕಾಯ್ಕಿಣಿ ಮಾಸ್ತರು ಎಂದರೇ ಗೊತ್ತಾಗಿಬಿಡ್ತದೆ. ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಅತ್ಯುತ್ತಮ ಬರಹಗಾರರು ಅವರು. ಯಾವುದೇ ವಿಷಯ ಹೇಳಿ, ಅವರೊಂದು ಸಾಂಬಾರ್ ಬಟ್ಲು ಇದ್ದಹಾಗೇ; ತಲೆಯೊಳಗೆ ಇಲ್ದಿದ್ದೇ ಇಲ್ಲ. ಕಣ್ಣಿಗೆ ಕಂಡಿದ್ದನ್ನು ಬರಹಕ್ಕೆ ಇಳಿಸದೇ ಬಿಟ್ಟವರೇ ಅಲ್ಲ! ಹಾಗಾಗೇ ಅವರು ಆ ಕಾಲದಲ್ಲೇ ಅಷ್ಟು ಹಳ್ಳಿಮೂಲೆಯಲ್ಲಿದ್ದರೂ ಪತ್ರಿಕೆಗೆ ಅಂಕಣಕಾರರಾಗಿದ್ದರು. ಸಾಂಪ್ರದಾಯಿಕ ಬರಹಶೈಲಿಗೆ ಅಧುನಿಕತೆಯ ಗರಂ ಮಸಾಲೆಯ ಒಗ್ಗರಣೆ ಹಾಕಿ ಹಚ್ಚಗೆ ಬೆಚ್ಚಗೆ ಕೂತು ಉಣ್ಣುವಂತೇ ಬಡಿಸುವ ಶೈಲಿ ಅವರಿಗೆ ಕರತಲಾಮಲಕವಾಗಿತ್ತು. ಬಡತನದಲ್ಲಿ ತಟ್ಟಿಬಿಡಾರದಲ್ಲೇ ಸಂಸಾರ ನಿಭಾಯಿಸಿದರೂ ಮನಸಾ ಅವರು ಬಹಳ ಧನಿಕರು! ಅವರಲ್ಲಿಗೆ ಬರದೇ ಹೋದ ಕವಿ-ಸಾಹಿತಿಗಳೇ ಇರಲಿಲ್ಲ ಎನ್ನಬಹುದು. ಬಂದ ಅಷ್ಟೂ ಮಂದಿಗೆ ಉಪಚಾರವೂ ಹಾಗೇ ನಡೆಯುತ್ತಿತ್ತು.    

ಕಳೆದವಾರ ಪತ್ರಿಕೆಯೊಂದನ್ನು ತಿರುವುತ್ತಿದ್ದೆ. ಅದರಲ್ಲಿ ಕಾಯ್ಕಿಣಿ ಮಾಸ್ತರು ’ಕರ್ನಾಟಕ ಸಂಗೀತ’ದ ಬಗ್ಗೆ ಬರೆದ ಲೇಖನವೊಂದು ಓದಲು ಸಿಕ್ಕಿತ್ತು. ಸಾಮಾನ್ಯವಾಗಿ ಸ್ವರಮೇಳದ ಬಗ್ಗೆ ಆಳವಾದ ಅಧ್ಯಯನವಿಲ್ಲದ ಯಾವೊಬ್ಬನೂ ಅದನ್ನು ಬರೆಯಲು ಸಾಧ್ಯವಿಲ್ಲ. ಹಸೀ ಗೋಡೆಗೆ ಹರಳಿಟ್ಟಹಾಗೇ ಹೇಳುವ ಅವರ ವಾಗ್ಝರಿ ಅಚ್ಚರಿ ಹುಟ್ಟಿಸುವಂಥದು. ಹೇಳುವುದನ್ನು ಹೇಳಿಯೇ ಬಿಡಬೇಕು; ಛೇ ಛೇ.. ಯಾರದೋ ಮರ್ಜಿಗೋ ಮುಲಾಜಿಗೋ ಡೊಗ್ಗು ಸಲಾಮು ಹೊಡೆದ, ಹೇಳದೇ ಹಾಗೇ ಬಚ್ಚಿಟ್ಟುಕೊಂಡ ಜನವೇ ಅಲ್ಲ ಅದು. ಕಾಲವೂ ಹಾಗೇ ಇತ್ತುಬಿಡಿ, ಪತ್ರಿಕಾಕರ್ತರಿಗೂ ಮರ್ಯಾದೆ ಇತ್ತು, ಪತ್ರಿಕೆಗಳಿಗೂ ಘನತೆ ಗೌರವ ಇತ್ತು. ಪತ್ರಿಕೆಯಲ್ಲಿ ರೋಲ್ ಕಾಲ್ ಮಾಡಲು ಕಲಿಸಿದ್ದು ದಿ| ಲಂಕೇಶರು. ಅಲ್ಲೀವರೆಗೆ ಕನ್ನಡ ಪತ್ರಿಕೋದ್ಯಮದಲ್ಲಿ ಅಂಥಾ ಗೀಳು ಇರಲಿಲ್ಲ. ಯಾವಾಗ ಜಾಹೀರಾತುಗಳಿರುವುದಿಲ್ಲವೋ ಆಗ ಪತ್ರಿಕೆ ನಡೆಸುವುದು ಕಷ್ಟ. ಜಾಹೀರಾತು ಹಾಕುವುದಿಲ್ಲಾ ಎನ್ನುವವರು ಪತ್ರಿಕೆ ಉಳಿಸಿಕೊಳ್ಳಲು ರೋಲ್ ಕಾಲ್ ಮಾಡಲು ಆರಂಭಿಸಿಬಿಡುತ್ತಾರೆ. ಈಗಲೂ ಅಂತಹ ಒಂದೆರಡು ವಾರಪತ್ರಿಕೆಗಳನ್ನು ನೀವು ನಾವೆಲ್ಲಾ ನೋಡುತ್ತೇವಲ್ಲಾ ? ಕಾಯ್ಕಿಣಿ ಮಾಸ್ತರರ ಕಾಲಕ್ಕೆ ಹಾಗೆಲ್ಲಾ ಇರಲಿಲ್ಲ; ಇದ್ದರೆ ಅವರು ಅಂತಹ ಪತ್ರಿಕೆಗಳ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಸಂಪಾದಕರ ಜನ್ಮ ಜಾಲಾಡಿಬಿಡುತ್ತಿದ್ದರು! ಏನ್ತಿಳ್ಕೊಂಡಿದೀರಿ ನೀವು ? ಕಾಯ್ಕಿಣಿ ಮಾಸ್ತರರು ಅಂದ್ರೆ ಅಷ್ಟು ನಿಷ್ಠಾವಂತರು, ನಿಷ್ಪಕ್ಷಪಾತಿಗಳು, ನಿಷ್ಠುರವಾದಿಗಳು. ಗೋಕರ್ಣ ಕ್ಷೇತ್ರಕ್ಕೆ ಬಂದ ಕೆಲವರು ಅವರನ್ನು ಕಾಣಲು ಬಯಸಿದರೂ "ಕಾಯ್ಕಿಣಿ ಮಾಸ್ತರು ಏನಾದ್ರೂ ಹೇಳಿಬಿಟ್ರೆ ಕಷ್ಟ" ಅಂದ್ಕೊಂಡು ಹಾಗೇ ಮರಳುವುದೂ ಇತ್ತು!  

ಕಥೆ, ಕವನ, ಕಾದಂಬರಿ, ಪ್ರಬಂಧ ಇಂತಹ ಅನೇಕ ಪ್ರಾಕಾರಗಳಲ್ಲಿ ಬೆಳೆತೆಗೆದ ಮಾಸ್ತರು ಒಟ್ಟೂ ೬೭ ಕೃತಿಗಳನ್ನು ಬರೆದಿದ್ದಾರೆ. ಇನ್ನೂ ಕೆಲವನ್ನು ಬರೆದಿದ್ದಿರಬಹುದು, ಪ್ರಕಟಗೊಂಡಿದ್ದು ಇಷ್ಟು. ಇಂಥಾ ಮೇಷ್ಟ್ರಿಗೆ ಮಗನಾಗಿ ಜನಿಸಿದವರು ನಮ್ಮ ಜಯಂತ್ ಕಾಯ್ಕಿಣಿ. ನಾವೆಲ್ಲಾ ಪ್ರೀತಿಯಿಂದ ಜಯಂತಣ್ಣ ಎಂದೇ ಕರೆಯುತ್ತೇವೆ. ಬಹುಶಃ ಹತ್ತಿರದ ಬಳಕೆ ಇದ್ದರೆ ನೀವೂ ಹಾಗೇ ಕರೀತೀರಿ ಯಾಕೆಂದ್ರೆ ಅವರ ಸರಳ ಸೌಜನ್ಯ ನಡೆಯೇ ಹಾಗೆ. ಬಡ ಮಾಸ್ತರರ ತಟ್ಟಿಗುಡಿಸಲಿನಲ್ಲಿ ೧೯೫೫ ರಲ್ಲಿ ಜನಿಸಿದ ಜಯಂತ್ ಬಾಲ್ಯದಲ್ಲಿ ಬಡತನವನ್ನೇ ಅನುಭವಿಸಿದರೂ ಓದಿ ಬ್ಯಾಂಕ್ ಅಧಿಕಾರಿಯಾಗಿ ಮುಂಬೈಯಲ್ಲಿ ಕೆಲಸಮಾಡಿದರು. ಹೀಗಾಗಿ ಆರ್ಥಿಕವಾಗಿ ತಂದೆಯಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರಲಿಲ್ಲ. ಪ್ರಾದೇಶಿಕ ಭಾಷೆಯಲ್ಲಿ ಬರೆದರೆ ಸ್ಥಳೀಯ ಜನ ಬಹಳ ಮೆಚ್ಚುತ್ತಾರೆ ಎಂಬುದನ್ನು ಬೇಂದ್ರೆ ಹೇಳುತ್ತಿದ್ದರು. ಬೇಂದ್ರೆಯವರ ಭಾಷಾ ಶೈಲಿ ಅಪ್ಪಟ ಧಾರವಾಡದ್ದೇ ಆಗಿತ್ತು. ಬೇಂದ್ರೆಯವರ ಭಾಷಾನೀತಿಯನ್ನೇ ಅನುಸರಿಸಿದ ಜಯಂತಣ್ಣ ನಮ್ಮಲ್ಲಿನ ಭಾಷೆಯನ್ನು ಮಿಳಿಸಿ ಮಾತನಾಡುತ್ತಾರೆ-ಹೀಗಾಗಿ ನಿಮ್ಮೊಡನೆ ನಮ್ಮೊಡನೆ ಅವರು ಮಾತನಾಡುವಾಗ ಯಾರೋ ಮನೆಯಣ್ಣನೇ ಮಾತನಾಡಿದ ಹಾಗೇ ಇರುತ್ತದೆ!


ಸಾಹಿತಿಯೆಂಬ ಹಿರಿಮೆಯನ್ನು ಇಟ್ಟುಕೊಳ್ಳದೇ ನಡೆದರೆ ಸಾಹಿತಿ ಬಹುದೂರ ನಡೆದಾನು, ಆಗಮಾತ್ರ  ಓದುಗರು ಅವನನ್ನು ಹಚ್ಚಿಕೊಂಡಾರು ಎಂಬುದು ಅನುಭವ ಜನ್ಯ ಅಂಶ. ಸಾಹಿತ್ಯ ಸಹಜಧಾರೆಯಾಗಿ ಹೊರಹರಿಯಬೇಕೇ ಹೊರತು ಅಲ್ಲಿ ಕೃತ್ರಿಮತೆ ಇದ್ದರೆ ಅದು ಬಹುಸಂಖ್ಯಾಕ ಸಾಹಿತ್ಯಾಸಕ್ತರಿಗೆ ಇಷ್ಟವಾಗುವುದಿಲ್ಲ. ಕವಿಯೋ ಸಾಹಿತಿಯೋ ಮಾತನಾಡಿದರೆ ಮಾತನಾಡಿ ತೆರಳಿದ ಹಲವು ಗಂಟೆ/ದಿನ/ವಾರ/ತಿಂಗಳು/ವರ್ಷ ಆ ಮಾತಿನ ಪಸೆ ಹಾಗೇ ಇರಬೇಕು. ತೈಲಧಾರೆಯ ನಂತರ ಎಣ್ಣೆಯ ಪಸೆ ಉಳಿಯುತ್ತದೆ ಆದರೆ ಜಲಧಾರೆಯ ನಂತರ ಅಂತಹ ಯಾವುದೇ ಪಸೆ ಕಾಣಿಸುವುದಿಲ್ಲವಲ್ಲಾ? ಜನಮಾನಸದಲ್ಲಿ ಹೊಕ್ಕಿಕೂತು ಕಾಡುವ ಕವಿಯಾಗಿ ಸಾಹಿತಿಯಾಗಿ ಇನ್ನಷ್ಟು ಬೇಕು ಎನಿಸಿಕೊಳ್ಳುವುದು ಸುಲಭದ ಮಾತಲ್ಲ, ಆ ಹಂತಕ್ಕೆ ಜಯಂತಣ್ಣ ತಲ್ಪಿದ್ದರೆ ಅಲ್ಲಿ ಅವರಪ್ಪ ಕಾಯ್ಕಿಣಿ ಮಾಸ್ತರರ ಗರಡಿಯ ತಾಲೀಮು ಕೂಡ ತುಸು ಕೆಲಸಮಾಡಿರಬಹುದು. ಋಷ್ಯಾಶ್ರಮದಲ್ಲಿ ಇರುವ ಋಷಿಕುಮಾರರು ಸಹಜವಾಗಿ ದುರ್ಲಭ ಜ್ಞಾನವನ್ನಾಂತು ಸಾಧನೆ ನಡೆಸುವವರು, ಗುರುಮುಖೇನ ಸಿಗುವ ಜ್ಞಾನಧಾರೆ ಅವರಿಗೆ ಸಾಕು ಮುಂದೆ ಅವರು ಸ್ವಾನುಭವದಿಂದಲೇ ಬೆಳಗುವವರು ಹೇಗೋ ಹಾಗೇ, ವಿದ್ಯಾರ್ಜನೆ-ವೃತ್ತಿ ಈ ಸಲುವಾಗಿ ಬಹುಕಾಲ ಹೊರಗೇ ಇದ್ದರೂ ಎಳವೆಯಲ್ಲಿ ತಂದೆಯ ಪರ್ಣಕುಟಿ ನೀಡಿದ ನೆರಳು-ಅಲ್ಲಿ ಬಂದುಹೋಗುತ್ತಿದ್ದ ಸಾಹಿತ್ಯಾಸಕ್ತರೊಡನೆ ಆಗಾಗ ಪರಿಸಮಾಲೋಚಿಸುತ್ತಿದ್ದ, ಲೋಕಾಭಿರಾಮವಾಗಿ ಹರಟುತ್ತಿದ್ದ ಅಪ್ಪನ ಗಂಧಗಾಳಿ ಖಂಡಿತ ಪರಿಣಾಮ ಬೀರಿದೆ. ಆಮೇಲೆ ಬಿಡಿ ಕಕ್ಷೆ ಸೇರಿದ ಕ್ಷಿಪಣಿ ಮಾಹಿತಿ ಕಲೆಹಾಕಿ ಕೇಂದ್ರಕ್ಕೇ ಕಳುಹಿಸುವಂತೇ ತಾನೇ ತಾನಾಗಿ ಬೆಳೆಯುತ್ತಾ ಸಾಹಿತ್ಯದಲ್ಲಿ ತೊಡಗಿಕೊಂಡಾತ ಜಯಂತಣ್ಣ ಅರ್ಥಾತ್ ಜಯಂತ್ ಕಾಯ್ಕಿಣಿ. 

ಜಯಂತಣ್ಣ ಕಥೆಗಳ ಜೊತೆಗೆ ನವ್ಯಕಾವ್ಯ ಬರೆದರು, ಸಿನಿಮಾ ಹಾಡುಗಳನ್ನೂ ಬರೆದರು. ಅವರು ’ಮುಂಗಾರುಮಳೆ’ಗೆ ಬರೆದ ಹಾಡುಗಳು ಬಹಳ ಜನಪ್ರಿಯವಾದವು. ಅಲ್ಲಿಂದಾಚೆಗೆ ಜಯಂತಣ್ಣ ಸಿನಿಮಾ ಸಾಹಿತ್ಯ ರಂಗದಲ್ಲೂ ಸ್ವಲ್ಪ ಬಣ್ಣ ಪಡೆದರು! ಈ ಅಪ್ಪ-ಮಗ ಇಬ್ಬರೂ ಮಹಾನ್ ಸಾಹಸಿಗಳು. ಓದುವ ಗೀಳು ಸದಾ ಇದ್ದೇ ಇದೆ. ಬರೆಯುವ ಅನೇಕ ಯುವಜನ ಕಾಯ್ಕಿಣಿ ಮಾಸ್ತರರ ಮನೆಗೆ ಬಂದು ಸಲಹೆ ಕೇಳುತ್ತಿದ್ದರಂತೆ.  ಕೆಲಸಕ್ಕೆ ಬಾರದ ಬರಹಗಳು ಎಂದು ಬೇರೇ ಓದುಗರಿಗೆ ಅನಿಸಿದರೂ ಕಾಯ್ಕಿಣಿ ಮಾಸ್ತರರು ಹಾಗೆ ಅಸಡ್ಡೆಮಾಡುತ್ತಿರಲಿಲ್ಲವಂತೆ. ಯಾಕೆಗೊತ್ತೇ? "ಬರೆಯುವಾತ ಬರೆಯುವಷ್ಟುಕಾಲ ಈ ಲೋಕಕ್ಕೆ ಕೆಟ್ಟದ್ದು ಮಾಡುವುದರಬಗ್ಗೆ ಯೋಚಿಸಲಾರ, ಹಾಗೆ ಅಷ್ಟಾದರೂ ಕಾಲ ಆತನಿಂದ ಈ ಲೋಕಕ್ಕೆ ಒಳಿತಾದರೆ ಅದೊಂದು ಉಪಕಾರವಾದಂತೇ. ಬರೆಯಲಿ ಬಿಡು" ಎನ್ನುತ್ತಿದ್ದರಂತೆ! "ಬರವಣಿಗೆ ಎಂಬುದು ಬಹೊದೊಡ್ಡ ಸಾಗರ, ಇಲ್ಲಿ ಗಾಳಹಾಕುತ್ತಾ ಕೂರಬೇಕು, ಮೀನು ಸಿಕ್ಕರೆ ಪುಣ್ಯ, ಕೆಲವೊಮ್ಮೆ ದಿನಗಟ್ಟಲೆ ಕೂತರೂ ಏನೂ ಸಿಗದೇ ಹೋಗಬಹುದು" ಎಂಬುದು ಜಯಂತಣ್ಣನ ಹೇಳಿಕೆ. ಹೌದಲ್ಲವೇ?  ಕಾಲಘಟ್ಟವೊಂದರಲ್ಲಿ ಕವಿ ಕುವೆಂಪು ಅಂಥವರಿಗೆ ಕವಿಸಮಯ ಎಂದೇ ಬೇರೇ ಇತ್ತು. ಅಲ್ಲಿ ಮೂಡ್ ಬಂದಾಗ ಅವರು ಬರೆಯುತ್ತಿದ್ದರು. ಇವತ್ತು ನನ್ನಂತಹ ಒಬ್ಬ ಬರಹಗಾರನಿಗೆ ಸಮಯ ಸಿಗುವುದೇ ಕಷ್ಟ. ಸಿಕ್ಕ ಸಮಯದ ನಡುವೆಯೂ ಹತ್ತು ಜಂಗಮವಾಣಿ ಕರೆ, ಇಪ್ಪತ್ತೊಂದು ಎಸ್ಸೆಮ್ಮೆಸ್ಸು, ಮದುವೆಗೋ ಗೃಹಪ್ರವೇಶಕ್ಕೋ ಕರೆಯಲು ಬಂದ ನೆಂಟರು, ನಾಳಿನ ಕೆಲಸದ ಪೂರ್ವತಯಾರಿ ಆಗಿಲ್ಲವೆಂದ ಸಹೋದ್ಯೋಗಿಗಳು, ಮನೆಯಲ್ಲಿ ಸಾಮಾನು ಖಾಲಿ ಅಗಿದೆ ಎನ್ನುವ ಹೆಂಡತಿ, ಟಿವಿ ಜಾಹೀರಾತಿನಲ್ಲಿ ಕಂಡ ಚಾಕೋಲೇಟ್ ಕೊಡಿಸುವಂತೇ ಹಠಕ್ಕೆ ಬಿದ್ದ ಮಗ ....ಹೀಗೇ ಅಡ್ಡಬರುವ ಕಾರಣಗಳು ಹಲವಾರು. ಇವೆಲ್ಲವುಗಳ ನಡುವೆಯೂ ಲೋಕಾಂತದಲ್ಲೇ ಏಕಾಂತ ಕಲ್ಪಿಸಿಕೊಂಡು, ಬರೆಯಬೇಕಾದುದನ್ನು ಬರೆಯುವುದಿದೆಯಲ್ಲಾ ಅದು ನಿಜವಾದ ಸವಾಲು !

ಕಾಯ್ಕಿಣಿ ಮಾಸ್ತರರಿಗೆ ಬಂದ ಪ್ರಶಸ್ತಿಗಳು ಇಂತಿವೆ: ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೊತ್ಸವ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಡೈಮಂಡ್ ಜ್ಯುಬಿಲಿ ಅವಾರ್ಡ್, ವರ್ಧಮಾನ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಡಾ|ಶಂ.ಬಾ. ವೇದಿಕೆ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಪ್ರಶಸ್ತಿ(ಮೀನಾಕ್ಷಿ ಎಂಬ ಕೃತಿಗೆ). ಕಾಯ್ಕಿಣಿ ಮಾಸ್ತರರು ಕನ್ನಡದಲ್ಲಿ ಬರೆದ ಹಾಗೇ ಕೊಂಕಣಿಯಲ್ಲೂ ಬರೆಯುತ್ತಿದ್ದರು ಎಂದು ಹೇಳಲು ಮರೆತುಬಿಟ್ಟಿದ್ದೆ.

ಅಪ್ಪನಂತೇ ಮಗನಿಗೂ[ಜಯಂತ್ ಕಾಯ್ಕಿಣಿ] ಅದಾಗಲೇ ಪ್ರಶಸ್ತಿಗಳು ಲಭಿಸಿವೆ: ಹಲವುಬಾರಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಸರಕಾರದ ’ಕುಸುಮಾಗ್ರಜ’ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ರಾಷ್ಟ್ರೀಯ ಕಥಾ ಪ್ರಶಸ್ತಿ, ಋಜುವಾತು ಟ್ರಸ್ಟ್ ನಲ್ಲಿ ಫೆಲೋಶಿಪ್ ಗೌರವ, ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್.

ಅಂದಹಾಗೇ ಕಾಯ್ಕಿಣಿ ಮಾಸ್ತರರ ಮನೆ ಮೊದಲು ಪರ್ಣಕುಟಿಯೇ ಆಗಿತ್ತು. ಮಗ ನೌಕರಿ ಹಿಡಿದು ಒಂದಷ್ಟು ದುಡಿದಮೇಲೆ ಈಗ ಮುಪ್ಪಿನ ತಾಯಿಗಾಗಿ, ಅಪ್ಪನ ನೆನಪಿಗಾಗಿ ಗೋಕರ್ಣದಲ್ಲಿ ಮೂಲಮನೆ ಇದ್ದ ಜಾಗದಲ್ಲೇ ಹೊಸದೊಂದು ಮನೆಯನ್ನು ನಿರ್ಮಿಸಿದ್ದಾರೆ; ಹೆಸರು ’ಪರ್ಣಕುಟಿ’!  ಪರ್ಣಕುಟಿಯಲ್ಲಿ ಕೂತು ಸಮುದ್ರದೆಡೆಗೆ ದೃಷ್ಟಿ ಹರಿಸಬಹುದು. ಚಿಕ್ಕಮಕ್ಕಳಿದ್ದಾಗ ನಾವು ಅಪರೂಪಕ್ಕೆ ಸಮುದ್ರದ ಕಿನಾರೆಗೆ ಹೋಗಿ ಅಲ್ಲಿ ಶಂಖ, ಹವಳ, ಮುತ್ತು ಇವೆಲ್ಲಾ ಸಿಗುವುದೋ ಎಂದು ಹುಡುಕುತ್ತಿದ್ದೆವು. ನಕ್ಷತ್ರಮೀನು, ಸಮುದ್ರನಾಲಿಗೆ, ಇನ್ನೇನೇನೋ ವಸ್ತುಗಳು ಕೈಗೆ ಸಿಕ್ಕಾಗ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಮೇಲೆ ಇಳಿದಾಗ ಅನುಭವಿಸಿದ  ಆನಂದಕ್ಕಿಂತಾ ಹೆಚ್ಚಿನ ಆನಂದ ನಮ್ಮದಾಗುತ್ತಿತ್ತು; ಯಾರೋ ಹಿರಿಯರು "ಹೋಗ್ರೊ ಅದೆಲ್ಲಾ ತೀರಾ ಕೆಲ್ಸಕ್ಕೆ ಬಾರದ ವಸ್ತು" ಎಂದು ಹೇಳಿದಾಗ ಹವೆತೆಗೆದ ಪುಗ್ಗಿ[ಬಲೂನಿ]ಯಂತೇ ಆಗಿಬಿಡುತ್ತಿದ್ದೆವು. ಇಲ್ಲೀಗ ವಿದೇಶೀಯರೂ ಸೇರಿದಂತೇ ನೂರಾರು ಜನ ಸದಾ ಬರುತ್ತಲೇ ಹೋಗುತ್ತಲೇ ಇರುತ್ತಾರೆ. ಹಲವರು ತಳ್ಳುಗಾಡಿಯಲ್ಲಿ ಐಸ್ ಕ್ರೀಮ್ ಮತ್ತು ಚಾಟ್ಸ್ ಅಂಗಡಿ ಇಟ್ಟುಕೊಳ್ಳುತ್ತಾರೆ. ತಾಜಾ ಎಳೆನೀರು ಸಿಗುತ್ತದೆ. ಸಮುದ್ರಸ್ನಾನದ ಸಂಕಲ್ಪ ಮಾಡಿಕೊಂಡು ಸಮುದ್ರ ಸ್ನಾನ ಮಾಡುವ ಯಾತ್ರಾರ್ಥಿಗಳು ಕೆಲವರಾದರೆ ಮೋಜಿನ ಈಜಿಗೆಂದೇ ಬಂದ ಹಲವರೂ ಇರುತ್ತಾರೆ. ಗೋಕರ್ಣಕ್ಕೆ ಬಂದರೆ ನಮಗೆ ಅಪ್ಪ ಮಹಾಬಲ ಆತನ ಮಗ ಗಣಪ ಇಬ್ಬರೂ ಸಿಗುತ್ತಾರೆ, ಅದೇರೀತಿ ಮಹಾಬಲೇಶ್ವರನ ಕೃಪೆಯಲ್ಲಿ ಅಪ್ಪ-ಮಗ ಬರೆದು ಶ್ರೀಮಂತಗೊಳಿಸಿದ ಈ ನೆಲದಲ್ಲಿ ಈ ಕವಿ-ಸಾಹಿತಿಗಳ ಸಂತತಿ ಮುನ್ನಡೆಯಲಿ. ಆತ್ಮಲಿಂಗದ ಸಾನ್ನಿಧ್ಯವಿರುವ ಈ ಕ್ಷೇತ್ರದ ಆ ’ಸಾಹಿತ್ಯ ಪರ್ಣಕುಟಿ’ಯಲ್ಲಿ ಸಾರಸ್ವತಲೋಕಕ್ಕೆ ಬೇಕಾಗುವ ಅನೇಕ ಸಾರಸ್ವತರು ಹುಟ್ಟಿಬರಲಿ, ಕವಿ-ಸಾಹಿತಿಗಳ ನೆಲೆವೀಡು ಕಾರಣಿಕ ಸನ್ನಿಧಾನದಂತೇ ಸದಾ ಶೋಭಿಸಲಿ ಎಂದು ಆತ್ಮೀಯವಾಗಿ ಹಾರೈಸಿ ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ, ನಮಸ್ಕಾರ. [ವಿ.ಸೂ.: ಹೊರಡುವ ಮುನ್ನ ತೈಲಧಾರೆಯ ಪಸೆಯನ್ನು ಉಳಿಸುವ ಕವಿ ಜಯಂತಣ್ಣನ ಈ ಹಾಡನ್ನು ಇನ್ನೊಮ್ಮೆ ಕೇಳಿಬಿಡಿ: ಪ್ರೇಮಿಗಳ ನಡುವಿನ ಈ ಹಾಡನ್ನು ರಾಧಾ-ಕೃಷ್ಣರ ಪ್ರೇಮಕ್ಕೆ ಹೋಲಿಸಿ....ನೀವೆಲ್ಲೋ ಇನ್ನೊಂದು ಲೋಕದಲ್ಲಿ ವಿಹರಿಸಿದ ಅನುಭವ ನಿಮಗಾಗಬಹುದು! ]  




Friday, September 28, 2012

ಈ ಬದುಕು ’ಬಿಸಿಲು ಬೆಳದಿಂಗಳು’ !

ಚಿತ್ರಗಳ ಋಣ: ಅಂತರ್ಜಾಲ 
ಈ ಬದುಕು ’ಬಿಸಿಲು ಬೆಳದಿಂಗಳು’ !

ಬಹಳ ಜನ ಸೇರಿದ್ದರು. ನಾವೆಲ್ಲಾ ಚಿಕ್ಕ ಮಕ್ಕಳು, ನೇರವಾಗಿ ಶಾಲೆಯಿಂದ ದೌಡಾಯಿಸಿದ್ದೆವು. ಅಲ್ಲಿ ನಮ್ಮಲ್ಲಿನ ಶಾಸ್ತ್ರೀಯ ಪಂಚವಾದ್ಯವಿತ್ತು, ತಳಿರುತೋರಣಗಳಿಂದ ಊರ ಮುಖ್ಯಭಾಗ ಅಲಂಕೃತಗೊಂಡಿತ್ತು. ಇಡೀ ಗ್ರಾಮದ ಜನತೆ ಸ್ವಾಮೀಜಿಯೊಬ್ಬರ ಆಗಮನಕ್ಕಾಗಿ ಕಾದಿತ್ತು. ಸಾವಿರಾರು ಜನ ಸ್ವಾಗತಕ್ಕೆ ನಿಂತ ಆ ಜಾಗಕ್ಕೆ ಬಂದಿಳಿದವರೇ ಚಿತ್ರದುರ್ಗದ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು. ನಮ್ಮೂರಿನ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿಗಳಿಗೆ ಊರಿನವತಿಯಿಂದ ಗೌರವ ಸಮರ್ಪಣೆ ಕಾರ್ಯಕ್ರಮವಿತ್ತು. ಇದು ನಡೆದಿದ್ದು ಅಜಮಾಸು ೩೦ ವರ್ಷಗಳ ಹಿಂದೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ಅನೇಕ ಗಣ್ಯರನ್ನು ಹೆತ್ತುಕೊಟ್ಟ ನನ್ನ ತಾಯ್ನೆಲ ಹೊನ್ನಾವರದ ಹಡಿನಬಾಳ. ಇಂದು ನಿವೃತ್ತ ಜೀವನ ನಡೆಸುತ್ತಿರುವ ಕಪ್ಪೆಕೆರೆ [ಹಡಿನಬಾಳ ಗ್ರಾಮದ ಒಂದು ಮಜರೆ] ಗಜಾನನ ಹೆಗಡೆಯವರು, ತರಳಬಾಳು ಸ್ವಾಮಿಗಳು ನಡೆಸುತ್ತಿದ್ದ ಕಾಲೇಜಿನಲ್ಲಿ ಅಂದು ಉಪನ್ಯಾಸಕರಾಗಿ ಕೆಲಸಮಾಡುತ್ತಿದ್ದರು. ಉಪನ್ಯಾಸಕರ ಕರೆಯನ್ನು ಮನ್ನಿಸಿ ಹಡಿನಬಾಳಕ್ಕೆ ತರಳಬಾಳುವಿನಿಂದ ಶ್ರೀಗಳು ಬಂದಿದ್ದರು. ಆ ಕಾಲಕ್ಕೆ ಶ್ರೀರಾಮಚಂದ್ರಾಪುರಮಠದ ಆಸ್ಥಾನ ವಿದ್ವಾನ್ ಎನಿಸಿದ್ದ ಸೂರಿ ರಾಮಚಂದ್ರ ಶಾಸ್ತ್ರಿಗಳು ’ಮೈಸೂರು ಶಾಸ್ತ್ರಿ’ಎಂದೇ ಪ್ರಸಿದ್ಧರು ಮತ್ತು ಪ್ರಕಾಂಡ ಪಂಡಿತರೂ ಆಗಿದ್ದವರು. ಅಂತಹ ವಿದ್ವನ್ಮಣಿಗಳನ್ನು ಸಭೆಯಲ್ಲಿರಿಸಿಕೊಂಡ ಹಡಿನಬಾಳದ ಜನತೆ ತರಳಬಾಳು ಶ್ರೀಗಳಿಗೆ ತನ್ನ ಗೌರವಾರ್ಪಣೆ ಸಲ್ಲಿಸಿತು. ಋಜುಮಾರ್ಗದವರೇ ತುಂಬಿದ ನಮ್ಮ ಊರು ಇಂತಹ ಅನೇಕರನ್ನು ಸ್ವಾಗತಿಸಿದೆ, ಸನ್ಮಾನಿಸಿದೆ. ಸ್ವಾಮಿಗಳಿಗೆ ಹಾರಾರ್ಪಣೆ ಮಾಡಿದ ಚಿಕ್ಕ ಬಾಲಕರಲ್ಲಿ ನಾನೂ ಒಬ್ಬ, ನೆಟ್ಟಗೆ ಗಟ್ಟಿನಿಲ್ಲಲೇ ಆಗದ ಸ್ಥಿತಿಯಲ್ಲಿ, ಗಡಗಡಗುಡುವ ಕೈಗಳಿಂದಲೇ ಹಾರವನ್ನು ಹಾಕುವಾಗ ಧರ್ಯಕ್ಕೆ ಬೆನ್ನಿಗೆ ನಿಂತಿದ್ದು ನನ್ನ ಅಜ್ಜ.

