ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 7, 2013

ದಮ್ಮಿದ್ದರೆ ದೇವಸ್ಥಾನ ಕಟ್ಟಿ-ನಿಮ್ಮತನ ನಿಮ್ಮದಾಗಲಿ !

ಚಿತ್ರಋಣ : ಅಂತರ್ಜಾಲ 
ದಮ್ಮಿದ್ದರೆ ದೇವಸ್ಥಾನ ಕಟ್ಟಿ-ನಿಮ್ಮತನ ನಿಮ್ಮದಾಗಲಿ !

ವಿಜಯಕರ್ನಾಟಕದಲ್ಲಿ ಖಾಲೀ ಬಿದ್ದ ಕೆಲವು ಜಾಗಗಳನ್ನು ಕೆಲವರು ತುಂಬಿಸುವತ್ತ ಟೊಂಕಕಟ್ಟಿದ್ದಾರೆ; ಈ ಪೈಕಿ ಉಮಾಪತಿಯೆಂಬವರೂ ಒಬ್ಬರು. ವಾರದಲ್ಲೊಮ್ಮೆ ಅದೂ ಇದೂ ಕಸಗಳನ್ನು ಎದುರು ತಂದು ’ಡೆಲ್ಲಿ ಡೈರಿ’ಎಂದು ಗುಡ್ಡೆ ಹಾಕುವುದು ಅವರ ಕಾಯಕ! ಅಹಿಂದವೇ ಮೂರ್ತಿವೆತ್ತಂತೇ ತಾನಿದ್ದೇನಲ್ಲಾ ಎಂದು ಒಂದಷ್ಟು ಉಗುಳುತ್ತಲೇ ಅದರಮೇಲೇ ನಡೆಯುವುದು ಅವರ ಹೆಚ್ಚುಗಾರಿಕೆ! ೧೫ ದಿನಗಳ ಹಿಂದೆ ಪಂಡಿತ್ ರವಿಶಂಕರ್ ಗತಿಸಿದಾಗ ಅವರ ವೈಯ್ಯಕ್ತಿಕ ಬದುಕಿನ ಶೋಕಿಗಳನ್ನು ಬಣ್ಣಿಸುವತ್ತ ಅವರ ಗಾಡಿ ನಡೆದಿತ್ತು, ಇವತ್ತು ಅವರಿಗೆ ಸಿಕ್ಕಿದ್ದು ಸರಸಂಘ ಚಾಲಕ ಭಾಗವತರ ನುಡಿ. ಭಾರತೀಯ ಮೌಲ್ಯಗಳನ್ನು ಪಾಲಿಸಿದ್ದರೆ ಮಾನಭಂಗ/ಶೀಲಹರಣ ಕಾರ್ಯ ನಡೆಯುವುದು ಸಾಧ್ಯವಿಲ್ಲ-ಈಗಿನ ಹೆಣ್ಣುಮಕ್ಕಳು ಭಾರತೀಯತೆಯನ್ನು ಬಿಟ್ಟು ವಿದೇಶೀ ಸಂಸ್ಕೃತಿಗೆ ಒಗ್ಗಿಕೊಂಡು ಹಾಗೆ ನಡೆಯುತ್ತಿರುವುದರಿಂದ ಮಾನಭಂಗ/ಶೀಲಹರಣ ಘಟಿಸುವುದಕ್ಕೆ ಅಲ್ಲಿ ವಿಪುಲ ಅವಕಾಶವಿದೆ ಎಂದು ಭಾಗವತರು ಹೇಳಿದ್ದನ್ನೇ ಉಮಾಪತಿಯವರು ತಮ್ಮ ಜಾಗತುಂಬುವ ಕೆಲಸಕ್ಕೆ ವಿಷಯವಸ್ತುವನ್ನಾಗಿ ಪರಿಗಣಿಸಿ ಕೃಷ್ಣಸರ್ಪದ ರೀತಿ ಬುಸುಗುಟ್ಟುತ್ತಾ ಹಾಲಾಹಲವನ್ನೇ ಕಕ್ಕಿದ್ದಾರೆ. ಮಾಧ್ಯಮದಲ್ಲಿ ಎಡಪಂಥೀಯರಿಗೆ ಜಾಸ್ತಿ ಮಣೆಹಾಕುತ್ತಿರುವುದರಿಂದ ಆ ಸಂಖ್ಯೆ ಏರುತ್ತಿದೆ ಎಂದು ಕಳೆದವಾರವಷ್ಟೇ ನಾನು ಹೇಳಿದ್ದೆ-ಇದು ಅದಕ್ಕೊಂದು ಜ್ವಲಂತ ನಿದರ್ಶನ.

ಮಾನವ ಜನಾಂಗವನ್ನು ವರ್ಣಾಶ್ರಮಕ್ಕೆ ವಿಭಕ್ತಗೊಳಿಸುವ ಮುನ್ನ ಒಂದಾನೊಂದು ಕಾಲದಲ್ಲಿ ಮಾನವಜನಾಂಗ ಒಂದೇ ಆಗಿದ್ದಿತು, ಆಗ ಕೇವಲ ಹೆಣ್ಣು ಮತ್ತು ಗಂಡು ಎಂಬ ಜಾತಿಗಳಿದ್ದವು -ಎಂದುಕೊಳ್ಳೋಣ. ಚಾತುರ್ವಣ ಮಾಡುವಾಗ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಂದು ತಮ್ಮನ್ನು ಗುರುತಿಸಿಕೊಳ್ಳಲಿಕ್ಕೆ ಕೆಲವರಾದರೂ ಸಿದ್ಧರಾಗಿರಲೇಬೇಕಲ್ಲವೇ? ಒಂದಿರುವುದು ನಾಲ್ಕಾಗುವ ಸಮಯದಲ್ಲಿ ಉ಼ಚ್ಚ-ನೀಚ ಎಂಬ ಪರಿಭೇದ ಇರುತ್ತದೆ ಎಂದು ಗೊತ್ತಾದಮೇಲೂ ಹಾಗೆ ತಮ್ಮನ್ನು ಆ ಯಾ ಗುಂಪುಗಳಲ್ಲಿ ಗುರುತಿಸಿಕೊಳ್ಳಲಿಕ್ಕೆ ಅಂದಿನ ಜನ ಸಿದ್ಧರಾದರೇ? ಇದನ್ನು ಕೆದಕಿದಾಗ ನಮಗೆ ವರ್ಣಾಶ್ರಮ ಮೇಲ್ವರ್ಗದವರು ತಮ್ಮ ಅನುಕೂಲಕ್ಕಾಗಿ ನಿಯಮಿಸಿದ ಕಟ್ಟುಪಾಡಲ್ಲ ಎಂಬುದು ಯಾರೇ ಹೊರಗಿನಿಂದ ಒಪ್ಪಿಕೊಳ್ಳದೇ ಹೋದರೂ ಒಳಗಿನಿಂದ ಕಾಣುವ, ಕಾಡುವ ಸತ್ಯ. ಉಂಡುಟ್ಟು ಜೀವಿಸುವ ಮಾನವನಲ್ಲಿ ಮೂಲವಾಗಿ ಇರುವುದು ಅಹಮಿಕೆ, ಅಹಮಿಕೆ ಇರುವ ಜನಾಂಗ ಎಂದಿಗೂ ತಾವು ಕೆಳಗಿನವರು ಇನ್ನೊಂದಷ್ಟು ಮೇಲಿನವರು ಎಂದು ಒಪ್ಪಿಕೊಳ್ಳುವುದಿಲ್ಲ. ಹಾಗಾದರೆ ಜಿಜ್ಞಾಸೆ ಮಾಡಿದರೆ ತಿಳಿಯುವುದು ಮೂಲ ಮಾನವ ಜನಾಂಗವನ್ನು ಮೇಲ್ವರ್ಗ ಮತ್ತು ಕೆಳವರ್ಗ ಅಥವಾ ಚಾತುರ್ವರ್ಣ ಎಂದು ವಿಭಜಿಸಿದ್ದು ಇನ್ನಾವುದೋ ನಾಯಕಶಕ್ತಿ, ನಿರೂಪಕ ಶಕ್ತಿ, ಜಗನ್ನಿಯಾಮಕ ಶಕ್ತಿ.           

|| ಚಾತುರ್ವರ್ಣಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ ||

ಎಂದ ಶ್ರೀಕೃಷ್ಣ ಚಾತುರ್ವರ್ಣ ತನ್ನದೇ ಸೃಷ್ಟಿ ಎಂದು ತನ್ನನ್ನೇ ಆರೋಪಿಸಿಕೊಂಡಿದ್ದಾನೆ ಮತ್ತು ಹಾಗೆ ವಿಭಜಿಸುವುದಕ್ಕೆ ಕಾರಣವನ್ನೂ ಹೇಳಿದ್ದಾನೆ.

