ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, October 31, 2012

ಪದ್ಯ ರಾಜ್ಯೋತ್ಸವ !


ಪದ್ಯ ರಾಜ್ಯೋತ್ಸವ !

ಕನ್ನಡದಲ್ಲಿ ಅನೇಕ ಬರಹಗಾರರು ಆಗಿಹೋಗಿದ್ದಾರೆ. ಒಬ್ಬೊಬ್ಬರ ಬರಹಗಳೂ ರೋಚಕ, ವಿಶಿಷ್ಟ. ಯಾವುದೋ ಹೊಸತನ ಅಲ್ಲಿ ಕಾಣುತ್ತದೆ. ಕನ್ನಡದ ಸೊಬಗನ್ನು ಹೆಚ್ಚಿಸಲು ಶ್ರಮಿಸಿದ ಅಂತಹ ಕವಿ-ಸಾಹಿತಿಗಳಿಗೆ ರಾಜ್ಯೋತ್ಸವದ ಸಮಯದ ವಂದನೆಗಳು. ಈ ಸಲ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಬಾರದೇಕೆ ಎಂಬ ಅನಿಸಿಕೆ ನನ್ನದಾಗಿತ್ತು. ದಾನ ಎಂಬುದನ್ನು ಯಾರಿಗೂ ಎಲ್ಲೂ ಹೇಳದೇ ಮಾಡಬೇಕಂತೆ. ರಾಜಕಾರಣಿಗಳ ಹಾಗೇ ಹತ್ತು ರೂಪಾಯಿ ಕೊಟ್ಟಿದ್ದಕ್ಕೇ ಹತ್ತತ್ತು ಸರ್ತಿ ಟಿವಿ ಜಾಹೀರಾತು ಬಿತ್ತರಿಸಿಕೊಳ್ಳುವ ಬದಲು ದಾನ ಪ್ರಚಾರವಿಲ್ಲದೇ ನಡೆಯಬೇಕಾದಂತಹ ಕೆಲಸವಂತೆ. ಹಾಗಾದರೆ ರಾಜ್ಯೋತ್ಸವದ ಆಚರಣೆಯಲ್ಲಿ ದಾನವಿದ್ದರೆ ಅದನ್ನು ಹೇಳಬಾರದು ಎಂದಾಯ್ತು! ಹೀಗಾಗಿ ಹಾಗೆ ಮಾಡುವ ಬದಲು ಜೀವದಾನ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡರೆ ಕೆಲವರಲ್ಲಿ ಅದನ್ನು ಕೇಳಬಹುದು ಎನ್ನಿಸಿತು. ಅದೇ ವಿಷಯವನ್ನಿಟ್ಟುಕೊಂಡು ಬರೆಯಲು ಹೊರಟೆ. ಹಾಗೆ ಹೊರಟಾಗ ದಾಸರು ಎದುರಾದರು. ಅವರ ಗಿಳಿಯ ಮರಿಯನು....ಎಂಬ ಹಾಡು ನೆನಪಿಗೆ ಬಂತು.

ಕುರಿಯಮರಿಗಳ ತಂದು ಮನೆಗಳ
ಹೊರಗೆ ಕಟ್ಟುತ ಸೊಪ್ಪು ಸದೆಗಳ
ಹೊರೆಯ ಚೆಲ್ಲಿಸಿ ಕೊಯ್ವ ಪರಿಯನು ತೋರಬೇಡೆನಗೆ |
ಹಿರಿದು ಕತ್ತಿಯ ದನದ ಕುತ್ತಿಗೆ
ಹರಿವ ಮಂದಿಯು ಹಂದಿ ಜೀವನ
ತೊರೆದು ಮಾನವರಾಗುವಂತೆಯೆ ಮತಿಯ ನೀಡುವುದು || 

ಭಾರತೀಯರಲ್ಲಿ ಎಲ್ಲರೂ ಶಾಕಾಹಾರಿಗಳಲ್ಲ ಎಂಬುದನ್ನು ಒಪ್ಪುತ್ತೇನೆ. ಆದರೆ ತನ್ನ ಬದುಕಿಗಾಗಿ ಇನ್ನೊಂದು ಜೀವಿಯ ಬದುಕನ್ನು ಕಸಿದುಕೊಳ್ಳುವುದು, ನಾಶಪಡಿಸುವುದು  ಆಗಬಾರದ ಕೆಲಸ. ಕೇಳಿದರೆ ’ಬುದ್ಧಿಜೀವಿಗಳು’ ವೈಜ್ಞಾನಿಕ ಕಾರಣ ಕೊಡುತ್ತಾರೆ: ಆಹಾರ ಸರಪಳಿ ಮೊದಲಾದ ವಾದವನ್ನು ಮಂಡಿಸುತ್ತಾರೆ. ಸನಾತನ ಧರ್ಮದ ಮೂಲ ಆದರ್ಶವೇ ಅಹಿಂಸೆ. ನಮಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳು ಆಗಾಗ ವರದಿಯಾಗುತ್ತಿರುತ್ತವೆ; ಅವುಗಳನ್ನು ನೋಡಿಯಾದರೂ ತಿಳಿದುಕೊಳ್ಳಬೇಕು ಮಾನವೀಯತೆ ಎಂದರೇನು ಎಂಬುದನ್ನು. ಕೋಲಂಬಿಯಾದಲ್ಲಿ ಜನಿಸಿದ ಒಂದು ಮಗುವಿನ ಕುರಿತು ದಿನಪತ್ರಿಕೆಯಲ್ಲಿ ಓದಿದೆ. ಒಂದು ತಿಂಗಳ ಗಂಡು ಮಗು ತನ್ನನ್ನು ಹಾಸಿಗೆ, ಸೂಟ್ ಕೇಸ್, ಫ್ರಿಜ್ ಮೊದಲಾದ ಜಾಗಗಳಲ್ಲಿ ಬಚ್ಚಿಟ್ಟುಕೊಳ್ಳುವುದಂತೆ. ಕಣ್ಣುಬಿಟ್ಟರೆ ಕೆಂಡದುಂಡೆಯ ರೀತಿಯಂತೆ, ಉಸಿರಿನಲ್ಲಿ ಬೆಂಕಿಯಂತೆ! ಬಟ್ಟೆ-ಸೋಫಾ ಎಲ್ಲಾ ಸುಟ್ಟ ಕಲೆಗಳಿವೆಯಂತೆ. ಯಾರೋ ಭಸ್ಮಾಸುರನೇ ಇರಬೇಕು!!  ಹಿಂಸ್ರಪ್ರಾಣಿಗಳಿಗೂ ಪಕ್ಷಿಗಳಿಗೂ ಬುದ್ಧಿ ಮಾನವ ಮಟ್ಟದಲ್ಲಿಲ್ಲ. ಅವು ಹೊಟ್ಟೆಗಾಗಿಯೇ ಹುಟ್ಟಿವೆ. ಅದಕ್ಕಾಗೇ ಬದುಕುತ್ತವೆ. ಆದರೆ ಮಾನವ ಹಾಗಲ್ಲವಲ್ಲ?

ಯಾವುದೇ ಜನ್ಮವಿದ್ದರೂ ಕುರಿ, ಕೋಳಿ, ದನ, ಮೊಲ, ಎಮು, ಒಂಟೆ, ಊರ ಹಂದಿ ಈ ರೀತಿಯಾದ ಜನ್ಮಗಳನ್ನು ಮಾತ್ರ ನೀಡಬೇಡವೆಂದು ಭಗವಂತನಲ್ಲಿ ನನ್ನ ಪ್ರಾರ್ಥನೆ. ಅವುಗಳನ್ನು ಎಳೆಯುವುದು, ಕಾಲು ಮುರಿಯುವುದು, ಸಾಗಿಸುವುದು, ಕತ್ತರಿಸುವುದು,  ಸಾಯುವ ಮುನ್ನ ಕೊಡುವ ಚಿತ್ರಹಿಂಸೆಗಳು ಅಯ್ಯೋ ಶಿವನೇ .....

ಭರದೆ ಎಳೆಯುತ ಗಾಡಿಗೇರಿಸಿ
ಗರಗರನೆ ತಿರುಗಿಸುತ ಕೋಳಿಯ
ಜರಿದು ಜಾಗವೆ ಇರದ ಪಂಜರದೊಳಗೆ ತೂರಿಸುತ |  
ಸರಿಸಿ ತೆರೆಯುತ ಕದವನಾಪರಿ
ಬಿರುಸಿನಿಂದಾಚೆಯಲಿ ಕತ್ತನು
ತಿರುಚಿ ಎಸೆಯುತ ಸುಡಿಸಿಕೊಳ್ಳುವ ಜನ್ಮಬೇಡೆನಗೆ || 

’ಕೊಂದು ಪಾಪ ತಿಂದು ಪರಿಹಾರ’ ಎಂಬುದರ ಅರ್ಥವ್ಯಾಪ್ತಿ ಬೇರೇನೇ ಇದೆ. ಆದರೆ ಅನುಕೂಲಕ್ಕಾಗಿ ನಮ್ಮ ಜನ ಮಾಡಿಕೊಂಡ ರೀತಿ ಏನೆಂದರೆ ಜೀವಿಗಳನ್ನು ಕೊಂದರೆ ತಮಗೆ ಪಾಪವಿಲ್ಲ, ಅವು ನಮ್ಮ ಆಹಾರವಾದ್ದರಿಂದ ಆ ಪಾಪದಿಂದ ನಾವು  ವಿಮುಕ್ತಿ ಪಡೆಯುತ್ತೇವೆ -ಎಂದು. ಇದು ಅಕ್ಷರಶಃ ಅಸತ್ಯ! ಸಾಯುವಾಗ ಪ್ರಾಣಿಯೋ ಪಕ್ಷಿಯೋ ತನ್ನನ್ನು ಸಾಯಿಸಿದವರನ್ನು, ವ್ಯವಹಾರಿಕ ಲಾಭಕ್ಕಾಗಿ ತನ್ನ ಸಾವಿಗೆ ಕಾರಣರಾದವರನ್ನೂ, ಸಾಯಿಸಿದ ನಂತರ ತಿಂದು ಪರೋಕ್ಷ ಸಾವಿಗೆ ಕಾರಣರಾದವರನ್ನೂ ಶಪಿಸುತ್ತದಂತೆ. ಕೋಳಿಯೊಂದು ಸಾಯುವಾಗ ಹಾಗೆ ಶಪಿಸಿದರೆ ಅದಿಷ್ಟೂ ಜನ ಕೋಳಿಗಳಾಗಿ ಜನಿಸಬೇಕಾಗುತ್ತದೆ..ಅದೇ ರೀತಿ, ವಧೆಗೊಳಗಾಗುವ ಯಾವುದೇ ಜೀವಿ ಇರಲಿ ತನ್ನ ಜನ್ಮವೇ ಬರಲಿ ಎಂದು ಅವರಿಗೆ ಶಪಿಸುವುದಂತೆ. ಕೊಂದು ಪಾಪ ಪರಿಹಾರ ಆಗುವುದು ಆ ಪಾಪದಿಂದ ಎದುರಾಗಬಹುದಾದ ಸಮಸ್ಯೆಗಳನ್ನೂ ದುಃಖವನ್ನೂ ಜನ್ಮಾಂತರಗಳವರೆಗೂ ಉಂಡು ಎಂದುದೇ ಆ ಗಾದೆಯ ಅರ್ಥವಾಗಿದೆ.  ಆಹಾರ ವಿಷಯಕವಾಗಿ ’ಹಿಂದೂ ಜೀವನಧರ್ಮ’ದಲ್ಲಿ ಮುಂದೆ ಪ್ರತ್ಯೇಕ ಅಧ್ಯಾಯ ಬರುತ್ತದೆ, ಅಲ್ಲಿ ಬಹಳ ವಿಸ್ತೃತ ಮಾಹಿತಿ ಕೊಡಲು ಉದ್ಯುಕ್ತನಾಗುತ್ತೇನೆ.   