ಅಂದೇ ತರಳಬಾಳುವಿನ ಸಂಪರ್ಕ ನಮಗಾಯ್ತು. ಆಲ್ಲಿಂದಾಚೆಗೆ ಆಗಾಗ ಅಲ್ಲಿನ ಸುದ್ದಿ, ಮಠದ ಬೆಳವಣಿಗೆಗಳ ಮಾಹಿತಿ ಬರುತ್ತಲೇ ಇತ್ತು. ಅದೆಲ್ಲಕ್ಕಿಂತಾ ಹೆಚ್ಚಾಗಿ ಶ್ರೀಗಳ ಅಧ್ಯಯನ ಮಾರ್ಗ ಬಹಳ ಹಿಡಿಸಿತು. ಗುರುವೆನಿಸಿಕೊಳ್ಳುವ ವ್ಯಕ್ತಿಗೆ ಅಧ್ಯಯನ ಮತ್ತು ಅಧ್ಯಾಪನ ಸಹಜವಾಗಿ ಬೇಕು. ಇಂದು ನಾವು ಹೊರಗೆ ಏನೇ ಅಂದರೂ ಅಂದಿಗೆ ಬ್ರಾಹ್ಮಣಮಠಗಳಲ್ಲಿ ಪೀಠಾರೂಢರಾಗಿರುತ್ತಿದ್ದವರಿಗೆ ಅಧ್ಯಯನ ಕಡ್ಡಾಯವಾಗಿ ಇರುತ್ತಿತ್ತು ಮತ್ತು ಅದನ್ನವರು ಪಾಲಿಸುತ್ತಿದ್ದರು. ಲೌಕಿಕ ಪ್ರಾಪಂಚಿಕ ವ್ಯವಹಾರಗಳಲ್ಲಿ ಧೂರ್ತ ಶಿಷ್ಯರ ಹೇಳಿಕೆಗಳನ್ನು ಒತ್ತಾಯದಿಂದ ಒಪ್ಪಿದರೂ ಒಳಗಿನಿಂದ ಅವರು ವಿರಾಗಿಗಳಾಗಿರುತ್ತಿದ್ದರು. ಹಾಗಿರುವ ಗುರುವನ್ನು ನೋಡಿದ್ದ ನಮಗೆ ಕೇವಲ ಲೌಕಿಕವಾಗಿ ವ್ಯವಹಾರ ಚತುರರಾಗಿರುವ ಗುರುಗಳಾದರೆ ಮಾತ್ರ ಸಾಲುತ್ತಿರಲಿಲ್ಲ. ಗುರುವೊಬ್ಬ ಇಹ-ಪರಗಳ ಮಾರ್ಗದರ್ಶಿಯಾಗಿದ್ದು ಸ್ವತಃ ಅಧ್ಯಯನ ಶೀಲನೂ, ತನ್ನನ್ನೇ ತಾನು ತಿದ್ದಿಕೊಳ್ಳುತ್ತಾ ಲೋಕದ ಡೊಂಕನ್ನು ತಿದ್ದುವವನೂ, ಆರ್ತರ-ದೀನರ ಮೊರೆಯನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವವನೂ, ಲೋಕೋಪಕಾರಾರ್ಥವಾಗಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವವನೂ, ಕಾರ್ಯದಕ್ಷನೂ, ಜಪತಪಾನುಷ್ಠಾನ ನಿರತನೂ, ಮಾನವ ಸಹಜ ಜೀವನಧರ್ಮದ ಪ್ರಬೋಧಕನೂ, ನಿಸ್ವಾರ್ಥನೂ, ನೈತಿಕನಿಷ್ಠನೂ ಮೊದಲಾದ ಸನ್ಯಾಸ ಧರ್ಮದ ಸಲ್ಲಕ್ಷಣಗಳನ್ನು ನಾವೆಲ್ಲಾ ಗುರುಸ್ಥಾನದಲ್ಲಿ ಇರುವ ವ್ಯಕ್ತಿಯಲ್ಲಿ ನಿರೀಕ್ಷಿಸುತ್ತಿದ್ದೆವು. ದೂರದ ತರಳುಬಾಳು ನಮ್ಮೂರಿಗೆ ಪ್ರಾದೇಶಿಕವಾಗಿ ಹತ್ತಿರವಾಗಿರಲಿಲ್ಲ; ಅದೂ ನಮ್ಮಂಥ ಅನೇಕ ನಮ್ಮ ಗ್ರಾಮವಾಸಿಗಳಿಗೆ ಕಣ್ಣಿಗೆ ಕಾಣದ ಪ್ರದೇಶ, ಆದರೂ ನಮ್ಮಲ್ಲಿನ ಹಿರಿಯರಿಗೆ ಒಂದು ಸಮಾಧಾನವಿತ್ತು- ಗಜಾನನ ಕರೆದಿದ್ದರೆ ಅವರು ಯೋಗ್ಯರೇ ಇರಬೇಕು ಎಂಬುದು; ಅದು ಸುಳ್ಳಾಗಲಿಲ್ಲ, ಆ ಗುರು ನಿಜಕ್ಕೂ ಯೋಗ್ಯತೆಯುಳ್ಳವರೇ ಆಗಿದ್ದರು! 

ವೃತ್ತಿಗಾಗಿ ಬೆಂಗಳೂರನ್ನು ಸೇರಿದ ನನಗೆ ರವೀಂದ್ರನಾಥ ಠಾಗೋರ್ ನಗರಕ್ಕೆ ಹೋಗುವಾಗೆಲ್ಲಾ ’ತರಳಬಾಳು ಮಾರ್ಗ’ ಎಂದು ಬರೆದಿರುವುದು ಕಾಣಿಸುತ್ತಿತ್ತು; ಪ್ರಥಮವಾಗಿ ನಾನದನ್ನು ನೋಡಿದಾಗ ಅದು ತರಳಬಾಳುವಿಗೇ ಹೋಗುತ್ತದೆ ಎಂದುಕೊಂಡುಬಿಟ್ಟಿದ್ದೆ! ಆಮೇಲೆ ಅರಿವಿಗೆ ಬಂದಿದ್ದು-ಅದು ಆ ಮಾರ್ಗಕ್ಕೆ ಇಟ್ಟ ಹೆಸರಷ್ಟೇ, ತರಳಬಾಳು ಎಂಬ ಪ್ರದೇಶ ಚಿತ್ರದುರ್ಗ ಜಿಲ್ಲೆಯಲ್ಲಿದೆ ಎಂದು. ತರಳಬಾಳು ಶ್ರೀಗಳ ಲೇಖನ ಆಗಾಗ ಅಲ್ಲಲ್ಲಿ ವಿರಳವಾಗಿ ಓದಲು ಸಿಗುತ್ತಿತ್ತು; ಸಾಹಿತ್ಯ ಪ್ರಿಯನಾದ ನನ್ನನ್ನು ಅದು ತನ್ನಲ್ಲಿರುವ ಸರಳ ನಿರೂಪಣೆಯಿಂದ ಆಕರ್ಷಿಸುತ್ತಿತ್ತು. ಗಜಾನನ ಹೆಗಡೆಯವರೂ ಸೇರಿದಂತೇ ಬಹಳ ಜನ ಹೇಳಿದ್ದರು-ತರಳಬಾಳು ಶ್ರೀಗಳು ಸಂಸ್ಕೃತವನ್ನು ಕಂಪ್ಯೂಟರಿಗೆ ಅಳವಡಿಸುತ್ತಿದ್ದಾರೆ ಎಂದು. ಗಣಕತಂತ್ರಜ್ಞರಲ್ಲದ ಶ್ರೀಗಳು ಅದು ಹೇಗೆ ಆ ಕೆಲಸ ನಿಭಾಯಿಸುತ್ತಾರೆಂಬುದೇ ಒಂದು ಸೋಜಿಗವಾಗಿತ್ತು;  ಕ್ರಿ.ಪೂ. ೫ನೇ ಶತಮಾನಕ್ಕೂ ಮೊದಲು ಬದುಕಿದ್ದನೆನ್ನಲಾದ ಮಹಾಕವಿ ಪಾಣಿನಿಯ ಅಷ್ಟಾಧ್ಯಾಯವನ್ನು ಗಣಕಯಂತ್ರಕ್ಕೆ ಅಳವಡಿಸುವ ಕಾರ್ಯಯೋಜನೆ ಅವರದಾಗಿತ್ತು !  ಸಂಸ್ಕೃತ ಸತ್ತಭಾಷೆ, ಮೃತಭಾಷೆ ಎಂದೆಲ್ಲಾ ಜರಿಯುವ ಜನ ಇಂತಹ ಸಂಸ್ಕೃತ ಪಂಡಿತರನ್ನು ಕಂಡು ಮಾತನಾಡಬೇಕು. ಪುಣ್ಯಭೂಮಿ ಭಾರತದಲ್ಲಿ ನಿಧಿನಿಕ್ಷೇಪಗಳಿಗಿಂತಾ ಹೆಚ್ಚಾಗಿ ಅನೇಕ ಜ್ಞಾನನಿಧಿಗಳು ಆಗಿಹೋಗಿದ್ದಾರೆ. ಅವರು ಹೂತಿಟ್ಟುಹೋದ ’ನಿಧಿ-ನಿಕ್ಷೇಪ’ಗಳು ಅನೇಕವಿವೆ. ಅವುಗಳನ್ನು ಅರಿತುಕೊಳ್ಳಲಾದರೂ ನಾವು ಸಂಸ್ಕೃತವನ್ನು ಅಭ್ಯಸಿಸಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ. ||ಸಂಸ್ಕಾರಾತ್ ದ್ವಿಜ ಉಚ್ಯತೇ||- ಮನುಷ್ಯ ತನ್ನ ಉತ್ತಮ ಸಂಸ್ಕಾರಗಳಿಂದ ಬ್ರಾಹ್ಮಣನಾಗುತ್ತಾನಂತೆ, ಇಂದು ಯಾವುದೇ ವಿದ್ಯೆಯೂ ಇಲ್ಲದೇ ಗುರುವೆಂದು ಪೀಠಹತ್ತಿ ಕೂತು ಮೆರೆಯುವ ಜನ ಇದ್ದಾರೆ. ಆದರೆ ಸಿರಿಗೆರೆಯ ಶ್ರೀಗಳು ಹಾಗಲ್ಲ. ಐಹಿಕ-ಪ್ರಾಪಂಚಿಕ ವಿದ್ಯೆಯನ್ನು ವಿದೇಶಗಳಲ್ಲಿ ಕಲಿತರೂ ಸಂಸ್ಕೃತವನ್ನು ಅಧ್ಯಯನಮಾಡಿದ ಶ್ರೀಗಳು ವೇದ-ವೇದಾಂಗಗಳ ಬಗೆಗೆ, ಸಂಸ್ಕೃತದಲ್ಲಿ ಬರೆಯಲ್ಪಟ್ಟ ಬಹುತೇಕ ಕಾವ್ಯ-ಸಾಹಿತ್ಯಗಳ ಬಗೆಗೆ ಅಧ್ಯಯನ ನಡೆಸಿದರು. ಶಿವಕುಮಾರ ಶ್ರೀಗಳ ಅನುಭವಗಳ ಜೊತೆಗೆ, ಉತ್ತಮ ಹೊತ್ತಗೆಗಳು ನೀಡಿದ ಈ ಸಂಸ್ಕಾರಗಳೂ ಸೇರಿಕೊಂಡಾಗ ಸಾದರ-ಲಿಂಗಾಯತರ ಮಠವಷ್ಟೇ ಎನಿಸಿದ್ದ ಪೀಠವನ್ನು ಸರ್ವಜನಮಾನ್ಯವನ್ನಾಗಿ ಬೆಳೆಸುವಲ್ಲಿ ಅದು ಸಹಕಾರಿಯಾಯ್ತು. 

ವಿಜಯಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ’ಬಿಸಿಲು ಬೆಳದಿಂಗಳು’ ಅಂಕಣವನ್ನು ಬರೆಯುತ್ತಿರುವ ಶ್ರೀಗಳ ಲೇಖನಗಳ ಬಗ್ಗೆ ಹೊಸದಾಗಿ ನಿಮಗೆ ಹೇಳುವುದೇನೂ ಬೇಕಾಗಿಲ್ಲ. ಅಲ್ಲಿ ನ್ಯಾಯ-ನೀತಿ-ದಯೆ-ಕರುಣೆ-ಅನುಕಂಪ-ಸಹನೆ-ದಾನ-ಧರ್ಮ-ದಂಡ ಎಲ್ಲದರ ಬಗೆಗೂ ಸೋದಾಹರಣವಾಗಿ ಬರೆಯುವ ಶೈಲಿ ಮತ್ತು ಅಚ್ಚುಕಟ್ಟಾಗಿ ನಿರೂಪಿತವಾಗುವ ಅವರ ಅಂಕಣ ನನ್ನ ಓದಿನ ಆದ್ಯತೆಗಳಲ್ಲೊಂದು. ಒಮ್ಮೆ ಅವರ ಪೂರ್ವಾಶ್ರಮದ ಬಾಲ್ಯಕಾಲದಲ್ಲಿ ಅಮ್ಮನ ಜೊತೆ ಹೊಲಕ್ಕೆ ಹೋದಾಗ ಆಳದಲ್ಲಿ ಬಿದ್ದು ತಲೆಗೆ ಪೆಟ್ಟುಮಾಡಿಕೊಂಡ ಘಟನೆ ವಿವರಿಸಿದ್ದರು, ಜೊತೆಗೆ ಈಗ ಕೆಲವರ್ಷಗಳ ಹಿಂದೆ ಅವರ ಪೂರ್ವಾಶ್ರಮದ ಅಮ್ಮ ಕಾಯಿಲೆಯಿಂದ ಬಳಲಿ ಖರ್ಚಿಗೆ ಹಣವಿಲ್ಲದಾದಾಗ, ಮಠದಿಂದ ಕಳುಹಿಸಿದ್ದರ ಬಗ್ಗೆ-ವಾಸಿಯಾದಮೇಲೆ ಆ ಹಣವನ್ನು ತಾವು ಇಟ್ಟುಕೊಳ್ಳಬಾರದೆಂದು ಅವರಮ್ಮ ಮಠಕ್ಕೆ ಮರಳಿಸಿದ್ದರ ಔಚಿತ್ಯದ ಬಗ್ಗೆ ವಿಶದವಾಗಿ ತಿಳಿಸಿಕೊಟ್ಟಿದ್ದರು. ||ಸರ್ವವಂದ್ಯೇಣ ಯತಿನಾಂ ಪ್ರಸೂರ್ಮಾತಾ ಪ್ರಯತ್ನತಃ||-ಲೋಕದ ಸಮಸ್ತರಿಂದಲೂ ನಮಸ್ಕರಿಸಲ್ಪಡುವ ಯತಿಯಾದರೂ ಹಡೆದಮ್ಮನಿಂದ ಮಾತ್ರ ನಮಸ್ಕಾರ ಸ್ವೀಕರಿಸದೇ, ಬದಲಾಗಿ ತಾನೇ ನಮಸ್ಕರಿಸಬೇಕು ಎಂದು ಆದಿಶಂಕರರು ಹೇಳಿದಂತೇ ಅಮ್ಮನ ಋಣ ತೀರಿಸಲು ಸಾಧ್ಯವಿಲ್ಲಾ ಎಂಬುದನ್ನು ಅವರು ಬರೆದ ಲೇಖನ ಹೇಳಿತ್ತು ಮತ್ತು ವಾರಗಟ್ಟಲೆ ಆ ಲೇಖನದ ಗುಂಗಿನಲ್ಲೇ ನಾನಿದ್ದೆ! ಮನುಷ್ಯನಾಗಿ ಹುಟ್ಟಿದಮೇಲೆ ತಪ್ಪು-ಒಪ್ಪು ಇದ್ದಿದ್ದೇ. ಎಲ್ಲರೂ ತಪ್ಪನ್ನು ಮಾಡದೇ ಇರಲು ಸಾಧ್ಯವೇ? ತಪ್ಪುಮಾಡಿದವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುವ ಶ್ರೀಗಳ ’ಸದ್ಧರ್ಮ ನ್ಯಾಯಪೀಠ’ ಒಂದು ವಿಶಿಷ್ಟ ಸಾಧನೆ. ಧರ್ಮಸ್ಥಳದಲ್ಲಿ ಮಂಜುನಾಥನಿಗೆ ಹೆದರಿ ಹೆಗ್ಗಡೆಯವರ ಎದುರು ನ್ಯಾಯಕ್ಕೆ ಒಪ್ಪಿಕೊಳ್ಳುವಂತೇ ಈ ಮಠದ ಶಿಷ್ಯಗಣದ ಹಲವರು ಶ್ರೀಗಳ ವರ್ಚಸ್ಸಿಗೂ ಮತ್ತು ನ್ಯಾಯಪರತೆಗೂ ಅಂಜಿ ನಿಜವನ್ನು ಹೇಳುತ್ತಾರೆ! ತಪ್ಪಿತಸ್ಥರಿಗೆ ಕಠಿಣಶಿಕ್ಷೆಯ ಬದಲು ಅಂಥವರ ಮನಃಪರಿವರ್ತನೆ ಮಾಡುವ ಕೆಲಸ ಶ್ಲಾಘನೀಯ.

||ಅರ್ಚಕಸ್ಯ  ಪ್ರಭಾವೇನ ಶಿಲಾ ಭವತಿ ಶಂಕರ|| ಎಂಬರೀತಿಯಲ್ಲೇ ತನ್ನ ವೈಯ್ಯಕ್ತಿಕ ವರ್ಚಸ್ಸಿನಿಂದಲೂ, ವ್ಯಾವಹಾರಿಕ ಜಾಣ್ಮೆಯಿಂದಲೂ, ಆಳವಾದ ಅಧ್ಯಯನದಿಂದಲೂ, ಸನ್ಮಾರ್ಗದ ಅನುಸರಣೆ ಮತ್ತು ಬೋಧನೆಯಿಂದಲೂ ಶ್ರೀಗಳು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಸಂಕಲ್ಪಗಳು ಸಾಕಾರರೂಪ ತಳೆದಿವೆ. ಅನೇಕ ಶಾಲಾ-ಕಾಲೇಜುಗಳೂ ಸೇರಿದಂತೇ ೧೫೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ವೇದಾಧ್ಯಯನಕ್ಕೂ ಪಾಠಶಾಲೆಗಳನ್ನು ವ್ಯವಸ್ಥೆಮಾಡಿದ್ದು ಪ್ರಮುಖವಾಗಿ ಹೇಳಬೇಕಾದ ಅಂಶ ಯಾಕೆಂದರೆ ಅಪೌರುಷೇಯವಾದ ಅನರ್ಘ್ಯರತ್ನಗಳನ್ನು ಉಳಿಸಿಕೊಳ್ಳಬೇಕಾದ ಕರ್ತವ್ಯ ನಮ್ಮೆಲ್ಲಾ ಹಿಂದೂ ಸನ್ಯಾಸಿಗಳದ್ದಾಗಿದೆ. ಶಿಸ್ತಿನಲ್ಲೂ ತಮ್ಮದೇ ಆದ ಚೌಕಟ್ಟನ್ನು ರೂಪಿಸಿಕೊಂಡ ಶ್ರೀಗಳ ಪ್ರತೀ ವ್ಯವಹಾರವೂ ಶಿಸ್ತಿನಿಂದಲೇ ಕೂಡಿದೆ, ಅನುಕರಣೀಯವಾಗಿದೆ. ಪ್ರೌಢಾವಸ್ಥೆಗೆ ಬಂದನಂತರ ಮತ್ತೆ ನಾನು ಅವರನ್ನು ತೀರಾ ಹತ್ತಿರದಿಂದ ಕಾಣಲಿಲ್ಲವಾದರೂ ಮಿಂಚಂಚೆಯ ಮುಖಾಂತರ ಅವರನ್ನು ತಲ್ಪಬೇಕು, ಒಮ್ಮೆ ಭೇಟಿಮಾಡಬೇಕು ಎಂಬ ಇಂಗಿತ ಉಳಿದುಕೊಂಡಿದೆ-ಅದನ್ನು ಮಾಡಬೇಕಾಗಿದೆ. ಅವರ ಅಧಿಕಾರ ನಿವೃತ್ತಿ ಸ್ವಲ್ಪ ಬೇಸರ ತರಿಸಿದ್ದರೂ ಅದು ಅವರ ಗುರುಗಳು ಹಾಕಿಕೊಟ್ಟ ಕ್ರಮವಾದ್ದರಿಂದ ಹಾಗೆ ಮಾಡಬೇಡಿ ಎನ್ನುವ ಅಧಿಕಾರ ನಮಗಿದೆಯೇ?  

ಬಿಸಿಲಿನಲ್ಲೂ ಬೆಳದಿಂಗಳನ್ನು ತೋರುವ ಅಗಾಧ ಪಾಂಡಿತ್ಯವನ್ನು ಗಳಿಸಿದ ಶ್ರೀಗಳ ಲಘುಹಾಸ್ಯ ಅತಿಮಧುರ! ಅಂತಹ ಒಂದು ಉದಾಹರಣೆ ಹೀಗಿದೆ: ಒಮ್ಮೆ ಸರಕಾರದ ಸರ್ವೇ ಮತ್ತು ರೆವಿನ್ಯೂ ಇಲಾಖೆಗಳ ನೌಕರರು ಒಟ್ಟಾಗಿ ಸತ್ಯನಾರಾಯಣ ಪೂಜೆ ಮಾಡಿಸಿದರಂತೆ; ಹೇಳಿಕೇಳಿ ಸಂಸ್ಕೃತ ಗೊತ್ತಿಲ್ಲದ ಜನ. ಪೂಜೆಗೆ ಬಂದ ಪುರೋಹಿತರು, ಸತ್ಯನಾರಾಯಣ ಪೂಜಾಂತ್ಯದಲ್ಲಿ || ಸರ್ವೇಜನಾಃ ಸುಖಿನೋ ಭವಂತು|| ಎಂದಾಗ ರೆವಿನ್ಯೂ ಇಲಾಖೆಯ ಜನಗಳದ್ದು ಒಂದೇಸಮನೆ ಜಗಳ ಶುರುವಾಯ್ತಂತೆ. ನಾವು ಎರಡು ಇಲಾಖೆಯವರು ಸೇರಿ ನಡೆಸಿದ ಪೂಜೆ ಇದು, ಹಾಗಿದ್ದೂ ಪುರೋಹಿತರು ಸರ್ವೇಜನ ಮಾತ್ರ ಸುಖವಾಗಿರಲಿ ಎಂದು ಹೇಗೆ ಹೇಳಿದರು ಎಂಬುದೇ ಅಲ್ಲಿನ ಜಗಳದ ವಿಷಯ. ಬುದ್ಧಿವಂತ ಪುರೋಹಿತರು "ರೆವಿನ್ಯೂ ಜನಾಃ ಸುಖಿನೋ ಭವಂತು" ಎಂದು ಅವರನ್ನು ಸಮಾಧಾನಿಸಿದರಂತೆ.-ಇದು ಶ್ರೀಗಳ ಹಾಸ್ಯಪ್ರಜ್ಞೆ. ಅರ್ಥವಾಯ್ತಲ್ಲಾ?  ನಮ್ಮಲ್ಲಿ ಎಷ್ಟೋ ಜನ ನಾವು ಪೂಜೆ ಮಾಡಿಸುತ್ತೇವೆ, ಹೇಳುವ ಮಂತ್ರಗಳ ಅರ್ಥ ನಮಗೆ ತಿಳಿದಿಲ್ಲ, ಸಂಸ್ಕೃತ ಕಂಡರೆ ಬದ್ಧವೈರ! ಆದರೂ ಪೂಜೆಗೆ ಮಾತ್ರ ಸಂಸ್ಕೃತವೇ ಅನಿವಾರ್ಯ! ಇನ್ನಾದರೂ ನಾವು ಸಂಸ್ಕೃತವನ್ನು ತಕ್ಕಮಟ್ಟಿಗೆ ಕಲಿಯೋಣವೇ? ಎಂಬ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟು ಶ್ರೀಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇನೆ.

ಬದುಕಿನ ಹಲವು ಮಜಲುಗಳಲ್ಲಿ ಕಷ್ಟ-ಸುಖಗಳು ಬರುತ್ತಲೇ ಇರುತ್ತವೆ. ಸೈಕಲ್ಲಿನಲ್ಲಿ ಹೋಗುವವನಿಗೆ  ಏರು-ತಗ್ಗುಗಳು ಸಿಗುವಹಾಗೇ. ಏರುಸಿಕ್ಕಾಗ ತಳ್ಳಬೇಕು, ಏದುಸಿರು! ಇಳುಕಲಿನಲ್ಲಿ ಪೆಡಲ್ ಮಾಡುವ ಅಗತ್ಯವೇ ಇಲ್ಲ, ಶ್ರಮರಹಿತ ವೇಗದ ನಡೆ. ಸಿಹಿಯನಂತರ ಕಹಿ, ಮತ್ತೆ ಸಿಹಿ, ಮತ್ತೆ ಕಹಿ. ಇದೇ ಈ ಜೀವನ. ಕಹಿಇದ್ದಾಗಲೇ ಸಿಹಿಯ ಮಹತ್ವದ ಅರಿವು ನಮಗೆ. ಅದಕ್ಕೇ ಸಾಂಕೇತಿಕವಾಗಿ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನುತ್ತೇವೆ. ಕಹಿಯೂ ಇರಲಿ, ಸಿಹಿಯೂ ಇರಲಿ ಎಂಬುದು ಅದರ ಸಂದೇಶ. ದುಃಖವನ್ನೇ ಕೊಡಬೇಡಾ ದೇವರೇ ಎನ್ನಲು ನಾವು ಅಧಿಕಾರಸ್ಥರಲ್ಲ; ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡು ಎಂಬುದು ನಮ್ಮ ಪ್ರಾರ್ಥನೆಯಾಗಿರಬೇಕು ಅಲ್ಲವೇ? ಕಷ್ಟವನ್ನು ಬಿಸಿಲಿಗೆ ಹೋಲಿಸಿದರೆ ಸುಖವನ್ನು ಬೆಳದಿಂಗಳಿಗೆ ಹೋಲಿಸಬಹುದಾಗಿದೆ. ಆದರೆ ಒಂದೇ ಒಂದು ದಿನ ಸೂರ್ಯರಶ್ಮಿ ಇರಲಿಲ್ಲಾ ಎಂದರೆ ಈ ಜಗತ್ತು ನಡೆಯುವುದಿಲ್ಲ. ಎಲ್ಲರಿಗೂ ರಜವಿದೆ, ಮೋಜಿದೆ, ಮಜವಿದೆ. ಆದರೆ ಲೋಕವನ್ನು ಬೆಳಗುವ ದಿನಮಣಿಗೆ ಮಾತ್ರ ರಜವೆಂಬುದೇ ಇಲ್ಲ. ಆ ಬಿಸಿಲು ಇದ್ದರೇನೆ ಅನೇಕ ಜೀವಿಗಳೂ ಜೀವಗಳೂ ತರುಲತೆಗಳೂ ತಮ್ಮ ಆಹಾರ ಸಿದ್ಧಪಡಿಸಿಕೊಳ್ಳಲು ಸಾಧ್ಯ. ಅಂದಾಗ ಕಷ್ಟದಲ್ಲೇ ಒಳಿತೂ ಅಡಗಿದೆ ಎಂಬುದು ಅರಿವಾಗುತ್ತದಲ್ಲಾ? ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲೂ ನಾವಿರುವ ಪ್ರದೇಶದಲ್ಲಿ ದುಷ್ಕರ್ಮಿಗಳು ಬಾಂಬ್ ಇರಿಸಿದ್ದಾರೆ ಎಂದು ಸುದ್ದಿಬಂದರೆ ನಮಗೆ ಸುಖ ಸಿಕ್ಕೀತೇ? ಸಾಧ್ಯವಿಲ್ಲ. ಅಂದಮೇಲೆ ಬೆಳದಿಂಗಳಲ್ಲೂ ಕಷ್ಟದ ಛಾಯೆ ಇರಬಹುದಲ್ಲಾ ?   


ನನಗೆ ತೀರಾ ಪರಿಚಿತರಲ್ಲದಿದ್ದರೂ ಹಲವರ ಬಾಯಿಂದ, ಫೇಸ್ ಬುಕ್ ನಿಂದ, ಸಂಯುಕ್ತ ಕರ್ನಾಟಕ ಪತ್ರಿಕೆಯಿಂದ ಪರಿಚಿತರಾದವರು ದಿ| ಡಾ| ಸತೀಶ್ ಶೃಂಗೇರಿ. ಇನ್ನೂ ೪೪ರ ವಯಸ್ಸು. ಸಾಧಿಸುವ ಕನಸುಗಳು ಹಲವಿದ್ದವು. ಸಾಧನೆಯೂ ತಕ್ಕಮಟ್ಟಿಗೆ ಆಗಿತ್ತು. ಅವರ ವ್ಯಂಗ್ಯಚಿತ್ರಗಳು ಮಾತನಾಡುತ್ತಿದ್ದವು! ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಆಯುರ್ವೇದ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಕೆಲಸಮಾಡುತ್ತಲೂ ಖಾಸಗಿಯಾಗಿ ತಾನೇ ಚಿಕ್ಕ ಚಿಕಿತ್ಸಾಲಯವನ್ನು ನಡೆಸುತ್ತಲೂ ಇದ್ದ ಸತೀಶ್ ಅವರ ಪ್ರವೃತ್ತಿ ವ್ಯಂಗ್ಯಚಿತ್ರವನ್ನು ಬರೆಯುವುದು. ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಅದಾಗಲೇ ಮನೆಮಾತಾಗಿದ್ದ ಅವರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮನ್ನಣೆಗಳನ್ನು ಪಡೆದವರು. ಆಸ್ತಮಾ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ವಾರದ ಹಿಂದೆ ಬೆಂಗಳೂರಿನ ಖಾಸಗೀ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರಂತೆ. ನಿನ್ನೆ ಗುರುವಾರ ಅವರು ಹೆಂಡತಿ ಮತ್ತು ಮಗನನ್ನೂ, ಅಭಿಮಾನಿಗಳಾದ-ಸ್ನೇಹಿತರಾದ ನಮ್ಮೆಲ್ಲರನ್ನೂ ಅಗಲಿದ್ದಾರೆ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ.  