ವಾರಪತ್ರಿಕೆ ನಡೆಸುವ ಮಾಜಿ ರೌಡಿಯೊಬ್ಬ ಈ ಹಿಂದೊಮ್ಮೆ ’ವೈದಿಕ ವೈರಸ್’ ಎಂದು ಹೆಸರಿಸಿ ಪತ್ರಿಕೆಯ ಪ್ರಚಾರವನ್ನು ಹೆಚ್ಚಿಸಿಕೊಳಲು ಪ್ರಯತ್ನಿಸಿ ವಿಫಲನಾದ; ಇದರಿಂದ ಸಮಾಜದಮೇಲೆ ದುಷ್ಪರಿಣಾಮವಾಯ್ತೇ ಹೊರತು ಆತನಿಗೆ ಪೈಸೆ ಪ್ರಯೋಜನವೂ ಆಗಲಿಲ್ಲ. ಅವನ ಅಂಬೋಣ ಕೃಷ್ಣ ಯಜುರ್ವೇದದ ಪುರುಷಸೂಕ್ತದ ಹೇಳಿಕೆಯ ಬಗ್ಗೆ ಜಾಸ್ತಿ ಇತ್ತು.

ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂರಾಜನ್ಯಃ ಕೃತಃ || ಊರೂ ತದಸ್ಯ ಯದ್ವೈಶ್ಯಃ | ಪದ್ಬ್ಯಾಗ್ಂ ಶೂದ್ರೋ ಅಜಾಯತ || ಚಂದ್ರಮಾ ಮನಸೋ ಜಾತಃ | ಚಕ್ಷೋಸ್ಸೊರ್ಯೋ ಅಜಾಯತ | ಮುಖಾದಿಂದ್ರಶ್ಚಾಗ್ನಿಶ್ಚ | ಪ್ರಾಣಾದ್ವಾಯುರಜಾಯತ | ನಾಭ್ಯಾ ಆಸೀದಂತರಿಕ್ಷಮ್ | ಶೀರ್ಷ್ಣೋ ದ್ಯೌಸ್ಸಮವರ್ತತ | ಪದ್ಬ್ಯಾಂ ಭೂಮಿರ್ದಿಶಶ್ಶ್ರೋತಾತ್ | ತಥಾ ಲೋಕಾಗ್ಂ ಅಕಲ್ಪಯನ್ ||

ಇದು ಮಾಜಿರೌಡಿಯವರಿಗೆ ಜೀರ್ಣವಾಗಿರಲಿಲ್ಲ. ಈ ಮಂತ್ರವನ್ನು ವಿಶದೀಕರಿಸುತ್ತಾ, ಮಂತ್ರವನ್ನೂ ಸರಿಯಾಗಿ ಮುದ್ರಿಸದೇ, ಅರ್ಥವನ್ನೂ ಅನರ್ಥವಾಗಿ ತಿಳಿಸಿ ಯಾವ ಬ್ರಾಹ್ಮಣನೂ ಇದಕ್ಕೆ ಉತ್ತರ ನೀಡುವುದಿಲ್ಲ ಎಂದುಬಿಟ್ಟನಾತ! ದೇವರ ಮೂರ್ತರೂಪದ ಯಾವ ಯಾವ ಅಂಗಾಂಗಗಳಿಂದ ಯಾರು ಯಾರು ಜನಿಸಿದರು ಎಂಬುದನ್ನು ಈ ಮಂತ್ರ ತಿಳಿಸುತ್ತದೆ ಮತ್ತು ಬ್ರಹ್ಮಾಂಡದ ಸ್ಥೂಲ ಕಲ್ಪನೆಯನ್ನು ಇದು ಹೇಳುತ್ತದೆ. ಇದನ್ನೇ ಹಿಡಿದುಕೊಂಡು ಬ್ರಾಹ್ಮಣರು ತಾವು ಮೇಲೆ ಎಂದರು ದಿನವಿಡೀ ದುಡಿಯುವ ಶೂದ್ರನಿಗೆ ಕೊನೇ ದರ್ಜೆ --ಹೀಗೆಲ್ಲಾ ಪ್ರಲಾಪಿಸಿದ್ದ. ಅವನ ವಾದ ಹಾಗಿರಲಿ, ಬ್ರಾಹ್ಮಣ್ಯದ ಬಗ್ಗೆಯೇ ತಿಳಿಯದೇ ಬ್ರಾಹ್ಮಣರನ್ನು ಟೀಕಿಸುವುದು ಎಷ್ಟು ಕೀಳು ಅಭಿರುಚಿ ಎಂದು ಆತನಿಗೆ ತಿಳಿದಿಲ್ಲ, ತಿಳಿಯುವುದೂ ಇಲ್ಲ-ಯಾಕೆಂದರೆ ಆತ ಜಗಮೊಂಡ! ಬ್ರಾಹ್ಮಣರಿಗೆ ಏನೂ ಕೆಲಸವಿಲ್ಲಾ, ಆರಾಮು, ಹೋಮ-ಪೂಜೆಮಾಡುವುದು ಕಾಸು ಎಣಿಸೋದು ಹಾಯಾಗಿರೋದು ಎಂದು ಹೇಳಿದ್ದ ಆತನಿಗೂ ಸೇರಿದಂತೇ ಬ್ರಾಹ್ಮಣ ವಿರೋಧಿಗಳಿಗೆ ನನ್ನದೊಂದು ಆಹ್ವಾನ: ’ಬ್ರಾಹ್ಮಣ್ಯ’ದಲ್ಲಿ ಒಂದು ವರ್ಷ ಜೀವಿಸಿ ತೋರಿಸಿ, ನನಗೆ ಗೊತ್ತು ಅದು ಸುಲಭಸಾಧ್ಯದ್ದಲ್ಲ. ಎಲ್ಲಾ ವರ್ಣಗಳವರಿಗೂ ಅವರದ್ದೇ ಆದ ಕೆಲಸಗಳಿವೆ, ವಿಧಿಗಳಿವೆ, ಅವು ಸುಮ್ಮನೇ ಅಲ್ಲ. ವೈಶ್ಯನೊಬ್ಬ ವ್ಯಾಪಾರಕ್ಕೆ ಸಕಲ ಸಿದ್ಧತೆಗಳನ್ನೂ ಸದಾ ನಡೆಸುತ್ತಲೇ ದಿನವಿಡೀ ಅಂಗಡಿಮುಂಗಟ್ಟು ಸಜ್ಜುಗೊಳಿಸಿ ಹೆಣಗಾಡಬೇಕಾಗುತ್ತದೆ, ಕ್ಷತ್ರಿಯನೊಬ್ಬ ದೇಶದ ವೈರಿಗಳನ್ನು ಬಡಿದೋಡಿಸಿ ಪ್ರಜೆಗಳನ್ನು ಸುರಕ್ಷಿತವಾಗಿಡಬೇಕಾಗುತ್ತದೆ-ಇಂದು ನಮ್ಮ ಸೈನ್ಯದವರೇ ಕ್ಷತ್ರಿಯರಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಜಗತ್ತಿನಲ್ಲಿ ಖಾಲಿ ಇರುವವರಿಗೆ ಅನ್ನವಿರುವುದಿಲ್ಲ; ಪ್ರತಿಯೊಬ್ಬನೂ ಉದ್ಯೋಗನಿರತ/ಕರ್ತವ್ಯನಿರತನಾಗಿರಲೇಬೇಕು. ಒಬ್ಬ ದರ್ಜಿ, ಒಬ್ಬ ಮೋಚಿ ಮತ್ತೊಬ್ಬ ನಾಪಿತ ಮೂರು ಜನರಿದ್ದರೆ ಹೊರಗಿನಿಂದ ಮನುಷ್ಯನನ್ನು ಚೆನ್ನಾಗಿ ರೂಪಿಸಬಹುದು ಆದರೆ ಅಂತರಂಗದಿಂದಲ್ಲ ಎಂದು ಕವಿ ಕುವೆಂಪುವೇ ಹೇಳಿದ್ದಾರೆ. ಸಂಸ್ಕಾರ ಎಂಬುದು ಅಂತರಂಗಕ್ಕೆ ಸಂಬಂಧಿಸಿದ್ದು; ಅದು ಸ್ವಭಾವವನ್ನು ಕ್ರಮಾಗತಗೊಳಿಸುತ್ತದೆ. ತಿನ್ನುವ ಆಹಾರದಮೇಲೆ ಮನಸ್ಸು ರೂಪಿತವಾಗುತ್ತದೆ, ರೂಪುಗೊಂಡ ಮನಸ್ಸನ್ನು ಬುದ್ಧಿ ಪ್ರೇರೇಪಿಸುತ್ತದೆ, ಬುದ್ಧಿ ಪ್ರೇರಿತನಾದ ವ್ಯಕ್ತಿಗೆ ಚಿತ್ತಸ್ವಾಸ್ಥ್ಯ ಸಿಗುವುದು ಉತ್ತಮವಾದ ಕೋಶಗಳ ಓದುವಿಕೆಯಿಂದ ಮತ್ತು ಉತ್ತಮವಾದ ವಿಷಯಗಳನ್ನು ಆಲಿಸುವಿಕೆಯಿಂದ. ಆ ಎರಡೂ ಮತ್ತು ಅವುಗಳಿಗೆ ತಳಹದಿಯಾಗಿ ಹೇಳಿದ ಸಮರ್ಪಕ ಆಹಾರವೂ ಇಲ್ಲದ ಮಾಜಿರೌಡಿಗೆ ಯಾವ ಮಟ್ಟದ ತಿಳುವಳಿಕೆ ಇದ್ದೀತು? ಯಾವುದು ನಿಲುಕೀತು ? ವರ್ಣಾಶ್ರಮಗಳು ಗುಣ, ಕರ್ಮ, ಸ್ವಭಾವ, ವೃತ್ತಿಗಳಿಂದ ಆಗುವಂಥವೇ ಹೊರತು ಹುಟ್ಟಿನಿಂದಲ್ಲವಲ್ಲ!