ಕರೆದು ಊಡಿಸಿ ಮುದ್ದುಗರೆವರೆ
ತೊರೆದು ಕರುಣಾಭಾವವೆಲ್ಲವ
ನೆರೆದು ಸುತ್ತಲು ಎತ್ತಿ ಕತ್ತರಿಸುವರು ಮೊಲಗಳನು |
ಹರಣವಪ್ಪುವ ಜೀವಿಗಳನೇ 
ಕರಿದು ತಿಂದರೆ ಪಾಪ ಪೋಪುದು
ಅರರೆ ನಿಮಗೇನಷ್ಟು ಸಂಕಟವೆಂಬ ಧೋರಣೆಯು ||   

ನಿತ್ಯ ಬೆಳಿಗ್ಗೆ ಎದ್ದರೆ ಅಮ್ಮನ ಹಾಲಿಲ್ಲದಿದ್ದರೂ ಪರವಾಗಿಲ್ಲ ಗೋವಿನ ಹಾಲು ಬೇಕೇಬೇಕು. ಅದನ್ನು ಯಾಂತ್ರಿಕವಾಗಿ ತಯಾರಿಸಲು ಸಾಧ್ಯವೇ ಇಲ್ಲ! ಸಿಗುವ ಹಾಲಿನ ಪುಡಿಗಳೆಲ್ಲಾ ಹಾಲನ್ನು ಆವಿಯಾಗಿಸಿ ಘನೀಕೃತರೂಪಕ್ಕೆ ತಂದವುಗಳೇ. ಎಂದಮೇಲೆ ಹಾಲು ಕೊಟ್ಟು ನಮ್ಮ ಬದುಕನ್ನು ಹಸನುಮಾಡುವ ಜೀವಿಯನ್ನು ಕೊಂದು ತಿನ್ನುವುದು ಎಂಥಾ ದುಷ್ಟತನ ಅಲ್ಲವೇ? ಮೊನ್ನೆ ಯಾರದೋ ಚಿತ್ರವನ್ನು ನೋಡಿದೆ: ಮನೆಯಂಗಳದಲ್ಲಿ ದಪ್ಪನೆಯ ಕುರಿ ಕಟ್ಟಿಹಾಕಿದ್ದರು. ಮಗುವಿನೊಡನೆ ಅಜ್ಜ ಕುರಿಯ ಪಕ್ಕ ನಿಂತಿದ್ದಾರೆ. ಮಗು ಕುರಿಯನ್ನು ನೋಡಿ ಆಡುತ್ತಿದೆ. ತಿಂಗಳುಗಳ ಕಾಲ ಸಾಕಿದ ಒಡೆಯನೇ ತನನ್ನು ಕತ್ತರಿಸುವಾಗ ಕುರಿಗೋ ಮೊಲಕ್ಕೋ ಆಗಬಹುದಾದ ಮಾನಸಿಕ ಯಾತನೆ ಎಷ್ಟಿರಬಹುದು ? ಮುದ್ದಾದ ಮೊಲ ಕಾಡಲ್ಲಿ ಆಡಿಕೊಂಡಿತ್ತು, ಅದನ್ನೂ ನಾಡಿಗೆ ತಂದು ಬೆಳೆಸುವ ಪರಿ ಬೆಳೆಯಿತು. ಮೊಲಗಳ ವಂಶಾಭಿವೃದ್ಧಿಯನ್ನು ಕೃತಕವಾಗಿಯಾದರೂ ಮಾಡಿಸುವ ಮಂದಿ ಕಚಕ್ಕನೆ ಅವುಗಳನ್ನು ಕತ್ತರಿಸುವಾಗ ಯಾವ ಕರುಣಾಭಾವವೂ ಬಾರದಲ್ಲಾ ಶಿವನೇ...

ದಾಸರಿಗೆ ಕೈಮುಗಿದು ಬೀಳ್ಕೊಟ್ಟು ಸ್ವಲ್ಪ ಮುಂದೆ ಸಾಗುತ್ತಿದ್ದಾಗ ಸರ್ವಜ್ಞ ಎದುರಾದ.

ಖಂಡಿಸದೆ ಕರಣವನು ದಂಡಿಸದೆ ದೇಹವನು
ಉಂಡುಂಡು ಸ್ವರ್ಗವನು ಬಯಸಿದೊಡೆ ಅದನೇನು
ರಂಡೆಯಾಳುವಳೇ -ಸರ್ವಜ್ಞ

ಎಂದಿದ್ದ ಸರ್ವಜ್ಞನ ದರುಶನ ಸಿಗುತ್ತಿದ್ದಂತೆಯೇ ಅನ್ನಿಸಿದ್ದು ಹೀಗೆ :

ಗಂಡುಬೀರಿಗಳೊಡನೆ ಗುಂಡನ್ನೂ ತುಂಡನ್ನೂ
ಉಂಡುಂಡು ಅಡ್ಡಡ್ಡ ಉದ್ದುದ್ದ ಮಲಗುವುದೇ
ಭಂಡ ಕಲಿಗಾಲ-ಗರ್ಮಜ್ಞ

ಸರ್ವಜ್ಞ ನನ್ನ ಒಂದೇ ಹಾಡಿಗೆ ಸುಸ್ತಾದ ಹಾಗೇ ಕಂಡಿತು! ಯಾಕೆಂದರೆ ಅವರೆಲ್ಲಾ ಬಾಳಿದ್ದು ರೀತಿನೀತಿಯಲ್ಲಿ. ಈಗ ಅದನ್ನೆಲ್ಲಾ ಅಕ್ಷರಗಳಲ್ಲಿ ಮುದ್ರಿಸಿ ಕಟ್ಟುಹಾಕಿಸಿ ಗೋಡೆಗಳ ಮೇಲೋ ಅವುಗಳ ಛಾಯಾಮುದ್ರಣವನ್ನು ಫೇಸ್ ಬುಕ್ಕಿನಲ್ಲೋ ಹಾಕಿ ದೊಡ್ಡತನ ತೋರಿಸಿಕೊಳ್ಳುವ ಕಾಲ. ಸರ್ವಜ್ಞರನ್ನು ಅಷ್ಟಕ್ಕೇ ಬೀಳ್ಕೊಟ್ಟೆ.

ಉದಯವಾಗಲಿ ನಮ್ಮ ಚಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು...... ಹಾಡು ದೂರದಿಂದ ಕೇಳಿಬಂತು. ದೂರದಲ್ಲಿ ಕೂತ ಹುಯಿಲಗೋಳ ನಾರಾಯಣರಾಯರು ಹಾಡುತ್ತಿದ್ದರು ಎಂದರು ಬೇರೇ ಹೇಳಬೇಕೇ?

ಡೀನೋಟಿಫೈ ಮಾಳ್ಪ ಯಡ್ಡಿಗಳು ಇಹ ನಾಡು
ಡಾನುಗಳು ಧನಮದದಿ ಆಳುತಿಹ ಬೀಡು
ಢಾಳಾಗಿ ಕಾಣುತಿಹ ಹಾಳು ಹಂಪೆಯ ಗೂಡು
ಡಾಮಿನನ್ಸ್ ಗಣಿಧಣಿಗಳುಂಡುಳಿದ ಬಾಡು !

ನಾನು ಪ್ರಯತ್ನಿಸುತ್ತಿರುವಾಗಲೇ ನಾರಾಯಣರಾಯರಿಗೆ ಏನನ್ನಿಸಿತೋ.. ಆಯ್ಯಯ್ಯೋ ತಾನು ಕಂಡ ಸುಂದರ ಕನ್ನಡ ನಾಡು ಈ ರೀತಿ ಆಧ್ವಾನಕ್ಕೆ ಒಳಗಾಗಿದೆಯೇ ಅನ್ನಿಸಿರಬೇಕು. ಹಾಡುವುದನ್ನೇ ನಿಲ್ಲಿಸಿಬಿಟ್ಟರು.

ಪಂಪ, ರಾಘವಾಂಕ, ಕುಮಾರವ್ಯಾಸ, ರನ್ನ, ಜನ್ನ, ಪೊನ್ನ- ಕನ್ನಡದ ಇಂತಿಂಥಾ ಕವಿಗಳು ಬರುತ್ತಾರೇನೋ ಎಂದು ದಾರಿ ಕಾದೆ. ಹೊಸಗನ್ನಡದ ಅದರಲ್ಲೂ ನವ್ಯೋತ್ತರ ಕಾವ್ಯಗಳ ಭರಾಟೆಯಲ್ಲಿ ಮೂಲ ಕನ್ನಡದ ಸೊಬಗು, ಛಂದಸ್ಸು, ವ್ಯಾಕರಣಾದಿ ಅಂಗಸೌಷ್ಠವ ಕಳೆದು ಹೋಗಿದ್ದುದರಿಂದ ಬಹಳ ಖೇದ ವ್ಯಕ್ತಪಡಿಸಿದರು. ಆ ನಡುವೆ ಅಲ್ಲೆಲ್ಲೋ ಆದಿಶಂಕರರು ಹಾದುಹೋದಹಾಗೇ ಭಾವಸಾಯ್ತು, ಅವ ಬಹುದೊಡ್ಡ ಆಶುಕವಿಯೇ ತಾನೇ? ಅವರ ಕ್ಷಮೆಕೋರಿ ಹೀಗೊಂದು ಕವನದ ಪಾದ ಮೂಡಿಬಿಟ್ಟಿತು: [ಜಯ ಜಯಹೇ ಮಹಿಷಾಸುರ ಮರ್ದಿನಿ ಎಂಬ ಮಹಿಷಾಸುರ ಮರ್ದಿನೀಸ್ತೋತ್ರದ ಛಾಪಿನಲ್ಲೇ ಬಂದುಬಿಡಬೇಕೆ? ನವರಾತ್ರಿ ಮೊನ್ನೆಯಷ್ಟೇ ಮುಗಿಯಿತಲ್ಲವೇ ಅದಕ್ಕೇ ಇರಬಹುದು!]