ವ್ಯಕ್ತಿಯೊಬ್ಬ ರೂಪುಗೊಳ್ಳಲು ಬಹುಕಾಲಬೇಕು. ಅದು ಕುಂಬಾರ ಆವೆಮಣ್ಣನ್ನು ತಂದು ಹದಮಾಡಿ ಮಡಕೆ ಮಾಡಿದಂತೇ ದೀರ್ಘ ಕೆಲಸ. ಹಡೆದ ಅಪ್ಪ-ಅಮ್ಮನ ಆರೈಕೆಯಲ್ಲಿ ಹುಟ್ಟಿದಮನೆಯ ಕಷ್ಟವನ್ನೋ ಸುಖವನ್ನೋ ಹಂಚಿಕೊಂಡು ಬೆಳೆಯುವ ಮಗು ವಿಧಿಲಿಖಿತದಂತೇ ವಿದ್ಯೆಯನ್ನು ಪಡೆದುಕೊಳ್ಳುತ್ತದೆ. ಪಡೆದುಬಂದ ಭಾಗ್ಯವನ್ನು ಅನುಭವಿಸುತ್ತದೆ. ಸುಮ್ಮನೇ ಕೆಲವೊಮ್ಮೆ ವಿಚಾರಿಸುತ್ತಾ ಕುಳಿತಾಗ ನಾವು ಬಳಸುವ ಪ್ರತಿಯೊಂದು ವಸ್ತುವೂ ನೆನಪಿಗೆ ಬರುತ್ತದೆ. ಚಹಾ ಕುಡಿಯುವ ಲೋಟ, ಸ್ನಾನಮಾಡುವ ಮಗ್ಗು, ಒರೆಸಿಕೊಳ್ಳುವ ವಸ್ತ್ರ, ಬಾಚಿಕೊಳ್ಳುವ ಹಣಿಗೆ, ರೂಪನೋಡಿಕೊಳ್ಳುವ ಕನ್ನಡಿ, ಸ್ನಾನಕ್ಕೆ ನೀರು ಬಿಸಿಮಾಡಿದ ಗೀಜರ್, ಅದಕ್ಕೆ ವಿದ್ಯುತ್ತು ಸರಬರಾಜುಮಾಡಿದ ಯಂತ್ರಗಳು, ಮನೆಯಲ್ಲಿ ನೀರು ಹೊತ್ತು ಮೇಲ್ಗಡೆ ಸಾಗಿಸುವ ಪಂಪು, ಕೂತಿರುವ ಸೋಫಾ, ಮಲಗುವ ಮಂಚ, ಹೊದೆಯುವ ಹೊದಿಕೆ, ಬೀಸುವ ಫ್ಯಾನು, ಮೊಳಗುವ ಫೋನು, ಅನ್ನಕ್ಕೆ ಅಕ್ಕಿ, ಆಸೆಗೆ ಬೇಳೇಕಾಳು-ತರಕಾರಿ, ನಾನೀಗ ಬರೆಯುತ್ತಿರುವ ತಂತ್ರಾಂಶ, ಬಳಸುತ್ತಿರುವ ಗಣಕಯಂತ್ರ, ಅಂತರ್ಜಾಲ--ಈ ಎಲ್ಲದರ ಹಿಂದೆ ಒಂದು ಅಗಾಧವಾದ ಶಕ್ತಿ ಕೆಲಸಮಾಡುತ್ತದೆ!

ಶರಣವೊಗು  ಜೀವನ ರಹಸ್ಯದಲಿ ಸತ್ತ್ವದಲಿ
ಶರಣು ಜೀವನ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರ ಪ್ರಶಾಂತಿಯಲಿ
ಶರಣು ವಿಶ್ವಾತ್ಮನಲಿ-ಮಂಕುತಿಮ್ಮ

ಇಂತಿಂಥಾ ವ್ಯಕ್ತಿ ಇಂತಲ್ಲೇ ಹುಟ್ಟಿ ಇಂತಿಂಥಾದ್ದನ್ನೇ ಮಾಡಬೇಕು, ಇಂತಿಷ್ಟೇ ಕಾಲ ಬದುಕಬೇಕೆಂಬ ವಿಧಿಬರಹದ ಹಿಂದಿನ ಕರ್ಮಬಂಧನದ ಜಾಲದ ಬಗೆಗೆ ನಮಗೆ ಅರಿವಿಲ್ಲ! ಆದರೂ ಬಂದ ವ್ಯಕ್ತಿ ಹೋಗುವ ಮುನ್ನ ತೊಡಗಿಕೊಂಡ ಈ ಲೋಕದ ನವಿರಾದ ಭಾವಗಳು ಕೆಲವರ ಮರಣಾನಂತರವೂ ಮರಣಿಸುವುದಿಲ್ಲ. ಅಂಥವರಲ್ಲಿ ಇತ್ತೀಚೆಗೆ ನಿಧನರಾದ ರಾಜಕಾರಣಿ ಡಾ| ವಿ.ಎಸ್. ಆಚಾರ್ಯ ಒಬ್ಬರು, ಅದೇ ರೀತಿ ಡಾ| ಸತೀಶ್ ಕೂಡ ಎಲೆಮರೆಯ ಕಾಯಿಯಂತೇ ಇದ್ದರು. ತನ್ನ ಕಟುಹಾಸ್ಯ ಭರಿತ ವ್ಯಂಗ್ಯಚಿತ್ರಗಳಿಂದ ಜನಮನ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದರೂ ಬಹುಜನರನ್ನು ತಲುಪಿ ಇನ್ನೂ ಮತ್ತಷ್ಟು ಸಾಧನೆಮಾಡುವ ಮುನ್ನವೇ ಅವರನ್ನು ವಿಧಿ ಬರಹೇಳಿದೆ-ಅವರು ತೆರಳಿದ್ದಾರೆ. ಈ ಈರ್ವರ ಬ್ಲಾಗುಗಳೂ ಇನ್ನೂ ಜೀವಂತವೇ. ನಿನ್ನೆ ಒಮ್ಮೆ ’ಶೃಂಗೇರಿ ಕಾರ್ಟೂನ್’ ಬ್ಲಾಗ್ ತೆರೆದು ನೋಡಿದೆ. ಮರೆಯಲಾಗದ ಮನುಷ್ಯ! ನಂಬಲಾಗದ ಘಟನೆ. ಡಾ| ರಾಜ್ ಕುಮಾರ ಗತಿಸಿದರೇನಾಯ್ತು? ಅವರು ಚಲನಚಿತ್ರಗಳಲ್ಲಿ ಇನ್ನೂ ಅಮರ, ಅದೇ ರೀತಿ ವಿ.ಎಸ್. ಆಚಾರ್ಯರು ರಾಜಕೀಯ ಸೇವೆಗಳಿಂದ ಅಮರರು, ಸತೀಶ್ ತಮ್ಮ ಕಾರ್ಟೂನುಗಳಿಂದ ಅಮರರು. ಆದರೂ ಎಳವೆಯಲ್ಲೇ ಹೋಗಿಬಿಟ್ಟರೆ ಅದು ತರುವ ಮಾನವಸಹಜ ನೋವು ತುಸು ಅಸಹನೀಯ. ಅದು ಮೋಹವೋ ವ್ಯಾಮೋಹವೋ ಭಾವವೋ ಬಂಧವೋ ಯಾವುದೇ ಆಗಿರಲಿ, ಬೋಗಿಯಲ್ಲಿ ಹೊರಟ ಸಹಪ್ರಯಾಣಿಕನೊಬ್ಬ ಗಮ್ಯಕ್ಕೂ ಮೊದಲೇ ಕೈಬೀಸಿ ಎಲ್ಲಿಗೋ ಇಳಿದು ಹೋದಂತೇ, ನೋಡುತ್ತಿರುವ ನಾಟಕದ ಪಾತ್ರಧಾರಿಯೊಬ್ಬ ಪಾತ್ರಮುಗಿಯುವ ಮುನ್ನವೇ ಬಣ್ಣದಮನೆಯಲ್ಲೆಲ್ಲೋ ಅಡಗಿಹೋದಂತೇ  ಎಲ್ಲಿಗೆ ಹೋಗುವರೆಂಬ ಗುರುತು ಸಿಗಲಾರದ ಜಾಗಕ್ಕೆ ತೆರಳಿಬಿಡುವ ಈ ಸನ್ನಿವೇಶದಲ್ಲಿ ಮಾನವಸಹಜ ಅಗಲಿರಲಾರದ ಆಪ್ತ ಭಾವಗಳು ಎದ್ದೆದ್ದು ಕುಣಿಯುತ್ತವೆ, ನಮ್ಮರಿವಿಗೇ ಇರದೇ ಕಣ್ಣಾಲಿಗಳು ತುಂಬಿ ನೀರು ಹೊರಹರಿಯುತ್ತದೆ. ಇದಲ್ಲವೇ ಈ ಬದುಕಿನ ಬಿಸಿಲು ಬೆಳದಿಂಗಳು ? ನಮಸ್ಕಾರ.     


Wednesday, September 26, 2012

ಕಾರ್ಯಗತಗೊಳಿಸುವ ಮುನ್ನ ಯೋಚನೆಯಿರಲಿ; ವಿವೇಚನೆಯಿರಲಿ


ಚಿತ್ರಋಣ: ಅಂತರ್ಜಾಲ
ಕಾರ್ಯಗತಗೊಳಿಸುವ ಮುನ್ನ ಯೋಚನೆಯಿರಲಿ; ವಿವೇಚನೆಯಿರಲಿ

ಒಂದೂರಲ್ಲಿ ಅಗಸನೊಬ್ಬನಿದ್ದ. ಆತ ಕತ್ತೆಯೊಂದನ್ನು ಸಾಕಿದ್ದ. ಅದರ ಹೆಸರು ಉದ್ಧಟ. ಉದ್ಧಟ ಕೃಶಕಾಯನಾಗಿದ್ದ. ಪ್ರತಿನಿತ್ಯ ಒಡೆಯನ ಕೆಲಸದಲ್ಲಿ ಮಣಭಾರದ ಬಟ್ಟೆಯ ಮೂಟೆಗಳನ್ನು ಹೊತ್ತು ಸಹಕರಿಸುತ್ತಿದ್ದ-ಉದ್ಧಟ. ಒಡೆಯ ನೀಡುವ ಆಹಾರ ಆತನಿಗೆ ಸಾಲುತ್ತಿರಲಿಲ್ಲ; ಈ ವಿಷಯದಲ್ಲಿ ಉದ್ಧಟ ಮನದಲ್ಲೇ ನೊಂದಿದ್ದ. ರಾತ್ರಿಯ ಹೊತ್ತು ಸುತ್ತಲ ಹೊಲಗದ್ದೆಗಳಿಗೆ ಹೋಗಿ ಸಿಕ್ಕಿದ್ದನ್ನು ಕದ್ದು ತಿನ್ನುತ್ತಿದ್ದ. ಬೆಳಗಾಗುವುದರೊಳಗೆ ಮನೆಗೆ ಬಂದುಬಿಡುತ್ತಿದ್ದ. ಒಮ್ಮೆ ಹೀಗೇ ರಾತ್ರಿ ಹೊರಟಾಗ ನರಿಯಣ್ಣನೊಬ್ಬ ಆತನಿಗೆ ಎದುರಾದ. ನರಿಗೂ ಹೊಟ್ಟೆ ಹಸಿದಿತ್ತು. ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳುವ ಗುರಿಹೊಂದಿದ್ದರಿಂದ ಇದೊಂಥರಾ ||ಸಮಾನ ಶೀಲೇಷು ವ್ಯಸನೇಷು ಸಖ್ಯಮ್|| ಅನ್ನೋ ಹಾಗೇ ಇಬ್ಬರೂ ಸ್ನೇಹಿತರಾದರು. ಆಹಾರ ಹುಡುಕುತ್ತಾ ಹೋದವು. ಅಲ್ಲೊಂದು ಸೌತೇ ತೋಟ ಕಂಡಿತು. ಬೇಲಿಹಾರಿ ನಿಧಾನಕ್ಕೆ ಒಳಗೆ ಹೋಗಿ ಕತ್ತಲಲ್ಲೇ ಸೌತೇಕಾಯಿಗಳನ್ನು ಹೊಟ್ಟೆತುಂಬಾ ಮೆದ್ದವು. ಉದ್ಧಟನಿಗೆ ಅಪಾರ ಸಂತೋಷವಾಯ್ತು. "ದಿನಾ ಇಲ್ಲೇ ಬರೋಣ" ಎಂದು ನರಿಯಣ್ಣನ ಕೂಡ ಹೇಳಿದ. ನರಿಯಣ್ಣಕೂಡ ತಲೆ ಅಲ್ಲಾಡಿಸಿದ. 

ಕಾಲ ಕಳಿಯಿತು. ಕೆಲವೇ ದಿನಗಳಲ್ಲಿ ಉದ್ಧಟ ಮೈಕೈ ತುಂಬಿಕೊಂಡು ಒಳ್ಳೇ ದಪ್ಪಗಾದ; ದಪ್ಪಗಾಗಿದ್ದಕ್ಕೆ ಕಾರಣಮಾತ್ರ ಯಾರಿಗೂ ತಿಳಿಯಲಿಲ್ಲ! ಹೀಗೇ ಒಂದು ರಾತ್ರಿ ಯಥಾವತ್ತಾಗಿ ಸೌತೇತೋಟಕ್ಕೆ ಹೋದ. ಸ್ನೇಹಿತ ನರಿಯಣ್ಣನೂ ಜೊತೆಯಾದ. ಇಬ್ಬರೂ ಯಥೇಚ್ಛ ಸೌತೇಕಾಯಿ ಕಬಳಿಸಿ ತೇಗಿದವು. ಹೊಟ್ಟೆತುಂಬಿದಮೇಲೆ ಉದ್ಧಟನಿಗೆ ಎಲ್ಲಿಲ್ಲದ ಆನಂದ ಉಕ್ಕೇರಿ ಹಾಡುವ-ನರ್ತಿಸುವ ಮನಸ್ಸಾಯ್ತು! ಅದನ್ನಾತ ಸ್ನೇಹಿತ ನರಿಯಣ್ಣನ ಹತ್ತಿರ ಹೇಳಿಕೊಂಡ. ನರಿಯಣ್ಣ "ಅಯ್ಯೋ ಪುಣ್ಯಾತ್ಮ, ಅಕಸ್ಮಾತ್ ನೀನು ಹಾಡತೊಡಗಿದರೆ  ಕಾಯಲು ಹೊಲದಲ್ಲಿ ಮಲಗಿರುವ ಕಾವಾಲುಗಾರನಿಗೆ ಎಚ್ಚರವಾಗುತ್ತದೆ. ಎಚ್ಚರಗೊಂಡ ಕಾವಲುಗಾರ ಅಟ್ಟಿಸಿಕೊಂಡು ಬಂದು ನಮ್ಮನ್ನು ಥಳಿಸಿ ಸಾಯಿಸುತ್ತಾನೆ. ಕೇಳು ನನ್ನ ಮಾತು. ನೀನು ಇನ್ನೆಲ್ಲಾದರೂ ಹಾಡುವೆಯಂತೆ, ಇಲ್ಲಿಮಾತ್ರ ಹಾಡಬೇಡ" ಎಂದು ಸಲಹೆ ನೀಡಿದ. ಉದ್ಧಟನಿಗೆ ನರಿಯಣ್ಣನ ಮಾತು ಹಿಡಿಸಲಿಲ್ಲ. ಅವನ ಮನಸ್ಸಿನಲ್ಲಿ ಹತ್ತಿಕ್ಕಲಾರದಂಥಾ ಹಾಡುವ ಆಸೆ ಮೇಲೆದ್ದುಬಂದಿತ್ತು. ಹಾಡದೇ ತಾಳಲಾರೆನೆಂದ. ಮತ್ತೆ ನರಿಯಣ್ಣ "ಬೇಡಾ" ಎಂದ. ಇದು ಸಾಕಷ್ಟು ಸರ್ತಿ ನಡೆಯಿತು. ಎಷ್ಟೇ ಬೇಡಾ ಎಂದರೂ "ನನಗಾದ ಸಂತೋಷವನ್ನು ಅನುಭವಿಸಲು ಹಾಡುವುದೇ ಸೈ ಎಂದ ಉದ್ಧಟ ಈಗ ಹಾಡಿಯೇ ಬಿಡುತ್ತೇನೆ" ಎಂದ. " ಆಯ್ತು ಮಾರಾಯಾ, ಒಂದು ಕೆಲಸಮಾಡು, ನೀನು ಹಾಡುವುದಕ್ಕೂ ಮುನ್ನ ನಾನು ಬೇಲಿಯನ್ನು ಹಾರಿ ಹೊಲದಿಂದ ಹೊರಕ್ಕೆ ಹೋಗಿ ನಿಂತು ನಿನಗಾಗಿ ಕಾಯುತ್ತೇನೆ. ನಾನು ಹಾಗೆ ಆಚೆಹೋದಮೇಲೆ ನೀನು ಹಾಡಬಹುದು" ಎಂದ ನರಿಯಣ್ಣ ಉದ್ಧಟನ ಉತ್ತರಕ್ಕೂ ಕಾಯದೇ ಬೇಲಿ ಹಾರಿ ಆಚೆ ನಿಂತ.

ಉದ್ಧಟನ ಸಂಗೀತ ಕಛೇರಿ ಆರಂಭವಾಯ್ತು. ಆಹಹಾ ಈ ಜಗತ್ತೆಷ್ಟು ಸುಂದರ ಎಂದುಕೊಂಡು ಉದ್ಧಟ ಹಾಡೇ ಹಾಡಿದ. ಹೊಲದ ಇನ್ನೊಂದು ಕಡೆಯಲ್ಲಿ ಮಲಗಿದ್ದ ಕಾವಲುಗಾರನಿಗೆ ವಿಚಿತ್ರ ಕೂಗು ಕೇಳಿ ಎಚ್ಚರವಾಯ್ತು. ಆಲಿಸುತ್ತಾನೆ ಗರ್ದಭ ಸಂಗೀತರಸಧಾರೆ ! "ನಮ್ಮ ಸೌತೇ ತೋಟದಲ್ಲಿ ಇಷ್ಟು ದಿನ ಕಾಯಿಗಳನ್ನು ತಿನ್ನುತ್ತಿದ್ದ ಕತ್ತೆ ನೀನೇಯೋ ಇರು ಮಾಡಿಸ್ತೀನಿ" ಎಂದು ಹಲ್ಲುಕಡಿದ ಕಾವಲುಗಾರ ಕೈಯ್ಯಲ್ಲಿ ದೊಣ್ಣೆಹಿಡಿದು ಬೆಕ್ಕಿನ ಹೆಜ್ಜೆಯಿಟ್ಟು ಉದ್ಧಟ ಇರುವೆಡೆಗೆ ಬಂದ. ಹಾಡುವಿಕೆಯಲ್ಲಿ ತನ್ಮಯನಾಗಿ ಲೋಕವನ್ನೇ ಮರೆತಿದ್ದ ಉದ್ಧಟನಿಗೆ ಸೊಂಟ ಮುರಿದುಹೋಗುವ ಹಾಗೇ ನಾಕು ರುಯ್ಯರುಯ್ಯನೇ ಬಿದ್ದಾಗಲೇ ಎಚ್ಚರ! " ಅಯ್ಯಯ್ಯೋ ಸಾಕಪ್ಪಾ ಸಾಕು ಸಾಕಪ್ಪಾ ಸಾಕು" ಎಂದು ತನ್ನದೇ ಕೂಗಿನಲ್ಲಿ ಹೇಳಿದ ಉದ್ಧಟನಿಗೆ ಜೀವ ಉಳಿದಿದ್ದೇ ದೊಡ್ಡದು. "ಇನ್ನೇನಾದ್ರೂ ಬಂದ್ರೆ ಜೀವ ಸಹಿತ ಬಿಡೋದಿಲ್ಲ ನಿನ್ನ, ಬಾ ಮತ್ತೆ ಮಾಡ್ತೀನಿ" ಎಂದ ಕಾವಲುಗಾರ ಮಾತನ್ನು ಕೇಳುತ್ತಾ, ತಾಳಲಾರದ ನೋವನ್ನು ಹೇಗೋ ಸಹಿಸಿಕೊಂಡು ಸಾವರಿಸಿಕೊಳ್ಳುತ್ತಾ ಬೇಲಿಯ ಹೊರಗೆ ಬಂದ ಉದ್ಧಟನನ್ನು ಬೇಸರದಿಂದಲೇ ನೋಡಿದ ನರಿಯಣ್ಣ. "ಗೆಳೆಯಾ, ನೋಡಪ್ಪಾ , ನಾನು ನಿನಗೆ ಸಾಕಷ್ಟು ಸಲ ಹೇಳಿದ್ದೆ. ಈಗ ಇಲ್ಲಿ ಹಾಡಬೇಡ, ಕಾವಲುಗಾರ ಬಿಡುವುದಿಲ್ಲಾ ಎಂದು, ನೀನು ಕೇಳಲಿಲ್ಲ. ನಾಳೆಯಿಂದ ಹೊಟ್ಟೆಗೂ ಇಲ್ಲ" ಎಂದ. ನರಿಯಣ್ಣನ ಮಾತು ಈಗ ನಿಜವೆನಿಸಿತು ಉದ್ಧಟನಿಗೆ. ತಪ್ಪುಮಾಡಿಬಿಟ್ಟೆ ಎನಿಸಿದ್ದರೂ ಗೆಳೆಯನ ಸಲಹೆಯನ್ನು ಆಲೋಚಿಸಿ ನೋಡದೇ ಏಕಾಏಕಿ ಹಾಡಲು ತೀರ್ಮಾನಿಸಿ ಹಾಡಿಬಿಟ್ಟಿದ್ದ. ಹಾಡಿದ್ದಕ್ಕೆ ವಾರ ಸಾಕಾಗುವಷ್ಟು ಅಸಾಧ್ಯ ನೋವು! ರಾತ್ರಿ ಕಳೆದು ಬೆಳಗಾದರೆ ಮತ್ತೆ ಮೂಟೆ ಹೊರಬೇಕು. ಉದ್ಧಟನ ಕಣ್ಣಲ್ಲಿ ಧಾರಾಕಾರ ನೀರು. ಇನ್ನುಮುಂದೆ ಯೋಚಿಸದೇ ಏನನ್ನೂ ಕಾರ್ಯಗತಗೊಳಿಸುವುದಿಲ್ಲಾ ಎಂದು ಮನದಲ್ಲೇ ಅಂದುಕೊಂಡನಾತ.

ವಿದೇಶೀ ಬಂಡವಾಳ ಧಾರಾಳವಾಗಿ ಬರುವಾಗ, ವಿದೇಶೀ ಮಳಿಗೆಗಳು ಭಾರತಕ್ಕೆ ಲಗ್ಗೆ ಇಡಲು ಪ್ರಯತ್ನಿಸುತ್ತಿರುವಾಗ ಹಿಂದೆಮುಂದೆ ಯೋಚಿಸದೇ ಕಾಂಗೈ ಸರಕಾರ ಅನುಮತಿಸುತ್ತಿರುವುದನ್ನು ನೋಡಿದರೆ ಈ ಕಥೆಯ ನೆನಪಾಗುತ್ತದೆ. ಉದ್ಧಟನ ಪಟ್ಟವನ್ನು ಸನ್ಮಾನ್ಯ ಮನಮೋಹನ ಸಿಂಘರಿಗೆ ಕೊಡುವುದೋ ಸೋನಿಯಾ ಗಾಂಧಿಗೆ ಕೊಡುವುದೋ ಇನ್ನೂ ತೊಳಲಾಟದಲ್ಲಿದ್ದೇನೆ! ಖೋತಾಬಿದ್ದ ಖಜಾನೆ ಭರ್ತಿಗೆ ದಾರಿಯನ್ನು ಕಂಡ ಭರದಲ್ಲಿ ’ಅನುಮತಿಸುತ್ತೇವೆ’ ಎಂಬ ಹಾಡುಹಾಡುತ್ತಿದ್ದಾರೆ. ಇಲ್ಲಿ ಭಾರತವೇ ಸೌತೇ ತೋಟ, ಪ್ರಜೆಗಳೇ ಕಾವಲುಗಾರರು. ಪ್ರಜೆಗಳು ನಿದ್ದೆಮಾಡುತ್ತಿದ್ದಾರೆ ಎಂಬುದಕ್ಕೆ ಇಂಧನ ತೈಲಗಳೂ ಸೇರಿದಂತೇ ಎಲ್ಲದರ ಬೆಲೆಯೇರಿಕೆಯೇ ಸಾಕ್ಷಿಯಾಗುತ್ತದೆ; ಈ ಬೆಲೆಯೇರಿಕೆ ಒಂದಲ್ಲಾ ಎರಡಲ್ಲಾ...ತಿಂಗಳಿಗೊಮ್ಮೆಯಂತೂ ಕಾಯಮ್ಮಾಗಿ ಏರುತ್ತಲೇ ಇದೆ. ಸಿಂಘರು ಹಣದುಬ್ಬರದ ಕಾರಣ ಕೊಡುತ್ತಾರೆ. ಭಾರತೀಯರು ಯೋಚಿಸಬೇಕಾದ ಕಾಲ ಬಂದಿದೆ-ಇನ್ನೂ ಇಂತಹ ಕೆಟ್ಟ ಆಡಳಿತ ನೀಡುವ ಬ್ರಷ್ಟ ರಾಜಕಾರಣಿಗಳು ನಮಗೆ ಬೇಕೇ? ಇಲ್ಲಾ ದೇಶಭಕ್ತರನ್ನು ಅನುಮೋದಿಸಿ ಅವರಿಂದ ಹೊಸದೊಂದು ಸರಕಾರ ರಚಯಿತವಾಗುವುದಕ್ಕೆ ಅನುಕೂಲ ಕಲ್ಪಿಸಿಕೊಡಬೇಕೇ ಎಂಬುದನ್ನು ನಿಶ್ಚಿತವಾಗಿಯೂ ಚಿಂತಿಸಬೇಕಾಗಿದೆ.

ವಿದೇಶೀಯರ್ಯಾರೋ ಬರುತ್ತಾರೆ-ನಮ್ಮ ಉದ್ಧಾರಕ್ಕಾಗಿ ಬರುತ್ತಾರೆ ಎಂಬುದು ತಪ್ಪುಕಲ್ಪನೆ. ಕೇವಲ ೫-೬ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯ ಸ್ಥಿತಿ ಬದಲಾಗಿ ಹೋಗುತ್ತದೆ; ಸುಮಾರು ೨.೫ ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಅವರನ್ನು ಅವಲಂಬಿಸಿದ ಜನ ಸೇರಿದಂತೇ ಒಟ್ಟೂ ೨೦ ಕೋಟಿ ಜನಸಂಖ್ಯೆ ಉದ್ಯೋಗ ರಹಿತವಾಗುತ್ತದೆ. ಎಲ್ಲಿಗೆ ಹೋಗಬೇಕು? ಯಾವ ರೀತಿಯಲ್ಲಿ ಅವರು ದುಡಿಮೆ ಮಾಡಬೇಕು? ಈಗಾಗಲೇ ಗೃಹಕೈಗಾರಿಕೆಗಳು, ಕುಲಕಸುಬುಗಳೂ ನೆಲಕಚ್ಚಿವೆ, ಸಣ್ಣಕೈಗಾರಿಕೆಗಳಿಗೂ ಜಾಗತಿಕ ಮಾರುಕಟ್ಟೆಯ ಪೈಪೋಟಿಯ ಬಿಸಿ ತಟ್ಟಿದೆ. ವಿದೇಶೀ ಕಂಪನಿಗಳು ಆರಂಭದಲ್ಲಿ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಬಹುದು, ಆದರೆ ಅದು ಶಾಶ್ವತವಲ್ಲ, ಕಾಲಾನಂತರ ಬೆಲೆಯಲ್ಲಿ ಹಿಡಿತವಿರುವುದಿಲ್ಲ; ಅವರು ಹೇಳಿದಷ್ಟು ಕೊಟ್ಟು ಖರೀದಿಸಬೇಕಾಗುತ್ತದೆ ಯಾಕೆಂದರೆ ಇನ್ನೆಲ್ಲೂ ಪರ್ಯಾಯ ವ್ಯಾಪಾರಸ್ಥರು ಆಗ ಇರುವುದಿಲ್ಲ!  

ಇನ್ನೊಂದು ಕಥೆಯೊಂದಿಗೆ ಈ ಕಥೆಯನ್ನು ಮುಕ್ತಾಯಮಾಡಿದರೆ ಒಳಿತೆನಿಸುತ್ತದೆ, ಇದು ನೀವು ಕೇಳಿದ್ದೇ ಕಥೆ: ಒಂದಾನೊಂದು ಕಾಲದಲ್ಲಿ ಅನೇಕ ಪಾರಿವಾಳಗಳಿದ್ದ ಒಂದು ಗುಂಪು ಆಹಾರವನ್ನರಸಿ ಹೊರಟಿತ್ತು. ಅವುಗಳಲ್ಲಿನ ರಾಜ ಅವುಗಳನ್ನು ನಿರ್ದೇಶಿಸುತ್ತಿದ್ದ. ಬಹುದೂರ ಹಾರಿದಣಿದ ಪಾರಿವಾಳಗಳಿಗೆ ಆಹಾರ ಸಿಗಲೇ ಇಲ್ಲ. ಸುಸ್ತಾಗಿ ಕುಳಿತ ಅವುಗಳಿಗೆ "ಇಷ್ಟೆಲ್ಲಾ ದೂರ ಕ್ರಮಿಸಿದ್ದೇವೆ, ತುಸುದೂರ ಹಾರಿದರೆ ಏನಾದರೂ ಸಿಗಬಹುದೆಂಬ ವಿಶ್ವಾಸ ನನಗಿದೆ, ಪ್ರಯತ್ನಿಸಿ" ಎಂದ ರಾಜನ ಮಾತಿಗೆ ಅವು ಒಪ್ಪಿ ಮತ್ತೆ ಹಾರಿದವು. ದೂರದಲ್ಲಿ ಆಲದಮರದ ಕೆಳಗಡೆ ಕಾಳುಗಳು ಹೇರಳವಾಗಿ ಬಿದ್ದಿದ್ದನ್ನು ಕಂಡವು. ಅಲ್ಲಿಗೆ ಧಾವಿಸಿ ಇಳಿದು ಕಾಳುತಿನ್ನಬೇಕೆನ್ನುವಷ್ಟರಲ್ಲಿ ಮೇಲಿನಿಂದ ದೊಡ್ಡದಾದ ಬಲೆಯೊಂದು ಬಿತ್ತು! ಕ್ಷಣಮಾತ್ರದಲ್ಲಿ ಅವು ಬೇಟೇಗಾರನ ಬಲೆಯಲ್ಲಿ ಸಿಕ್ಕಿಬಿದ್ದಿದ್ದವು. ಬೇಟೇಗಾರ ದೂರದಲ್ಲಿ ನಡೆದುಬರುವುದು ಕಾಣಿಸುತ್ತಿತ್ತು. ಇನ್ನೇನು ಎಲ್ಲಾ ಪಾರಿವಾಳಗಳೂ ತಮ್ಮ ಕಥೆ ಮುಗಿಯಿತು ಎಂದುಕೊಂಡವು.

ಪಾರಿವಾಳಗಳ ರಾಜ ಬಹಳ ಚಾಣಾಕ್ಷನಾಗಿದ್ದ. ಎಂತಹ ಗಂಡಾಂತರ ಪ್ರಸಂಗಗಳಲ್ಲಿಯೂ ವಿವೇಚಿಸಿ ನಡೆಯುವ ಚಾಕಚಕ್ಯತೆಯನ್ನು ಆತ ಹೊಂದಿದ್ದ. ಆತ ಹೇಳಿದ "ನೋಡೀ ಗೆಳೆಯರೇ, ನಾವೆಲ್ಲಾ ಬದುಕಲು ದಾರಿಯೊಂದೇ ಇದೆ. ನಾವು ಎಲ್ಲರೂ ಒಟ್ಟಾಗಿ ಒಮ್ಮೆಲೇ ಈ ಬಲೆಯನ್ನು ಹೊತ್ತುಕೊಂಡೇ ಹಾರಬೇಕು. ಹಾಗಾದರೆ ಮಾತ್ರ ನಾವು ತಪ್ಪಿಸಿಕೊಳ್ಳಲು ಸಾಧ್ಯ." ರಾಜನ ಮಾತು ಮತ್ತು ಸನ್ನೆಯನ್ನು ಅರಿತ ಪಾರಿವಾಳದ ತಂಡ ಹಾಗೇ ಮಾಡಿತು. ಬೇಟೇಗಾರ ಬಲೆಯನ್ನೇ ಎತ್ತಿಕೊಂಡು ಹಾರುತ್ತಿರುವ ಪಾರಿವಾಳಗಳನ್ನು ನೋಡಿ ಹುಚ್ಚನಂತೇ ಅರಚಿದ, ಅವುಗಳ ಬೆನ್ನಹಿಂದೇ ಓಡತೊಡಗಿದ. ಪಾರಿವಾಳಗಳು ಎಲ್ಲೂ ಕೆಳಗಿಳಿಯಲಿಲ್ಲ. ಬೆಟ್ಟ ಕಣಿವೆಗಳನ್ನು ದಾಟಿ ಬಹುದೂರ ಬಂದು ಇನ್ನೇನು ಬೇಟೇಗಾರ ತನ್ನ ಪ್ರಯತ್ನ ಕೈಬಿಟ್ಟ ಎಂಬುದು ಖಾತ್ರಿಯಾದಾಗ ಪಾರಿವಾಳಗಳ ರಾಜ ಹೇಳಿದ" ಇನ್ನು ನಾವು ತುಸು ವಿಶ್ರಮಿಸಿಕೊಂಡು ಪಕ್ಕದ ಪಟ್ಟಣಕ್ಕೆ ಹೋಗೋಣ, ಅಲ್ಲಿ ನನ್ನ ಮಿತ್ರ ಇಲಿಯೊಬ್ಬನಿದ್ದಾನೆ. ಆತ ಬಲೆಯನ್ನು ಕತ್ತರಿಸಿ ನಮ್ಮನ್ನು ಪಾರುಮಾಡುತ್ತಾನೆ" ಕೆಲಹೊತ್ತಿನ ಬಳಿಕ ಅವು ಹಾಗೇ ಮಾಡಿದವು. ಎತ್ತರದ ದೇವಸ್ಥಾನವೊಂದರ ಪಕ್ಕದ ಬಿಲದೆದುರು ದೊಪ್ಪೆಂದು ಹಾರಿ ಕುಳಿತ ಸದ್ದಿಗೆ ಇಲಿ ಒಳಸೇರಿಕೊಂಡಿತು.

