ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, December 9, 2010

ಹನುಮನ ಸ್ವಗತ


ಹನುಮನ ಸ್ವಗತ

[ಈ ಕಾವ್ಯ ರಾಮಾಂಜನೇಯ ಯುದ್ಧದ ಸನ್ನಿವೇಶಕ್ಕೆ ಸಂಬಂಧಿಸಿದ್ದು. ವಿವರಣೆ ಬೇಕಾದರೆ ಬಲಭಾಗದಲ್ಲಿರುವ ಮಾಲಿಕೆಗಳ ಪೈಕಿ ’ಪುರಾಣದಲ್ಲಿಯ ಪೇಚಿನ ಪ್ರಸಂಗಗಳು’ ಮಾಲಿಕೆಯಲ್ಲಿರುವ ’ರಾಮಾಂಜನೇಯ ಯುದ್ಧ’ ಕೃತಿಯನ್ನು ಓದುವುದು]


ರಾಘವನ ನೋಯಿಸಲು ಮನಬಾರದೆಂದೂ ನಿಜ
ಆಗಲೀ ಹನುಮ ರಕ್ಷೆಗೆ ಒಪ್ಪಿ ನಡೆದು !
ಭೋಗಬಯಸದ ನನ್ನ ರಣದೊಳಗೆ ಕೆಡವಿದರೆ
ಯೋಗವದು ರಾಮಪಾದದಲಿ ಸಾಯುವುದು

ಯಾಗಯಜ್ಞವನರಿಯೆ ಪದವೊಂದೇ ತಿಳಿದಿಹುದು
ಕೂಗಿ ಕರೆದರೆ ಓಡಿ ಬರುವ ಶ್ರೀರಾಮ
ಆಘಳಿಗೆಯಲೆ ಕಳೆವ ಇಹದ ನನ್ನೆಲ್ಲ ದುಃಖ
ರಾಗದಲಿ ಭಜಿಸುವೆನು ಜಯರಾಮರಾಮ

ಆಗದದು ಶಕುಂತನನು ಬಿಡಲು ಈ ಕ್ಷಣದಿ
ಆಗಲೇ ಕೊಟ್ಟೆ ವಚನವನು ಅಮ್ಮನಿಗೆ
ಸಾಗಿಬಂದಾತನನು ಕರುಣೆಯಲಿ ಪೊರೆಯದಿರೆ
ಹಾಗೊಮ್ಮೆ ಬದುಕೇನುಫಲವು ಭವದೊಳಗೆ ?

ಬೇಗವೇ ನಡೆದಂಥ ಕಥೆಯೆನಗೆ ತಿಳಿದಿಹರೆ
ಸಾಗಹಾಕುತಲಿದ್ದೆ ಆ ಶಕುಂತನನು
ಮಾಗಿನಿಂತಾಮನದಿ ಕೈಮುಗಿದು ಬೇಡಿದನು
ಮಾಗಿಮಲ್ಲಿಗೆಯಿರಿಸಿ ಜೀವದಾನವನು

ಈಗ ಬರುವನು ರಾಮಚಂದ್ರ ಈ ಜಾಗದಲಿ
ತೂಗಿ ಬಿಡುವನು ಚಾಪವೆಳೆಯುತ್ತ ಬಾಣ
ಹೇಗಾದರೂ ಪ್ರಭುವೆ ನನ್ನೊಡೆಯ ರಕ್ಷಿಪುದು
ಹೋಗದಂತಿರಲಿ ಶಕುಂತನಾ ಪ್ರಾಣ