ಮದುವೆಯೊಂದರಲ್ಲಿ ಭಾಗವಹಿಸಿದ್ದೆ, ಊಟಕ್ಕಾಗಿ ನೂಕುನುಗ್ಗಲು-ಕಾರಣ ತಿಳಿಯಲಿಲ್ಲ; ಒಂದು ಪಂಕ್ತಿ ಮುಗಿದು ಎಂಜಲು ಎಲೆಗಳನ್ನು ತೆಗೆಯುವುದಕ್ಕೂ ಮುನ್ನವೇ ಜನ ಆಸನಗಳಲ್ಲಿ ಕೂರುವುದಕ್ಕಾಗಿ ನುಗ್ಗುತ್ತಿದ್ದರು. ಊಟಕ್ಕೇನೋ ಮೇಜು ಇದೆ ಆದರೆ ಕುಳಿತುಕೊಳ್ಳುವ ಆಸನ ಹೊರತುಪಡಿಸಿ ಮೇಜಿನ ಕೆಳಗಿನ ನೆಲದಲ್ಲಿ ಆಹಾರ-ಪದಾರ್ಥಗಳಿ ಚೆಲ್ಲಿವೆ, ಗಲೀಜಾಗಿದೆ-ಅಶುದ್ಧವಾಗಿದೆ. ಆದರೆ ನುಗ್ಗುವವರಿಗೆ ಅದರ ಬಗ್ಗೆ ಗಮನವಿರಲಿಲ್ಲ. ಸಾಮಾನ್ಯವಾಗಿ ಹಿಂದೆ ಊಟಕ್ಕಾಗಿ ಈ ಸ್ಥಿತಿ ಇರಲಿಲ್ಲ. ಇದಕ್ಕೆ ಕಾರಣ ತಡವಾಗಿ ನನಗೆ ತಿಳಿದುಬಂತು. ಪಂಕ್ತಿಭೇದ ಮಾಡಬಹುದು ಎಂಬುದನ್ನು ಶಂಕಿಸಿ  ತಾವು ನಿಮ್ನವರ್ಗದವರೆಂದುಕೊಂಡ ಕೆಲವುಜನ ಗುಂಪುಕಟ್ಟಿಕೊಂಡು ಮುನ್ನುಗ್ಗುತ್ತಿದ್ದರು, ಗುಂಪುಗಳೊಂದಷ್ಟು ನುಗ್ಗುವಾಗ ಎಲ್ಲರೂ ಗಲಿಬಿಲಿಗೊಂಡು ನುಗ್ಗುತ್ತಿದ್ದರು. ಊಟಕ್ಕೆ ಕುಳಿತ ಕೆಲವರಲ್ಲಿ ಸಂಪ್ರದಾಯಸ್ಥ ಶ್ರದ್ಧಾಳುಗಳು ಅಂಗಿ ತೆಗೆದು ಪಂಚೆ ಉಟ್ಟು ಕುಳಿತಿದ್ದರೆ ಕೆಲವರು ಸ್ನಾನವನ್ನೂ ಮಾಡಿಬಂದ ರೀತಿ ಇರಲಿಲ್ಲ-ಅವರ ಬೆವರಿನ ನಾತ ಅಷ್ಟು ದೂರದವರೆಗೂ ತುಂಬಿತ್ತು. ಅಲ್ಲಿ ನಡೆಯುತ್ತಿರುವುದು ಶುಭಕಾರ್ಯದಲ್ಲಿ ಅನ್ನದಾನ ಅಲ್ಲವೇ? ಅನ್ನದಾನವನ್ನು ಸ್ವೀಕರಿಸುವಾಗ ಕನಿಷ್ಠ ಸ್ನಾನವನ್ನೂ ಮಾಡಿ ಶುಚಿರ್ಭೂತರಾಗದೇ ಹಾಗೇ ಮೈತುಂಬ ಕೊಳೆಕೊಳೆ ಬಟ್ಟೆಯಲ್ಲಿ ಬಂದು ಕುಳಿತರೆ  ಪಕ್ಕದಲ್ಲಿ ಸ್ನಾನ-ಪೂಜೆಮಾಡಿ, ಅಂಗಿ ತೆಗೆದು ಪಂಚೆ ಧರಿಸಿ ಬಂದು ಕುಳಿತವರಿಗೆ ಹೇಗೆನಿಸಬೇಡ? ಹೋಗಲಿಬಿಡಿ, ನಡೆಯುವಾಗ ಉಗುಳಿಕೊಳ್ಳುತ್ತಲೇ ನಡೆಯುವ ಜನ ನಮ್ಮ ಸುತ್ತ ಅದೆಷ್ಟು ಕಾಣಸಿಗುವುದಿಲ್ಲ?

ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ||

ನಾವು ವಾಸಿಸುವ ಈ ಭೂಮಿಗೂ ಒಂದು ಮಾರ್ಯಾದೆಯಿದೆ, ಆಕೆಯನ್ನು ಮಹಾವಿಷ್ಣುವಿನ ಪತ್ನಿ ಎಂದು ಪರಿಗಣಿಸಿದೆ ನಮ್ಮ ಸನಾತನ ಜೀವನಧರ್ಮ. ಬದುಕಿನ ಅನಿವಾರ್ಯತೆಗೆ ಕೆಲವು ಪ್ರದೇಶಗಳನ್ನು ನಾವು ಅತುಕ್ರಮಿಸಿಕೊಳ್ಳುವುದು, ಹೊಲಸುಮಾಡುವುದು ಅನಿವಾರ್ಯ, ಆದರೆ ಭೂಭಾಗದಲ್ಲಿ ಎಲ್ಲೆಂದರಲ್ಲಿ ಹೊಲಸುನಾರುವಂತೇ ಮಾಡಿದರೆ ಅದು ಜೀವನಕ್ಕೆ ಮಾರಕವಾಗುತ್ತದೆ; ವೈರಾಣುಗಳು ಹುಟ್ಟಿ ಹೊಸಹೊಸ ಕಾಯಿಲೆಗಳು ಸಮಾಜವನ್ನು ತಲ್ಲಣಿಸುತ್ತವೆ. ಈ ಕಾರಣದಿಂದ ಉಗುಳುಗುಪ್ಪೆಗಳನ್ನು ನಮ್ಮಲ್ಲಿ ಇಟ್ಟಿರುತ್ತಾರೆ-ಅಂಥಲ್ಲಿ ಮಾತ್ರ ಉಗುಳಬೇಕು. ನಮ್ಮಲ್ಲಿನ ಕೆಲವು ಅಹಿಂದದ ಮೂರ್ತಿಗಳು ಮಾತೆತ್ತಿದರೆ ಸಿಂಗಾಪೂರದ ಸುದ್ದಿ ಹೇಳುತ್ತಾರೆ-ಆದರೆ ಸಿಂಗಾಪೂರದಷ್ಟು ಶುಚಿತ್ವವನ್ನು ಕಾಪಾಡುತ್ತಾರೆಯೇ? ಅದರ ನೂರನೇ ಒಂದು ಭಾಗದಷ್ಟಾದರೂ ಕಾಪಾಡುತ್ತಾರೆಯೇ? ಶುಚಿತ್ವವನ್ನು ಅಶುಚಿತ್ವದಿಂದ ಬೇರ್ಪಡಿಸುವ ಸ್ವಭಾವವನ್ನೇ ಅರಿಯದ ಜನ ಮುಂದುವರಿದ ಜಗತ್ತು, ೨೨ನೇಶತಮಾನ ಎಂದುಬಿಟ್ಟರೆ ಸಾಕೇ? ಕೆಲವು ಜನರಲ್ಲಿ ಮಾಂಸಾಹಾರವನ್ನು ಒಂದೆಡೆ ಉದ್ದನೆಯ ರಾಶಿಹಾಕಿ, ಸುತ್ತ ಎಲ್ಲರೂ ಕುಳಿತು, ಸತ್ತ ಪ್ರಾಣಿಯನ್ನು ಮಾಂಸಾಹಾರೀ ಪ್ರಾಣಿಗಳು ಹರಿದು ಭಕ್ಷಿಸುವಂತೇ ಎಳೆದೆಳೆದು ತಿನ್ನುವುದು ಕಾಣುತ್ತದೆ-ಇದು ಭಾರತೀಯ ಪದ್ಧತಿಯೇ? ಅಲ್ಲವಲ್ಲಾ? ಕೆಲವರು ’ಹಂಚಿತಿನ್ನುವ ದೊಡ್ಡತನ’ ಎಂಬ ನೆಪದಲ್ಲಿ ಒಬ್ಬರ ಎಲೆಯನ್ನು ಇನ್ನೊಬ್ಬರ ಎಲೆಗೆ ತಾಗಿಸಿಕೊಂಡು ಕೂರುವುದು, ಒಬ್ಬರು ತಿಂದುಬಿಟ್ಟ ಕೇಕು ಮೊದಲಾದುವನ್ನು ತಿನ್ನುವುದು-ತಿನ್ನಿಸುವುದು ಇಂಥಾದ್ದೆಲ್ಲಾ ಕಾಣುತ್ತದೆ, ಇವನ್ನೆಲ್ಲಾ ಭಾರತೀಯ ಜೀವನಧರ್ಮ ಹೇಳುತ್ತದೆಯೇ? ಮಾನವ ಸಹಜವಾಗಿ ಜನ್ಮಾಂತರಗಳ ಕರ್ಮಬಂಧನಗಳಿಂದ ಕೆಲವರಿಗೆ ಇಲ್ಲದ ಸಾಂಕ್ರಾಮಿಕ ರೋಗಗಳು ಇದ್ದಿರಬಹುದೆಂಬ ಧೋರಣೆಯನ್ನು ಹೊಂದಿರುವ ಜನ, ಹಾಗೆ ಒಂದೇ ಎಡೆಯಿಂದ ಹಂಚಿತಿನ್ನುತ್ತೇವೆ ಎಂಬ ’ಅತಿಸೌಜನ್ಯ’ದ ಔಚಿತ್ಯವಾದರೂ ಎಂಥದ್ದು? 