 " ಅರೇ ಮಿತ್ರಾ ಇಲಿಯಾ, ನಾನು ಬಂದಿದ್ದೇನೆ...ಪಾರಿವಾಳಗಳ ರಾಜ" ಎಂಬ ಮಾತು ಕೇಳಿ ಇಲಿ ಹೊರಗೆ ಬಂತು. " ಅಯ್ಯೋ ಮಿತ್ರಾ ನೀನು ಇಲ್ಲಿ ? ಇದೆಲ್ಲಾ ಹೇಗೆ?"-ಕೇಳಿತು ಇಲಿ. ಇಲಿಗೆ ನಡೆದ ವೃತ್ತಾಂತವನ್ನು ಅರುಹಿ, ಬಲೆಯನ್ನು ಬಾಯಿಂದ ಕಡಿದು ತಮ್ಮನ್ನು ಬಿಡಿಸುವಂತೇ ಕೇಳಿತು ಪಾರಿವಾಳಗಳ ರಾಜ. ಒಪ್ಪಿದ ಇಲಿ ಪಾರಿವಾಳಗಳ ರಾಜ ಕುಳಿತ ಕಡೆಯಲ್ಲಿ ಬಲೆಯನ್ನು ಕಡಿಯತೊಡಗಿತು. "ಹೇಯ್ ಮೊದಲು ನನ್ನ ಅನುಚರರನ್ನು ಮುಕ್ತಗೊಳಿಸು...ರಾಜನಾದವನಿಗೆ ಅನುಚರರು ಚೆನ್ನಾಗಿದ್ದರೇ ತೃಪ್ತಿ, ಅದಿಲ್ಲದೇ ರಾಜ ಹೇಗೆ ಸಂತಸದಿಂದಿದ್ದಾನು? ನನ್ನ ಮಿತ್ರರನ್ನೇ ಮೊದಲು ಮುಕ್ತಗೊಳಿಸು... ಎಲ್ಲರನ್ನೂ ಬಿಡಿಸಿದಮೇಲೆ ನನ್ನನ್ನು ಬಿಡಿಸು."  ಪಾರಿವಾಳದ ರಾಜನ ಮಾತನ್ನು ಕೇಳಿದ ಇಲಿ ಗೆಳೆಯನ ಔದಾರ್ಯವನ್ನೂ ಆದರ್ಶವನ್ನೂ ಕೊಂಡಾಡಿತು ಮತ್ತು ಇತರ ಪಾರಿವಾಳಗಳು ಇದ್ದೆಡೆ ಬಲೆಯನ್ನು ಮೊದಲು ಕಡಿದು ಅವುಗಳನ್ನು ಬಿಡುಗಡೆಗೊಳಿಸಿತು. ಕೊನೆಯಲ್ಲಿ ರಾಜನೂ ಆಚೆಬಂದ. ಪಾರಿವಾಳಗಳೆಲ್ಲಾ ಇಲಿಗೆ ತಮ್ಮ ಅನಂತ ಕೃತಜ್ಞತೆಗಳನ್ನು ತಿಳಿಸಿ ಅಲ್ಲಿಂದ ತಮ್ಮೂರ ಕಡೆಗೆ ಬೀಳ್ಕೊಂಡವು.

ನೋಡುವುದಕ್ಕೆ ಅಂತಹ ಮಹಾ ದೊಡ್ಡದೇನೂ ಅಲ್ಲದಿದ್ದರೂ ವಿಷ್ಣುಶರ್ಮನೆಂಬಾತ ಬರೆದ ’ಪಂಚತಂತ್ರ’ದ ಇಂತಹ ಕಥೆಗಳು ಇವತ್ತಿಗೂ ನೀತಿಬೋಧಕವೇ. ಈ ಕೊನೆಯ ಕಥೆಯಲ್ಲಿ ಪಾರಿವಾಳಗಳು ಈ ದೇಶದ ಪ್ರಜೆಗಳು. ಬೇಟೇಗಾರರು ವಿದೇಶೀ ವ್ಯವಹಾರಸ್ಥರು! ನಮ್ಮಲ್ಲಿ ಹಾಲಿ ಇರುವ ರಾಜರಿಗೆ ತಲೆ ಸರಿ ಇರುವಹಾಗೇ ಕಾಣುತ್ತಿಲ್ಲ! ರಾಜರ ಹುಡುಕಾಟದಲ್ಲೇ ನಾವಿದ್ದೇವೆ ಎಂದರೆ ತಪ್ಪಲ್ಲ. ನಮ್ಮ ಸಹಾಯಕ್ಕೆ ಬರುವುವುದು ಚುನಾವಣೆ ಎಂಬ ಇಲಿಮಾತ್ರ. ಆದರೆ ಚುನಾವಣಾ ಇಲಿಯನ್ನು ತಲ್ಪುವವರೆಗೆ ಹಾರುವುದಕ್ಕಾಗಿ ಆದೇಶಿಸುವ ರಾಜ ನಮಗಿಲ್ಲದ ನಿಮಿತ್ತ ನಮಗೆ ನಾವೇ ಹೇಳಿಕೊಂಡು ಒಟ್ಟಿಗೇ ಹಾರಬೇಕಾಗಿದೆ; ವಿದೇಶೀಯರು ಬೀಸುವ ಬಲೆಯಿಂದ ತಪ್ಪಿಸಿಕೊಳ್ಳಬೇಕಾಗಿದೆ; ಬದುಕಿಕೊಳ್ಳಬೇಕಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಈ ದೇಶದ ಆರ್ಥಿಕ ಸ್ಥಿತಿಯನ್ನೇ ಅಡವಿಡಲು ಮುಂದಾಗುತ್ತಿರುವ ಜನರನ್ನು ತಹಬಂದಿಗೆ ತರುವುದು ನಮ್ಮೆಲ್ಲರ ಆದ್ಯತೆಯಾಗಬೇಕಾಗಿದೆ. ಭಾರತ ಬಡರಾಷ್ಟ್ರವಲ್ಲ, ಇಲ್ಲಿ ಬೇಕಾದಷ್ಟು ಹಣವಿದೆ-ಅದು ಕೆಲವೇ ಜನರ ಸೊತ್ತಾಗಿ ಸ್ವಿಸ್ ಬ್ಯಾಂಕಿನಲ್ಲಿದೆ. ಮೇಲಾಗಿ ದೇಶವ್ಯಾಪೀ ತುಂಬಿಕೊಂಡ ದೇಶದ್ರೋಹಿಗಳ ತಂಡ ನಕಲೀ ನೋಟುಗಳನ್ನು ಹೇರಳವಾಗಿ ಚಾಲನೆಗೆ ಬಿಟ್ಟಿದೆ. ಪಾಕಿಸ್ತಾನ ಪ್ರೇರಿತ ಭಾರತೀಯ ಮೂಲದ ತಂಡಗಳು ಬಾಂಗ್ಲಾದ ಕಡೆಯಿಂದ ಖೋಟಾನೋಟುಗಳನ್ನು ಒಳಕ್ಕೆ ತರುತ್ತಿದ್ದಾವೆ! ಜೊತೆಗೇ ಇರುವ ಹಲವು ವ್ಯಾಘ್ರಗಳ ಮುಖಮಾತ್ರ ಗೋವಿನದಾಗಿದೆ! ಎಲ್ಲಿಯವರೆಗೆ ಇದನ್ನೆಲ್ಲಾ ನಿಲ್ಲಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೂ ಹಣದುಬ್ಬರ ಕಮ್ಮಿ ಆಗುವುದಿಲ್ಲ. ಎಲ್ಲಿಯವರೆಗೆ ಬ್ರಷ್ಟಾಚಾರ ಮತ್ತು ವೋಟ್ ಬ್ಯಾಂಕ್ ರಾಜಕಾರಣ ನಿಲ್ಲುವುದಿಲ್ಲವೋ ಅಲ್ಲೀವರೆಗೆ ಇಂತಹ ಕೃತ್ಯಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ! ನಿಜವಾದ ದೇಶಭಕ್ತರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಸಿಕ್ಕಿದ ಸ್ವಾತಂತ್ರ ಮತ್ತೆ ಪಾರತಂತ್ರ್ಯವಾಗಲಿದೆ. ಕೇವಲ ನಮ್ಮ ವೈಯ್ಯಕ್ತಿಕ ಹಿತಾಸಕ್ತಿಗಳನ್ನೊಂದೇ ಪರಿಗಣಿಸದೇ ಸಮಷ್ಟಿಯಲ್ಲಿ ದೇಶಪ್ರಜ್ಞೆ ಜಾಗೃತವಾಗಬೇಕಾಗಿದೆ. ದೇಶಭಕ್ತರೇ ನೀವು ಮಾತಾಡಿ, ಯಾರ ಕೈಗೆ ನಮ್ಮ ಮುಂದಿನ ಆಳ್ವಿಕೆ ನೀಡಬೇಕು? ಈಗಿರುವ[ಎಲ್ಲಾಪಕ್ಷಗಳಲ್ಲೂ] ಕಳ್ಳರೇ ಬೇಕೇ? ಅಥವಾ ದೇಶಭಕ್ತರ ಹೊಸದೊಂದು ದಂಡು ಸಿದ್ಧವಾಗಬೇಕೆ? ಸಮಯ ಕಡಿಮೆ ಇದೆ; ನಿರ್ಧಾರ ತ್ವರಿತವಾಗಿ ಆಗಬೇಕಾಗಿದೆ. 


Monday, September 24, 2012

ಬೇಕು ಕೃಷ್ಣಚಂದ್ರಮ

 ಚಿತ್ರಋಣ : ಅಂತರ್ಜಾಲ
ಬೇಕು ಕೃಷ್ಣಚಂದ್ರಮ 

ಬೇಕು ಬೇಕು ಬೇಕು ರಾಧೆ ಬೇಕು ಕೃಷ್ಣಚಂದ್ರಮ
ಸಾಕೆನ್ನಲು ಸಾಧ್ಯವಿಲ್ಲ ಲೋಕಕದುವೆ ಸಂಭ್ರಮ !
ನಾಕದಿಂದ ಭುವಿಗೆ ಬಂದು ಆ ಕರುಣಿಯು ರಥದಿ ನಿಂದು
ಚಾಕರಿಗಳ ಬಿಡಿಸಿ ಪೇಳ್ದ ಸಾಕಾರ ವಿಹಂಗಮ || ಪ ||

ಪೀಕುತಿರುವ ದುಷ್ಟಜನರ ನೂಕಿ ಪಾತಾಳದೆಡೆಗೆ
ದೇಖರೇಖಿ ನೋಡಿಕೊಳಲು ವಾಸುದೇವ ಸತತವೂ
ಬಾಕಿಯಿರುವ ಕಷ್ಟಗಳನು ನಾಕು ನಾಕು ಕೈಗಳಿಂದ
ಸೋಕಿಸುತ್ತ ಹರಿಸಿ ಹರಿಯು ಹರಣ ಹಸನುಗೊಳಿಸಲು  || ೧ ||

ತಾಕಿಸುತ್ತ ಬೆರಳ ತುದಿಯ ತಪ್ಪಿಸಿ ಅರಿ ಶರದ ಗುರಿಯ
ಚಾಕಚಕ್ಯತೆಯನು ಮೆರೆವ ಶ್ರೀ ಮುರಾರಿ ಮುದದೊಳು
ತೇಕಿದಣಿದು ಇಹವ ತೊರೆವ ಪೂತನಿಗಳ ಹಾಲುಕುಡಿಯೆ
ಪಾಖಂಡೀ ದಂಡು ನಡುಗೆ ಆ ಮಾಧವ ಭರದೊಳು || ೨ ||

ಪಾಕದಚ್ಚುಬೆಲ್ಲ ಉಂಡೆ ರಾಶಿರಾಶಿಯರಳ ಕಂಡೆ
ಸಾಕಷ್ಟಿದೆ ತಿನ್ನಗೊಡಲಖಂಡ ಭರತವರ್ಷದಿ
ಮೂಕ ಅರ್ಜಿ ಹಿಡಿದುಬಂದೆ ಯಾಕೆ ಬಾರನೆಂದುಕೊಂಡೆ
ಲೋಕನಾಯಕನಿಗೆ ಕಾದೆ ಬದುಕಿ ಬಹಳ ವರ್ಷದಿ || ೩ ||



Wednesday, September 19, 2012

"ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ; ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ-ನೀ ಹೋಗಿ ಅಲ್ಲಿ ಫಲವಿಲ್ಲ"


ಚಿತ್ರಋಣ: ಅಂತರ್ಜಾಲ
"ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ; ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ-ನೀ ಹೋಗಿ ಅಲ್ಲಿ ಫಲವಿಲ್ಲ"

ಪ್ರಾಕೃತಿಕ ವೈಭವದ ಹಿಮಾದ್ರಿ ಗಿರಿಶಿಖರಗಳು. ಅಲ್ಲಿ ಜನಿಸಿದವಳು ಗಿರಿ-ಜಾ; ಪರಶಿವನನ್ನು ಒಲಿಸಿ ಶಿವೆಯಾದಳು. ಶಿವೆಗೆ ಸತತವೂ ಕೈಲಾಸದಲ್ಲಿ ಕೆಲಸ. ಜಗತ್ತಿಗೆ ಪಿತನಾದ ಶಿವನ ಅರ್ಧಾಂಗಿಯಾದಮೇಲೆ ಕೇಳಬೇಕೇ? ಒಂದೇ ಒಂದು ದಿನದಲ್ಲಿ ಕೆಲಭಾಗವೂ ತನಗೇ ಎಂದುಕೊಳ್ಳುವಷ್ಟೂ ತೆರಪಿಲ್ಲ! ಬಿಡುವಿಲ್ಲದ ಕೆಲಸಗಳ ನಡುವೆ ಹೆಣ್ಣು ಪಾರ್ವತಿಯ ಮನಸ್ಸು ತನ್ನಪ್ಪನ ಮನೆಯಲ್ಲಿ ನಡೆಯುವ ಅದ್ಧೂರೀ ಹಬ್ಬದ ಕಡೆಗೆ ಹೊರಳುತ್ತದೆ. ಭಾದ್ರಪದ ಶುದ್ಧ ಚೌತಿಯಂದು ಅಪ್ಪನಮನೆಯಲ್ಲಿ ಸಡಗರವೋ ಸಡಗರ! ಎಲ್ಲೆಲ್ಲೂ ಬಾಳೆ-ಮಾವಿನ ತೋರಣ, ರಂಗವಲ್ಲಿ, ದೂರ್ವೆ-ಹೂವುಗಳ ಮಾಲೆ, ನೂರಾರು ವಿಧದ ಭಕ್ಷ್ಯಗಳ ಸಿದ್ಧತೆ, ವೇದಮಂತ್ರಗಳ ಘೋಷ, ಇಂಪಾದ ವಾದ್ಯಗಳು, ಅದ್ಭುತ ಸಂಗೀತ-ನರ್ತನ-ಗಾಯನ ವಗೈರೆ, ಗಣನಾಮ ಸಂಕೀರ್ತನೆ..........ಹೀಗೇ ಅದು ಹೇಳಿ ಮುಗಿಯುವ ಪರಿಯಲ್ಲ. ಗಿರಿರಾಜ ಆಚರಿಸುವ ಅಂತಹ ಅದ್ಭುತ ಹಬ್ಬದ ಒಂದು ದಿನಕ್ಕಾಗಿ ದಿನಮುಂದಾಗಿ ಗೌರೀತದಿಗೆಯ ದಿನ ಭೂಮಿಗೆ ಹೋಗಿ ಮಾರನೇದಿನ ಮರಳುತ್ತೇನೆ ಎಂಬುದು ಶಿವನಲ್ಲಿ ಶಿವೆಯ ಬಿನ್ನಹ. ಶಂಕರನೋ ಶಂಕರಿಯನ್ನು ಬಿಟ್ಟಿರಲಾರ; ಅವನಿಗೆ ನಿಂತರೆ-ಕೂತರೆ-ನಡೆದರೆ ಎಲ್ಲೆಲ್ಲೆಯೂ ಶಕ್ತಿ ಬೇಕೇ ಬೇಕು. ಶಕ್ತಿ ಇಲ್ಲದಿದ್ದರೆ ಕೆಲಸವಾಗುವುದಾದರೂ ಎಂತು? ಅಲ್ಲವೇ? ಸ್ವತಃ ಶಕ್ತನಾದರೂ ಶಕ್ತಿಯ ಅವಲಂಬನೆ ಬಹಳವಾಗೇ ಇದೆ. ಹೀಗಾಗಿ ಎಷ್ಟೇ ವಿಜೃಂಭಣೆ ಇದ್ದರೂ ಗೌರಿಯನ್ನು ತವರಿಗೆ ಕಳಿಸಲು ಒಲ್ಲೆ ಎನ್ನುತ್ತಾನೆ ಗೌರ!

ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ;
ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ
ನೀ ಹೋಗಿ ಅಲ್ಲಿ ಫಲವಿಲ್ಲ

"ಏನು ಹೇಳುತ್ತಿದ್ದೀಯಾ ಪ್ರಿಯೆ ಗೌರೀ ? ನೀನು ತವರಿಗೆ ಹೋದರೆ ಇಲ್ಲಿ ನನಗೆ ಪೂಜೆಗೆ ಅಣಿಮಾಡಿಕೊಡುವವರಾರು? ದೇವರಿಗೆ ದೀಪ ಮುಡಿಸುವವರಾರು? ಗಂಧ ತೇಯ್ವವರಾರು? ನಿನ್ನ ತವರಿನಲ್ಲಿ ಅದೆಷ್ಟೇ ಸಡಗರವಿದ್ದರೂ ನೀನು ಹೀಗೆ ಮನೆಯನ್ನು ದಿನಗಟ್ಟಲೇ ತೊರೆದು ಹಾಗೆ ಅಲ್ಲಿಗೆ ಹೋಗಲು ನನ್ನ ಮನಸ್ಸು ಒಪ್ಪದಲ್ಲಾ, ನೀನಲ್ಲಿಗೆ ಹೋಗಿ ಪ್ರಯೋಜನವಿಲ್ಲಾ, ನೀನಿಲ್ಲೇ ಇರು " ಎಂಬುದು ಪರಮೇಶ್ವರನ ಹಠ. ಹೇಗಾದರೂ ಮಾಡಿ ತನನ್ನು ಎರಡುದಿನದ ಮಟ್ಟಿಗೆ ಅನುಮತಿಸಬೇಕೆಂಬುದು ಪರಮೇಶ್ವರಿಯ ಅಪೇಕ್ಷೆ.  ವಾದ-ಪ್ರತಿವಾದಗಳ ಕುರಿತ ೧೫ ನಿಮಿಷಗಳ ಊದ್ದದ ಹಾಡನ್ನು ಅಜ್ಜಿ ರಾಗವಾಗಿ ಹಾಡುವಾಗ ನಾವೆಲ್ಲಾ ಮಕ್ಕಳು ಕೇಳುತ್ತಿದ್ದೆವು; ಜಗನ್ಮಾತೆಯ ತವರಿನ ಪ್ರೀತಿಗೆ ಮತ್ತು ಜಗತಃಪಿತನ ಕಳಿಸಿಕೊಡಲಾಗದ, ಬಿಟ್ಟಿರಲಾಗದ ಅನಿವಾರ್ಯತೆಯ ಕಥೆಗೆ ಮುಗ್ಧರಾದ ನಮ್ಮಗಳ ಮನಸ್ಸಿನಲ್ಲಿ ನಮ್ಮ ತಾಯಿ-ತಂದೆಯರೇ ಈ ರೀತಿ ವಾದಮಾಡಿಕೊಳ್ಳುತ್ತಿದ್ದಾರೋ ಎಂಬ ಅನಿಸಿಕೆ. ಇಡೀ ಆ ವಾತಾವರಣ ಭಾವನಾಮಯ; ಅದು ಗೌರೀತದಿಗೆ! ಭುವಿಗೆ ಸ್ವರ್ಣಗೌರಿಯನ್ನು ಕರೆದು ಪೂಜಿಸುವ ದಿನ! ಪರಮೇಶ್ವರನಿಗೂ ದೇವರ ಪೂಜಾ ಕೈಂಕರ್ಯವಿದೆಯೇ? ಎಂದರೆ ಪರಬ್ರಹ್ಮನೊಬ್ಬನನ್ನುಳಿದು ಮಿಕ್ಕೆಲ್ಲಾ ದೇವರಿಗೂ ಅಂತಹ ಕಾರ್ಯಗಳಿವೆ; ತ್ರಿಮೂರ್ತಿಗಳೂ ಪರಬ್ರಹ್ಮನ ಆರಾಧಕರು ಮತ್ತು ಸ್ವಯಂ ಪರಬ್ರಹ್ಮನಷ್ಟೇ ಶಕ್ತರೂ ಕೂಡ; ಇದು ಪರಾತ್ಪರತೆ. 

ಮೇಲೆ ಹೇಳಿದ ಇಂತಹ ಹಾಡುಗಳು ಇವತ್ತಿಗೆ ಲಭ್ಯವಿಲ್ಲ; ಅಜ್ಜಿಯಂದಿರೊಂದಿಗೇ ಕಾಲವಾಗಿಹೋದ ಹಾಡುಗಳು, ಕಥೆಗಳು ಅವೆಷ್ಟೋ! ಅಂತಹ ದಿವ್ಯ-ಭವ್ಯ ಸಂಸ್ಕಾರದಾಯೀ ತಾಯಿಯರಿಗೆ ನನ್ನ ನಮನಗಳನ್ನು ಸಲ್ಲಿಸುವುದರೊಂದಿಗೆ ಸ್ವರ್ಣ ಗೌರಿಗೂ ನನ್ನ ನಮಸ್ಕಾರಗಳು. ಹುಂಡುಗುತ್ತಿಗೆ ಹಿಡಿದವರಂತೇ ಏನು ಭಟ್ಟರು ಇಂಥದ್ದನ್ನೇ ಬರೆದು ಓದಲು ಕರೆಯುತ್ತಾರಲ್ಲಾ ಎಂಬ ಮನಸ್ಥಿತಿ ಬೇಡ; ಯಾಕೆಂದರೆ ಇಂಥದ್ದನ್ನು ಹೇಳಲೂ ನಮ್ಮಂತಹ ಕೆಲವುಜನ ಬೇಕು. ಭಾದ್ರಪದ ಶುದ್ಧ ತದಿಗೆ-ಚೌತಿಯ ಸಮಯದಲ್ಲಿ, ಹೊಲ-ಗದ್ದೆ-ತೋಟ-ಗುಡ್ಡ-ಬೆಟ್ಟ ಎಲ್ಲೆಲ್ಲೂ ಹಸಿಸ್ರು ತುಂಬಿದ ವಾತಾವರಣ ನಮ್ಮ ಕರಾವಳಿಯಲ್ಲಿ. ಸೊಂಪಾಗಿ ಬೆಳೆದ ಭತ್ತದ ಗದ್ದೆಗಳ ನಡುವೆ ದೂರದಲ್ಲಿ, ಗದ್ದೆ ಹಾಳಿ[ಗದ್ದೆ ಮಧ್ಯೆ ನಡೆಯಲು ಬಿಟ್ಟುಕೊಂಡಿರುವ ಕಿರಿದಾದ ಬದುವು]ಗಳ ಮೇಲೆ, ಅಡಕೆ ತೋಟದ ಅಂಚುಗಳಲ್ಲಿ ಹಾದುಬರುವ ಚಿಕ್ಕಹಾದಿಯಲ್ಲಿ, ಗುಡ್ಡ-ಬೆಟ್ಟಗಳ ಇಳಿಜಾರಿನಲ್ಲಿ ಕಾಣುವ ಕಾಲುದಾರಿಯಲ್ಲಿ ಎಲ್ಲೋ ಗೌರೀ-ಗಣೇಶರು ನಡೆದುಬಂದಂತೇ ಭಾಸ! ಮಯ್ಯೆಲ್ಲ ರೋಮಾಂಚನ!! ಅದೇ ಜಾಗಗಳಲ್ಲಿ ಹುಟ್ಟಿಕೊಳ್ಳುವ ದೂರ್ವೆಗಳನ್ನು ಸಂಗ್ರಹಿಸಲು ನಾವು ಮಕ್ಕಳು ಸಾಗಿರುತ್ತಿದ್ದೆವು. ಗೌರಮ್ಮನ ಹೂವು, ಚಂಡು[ಗೊಂಡೆ] ಹೂವು, ಡೇರೇ ಹೂವು, ಅಮೇಲೆ ಕೋಟೆ ಹೂವು[ಹಳದೀ ಬಣ್ಣದ ತುಸು ದೊಡ್ಡ ಹೂವು], ಕರವೀರ ಹೂವು, ಜಾಜಿ-ಮಲ್ಲಿಗೆ-ಇರುವಂತಿಗೆ-ಸೇವಂತಿಗೆ ಒಂದೆರಡೇ? ಎಲ್ಲವೂ ಈ ಹಬ್ಬಕ್ಕೆ ಅಣಿಯಾಗಬೇಕು.

ಜೊತೆಗೆ ದೇವರಮುಂದೆ ಅಂಗೋಡಂಗ [ಸಿಗುವ ಎಲ್ಲಾ] ಫಲಗಳಿಂದ ಫಲಾವಳಿ ಕಟ್ಟುತ್ತಿದ್ದರು ಹಿರಿಯರು; ಅಲ್ಲಿ ನಾವು ಕರಸೇವಕರು! ತೆಂಗಿನಕಾಯಿಂದ ಆರಂಭ; ಎಷ್ಟೆಂದರೂ ಅದು ಶ್ರೀಫಲ ಅಲ್ಲವೇ?  ಹೀರೆಕಾಯಿ, ಹಾಗಲಕಾಯಿ, ಗೆಣಸಿನ ಗೆಡ್ಡೆ, ಪಡುವಲಕಾಯಿ, ಮಾದಲಕಾಯಿ, ಬೆಂಡೆ, ಬದನೆ, ಚಪ್ಪರ ಬದನೆ[ಸೀಮೇ ಸೌತೆ], ಸೌತೇಕಾಯಿ, ಮಂಗಳೂರು ಸೌತೇಕಾಯಿ[ಮೊಗೇಕಾಯಿ], ದಾಳಿಂಬೆ, ಹಲಸು[ಅಪರೂಪಕ್ಕ ಸಿಕ್ಕರೆ], ಪಟ್ಟಣದಿಂದ ತಂದ ಮೂಸಂಬಿ, ಸೇಬು, ಜಾಯಿಕಾಯಿ, ಕಬ್ಬು, ವೀಳೆಯದೆಲೆ-ಹಣ್ಣಡಕೆ, ಅಡಕೆ ಶಿಂಗಾರ, ಮಾವಿನ ಎಲೆ, ಹಲವು ವಿಧದ ಸೋಡಿಗೆಗಳು, ಎಲೆಕೋಸು, ಬೇರು ಹಲಸು, ಕೆಸು[ಕೆಸವೆ],

" ತಮ್ಮಾ ಮತ್ತೆಂಥಾ ಬಿಟ್ಟೆ ನೋಡು "

ಎಂಬ ಮಾತಿಗೇ ಪ್ರಜ್ಞೆ ಬಂದಂತಾಗುತ್ತಿತ್ತು, ಇಲ್ಲದಿದ್ದರೆ ನಮ್ಮ ಲೋಕವೇ ಬೇರೆ! ನಮ್ಮಲೋಕದಲ್ಲಿ ಅಮ್ಮ-ಮಗ ನಡೆದು ಬರುತ್ತಿರುವ ಚಿತ್ರವೇ ಸದಾ! ನಮ್ಮಂತಹ ಒಬ್ಬ ಬಾಲಕ ಅಮ್ಮನ ಸೇವೆಮಾಡುತ್ತಾ, ಅಪ್ಪನ ಸವಾರಿ ಮನೆಗೆ ಬಂದಾಗ ಬಾಗಿಲು ಬಿಡದೇ ಹತನಾದಾಗ ನಮ್ಮ ಕಣ್ಣಲ್ಲೂ ಧಾರಾಕಾರ ನೀರು!  ಸತ್ತ ಬಾಲಕನಿಗೆ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದ್ದ ಗಜೇಂದ್ರನೆಂಬ ಆನೆಯ ತಲೆ! ಅಲ್ಲಿ ಮತ್ತೆ ಜೀವ-ಆತ ಗಣಗಳಿಗೇ ದೈವ! ಪುಟ್ಟನ ಸಾಹಸಗಾಥೆಯನ್ನು ನೋಡಬಂದವರು ಆತನನ್ನು ಸೋಲಿಸಲಾಗದೇ ಅಪ್ಪನನ್ನು ಕಳಿಸಿ ಹಿಂಭಾಗದಿಂದ ತ್ರಿಶೂಲದಿಂದ ತಿವಿದು ವಧಿಸಿದ್ದ ಆ ಬಾಲಕ ಮತ್ತೆ ಕುಳಿತ! ದೇವಾನುದೇವತೆಗಳಿಂದ ತಲಾ ಒಂದೊಂದು ಉಡುಗೊರೆ; ದಿವ್ಯಾಸ್ತ್ರಗಳ-ದಿವ್ಯ ಶಕ್ತಿಗಳ ನೀಡುವಿಕೆ. ಇಂಥಾ ಬಾಲಕ ಅಮ್ಮನೊಟ್ಟಿಗೆ ಸಾದಾ ಸೀದಾ ನಡೆದುಬರುವ ಚಿತ್ರಣ ನಮ್ಮ ಮನಗಳಲ್ಲಿ. ಆತ್ಮಲಿಂಗವನ್ನು ಧರೆಗಿಳಿಸಿಕೊಟ್ಟು ತಲೆಯಮೇಲೆ ರಾವಣನಿಂದ ಗುದ್ದು ತಿಂದಿದ್ದನಂತೆ! ವ್ಯಾಸರ ಎದುರಲ್ಲಿ ಕೂತು ಗೀರ್ವಾಣ ಲಿಪಿಯಲ್ಲಿ ಮಹಾಭಾರತವನ್ನು ಬರೆದು ಅದು ಪಂಚಮವೇದವಾಗಲಿ ಎಂದು ಹರಸಿದ್ದನಂತೆ! ಪುಟಾಣಿಯಾಗಿದ್ದ ಶ್ರೀಕೃಷ್ಣನನ್ನು ತನ್ನ ತೊಡೆಯಮೇಲೆ ಕೂರಿಸಿಕೊಂಡು ಉಂಡೆ-ಚಕ್ಕುಲಿ-ಮೋದಕ ಇತ್ತನಂತೆ!ಭಕ್ತರ ಮನೆಯಲ್ಲಿ ಹೊಟ್ಟೆಬಿರಿ ಉಂಡು, ಮೂಷಿಕವೇರಿ ಹೊರಟು ಗದ್ದೆ ಹಾಳಿಯಮೇಲೆ ಸಾಗುವಾಗ ಮೂಷಿಕಕ್ಕೆ ಕಾಲುಜಾರಿ ಈ ಗಣಪ ಬಿದ್ದನಂತೆ-ಮೇಲಿನಿಂದ ನೋಡಿದ ಚಂದ್ರ ನಕ್ಕನಂತೆ-ಹೊಟ್ಟೆರಿಪೇರಿಗೆ ಹಾವುಸಿಕ್ಕಿತಂತೆ-ಎಡದಾಡೆ ಹಲ್ಲನ್ನು ಮುರಿದು ಬೀಸಿದಾಗ ಚಂದ್ರ ತತ್ತರಿಸಿಹೋದನಂತೆ! "ಭಾದ್ರಪದ ಶುಕ್ಲ ಚತುರ್ಥಿಯ ದಿನ ನಿನ್ನನ್ನು ಯಾರೋ ನೋಡದೇ ಹೋಗಲಿ-ನೋಡಿದವರಿಗೆ ಕಳಂಕ ತಟ್ಟುವಂತಾಗಲಿ" ಎಂದು ಶಪಿಸಿಬಿಟ್ಟನಂತೆ! ---ನೋಡಿ ಇಲ್ಲೇ ನಾವು ಸ್ವಲ್ಪ ವೀಕು! ಚೌತಿಯ ದಿನ ಜಾಗಟೆ ಹಿಡಿದು ಮೂರ್ತಿ ತರುವುದಕ್ಕೆ ಹೋಗಲೂ ಅನುಮಾನ-ಎಲ್ಲಾದರೂ ಅಪ್ಪಿತಪ್ಪಿ ಚಂದ್ರ ಕಂಡುಬಿಟ್ಟರೆ ನಮ್ಮ ಗತಿಯೇನು-ನಮ್ಮ ಕಥೆಯೇನು!    