ಭಲೆಭಲೆಯಕ್ರಮಸಕ್ರಮಸಕ್ರಮ ಅಕ್ರಮಸಕ್ರಮನಡೆದಿಪುದೈ
ಅಲೆಯಲೆಯೇಳುತ ಗಣಿಧಣಿಗಳ ಹಲ ಹಾಲಾಹಲವನು ನುಂಗಿಪುದೈ
ಕಲುಷಿತಗೊಂಡವು ನದಿಗಳು ವಾಯುವು ನಗರೀಕರಣದ ಆರ್ಭಟದಿ
ಮಲಿನವದೆಲ್ಲವು ನಲಿವದೆ ಇಲ್ಲವು ಜಯಕರ್ನಾಟಕದೀ ನೆಲದಿ

ಕಲರವವಿಲ್ಲದ ಹಕ್ಕಿಗಳಿಂಚರ ಹೊಟ್ಟೆಯಪಾಡಿಗೆ ನಡೆದಿಹುದು !
ಗುಲಗುಂಜಿಯ ಆಕಾರದ ಹಾರವು ಆನೆಯ ಹೊಟ್ಟೆಗೆ ಲಭಿಸುವುದು !
ಗೆಲುವಿನ ನಗೆಯೊಳು ಆಳ್ವರು ಮೆರೆದಿರೆ ಪ್ರಜೆಗಳು ಕಾಲ್ಕಸವಾಗಿಹರು
ಕಲಿತ ಭುಶುಂಡಿಗಳೆಲ್ಲರು ಸಂದರು ಝಣಝಣವೆಣಿಸುತಲೀನೆಲದಿ !!

ಶಂಕರಾಚಾರ್ಯರ ಆಕೃತಿಗೆ ನಾನೇ ಸಾಷ್ಟಾಂಗ ನಮಸ್ಕಾರ ಹಾಕಿಬಿಟ್ಟೆ ಬಿಡಿ, ಯಾಕೆಂದರೆ ಅವರ ಸ್ತೋತ್ರದ ರಾಗ ಬಳಸಿಕೊಂಡಿರುವೆನಲ್ಲಾ-ಅದಕ್ಕೇ.

ಮೆಚ್ಚಿನ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಮನೆ ಹಾದಿಯಲ್ಲೇ ಇತ್ತು.

ದೂರದೊಂದು ತೀರದಿಂದ 
ತೇಲಿ ಪಾರಿಜಾತ ಗಂಧ
ದಾಟಿಬಂತು ಬೇಲಿಸಾಲ 
ಮೀಟಿ ಹಳೆಯ ಮಧುರ ನೋವ ........

ಇದು ಯಡ್ಯೂರಣ್ಣೋರಿಗೆ ಹಾಡಿದ್ದೇ ಅಂತ ಅನಿಸಿಬಿಟ್ಟಿತು. ಅವರಿಗೆ ಪಾರಿಜಾತದ ಗಂಧ ಬೇಲಿದಾಟಿ ಬರುತ್ತದೆ ಎಂದು ಹೇಳ್ತಾರಲ್ಲಾ........! ಹಳೆಯ ಕುರ್ಚಿಯ ಹೊಸ ಮಧುರನೋವುಗಳನ್ನು ಸದಾ ಅನುಭವಿಸುತ್ತಿರುವ ಅವರ ಸಲುವಾಗೇ ಭಟ್ಟರು ಬರೆದಿರಬಹುದೇ?? ಕೇಳೋಣ ಎಂದುಕೊಳ್ಳುತ್ತಿರುವಾಗಲೇ ಯಾರೋ ಹೇಳಿದರು "ಭಟ್ಟರು ಮನೇಲಿಲ್ಲಾ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿದ್ದಾರೆ" ಎಂದು, ಅನಿವಾರ್ಯ ನಮ್ಮ ಗಾಡಿ ಮತ್ತೆ ಚಾಲೂ ಆಯ್ತು. ಭಟ್ಟರ ಮನೆಯಿಂದ ಕಿಲೋಮೀಟರು ಹೋಗಿತ್ತೋ ಇಲ್ವೋ ಬಿ.ಆರ್.ಎಲ್ಲು ಬಂದುಬಿಡಬೇಕೆ? "...ಮಿತ್ರ ಎಚ್ಚೆಸ್ವಿಯವರನ್ನು ಕಾಣಲು ಬಂದಿದ್ದೆ" ಎಂದು ಕನ್ನಡಕ ಹಿಂದಕ್ಕೆ ಜಾರಿಸಿ ಕೂರಿಸಿದರು. ಕೆಲವು ದಿನಗಳ ಹಿಂದೆ ’ಮಯೂರ’ಕ್ಕೆ ಡುಂಡಿರಾಜರ ಬಗ್ಗೆ ಬುಕೊಟ್ಟ ಲೇಖನದ ಗುಂಗಿನಲ್ಲೇ ಇನ್ನೂ ಇದ್ದರೋ ಎನ್ನಿಸಿತು. ಆಗಾಗ ನಡೆಸುವ ಸಂಜೆಯ ’ಸಾಂಸ್ಕೃತಿಕ’ ಕಾರ್ಯಕ್ರಮಕ್ಕೆ ಡುಂಡಿ ಬರುತ್ತಿಲ್ಲ ಎಂಬ ಬೇಸರದಲ್ಲೇ ದನಿ ಎತ್ತಿದ ಹಾಗಿತ್ತು. " ಏನ್ ಸ್ವಾಮೀ ನೀವು ಜಾಲಿ ಬಾರಿನಲ್ಲಿ .......ಹಾಡುಬರೆದಿದ್ದು ಯಾವಾಗ?" ಎಂದೆ. ಅದನ್ನು ನೆನಪಿಸಿಕೊಂಡು ಹೇಳುತ್ತೇನೆ ಎನ್ನುವಾಗ ಕೆಮ್ಮುತ್ತಲ್ಲೇ ಇದ್ದರು. ಬೆಂಗಳೂರಿನ ಹವಾಮಾನ ಸರಿಯಿಲ್ಲ..ಇನೂ ಎರಡುಮೂರು ದಿನ ಜಿನುಗು ಮಳೆ ಸೈಕ್ಲೋನು ಆಮೇಲೆ ಒಂದಿನ ಸಿಗೋಣ ಹೇಳ್ತೇನೆ ಎಂದ್ರು. ಸರಿ ಎಂದು ಧನ್ಯವಾದ ಅರ್ಪಿಸಿದೆ. ಎಂದಿನಂತೇ ಅದೇ ದೇಶಾವರಿ ನಗೆ ಕಂಡಾಗ

ಬಾರೇ ರಾಜಕುಮಾರಿ ....ಹೋಗೋಣ ನಾವ್ ಜಂಬೂ ಸವಾರಿ ಎಂದು ಹಿನ್ನೆಲೆಯಲ್ಲಿ ಯಾರೋ ಹಾಡಿದ ಹಾಗಿತ್ತು!

ಎಚ್ಚೆಸ್ವಿ ಮನೆಗೆ ಹೋಗಿದ್ದೆ ಎಂದ ಬಿ.ಆರ್.ಎಲ್ಲು ಎಚ್ಚೆಸ್ವಿ ಹಾಡಿನ ನೆನಪಿಗೆ ಕಾರಣರಾಗಿಬಿಟ್ಟಿದ್ದರು.

ಲೋಕದ ಕಣ್ಣಿಗೆ ಶೋಭಕ್ಕ ಕೂಡ ಎಲ್ಲರಂತೇ ಒಂದು ಹೆಣ್ಣು
ಆದರೆ ಪಕ್ಷದ ಎಲ್ಲಾ ಜನರಿಗು ಶೋಭಕ್ಕನಾಟದೆ ಕಣ್ಣು !

ಮಂತ್ರಿ ಶೋಭಾ ಅವರು ಏನುಮಾಡ್ತಿದ್ದಾರೆ ಎಂಬುದರಮೇಲೆ ಬಿ.ಜೆ.ಪಿಯ ಎಲ್ಲರಿಗೂ ಕಣ್ಣು ಇರುವುದು ಸುಳ್ಳಲ್ಲ. ಅಲ್ಲಾಸ್ವಾಮೀ ಕವಿಗಳಿಗೆ ಇದೆಲ್ಲಾ ಹೇಗೆ ಮೊದಲೇ ತಿಳಿದುಹೋಗುತ್ತದೆ ಎಂಬುದು ನನಗೆ ತಿಳಿಯುತ್ತಿಲ್ಲ! ಜಾಸ್ತಿ ತಲೆಕೆಡಿಸಿಕೊಳ್ಳಲು ಸಮಯ ಇರಲಿಲ್ಲ. ಗಾಡೀಲಿ ಪೆಟ್ರೋಲು ಖಾಲಿ ಆಗಿಬಿಟ್ರೆ ಎಂಬ ಹೆದರಿಕೆ ಇತ್ತು-ಈಗೀಗ ೯-೬ ಮಾತ್ರ ಪೆಟ್ರೋಲ್ ಸಿಗುವುದಲ್ಲವೇ ಹೀಗಾಗಿ, ಸಮಯ ಮೀರಿಹೋದ್ರೆ ಕಷ್ಟ ಎಂದು ಅಲ್ಲಿಂದ ಗಾಡಿ ಹೊರಟಿದ್ದೇ ಹೊರಟಿದ್ದು ಟಿ.ಆರ್. ಮಿಲ್ಲಿನ ತಿರುವಿನಲ್ಲಿ ಡುಂಡಿ ನಿಂತುಕೊಂಡಿದ್ದರು. "ಬನ್ನಿ ಬನ್ನಿ ಮಳೆ ಬರ್ತಾ ಇದೆ, ನಾಳೆ ನಿಮ್ಮ ಪುಸ್ತಕ ’ಹನಿದರ್ಶಿನಿ’ ಬಿಡುಗಡೆ ಬೇರೇ ಇದೆ, ನೆಗಡಿ ಆದ್ರೆ ಕಷ್ಟ " ಎಂದೆ. ಹಾಗೇನಿಲ್ಲ ಬಸ್ ಬರುತ್ತಲ್ಲ ಈಗ ಎಂದವರಿಗೆ ಬಿ.ಆರ್.ಎಲ್ಲು ಹೇಳಿದ ಸೈಕ್ಲೋನಿನ ಹಕೀಕತ್ತು-ವರದಿ ಒಪ್ಪಿಸಿದೆ.