ಗಂಡಸಿನ ಅಣತಿಯನ್ನು ಶಿರೋಧಾರ್ಯ ಎಂದು ಸ್ವೀಕರಿಸಿ ಸಾಲು ಸಾಲು ಗಂಡುಮಕ್ಕಳನ್ನು ಹೆತ್ತುಕೊಟ್ಟರೆ, ಹೆಣ್ಣುಭ್ರೂಣವನ್ನು ಸದ್ದಿಲ್ಲದಂತೇ ಹೊಸಕಿಹಾಕಿದರೆ, ನಪುಂಸಕ ಗಂಡನನ್ನು ವೀರ್ಯವಂತ ಪುರುಷೋತ್ತಮ ಎಂದು ಕೊಂಡಾಡಿದರೆ, ಮೊಬೈಲ್ ಫೋನು ಮುಟ್ಟದೇ ಇದ್ದರೆ, ಚೀನಾ ಮೂಲದ ಸಸ್ಯಾಹಾರೀ ವ್ಯಂಜನ ಚೌಮೀನ್ ತಿನ್ನದೇ ಇದ್ದರೆ, ಜೀನ್ಸ್ ಪ್ಯಾಂಟ್ ತೊಡದೇ ಹೋದರೆ, ಭಾಗವತರ ಭಾರತದಲ್ಲಿ ಹೆಣ್ಣುಮಕ್ಕಳಿಗೆ-ಹದಿಹರೆಯದ ತರುಣಿಯರಿಗೆ ಸಮಸ್ಯೆಯೇ ಇಲ್ಲ ಎಂದು ಭಾಗವತರು ಹೇಳಿದ್ದಾರೆ----ಎಂಬುದನ್ನು ಉಮಾಪತಿಯವರು ಉದ್ದರಿಸಿದ್ದಾರೆ. ’ಕಮಾನ್ ..ಕ್ ಮಿ’, ’ಕಿಸ್ ಮಿ’, ’ಬಾಂಡ್ ಗರ್ಲ್’, ’ಬೋಲ್ಡ್’, ’ನಾಟಿ ಗರ್ಲ್’ ಇಂಥದ್ದನ್ನೆಲ್ಲಾ ಎದೆಭಾಗದಲ್ಲಿ ಬರೆದ, ಚಿತ್ರವಿಚಿತ್ರ ಬಣ್ಣದ ಚಿತ್ತಾರಗಳುಳ್ಳ ವಿದೇಶೀ ತರಗತಿಯ ದಿರಿಸುಗಳು ದೇಹದ ಉಬ್ಬುತಗ್ಗುಗಳನ್ನು ವಿಶದವಾಗಿ ತೆರೆದುತೋರಿಸಿದರೆ ಶರೀರದಲ್ಲಿ ಕಸುವಿರುವ ತರುಣರನ್ನು ಕೆಲಕಾಲವಾದರೂ ಆ ಸಂಗ್ತಿ ಕುಣಿಸುತ್ತದೆ ಎಂಬುದು ಉಮಾಪತಿಯವರಿಗೆ ತಿಳಿಯುವುದಿಲ್ಲ ಪಾಪ! ಎಲ್ಲವನ್ನೂ ಬಿಟ್ಟೆನೆಂದ [ಯಾವ ಅರ್ಥದಲ್ಲೋ!] ಇಡೀ ಮಾಯ್ನಮಿಡಿ ಮಠದವರನ್ನೂ ವಾರಗಳ ಕಾಲ ಕುಣಿಸುವ ವಯಾಘ್ರ ಇದು ಎಂಬುದು ಅವರಿಗೆ ಅರಿವಾಗುವುದಿಲ್ಲ! ಅನೇಕ ತರುಣಿಯರು ದೇವಸ್ಥಾನಗಳಿಗೂ, ಮಠ-ಮಾನ್ಯಗಳಿಗೂ ಅಂಥದ್ದೇ ಜೀನ್ಸ್ ಮತ್ತು ಟೀ ಶರ್ಟ್ ತೊಟ್ಟು ಹೋಗುತ್ತಾರಲ್ಲಾ ಹಾಗೆ ಹೋಗುವ ಅವರ ಮನಸ್ಸಿನಲ್ಲಿ ಅವರಿಗೆ ಬೇಕಾದುದು ದೇವರ/ಸ್ವಾಮಿಗಳ ದರ್ಶನವೋ ಅಥವಾ ಅದು ಅವರ ಪ್ರದರ್ಶನವೋ? ಹಿಂದೂ ಜೀವನ ಪದ್ಧತಿಗೆ ಇರುವ ಡ್ರೆಸ್ ಕೋಡ್ ಕೊನೇಪಕ್ಷ ಮಠ-ಮಂದಿರಗಳಂಥಾ ಪ್ರದೇಶಗಳಲ್ಲಾದರೂ ಜಾರಿಯಲ್ಲಿರಬೇಕಲ್ಲಾ? ವಿದೇಶೀ ದಿರಿಸುಗಳಲ್ಲಿ ಬರಬೇಡಿ ಎಂದರೂ ಅದು ಅಹಿಂದದವರಿಗೆ ಮಾಡಿದ ಅವಮಾನವೇನೋ ಅಲ್ಲವೇ ಉಮಾಪತಿಗಳೇ? ಮಾಂಸಾಹಾರ ಮತ್ತು ಶಾಕಾಹಾರ ಎರಡನ್ನೂ ಅಕ್ಕ-ಪಕ್ಕದಲ್ಲಿ ತಯಾರಿಸುವ ಹೋಟೆಲಿನಲ್ಲಿ ಒಂದಕ್ಕೆ ಬಳಸಿದ ಸೌಟುಗಳನ್ನೇ ಇನ್ನೊಂದಕ್ಕೆ ಬಳಸುತ್ತಾರೆ ಎಂಬುದು ಬಹಳಜನರಿಗೆ ತಿಳಿದಿದೆ. ಮಾಂಸಾಹಾರವೆಂದರೆ ವಿಷವಲ್ಲ ನಿಜ-ಆದರೆ ಮಾಂಸಾಹಾರವನ್ನು ಜೀವನಪರ್ಯಂತ ತಿನ್ನದೇ ಇರುವುದೇ ಒಂದು ವ್ರತ; ಅದು ಅಹಿಂದದವರಿಗೆ ಅಪಥ್ಯ! ಮಾಂಸಾಹಾರ ಭುಂಜಿಸದೇ ಕೇವಲ ೪೫ ದಿನಗಳ ವ್ರತವನ್ನು ನಡೆಸುವ ಅಯ್ಯಪ್ಪ ಭಕ್ತರನ್ನು ಅವರು ಅಹಿಂದದವರೇ ಆದರೂ ಮಡಿ-ಗುರು-ಸ್ವಾಮಿ ಎಂಬ ಗೌರವದಿಂದ ಬೇರ್ಪಡಿಸುವ ಜನ ಜೀವನಪರ್ಯಂತ ವ್ರತದಲ್ಲಿ ಇರುವ ಜನರಿಗೆ ಯಾವ ಗೌರವ ಕೊಡುತ್ತಿದ್ದಾರೆ? ಹೇಳಲೇ-ಆವರನ್ನು ಮಾಂಸಾಹಾರಿಗಳಾಗುವಂತೇ ಕರೆನೀಡುತ್ತಿದ್ದಾರೆ-ಪ್ರೋತ್ಸಾಹಿಸಿ ಆರಂಭಿಸಲು ಸ್ಪಾನ್ಸರ್ ಶಿಪ್ ಸಹ ಘೋಷಿಸುತ್ತಾರೆ!    