ಹಿರಿಯರು ಹೇಳಿಬಿಟ್ಟಿದ್ದರು "ನೋಡ್ರೋ ಪೋರಗಳಾ ಚೌತೀದಿನ  ಚಂದ್ರನನ್ನು ನೋಡಬಾರದು. ನೋಡದ್ರೆ ಕಳ್ಳ-ಸುಳ್ಳ-ಮಳ್ಳ ಎಂಬೆಲ್ಲಾ ಅಪವಾದ ಬರ್ತದೆ." ಸಾದಾ ದಿನ ಆ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲವೇ ಅಲ್ಲ. ಚಂದ್ರ "ನೋಡು" "ನೋಡು" ಎಂದು ಎದುರಾ ಎದುರೇ ಬಂದರೂ "ಓ  ಅದೇನ್ ಮಹಾ ಯಾವಾಗ್ಲೂ ನೋಡಿದ್ದೇ ಬಿಡು" ಅಂದ್ಕೊಂಡು ಸಾಗಿದವರು ನಾವು, ಆದರೆ ಮಹಾಚೌತಿಯ ದಿನಮಾತ್ರ ನಮಗೆ ಹೊರಗೆ ಹೋಗಲಿಕ್ಕೇ ಭಯ! "ಹಗಲುಹೊತ್ತಿನಲ್ಲೇ ಮೋಡದ ಮರೆಯಲ್ಲಿ ಎಲ್ಲೋ ಇದ್ದುಬಿಡುತ್ತಾನೆ, ಹೇಳೋದಕ್ಕೆ ಬರೋದಿಲ್ಲ" ಎಂದಿದ್ದರು. ಆತ ಎಲ್ಲಿದ್ದಾನೆ ಎಂಬ ಬಗ್ಗೆ ತಿಳಿದಿಲ್ಲ; ಯಾರೂ ಹೇಳುವವರಿಲ್ಲ ಯಾಕೆಂದರೆ ಯಾರೂ ನೋಡಿರುವುದಿಲ್ಲ. "ನೋಡ್ರೋ ನೋಡೇ ಬಿಡ್ತೇನೆ ಅಂತ ಸುಬ್ರಾಯ ನೋಡ್ದ; ಮಾರನೇ ವರ್ಷವೇ ಜನ ಅವ್ನಿಗೆ ’ಕಳ್ಳ’ ಅಂದ್ರು. ಅಂವ ಕಳ್ಳಾ ಏನಲ್ಲ ಪಾಪ ಕದ್ದವರು ಬೇರೇ ಯಾರೋ ಆದ್ರೂ ಅತನ ಕಥೆ ಏನಾಯ್ತು ನೋಡಿ" ಸುಬ್ರಾಯ ಕಳ್ಳನೆನಿಸಿದ ಕಥೆಕೇಳಿದ್ದ ನಮಗೆ ಜಂಘಾಬಲವೆಲ್ಲಾ ಉಡುಗಿ ಹೋಗಿತ್ತು; ಮಾರ್ಯಾದೆ ಪ್ರಶ್ನೆ ಮಾರಾರ್ಯೆ! ಹೀಗಾಗಿ ಚೌತಿ ದಿನ ಏನು ಚೌತಿ ಕಳೆದು ಮಾರನೇ ದಿನವೂ ನಾವು ಆಕಾಶದ ಕಡೆಗೆ ಮುಖ ಎತ್ತಿದವರಲ್ಲ, "ತಡೀರಿ ಪಾಸಾಗಿ ಹೋಗ್ಬುಡ್ಲಿ" ಅಂದ್ಕೊಂಡು ಇನ್ನೊಂದಿನ ತಡವಾಗಿಯೇ ನೋಡೋಣ ಏನಾಯ್ತೀಗ ಅಂತ ಸುಮ್ಮನಾದ ಜನ. ಅಕಸ್ಮಾತ್ ಚಂದ್ರ ಕಂಡುಬಿಟ್ಟರೆ ಪರಿಹಾರ ಇತ್ತೆಂಬುದನ್ನು ಯಾರೂ ಹೇಳಿರಲೇ ಇಲ್ಲ; ಯಾಕೆಂದರೆ  ನಮ್ಮ ಇವತ್ತಿನ ಮಕ್ಕಳ ಹಾಗಲ್ಲ-ಆವತ್ತೆಲ್ಲಾ ಹಿರಿಯರು ಹೇಳಿದ್ದಕ್ಕೆ ವಿರುದ್ಧವಾಗಿ ಹೋಗದ ಮಕ್ಳು ನಾವು. ನಂತರ ಒಮ್ಮೆ ಯಕ್ಷಗಾನದಲ್ಲೇ ಗೊತ್ತಾಗಿದ್ದು "ಸ್ಯಮಂತಕೋಪಾಖ್ಯಾನ ಅರ್ಥಾತ್ ಜಾಂಬವತಿ ಪರಿಣಯ" ನೋಡಿದಾಗ! ಇವತ್ತಾದರೆ "ಓ ಪರವಾಗಿಲ್ಲ ಬಿಡಿ...ಸುಂದರಿ ಸತ್ಯಭಾಮೆ ಕೃಷ್ಣನ ಮಡದಿಯಾದಳಲ್ಲಾ....ನಮಗೂ ಸತ್ಯಭಾಮೆ ಸಿಗಬಹುದು ನೋಡೋಣ" ಎಂಬ ವಿತಂಡಿಗಳೂ ಇರಬಹುದು! ಫಕ್ಕನೆ ನೀವು ಯಾರಾದ್ರೂ ನೋಡಿದ್ರೆ ಇರಲಿ ಅಂತ ಒಂದು ಶ್ಲೋಕ ಹೇಳಿಕೊಡ್ತೇನೆ ಕೇಳಿ[ಪ್ರಯೋಗಶೀಲರಾಗಬೇಡಿ, ಇದು ಅನಿವಾರ್ಯವಾಗಿ ಕಂಡಿದಕ್ಕೆ ಮಾತ್ರ ಎಮರ್ಜೆನ್ಸಿ ಮಾತ್ರೆ ಅಷ್ಟೇ.]:

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೊಧೀಃ ತವ ಹ್ಯೇಶಃ ಸ್ಯಮಂತಕಃ ||

ಮಹಾಚೌತಿಯ ಮರುದಿನ ಋಷಿಪಂಚಮಿ. ಇಲಿ ಪಂಚಮಿ ಎಂದೂ ನಮ್ಮಲ್ಲಿ ಕರೆಯುತ್ತಾರೆ. ಇವತ್ತಿನ ಮಹಾನಗರಿಗರ ಮನೆಗಳಲ್ಲಿ ನಡೆಸಿದಂತೇ ನಮ್ಮಲ್ಲಿ ಗಣಪನಿಗೆ ಒಂದೇ ಪೂಜೆಯಲ್ಲ. ಬಣ್ಣದ ಗಣಪನನ್ನು ಇಡುವ ಮಂದಿ ೨,೩,೫,೭,೯,೧೦ ಹೀಗೇ ಶಕ್ತ್ಯಾನುಸಾರ ಹಾಗೇ ಇರಿಸಿಕೊಂಡು ನಿತ್ಯವೂ ಮಧ್ಯಾಹ್ನ, ಸಾಯಂಕಾಲ ಪೂಜೆ ನಡೆಸುತ್ತಾರೆ. ಕೆಲವೊಮ್ಮೆ ಅನಿವಾರ್ಯತೆಗಳಲ್ಲಿ ಮಹಾಚೌತಿಯ ಮಾಧ್ಯಾಹ್ನದ ಒಂದೇ ಪೂಜೆ ಸಲ್ಲಿಸಿ ವಿಸರ್ಜನೆ ಮಾಡುವುದಿದೆ; ಕೆಲವರಲ್ಲಿ ಮಾತ್ರ ಇದೇ ಸಂಪ್ರದಾಯವೂ ಇದೆ. ಹಿಂದೆಲ್ಲಾ ಗಣಪತಿ ಹಬ್ಬವನ್ನು ಆಚರಿಸುವುದರ ಜೊತೆಗೆ ಲೋಭಿಗಳಿಗೆ ಗಣಪತಿ  ಹಬ್ಬ ಆಚರಿಸಲು ಕಲಿಸುವ ಜಾದೂ ನಡೆಯುತ್ತಿತ್ತು! ಕಾಸನ್ನೇ ಬಿಚ್ಚದ ’ಜುಗ್ಗ’ ಎನಿಸಿಕೊಂಡವರ ಮನೆಯ ಅಂಗಳದಲ್ಲಿರುವ ತುಳಸಿ ಕಟ್ಟೆಯ ಮುಂದೆ, ಚೌತಿಯ ದಿನ ಬೆಣಚುಬಿಡುವುದಕ್ಕೂ ಮುನ್ನ ಗಣಪತಿ ವಿಗ್ರಹ, ಪೂಜೆ ಸಾಮಾನು ಇತ್ಯಾದಿಯಾಗಿ ತಂದಿಟ್ಟು ಊದಬತ್ತಿ ಹಚ್ಚಿ ಹೋಗಿಬಿಡುತ್ತಿದ್ದರು! ಯಾರೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ! ನಮ್ಮಕಡೆ ಒಂದು ಶಾಸ್ತ್ರವಿದೆ-ಗಣಪತಿ ವಿಗ್ರಹ ಮನೆಗೆ ಒಮ್ಮೆ ತಂದಮೇಲೆ ಮತ್ತೆ ಪ್ರತೀವರ್ಷ ತಂದು ಪೂಜೆ ಮಾಡಬೇಕು ಎಂದು. ಕಂಡಿದ್ದಕ್ಕೆ ಅನಿವಾರ್ಯವಾಗಿ ಮನೆಯೊಳಗೆ ತರದೇ, ತುಳಸಿಯ ಮುಂದೆಯೇ ಒಂದೇ ಪೂಜೆ ಸಲ್ಲಿಸಿ, [ಪರಸ್ಪರ ಸಾಗಹಾಕುವ ರೀತಿ] ವಿಸರ್ಜಿಸುವ ಲೋಭಿಗಳೂ ಇದ್ದರು!        

ನಮ್ಮಲ್ಲಿ ಆಗೆಲ್ಲಾ ಕಾಡುಗಳು ಹೇರಳವಾಗಿದ್ದವು. ನಮ್ಮ ತಂದೆಯ ಎಳವೆಯಲ್ಲಂತೂ ಕೊಟ್ಟಿಗೆಗೇ ಹುಲಿ ಬರುತ್ತಿತ್ತು! ದನಕರುಗಳನ್ನು ಕಾಯಲು ಪ್ರತ್ಯೇಕ ಜನ ಇರುವ ಕಾಲ ಅದಾಗಿತ್ತು. ನಮ್ಮ ಬಾಲ್ಯದಲ್ಲೂ ನಮ್ಮಲ್ಲಿ ಕೊಟ್ಟಿಗೆಗೆ ಹಸಿರು ಸೊಪ್ಪು ಹರಡುವ ಪದ್ಧತಿ ಇತ್ತು. ದನಗಳು ಪ್ರತಿನಿತ್ಯ ಗೋಮಾಳಕ್ಕೆ ತೆರಳಿದಮೇಲೆ, ಕೊಟ್ಟಿಗೆಯ ಸಗಣಿಯನ್ನೆಲ್ಲಾ ತೆಗೆದು, ಹೊಸದಾಗಿ ತಂದಿದ್ದ ಹಸಿರು ಸೊಪ್ಪು,[ಮಳೆಗಾಲದಲ್ಲಿ], ತಿಳಿಹಳದಿ ಕರಡ[ಗುಡ್ಡದಲ್ಲಿ ಮಳೆಗಾಲದಲ್ಲಿ ಬೆಳೆಯುವ ಒಂದು ಜಾತಿಯ ಹುಲ್ಲು-ಚಳಿಗಾಲದಲ್ಲಿ], ದರಕು [ಒಣಗಿ ಉದುರಿದ ಎಲೆಗಳು-ಬೇಸಿಗೆಯಲ್ಲಿ] ಹೀಗೇ ಹರಡುವ/ಹಾಸುವ ಪದ್ಧತಿ ಇತ್ತು. ಚೌತಿ ಮಳೆಗಾಲದಲ್ಲೇ ಬರುವುದರಿಂದ ಆ ಸಮಯದಲ್ಲಿ ನಿತ್ಯ ಕೊಟ್ಟಿಗೆಗೆ ಹಸಿರು ಸೊಪ್ಪು ಹಾಸುತ್ತಿದ್ದರು. ಆದರೆ ಋಷಿಪಂಚಮಿಯ ದಿನಮಾತ್ರ ಹೊಸದಾಗಿ ಹಸಿರು ಸೊಪ್ಪನ್ನು ಕೊಯ್ದು ತರುತ್ತಿರಲಿಲ್ಲ. ಋಷಿಗಳು ತಪಸ್ಸು ಮಾಡುವುದು ಸಾಮಾನ್ಯವಾಗಿ ಕಾಡುಗಳಲ್ಲಿ. ಕಾಡಿನ ಸಸ್ಯಗಳ, ಪೊದೆಗಳ ನಡುವೆ ಯಾವ ಋಷಿ ಅದೆಲ್ಲಿ ತಪಸ್ಸಿಗೆ ಕೂತಿರುತ್ತಾನೋ ಗೊತ್ತಿಲ್ಲವಲ್ಲಾ? ಅಂತಹ ಮಹನೀಯರಿಗೆ ಗೌರವಾರ್ಪಣೆ ಸಲ್ಲಿಸುವ ಸಲುವಾಗಿ ವರ್ಷದಲ್ಲಿ ಈ ಒಂದುದಿನ ಭೂಮಿಯಲ್ಲಿ [ನಮ್ಮಲ್ಲಿ] ಗಿಡ-ಮರಗಳನ್ನು ಕಡಿಯುವ/ಕತ್ತರಿಸುವ ಕೆಲಸವನ್ನು ಮಾಡುತ್ತಿರಲಿಲ್ಲ. ಋಷಿಪಂಚಮಿಯಂದು ಗಣಪತಿಯ ಉತ್ಸವಕ್ಕೇ ಪ್ರಾಮುಖ್ಯತೆ ನೀಡಲಾಗುತ್ತದೆ. ಪರಸ್ಪರರ ಮನೆಗಳಲ್ಲಿ ಕೂರಿಸಿರುವ ಗಣೇಶನನ್ನೂ ಅವನಿಗಾಗಿ ಅಲಂಕರಿಸಿರುವ ಮಂಟಪಗಳನ್ನೂ ನೋಡುವುದೇ ಕಣ್ಣಿಗೆ ಹಬ್ಬ! ಕಮಲೇ ಕಮಲೋತ್ಫತ್ತಿಃ ಅಂದಹಾಗೇ ಹಬ್ಬದೊಳಗೇ ಹಬ್ಬ ಹುಟ್ಟುವುದು ಹೀಗೆ! ಬೆನಕನ ಉತ್ಸವದಲ್ಲಿ ಕಡೇಪಕ್ಷ ೫ ವಿಗ್ರಹಗಳನ್ನಾದರೂ ನೋಡಬೇಕೆಂಬುದು ಒಂದು ಶಾಸ್ತ್ರ! ಗಣಪ ಎಲ್ಲದರಲ್ಲೂ ತನ್ನದೇ ಆದ ವೈಶಿಷ್ಟ್ಯವನ್ನು ಕಾಪಾಡಿಕೊಂಡ ದೇವರು-ಇಲ್ಲೂ ಹಾಗೇನೆ. ಆತ ಉತ್ಸವ ಪ್ರಿಯನೂ ಹೌದು.

ಶ್ರೀ ಕಲ್ಯಾಣ ಗುಣಾವಹಂ ರಿಪುಹರಂ ದುಸ್ಸ್ವಪ್ನ ದೋಷಾಪಹಂ
ಗಂಗಾಸ್ನಾನ ವಿಶೇಷ ಪುಣ್ಯಫಲದಂ ಗೋದಾನತುಲ್ಯಂ ನೃಣಾಂ |
ಆಯುರ್ವಧನಮುತ್ತಮಂ ಶುಭಕರಂ ಸಂತಾನ ಸಂಪತ್ಪ್ರದಂ
ನಾನಾಕರ್ಮ ಸುಸಾಧನಂ ಸಮುಚಿತಂ ಪಂಚಾಗ ಮಾಕರ್ಣ್ಯತಾಂ ||

ಗಣೇಶ ಹಬ್ಬದ ಪ್ರಯುಕ್ತ ಭಟ್ಟರಿಂದ ಕಥಾಶ್ರವಣ ಮಾಡಿದಿರಿ, ಕಥಾಕಾಲಕ್ಷೇಪವನ್ನು ಮಾಡಿದಿರಿ. ಹಿಂದೂ ಪಂಚಾಂಗದ ಪ್ರಕಾರ  ಜೀವನ ಗತಿಯಲ್ಲಿ, ಪ್ರತೀ ಹೆಜ್ಜೆಯಲ್ಲೂ ಪಂಚಾಂಗ ಶ್ರವಣದ ಅವಶ್ಯಕತೆ ಕಾಣುತ್ತದೆ. ಇಂದಿನ ವಿಜ್ಞಾನಕ್ಕೂ ನಮ್ಮ ಪಂಚಾಂಗಕ್ಕೂ ಸಾಮ್ಯತೆ ಬಹಳವಿದೆ; ವಿಜ್ಞಾನ ಇನ್ನೂ ಅರಿಯದ್ದನ್ನು ವೇದಗಳ ಆಧಾರದಮೇಲೆ ಪಂಚಾಂಗ ಶ್ರುತಪಡಿಸುತ್ತದೆ. ಪಂಚಾಂಗವನ್ನೇ ಬಳಸದೇ ಅದರ ಮೌಲ್ಯವನ್ನೇ ಅರಿಯದೇ ಬರಿದೇ ಜರಿಯುವ ಜನರೂ ಇದ್ದಾರೆ. ಪಂಚಾಂಗದಲ್ಲಿ ಹೇಳುವ ಮುಹೂರ್ತಗಳು ಆ ಯಾ ಕಾಲಕ್ಕೆ ಈ ಭೂಮಿಯಲ್ಲಿ ಘಟಿಸುವ ಕಾಸ್ಮಿಕ್ ರೇ  ಅಥವಾ ಗ್ರಹಗಳಿಂದ ಹೊರಸೂಸಲ್ಪಡುವ ಪ್ರಭಾವಲಯದ ಬಗ್ಗೆ ಹೇಳುತ್ತವೆ. ಉತ್ತಮ ಪ್ರಭಾವಲಯವಿದ್ದಾಗ ನಡೆಸುವ ಕಾರ್ಯ ಮಂಗಳಕರವಾಗುತ್ತದೆ, ನೆಗೆಟಿವ್ ಎನರ್ಜಿ ಇರುವ ಹೊತ್ತಿನಲ್ಲಿ ನಡೆಸುವ ಕಾರ್ಯ ವಿಘ್ನವನ್ನು ಅನುಭವಿಸುತ್ತದೆ; ಮಾನಸಿಕ ಕ್ಲೇಶಗಳಿಗೆ ಕಾರಣವಾಗುತ್ತದೆ. ಹಿಂದಿನ ಯಾವ ಕ್ರಮವೂ ಸುಳ್ಳಲ್ಲ; ಧಾವಂತದ ಜೀವನದಲ್ಲಿ ನಮಗೆ ಅದು ಗೊತ್ತಾಗುತ್ತಿಲ್ಲ!  ಕುಳಿತು ವಿವೇಚಿಸಿದರೆ, ಯೋಚಿಸಿದರೆ, ಚಿಂತನ-ಮಂಥನ ನಡೆಸಿದರೆ ಪಂಚಾಂಗದ-ಸನಾತನ ಸುವ್ಯವಸ್ಥೆಯ ಪ್ರಜ್ಞೆ ಒಡಮೂಡೀತು. ಮತ್ತೆ ಹೀಗೇ ನಿಮಗೆ ಪೌರೋಹಿತ್ಯನೀಡುವ ಪೊರೋಹಿತನಾಗಿ ಬರುತ್ತಿರುತ್ತೇನೆ, ಪರಬ್ರಹ್ಮ ಮಹಾಗಣಪತಿ ನಿಮ್ಮೆಲ್ಲರಿಗೂ ಸುಖ-ಶಾಂತಿ-ಸಮೃದ್ಧಿಯನ್ನು ಕರುಣಿಸಲಿ, ಧನ್ಯವಾದಗಳು.


Saturday, September 15, 2012

’ಆರ್ಯರು ಭಾರತಕ್ಕೆ ಬಂದರು’ -ಎಂಬ ಕಟ್ಟು ಕಥೆ !

 ಸುಮಾರಾಗಿ ಆರ್ಯಾವರ್ತವನ್ನು ತೋರಿಸುವ ನಕಾಶೆಯ ಕೃಪೆ: ಅಂತರ್ಜಾಲ
’ಆರ್ಯರು ಭಾರತಕ್ಕೆ ಬಂದರು’ -ಎಂಬ ಕಟ್ಟು ಕಥೆ !

ವೃಷಭೋ ಮರುದೇವ್ಯಾಶ್ಚ ವೃಷಭಾತ್ ಭರತೋ ಭವೇತ್ |
ಭರತಾದ್ಭಾರತಂ ವರ್ಷಂ ಭರತಾತ್ ಸುಮತಿಸ್ತ್ವಭೂತ್ ||

ಪುಣ್ಯಭೂಮಿ ಭಾರತವನ್ನು ಅದೆಷ್ಟೋ ಆಳರಸರು ಆಳಿದರು. ಭಾರತಕ್ಕೆ ಮೊದಲು ಭರತವರ್ಷ ಎಂಬ ಹೆಸರೂ ಇತ್ತು! ನಮ್ಮ ವೇದಮಂತ್ರ ಸಂತುಲಿತ ಮಂಗಲಕಾರ್ಯಗಳ ಆಚರಣೆಯ ಪೂರ್ವಭಾವೀ ಸಂಕಲ್ಪದಲ್ಲಿ ಇಂದಿಗೂ ನಾವು ’ಭರತಖಂಡೇ ಭರತವರ್ಷೇ ಭಾರತದೇಶೇ’ ಎಂದು ದೇಶಕಾಲಗಳನ್ನು ಸಂಕೀರ್ತನೆ ಮಾಡುವ ಕ್ರಮವಿದೆ. ಆರ್ಯಾವರ್ತದಲ್ಲಿ, ಆರ್ಯರ ರಾಜನಾದ ನಾಭಿ-ಮರುದೇವಿಯರ ಮಗುವಾಗಿ ವೃಷಭದೇವ ಜನಿಸಿ ರಾಜ್ಯವಾಳಿದ. ರಾಜಾ ವೃಷಭದೇವನ ಮಗನಾಗಿ ಹುಟ್ಟಿದವ ಚಕ್ರವರ್ತಿ ಭರತ. ಆತನ ಮಹಾಪರಾಕ್ರಮದಿಂದ ಹಿಂದೂಸ್ಥಾನಕ್ಕೆ ಭರತವರ್ಷ ಎಂಬ ಹೆಸರೂಕೂಡ ನೀಡಲ್ಪಟ್ಟಿತ್ತು. [ದುಷ್ಯಂತ-ಶಕುಂತಲೆಯರ ಮಗನಾದ ಭರತನೂ ಚಕ್ರವರ್ತಿಯೇ, ಆತನಿಂದ ಭಾರತ ಎಂಬ ಹೆಸರನ್ನು ಪಡೆಯಿತು!] [ಪ್ರಾಗೈತಿಹಾಸ ಇನ್ನೂ ಹಿಂದಕ್ಕೆ ಹೋಗುತ್ತದೆ, ಸಮಯ, ದೇಶ, ಕೋಶಗಳ ಪರಿಮಿತಿಯನ್ನವಲಂಬಿಸಿ ಇಲ್ಲಿಂದ ಆರಂಭಿಸಿದ್ದೇನೆ] ಇಂತಹ ಭರತವರ್ಷ ಎಲ್ಲಿಂದ ಎಲ್ಲಿಯವರೆಗಿತ್ತು ಎಂಬುದನ್ನು ಸ್ಥೂಲವಾಗಿ ಹೀಗೆ ಹೇಳಿದ್ದಾರೆ:

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||
ಸೂಚ್ಯ ಭರತವರ್ಷ

ಅರ್ಥ ಹೀಗಿದೆ : ಸಮುದ್ರಕ್ಕೆ ಉತ್ತರದಿಕ್ಕಿನಲ್ಲಿಯೂ ಹಿಮಾದ್ರಿ ಶಿಖರಗಳ ದಕ್ಷಿಣಕ್ಕೂ ಇರುವ ಭಾರತದೇಶವನ್ನು ಭಾರತವರ್ಷವೆಂದು ತಿಳಿಯಬೇಕು ಮತ್ತು ಇಲ್ಲಿ ವಾಸಿಸುವವರು ಭಾರತೀಯರು. [ಈ ಶ್ಲೋಕದ ರೀತಿಯಲ್ಲಿಯೂ ಅಲ್ಲದೇ ಹೇಳುವುದಾದರೆ ಚಕ್ರವರ್ತಿ ಭರತನ ರಾಜ್ಯ ಪ್ರಪಂಚವ್ಯಾಪಿಯಾಗುತ್ತದೆ ಎಂಬುದನ್ನು ಗಮನಿಸಬೇಕು. ಇದು ಪ್ರಸಕ್ತ ಇರುವ ನಕಾಶೆಗೆ ಸಂಬಂಧಿಸುವುದಿಲ್ಲ, ಪ್ರಸಕ್ತ ಭಾರತ ಆತನ ಆಳ್ವಿಕೆಗೇ ಒಳಪಟ್ಟಿತ್ತು ಎಂಬುದನ್ನೂ ಗಮನಿಸಬೇಕು. ವಿಸ್ತಾರವನ್ನು ಹೇಳಲು ಸೂಚ್ಯವಾಗಿ ಈ ಶ್ಲೋಕವನ್ನು ಬಳಸಿದ್ದಿರಬಹುದು, ರಾಮಾಯಣ ಕಾಲದಲ್ಲಿ ಮಾಡಿದ ಶ್ಲೋಕವಾದ್ದರಿಂದ, ಪ್ರಳಯದ ನಂತರ ಭೂಭಾಗದಲ್ಲಿ ವ್ಯತ್ಯಾಸವಾಗಿರಬಹುದು]  ಇಂತಹ ಭಾರತಕ್ಕೆ ಇನ್ನೂ ಹಲವು ಹೆಸರುಗಳಿದ್ದವು, ಅವುಗಳೆಂದರೆ : ಹಿಂದ್, ಸಿಂಧ್, ಫೈವ್ ಇಂಡೀಸ್, ಇಂಡೋಯಿ, ಇಂಡೋಯು, ಇಂಡಿಯಾ, ಇಂಡುಕಿ, ಹಿಂದುಷ್, ತೆಂಜಿಕು, ಯಿಂದು, ತಿಯಾಂಝು ಇಷ್ಟೆಲ್ಲಾ ನಾಮಧೇಯಗಳನ್ನು ಹಿಂದೂಸ್ಥಾನ ಪಡೆದಿತ್ತು. ಇದ್ಯಾವುದನ್ನೂ ಅರಿಯದ ನಮಗೆ ನಾವು ಕಲಿಯುವಾಗ ಬೋಧಿಸಿದ ಪಠ್ಯದಲ್ಲಿ ’ಆರ್ಯರು ಭಾರತಕ್ಕೆ ಬಂದುದು’ ಎಂಬ ಪಾಠವಿತ್ತು. ಆರ್ಯರು ಭಾರತಕ್ಕೆ ಬಂದುದು ನಿಜವೇ? ಅವರು ಎಲ್ಲಿನವರು? ಇಲ್ಲಿಗೆ ಯಾಕಾಗಿ ಬಂದರು? ಅವರ ಭಿನ್ನತೆಗಳೇನು?- ಈ ಬಗ್ಗೆ ತಲೆಹೊಕ್ಕಿದ ಹುಳ ಹೊರಬೀಳದೇ ಕೊರೆಯುತ್ತಿದ್ದು ಬಹಳಕಾಲವಾಗಿತ್ತು. ಸತತವಾದ ಕೆಲಸಗಳ ಮಧ್ಯೆ ಅದಕ್ಕೆ ತಕ್ಕುದಾದ ಉತ್ತರದ ನಿರೀಕ್ಷೆಯಲ್ಲಿ ನಾನಿದ್ದೆ. ಹಲವು ಆಕರ ಗ್ರಂಥಗಳನ್ನು ಬಳಸಿ ತೆವಳುತ್ತಾ ತೆವಳುತ್ತಾ ಅಂತೂ ಒಳಗಿನ ಗೂಢವಾದ ಗುಹೆಗೊಂದುಕಂಡು ಅದರ ದ್ವಾರ ಸಿಕ್ಕಿತು. ಆ ಜಾಡಿನಲ್ಲಿ ಒಳಹೊಕ್ಕು ಸಾಗುತ್ತಾ ಸಾಗುತ್ತಾ ಮತ್ತೆ ತಿಂಗಳುಗಳೇ ಸಂದವು. ದಾಖಲೆಗಳು ಹಲವು ಸಿಕ್ಕರೂ ಯಾವುದು ನಂಬಲರ್ಹ ದಾಖಲೆ ಎಂಬುದೇ ಪ್ರಶ್ನೆಯಾಗಿರುತ್ತಿತ್ತು. ಸಂದಿಗ್ಧಗಳಿಗೆ ಮತ್ತೆ ಮತ್ತೆ ಉತ್ತರಹುಡುಕುತ್ತಾ ನಡೆದಾಗ, ಬ್ರಿಟಿಷರು-ಕ್ರೈಸ್ತ ಮಿಶನರಿಗಳು ತಿರುಚಿದ ಪ್ರಾಗೈತಿಹಾಸ ಕಂಡುಬರಹತ್ತಿತು. ಅದನ್ನೇ ವಿಸ್ತರಿಸಿ ನಿಮ್ಮೆಲ್ಲರಿಗೂ ಸತ್ಯವನ್ನು ತಿಳಿಸುವ ಉದ್ದೇಶದಿಂದ ಈ ಲೇಖನ ಸಿದ್ಧಗೊಂಡಿತು.  