ಬೆಂಗಳೂರಿನಲ್ಲೀಗ
ಮೂರುದಿನ ಸೈಕ್ಲೋನು
ಇಲ್ಲ ಏನೂ ಪರಿಹಾರ
ಹಾಕಿಕೊಳ್ಳಿ ಹೆಡ್ ಫೋನು
ಆನಂದಿಸಿ ಕದ್ರಿ
ಗೋಪಾಲನಾಥರ ಸ್ಯಾಸ್ಕ್ಸೋಫೋನು
ಇದೊಂದೇ ಪನಿವಾರ

ಆಯ್ತಾಯ್ತು ಸ್ವಾಮೀ ರಾಜ್ಯೋತ್ಸವಕ್ಕೆ ಮಿತ್ರರಾದ ನಿಮ್ಮನ್ನು ಬಿಡಲಾಗುತ್ಯೇ ? ಎಂದೆ. ಥಂಢಿಯಲ್ಲೇ ಕೈಕುಲುಕಿ ಹೋಂಡಾ ಹತ್ತಿ ಮತ್ತೆ ಹೊರಟೆ, ಸೀದಾ ಮನೆಗೆ. ದಾರಿಯುದ್ದಕ್ಕೂ ಅಡಿಗ, ಬೇಂದ್ರೆ, ಡೀವೀಜಿ, ಅನಕೃ, ಮಾಸ್ತಿ, ಕುವೆಂಪು, ಕಣವಿಯವರು ಎಲ್ಲರೂ ಹಚ್ಚಿದ ಹಣತೆಗಳು ಹಲವರ ಮನೆಗಳಲ್ಲಿ ಬೆಳಗಿದ ಹಾಗೇ ಕಾಣುತ್ತಿತ್ತು.

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪಾ
ಹಚ್ಚೇವು ಕನ್ನಡದ ದೀಪ  

ಕರ್ಕಿಯವರ ಹಾಡನ್ನು ಹಾಡುವ ಮನಸ್ಸು....ಯಾಕೇಂತ ನಿಮಗೂ ನನಗೂ ಖಂಡಿತಾ ಗೊತ್ತು. ನಾಳೆ ರಾಜ್ಯೋತ್ಸವ; ಇದು ಕೇವಲ ವರ್ಷಕ್ಕೆ ಒಂದುದಿನ ಆಚರಿಸುವ ಔಪಚಾರಿಕತೆಗೆ ಸೀಮಿತವಾಗದಿರಲಿ ಎಂದುಕೊಳ್ಳುತ್ತೇನೆ. ಎಷ್ಟು ಹೊತ್ತೂಂತ ನಿಮ್ಮನ್ನೆಲ್ಲಾ ನನ್ನ ಗಾಡೀಲೇ ಕೂರಿಸಿಕೊಳ್ಳಲಿ. ಇಲ್ಲೇ ಇಳಿಸಿಬಿಡುತ್ತೇನೆ. [ೆಲ್ಲೊಡಾಗಿದ್ದೆ ಬೆಲ್ಲ ಿಗಲ್ಲೆಯನ್ನಾದೂ ತೋರಿಸು ಎಂಬುದು ನಮ್ಮೂರ್ವಾದೆ, ಅದಕ್ಕೆಲ್ಲನ್ನಂತೂ ಕೊಡಿಲ್ಲೆಲ್ಲಿಗುವಾರಿ ತೋರಿಸೋಣ ಅಂತ.]ಹಾಂ...ಹಾಂ.. ಹೊರಡುವ ಮೊದಲು ಕೆ.ಎಸ್.ನರಸಿಂಹ ಸ್ವಾಮಿಯವರ ಚಂದದ ಒಂದು ನಾಡಭಕ್ತಿ ಗೀತೆಯನ್ನು ಕೇಳಲು ದಾರಿ ತೋರಿಸಿಬಿಡುತ್ತೇನೆ, ತಗೊಳಿ ಇಲ್ಲಿದೆ:

http://www.kannadaaudio.com/Songs/Patriotic/home/YerisiHarisiKannadadaBavuta.php

ಇಲ್ಲಿಗೆ ಹೋಗಿ, ’ಪಡುವಣ ಕಡಲಿನ’[ಯಾದಿಯಲ್ಲಿ ಮೂರನೇ ಹಾಡು] ಎನ್ನುವ ಹೆಸರಿನ ಕರ್ನಾಟಕ ಗೀತೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ, ಆನಂದಿಸಿ, ರಮ್ಯ-ಮನೋಹರ ಕನ್ನಡ ಹಾಡು.



             ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 

Saturday, October 27, 2012

ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ


ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ 
ಅಧ್ಯಾಯ-೧

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದ ಕುಣಿವ ಕುಂತಳದ |
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿಸ್ತ
ರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿಪುರಾಣಾಗಮ ಸಿದ್ಧಿದಾಯಕಿಯೆ |
ಶೌರಿಸುರಪತಿ ಸಕಲಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ||

ತನ್ನ ದೇಶ ಕಾಲಗಳ ಬಗ್ಗಾಗಲೀ ತನ್ನ ಬಗ್ಗಾಗಲೀ ಏನೂ ತಿಳಿಸದೇ ಮಹಾಕವಿ ಕುಮಾರವ್ಯಾಸ ತನ್ನದೇ ಆದ ವಿಶಿಷ್ಟ ಛಾಪಿನಲ್ಲಿ ಕರ್ಣಾಟ ಭಾರತ ಕಥಾಮಂಜರಿ ಅರ್ಥಾತ್ ಕುಮಾರವ್ಯಾಸ  ಭಾರತವನ್ನು ಬರೆದ. ಋಷಿಸಂಸ್ಕೃತಿಯ ಕವಿ-ಸಾಹಿತಿಗಳ ಮನದಲ್ಲಿ ಚಣಕಾಲ ನೆಲೆನಿಂತು ಬರೆಯಿಸುವ ಶಕ್ತಿ ಕಣ್ಣಿಗೆ ಗೋಚರವಲ್ಲ! ಒಮ್ಮೆ ಬರೆದಿದ್ದನ್ನು ಮತ್ತೆ ತೆರೆದು ಓದಿದರೆ ತಾವೇ ಬರೆದದ್ದು ಹೌದೇ ಎನಿಸುವ ಅನೇಕ ಅದ್ಭುತ ಕಥಾನಕಗಳ ಕೃತಿಕಾರರ ಮನದಲ್ಲಿ ಉತ್ತಮಕೃತಿಗಳ ರಚನೆಯನ್ನು ರಚಿಸುವಂತೇ, ನಿಂತು ನಡೆಸಿದ ಅಂತಹ ದಿವ್ಯ ಶಕ್ತಿಯ ಜಾಡು ಹಿಡಿದು ಹೊರಟರೆ ತಿಳಿಯುವುದು ಪರಬ್ರಹ್ಮ ಸ್ವರೂಪ!! ಅಂತಹ ಶಕ್ತಿಯನ್ನು ಆದಿಯಲ್ಲಿ ಗುರುವಾಗಿ, ಗಣಪತಿಯಾಗಿ, ಶಾರದೆಯಾಗಿ, ಶೌರಿ-ಸುರಪತಿ-ವರವಿರಂಚಿ-ಮಹೇಶ್ವರನಾಗಿ ಕಂಡು ಕೈಮುಗಿಯುವುದು ಸತ್ಸಂಪ್ರದಾಯ. ಹಾಗೊಮ್ಮೆ ಎಲ್ಲ ದೇವಾನುದೇವತೆಗಳಿಗೂ ನಮಿಸುತ್ತಾ, ಕವಿಜನಸಂದಣಿಗೆ ಬಲಬಂದು,  ’ಸನಾತನ ಜೀವನ ಧರ್ಮ’ ದ ಬಗೆಗೆ ಬರೆಯಲು ಅನುವು ಮಾಡಿಕೊಡಿರೆಂದು ಪ್ರಾರ್ಥಿಸುತ್ತಿದ್ದೇನೆ.  

ಬಹುಕಾಲದಿಂದ ಅನೇಕರ ಪ್ರಶ್ನೆ ನನ್ನಲ್ಲಿ: "ನೀವು ಯಾಕೆ ಯಾವಾಗಲೂ ಧಾರ್ಮಿಕ ವಿಷಯಗಳ ಬಗ್ಗೆ ಜಾಸ್ತಿ ಒತ್ತುಕೊಡುತ್ತೀರಿ?"