"ಈ ದೇಶದ ಎಲ್ಲ ಅಸಮಾನತೆ ಮತ್ತು ಅನ್ಯಾಯದ ಮೂಲ ವಿಷವೃಕ್ಷ ಎನಿಸಿರುವ ಜಾತಿವ್ಯವಸ್ಥೆಯ ಬೇರುಗಳು ಭಾಗವತರ ಭಾರತದಲ್ಲಿ ಈಗಲೂ ಆಳ ಮತ್ತು ಸುಭದ್ರ"-ಎಂದು ಉಮಾಪತಿಯವರು ಅಪ್ಪಣೆಕೊಡಿಸಿದ್ದಾರೆ! ಮುಂದುವರಿಸಿದ ಅವರು, ಜಾತಿ ವ್ಯವಸ್ಥೆಯ ವಿರುದ್ಧ ದನಿಗಳಾದರೂ ಎದ್ದಿವೆ, ಸವಾಲನ್ನಾದರೂ ಎಸೆದಿವೆ ಎನ್ನುವಾಗ ಜಾತಿವ್ಯವಸ್ಥೆ ಯಾಕೆ ಉದ್ಭವವಾಯ್ತು ಎಂಬ ಬಗ್ಗೆ ಕಿಂಚಿತ್ತಾದರೂ ಚಿಂತಿಸಿದರೇ? ಉಮಾಪತಿಯವರ ಮಾರೀಪತ್ತಿನಲ್ಲಿ ಇರುವುದು ಜಾತೀಯತೆಯ ವಿರುದ್ಧದ ಸೋಗಿನಲ್ಲಿ ಕೇವಲ ಒಂದು ಜನಾಂಗದ ವಿರುದ್ಧ ಬುಸುಗುಟ್ಟುವ ಕಾಳಿಂಗ ಎಂಬುದು ಸಾಮಾನ್ಯ ಓದುಗನಿಗೂ ತಿಳಿಯುತ್ತದೆ; ಅದು ಆಗಾಗ ಹಾಗೆ ತಿಳಿಯುತ್ತಲೇ ಇದೆ."ಭಾಗವತರು ಮತ್ತು ಅವರು ಮುಟ್ಟಿಸಿಕೊಳ್ಳುವ ಕುಲಜರ ಅಂಗಳಗಳಿಗೆ ಈಗಲೂ ಕೆಳಜಾತಿಗಳವರಿಗೆ ಪ್ರವೇಶ ದುಸ್ತರವೇ.ಕೊಬ್ಬಿದ ಕುಲಜ ಹೋರಿಗಳಿಗೆ ಕೆಳಜಾತಿಯ ಹೆಣ್ಣುಮಕ್ಕಳು ಮೈ ಒಪ್ಪಿಸಿಕೊಳ್ಳದಿದ್ದರೆ ಮಾತ್ರವೇ ಖೈರ್ಲಂಜೆಗಳೂ, ಕಂಬಾಲಪಲ್ಲಿಗಳೂ ಭಾರತದಲ್ಲಿ ಜರುಗುತ್ತವೆ. ಇಲ್ಲವಾದರೆ ಅತ್ಯಾಚಾರಗಳ ಸೊಲ್ಲೇ ಇಲ್ಲ. ಬಿಟ್ಟಿ ಚಾಕರಿ ಮಾಡದೇ ಹೋದರೆ, ನ್ಯಾಯವಾದ ಕೂಲಿ ಬೇಡಿದರೆ ಮಾತ್ರವೇ ಸಾಮಾಜಿಕ ಬಹಿಷ್ಕಾರ ಹಾಕಿಯಾರು..ಕೈಗಳನ್ನೇ ಕಡಿದು ಹಾಕಿಯಾರು. ಇಟ್ಟದ್ದನ್ನು ತಿಂದು ಜೀತಮಾಡಿದರೆ, ತಲೆತಲಾಂತರಗಳಿಂದ ತೊತ್ತುಗಳಾಗಿಯೇ ಗೇದಿರುವ ನಮಗೂ ತುಂಡು ಭೂಮಿಯನ್ನು ಕೊಟ್ಟುಬಿಡಿ ಎಂದು ಕೇಳದೇ ಹೋದರೆ ಭಾರತದಲ್ಲಿ ಹಿಂಸೆ, ದೌರ್ಜನ್ಯ ನಡೆಯುವುದೇ ಇಲ್ಲ. ಭಾಗವತರು ಸರಿಯಾಗಿಯೇರ್ ಹೇಳಿದ್ದಾರೆ" ಎಂದು ಭಾಗವತರನ್ನು ಕುಟುಕಿದ ಉಮಾಪತಿಗಳಲ್ಲಿ ಒಂದು ಪ್ರಶ್ನೆ: ಟಾಟಾ ಬಿರ್ಲಾ ಗಳಂತಹ ಮೇಧಾವಿಗಳು, ಸ್ಥಿತಿವಂತರು ಬಹುದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಿ ಮುನ್ನಡೆಸಿದ್ದಾರೆ ಸರಿಯಷ್ಟೇ? ಶತಮಾನಗಳಿಂದ ಕೆಲವು ಕುಟುಂಬಗಳವರು ಅಂಥಾ ಕಂಪನಿಗಳಿಗೆ ಚಾಕರಿ ಮಾಡಿಕೊಡುತ್ತಿದ್ದಾರಲ್ಲಾ ಅವರಲ್ಲಿ ಯಾರಾದರೂ ನಮಗೂ ಅಂತಹ ಕಂಪನಿಗಳ ಆಸ್ತಿಯನ್ನು ತುಂಡುಮಾಡಿಕೊಡಿ ಎಂದು ಕೇಳಿದರೆ ಹೇಗೆ? ಯಾಕೆಂದರೆ ಕಂಪನಿಗಳಿಗೆ ಬರುವ ಆದಾಯಕ್ಕೂ ನೌಕರರಿಗೆ ಸಿಗುವ ಸಂಬಳಕ್ಕೂ ಹೋಲಿಸಲಾರದ ಆಕಾಶ-ಪಾತಾಳಗಳ ಅಂತರವಿದೆಯಲ್ಲಾ? ಹೇಗೆ ಆಗದೇ? ಇನ್ನು ಮೈ ಒಪ್ಪಿಸಿಕೊಳ್ಳುವುದು ಬಿಡುವುದು ಹೆಣ್ಣುಮಕ್ಕಳಿಗೆ ಅವರ ಐಚ್ಛಿಕ ವಿಷಯವಾಗಿದೆ, ನಡತೆಯಲ್ಲಿ ಕಟ್ಟುನಿಟ್ಟಿನಿಂದಿರುವ ಮಹಿಳೆಯನ್ನು ತನ್ನ ತೀಟೆ ತೀರಿಸುವಂತೇ ಮಾತನಾಡಿಸಲು ಯಾವ ಪರಪುರುಷನೂ ಹಿಂಜರಿಯುತ್ತಾನೆ, ಅಂಥಾ ಸನ್ನಿವೇಶಗಳಿಗೆ ಆಸ್ಪದ ಸಿಗದಂತೇ ನಡತೆಯುಳ್ಳ ಸ್ತ್ರೀಯರು ನೋಡಿಕೊಳ್ಳುತ್ತಾರೆ, ಮೇಲಾಗಿ ಮೇಲೊಬ್ಬ ಕಾವಲುಗಾರ-ಗೊಂಬೇ ಆಡ್ಸೋನು ಕುಳಿತಿದ್ದನ್ನು ಒಪ್ಪುವ ಬಲಪಂಥೀಯರಾದವರಿಗೆ ಆ ಸಹಾಯ ಎಂದಿಗೂ ದೊರೆಯುತ್ತದೆ ಉಮಾಪತಿಗಳೇ-ಸಂದೇಹಿಸಿದವರಿಗೆ ಅದು ಅಲಭ್ಯವಾಗಿಬಿಡುತ್ತದೆ-ಅದಕ್ಕೇ ತಮ್ಮಂತಹ ಅಹಿಂದ ಮೂರ್ತಿಗಳು ಹುಟ್ಟಿಕೊಂಡುಬಿಡುತ್ತಾರೆ.