ಮಿಶನರಿಗಳ ಪ್ರಕಾರ: ಆರ್ಯರು ಸಿಂಧೂನದಿಯ ಮುಖಜ ಭೂಮಿ ವಾಸಿಗಳು. ಅಲ್ಲಿಂದ ಭಾರತದೊಳಕ್ಕೆ ನುಸುಳಿದರು! ಆಗ ದಸ್ಯುಗಳೆಂಬ ಕಪ್ಪು ದಪ್ಪ ಚರ್ಮದ ದ್ರಾವಿಡರು ಇಡೀ ದೇಶವನ್ನು ಆಳುತ್ತಿದ್ದರು. ಭಾರತಕ್ಕೆ ನುಗ್ಗಿದ ಆರ್ಯರು ತಮ್ಮ ವಿಶೇಷವಾದ ವೇದ-ಶಾಸ್ತ್ರಗಳಾಧಾರಿತ ಜೀವನಕ್ರಮವನ್ನು ಇಲ್ಲಿನ ಜನರಮೇಲೆ ಹೇರಿದರು.---ಇದು ಭಾರತೀಯರಲ್ಲೇ ಭಿನ್ನಾಭಿಪ್ರಾಯ ಹುಟ್ಟಿಸಿ ಒಡೆದು ಆಳುವ ನೀತಿಗಾಗಿ ಸೃಷ್ಟಿಸಿದ ಕಟ್ಟುಕಥೆ ಎಂದರೆ ಆಶ್ಚರ್ಯಪಡಬೇಡಿ. ಹಾಗಾದರೆ ಆರ್ಯರು ಭಾರತದಲ್ಲೇ ಇದ್ದವರೇ ಅಥವಾ ಭಾರತದ ಮೂಲನಿವಾಸಿಗಳೇ ಎಂಬ ಪ್ರಶ್ನೆಗೆ ನನ್ನ ನೇರ ಉತ್ತರ: ನೂರಕ್ಕೆ ನೂರು ಅವರು ಭಾರತೀಯರೇ ಮತ್ತು ಭಾರತದಲ್ಲೇ ಇದ್ದವರು. ಇದನ್ನು ಅರಿಯಬೇಕಾದರೆ ’ಆರ್ಯಾವರ್ತ’ವನ್ನು ತಿಳಿದುಕೊಳ್ಳಬೇಕು. ಆರ್ಯಾವರ್ತ ಎಲ್ಲಿಂದ ಎಲ್ಲಿಯವರೆಗೆ ಯಾವ ಅಳತೆಯಲ್ಲಿ ವ್ಯಾಪಿಸಿತ್ತು ಎಂಬುದನ್ನು ಋಷಿ ವಶಿಷ್ಠರ ಧರ್ಮಸೂತ್ರ ವಿವರವಾಗಿ ತಿಳಿಸುತ್ತದೆ. 

ಹಾಗಾದರೆ ವಶಿಷ್ಠರು-ವಿಶ್ವಾಮಿತ್ರರು ಇಂತಹ ಮುನಿಗಳ ಕಥೆಯೆಲ್ಲಾ ಕೇವಲ ಕರ್ಣಾನಂದಕರವಾದ ಕಥೆಗಳಿಗಾಗಿ ಇದ್ದ ಪಾತ್ರಗಳಲ್ಲವೇ ಎಂದರೆ, ಅಲ್ಲಾ...ಹಿಂದೊಂದು ಕಾಲದಲ್ಲಿ ಅವರೆಲ್ಲಾ ಇದೇ ನಮ್ಮ ಭಾರತದಲ್ಲಿ ಜೀವಿಸಿದ್ದರು; ಭಾರತೀಯರಿಗಾಗಿ, ಜಗತ್ತಿಗಾಗಿ ಅನೇಕ ಕೃತಿಗಳನ್ನು ಬರೆದರು. ಹಾಗಾದರೆ ಋಷಿಗಳೂ ಆರ್ಯರೇ? ನೋ ಡೌಟ್, ಮೂಲದಲ್ಲಿ ಋಷಿಗಳೇ ಆರ್ಯರು. ಮನುಸ್ಮೃತಿಯಲ್ಲಿಯ ಪ್ರಕಾರ ಆರ್ಯಾವರ್ತ ಎಂಬ ಈ ಆರ್ಯಸಾಮ್ರಾಜ್ಯ ಉತ್ತರಕ್ಕೆ ಹಿಮಾಲಯ ಮತ್ತು ದಕ್ಷಿಣಕ್ಕೆ ವಿಂಧ್ಯಪರ್ವತಗಳು, ಪೂರ್ವಕ್ಕೆ ಪೂರ್ವಸಮುದ್ರ[ಬಂಗಾಳಕೊಲ್ಲಿ] ಮತ್ತು ಪಶ್ಚಿಮಕ್ಕೆ ಪಶ್ಚಿಮ ಸಮುದ್ರ[ಅರಬ್ಬೀ ಸಮುದ್ರ]ದ ವರೆಗಿನ ವ್ಯಾಪ್ತಿಯಲ್ಲಿತ್ತು. ವಶಿಷ್ಠರ ಧರ್ಮಸೂತ್ರ ಹೇಳುತ್ತದೆ: ಸರಸ್ವತೀ ನಡಿ ಗುಪ್ತಗಾಮಿನಿಯಾಗಿ ಹರಿಯುವ ಆರಂಭದ ಬಿಂದುವಿನಿಂದ ಪೂರ್ವಕ್ಕೆ ಮತ್ತು ಕಲಕಾವನದ ಪಶ್ಚಿಮಕ್ಕೆ, ಉತ್ತರಕ್ಕೆ ಹಿಮಾಲಯ, ದಕ್ಷಿಣಕ್ಕೆ ವಿಂಧ್ಯಪರ್ವತಗಳನ್ನುಳ್ಳ ಭೂಭಾಗವೇ ಆರ್ಯಾವರ್ತ. ಬೌಧಾಯನ ಶ್ರೌತ ಸೂತ್ರ ಮತ್ತು ಪತಂಜಲೀ ಮಹಾಭಾಷ್ಯ ಇದನ್ನು ಪುಷ್ಟೀಕರಿಸುತ್ತವೆ.

ಇಂಥಾ ಆರ್ಯಾವರ್ತದಲ್ಲಿ ಯಾವ ಯಾವ ರಾಜ್ಯಗಳಿದ್ದವು[ದೇಶ]ಎಂದರೆ : ಗಾಂಧಾರ[ಇಂದಿನ ಕಂದಹಾರ್], ಮಾದ್ರ, ಬಲ್ಹಿಕ [ಇಂದಿನ ಬಾಲ್ಕ್], ಕುರು, ಪಾಂಚಾಲ, ಕೋಸಲ, ವಿದೇಹ, ಮಗಧ, ಅಂಗ, ಕಾಶಿ,  ಕೈಕತ, ಬನಸ್, ಚೇದಿ ಮೊದಲಾದವುಗಳು. ಗಂಗಾ, ಯಮುನಾ, ಸರಯೂ, ಸಿಂಧು, ವಿತಸ್ತ, ಅಸಿಕ್ನಿ, ಪರುಸ್ನಿ, ಶುತುದ್ರಿ ಮೊದಲಾದ ಪುಣ್ಯನದಿಗಳು ಅಲ್ಲಿ ಹರಿಯುತ್ತಿದ್ದವು. ಸರಸ್ವತಿ ಒಂದಷ್ಟು ದೂರ ಹರಿದು ಆಮೇಲೆ ಗುಪ್ತಗಾಮಿನಿಯಾಗುತ್ತಿದ್ದಳು. ವಿದರ್ಭ, ವರ್ಣು, ಕಾಂಬೋಜ ಇವು ಆರ್ಯಾವರ್ತದ ಸುತ್ತಲ ರಾಜ್ಯಗಳು. ಸಮೃದ್ಧವಾದ ಆರ್ಯಾವರ್ತದಲ್ಲಿ ಗಾಂಧಾರ ದೇಶದ ಭಾಗವಾದ ಕಾಶ್ಮೀರದಲ್ಲಿ ಈ ಪ್ರಪಂಚದ ಮೊಟ್ಟಮೊದಲ ವಿಶ್ವವಿದ್ಯಾಲಯವಿತ್ತು! ಅದೇ ಕಾಶ್ಮೀರದ ಶಾರದಾ ಪೀಠ! ಆರ್ಯಾವರ್ತದ ಆರ್ಯರು ನಿತ್ಯ ಪೂಜಿಸುತ್ತಿದ್ದ ದೇವಿ ಶಾರದೆ-ಸರಸ್ವತಿ. ಸರಸ್ವತಿಯನ್ನು ಆರಾಧಿಸುವ ಸಂಸ್ಕೃತಿಯುಳ್ಳವರಾಗಿದ್ದು, ಸುಸಂಸ್ಕೃತರಾಗಿದ್ದುದರಿಂದ, ಸಂಸ್ಕೃತದ ಉತ್ತಮ ಪದಗಳಾದ ಆರ್ಯ, ಆರ್ಯೆ ಎಂಬುದನ್ನೇ ಸಂಬೋಧನೆ ಬಳಸುತ್ತಿದ್ದ ಈ ಜನರನ್ನು ಜನ ಆರ್ಯರೆಂದೇ ಗುರುತಿಸಿದ್ದರು.

Vedic Maths sample

ಇಂತಹ ಆರ್ಯಕುಲ ಸಿಂಧೂನದಿಯ ಸುತ್ತಲ ಪ್ರದೇಶವೂ ಸೇರಿದಂತೇ ಇಡೀ ಆರ್ಯಾವರ್ತದಲ್ಲಿ ವ್ಯಾಪಿಸಿತ್ತು.ಇಂತಹ ಆರ್ಯಾವರ್ತದಲ್ಲೇ ಆಯೋಧ್ಯೆ ಕೂಡ ಇದೆ ಎಂಬುದನ್ನು ಗಮನಿಸಬೇಕು. ಬ್ರಹ್ಮಮಾನಸಪುತ್ರರಾದ ವಶಿಷ್ಠರೂ ಸೇರಿದಂತೇ ಹಲವು ಮಹರ್ಷಿಗಳು ಇಲ್ಲಿನ ಸಂಸ್ಕೃತಿಗೆ ಭದ್ರ ಬುನಾದಿಯನ್ನು ಹಾಕಿದ್ದರು. ಅಪೌರುಷೇಯವಾದ ವೇದಗಳು, ಉಪನಿಷತ್ತುಗಳು, ಪುರಾಣಗಳು ಮೊದಲಾದವುಗಳ ಬಗ್ಗೆ ಆಳವಾದ ಅಧ್ಯಯನಗಳು ಕಾಶ್ಮೀರದ ವಿಶ್ವವಿದ್ಯಾಲಯದಲ್ಲಿ ನಡೆಸಲ್ಪಡುತ್ತಿದ್ದವು. ವೇದಾಂಗಗಳು [೧. ಶಿಕ್ಷಾ-ದೂರವಾಣಿ ಮತ್ತು ಸಂವಹನಾ ಕ್ರಮಗಳು,೨.ಕಲ್ಪ-ಕೈಂಕರ್ಯಗಳು-ಸಂಪ್ರದಾಯಗಳು, ೩. ವ್ಯಾಕರಣ, ೪.ನಿರುಕ್ತ-ಪದದ ವ್ಯುತ್ಫತ್ತಿ ಧಾತು ಮೊದಲಾದ ಮಾಹಿತಿ ಸಂಗ್ರಹ,೫. ಛಂದಸ್-ಲಘು ಗುರು ಇತ್ಯಾದಿ ಮಾಪನಾ ಮಾತ್ರೆಗಳ ಬಳಕೆ, ೬. ಜ್ಯೋತಿಷ್ಯ] ಅನುಷ್ಠಾನದಲ್ಲಿದ್ದವು. ಇದಲ್ಲದೇ, ಇಹಜೀವಿತಕ್ಕೆ ಬೇಕಾಗುವ ಉಪವಿದ್ಯೆಗಳಾದ ತಂತ್ರಜ್ಞಾನ, ಆಯುರ್ವೇದ [ಋಗ್ವೇದ], ಗಾಂಧರ್ವವೇದ [ಯಜುರ್ವೇದ], ಧನುರ್ವೇದ[ಬಿಲ್ಲುವಿದ್ಯೆ,ಸಾಮವೇದ], ಶಸ್ತ್ರಾಸ್ತ್ರ[ಅಥರ್ವವೇದ], ಸ್ಥಾಪತ್ಯವೇದ[ಆರ್ಕಿಟೆಕ್ಚರ್], ಶಿಲ್ಪಶಾಸ್ತ್ರ, ಲೋಹಶಾಸ್ತ್ರ ಮೊದಲಾದ ಹಲವು ವಿದ್ಯೆಗಳು ಕಲಿಸಲ್ಪಡುತ್ತಿದ್ದವು.  ಹುಡುಕುತ್ತಾ ಹೋದರೆ ಇಡೀ ಈ ವಿಶ್ವವೇ ಒಂದುಕಾಲಕ್ಕೆ ಹಿಂದೂ ವೈದಿಕ ಸಂಪ್ರದಾಯಗಳನ್ನು ಪರಿಪಾಲಿಸುತ್ತಿತ್ತು. ಭಾರತ ಅದಕ್ಕೆ ರಾಜಧಾನಿಯಂತಿತ್ತು. ಇದಕ್ಕೆ ತಕ್ಕಮಟ್ಟಿಗಿನ ಪುರಾವೆಯಾಗಿ ಪಾರ್ಸಿಗಳು ಕಾಣುತ್ತಾರೆ, ಪಾರ್ಸಿಗಳ ಸಂಪ್ರದಾಯಗಳಲ್ಲಿ ಹಿಂದೂ ಸಂಸ್ಕೃತಿಯ ಕೆಲವು ಕುರುಹುಗಳು ಕಾಣುತ್ತವೆ. ಕೃತಯುಗದ ಆದಿಯಲ್ಲಿಯಿಂದಲೂ ಈ ಆರ್ಯಾವರ್ತ ಇತ್ತೆಂಬುದಕ್ಕೆ ಹಲವು ಪುರಾವೆಗಳು ಪ್ರಾಗೈತಿಹಾಸವಾದ ರಾಮಾಯಣ ಮತ್ತು ಮಹಾಭಾರತಗಳ ಕಥಾನಕಗಳಲ್ಲಿ ಸಿಗುತ್ತವೆ.     

ಆರ್ಯರನ್ನು ಕಾಲಾನಂತರದಲ್ಲಿ ಬ್ರಾಹ್ಮಣರು ಎನ್ನಲಾಯ್ತು. ಬ್ರಹ್ಮಜ ಜ್ಞಾನವನ್ನು ಪಡೆದ-ಅಧ್ಯಯನಮಾಡಿದ, ಅನುಷ್ಠಾನಮಾಡಿದ ಜನರನ್ನು ಬ್ರಾಹ್ಮಣರು ಎಂದರು. ಬ್ರಹ್ಮಬಲದಿಂದ ಪ್ರೇರಣೆಗೊಂಡ ಈ ಜನ ’ವಿಪ್ರ’ರು ಎಂದೂ ಯಜ್ಞೋಪವೀತವನ್ನು ಧರಿಸಿ ಉಪನಯನ ಸಂಸ್ಕಾರವನ್ನು ಪಡೆಯುವುದರಿಂದ ಎರಡನೇ ಜನ್ಮ ಅದು ಎಂಬ ದೃಷ್ಟಿಯಿಂದ ’ದ್ವಿಜ’ರು ಎಂದೂ ಕರೆಯಲ್ಪಟ್ಟಿದ್ದಾರೆ. ವೇದಕಾಲ ಅಂದರೆ ಕೃತಯುಗಾನಂತರ ಬ್ರಾಹ್ಮಣರು ಬರೇ ವೇದಾಚರಣೆ ಒಂದೇ ಅಲ್ಲದೇ ಹಲವು ವೃತ್ತಿಗಳಲ್ಲಿ ತೊಡಗಿಕೊಂಡರಾದರೂ ಅವರ ಪ್ರಮುಖ ಕೆಲಸ ವೇದಾಧ್ಯಯನ ಮತ್ತು ಪೌರೋಹಿತ್ಯವಾಗಿತ್ತು. ಹಾಗಂತ ಅನೇಕರು ಅಧ್ಯಾಪನ, ವೈದ್ಯ, ಸಾರಸ್ವತ[ಬರಹ], ಜಮೀನ್ದಾರ, ರಾಜ, ಮಂತ್ರಿ, ತಂತ್ರಜ್ಞ, ಜ್ಯೋತಿಷ್ಯ ಹೀಗೇ ಹಲವು ಉಪವೃತ್ತಿಗಳಲ್ಲಿ ತೊಡಗಿಕೊಂಡವರೂ ಇದ್ದರು. ಆರ್ಯಾವರ್ತದಲ್ಲಿ ಆರಂಭವಾದ ಕೆಲವು ರಾಜವಂಶದ ರಾಜರು ಬ್ರಹ್ಮಕ್ಷತ್ರಿಯರೆನಿಸಿ ಭಾರತದ ನಾನಾ ರಾಜ್ಯಗಳನ್ನು ಆಳಿದ ವಿಷಯ ತಿಳಿದುಬರುತ್ತದೆ. ಉಚ್ಚಮಟ್ಟದ ಸಂಸ್ಕಾರ-ಸಂಸ್ಕೃತಿಗಳನ್ನು ಪಡೆದಿದ್ದರಿಂದ ಈ ಜನ ಇಡೀ ಭಾರತಕ್ಕೇ ಇಷ್ಟವಾಗಿದ್ದರು ಅಲ್ಲದೇ ತಮ್ಮ ಸಂಸ್ಕಾರದಿಂದ ಭಾರತದ ಸಕಲ ಜನತೆಯಮೇಲೆ ಪ್ರಭಾವ ಬೀರಿದ್ದರು. 


Gods, Sages and Kings: Vedic Secrets of Ancient Civilization- A history book by Devid Frawley


ನಿಷ್ಪಕ್ಷಪಾತವಾಗಿ ಸಂಶೋಧಿಸಿದ ಇತಿಹಾಸ ತಜ್ಞ ಡೇವಿಡ್ ಫ್ರಾಲೆ ಎನ್ನುವವರು ತಮ್ಮ "Gods, Sages and Kings: Vedic Secrets of Ancient Civilization" ಎಂಬ ಪುಸ್ತಕದಲ್ಲಿ ಆರ್ಯರು ಭಾರತಕ್ಕೆ ಬಂದರು ಎಂಬುದು ಸುಳ್ಳು ಮತ್ತು ಅವರು ಭಾರತದವರೇ ಆಗಿದ್ದರು ಎಂಬುದನ್ನು ಉದಾಹರಣೆಗಳ ಸಮೇತ ಪ್ರತಿಪಾದಿಸಿದ್ದಾರೆ. ಅನೇಕ ಇತಿಹಾಸ ತಜ್ಞರು ಎಲ್ಲಿ ಎಡವಿದರು ಮತ್ತು ಕ್ರಿಸ್ತಿಯನ್ ಮಿಶನರಿ ಪ್ರೇರಿತ ಸಂಶೋಧಕರು ಬುದ್ಧ್ಯಾ "ಆರ್ಯರು ಹೊರಗಿನವರು, ಯುರೋಪ ಮೂಲದವರಾಗಿದ್ದು ಮಧ್ಯಏಷ್ಯಾಕಡೆಗಿಂದ ಭಾರತಕ್ಕೆ ಬಂದರು" ಎಂದಿದ್ದಾರೆ ಎನ್ನುತ್ತಾರೆ. ಲೋಹಗಳ ಪರಿಚಯ ಬಹಳ ಚೆನ್ನಾಗೇ ಇದ್ದ ಆರ್ಯರ ಎಲ್ಲಾ ಪುಸ್ತಕಗಳಲ್ಲಿ ’ಅಯಸ್’ ಎಂಬ ಪದವನ್ನು ಕಾಣಬಹುದು. ಅಯಸ್ ಎಂಬುದು ಆರ್ಯರು ಲೋಹಕ್ಕೆ ಬಳಸುವ ಸಾಮಾನ್ಯ ಪದ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಋಗ್ವೇದದಲ್ಲಿ ಸ್ವರ್ಣ ಲೋಹದ ಬಗ್ಗೆ ಮತ್ತೆ ಮತ್ತೆ ಹೇಳಿದೆಯಾದರೂ ಯಕುರ್ವೇದ, ಅಥರ್ವವೇದಗಳಲ್ಲಿ ಅಯಸ್ ಎಂಬ ಪದದ ಉಲ್ಲೇಖ ಬಂದಾಗ ಕೆಂಪು ಮತ್ತು ಕಪ್ಪು ಅಯಸ್ ಗಳ ವರ್ಣನೆಯನ್ನು ಕಾಣಬಹುದಾಗಿದೆ. ಆದರೆ ಬಹುತೇಕ ಇತಿಹಾಸಕಾರರು ಅಯಸ್ ಎನ್ನುವುದು ಕಬ್ಬಿಣಕ್ಕೆ ಸಮಾನಾಂತರ ಪದವೆಂದೂ ಅಯಸ್ ಎಂದೆ ಕಬ್ಬಿಣವೆಂತಲೂ ಹೇಳಿದ್ದಾರೆ ಎನ್ನುತ್ತಾರೆ. 

ಆರ್ಯರು ಅಲೆಮಾರಿಗಳು ಎಂಬರ್ಥದಲ್ಲಿ ಬಿಂಬಿಸಿರುವ ಹಲವು ಇತಿಹಾಸ ತಜ್ಞರು ಮಧ್ಯಏಷ್ಯಾದಿಂದ ಕುದುರೆಗಾಡಿಗಳಲ್ಲಿ ಆರ್ಯರು ಭಾರತಕ್ಕೆ ಬಂದರು ಎಂದೂ ಹೇಳಿದ್ದಾರೆ. ಕಬ್ಬಿಣದ ಶಸ್ತ್ರಾಸ್ತ್ರಗಳ ಸಹಿತ ಧಾವಿಸಿದ ಅವರು ಆಗಿನ ಭಾರತದ ಪಟ್ಟಣಗಳಮೇಲೆ ತಮ್ಮ ಅತ್ಯಧುನಿಕ ಶಸ್ತ್ರಸ್ತ್ರಗಳಿಂದ ದಾಳಿ ನಡೆಸಿ ಗೆದ್ದುಕೊಂಡರು ಎಂದು ಹೇಳಿದ್ದಾರೆ. ಯಾವುದೇ ಇತಿಹಾಸ ತಜ್ಞರಿಗೆ ಸಿಂಧೂ ಕಣಿಯೆವ ನಾಗರಿಕತೆಯಲ್ಲಿ ಕುದುರೆಯ, ಕಬ್ಬಿಣದ ಶಸ್ತ್ರಾಸ್ತ್ರಗಳ ಯಾ ಕುದುರೆಗಾಡಿಗಳ ಪಳೆಯುಳಿಕೆ-ಅವಶೇಷ ಸಿಗಲಿಲ್ಲ ಎಂದು ಡೆವಿಡ್ ವಾದಿಸುತ್ತಾರೆ. ಬಹುತೇಕ ಆರ್ಯರು ಸಂಸ್ಕೃತವನ್ನೇ ಮಾತನಾಡುತ್ತಿದ್ದರು. ಬರಹ ದೇವನಾಗರೀ ಲಿಪಿಯಲ್ಲೇ ಸಾಗುತ್ತಿತ್ತು. ತಮ್ಮದೇ ಆದ ನೂರಾರು ನಗರಗಳನ್ನು ಅವರು ಹೊಂದಿದ್ದರು ಎಂಬುದು ಋಗ್ವೇದದಲ್ಲಿ ಕಾಣಬಹುದಾಗಿದೆ ಎನ್ನುತ್ತಾರೆ. ಈಜಿಪ್ಟ್ ಮತ್ತು ಮೆಸಪಟೋಮಿಯಾ ರಾಜರುಗಳೂ ಕೂಡ ನಾಶಪಡಿಸುವ ಮತ್ತು ಸೋಲಿಸುವ ಅರ್ಥಗಳುಳ್ಳ ನಗರಗಳನ್ನು ಹೊಂದಿದ್ದರು ಎಂದಾಗ ಆರ್ಯರು ಅಂತಹ ಹೆಸರುಗಳನ್ನು ತಮ್ಮ ನಗರಗಳಿಗೆ ಬಳಸಿದ್ದರೆ ಅದು ಕೇವಲ ದುರುದ್ದೇಶ ಪೂರಿತವಲ್ಲ.

ಗಮನಿಸಿ : ಇತಿಹಾಸ ತಜ್ಞರು ಕಾಲಗಣನೆ ಮಾಡುವುದು ಮೂರು-ನಾಲ್ಕು ರೀತಿಯಲ್ಲಿ. ಸಿ.ಇ.[ಕಾಮನ್ ಎರಾ], ಬಿ.ಸಿ.ಇ[ಬಿಫೋರ್ ಕಾಮನ್ ಎರಾ] ಮತ್ತು ಎ.ಡಿ [ ಅನ್ನೊ ಡಾಮಿನಿ], ಬಿ.ಸಿ [ಬಿಫೋರ್ ಕ್ರಿಸ್ತ್]. ಯಾವುದನ್ನೇ ಲೆಕ್ಕಕ್ಕೆ ತೆಗೆದುಕೊಂಡರು ಯಾವುದೇ ಅಧಿಕೃತ ನಗದು ದಾಖಲೆಗಳು ೪೦೦೦ ವರ್ಷಗಳಿಗೂ ಹಿಂದಕ್ಕೆ ಹೋಗುವುದಿಲ್ಲ. ಕೇವಲ ಕಾರ್ಬನ್ ಡೇಟಿಂಗ್ ಮೂಲಕ ಮತ್ತು ಬೇರೆ ಬೇರೇ ಸಂಗ್ರಹಿತ ಭೌಗೋಳಿಕ ಮಾಹಿತಿಗಳ ಮೂಲಕ ಕಾಲಗಣನೆಯನ್ನು ಮಾಡಲಾಗುತ್ತದೆ. ಸಿಂಧೂ ನದಿಯ ನಾಗರಿಕತೆಯ ಅಳಿವಿಗೆ ಕಾರಣ ಅಲ್ಲಿನ ನದಿಯ ಪ್ರವಾಹದಿಂದಲೂ ಆಗಿರಬಹುದು ಅಥವಾ ಭೂಕಂಪ/ಪ್ರಕೃತಿ ವಿಕೋಪಗಳೂ ಆಗಿರಬಹುದು. ಹೀಗಾಗಿ ಸಿಂಧೂ ನದಿಯ ನಾಗರಿಕತೆಯನ್ನೇ ಎಲ್ಲೆಡೆಗೂ ಪಸರಿಸುತ್ತಾ ಬಂದರು ಎಂಬುದು ಸರಿಯಾಗಿವುದಿಲ್ಲ. ಅಷ್ಟಕ್ಕೂ ಸಿಂಧೂನದಿ ಆರ್ಯಾವರ್ತದಲ್ಲೇ ಇದೆ! ವ್ಹೀಲರ್ ಮೊದಲಾದ ಸಂಶೋಧಕರು ಹಿಂದೂಧರ್ಮವನ್ನು ಆಳವಾಗಿ ಅಭ್ಯಸಿಸಲಿಲ್ಲ. ಹಿಂದೂಗಳ ಬಗ್ಗೆ ತಿಳಿಯದೇ ಆರ್ಯರ ಕುರುಹುಗಳನ್ನು ಹುಡುಕುವುದು ಸಂಪೂರ್ಣ ಸಾಧ್ಯವಾಗುವುದಿಲ್ಲ. ಗುಜರಾತಿನ ಲೋಥಲ್, ರಾಜಸ್ಥಾನದ ಕಲಿಬಂಗನ್ ಪ್ರದೇಶಗಳಲ್ಲಿ ಅಗೆದಾಗ ವೈದಿಕ ಕಾಲದ ಎತ್ತುಗಳ ಅಸ್ತಿಗಳು, ಒಡೆದ ಮಡಕೆ-ಕುಡಿಕೆಗಳು, ಬಳಸಿದ ಆಭರಣಗಳು, ಯಜ್ಞಕುಂಡಗಳು ಸಿಕ್ಕಿದ್ದು ಎಲ್ಲವೂ ವೇದಗಳಲ್ಲಿ ವರ್ಣಿಸಿದಂಥವೇ ಆಗಿವೆ. ಹೀಗಾಗಿ ಸಿಂಧೂನದಿ ನಾಗರಿಕತೆಯಲ್ಲಿ ಸಿಕ್ಕಿರುವ ಈ ಸಾಕ್ಷ್ಯಗಳು ವೇದಪಂಡಿತರು ಈ ನೆಲದಲ್ಲೇ ಬಹಳಕಾಲ ಇದ್ದರು ಎಂಬುದನ್ನು ಪುಷ್ಟೀಕರಿಸಿವೆ; ಹಾಗಾಗಿ ಆರ್ಯರು ಅಲೆಮಾರಿಗಳಲ್ಲ! ಒಂದು ಮಾತು ನೆನಪಿಡಬೇಕು-ಕೇವಲ ಅವಶೇಷಗಳು ಮಾತ್ರ ನಾಗರಿಕತೆಯನ್ನು ಒಪ್ಪುವುದಕ್ಕೆ ಆಧಾರವೆನ್ನುವುದಕ್ಕಿಂತಾ ಅವರು ಬಿಟ್ಟುಹೋದ ಗ್ರಂಥಗಳಲ್ಲಿ ಅವರ ವಸಾಹತುಗಳ ವರ್ಣನೆಗಳಿದ್ದು ಅವರ ಹೇಳಿಕೆಗಳನ್ನು ಒಪ್ಪುವಂತಹ ಕುರುಹುಗಳೇ ದೊರೆತಿವೆ. 

ಆರ್ಯರ ಬಣ್ಣ ಬಿಳಿ ಇದ್ದು ಇದನ್ನೇ ಆಧಾರವಾಗಿಟ್ಟುಕೊಂಡು ಯುರೋಪಿಯನ್ನರು ಕಪ್ಪು-ಬಿಳುಪಿನವರಲ್ಲಿ ಭೇದ ಗಣಿಸಿದ ಹಾಗೇ ಭಾರತದಲ್ಲೂ ಅವರು ಐರೋಪ್ಯರಾಷ್ಟ್ರಗಳ ಕಡೆಯಿಂದಲೇ ಬಂದು ನೆಲೆಸಿದರು ಎಂಬುದು ಕೇವಲ ತುಲನೆ. ಈಜಿಪ್ಟ್ ಮತ್ತು ಪರ್ಸಿಯಾ ಗಳಲ್ಲಿ ನಡೆದಹಾಗೇ ಕಪ್ಪುಬಣ್ಣದವರ ಮತ್ತು ಬಿಳಿವರ್ಣದವರ ನಡುವೆ ಕದನ ನಡೆಯಿತು ಎಂಬುದೆಲ್ಲಾ ಕೇವಲ ಸಂಶೋಧಕರ ಮನೋಕಲ್ಪನೆ ಅಷ್ಟೇ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಕಪ್ಪು-ಬಿಳುಪು ವಿವಾದ ಇದೆ. ಭಾರತಕ್ಕೂ ಅದನ್ನೇ ಅನ್ವಯಿಸಿ ಹೇಳಿದ್ದಾರೆಯೇ ಹೊರತು ಇಲ್ಲಿ ಬಣ್ಣಗಳನ್ನಾಧರಿಸಿ ವಾದ-ವಿವಾದಗಳು, ಕದನಗಳು ನಡೆಯಲಿಲ್ಲ. ಗುಜರಾತ್, ಪಂಜಾಬ್ ಪ್ರಾಂತಗಳಲ್ಲಿ ೪೦೦೦ ವರ್ಷಗಳ ಹಿಂದೆಯೂ ಇಂಡೋ-ಆರ್ಯನ್ ಭಾಷೆಯನ್ನು ಬಳಸುತ್ತಿದ್ದರು; ಈಗಲೂ ಅದನ್ನೇ ಕಾಣಬಹುದಾಗಿದೆ. ಕ್ರಿಸ್ತನ್ ಜನನಕ್ಕೂ ೨೦೦೦ ವರ್ಷಗಳಷ್ಟು ಪೂರ್ವದಲ್ಲಿ, ಮೂರು ಗುಂಪುಗಳಲ್ಲಿ ಸಂಪ್ರದಾಯ, ಕಾಯ್ದೆ-ಕಾನೂನು ಮೊದಲಾದವುಗಳ ಸಾಮ್ಯತೆಯನ್ನು ಕಾಣಬಹುದಾದರೂ ಒಂದು ಗುಂಪು ಪ್ರಬಲವಾಗಿತ್ತು. | ಸಮಾನ ಶೀಲೇಷು ವ್ಯಸನೇಷು ಸಖ್ಯಂ | ಎನ್ನುವಹಾಗೇ ಒಂದೇ ಸಂಪ್ರದಾಯದ ಹಲವು ಜನ ತಾವಿದ್ದ ಗುಂಪಿಗೆ ಆರ್ಯರು ಎಂದು ಅವರೇ ಕರೆದುಕೊಂಡಿದ್ದರು.