ಅನೇಕಾವರ್ತಿ ಹೇಳಿದ್ದನ್ನೇ ಮತ್ತೊಮ್ಮೆ ಹೇಳುತ್ತಿದ್ದೇನೆ: ನನ್ನದು ವೇದ ಸಂತುಲಿತ ಜೀವನ. ಅಪೌರುಷೇಯವಾದ ವೇದಗಳನ್ನು ಸದಾ ಭಾಗಶಃ ಆಸ್ವಾದಿಸುತ್ತಾ, ಆಮೋದಗೊಳ್ಳುತ್ತಾ ಆ ಗುಂಗಿನಲ್ಲಿಯೇ ಮನದ ಕೆಳಸ್ತರಗಳಲ್ಲಿ ಉದ್ಭವಗೊಳ್ಳುವ ಲೌಕಿಕಭಾವಗಳನ್ನು ಕವನ-ಲೇಖನಗಳ ರೂಪದಲ್ಲಿ ಬರೆಯುವುದು ನನ್ನ ಅಭ್ಯಾಸ. ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ನನ್ನಿಂದ ಬರೆಯಿಸಿದ ಆ ಶಕ್ತಿ ಎಲ್ಲವನ್ನೂ ಒಂದು ಮೂಲಾಧಾರಸೂತ್ರದಲ್ಲಿ ಬಂಧಿಸುತ್ತದೆ-ಅದು ಮಾನವ ಸಹಜ ಜೀವನ ಧರ್ಮ. ಧಾವಂತದ ಜೀವನದಲ್ಲಿ ಅನೇಕರಿಗೆ ಬಿಡುವಿಲ್ಲ, ಕೆಲವರಿಗೆ ಆಸಕ್ತಿಯೂ ಇಲ್ಲ, ಇನ್ನು ಕೆಲವರಿಗೆ ಸಮರ್ಪಕ ವಿಷಯ ಸಿಗುತ್ತಿಲ್ಲ. ಜನಸಾಮಾನ್ಯರಾದ ನಮಗೆ ಸನಾತನ ಧರ್ಮದ ಮಹತ್ವದ ಅರಿವಿಲ್ಲದೇ ಯಾರೋ ಹೇಳಿದ ಇನ್ಯಾವುದನ್ನೋ ಹಿಂಬಾಲಿಸಿ ನಡೆಯುತ್ತಿದ್ದೇವೆ. ಒಮ್ಮೆ ಸನಾತನ ಧರ್ಮ ಎಷ್ಟು ನಿಸರ್ಗ ಸಹಜವಾಗಿದೆ ಮತ್ತು ಅತ್ಯುತ್ತಮವಾಗಿದೆ ಎಂಬುದನ್ನು ತಿಳಿದರೆ, ಮತ್ತೆ ಪ್ರಶ್ನೆಗಳು/ಸಂದೇಹಗಳು ಹುಟ್ಟುವುದಿಲ್ಲ. ಈ ಒಂದು ಕಾರಣಕ್ಕಾಗಿ ಅಕ್ಷರಪ್ರಿಯ ಸ್ನೇಹಿತರೆಲ್ಲರ ಓದಿಗಾಗಿ ಆರಂಭಗೊಂಡಿದ್ದು ಈ ಮಾಲಿಕೆ. ಜನಸಾಮಾನ್ಯರ ಎಲ್ಲಾ ಪ್ರಶ್ನೆಗಳನ್ನೂ ಮನದಲ್ಲಿ ಒಡಮೂಡಿಸಿಕೊಂಡು ಬರೆಯುವ ಉತ್ತರರೂಪೀ ಕಥಾನಕಗಳ ಮಾಲಿಕೆ ಇದಾಗಿರುತ್ತದೆ. ತೆಂಗಿನಕಾಯಿಯೇ ಮಧುರ-ಅದಕ್ಕೆ ಬೆಲ್ಲವನ್ನು ಸೇರಿಸಿದಾಗ ಹೇಗೆನಿಸಬಹುದು?  ಕಾಯಿ-ಬೆಲ್ಲ ಮೆಲ್ಲುವುದು ಬಹುಸಂಖ್ಯಾಕರಿಗೆ ಸಂತಸ ತರುವ ವಿಷಯ; ಅದೇ ರೀತಿ ಸಾಹಿತ್ಯಕ ಕ್ರೀಡೆಗಳಲ್ಲಿ ಆಸಕ್ತರಾದವರಿಗೆ ಮಹಾಕವಿಗಳ ಕಾವ್ಯಧಾರೆ ಕಾಯಿ-ಬೆಲ್ಲ ಇದ್ದಹಾಗೇ. ಕವಿಗಳ ಹೇಳಿಕೆಗಳ ಸಹಯೋಗದೊಂದಿಗೆ, ಅನೇಕ ಕಂತುಗಳಲ್ಲಿ ಈ ಕಥಾನಕ ನಡೆದುಬರುತ್ತದೆ.

ಹಿಂದುತ್ವ-ಭಾರತೀಯತೆ, ಸಂಸ್ಕೃತಿ-ನಾಗರಿಕತೆ, ಧರ್ಮ-ಮತ, ಪಂಚಾಂಗ, ಸ್ನಾನ-ಶೌಚ, ಆಹಾರ, ಜಪ-ಧ್ಯಾನ, ಯೋಗ-ಪ್ರಾಣಾಯಾಮ-ಸೂರ್ಯನಮಸ್ಕಾರ, ವೇದಗಳು, ಹಬ್ಬಗಳು, ಹಿಂಸೆ-ಅಹಿಂಸೆ, ಸತ್ಯ-ಅಸತ್ಯ, ಸ್ವಾಧ್ಯಾಯ, ದೇಹಾಲಂಕಾರ, ಪೂಜೆ-ಪುನಸ್ಕಾರ-ದಾನ, ಸಂಸ್ಕಾರಗಳು, ದೈನಂದಿನ ಚರ್ಯೆಗಳು ಹೀಗೆ ಹಲವು ಹತ್ತು ಅಧ್ಯಾಯಗಳು ಈ ಮಾಲಿಕೆಯಲ್ಲಿ ಪ್ರಸ್ತಾಪಿತಗೊಳ್ಳುತ್ತವೆ. ಸೀಮಿತ ಪರಿಮಿತಿಯಲ್ಲಿ ಸಂವಾದಗಳಿಗೆ ಅವಕಾಶವೂ ಇರುತ್ತದೆ.

ಹಿಂದೂಗಳು ಎಂದರೆ ಯಾರು ?

ಹಿಂದೂಗಳು ಎಂದರೆ ಯಾರು ಎಂಬುದನ್ನು ಅರಿಯುವ ಮೊದಲು ಒಂದು ನಿವೇದನೆ: ಜಗತ್ತಿನಲ್ಲಿರುವ ಎಲ್ಲರ ಶಾಂತಿಗಾಗಿ, ಸಮೃದ್ಧಿಗಾಗಿ, ಸಂತೃಪ್ತಿಗಾಗಿ ಎಲ್ಲರೂ ವಿವಿಧ ರೂಪಗಳಲ್ಲಿ ಪರಾಶಕ್ತಿಯನ್ನು ಕಾಣಲು ಬಯಸುತ್ತಾರೆ. ಯಾರು ಯಾವ ರೂಪದಲ್ಲೇ ಕಂಡರೂ, ನೆನೆದರೂ ಶಕ್ತಿಯಿರುವುದು ಒಂದೇ ಎರಡಲ್ಲ ಎಂಬುದನ್ನು ನೆನಪಿಸುವ ಶ್ಲೋಕ ಈ ರೀತಿ ಇದೆ:

ಯಂ ವೈದಿಕಾಃ ಮಂತ್ರದೃಶಃ ಪುರಾಣಾಃ ಇಂದ್ರಂ ಯಮಂ ಮಾತರಿಶ್ವಾನಮಾಹುಃ |
ವೇದಾಂತಿನೋ ನಿರ್ವಚನೀಯಮೇಕಂ ಯಂ ಬ್ರಹ್ಮಶಬ್ದೇನ ವಿನಿರ್ದಿಶಂತಿ ||
ಶೈವಾಯಮೀಶಂ ಶಿವ ಇತ್ಯವೋಚನ್ ಯಂ ವೈಷ್ಣವಾಃ ವಿಷ್ಣುರಿತಿಸ್ತುವಂತಿ |
ಬುದ್ಧಸ್ತಥಾರ್ಹನ್ನಿತಿ ಬೌದ್ಧಜೈನಾಃ ಸತ್ಶ್ರೀ ಅಕಾಲೇತಿ ಚ ಸಿಖ್ಖಸಂತಃ ||
ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ |
ಯಂ ಪ್ರಾರ್ಥಯಂತೇ ಜಗದೀಶಿತಾರಂ ಸ ಏಕ ಏವ ಪ್ರಭುರದ್ವಿತೀಯಃ ||  

ಸನಾತನಿಗಳ ಪರಮೋಚ್ಚ ಆದರ್ಶವೆಂದರೆ ಯಾರನ್ನೂ ಹಿಂಸಿಸದೇ ಬದುಕುವುದು. ವಿವಿಧ ಮತಗಳಿಂದ ಕೂಡಿದ ಭಾರತ ಹಿಂದೊಮ್ಮೆ ಸಂಪೂರ್ಣ ಸನಾತನಿಗಳಿಂದಲೇ ತುಂಬಿತ್ತು! ಕಾಲಗತಿಯಲ್ಲಿ, ಐಹಿಕ ಸುಖವನ್ನಷ್ಟೇ ಪ್ರಧಾನವನ್ನಾಗಿ ಬಯಸಿದ ಮನಸ್ಸುಗಳು ಯಾವುದೋ ಹೊಸತನವನ್ನು ಬಯಸಿ ಬೇರೇನನ್ನೋ ಹುಡುಕಹೊರಟವು. ಏನನ್ನೋ ಕಂಡಹಾಗೇ ಭಾವಿಸಿದವು. ಹಾಗೆ ಸ್ಥಾಪಿತವಾದ ಹೊಸಮತಗಳ ಪ್ರತಿಪಾದಕರಿಗೆ ಅನುಯಾಯಿಗಳೂ ಜನಿಸಿದರು. ಹಾಗೇ ಮತಗಳ ಸಂಖ್ಯೆಯಲ್ಲೂ ಮತ್ತು ಅವುಗಳ ಅನುಯಾಯಿಗಳ ಸಂಖ್ಯೆಯಲ್ಲೂ ವೃದ್ಧಿಯಾಯ್ತು. ಸನಾತನಿಗಳಲ್ಲೇ ಹಲವು ಮತಗಳು ಹುಟ್ಟಿಕೊಂಡರೂ ಮೂಲದಲ್ಲಿ ಎಲ್ಲರೂ ಸನಾತನಿಗಳೇ ಆಗಿದ್ದರು; ಮತ್ತು ಅರಿಯದೇ ತಾವು ಆಚರಿಸುತ್ತಿರುವ ಇಂದಿನ ಹೊಸ ಮತಗಳೇ ಸರಿಯೆಂದು ವಾದಿಸುವ ಅವರಿಗೆ ನಿಜದ ನೆಲೆಯ ಅರಿವಾದರೆ ಸನಾತನಿಗಳ ದೊಡ್ಡತನದ ಅರಿವೂ ಆದೀತು. ಹುಟ್ಟಾ ಯಾರೂ ಏನನ್ನೂ  ತರಲಿಲ್ಲ, ಹೋಗುವಾಗ ಕೊಂಡೊಯ್ಯುವುದಿಲ್ಲ ಎಂಬುದೆಲ್ಲಾ ಸರಿ. ಆದರೆ ಬದುಕಿರುವವರೆಗೆ ಯಾವ ರೀತಿ ಇದ್ದರೆ ಎಲ್ಲೂ ಎಂದೂ ಯಾರಿಗೂ ಯಾವುದಕ್ಕೂ ಘಾಸಿಯಾಗುವುದಿಲ್ಲ ಎಂಬುದನ್ನು ಪ್ರತಿಪಾದಿಸುವ ಏಕೈಕ ಧರ್ಮವೆಂದರೆ ಅದು ಸನಾತನ ಧರ್ಮ. ಇದ್ದುದನ್ನು ಇದ್ದಹಾಗೇ ಇರಲು/ಬಾಳಲು ಬಿಡು ಎಂಬ ಸನಾತನ ತತ್ವವನ್ನು ಇಲ್ಲೊಮ್ಮೆ ಅವಲೋಕಿಸಬೇಕು. 