ಶಂಭೂಕನನ್ನು ಕೊಂದನೆಂದೂ ಸೀತೆಯನ್ನು ಕಾಡಿಗಟ್ಟಿದನೆಂದೂ ಶ್ರೀರಾಮನನ್ನೂ, ಒಲಿದುಬಂದ ಹೆಣ್ಣು ಶೂರ್ಪನಖಿಯನ್ನು ಒಲ್ಲೆನೆಂದು ಕಳಿಸದೇ ಕಿವಿ-ಮೂಗುಗಳನ್ನು ಕತ್ತರಿಸಿ ಸಾಂಕೇತಿಕ ಶೀಲಹರಣಮಾಡಿದಾತ ಲಕ್ಷ್ಮಣನೆಂದೂ,ಕೆಳಜಾತಿಯ ಏಕಲವ್ಯನಿಗೆ ಧನುರ್ವಿದ್ಯೆ ಹೇಳಿಕೊಡದೇ ಇದ್ದರೂ ಹೆಬ್ಬೆರಳನ್ನು ದಾನವಾಗಿ ಪಡೆದ ಕ್ರೂರಿ ದ್ರೋಣಾಚಾರ್ಯನೆಂದೂ ಸಾರಿದ ಉಮಾಪತಿಗಳು ಭಾಗವತರ ಭಾರತದ ಪರಂಪರೆಯಲ್ಲಿ ಇಂಥಾ ಮಾನವೀಯತೆಯ ಜ್ವಲಂತ ನಿದರ್ಶನಗಳು ಸಾಲುಗಟ್ಟಿ ನಿಂತಿವೆಯೆಂದೂ ಅತ್ಯಂತ ಕಳಕಳಿಯುಳ್ಳ ಅಹಿಂದ ಮೂರ್ತಿ ಸ್ಪಿನ್ನರ್ ಆಗಿ ವಿಕೆಟ್ಟುಗಳನ್ನು ಕೆಡವಲು ಪ್ರಯತ್ನಿಸಿದ್ದಾರೆ. ಪರಂಪರೆಯ ಕುರಿತಾದ ಅಸಮರ್ಪಕ ಹೊತ್ತಗೆಗಳನ್ನು ಓದಿದ ಅಲ್ಪರ ಮನಸ್ಸು, ಅರೆತುಂಬಿದ ಕೊಡದಂತೇ ತುಳುಕುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಅವರು ಹೇಳಿದ ಪ್ರತಿಯೊಂದೂ ಘಟನೆಗಳ ಹಿಂದೆ ಅದಕ್ಕೆ ಹಿನ್ನೆಲೆ ಕಾರಣಗಳು ಸಾಕಷ್ಟಿವೆ-ಮೇಲ್ನೋಟಕ್ಕೆ ಅವು ತಪ್ಪ್ರ್ಏ ಎಂದು ಭಾಸವಾದರೂ ಅವಾವುವೂ ತಪ್ಪಲ್ಲ ಎಂಬುದನ್ನು ಆಧಾರ ಸಹಿತವಾಗಿ ಸಮಯಬಂದಾಗ ನಿರೂಪಿಸಬಹುದೆಂದು ಮಾತ್ರ ಉಮಾಪತಿಗಳಿಗೆ ಹೇಳಬಯಸುತ್ತೇನೆ.

ಬ್ರಹ್ಮಚರ್ಯ ಎಂಬುದು ಕೇವಲ ಶಾರೀರಿಕ ಕ್ರಿಯೆಯಲ್ಲ. ಕಾಯಾ ವಾಚಾ ಮನಸಾ [ತ್ರಿಕರಣ ಪೂರ್ವಕ] ಮೈಥುನವನ್ನು ಬಯಸದೇ ಇರುವುದು ಬ್ರಹ್ಮಚರ್ಯವಾಗುತ್ತದೆ. ಜಮದಗ್ನಿಯ ಮಡದಿ ರೇಣುಕೆ ಕೊಳದ ನೀರನ್ನು ತರಲು ತೆರಳಿದಾಗ, ಅತ್ಯಂತ ಸ್ಫುರದ್ರೂಪಿ ಗಂಧರ್ವನೊಬ್ಬ ಅಪ್ಸರೆಯರೊಂದಿಗೆ ಜಲಕ್ರೀಡೆಯಾಡುತ್ತಿರುವ ದೃಶ್ಯಾವಳಿಯನ್ನು ಕಂಡು ಮೈಮರೆತು ತುಸುಹೊತ್ತು ಕಳೆಯುತ್ತಾ, ಆ ಗಂಧರ್ವನೊಂದಿಗೆ ಮೈಥುನದ ಸುಖವನ್ನು, ರತಿಸುಖವನ್ನು ಅನುಭವಿಸಿದರೆ ಎಂಬ ಭಾವಗಳನ್ನು ಮನಸ್ಸಿನತುಂಬ ತುಂಬಿಕೊಳ್ಳುತ್ತಾಳೆ. ಪತನಗೊಂಡ ಪಾತೀವ್ರತ್ಯದ ಪರಿಣಾಮವಾಗಿ ಆ ಕ್ಷಣಕ್ಕೆ ಮರಳಿನ ಕೊಡ ತಯಾರಿಸಲು ಸಾಧ್ಯವಾಗಲಿಲ್ಲ, ಹಾವು ಹರದಾರಿ ದೂರ ಸರಿದುಹೋದದ್ದರಿಂದ ಹೊರುವ ತೆಲೆಗೆ ಸಿಂಬಿಯಾಗಿ ಸಿಗಲಿಲ್ಲ. ಇದು ಮತ್ತದೇ ನೈತಿಕತೆಯ ಪ್ರಶ್ನೆ. ಮುನಿ ಜಮದಗ್ನಿ ತನ್ನ ನಿತ್ಯ ನೈಮಿತ್ತಿಕ ಪೂಜಾಕಾರ್ಯಗಳಿಗಾಗಿ ಮಡಿಯ ನೀರು ಸಂಗ್ರಹಿಸಿ ತರಲು ಆಜ್ಞಾಪಿಸಿದ್ದಾನೆ-ಆಕೆ ತೆರಳಿದ್ದಾಳೆ. ಹಾಗೆ ಹೋದವಳು ಪತಿಯ ವ್ರತವನ್ನು ಮರೆತು ಪರಪುರುಷನಲ್ಲಿ ಮನವನ್ನು ಚಣಕಾಲ ಇರಿಸಿದ್ದಾಳೆ-ತನ್ಮೂಲಕ ಪಾತಿವ್ರತ್ಯಕ್ಕೆ ಭಂಗಬಂದಿದೆ. ತಡವಾಗಿ ಬರಿಗೈಲಿ ಬಂದ ಮಡದಿಯ ವೃತ್ತಾಂತಗಳು ಜಮದಗ್ನಿಯ ದಿವ್ಯದೃಷ್ಟಿಗೆ ಗೋಚರವಾಗಿವೆ-ಜಮದಗ್ನಿ ಆಕೆ[ರೇಣುಕೆ]ಯ ರುಂಡವನ್ನು ಕಡಿದು ಚೆಲ್ಲುವಂತೇ ಮಕ್ಕಳನ್ನು ಕೇಳಿದ್ದಾನೆ. ನೋಡಿ, ನೈತಿಕತೆಗೆ ಅತ್ಯಂತ ಮಹತ್ವವನ್ನು ನಮ್ಮ ಪುರಾತನರು ನೀಡಿದ್ದರು. ಇವತ್ತು ನಮ್ಮನ್ನಾಳುವ ಆಳರಸರು ಶಾಸನಸಭೆಯಲ್ಲಿ ಕುಳಿತು ನೀಲಿ ಚಿತ್ರಗಳನ್ನು  ನೋಡಿ ಆನಂದಿಸುತ್ತಾರೆ; ಅನೇಕ ಯುವಕ ಯುವತಿಯರು ನೀಲಿಚಿತ್ರಗಳಿಂದ ಪ್ರೇರಿತರಾಗುತ್ತಾರೆ; ಉದ್ದೀಪಿತರಾಗುತ್ತಾರೆ. ಆದರೆ ಇವರಿಗೆಲ್ಲಾ ಯಾವುದಾದರೂ ಶಿಕ್ಷೆ ಇದೆಯೇ? ಇಲ್ಲ. ಹೊತ್ತು-ಹೆತ್ತು ಬೆಳೆಸಿದ ಅಪ್ಪ-ಅಮ್ಮನನ್ನು ಧಿಕ್ಕರಿಸಿ ಯಾವನೋ ಹುಡುಗನೊಟ್ಟಿಗೆ ಓಡಿಹೋಗುವ ಮಗಳು ಆತನ ತೀಟೆ ತೀರದ ನಂತರ ಬಸುರಿಯಾಗಿ ತವರಿಗೆ ಬರುತ್ತಾಳೆ, ಬಳಸಿ ಎಸೆದ ಬಾಡಿದ ಹೂವಿನಂತಾಗುತ್ತಾಳೆ- ಇದು ಸರಿಯೆಂದೇ ನಿಮ್ಮ ವಾದವೇ? ಹರೆಯದ ಹುಡುಗ-ಹುಡುಗಿಯರ ಪ್ರೀತಿ ಕೇವಲ ಬಾಹ್ಯಾಕರ್ಷಣೆಯದ್ದು ಎಂದರೆ ಅದು ನಿಮಗೆ ಅಸಹ್ಯವಾಗಿ ಕಾಣುತ್ತದಲ್ಲವೇ? ಒಮ್ಮೆ ಅಪ್ಪ-ಅಮ್ಮನ ಜಾಗದಲ್ಲಿ ನಿಂತು ನೋಡಿ ಉಮಾಪತಿಗಳೇ.