ಇನ್ನೂ ಮುಂದಕ್ಕೆ ಹೋದರೆ, ಸಂಶೋಧಕರಿಗೆ ಸಿಕ್ಕಿದ ವಸ್ತುಗಳು ಸಿಂಧೂನದಿಯ ಪೂರ್ವಭಾಗದಲ್ಲಿ ಸಿಕ್ಕವೇ ಹೊರತು ಪಶ್ಚಿಮ ಭಾಗದಲ್ಲಲ್ಲ. ಪಂಜಾಬ್ ಮತ್ತು ರಾಜಸ್ಥಾನದ ಬಹುಭಾಗಗಳಲ್ಲಿ ಇವತ್ತು ಬತ್ತಿಹೋಗಿರುವ ಸರಸ್ವತಿ ಮತ್ತು ವೃಷದ್ವತಿ ನದಿಗಳ ಪ್ರದೇಶದಲ್ಲಿ ಈ ಜನರು ನೆಲೆಸಿದ್ದರು. ಸರಸ್ವತಿ ನದಿಯನ್ನು ಬಹುವಾಗಿ ಅವಲಂಬಿಸಿದ್ದ ಈ ಜನರಿಗೆ ಗಂಗೆಯಂತೆಯೇ ಸರಸ್ವತಿ ಅತ್ಯಂತ ಪವಿತ್ರ ನದಿಮಾತೆಯಾಗಿದ್ದಳು. ಹಿಮಾಲಯದಲ್ಲಿ ಹುಟ್ಟಿ ಸಮುದ್ರ ಸೇರುವವರೆಗೂ ಈ ನದಿ ಪವಿತ್ರವಾಗಿದ್ದುದರಿಂದ ಜನ ಸರಸ್ವತೀ ನದಿ ತೀರದಲ್ಲಿ ವಾಸಿಸಲು, ತಮ್ಮ ಯಜ್ಞ ಯಾಗಾದಿಗಳನ್ನು ನಡೆಸಲು ಇಷ್ಟಪಡುತ್ತಿದ್ದರು. ಸದಾ ಸರಸ್ವತೀ ದಡದಲ್ಲೇ ವಾಸವಿದ್ದರು. ಇತಿಹಾಸ ಪೂರ್ವದಲ್ಲಿ ಒಮ್ಮೆ ಸಟ್ಲೆಜ್[ಸಿಂಧೂ], ಗಂಗಾ, ಯಮುನಾ ನದಿಗಳೂ ಕೂಡ ಬತ್ತಿಹೋಗಿದ್ದವು! ಈಗ ಅವುಗಳ ಹರಿವು ಕೂಡ ಬದಲಾಗಿಹೋಗಿವೆ. ಸರಸ್ವತೀ ನದಿ ಭೌಗೋಳಿಕವಾಗಿ ಭಾರತದ ದೊಡ್ಡ ನದಿಗಳಲ್ಲಿ ಒಂದು ಎಂಬುದರಲ್ಲಿ ಅನುಮಾನವಿಲ್ಲವಾದರೂ ಬತ್ತಿಹೋಗಿರುವು[ಗುಪ್ತಗಾಮಿನಿಯಾಗಿರುವು]ದರಿಂದ ಈಗ ಗಣನೆಗೆ ಬರುತ್ತಿಲ್ಲ. ಸಿಂಧೂಕಣಿವೆಯ ನಾಗರಿಕತೆಯ ಅಂತ್ಯವಾಗುವ ಹೊತ್ತಿಗೆ ಅಜಮಾಸು ಕ್ರಿ.ಪೂ.೧೫೦೦ ಕ್ಕೂ ಮುಂಚೆ ಸರಸ್ವತಿ ಗುಪ್ತಗಾಮಿನಿಯಾದಳು! ಋಗ್ವೇದದಲ್ಲಿ ಸರಸ್ವತಿ ನದಿಯ ವರ್ಣನೆ ಇದ್ದು ಅದು ಸಿಂಧೂ ಕಣಿವೆಯ ನಾಗರಿಕತೆಗೂ ಪೂರ್ವದ್ದಾಗಿದೆ. ಹರಿವ ನೀರಿಲ್ಲದಿದ್ದರೆ ಗೊತ್ತಿದ್ದೂ ಆರ್ಯರು ಸರಸ್ವತಿ ದಡದಲ್ಲಿ ಇರುತ್ತಿದ್ದರೇ? ಸಾಧ್ಯವಿಲ್ಲ.

ವೈದಿಕ ಗಣಿತ [ವೇದಿಕ್ ಮೆಥ್ಮೆಟಿಕ್ಸ್] ಬಹಳ ಉತ್ತಮವಾಗಿದೆ! ವೇದಾಂಗ ಜ್ಯೋತಿಷ್ಯದಲ್ಲಿ ಪಂಚಾಂಗ[ವೇದಿಕ್ ಕ್ಯಾಲೆಂಡರ್]ಇದ್ದಿತ್ತು. ಸೂರ್ಯಪಥ ಭೂಮಧ್ಯ ರೇಖೆಯಿಂದ ಬದಲಾಗುವುದುದನ್ನು ಅವರು ನಿಖರವಾಗಿ ಹೇಳುತ್ತಿದ್ದಾರೆ. ಈ ಪಂಚಾಂಗ ಮೂಲವನ್ನು ಹುಡುಕುತ್ತಾ ಸಾಗಿದರೆ ಅದು ಕ್ರಿ.ಪೂ. ೨೪೦೦ ಕ್ಕೂ ಹಿಂದಕ್ಕೆ ಸಾಗುತ್ತದೆ. ಇಂತಹ ಅತ್ಯದ್ಭುತ ಮತ್ತು ಅತ್ಯುನ್ನತ ಖಗೋಳ ಮಾಹಿತಿಯನ್ನು ಅವರ ಪಂಚಾಂಗ ಅದಾಗಲೇ ಶ್ರುತಪಡಿಸಿತ್ತು ಎಂದರೆ ಅವರ ಕಾಲ ಅದಕ್ಕೂ ಹಿಂದಿನಿಂದಲೂ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಪಾಶ್ಚಿಮಾತ್ಯ ಸಂಶೋಧಕರು ಮೇಲಿಂದಮೇಲೆ ಗಣನೆಗೆ ತೆಗೆದುಕೊಂಡ ಅಂಶಗಳು ಇನ್ನೂ ಬಲಿಯುವ ಮೊದಲೇ ಪಕ್ವವಾಗಿರುವ ಹಣ್ಣುಗಳಂತೆಯೇ ಇವೆ! ವೈದಿಕ ಸಾಹಿತ್ಯಗಳಾದ ’ಶತಪಥ ಬ್ರಾಹ್ಮಣ’ ಮತ್ತು ’ಐತಿರೇಯ ಬ್ರಾಹ್ಮಣ’ ಗಳಲ್ಲಿ ಖಗೋಳ ಮಾಹಿತಿಗಳು ದೊರಕುತ್ತಿದ್ದು ೧೧ ಗುಂಪುಗಳ ವೈದಿಕ ರಾಜರ ಹೆಸರುಗಳ ಯಾದಿಯನ್ನೂ ಅವು ಒಳಗೊಂಡಿವೆ.  ಹಿಂದೊಮ್ಮೆ ಕೃತ್ತಿಕಾ ನಕ್ಷತ್ರದಲ್ಲಿ ಭೂಮಧ್ಯ ರೇಖೆಯಿಂದ ಸೂರ್ಯಪಥ ಬದಲಾಗಿದ್ದನ್ನು ಆರ್ಯರು ವರ್ಣಿಸಿದ್ದು ಅದು ಕ್ರಿ.ಪೂ. ೨೪೦೦ ಕ್ಕೂ ಮುಂಚಿನದಾದುದರಿಂದ ಆರ್ಯರು ಅದಕ್ಕೂ ಮೊದಲೇ ಇಲ್ಲಿ ವಾಸವಿದ್ದರು ಎಂಬುದು ಸಾಬೀತಾಗುತ್ತದೆ! ಬಹುತೇಕ ಇತಿಹಾಸಕಾರರು ವೈದಿಕ ಸಾಹಿತ್ಯವನ್ನು ಪರಿಗಣಿಸದೇ ಹಾಗೇ ಇತಿಹಾಸವನ್ನು ಬರೆದಿದ್ದಾರೆ. ವೇದ ಸಾಹಿತ್ಯದಲ್ಲಿ ಇತ್ತೀಚಿನ ರಾಜರುಗಳ ಹೆಸರುಗಳು ಅಡಕವಾಗಿಲ್ಲ ಎಂಬ ಪೊಳ್ಳುನೆಪಕೊಟ್ಟು ಈ ರೀತಿ ಅಸಡ್ಡೆಮಾಡಿ ಆರ್ಯರು ಭಾರತಕ್ಕೆ ನುಗ್ಗಿದರು ಎಂಬುದನ್ನೇ ಸಮರ್ಥಿಸಿಬಿಟ್ಟಿದ್ದಾರೆ! ವೇದಸಾಹಿತ್ಯಗಳ ಪದಗಳ ಅರ್ಥವನ್ನು ಅನರ್ಥಮಾಡಿಕೊಂಡಿದ್ದೂ ಕೆಲಮಟ್ಟಿಗೆ ಕಾರಣವಾಗುತ್ತದೆ.

ಇತಿಹಾಸ ತಜ್ಞರ ಪ್ರಕಾರ: ಆರ್ಯರು ಮಧ್ಯಏಷ್ಯಾದಿಂದ ವಲಸಿಗರಾಗಿ ಭಾರತಕ್ಕೆ ಬಂದರು. ಋಗ್ವೇದದಲ್ಲಿ ನೂರಾರು ಸರ್ತಿ ಸಮುದ್ರಗಳ ಬಗ್ಗೆ ಹೇಳಲ್ಪಟ್ಟಿದೆ ಮತ್ತು ಅನೇಕಾವರ್ತಿ ಹಡಗುಗಳ ಯಾನಗಳ ಬಗ್ಗೆ ಮಾಹಿತಿ ಇದೆ. ವೇದಕಾಲದ ಮನು, ತುರ್ವಾಶ, ಯದು, ಭುಜ್ಯು ಮೊದಲಾದವರು ಸಮುದ್ರದಲ್ಲಿ ಸಾಗುವಾಗ ತಮ್ಮನ್ನು ರಕ್ಷಿಸಿಕೊಂಡ ಉಲ್ಲೇಖಗಳಿವೆ. ವೈದಿಕ ಸಾಹಿತ್ಯಗಳ ಪ್ರಕಾರ, ವರುಣ ಅನೇಕ ಮಹರ್ಷಿಗಳಿಗೆ ತಂದೆ; ಅದರಲ್ಲೂ ವಶಿಷ್ಠ, ಅಗಸ್ತ್ಯ ಮತ್ತು ಬೃಗು ಮಹರ್ಷಿಗಳಿಗೆ ತಂದೆ. ವೇದಗಳಲ್ಲಿ ಹೇಳಿದ ’ಸಮುದ್ರ’ ಎಂಬ ಪದ ಸಾಗರಗಳಿಗೆ ಹೇಳಿದ್ದಲ್ಲವೆಂತಲೂ ಸಿಂಧೂ ನದಿಯಂತಹ ದೊಡ್ಡಮಟ್ಟದ ನೀರಿನ ಹರಿವಿಗೆ ಅವರು ಬಳಸಿದ್ದೆಂತಲೂ ಪಾಶ್ಚಾತ್ಯ ಇತಿಹಾಸಕಾರರ ಹೇಳಿಕೆಯಾಗಿದೆ. ಗ್ರಿಪ್ಫಿತ್ ಎಂಬ ಇತಿಹಾಸಕಾರ ಋಗ್ವೇದವನ್ನು ಮನಸ್ಸಿಗೆ ಬಂದಹಾಗೇ ಅರ್ಥೈಸಿ ಬರೆದಿದ್ದಾನೆ. ಒಂದೊಮ್ಮೆ ಸಮುದ್ರ ಎಂಬ ಪದ ಸಾಗರಗಳನ್ನುದ್ದೇಶಿಸಿ ಬಳಸಲ್ಪಡದೇ ಇದ್ದಿದ್ದಾದರೆ ಋಗ್ವೇದದಲ್ಲಿ ಅದೇಕೆ ಸಾಗರಗಳ ಬಗ್ಗೆ ಅಷ್ಟೊಂದು ಸಂಬಂಧ ಹೇಳಲ್ಪಡುತ್ತಿತ್ತು ? ಉತ್ತರ ಭಾರತದ ಗಂಗಾ ಯಮುನಾ ನದಿಗಳ ಭಾಗದಲ್ಲಿ ನಡೆಸಿದ ಇತ್ತೀಚಿನ ಸಂಶೋಧನೆಯೊಂದರಲ್ಲಿ ಬಣ್ಣಗಳ ಚಿತ್ತಾರಗಳು ಮುದ್ರಿಸಲ್ಪಟ್ಟ ಬೂದು ಬಣ್ಣದ ಪಾತ್ರೆಗಳು ದೊರೆತಿವೆ ಮತ್ತು ಅವುಗಳ ಕಾಲ ಕ್ರಿ.ಪೂ. ೧೦೦೦ ಎಂದು ಪರಿಗಣಿತವಾಗಿದೆ. ಈ ಪಾತ್ರೆಗಳು ಆರ್ಯರ ಅತ್ಯಾಧುನಿಕ ಕೌಶಲವನ್ನು ಎತ್ತಿತೋರುತ್ತವೆ. ಮೇಲಾಗಿ ಹಿಟ್ಟಿಟಿ ಎಂಬ ಜನಾಂಗ ಮಧ್ಯ ಏಷ್ಯಾ ಪ್ರದೇಶದಲ್ಲೇ ಕ್ರಿ.ಪೂ. ೨೨೦೦ ಕ್ಕೂ ಮುಂಚೆ ನೆಲೆಸಿತ್ತು ಎಂಬುದು ತಿಳಿದುಬಂದಿದೆ. ಅಂತಹ ಹಿಟ್ಟಿಟಿಗಳೂ ಸಹಿತ ಸೂರ್ಯ, ಇಂದ್ರ, ಮರುತ್ ಇತ್ಯಾದಿ ದೇವರುಗಳನ್ನು ಆರಾಧಿಸುತ್ತಿದ್ದರು. ಅವರ ರಥಗಳಮೇಲೆ ಸಂಸ್ಕೃದಲ್ಲಿ ಬರೆದದ್ದು ಕಂಡುಬರುತ್ತದೆ. ಹಿಟ್ಟಿಟಿ ಮತ್ತು ಮಿಟ್ಟಾನಿ ಜನಾಂಗದವರು ಇಂಡೋ-ಆರ್ಯನ್ ಭಾಷೆಯನ್ನೇ ಮಾತನಾಡುತ್ತಿದ್ದರು ಎನ್ನಲಾಗಿದೆ. ಅಲ್ಲಿಯೂ ವೈದಿಕ ಧರ್ಮವೇ ವ್ಯಾಪಿಸಿತ್ತು ಎಂಬುದರಲ್ಲಿ ಸಂಶಯವಿಲ್ಲ. ಆರ್ಯರು ಅವರ ಪುರೋಹಿತರುಗಳಾಗಿದ್ದಿರಬಹುದಷ್ಟೇ.     

 ದ್ವಾಪರ ಯುಗದಲ್ಲಿ ಇದ್ದಿರಬಹುದಾದ ಭಾರತದ  ನಕಾಶೆ

ಸಿಂಧೂ ನಾಗರಿಕತೆಯಲ್ಲಿ ಭಾಷೆಗೆ ಲಿಪಿ ಇತ್ತು, ಸಂಶೋಧನಾ ಸಮಯದಲ್ಲಿ ಅನೇಕ ಠಸ್ಸೆಗಳು ದೊರಕಿವೆಯಾದರೂ ಅವು ದ್ರಾವಿಡ ಜನಾಂಗದವಾಗಿರಬಹುದೆಂದು ಕಲ್ಪಿಸಲಾಗಿದೆ. ಇದು ಕೇವಲ ಊಹೆ ಅಷ್ಟೇ. ಅಸ್ಪಷ್ಟವಾದ ಲಿಪಿಗಳು ಇರುವುದರಿಂದ ಅದು ಯಾವ ಭಾಷೆ ಎಂದು ನಿರ್ಧಾರಿತವಾಗಿಲ್ಲ. ತಡವಾಗಿ ಬೆಳಕಿಗೆ ಬಂದದ್ದು-ಅವು ಹಿಂದೂ ಬ್ರಾಹ್ಮಿ ಲಿಪಿಗೆ ಹತ್ತಿರವಾಗಿವೆ ಎಂಬುದಾಗಿ! ಸಿಂಧೂ ಕಣಿವೆಯ ನಾಗರಿಕತೆಯ ಮೇಲೆ ಮಧ್ಯ ಏಷ್ಯಾದ ಸುಮೇರಿಯಾ ಪ್ರಾಂತದ ಪ್ರಭಾವ ಕೂಡ ಇತ್ತು ಎಂದು ಊಹಿಸಲಾಗಿದೆ! ತೀರಾ ಇತ್ತೀಚಿನ ಬೆಳವಣಿಗೆಯಲ್ಲಿ ಮೆಹ್ರಗಹ್ರ ಎಂಬಲ್ಲಿ, ಫ್ರೆಂಚ್ ಸಂಶೋಧನೆಯೊಂದರಲ್ಲಿ ಭಾಷಾ ವ್ಯಾಕರಣಕ್ಕೆ ಸಂಬಂಧಿಸಿದ ಮಾಹಿತಿಯೂ ಸಿಕ್ಕಿದ್ದು ಅದು ಸಿಂಧೂಕಣಿವೆಯ ನಾಗರಿಕತೆಗೆ ಸಂಬಂಧಿಸಿದ್ದು ಸ್ಪಷ್ಟವಾಗಿದೆ. ಮತ್ತು ಅದರ ಕಾಲಮಾನ ಕ್ರಿ.ಪೂ ೬೦೦೦ ಎಂದು ಅಂದಾಜಿಸಲಾಗಿದೆ! ಅಂದರೆ ಈಗೀಗ ಪಾಶ್ಚಾತ್ಯ ಪಂಡಿತರು ಎಚ್ಚೆತ್ತುಕೊಂಡು ಆರ್ಯರು ಭಾರತಕ್ಕೆ ಬಂದರು ಎಂಬುದು ಸರಿಯಲ್ಲಾ ಅವರು ಭಾರತದಲ್ಲೇ ಇದ್ದರು ಮತ್ತು ಅವರ ಕಾರ್ಯಕ್ಷೇತ್ರ ಮಧ್ಯಏಷ್ಯಾದವರೆಗೂ ಹಬ್ಬಿತ್ತು ಎಂದು ಹೇಳಹೊರಟಿದ್ದಾರೆ!

ಕಾಲಕಾಲಕ್ಕೆ ಬದಲಾಗುತ್ತಾ ಬಂದ ನಾಗರಿಕತೆಯನ್ನು ಇಂಥದ್ದೇ ಎಂದು ಹೇಳುವುದು ಬಹಳ ತರ್ಕಕ್ಕೆ ನಿಲುಕುವ ಜವಾಬ್ದಾರಿ. ಈಗೀಗ ವೇದಗಳಲ್ಲಿ ಹೇಳಿದ ಉಲ್ಲೇಖಗಳಿಗೂ ಮತ್ತು ಉತ್ಖನನ ನಡೆಸಿ ತೆಗೆದ ಅವಶೇಷಗಳಿಗೂ ಪರಸ್ಪರ ತಾಳೆಹಾಕಿ ನೋಡಲು ಯತ್ನಿಸುತ್ತಿದ್ದಾರೆ. ಇತಿಹಾಸದ ಇನ್ನೊಬ್ಬ ಪಾಶ್ಚಾತ್ಯ ಸಂಶೋಧಕ ಕಾಲಿನ್ ರೆನ್ಫ್ರೆವ್ ಅವರ ಪ್ರಕಾರ ಇಂಡೋ-ಯುರೋಪಿಯನ್ ನಾಗರಿಕತೆ ಗ್ರೀಸ್ ನಲ್ಲಿ ಕ್ರಿ.ಪೂ ೬೦೦೦ಕ್ಕೂ ಮೊದಲೇ ಇತ್ತು ಎನ್ನುತ್ತಾರೆ. ಋಗ್ವೇದವೂ ಸೇರಿದಂತೇ ಯಾವುದೇ ವೇದಗಳಲ್ಲಾಗಲೀ ವೇದ ಸಾಹಿತ್ಯಗಳಲ್ಲಾಗಲೀ ಆಕ್ರಮಣಕಾರೀ ಪ್ರವೃತ್ತಿ ಕಂಡುಬರುವುದಿಲ್ಲ; ಅತಿಕ್ರಮಣ ಬುದ್ಧಿ ಅವರಲ್ಲಿರಲಿಲ್ಲ. ಅಂದಾಗ ಇಂಡೋ-ಯುರೋಪ್ ಮೂಲದ ಆರ್ಯರು ಭಾರತಕ್ಕೆ ಬಂದರು ಎಂಬುದು ಹಾಸ್ಯಾಸ್ಪದವಾಗಿ ತೋರುತ್ತದೆ. ಸಂಶೋಧಕ ವ್ಹೀಲರ್ ಪ್ರಕಾರ: ಆರ್ಯರ ಕಾರ್ಯಕ್ಷೇತ್ರ ೭ ನದಿಗಳ ಜಾಗ-ಅದು ಪಂಜಾಬ್, ಆದರೆ ವೇದಗಳಲ್ಲಿ ಈ ಜಾಗಗಳು ಮಾತ್ರ ವೇದಾಚರಣೆಗೆ ಸಂಬಂಧಿಸಿದ್ದು ಎಂದು ಹೇಳಲಿಲ್ಲ. ಅಥವಾ ಆರ್ಯರು ಭಾರತಕ್ಕೆ ಬಂದರು ಎಂಬ ಯಾವುದೇ ಉಲ್ಲೇಖ ವೇದಗಳಲ್ಲಿ ಹೇಳಲ್ಪಟ್ಟಿಲ್ಲ. ಒಂದು ಮೂಲದ ಪ್ರಕಾರ ಭಾರತದಲ್ಲಿ ಆರ್ಯರೇ ಮೂಲನಿವಾಸಿಗಳು ಮತ್ತು ದಸ್ಯುಗಳು ಹೊರಗಿನಿಂದ ಬಂದವರು.

ವ್ಹೀಲರ್ ಹೇಳಿದ ಮಾತುಗಳನ್ನೇ ತೆಗೆದುಕೊಂಡರೂ, ಸಿಂಧೂ ಕಣಿವೆಯ ಇಂಡೋ-ಆರ್ಯನ್ ನಾಗರಿಕತೆಗಿಂತಾ ಪೂರ್ವದಲ್ಲಿ ಮತ್ತು ಆರ್ಯ ಸಂಸ್ಕೃತಿಗೆ ಹೊರತಾದ ಯಾವ ನಾಗರಿಕತೆ ಅಲ್ಲಿ ಇತ್ತು ಎಂಬುದಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಇಂಡೋ-ಆರ್ಯನ್ ನಾಗರಿಕತೆಯೇ ’ಸಿಂಧೂ ಕಣಿವೆಯ ನಾಗರಿಕತೆ’ ಎಂದು ಕರೆಯಲ್ಪಟ್ಟ ನಾಗರಿಕತೆಗೂ ಹಿಂದಿನದು ಎಂದು ಕಾಲಿನ್ ರೆನ್ ಫ್ರೆವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ೬ನೇ ಸಹಸ್ರಮಾನಕ್ಕೂ ಮುಂಚೆ ಮಧ್ಯಏಷ್ಯಾ, ಉತ್ತರಭಾರತ, ಇಂದಿನ ಪಾಕಿಸ್ತಾನ, ಇರಾನ್ ಮೊದಲಾದ ಭಾಗಗಳಲ್ಲಿ ಇಂಡೋ-ಆರ್ಯನ್ ಭಾಷೆಯೇ ಬಳಕೆಯಲ್ಲಿತ್ತು ಮತ್ತು ಈ ಎಲ್ಲ ಪ್ರಾಂತಗಳ ಜನ ಉತ್ತಮ ಸೌಹಾರ್ದ ಮನೋಭಾವವನ್ನು ಹೊಂದಿದ್ದರು. ವೇದಗಳ ಹೇಳಿಕೆಯನ್ನು ಗ್ರಹಿಸದೇ ಅಥವಾ ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿಕೊಂಡು ’ಆರ್ಯರು ಭಾರತಕ್ಕೆ ಬಂದರು’ ಎಂಬ ಕಥೆಯ ಪೂರ್ಣತೆಗಾಗಿ ಪರಿಶ್ರಮಿಸಿದ ಪಾಶ್ಚಾತ್ಯ ಪಂಡಿತರದು ನಿಜವಾದ ಸಂಶೋಧನೆಯಲ್ಲಾ ಎನ್ನುತ್ತಾರೆ ಡೆವಿಡ್ ಫ್ರಾಲೆ. ವೇದಗಳ ಸಂಸ್ಕೃತಿ ಭಾರತದಲ್ಲಿ ಸಿಂಧೂ ನಾಗರಿಕತೆಗೂ ಮುಂಚೆಯೇ ಇತ್ತು ಎಂಬುದು ಅವರ ವಾದವಾಗಿದೆ. ಸರಸ್ವತೀ ನದಿ ಮೈದುಂಬಿ ಹರಿಯುವ ಕಾಲದಲ್ಲಿ ವೇದಾಚರಣೆಗಳು ಅತ್ಯುನ್ನತ ಮಟ್ಟದಲ್ಲಿ ನಡೆಯುತ್ತಿದ್ದವು ಎಂದೂ ಅವರು ಹೇಳುತ್ತಾರೆ.

ಈ ಲೇಖನದ ಕೊನೆಯ ಭಾಗವನ್ನು ಡೆವಿಡ್ ಫ್ರಾಲೆಯವರ ಮಾತುಗಳಲ್ಲೇ ಮುಗಿಸೋಣ ಎನಿಸುತ್ತದೆ. ಯಾಕೆಂದರೆ ಅವರ ಹೇಳಿಕೆಗಳು ಈ ಪ್ರಪಂಚದ ಅತ್ಯಂತ ಹಳೆಯದಾದ ಅಥವಾ ಮೂಲ ಸಂಸ್ಕೃತಿಯೊಂದರ ಮೇಲೆ ಬೆಳಕುಚೆಲ್ಲುತ್ತವೆ:

The acceptance of such views would create a revolution in our view of history as shattering as that in science caused by Einstein's theory of relativity. It would make ancient India perhaps the oldest, mediumst and most central of ancient cultures. It would mean that the Vedic literary record already the mediumst and oldest of the ancient world even at a 1500 BC date would be the record of teachings some centuries or thousands of years before that. It would mean that the 'Vedas' are our most authentic record of the ancient world. It would also tend to validate the Vedic view that the Indo-Europeans and other Aryan peoples were migrants from India, not that the Indo-Aryans were invaders into India. Moreover, it would affirm the Hindu tradition that the Dravidians were early offshoots of the Vedic people through the seer Agastya, and not unaryan peoples.

In closing, it is important to examine the social and political implications of the Aryan invasion idea:

First, it served to divide India into a northern Aryan and southern Dravidian culture which were made hostile to each other. This kept the Hindus divided and is still a source of social tension. Second, it gave the British an excuse in their conquest of India. They could claim to be doing only what the Aryan ancestors of the Hindus had previously done millennia ago.Third, it served to make Vedic culture later than and possibly derived from Middle Eastern cultures. With the proximity and relationship of the latter with the Bible and Christianity, this kept the Hindu religion as a sidelight to the development of religion and civilization to the West. Fourth, it allowed the sciences of India to be given a Greek basis, as any Vedic basis was mediumly disqualified by the primitive nature of the Vedic culture. 

This discredited not only the 'Vedas' but the genealogies of the 'Puranas' and their long list of the kings before the Buddha or Krishna were left without any historical basis. The 'Mahabharata', instead of a civil war in which all the main kings of India participated as it is described, became a local skirmish among petty princes that was later exaggerated by poets. In short, it discredited the most of the Hindu tradition and almost all its ancient literature. It turned its scriptures and sages into fantacies and exaggerations.

This served a social, political and economical purpose of domination, proving the superiority of Western culture and religion. It made the Hindus feel that their culture was not the great thing that their sages and ancestors had said it was. It made Hindus feel ashamed of their culture that its basis was neither historical nor scientific. It made them feel that the main line of civilization was developed first in the Middle East and then in Europe and that the culture of India was peripheral and secondary to the real development of world culture.

Such a view is not good scholarship or archeology but merely cultural imperialism. The Western Vedic scholars did in the intellectual spehere what the British army did in the political realm discredit, divide and conquer the Hindus. In short, the compelling reasons for the Aryan invasion theory were neither literary nor archeological but political and religious that is to say, not scholarship but prejudice. Such prejudice may not have been intentional but deep-seated political and religious views easily cloud and blur our thinking.

It is unfortunate that this this approach has not been questioned more, particularly by Hindus. Even though Indian Vedic scholars like Dayananda saraswati, Bal Gangadhar Tilak and Arobindo rejected it, most Hindus today passively accept it. They allow Western, generally Christian, scholars to interpret their history for them and quite naturally Hinduism is kept in a reduced role. Many Hindus still accept, read or even honor the translations of the 'Vedas' done by such Christian missionary scholars as Max Muller, Griffith, Monier Williams and H. H. Wilson. Would modern Christians accept an interpretation of the Bible or Biblical history done by Hindus aimed at converting them to Hinduism? Universities in India also use the Western history books and Western Vedic translations that propound such views that denigrate their own culture and country.

The modern Western academic world is sensitive to criticisms of cultural and social biases. For scholars to take a stand against this biased interpretation of the 'Vedas' would indeed cause a reexamination of many of these historical ideas that can not stand objective scrutiny. But if Hindu scholars are silent or passively accept the misinterpretation of their own culture, it will undoubtedly continue, but they will have no one to blame but themselves. It is not an issue to be taken lightly, because how a culture is defined historically creates the perspective from which it is viewed in the modern social and intellectual context. Tolerance is not in allowing a false view of one's own culture and religion to be propagated without question. That is merely self-betrayal. ಧನ್ಯವಾದಗಳು ಡೆವಿಡ್, ತಾವು ಭಾರತೀಯ ವೇದಗಳನ್ನು ಅದೆಷ್ಟು ಆಳವಾಗಿ ಚಿಂತಿಸಿದಿರಿ ಎಂಬುದು ನಮಗೀಗ ಅರ್ಥವಾಗುತ್ತಿದೆ.

ನಮ್ಮ ಭಾರತದ ಆರ್ಷೇಯ ಋಷಿಮೂಲ ಸಂಸ್ಕೃತಿ ಎಷ್ಟು ಸಮರ್ಪಕವಾಗಿದೆ ಎಂದು ಇಲ್ಲಿ ತಿಳಿಯುತ್ತದೆ. ಕೃತ, ತ್ರೇತಾ, ದ್ವಾಪರ ಮುಗಿದು ಕಲಿಯುಗದ ೫೦೦೦ ವರ್ಷಗಳು ಸಂದುಹೋಗಿವೆ. ಕಾಲಿಟ್ಟ ಕಲಿಯ ಕಾಲದ ಮಹಿಮೆಯಲ್ಲಿ ಈ ಪ್ರಪಂಚದಾದ್ಯಂತ ಹಲವು ಮತಗಳು ಹುಟ್ಟಿವೆ, ವಿಜೃಂಭಿಸುತ್ತಿವೆ. ಯುಗಕ್ಕೊಂದು ರೂಪವನ್ನು ಮೊದಲೇ ಹೇಳಿದ ವೇದ ಕಲಿಯುಗಕ್ಕೂ ಒಂದು ಪ್ರಮಾಣವನ್ನು ಘೋಷಿಸಿದೆ. ಯುಗ ಯುಗಗಳು ಕಳೆದರೂ ವೇದಗಳು, ವೇದ ಸಾಹಿತ್ಯಗಳು ನಾಶವಾಗುವುದಿಲ್ಲ-ಯಾಕೆಂದರೆ ಅವು ಅಪೌರುಷೇಯ. ಯಾರಲ್ಲಿಯೂ ಹಾರ್ಡ್ ಕಾಪಿ ಇಲ್ಲದಿದ್ದರೂ ಭಗವಂತನಾದ ಸೂರ್ಯನಾರಾಯಣನಲ್ಲಿ ಅವು ಇವೆ-ಆತ ಆಂಜನೇಯನಿಗೆ ಆ ವಿಷಯದಲ್ಲಿ ಗುರು ಅಲ್ಲವೇ? ನಮ್ಮ ಕಣ್ಣಿಗೆ ಕಾಣುವುದಷ್ಟೇ ಜಗತ್ತಲ್ಲಾ ಬೇರೇ ಇನ್ನೇನೋ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 

ಹಾಳುಗೆಡವಲ್ಪಟ್ಟ  ಶ್ರೀಶಾರದಾದೇವಿ ದೇವಸ್ಥಾನ, ಕಾಶ್ಮೀರ, ಹೆಚ್ಚಿನ ಚಿತ್ರಗಳು ನನ್ನ ಫೇಸ್ ಬುಕ್ ಆಲ್ಬಂ ನಲ್ಲಿವೆ
ಈ ಜಗತ್ತಿನ ಮೊಟ್ಟಮೊದಲ ವಿಶ್ವವಿದ್ಯಾಲಯ ಇಲ್ಲೇ ನಡೆಯುತ್ತಿತ್ತು ಎಂದು ತಿಳಿದು ಬರುತ್ತದೆ.