ಹಿಂದೂ ಸಮಾಜವನ್ನು ದೂಷಿಸುವವರು ಕ್ರೈಸ್ತ ಮಿಶನರಿಗಳೋ ಮುಸ್ಲಿಂ ಮದರಸಾಗಳವರೋ ಅಥವಾ ಪಾಶ್ಚಾತ್ಯರ ಮಾನಸ ಪುತ್ರರಂತಾಗಿರುವ ನಮ್ಮವರೋ ಸನಾತನ ಧರ್ಮವನ್ನು ಸರಿಯಾಗಿ ಅರ್ಥೈಸದೇ ಹಾಗೆ ಮಾಡುತ್ತಾರೆ. ವಿಶೇಷವೆಂದರೆ ಪಾಶ್ಚಾತ್ಯ ವಿದ್ವಾಂಸರನೇಕರಲ್ಲಿ ಸರಿಯಾದುದನ್ನು ಅರಿಯುವ, ಅರಿತು ಅಳವಡಿಸಿಕೊಳ್ಳುವ ಔದಾರ್ಯ ಇದೆಯೆಂಬುದನ್ನು ಅಲ್ಲಗಳೆಯಲಾಗದು. ಹಿಂದೂ ಎಂಬ ಪದ ಪರಕೀಯರು ನಮಗಿಟ್ಟಿದ್ದು ಎಂಬ ತಪ್ಪುಕಲ್ಪನೆ ಇದೆ. ಹಿಂದೂ ಎಂದರೆ ಬೇರೇ ಭಾಷೆಗಳಲ್ಲಿ ಹೇಡಿ, ತಿರಸ್ಕಾರ ಸೂಚಕ ಶಬ್ದ ಎಂಬೆಲ್ಲಾ ಹೇಳಿಕೆಗಳೂ ಇವೆ. ಆದರೆ ವಾಸ್ತವ ಅದಲ್ಲ. ಹಿಂದೂ ಎಂದರೆ ಸಿಂಧೂ ಎಂಬ ಪದದ ಅಪಭ್ರಂಶ. ಸಪ್ತ ಮಹಾನದಿಗಳು ಅಥವಾ ಸಪಸಿಂಧೂ ಭೂಮಿ ಈ ಭಾರತ. ಸಪ್ತ ಎಂಬ ಪದ ಹಪ್ತ ಎಂದಾಗಿದ್ದು ನಮಗೆ ಗೋಚರಿಸುತ್ತದೆ. ಅದೇ ರೀತಿ ಸಪ್ತಸಿಂಧೂ ಹೋಗಿ ಹಪ್ತಹಿಂದೂ ಆಗಿ ಅದರಲ್ಲೂ ಹಿಂದೂ ಉಳಿದುಕೊಂಡಿದೆ. ಹಿಂದೂ ಎಂಬುದಕ್ಕಿಂತಾ ಭಾರತೀಯ ಅಥವಾ ಸನಾತನ ಎಂಬುದು ಉತ್ತಮ ಪದ. ಭಾರತದ ನಿವಾಸಿಗಳೆಲ್ಲಾ ಹಿಂದೂಗಳೇ. ಹಿಂದೂ ಎಂಬ ಒಂದೇ ಪದ ಪ್ರಸಕ್ತ ಭಾರತ ನಿವಾಸಿಗಳೆಲ್ಲರನ್ನೂ ತನ್ನೊಳಗೆ ಅಡಕಮಾಡಿಕೊಳ್ಳುತ್ತದೆ. ಯಾಕೆಂದರೆ ಹಿಂದೂ ಎಂದರೇ ಭಾರತೀಯತೆಯಲ್ಲದೇ ಬೇರೇ ಅಲ್ಲ. ಹಿಂದೂ  ಎನಿಸಿಕೊಂಡ ಮಾತ್ರಕ್ಕೆ ಆತ ಸನಾತನ ದೇವರುಗಳನ್ನೇ ಪೂಜಿಸಬೇಕೆಂಬ ಅರ್ಥವಲ್ಲ; ಆದರೆ ಹಿಂದೂ ಎನಿಸಿಕೊಂಡವನು ವೈಜ್ಞಾನಿಕ ನೆಲೆಗಟ್ಟಿನ ಭಾರತೀಯ ಮೂಲದ್ದಾದ ಸತ್ಸಂಪ್ರದಾಯಗಳನ್ನು [ಯಾವುದೇ ಪೂರ್ವಾಗ್ರಹಪೀಡಿತನಾಗದೇ] ಪಾಲಿಸುವುದು ಆತನ ಧರ್ಮವಾಗುತ್ತದೆ. ಹಾಗಾದ್ರೆ ಇಲ್ಲೊಂದು ಪ್ರಶ್ನೆ ನಿಮ್ಮಲ್ಲೇಳುವುದು ಸಹಜ. ಭಾರತೀಯರಲ್ಲಿ ಅನ್ಯ ಮತಗಳಿಗೆ ಸೇರಿದವರೂ ಇದ್ದಾರಲ್ಲಾ ..ಅವರೇನು ಮಾಡಬೇಕು. ಇದಕ್ಕೆ ಉದಾಹರಣೆ ಇಷ್ಟೇ: ಅಮೇರಿಕಾದಲ್ಲಿ ನೆಲೆಸಿದವರು ಅಲ್ಲಿನ ಕಾಯ್ದೆ-ಕಾನೂನು ಸಂಪ್ರದಾಯಗಳನ್ನು ಮೀರುವಂತಿಲ್ಲವಷ್ಟೇ? ಅದೇ ರೀತಿ ಭಾರತದಲ್ಲಿ ನೆಲೆಸಿದ ಪ್ರತೀ ವ್ಯಕ್ತಿಯೂ ಇಲ್ಲಿನ ಮೂಲ ಸಂಸ್ಕೃತಿ-ಸಂಪ್ರದಾಯಗಳಿಗೆ ಧಕ್ಕೆಯಾಗದಂತೇ ನಡೆದುಕೊಳ್ಳುವುದು ಭಾರತವಾಸಿಗಳ ಧರ್ಮ.

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |
ವರ್ಷಂ ತದ್ ಭಾರತಂ ನಾಮ ಭಾರತೀಯತ್ರ ಸಂತತಿಃ ||

ಪ್ರಸಕ್ತ ಸಮುದ್ರದಿಂದ ಉತ್ತರಕ್ಕೂ ಹಿಮಾಲಯದಿಂದ ದಕ್ಷಿಣಕ್ಕೂ ಇರುವ ಭೂಭಾಗದ ನಿವಾಸಿಗಳೆಲ್ಲಾ ಭಾರತೀಯರೇ ಆಗಿದ್ದಾರೆ. ಆಂಗ್ಲರು ಭಾರತಕ್ಕೆ ಬಂದರು, ಭಾರತವನ್ನು ಒಡೆದು ಆಳಿದರು. ಒಡೆದಾಳುವುದೇ ನೀತಿಯೆಂದುಕೊಂಡ ಅವರು ಆರ್ಯರು ಭಾರತಕ್ಕೆ ಬಂದು ಭಾರತೀಯ ಮೂಲನಿವಾಸಿಗಳನ್ನು ಯುದ್ಧಮಾಡಿ ಗೆದ್ದು ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದರು ಎಂಬ ಕಥೆ ಕಟ್ಟಿದರು. ಆ ಕಥೆ ಎಷ್ಟು ವ್ಯಾಪಕವಾಯ್ತೆಂದರೆ ಇವತ್ತಿಗೂ ಇತಿಹಾಸವನ್ನು ಓದುವ ವಿದ್ಯಾರ್ಥಿಗಳನೇಕರು ಆರ್ಯರು ಭಾರತಕ್ಕೆ ಬಂದರು ಎಂಬುದಾಗಿಯೇ ಓದುತ್ತಾರೆ, ಭಾವಿಸುತ್ತಾರೆ. ಆರ್ಯರು ಹೊರಗಿನವರಲ್ಲಾ ಅವರೂ ಭಾರತದಲ್ಲೇ ಯುಗಯುಗಗಳಿಂದಲೂ ಇದ್ದರು ಎಂಬುದಕ್ಕೆ ಪ್ರಾಗೈತಿಹಾಸ ಮತ್ತು ತತ್ಸಂಬಂಧೀ ಹಲವು ದಾಖಲೆಗಳು, ಕುರುಹುಗಳು ಇಂದಿಗೂ ಸಿಗುತ್ತವೆ! ಆಂಗ್ಲ ಭಾಷೆಯ ರೆಲಿಜನ್ ಎಂಬ ಪದವನ್ನು ತರ್ಜುಮೆಮಾಡುವಾಗ ಅನುವಾದಕರಿಗೆ ಅದರ ಅರಿವಿರದ ಕಾರಣ ಧರ್ಮ ಮತ್ತು ಮತ ಎಂಬ ಪದಗಳನ್ನು ಒಂದೇ ಎಂಬಂತೇ ಭಾವಿಸಿ ರೆಲಿಜನ್ ಎಂಬುದನ್ನು ಧರ್ಮ ಎಂದಿದ್ದಾರೆ. ನಮ್ಮ ಪೂರ್ವಜರು ಮತಕ್ಕಿಂತಾ ಭಿನ್ನವಾದ ಧರ್ಮವನ್ನು ಸನಾತನ ಎಂದು ಕರೆಯುತ್ತಿದ್ದರು, ಸನಾತನ ಪದವೇ ಅವರಿಗೆ ಇಷ್ಟವಾಗಿತ್ತು. ಯಾವುದು ಯಾರಿಂದಲೂ ಸ್ಥಾಪಿತವಾಗದ ಧರ್ಮವೋ ಯಾವುದು ಮಾನವನ ಅತಿ ಸಹಜ ಬದುಕುವ ಧರ್ಮವೋ ಅದು ಸನಾತನ ಧರ್ಮ ಅರ್ಥಾತ್ ಹಿಂದೂ ಧರ್ಮ. ಈ ಭುವಿಗೆ ಬಂದ ವ್ಯಕ್ತಿಯೋರ್ವ ತನ್ನ ಇರುವಿಕೆಯಿಂದ, ತನ್ನ ಬದುಕಿಗಾಗಿ, ತನ್ನ ಬೆಳವಣಿಗೆಗಾಗಿ ಇನ್ನೊಂದು ಜೀವಿಗೆ, ಪರಿಸರಕ್ಕೆ ಹಾನಿಯುಂಟುಮಾಡಬಾರದೆಂಬುದೇ ಹಿಂದೂ ಧರ್ಮದ ಮೂಲ ಸಂದೇಶ. ಧರ್ಮ ಮತ್ತು ಮತಗಳ ವ್ಯತ್ಯಾಸ ತಿಳಿಯದಿದ್ದುದೇ ಇಂದಿನ ಸಮಾಜದಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಯೋಣ.