ಅಕಾಲದಲ್ಲಿ ಸ್ತ್ರೀಯರು ವಾಹನಗಳಲ್ಲಿ ಏಕಾಂಗಿಯಾಗಿ ಸಂಚರಿಸುವುದು ಸರಿಯಲ್ಲ, ಒಂದೊಮ್ಮೆ ಹಾಗೆ ಸಂಚರಿಸಿದರೂ ಇರುವ ಸಾಧಕ-ಬಾಧಕಗಳನ್ನು ಅರಿತೇ ಹೆಜ್ಜೆಯಿಡಬೇಕಾಗುತ್ತದೆ. ಇಂದು ದಿನಕ್ಕೊಬ್ಬ ’ಪ್ರಿಯತಮ’ರೊಟ್ಟಿಗೆ, ಸಿಕ್ಕಿದಲ್ಲಿಗೆ ತೆರಳುವ ’ಪ್ರಿಯತಮೆ’ಯರೂ ಇದ್ದಾರೆ. ಅಂಗಿಬದಲಿಸಿದ ಹಾಗೇ ನಿತ್ಯವೂ ಹೊಸಹೊಸ ಶೋಧ ಅವರ ವೈಖರಿ! ಕಂಡಲ್ಲಿ ಅಂಡಲೆಯುವುದು, ಸಿಕ್ಕಿದ್ದನ್ನು ತಿಂದು-ಕುಡಿದು ಮೈಮರೆತು ಮಜಾ ಉಡಾಯಿಸುವುದು ಅವರ ಧರ್ಮವಾಗಿದೆ! ಬಾರುಗಳಲ್ಲಿ ಸರಿರಾತ್ರಿಯವರೆಗೂ ಇರುತ್ತಾರೆ, ಅನಧಿಕೃತ ಗುಪ್ತ ಪ್ರದೇಶಗಳಲ್ಲಿ ರೇವು ಪಾರ್ಟಿಗಳಲ್ಲಿ ಮಹಿಳೆಯರು ತೊಡಗುತ್ತಾರೆ, ಯುವಕರೊಂದಿಗೆ ಕುಣಿದು ಕುಪ್ಪಳಿಸುತ್ತಾ ಕೊನೆಗೊಮ್ಮೆ ಎಲ್ಲಾ ನಡೆದುಹೋಗುತ್ತದೆ! ಹೆಣ್ಣು ಭೌತಿಕವಾಗಿ ಸ್ವೀಕರಿಸುವ ಸ್ವಭಾವದವಳು, ಗಂಡಿನದು ದುಂಬಿಯಂತೇ ಬೀರುವ ಸ್ವಭಾವ. ನೈಸರ್ಗಿಕವಾಗಿ ಹೆಣ್ಣಿಗೆ ಅದೇ ವಯಸ್ಸಿನ ಗಂಡಿಗಿಂತಾ ಬುದ್ಧಿ ಹೆಚ್ಚಿರುತ್ತದೆ; ಆದರೆ ನೆಶೆಯಲ್ಲಿ ವಿವೇಚನೆ ಕಮ್ಮಿಯಾಗುತ್ತದೆ. ಗಂಡಿನ ವೀರ್ಯಾಣುಗಳನ್ನು ತುಂಬಿಕೊಳ್ಳುವ ಅವಳಲ್ಲಿ ಗರ್ಭಾಂಕುರ ಆಗದಂತೇ ಪ್ರತಿಬಂಧಕಗಳನ್ನು ಉಪಯೋಗಿಸಿದ್ದರೂ ಭಾವನೆಗಳು ಉದ್ಭಸುತ್ತವೆ. ಭಾವನಾತ್ಮಕವಾಗಿ ಆಕೆ ಭೋಗಿಸಿದ ಪುರುಷನಲ್ಲಿ ಆಸಕ್ತಳಾಗುತ್ತಾಳೆ. ಮತ್ತು ಹಲವು ಸಂಗಾತಿಗಳನ್ನು ಕೆಲಕೆಲವು ದಿನಗಳ ಮಟ್ಟಿಗೆ ಇಟ್ಟುಕೊಂಡು ಬದಲಾಯಿಸುತ್ತಾ ನಡೆಯುವಾಗ ಮಾರಕ ರೋಗರುಜಿನಗಳು ಬರಲು ಸಂಪೂರ್ಣ ಸಾಧ್ಯತೆಗಳಿವೆ. ಹೀಗಾಗಿ "ಸ್ತ್ರೀ ಅಬಲೆ" ಎಂದೇ ಭಾರತೀಯರು ಘೋಷಿಸಿದರು, ಅವಳ ಸುರಕ್ಷತೆಗಾಗಿ ಹಲವು ಮಾರ್ಗಗಳನ್ನು ತಿಳಿಸಿದರು. ಅನೇಕ ಅಹಿಂದ ಮೂರ್ತಿಗಳು ಅದನ್ನೇ ತಪ್ಪಾಗಿ ತಿಳಿದಿದ್ದಾರೆ.   