ಕಲಿಯುಗದಲ್ಲಿ ಕಾಶ್ಮೀರದಲ್ಲಿಯೇ ಇನ್ನೂ ನೆಲೆಸಿದ್ದ ಶಾರದೆಗೆ [ಸಾಂಕೇತಿಕವಾಗಿ ಅಲ್ಲಿ ನೆಲೆಸಿದ್ದ ಅಲೌಕಿಕ ಶಕ್ತಿಯ ಮೂರ್ತರೂಪಕ್ಕೆ] ಲೌಕಿಕವಾಗಿ ಅನನುಕೂಲವಾಗದಿರಲಿ ಎಂಬ ಭಾವದಿಂದ, ಬ್ರಹ್ಮಜ್ಞಾನಿಯಾದ ಶ್ರೀ ಆದಿ ಶಂಕರರು ಸರಸ್ವತಿಯನ್ನು ಹಾಗೇ ನಡೆಸಿತಂದರು ಎಂಬುದು ಒಂದು ಪ್ರತೀತಿ. ಬರುವಾಗ ಸರಸ್ವತಿ ಕರಾರೊಂದನ್ನು ಮುಂದಿತ್ತಳಂತೆ "ಶಂಕರಾ, ನಾನು ಬರುತ್ತಿರುವುದು ನಿನಗೆ ನನ್ನ ಕಾಲಂದುಗೆಯ ಸಪ್ಪಳದಿಂದ ತಿಳಿಯುತ್ತದೆ, ನೀನು ಹಿಂದಿರುಗಿ ನೋಡಬಾರದು. ಒಂದೊಮ್ಮೆ ನೀನು ತಿರುಗಿ ನೋಡಿದ್ದಾದರೆ ನಾನು ಅಲ್ಲಿಯೇ ಪ್ರತಿಷ್ಠಿತಳಾಗಿಬಿಡುತ್ತೇನೆ." ಶಂಕರರು ’ತಥಾಸ್ತು"[ಹಾಗೇ ಆಗಲಿ] ಎಂದರು. ಉತ್ತರದ ಕಾಶ್ಮೀರದಿಂದ ಜೊತೆಯಾಗಿ ಬಂದ ಶಾರದೆಯನ್ನು. ಮಹರ್ಷಿ ವಿಭಾಂಡಕ-ಋಷ್ಯಶೃಂಗರ ತಪೋಭೂಮಿಯಾದ ಶೃಂಗೇರಿಗೆ ಕರೆತಂದಾಗ, ಗೆಜ್ಜೆಯ ಸಪ್ಪಳ ನಿಂತಂತೆನಿಸಿ ಹಿಂದಿರುಗಿ ನೋಡಿದರಂತೆ; ಶಾರದೆ ಅಲ್ಲಿಯೇ ಪ್ರತಿಷ್ಠಿತಳಾದಳು ಎಂದು ಭಕ್ತ-ಭಾವುಕರ ಅಭಿಪ್ರಾಯಪಡುತ್ತಾರೆ. ಇದೇ ಕಲಿಯುಗ ಅಂತ್ಯಗೊಳ್ಳುವ ಮುನ್ನವೇ ಮತ್ತೆ ಅಖಂಡ ಭಾರತ ನಮ್ಮದಾಗುತ್ತದೆ ಎಂಬುದರಲ್ಲಿ ಸಂಶಯಪಡುವ ಅಗತ್ಯವಿಲ್ಲ. ಪಾಕಿಗಳು ತಾವು ಆಕ್ರಮಿಸಿಕೊಂಡ ಹಿಂದೂಸ್ಥಾನದ ಭೂಭಾಗವನ್ನು ಆಜಾದ್ ಜಮ್ಮು-ಕಾಶ್ಮೀರ್ [ಎ.ಜೆ.ಕೆ.] ಎಂದು ಕರೆಯುತ್ತಾರೆ. ಯಾರೆಲ್ಲಾ ಹಾಗೆ ಕರೆಯುತ್ತಾರೋ ಅವರೆಲ್ಲಾ ಪಾಕಿಗಳ ಬೆಂಬಲಿಗರು ಎಂದೇ ಪರಿಗಣಿಸಬೇಕಾಗಿದೆ. ಕರ್ನಾಟಕದ ಜನತೆಯ ಸೌಭಾಗ್ಯ ಶಾರದೆ ನಮ್ಮಲ್ಲಿಯೇ ನೆಲೆಸಿದ್ದಾಳೆ. ಅಮ್ಮ ನಮ್ಮನ್ನೆಲ್ಲಾ ಬೌದ್ಧಿಕವಾಗಿ ಬೆಳೆಸಿ ಮತ್ತೆ ವೇದಕಾಲವನ್ನೇ ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ ’ಆರ್ಯರು ಭಾರತಕ್ಕೆ ಬಂದರು’ ಎಂಬುದು ಕಟ್ಟು ಕಥೆ ಎಂಬುದನ್ನು ನಿಮ್ಮ ಮುಂದೆ ಬಿಚ್ಚಿ ಹರಡಿದ್ದಕ್ಕೆ ಖುಷಿಪಡುತ್ತಿದ್ದೇನೆ, ನಮಸ್ಕಾರ.

Thursday, September 13, 2012

ಮುಗಿದುಬಿಡಲೀ ಬಂಧನ !

ಕೇವಿನ್ ಕಾರ್ಟರ್ ಅವರ ಚಿತ್ರಋಣ: ಅಂತರ್ಜಾಲ
 
ಮುಗಿದುಬಿಡಲೀ  ಬಂಧನ !

ಜಗನಾಳುವ ಶಕ್ತಿ ಮಗುವ ರೂಪದೆ ಬಂದು
ಬಗೆಬಗೆಯ ಆಟಿಕೆಯ ಎತ್ತಿ ನಲಿದಾಡಿ
ನಗುತ ನಲಿವುಣಿಸಿ ತಾ  ಮರಳಿ ತೆರಳುವ ಮುನ್ನ
ನಗದು ವರವನು ಬೇಡು | ಜಗದಮಿತ್ರ

ಜಗದಮಿತ್ರನ ನಗದು ವ್ಯವಹಾರ ಯಾವುದು ಎಂಬುದನ್ನು ನೀವು ಅಮೇಲೆ ತಿಳಿಯುತ್ತೀರಿ. ಯಾವ ಬಂಧನದ ಬಗ್ಗೆ ನಿನ್ನೆ ಹೇಳುತ್ತಿದ್ದೇನೋ ಅದರ ಉತ್ತರಾರ್ಧವಾಗಿ ಇಂದು ಮುಂದುವರಿಸಿದ್ದೇನೆ.

ಜಗದ ಜೀವಿತದಲ್ಲಿ ಕೆಲವು ಸ್ವಯಂ ನಿರ್ಮಿತ ತೊಂದರೆಗಳಾದರೆ ಇನ್ನು ಕೆಲವು ತಂತಾನೇ ಘಟಿಸುವಂಥವು. ಅನುಭವಿಸುವವರು ಮಾತ್ರ ಅನುಭವಿಸಲೇಬೇಕು. ಮೂರು ಘಟನೆಗಳನ್ನು ಹೇಳುತ್ತೇನೆ ಒಂದಕ್ಕಿಂತಾ ಒಂದು ಭಿನ್ನ, ಆದರೂ ಮೂರನ್ನೂ ಸಹಿಸಿಕೊಳ್ಳಲು ಎದೆ ಗಟ್ಟಿ ಇರಬೇಕು.

ಮಗನಿಗೆ ಇವತ್ತು ಶಾಲೆಗೆ ರಜೆ. ಸುತ್ತಲ ಯಾವ ಶಾಲೆಗಳಿಗೂ ರಜೆಯಿಲ್ಲಾ ಆದರೆ ನಿಮ್ಮ ಶಾಲೆಗೆ ಮಾತ್ರ ಯಾಕೆ ರಜೆ?ಎಂದು ಕೇಳಿದೆ, ಕಾರಣ ಆತನಿಗೂ ಗೊತ್ತಿರಲಿಲ್ಲ! ಕಾರಣವನ್ನು ಪತ್ತೆ ಹಚ್ಚಲು ಇನ್ನೊಬ್ಬ ಪರಿಚಿತ ಶಿಕ್ಷಕಿಗೆ ನಾವು ಕರೆಮಾಡಿದಾಗ ಗೊತ್ತಾಗಿದ್ದು, ಆ ಶಾಲೆಯ ಶಿಕ್ಷಕಿಯೊಬ್ಬರ ಮಗಳು ನಿನ್ನೆ ಸತ್ತುಹೋಗಿದ್ದಾಳೆಂದು. ಮಂಗಳವಾರ ಶಾಲೆಗೆ ಬಂದಿದ್ದಳಂತೆ ಆ ಹುಡುಗಿ. ಬಹಳ ಜಾಣೆ, ಕಲಿಕೆಯಲ್ಲಿ ಪ್ರಥಮಸ್ಥಾನ, ಬೆಂಗಳೂರು ನಗರ ಜಿಲ್ಲಾ ಮಟ್ಟದಲ್ಲಿ ಒಂದೆರಡು ಸ್ಪರ್ಧೆಗಳಲ್ಲಿ ಗೋಲ್ಡ್ ಮೆಡಲ್ ಪಡೆದವಳು. ೫ನೇ ತರಗತಿಯಲ್ಲಿ ಓದುತ್ತಿರುವ ಆಕೆಗೆ ಅಂತಹ ಕಾಯಿಲೆಯೇನೂ ಕಾಣಲಿಲ್ಲ. ಅಮ್ಮ ಅದೇ ಶಾಲೆಯಲ್ಲಿ ಶಿಕ್ಷಕಿ, ೬ ವರ್ಷಗಳ ಹಿಂದೆ ಗಂಡ ತೀರಿಕೊಂಡಾಗ ಅಮ್ಮನಿಗೆ ಪದವಿಯೂ ಇರಲಿಲ್ಲ. ಮಗಳ ಶಾಲೆಯಲ್ಲೇ ಅದೂ ಇದೂ ಕೆಲಸಮಾಡಿಕೊಂಡಿದ್ದ ಅವಳ ಅಳಲನ್ನು ಆಲಿಸಿ ಶಾಲೆಯ ಯಜಮಾನಿ ಆಕೆಯನ್ನು ಓದಿಸಿದಳು, ಕೆಲಸದ ಜೊತೆಗೆ ಪದವಿಯನ್ನೂ ಪೂರೈಸಿಕೊಂಡು ಈಗ ಅಲ್ಲೇ ಶಿಕ್ಷಕಿಯಾಗಿದ್ದಾಳೆ. ಅಂತಹ ಬಡ ಸುಶಿಕ್ಷಿತ ಶಿಕ್ಷಕಿಯ ಮಗಳು ತೀರಿ ಹೋದಳು. ಲೋ ಬಿ.ಪಿ. ಆಗಿತ್ತಂತೆ ಎಂಬ ಸುದ್ದಿ. ಮೊನ್ನೆಯ ದಿನ ಶಾಲೆಯ ಸಮಯದ ನಂತರ, ಏನೋ ಕೆಲಸದಲ್ಲಿ ಇದ್ದ ತಾಯಿಯ ಜೊತೆ ಶಾಲೆಯಲ್ಲೇ ಇದ್ದಳು. ಕೆಮ್ಮು ಬಂದು ರಕ್ತ ವಾಂತಿಮಾಡಿಕೊಂಡಳಂತೆ. ಹತ್ತಿರದ ಆಸ್ಪತ್ರೆಗೆ ತ್ವರಿತವಾಗಿ ಕರೆದೊಯ್ದಾಗ ಅವರು ಎಮ್.ಎಸ್.ರಾಮಯ್ಯ ಆಸ್ಪತ್ರೆಗೆ ಸೇರಿಸಲು ಹೇಳಿದರಂತೆ. ಅಲ್ಲಿಗೆ ಹೋದಾಗಲೇ ಹುಡುಗಿಗೆ ಎಚ್ಚರತಪ್ಪಿತ್ತು. ಐ.ಸಿಯೂ ನಲ್ಲಿ ಇಡ್ಲಾಯ್ತಾದರೂ ಮಗು ಉಳಿಯಲಿಲ್ಲ. ಮಗು ಸತ್ತ ಸುದ್ದಿಯನ್ನು ಶಾಲೆಯವರು ಒಂದು ದಿನ ಹೇಳಲಿಲ್ಲ, ಉಳಿದ ಮಕ್ಕಳ ಮನಸ್ಸಿನಮೇಲೆ ಪರಿಣಾಮ ಆಗದಿರಲಿ; ಅವರು ಅಳದಿರಲಿ ಎಂಬ ಇಚ್ಛೆ. ಆದರೆ ಎಷ್ಟುದಿನ ತನೇ ಬಚ್ಚಿಡಲು ಸಾಧ್ಯ? ಮಗನಿಗೆ ಕಾರಣ ಗೊತ್ತಿಲ್ಲದೇ ರಜೆ! ನಮಗೆ ಕಾರಣ ಗೊತ್ತಾದಾಗ ಹೊರಗಿದ್ದೂ ಸಜೆ!

ಹಿಂದೆ ಸುಮಾರು ಸರ್ತಿ ಲೋ ಬಿ.ಪಿ. ಆಗಿತ್ತಂತೆ. ಅಮ್ಮನ ಬಡತನಕ್ಕೆ ಆಕೆ ಅದೆಲ್ಲಿ ಯಾವ ವೈದ್ಯರಲ್ಲಿ ತೋರಿಸಿದಳೋ ಗೊತ್ತಿಲ್ಲ. ವೈದ್ಯರು ಸರಿಯಾಗಿ ನಿರ್ವಹಿಸಿದರೇ? -ಇದು ಯಕ್ಷಪ್ರಶ್ನೆ. ಹೃದಯದಲ್ಲಿ ತೂತು ಇದ್ದಿರಬಹುದು ಎಂಬುದು ನನ್ನ ಮಿತ್ರರ ಹೇಳಿಕೆ. ಈ ಘಟನೆ ಮನಸ್ಸನ್ನು ಆವರಿಸಿಕೊಂಡಿರುವಾಗಲೇ ನಮ್ಮೂರಕಡೆಯ ಆಚಾರಿಯೊಬ್ಬರ ಮಕ್ಕಳ ನೆನಪಾಯ್ತು. ಆಚಾರಿ ಮರಗೆಲಸದವನು; ಬಹಳ ಒಳ್ಳೆಯ ಮನುಷ್ಯ. ಹೆಂಡತಿಗೆ ಉಬ್ಬಸದ ಕಾಯಿಲೆ. ಆಚಾರಿ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು, ಒಬ್ಬ ಮಗ. ಮಕ್ಕಳಲ್ಲಿ ಕೆಲವರಿಗೆ ಅಮ್ಮನಿಂದ ಅನುವಂಶೀಯವಾಗಿ ಬಂದ ಉಬ್ಬಸದ ಕಾಯಿಲೆ-ಅಸ್ತಮಾ. ಆಚಾರಿ ನಮ್ಮ ಪರಿಚಿತರಲ್ಲೊಂದು ಕಡೆ ಕೆಲಸಮಾಡುತ್ತಿದ್ದ ಕಾಲದಲ್ಲಿ ಮಕ್ಕಳಿನ್ನೂ ಚಿಕ್ಕವರು. ಕೆಲಸ ಮುಗಿಸಿ ಮನೆಗೆ ಮರಳಿದ, ಕೆಲಸಕ್ಕೂ ಮೊದಲೇ ಸಾಲವಾಗಿ ಪಡೆದ ಹಣವೂ ಸೇರಿದಂತೇ ಖರ್ಚು ಹೆಚ್ಚುತ್ತಿತ್ತು. ಅಶಕ್ತ ಮಕ್ಕಳನ್ನು ಹೆಚ್ಚಿನ ವೈದ್ಯ ಚಿಕಿತ್ಸೆಗೆ ಕರೆದೊಯ್ಯಲಾರ. ಆದರೂ ಒಮ್ಮೆ ಅಂಥಾ ಪ್ರಸಂಗದಲ್ಲಿ ಪ್ರಯತ್ನಿಸಿದ, ಮಗು ಉಳಿಯಲಿಲ್ಲ.

ಕಂಬಾರರು ತಮ್ಮ ಪದ್ಯದಲ್ಲಿ ಬರೆದಂತೇ ಉತ್ತರಕರ್ನಾಟಕದ ಬರಪೀಡಿತ ಪ್ರದೇಶಗಳ ಬಡತನ ಹೇಗಿದೆಯೆಂದರೆ ಮಕ್ಕಳನ್ನು ಮಾರಿ ಬದುಕಿಕೊಳ್ಳುವ ಡಾರ್ವಿನ್ ವಿಕಾಸ ವಾದ! ನಗರಗಳಲ್ಲಿ ಎಷ್ಟೋ ಶ್ರೀಮಂತರ ಬಂಗಲೆಗಳಲ್ಲಿ ಇನ್ನೂ ಅಮಾಯಕ ಬಾಲ ಕಾರ್ಮಿಕರು ಇದ್ದಾರೆ; ಅಪ್ಪ-ಅಮ್ಮ ಹಣಪಡೆದು ಮಾರಿಬಿಟಿದ್ದಾರೆ. ಬದುಕಬೇಕೇ ? ಹೇಳಿದ ಕೆಲಸಗಳನ್ನು ಮಾಡಬೇಕು, ಕೊಟ್ಟ ಶಿಕ್ಷೆ ಅನುಭವಿಸಬೇಕು, ಕೊಟ್ಟರೆ ತಿನ್ನಬೇಕು-ಇಲ್ಲದಿದ್ದರೆ ಸುಮ್ಮನಿರಬೇಕು. ಎಷ್ಟೋ ಮನೆಗಳಲ್ಲಿ ನಾಯಿಯನ್ನು ಚೆನ್ನಾಗಿ ಸಾಕುತ್ತಾರೆ ಆದರೆ ಕೆಲಸಕ್ಕೆ ಕರೆತಂದ ಈ ಮಕ್ಕಳ ಪಾಡು ನಾಯಿಪಾಡಿಗಿಂತಾ ಗೋಳು. ಅದನ್ನು ನೋಡಿದಾಗ ಅಂತಹ ಮಕ್ಕಳಿಗೆ ನಾಯಿಯಾಗಿಯಾದರೂ ಹುಟ್ಟಬಾರದಿತ್ತೇ ಎನಿಸಿರಬಹುದು. ನಾವೂ ಮನುಷ್ಯರು; ಆದರೆ ಮನುಜಮತವನ್ನು ಧರ್ಮವನ್ನೂ ಮೀರಿ ನಡೆವ ರಾಕ್ಷಸರು!

ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಪ್ರದೇಶದಲ್ಲಿ ತುಳಸೀ ಉದ್ಯಾನವೊಂದಿದೆ. ಅದಕ್ಕೆ ಆ ಹೆಸರು ಹೇಗೆ ಬಂತು ಎಂಬುದು ಇಲ್ಲಿ ಅಪ್ರಸ್ತುತ. ಬಹಳ ಹಿಂದೆ ಬೆಂಗಳೂರಿಗೆ ನಾನು ಬಂದಾಗ ಕೆಲವರು ಹೇಳಿದ್ದು ನೆನಪಾಯ್ತು. ಯಾವುದೋ ಕಾರಣಕ್ಕೆ ಪಾಲಕರಿಂದ ತಪ್ಪಿಸಿಕೊಂಡು ಬಂದ ಮಕ್ಕಳು ಯಾರದೋ ಹೇಳಿಕೆಯಿಂದ ಅಲ್ಲಿ ಕೂತಿರುತ್ತಿದ್ದರಂತೆ. ಆ ಕಾಲದಲ್ಲಿ ಮಾಧ್ಯಮಗಳಿನ್ನೂ ಅಷ್ಟೊಂದು ಸಬಲವಾಗಿರಲಿಲ್ಲ. ಅಲ್ಲಿ ಕೆಲವು ಏಜೆಂಟರುಗಳು ಬರುತ್ತಿದ್ದರಂತೆ. ಹಸಿದ, ಕಂಗೆಟ್ಟ ಮಕ್ಕಳಿಗೆ ತಿಂಡಿಪೊಟ್ಟಣ ನೀಡಿ ಸ್ನೇಹಗಳಿಸಿ ಕರೆದೊಯ್ದು ಆಮೇಲೆ ನಗರದ ಗಲ್ಲಿಗಳಲ್ಲಿರುವ ಹೋಟೆಲ್ ಮಾಲೀಕರಿಗೆ ಮಾರುತ್ತಿದ್ದರಂತೆ! ಆಮೇಲೆ ಆ ಮಕ್ಕಳಿಗೆ ಅದು ಅಕ್ಷರಶಃ ನರಕ! ಮಾಲೀಕ ಹೇಳಿದ್ದನ್ನು ಮಾಡಬೇಕು, ಬೆಳಗಿನ ಜಾವ ತಮ್ಮ ವಯಸ್ಸಿಗರು ಸುಖನಿದ್ದೆಯಲ್ಲಿರುವ ಹೊತ್ತಲ್ಲಿ ಇವರು ಹಿಟ್ಟು ರುಬ್ಬುವುದು, ನೀರು ಹೊರುವುದು, ಪಾತ್ರೆ ತೊಳೆಯುವುದು ಇತ್ಯಾದಿ ಕೆಲಸಗಳಲ್ಲಿ ನಿರತರಾಗಬೇಕಿತ್ತು. ಆಜ್ಞೆ ಪಾಲಿಸದಿದ್ದರೆ ಮೊದಲು ಕೆನ್ನೆಗೆ ಏಟು, ಆಮೇಲೆ ಛಡಿ ಏಟು. ಮೈಮೇಲೆ ಬಾಸುಂಡೆ ಎದ್ದು ರಕ್ತ ಒಸರಿದರೂ ಕೇಳುವವರಿಲ್ಲ; ಅಪ್ಪ-ಅಮ್ಮನ ಸಂಪರ್ಕ ಕಡಿದುಹೋಗಿರುವುದರಿಂದ ಅವರನ್ನು ಸಂಪರ್ಕಿಸುವ ಅನುಕೂಲವಿರುತ್ತಿರಲಿಲ್ಲ. 

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್ ಅವನು ಹೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೆ ನೆಲವಿಹಿದು-ಮಂಕುತಿಮ್ಮ 

ಈ ಬದುಕಿಗೆ ಬಂದ ತಪ್ಪಿಗೆ ವಿಧಿ-ಸೂತ್ರಧಾರ ಹೇಳಿದ ಜಾಗಕ್ಕೆ ಓಡಲೇಬೇಕು, ಹೇಳಿದ ಕೆಲಸ ಮಾಡಲೇಬೇಕು. ಇಲ್ಲಿ ತಲುಪುವ ಗಮ್ಯಸ್ಥಾನ ಕುದುರೆಗೋ ಪ್ರಯಾಣಿಕನಿಗೂ ಗೊತ್ತಾಗದಲ್ಲಾ! ಮದುವೆ ಮನೆಗೆ ಹೊರಟ ದಿಬ್ಬಣ ಮಸಣ ಸೇರಿದ ಘಟನೆ ಆಗಾಗ ವರದಿಯಾಗುತ್ತಲೇ ಇರುತ್ತದೆ! ಹೊರಟಮೇಲೆ ಮದುವೆಯೋ ಮಸಣವೋ ಎಂದು ನಿರ್ಧರಿಸುವುದು ಆ ವಿಧಿ. ಮಹಾತ್ಮ, ಸಂತ, ಕವಿ  ಡೀವೀಜಿ ಹೇಳಿದ ಮಾತು ಎಷ್ಟು ಸತ್ಯ ಅಲ್ಲವೇ?  

ಸೂಡಾನ್ ಎಲ್ಲಿದೆಯೆಂಬುದು ನಿಮಗೆಲ್ಲಾ ತಿಳಿದಿದೆ. ಉತ್ತರ ಆಫ್ರಿಕಾ ಖಂಡದಲ್ಲಿರುವ ಸೂಡಾನ್ ಒಂದು ಅರಬ್ ರಾಷ್ಟ್ರ. ಕೆಲವು ವರ್ಷಗಳ ಹಿಂದೆ ಅಲ್ಲಿ ಯುದ್ಧಗಳು ಘಟಿಸಿದ್ದರಿಂದ ಆ ದೇಶ ಕ್ಷಾಮಕ್ಕೆ ತುತ್ತಾಯ್ತು. ದೇಶದ ಜನರಲ್ಲಿ ಅನೇಕರು ಸೋಮಾಲಿಯಾ ಮೂಲದವರು ಎಂದು ಹೇಳಲಾಗುತ್ತದೆ. ಬಡತನ ಎಷ್ಟರಮಟ್ಟಿಗೆ ದೇಶವನ್ನು ತಿಂದುಹಾಕಿತು ಎಂದರೆ ಯಾರಿಗೂ ಹೊಟ್ಟೆಗೆ ಅನ್ನ-ನೀರು ಇರಲಿಲ್ಲ. ಇದ್ದುದನೆಲ್ಲಾ ಮಾರಿ ಮಾರಿ ಮಾರಿ ಅನುಕೂಲಸ್ಥರು ಹೊಟ್ಟೆ ತುಂಬಿಸಿಕೊಂಡರೆ, ಎಸೆದ ಆಹಾರದ ತುಣುಕು ಸಿಕ್ಕರೂ ಅದನ್ನೇ ತಿಂದು ವಾರಗಟ್ಟಲೇ ಹಸಿವು ತಡೆದುಕೊಂಡು ಜೀವಹಿಡಿದ ಜನ ಇದ್ದರು. ಸಂತ್ರಸ್ತರ ನೆರವಿಗೆ ವಿಶ್ವಸಂಸ್ಥೆಯ ಶಿಬಿರ ಅಲ್ಲಲ್ಲಿ ಇದ್ದರೂ ಅಲ್ಲಿಯವರೆಗೆ ನಡೆಯಲೂ ಅಶಕ್ತವಾದ ಜನ ಅದೆಷ್ಟೋ. ಸಾವಿರಾರು ಜನ ತಮ್ಮ ತಾತ್ಕಾಲಿಕ ತಂಬುಗಳಲ್ಲಿ ಅನ್ನ-ನೀರಿಲ್ಲದೇ ಹತರಾಗಿ ಹೋದರು. ಅನ್ನಾಂಗಗಳು ಆಹಾರ ಕೊರತೆಯಿಂದ ವಿಚಿತ್ರ ಆಕಾರಕ್ಕೆ ಬಂದವು. ಮೇಲಿನ ಚಿತ್ರದಲ್ಲಿ ಮಗುವೊಂದು ಹಸಿದಿದೆ, ಮಗುವಿನ ಹಿಂದೆ ತುಸು ದೂರದಲ್ಲಿ ಕುಳಿತಿರುವ ಹದ್ದು ಕೂಡ ಹಸಿದಿದೆ! ಮಗು ನಿತ್ರಾಣವಾಗಿ, ೧ ಕಿಲೋಮೀಟರಿನಷ್ಟು ದೂರವಿರುವ ಜಾಗಕ್ಕೆ ಹೋಗಲಾರದ ಸ್ಥಿತಿಯಲ್ಲಿದೆ, ಹದ್ದು ಮಗು ಸಾಯುವುದನ್ನೇ ಕಾದಿದೆ. ಹಸಿವು ಎರಡೂ ದೇಹಗಳನ್ನು ಕಂಗೆಡಿಸಿದೆ-ಯಾವುದೋ ಒಂದು ಹಸಿವನ್ನು ನೀಗಿಸಿಕೊಳ್ಳಬೇಕು. ಮುಂದೇನಾಯ್ತು ಎಂಬುದನ್ನು ನೀವೇ ಊಹಿಸಿಕೊಳ್ಳಬಹುದಾಗಿದೆ.

ಪ್ರಪಂಚದಲ್ಲಿಯೇ ಅತ್ಯಂತ ಸುಪ್ರಸಿದ್ಧ ಛಾಯಾಚಿತ್ರ ಗ್ರಾಹಕನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಕೇವಿನ್ ಕಾರ್ಟರ್ ೧೯೯೩ ರಲ್ಲಿ ತೆಗೆದ ಛಾಯಾಚಿತ್ರವಿದು. ಬರಗಾಲದ ಸೂಡಾನ್ ನಲ್ಲಿನ ಹಲವು ಚಿತ್ರಗಳನ್ನು ಆತ ತೆಗೆದಿದ್ದಾರೆ. ಈ ಚಿತ್ರ ತೆಗೆದ ನಂತರ ಅವರ ಮನಸ್ಸಿಗೆ ಬಹಳ ನೋವಾಯ್ತಂತೆ. ಬಹಳಕಾಲ ಇದನ್ನೇ ವೀಕ್ಷಿಸುತ್ತಿದ್ದ ಕೇವಿನ್ ಕಾರ್ಟರ್ ಪ್ರಪಂಚದಲ್ಲಿ ಇಂಥಾ ದಾರುಣ ಸ್ಥಿತಿ ಯಾರಿಗೂ ಬಾರದಿರಲಿ ಎಂದು ಹಾರೈಸಿದ್ದಾರೆ. ನೋಡ್ತಾ ನೋಡ್ತಾ ಅವರಿಗೆ ಈ ನೋವೇ ಕಾರಣವಾಗಿ ಬದುಕೇ ಬೇಡವೆನ್ನಿಸಿತಂತೆ. ಈ ಲೋಕದ ಇಂತಹ ನೋವನ್ನು ತಲೆತುಂಬಾ ತುಂಬಿಕೊಂಡ ಕೇವಿನ್ ಕಾರ್ಟರ್ ಜೀವನಕ್ಕೆ ವಿದಾಯ ಹೇಳಿದ್ದಾರೆ; ಆತ್ಮಹತ್ಯೆ ಮಾಡಿಕೊಂಡುಬಿಟ್ಟಿದ್ದಾರೆ. 

ಬದುಕಿನ ಹಲವು ಮುಖಗಳನ್ನು ಚಿತ್ರಿಸುವಾಗ ಕಾಣದ ಶಕ್ತಿಯಲ್ಲಿ ನನ್ನದೊಂದು ಬಿನ್ನಹ: ಓ ದೇವನೇ ಪ್ರಪಂಚದಲ್ಲಿ ಇಂಥಾ ದಾರುಣ ಸ್ಥಿತಿಯನ್ನು ಮಾತ್ರ ತರಬೇಡ. ಅನ್ನಾಹಾರ ವಿಲ್ಲದೇ ಜನ-ಜಾನುವಾರು ಸಾಯುವ ಸ್ಥಿತಿ, ಅಂತಹ ಕ್ಷಾಮ ಬಾರದಿರಲಿ. ಅದರಲ್ಲಂತೂ ಮಕ್ಕಳ ಗೋಳನ್ನು ನಾವು ಸಹಿಸಲಾರೆವು. ಮಕ್ಕಳ ಮನಸ್ಸು ಅದು ನಿನ್ನ ಮನಸ್ಸು; ಪಾಪದ ಮಕ್ಕಳು ಏನೊಂದೂ ಅರಿಯವು. ತಮ್ಮ ಪಾಡಿಗೆ ತಾವು ಶಾಲೆಗಳಿಗೆ ಹೋಗುತ್ತಲೋ, ಇರುವ ಪರಿಸ್ಥಿತಿಯಲ್ಲಿ ಇನ್ನೇನೋ ಕೆಲಸಮಾಡುತ್ತಲೋ ಕಾಲಹಾಕುತ್ತಾರೆ. ನೀನೇ ಮಗುವಾಗಿ ಶ್ರೀರಾಮನಾಗಿ, ಶ್ರೀಕೃಷ್ಣನಾಗಿ ಜನಿಸಿದೆ, ಇನ್ನೊಮ್ಮೆ ನೀನು ಮಗುವಾಗಿ ಜನಿಸಿದರೆ ನಮ್ಮ ಜನ ನಿನ್ನನ್ನು ಖುದ್ದಾಗಿ ಕಂಡು, ಈ ಲೋಕದ ಕರ್ಮಬಂಧನದಿಂದ ಆದಷ್ಟೂ ಬಿಡುಗಡೆಗೊಳಿಸುವಂತೇ ಪ್ರಾರ್ಥಿಸಲಿ:

ಜಗನಾಳುವ ಶಕ್ತಿ ಮಗುವ ರೂಪದೆ ಬಂದು
ಬಗೆಬಗೆಯ ಆಟಿಕೆಯ ಎತ್ತಿ ನಲಿದಾಡಿ
ನಗುತ ನಲಿವುಣಿಸಿ ತಾ ಮರಳಿ ತೆರಳುವ ಮುನ್ನ
ನಗದು ವರವನು ಬೇಡು | ಜಗದಮಿತ್ರ