ಇನ್ನು ರಾಮನ ವಿಷಯಕ್ಕೆ ಬರೋಣ. ’ಬುದ್ಧಿಜೀವಿಗಳು’ ಎಂದು ತಾವೇ ಪರಸ್ಪರ ಬೋರ್ಡು ಹಾಕಿಕೊಂಡ ಎಡಪಂಥೀಯರಿಗೆ ಶ್ರೀರಾಮ ಪರಮವೈರಿ. ರಾಮನ ಆದರ್ಶಗಳು ಅವರಿಗೆ ಲೆಕ್ಕಕ್ಕೇ ಇಲ್ಲ. ರಾಜಕುವರನಾಗಿ ಆತ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದು, ವನವಾಸದಲ್ಲಿ ಅನುಭವಿಸಿದ ಕಷ್ಟಗಳು, ತನ್ನದಲ್ಲದ್ದಕ್ಕೆ ಕಯ್ಯೊಡ್ಡದ ಅಥವಾ ಬಯಸದ ಆತನ ಸುಗುಣ, ಕಲ್ಲಾಗಿದ್ದ ಅಹಲ್ಯೆಗೆ ಮರುಜೀವಿತ ನೀಡಿದ ದಿವ್ಯಶಕ್ತಿ, ದುಷ್ಟಶಕ್ತಿಗಳ ದಮನಕ್ಕೆ ಆತನ ಕ್ರಮಗಳು, ಮಾನವರಲ್ಲದ ವಾನರರೊಡನೆ ಆತನ ಸಖ್ಯ ಮತ್ತು ಅವರಲ್ಲಿಯೂ ಆತ ತೋರಿದ ಸಂಯಮ ಮತ್ತು ಸಹಜ ನಿಷ್ಕಲ್ಮಷ ಪ್ರೀತಿ, ಯಕ್ಕಶ್ಚಿತವೆನಿಸುವ ಅಳಿಲಿನ ಸೇವೆಯನ್ನೂ ಗಣೆನೆಗೆ ತೆಗೆದುಕೊಂಡಿದ್ದು, ನೀತಿ ತಪ್ಪಿದ ವಾಲಿಯನ್ನು ನಿಗ್ರಹಿಸಿ-ವಧಿಸಿದ್ದು, ಶರಣ ವಿಭೀಷಣನಿಗೆ ಲಂಕೆಯನ್ನು ಕೊಟ್ಟು ಪಟ್ಟಾಭಿಷಿಕ್ತನನ್ನಾಗಿಸಿದ್ದು ಇಂತಹ ಹಲವು ಸಾವಿರ ಘಟನೆಗಳು ಅವರಿಗೆ ಕಾಣಲಾರವು. ಸೀತೆಯನ್ನು ಕಾಡಿಗೆ ಕಳಿಸಿದ ಎಂಬ ಒಂದೇ ಅಂಶವನ್ನು ಹಿಡಿದು ಜರಿಯುವುದು ಎಂಥಾ ಖೂಳ ಬುದ್ಧಿ. ಅಷ್ಟಕ್ಕೂ ರಾಮಾಯಣದ ಕರ್ತೃವಾದ ವಾಲ್ಮೀಕಿಮುನಿಯ ಆಶ್ರಮ ಹತ್ತಿರದಲ್ಲಿದ್ದು ಬಸುರಿ ಸೀತೆಯನ್ನು  ಸಲಹುವಂತಾದದ್ದು ರಾಮನ ಪರೋಕ್ಷ ಜೀವಕಾರುಣ್ಯವೇ ಸರಿ.  ಇಂತಹ ರಾಮನಿಗೆ ಆತ ಹುಟ್ಟಿದ ನಾಡಿನಲ್ಲಿ ಆತ ಜನಿಸಿದ ಅಯೋಧ್ಯೆಯಲ್ಲಿ ದೇಗುಲವಿಲ್ಲ! ತ್ರೇತಾಯುಗ ದ್ವಾಪರಯುಗಗಳು ಮುಗಿದಾನಂತರ ಬಂದ ಮ್ಲೇಚ್ಛರ ಅಹವಾಲಿಗೆ ಮನಗೊಟ್ಟು, ಇಂದು ದೇಶವಾಸಿ ೭೫% ಇರುವ ಹಿಂದೂಗಳ ಆಶಯಗಳನ್ನು ಬಲಿಹಾಕಿದ್ದಾರೆ. ಸನಾತನಿಗಳ ಆರಾಧ್ಯದೈವವಾದ ರಾಮನಿಗೆ ಆತ ನಡೆದಾಡಿದ, ರಾಜ್ಯಭಾರ ನಡೆಸಿದ ದೇಶದಲ್ಲೇ, ಅದೂ ಆತನದ್ದೇ ಆದ ಅಯೋಧ್ಯೆಯಲ್ಲೇ ಇದ್ದ ದೇಗುಲವನ್ನು ಒಬ್ಬ ಬಾಬರಿ ಅಂದು ಕೆಡವಿದ. ಇಂದು ದೇಶವ್ಯಾಪಿ ೨೫% ರಷ್ಟು ಬಾಬರಿಗಳೇ ತುಂಬಿದ್ದಾರೆ. ತುಂಬಿರುವ ೨೫% ಬಾಬರಿಗಳಿಗೆ ಹೊಲಸು ತಿನ್ನುವ ಬ್ರಷ್ಟ ರಾಜಕಾರಣಿಗಳು ವೋಟಿಗಾಗಿ ಹಪಹಪಿಸುತ್ತ,  ಸಹಾಯ ನೀಡುವ ನೆಪದಲ್ಲಿ ನರಸತ್ತವರಾಗಿದ್ದಾರೆ, ಹೀಗಾಗಿ ಹಿಂದೂಗಳ ಶತಶತಮಾನಗಳ ಕೂಗಿಗೆ ಬೆಲೆಯೇ ಇಲ್ಲ. ಇದೇ ಆಟವನ್ನು ಹಿಂದೂ ಸನಾತನಿಗಳು ಪಾಕಿಸ್ತಾನದಲ್ಲಿ ನಡೆಸಲು ಸಾಧ್ಯವೇ? ಅಲ್ಲಿನ ಮಸೀದಿಯನ್ನು ಕೆಡವಿ ಶತಮಾನಗಳ ವರೆಗೆ ಬೀಗ ಜಡಿದು ತಮ್ಮ ಜಾಗ ಎನ್ನಲು ಅಲ್ಲಿನ ಪಾತಕಿಗಳು ಅವಕಾಶ ನೀಡುವರೇ? ನಾನು ಹೇಳುತ್ತಿದ್ದೇನೆ ನನ್ನ ದೇಶದ ಮೂಲನಿವಾಸಿಗಳಿಗೆ ದಮ್ಮಿಲ್ಲ. ದಮ್ಮಿದ್ದರೆ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣವಾಗಲಿ, ನಿಮ್ಮತನವನ್ನು ಉಳಿಸಿಕೊಳ್ಳಲೂ ಗೊತ್ತಾಗದ ನಿಮ್ಮಿಂದ ದೇಶದಲ್ಲಿ ಸನಾತನಿಗಳ ರಕ್ಷಣೆ ಸಾಧ್ಯವೇ? ಬನ್ನಿ ಇನ್ನಾದರೂ, ಈಗಲಾದರೂ ನಮ್ಮತನದ ಉಳಿವಿಗೆ ಹೋರಾಡೋಣ, ಇದು ಸ್ವಾರ್ಥಿಗಳಾದ ಆಳರಸರಿಂದ ಆಗುವ ಕೆಲಸವಲ್ಲ, ಅಹಿಂದ ಮೂರ್ತಿಗಳು ಇದನ್ನು ವಿರೋಧಿಸುತ್ತವೆ! ಆದರೆ ಎಂಥಾ ಪ್ರಬಲ ವಿರೋಧವಿದ್ದರೂ ಈ ದೇಶಕ್ಕೆ ಅದರದ್ದೇ ಆದ ಮೂಲ ನೆಲೆಯೊಂದಿದೆ-ಅದು ಸನಾತನತೆ, ಅದು ಎರವಲು ಪಡೆದ ಬುತ್ತಿಯಲ್ಲ, ಯುಗಯುಗಗಳಿಂದಲೂ ಭಾರತವ್ಯಾಪಿ ಇರುವ ಜಗತ್ತಿನಲ್ಲೇ ಅತ್ಯುತ್ಕೃಷ್ಟವಾದ ಜೀವನಧರ್ಮ ಸನಾತನ ಧರ್ಮ. ದುಷ್ಟ ರಾಜಕಾರಣಿಗಳೇ, ನಾವು ಯಾರದೋ ನೆಲವನ್ನು ನಿಮ್ಮಲ್ಲಿ ಕೇಳುತ್ತಿಲ್ಲ, ರಾಮನಿಗಾಗಿ ನೀವು ಇನ್ನಾವುದೋ ಜಾಗದ ಭಿಕ್ಷೆಹಾಕಬೇಕಿಲ್ಲ-ನಮಗೆ ಬೇಕಿರುವುದು ನಮ್ಮ ಮನೋಭೂಮಿಕೆಯಲ್ಲಿ ರಾಮ ಹುಟ್ಟಿದ ಸ್ಥಳವೆಂದು ಪರಿಗಣಿತವಾದ, ಉತ್ಖನನ ಸಮಯದಲ್ಲಿಯೂ ಹಲವಾರು ದಾಖಲೆಗಳು, ವಿಗ್ರಹಗಳು ಸಿಕ್ಕು ಸಾಬೀತಾದ ರಾಮಜನ್ಮಭೂಮಿ, ಅದನ್ನು ಸನಾತನಿಗಳಿಗೆ ಬಿಟ್ಟುಕೊಡಿ, ಅದಕ್ಕಾಗಿ ಕೋರ್ಟು-ಪಂಚಾಯತಿ ಬೇಕಾಗಿಲ್ಲ, ಯಾಕೆಂದರೆ ಅದು ಸನಾತನಿಗಳ ಜನ್ಮಸಿದ್ಧ ಹಕ್ಕು, ಅದು ಈ ದೇಶದ ಮೂಲನಿವಾಸಿಗಳ ಆಸ್ತಿ. ಯಾವ ವಲಸಿಗರು ಈ ನೆಲದ ಮೂಲನಿವಾಸಿಗಳ ಜೀವನಸೂತ್ರಗಳನ್ನೂ ನೀತಿಯನ್ನೂ ವಿರೋಧಿಸುತ್ತಾರೋ ಯಾವ ವಲಸಿಗರು, ಪರಿವರ್ತಿತರು ಸನಾತನಿಗಳನ್ನು ಹಿಂಸಿಸುತ್ತಾರೋ ಅಂಥಾ ವಲಸಿಗರನ್ನೂ ಪರಿವರ್ತಿತರನ್ನೂ ದೇಶಬ್ರಷ್ಟರನ್ನಾಗಿಸುವವರೆಗೆ ನೆಮ್ಮದಿಯಿಲ್ಲ, ಸುಖವಿಲ್ಲ. ಒಂದೇ ಅವರ ಬೆಳೆಯುತ್ತಿರುವ ಬಾಲ ಕತ್ತರಿಸಿ ಬಾಯಿಗೆ ಬೀಗ ಜಡಿದು ಬದುಕುವಂತೇ ಮಾಡಬೇಕು ಇಲ್ಲಾ ಅವರು ದೇಶವನ್ನೇ ತೊರೆಯುವಂತೇ ಮಾಡಬೇಕು. ಯಾವ ಮನುಷ್ಯ ಇಲ್ಲಿನ ಮೂಲ ಜೀವನಧರ್ಮದ ವಿರೋಧಿಯೋ ಆತ ದೇಶವಿರೋಧಿಯೂ ಹೌದು; ಆತ ಬೇಹುಗಾರನೂ ಹೌದು, ಆತ ಪರಮನೀಚನೋ ಹೌದು; ಮಿತ್ರರೇ, ಕರೆಕೊಡುತ್ತಿದ್ದೇನೆ: ದಮ್ಮಿದ್ದರೆ ಬನ್ನಿ, ದೇವಸ್ಥಾನ ಕಟ್ಟಿ-ನಿಮ್ಮತನ ನಿಮ್ಮದಾಗಿರಲಿ, ನಮಸ್ಕಾರ.