ನಮ್ಮ ದೇಶದಲ್ಲಿ ಬಹುಸಂಖ್ಯಾಕರು ವೇದ ಮತಾನುಯಾಯಿಗಳಿರಬಹುದು. ಆದರೆ ರಾಷ್ಟ್ರೀಯತಾ ಸೂಚಕವಾದ ಹಿಂದೂ ಪದದಲ್ಲಿ ವೇದೇತರ ಮತಾನುಯಾಯಿಗಳೂ ಚಿಂತಕರೂ ಇದ್ದಾರೆ. ವೈದಿಕ ಮತವೇ ಹಿಂದುತ್ವ ಎಂಬುದು ದುರಾಗ್ರಹ. ಸರ್ವ ಸಂಗ್ರಾಹಕಗುಣ ಹಿಂದೂ ಪದದ ವ್ಯಾಪ್ತಿ. ತಾವು ವೈದಿಕ ಪಂಗಡಕ್ಕೆ ಸೇರಿದವರು ಎಂಬ ಭಾವನೆ ತೊಡೆದುಹಾಕಲು ಬೌದ್ಧರು, ಜೈನರು, ಪಾರಸಿಕರು, ವೀರಶೈವರು, ಸಿಖ್ಖರೇ ಮೊದಲಾದವರು ತಮ್ಮನ್ನು ಹಿಂದೂಗಳಲ್ಲ ಎಂದುಕೊಂಡರು! ಹಿಂದೂ ಒಂದು ರಾಷ್ಟ್ರೀಯತೆಯೇ ವಿನಃ ಅದು ಮತದ ಸಂಕೇತವಲ್ಲ, ಮತವನ್ನು ಬಣ್ಣಿಸುವ ಪದವೂ ಅಲ್ಲ. ಮೊದಲೇ ಹೇಳಿದಹಾಗೇ  ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ ಈ ಏಳ ಮಹಾನದಿಗಳ [ಸಪ್ತ ಸಿಂಧೂಗಳ ಮತ್ತು ಅವುಗಳ ಉಪನದಿಗಳ] ಸರಹದ್ದಿನಲ್ಲಿ ವಾಸಿಸುವ ಎಲ್ಲಾ ಜನರೂ ಹಿಂದೂಗಳೇ. ಬ್ರಹ್ಮ ಸಮಾಜ, ಅರ್ಯಸಮಾಜ ಕೆಲವು ಸುಧಾರಿತ ಪಂಥಗಳು ಹಿಂದಿನಿಂದ ನಾವು ನಡೆಸಿಬಂದ ಕೆಲವು ಪದ್ಧತಿಗಳನ್ನು ಅಲ್ಲಗಳೆದರು ಎಂದಮಾತ್ರಕ್ಕೆ ಅವರು ಹಿಂದೂಗಳಲ್ಲ ಎನ್ನಲಾಗುವುದಿಲ್ಲ. ನೂರಾರು ಮಂದಿ ಮಹಾಪುರುಷರು ನಮ್ಮ ಸಮಾಜದಲ್ಲಿ ಹುಟ್ಟಿ, ಹೊಸ ಆಧ್ಯಾತ್ಮಿಕ  ಮತ್ತು ಮತೀಯ ಅಚಾರ-ವಿಚಾರಗಳನ್ನು ರೂಪಿಸಿ, ಪಂಥಗಳನ್ನು ಸ್ಥಾಪಿಸಿ ಸಮಾಜ ಸುಧಾರಣೆಗೆ ಯತ್ನಿಸಿದ್ದಾರೆ. ಇಂತಹ ಪ್ರಯತ್ನಗಳು ಈ ಹಿಂದೆ ನಡೆದಂತೇ ಮುಂದೆಯೂ ಹಲವು ನಡೆಯಬಹುದಾಗಿದೆ. ಆದರೆ ಹಿಂದುತ್ವದ ಮೂಲಸ್ವರೂಪಕ್ಕೆ ಧಕ್ಕೆಯಾಗದು. ಕೆಲವೊಂದು ರೂಢಿಗಳನ್ನು ಮಾತ್ರ ಹಿಂದುತ್ವದ ಲಕ್ಷಣಗಳು ಎಂದು ಬಗೆದಲ್ಲಿ ಅನೇಕರನ್ನು ಹಿಂದೂಗಳೇ ಅಲ್ಲ ಎನ್ನಬೇಕಾದೀತು, ಹೀಗಾಗಿ ಹಿಂದೂ ಶಬ್ದವನ್ನು ರಾಷ್ಟ್ರೀಯತೆಯ ಪದವನ್ನಾಗಿ ಬಳಸಲಾಗಿದೆ.  

ಇವತ್ತು ಭಾರತವಲ್ಲದೇ ಜಗದ ನಾನಾ ದೇಶಗಳಲ್ಲಿ ಹಿಂದೂಗಳು ನೆಲೆಸಿದ್ದಾರೆ. ಗಯಾನಾ, ಫಿಜಿ ಮೊದಲಾದ ಕೆಲವು ದೇಶಗಳಲ್ಲಂತೂ ಅವರೇ ಬಹುಸಂಖ್ಯಕರು! ಮಾರಿಷಸ್ ನಂತಹ ಕೆಲವು ಕಡೆ ಹಿಂದೂಗಳ ಸಂಖ್ಯೆಯೇ ದೊಡ್ಡದು. ಅವರಲ್ಲಿ ಬಹಳಮಂದಿ ಅಲ್ಲಲ್ಲಿಯೇ ಹುಟ್ಟಿಬೆಳೆದ ರತೀಯ ಮೂಲದವರ ವಂಶಸ್ಥರು ಅಷ್ಟೇ. ಅನೇಕರು ಅಲ್ಲಲ್ಲಿನ ರಾಷ್ಟ್ರೀಯತೆಯನ್ನೇ ಪಡೆದುಕೊಂಡಿದ್ದಾರೆ. ಆದರೂ ಸಾಂಸ್ಕೃತಿಕವಾಗಿ ಅವರು ಹಿಂದೂಗಳಾಗಿದ್ದಾರೆ. ಅಮೇರಿಕೆಯಂತಹ ಮುಂದುವರಿದ ರಾಷ್ಟ್ರಗಳಲ್ಲಿನ ಜನ ಹಿಂದೂ ಸಂಸ್ಕೃತಿಯನ್ನು ಒಪ್ಪಿದ್ದಾರೆ, ಭಾರತಕ್ಕೆ ಬಂದು ಇಲ್ಲಿನ ವೇದ-ಆಯುರ್ವೇದಗಳ ಬಗ್ಗೆ ಯೋಗ-ಪ್ರಾಣಾಯಾಮಗಳ ಬಗ್ಗೆ ಆಸ್ಥೆಯಿಂದ ಅಭ್ಯಾಸ ನಡೆಸುತ್ತಾರೆ, ತಾವು ಹಿಂದೂಗಳೆಂದೇ ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಅಂಥವರನ್ನು ನಾವು ಸಾಂಸ್ಕೃತಿಕ ಹಿಂದೂಗಳೆಂದು ಕರೆಯಬೇಕಾಗುತ್ತದೆ. ಮಹರ್ಷಿ ಅರವಿಂದರು ಹೇಳುತ್ತಾರೆ " ಒಂದುಕಡೆ ಹಿಮಾಲಯ ಮತ್ತೊಂದು ಕಡೆ ಸಮುದ್ರ ಈ ನಡುವಿನ ಭೂಭಾಗದಲ್ಲಿ ಬೆಳೆದುಬಂದ ಪವಿತ್ರವೂ ಪ್ರಾಚೀನವೂ ಆದ ಈ ಧರ್ಮವನ್ನು, ಈ ಪರ್ಯಾಯ ದ್ವೀಪದಲ್ಲಿ ಯುಗಯುಗಗಳ ಕಾಲಪ್ರವಾಹದಲ್ಲೂ ಸುರಕ್ಷಿತವಾಗಿ ಇಡಲೋಸುಗ ಆರ್ಯಜನಾಂಗಕ್ಕೆ ಭಗವಂತನಿಂದ ನೀಡಲ್ಪಟ್ಟ ನಿಧಿ ಇದು. ಆದರೆ ಇದು ಒಂದು ದೇಶಕ್ಕೆ ಸೀಮಿತವಲ್ಲ. ಇದು ನಿಜವಾಗಿಯೂ ಸನಾತನ ಧರ್ಮ ಮತ್ತು ಇತರ ಮತಗಳನ್ನು ಒಳಗೊಂಡಿರುವ ವಿಶ್ವಧರ್ಮ." 

ಭಾರತೀಯರ್ಷಿ ಸಂಪ್ರೋಕ್ತಾನ್ ಇಹಾಮುತ್ರಾರ್ಥಸಾಧಕಾನ್ |
ಯೋsಂಗೀಕರೋತಿ ಸಶ್ರದ್ಧಂ ಸತ್ ಸಿದ್ಧಾಂತಾನ್ ಸನಾತನಾನ್ ||
ಮಹಾತ್ಮಿಭಿಃ ದಿವ್ಯಶೀಲೈಃ ಕಾಲೇ ಕಾಲೇ ಪ್ರವರ್ತಿತಾನ್ |
ಸಂಪ್ರದಾಯಾನಾದ್ರೀಯತೇ ಯಃ ಸರ್ವಾನ್ ಪಾರಮಾರ್ಥಿಕಾನ್ ||
ಯತ್ರಕುತ್ರಾಪಿ ಜಾತೋsಸೌ ಅಸ್ತು ಯಃ ಕೋsಪಿ ಜನ್ಮನಾ |
ಸಚ್ಛೀಲೋದಾರಚರಿತಃ ಸೋsತ್ರ ಹಿಂದುರಿತಿ ಸ್ಮೃತಃ ||

ದೇವ ಮಂದಿರ ಭಜನೆ ಪೂಜೆ ಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ
ಭಾವವಂ ಕ್ಷುಲ್ಲ ಜಗದಿಂ ಬಿಡಿಸಿ ಮೇಲೊಯ್ವು
ದಾವುದಾದೊಡಮೊಳಿತು -ಮಂಕುತಿಮ್ಮ

ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಾಡುವ ಪೂಜೆ, ಅರತಿ, ಭಜನೆ, ಪ್ರಸಾದ ಸ್ವೀಕರಣೆ, ಜಪ-ತಪ, ಹೋಮ-ನೇಮ ಇವೆಲ್ಲಾ ಜೀವನಕ್ಕೆ ಅಲಂಕಾರವಾಗಿವೆ ಮತ್ತು ಮನಸ್ಸನ್ನು ಮುದಗೊಳಿಸಿ ಉನ್ನತ ವೈಚಾರಿಕತೆಗೆ ಏರುವಲ್ಲಿ ಸಹಾಯಕವಾಗಿವೆ. ಕ್ಷುಲ್ಲಕ ಭಾವಗಳೇ ಮನದಲ್ಲಿ ಸದಾ ತುಂಬಿದ್ದರೆ ಬದುಕಿನ ನಿಜಧ್ಯೇಯವನ್ನು ಸಾಧಿಸುವುದು ಸಾಧ್ಯವಾಗುವುದಿಲ್ಲ. ಕ್ಷಣಿಕವಾದ ಈ ಜಗದಲ್ಲೇ ಸುತ್ತುತ್ತಾ ಬಳಲುವ ನಮಗೆ ಉನ್ನತ ವಿಚಾರಗಳು ಮನದಲ್ಲಿ ಒಡಮೂಡಲು ತನ್ಮೂಲಕ ಮೋಕ್ಷವನ್ನು ಪಡೆಯುವತ್ತ ನಾವು ನಡೆಯಲು ಸಹಕಾರಿಯಾಗುವ ಕಾರ್ಯಗಳೇ ಪೂಜಾ ಕಾರ್ಯಗಳು. ಉನ್ನತ, ಉದಾತ್ತ ವಿಚಾರಗಳನ್ನು  ಹೇಳುವ ಯಾವ ಕೆಲಸವೇ ಆದರೂ, ಸಂಸ್ಕಾರವಾದರೂ ಅವು ಒಳ್ಳೆಯವೇ. ದೈವ ಸಾನ್ನಿಧ್ಯದಲ್ಲಿ ವಿಶೇಷವಾದ ಶಕ್ತಿ ಸಂಚಯನವಾಗುತ್ತದೆ ಮತ್ತು ಅದು ಮೋಕ್ಷವನ್ನು ಪಡೆಯುವ ಮಾರ್ಗವನ್ನು ತೋರುತ್ತದೆ ಎಂಬುದು ಡಿ.ವಿ.ಜಿಯವರ ಹೇಳಿಕೆಯಾಗಿದೆ. ಸಮಾಜದಲ್ಲಿ ಬೇಕಾದ್ದು ಬೇಡಾದ್ದು ಎಲ್ಲಾ ತುಂಬಿರುತ್ತವೆ. ಎಲವೊಮ್ಮೆ ಯಾವುದು ಒಳಿತು  ಮತ್ತು ಯಾವುದು ಕೆಡುಕು ಎಂಬುದನ್ನು ನಿರ್ಣಯಿಸುವುದೇ ಕಷ್ಟವಾಗಿಬಿಡಬಹುದು. ಇಂತಹ ಸಂದಿಗ್ಧದಲ್ಲಿ ಸನಾತನ ಸೂತ್ರಗಳು ನಮಗೆ ಸಹಕಾರಿಯಾಗಿವೆ. ಹಲವು ಸಹಸ್ರಮಾನಗಳ ಅನುಭವಗಳಿಂದಲೂ ಮತ್ತು ದರ್ಶನಗಳಿಂದಲೂ ಅವು ನಿಖರವಾದ ಮಾಹಿತಿಯನ್ನು ಒದಗಿಸುತ್ತವೆ. 

ಚಿಕ್ಕವರಿರುವಾಗ ನಮ್ಮ ನಿರ್ಧಾರಗಳಿಗೆ ಅಡ್ಡಿಪಡಿಸುವ ನಮ್ಮ ಅಪ್ಪನಿಗೆ ಬುದ್ಧಿ ಇಲ್ಲವೆಂದು ನಾವೆಂದುಕೊಳ್ಳುತ್ತೇವೆ. ಬೆಳೆಯುತ್ತಾ ನಮ್ಮಪ್ಪ ಮಾಡಿದ್ದು ಕೆಲವು ಭಾಗ ಸರಿ ಎಂದು ಒಪ್ಪುತ್ತೇವೆ. ಇನ್ನೂ ಬೆಳೆದು ವಯಸ್ಸು ಜಾಸ್ತಿಯಾಗತೊಡಗಿದಾಗ ಅಪ್ಪ ನಮ್ಮ ಸಲುವಾಗಿ ಮಾಡಿದ ಅನೇಕ ಕೆಲಸಗಳು ಮತ್ತು ನಿರ್ಧಾರಗಳು ಸರಿ ಎಂಬ ಅನುಭವ ನಮ್ಮದಾಗುತ್ತದೆ. ಆದರೂ ಅಪ್ಪನದು ಪೂರ್ತಿ ಸರಿಯೆಂದು ನಾವು ಒಪ್ಪುವ ಹಂತಕ್ಕೆ ಇನ್ನೂ ಬಂದಿರುವುದಿಲ್ಲ. ಯಾವಾಗ ನಮಗೆ ಮದುವೆಯಾಗಿ ಮಕ್ಕಳಾಗಿ ನಾವೇ ’ಅಪ್ಪ’ ಎನಿಸಿಕೊಳ್ಳುತ್ತೇವೋ ಆಗ ಅಪ್ಪಮಾಡಿದ್ದು ಸಂಪೂರ್ಣ ಸರಿಯೆನಿಸುತ್ತದೆ; ಅಪ್ಪನ ಅನುಭವ ಸುಳ್ಳಲ್ಲವೆಂಬುದನ್ನು ತೆಪ್ಪಗೆ ಒಪ್ಪಿಕೊಳ್ಳುತ್ತೇವೆ. ಒಬ್ಬ ಸಾಮಾನ್ಯ ಅಪ್ಪ ತನ್ನ ಮಗುವಿಗಾಗಿ ಇರುವುದರಲ್ಲಿ ಉತ್ತಮ ನಿರ್ಧಾರಗಳನ್ನೇ ಕೈಗೊಂಡಿರುತ್ತಾನೆ ಎಂದಮೇಲೆ ಜಗತ್ತಿನ ಜನರನ್ನೆಲ್ಲಾ ತಮ್ಮ ಮಕ್ಕಳೆಂದೇ ತಿಳಿದ ಆರ್ಷೇಯ ಋಷಿಗಳ ಪಾರಂಪರಿಕ ಅನುಭವ ಸುಳ್ಳೆನಲು ಸಾಧ್ಯವೇ? ಪರಂಪರಾಗತವಾಗಿ ಶ್ರುತಿಯಾಗಿ ಹರಿದುಬಂದ ಜೀವನಧರ್ಮ ಸೂತ್ರಗಳೇ ವೇದಗಳು ಎಂದರೆ ತಪ್ಪಾಗುವುದಿಲ್ಲ. ಅವುಗಳಿಗೆ ಲೇಖಕರು ಇಲ್ಲ; ತಯಾರಿಸಿದ ವಸ್ತುವೊಂದಕ್ಕೆ ತಯಾರಕರೇ ಉಪಯೋಗಿಸುವ ರೀತಿನೀತಿಗಳನ್ನೂ, ಗುಣಮಟ್ಟಕ್ಕೆ ಸಮಯಾಧಾರಿತ ಖಾತ್ರಿಯನ್ನೂ ಕೊಡುವಂತೇ ವೇದಗಳ ಸೃಷ್ಟಿಕರ್ತ ಅವುಗಳ ಸಮಯವನ್ನು ಸಾರ್ವಕಾಲಿಕವನ್ನಾಗಿ ಮಾರ್ಪಡಿಸಿದ್ದಾನೆ. ಸರಿಯಾಗಿ ಅರಿತು ಬಳಸಿದರೆ ಅವುಗಳಲ್ಲಿನ ಜ್ಞಾನ ನಮ್ಮ ಅಧುನಿಕ ವಿಜ್ಞಾನಕ್ಕಿಂತಲೂ ಮಿಗಿಲು ಎಂಬುದನ್ನು ಕಾಣಬಹುದಾಗಿದೆ. ಯಾವ ಮತದ ಯಾವುದೇ ಸೂತ್ರವೂ ತಪ್ಪಾಗಿ ಗ್ರಹಿತವಾಗಿರಬಹುದು, ಯಾಕೆಂದರೆ ಅನೇಕ ಮತಗಳು ಮಾನುಷ ನಿರ್ಮಿತವಾಗಿವೆ. ಅವು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಜೀವನಧರ್ಮಗಳಾಗುವ ಪರಿಪಕ್ವತೆಯನ್ನು ಹೊಂದಿಲ್ಲದಿರುವುದು ತುಲನೆಮಾಡಿದಾಗ ತಿಳಿದುಬರುತ್ತದೆ. ಪಕ್ವವಾದ ಮತ್ತು ಯುಕ್ತವಾದ ಮಾಹಿತಿಯನ್ನು ಮಾತ್ರ ವೇದಗಳು ಒಳಗೊಂಡಿರುವುದರಿಂದ ಯಾವ ರೀತಿಯಲ್ಲೂ ಯಾವ ನೀತಿಯಲ್ಲೂ ಅವು ನಗಣ್ಯವಲ್ಲ, ಲೋಪಗಳನ್ನು ಹೊಂದಿರುವುದಿಲ್ಲ.     

ಪಂಚತಂತ್ರದ ಒಂದು ಚಿಕ್ಕ ಕಥೆಯೊಂದಿಗೆ ಆರಂಭಿಕ ಅಧ್ಯಾಯವನ್ನು ಮುಗಿಸೋಣ. ದೇಶವೊಂದರಲ್ಲಿ ಧರ್ಮಬುದ್ಧಿ ಮತ್ತು ಪಾಪ ಬುದ್ಧಿ ಎಂಬಿಬ್ಬರು ಗೆಳೆಯರಿದ್ದರು. ಹೆಸರೇ ಸೂಚಿಸುವಂತೇ ಧರ್ಮಬುದ್ಧಿ ಧರ್ಮಾತ್ಮ ಮತ್ತು ಪಾಪಬುದ್ಧಿ ಪಾಪಾತ್ಮನೆಂದು ತಿಳಿದುಕೊಳ್ಳಿ. ಪಾಪಬುದ್ಧಿಗೆ ವಿಶೇಷವಾದ ವಿದ್ಯೆಯಾಗಲೀ ಪರಿಣತಿಯಾಗಲೀ ಇರಲಿಲ್ಲ. ಆದರೆ ಧರ್ಮಬುದ್ಧಿ ಘನಪಾಠಿಯಾಗಿದ್ದ. ಕುತಂತ್ರಗಳಲ್ಲಿ ಪಾಪಬುದ್ಧಿ ಬಹಳ ಮುಂದಿರುತ್ತಿದ್ದ. ಒಮ್ಮೆ ಹೇಗಾದರೂ ಮಾಡಿ ಧರ್ಮಬುದ್ಧಿಯನ್ನು ಬಳಸಿಕೊಂಡು ಒಂದಷ್ಟು ಹಣಗಳಿಸಬೇಕೆಂಬ ಆಸೆ ಪಾಪಬುದ್ಧಿಯದು.

ಧರ್ಮಬುದ್ಧಿಗೆ ಪಾಪಬುದ್ಧಿ ಹೇಳಿದ "ಮಿತ್ರಾ ನೋಡು ನೀನು ಪಂಡಿತನಾದ ಮಾತ್ರಕ್ಕೆ ಜನ ನಿನ್ನನ್ನು ಹಾಗೆ ಮೆಚ್ಚುವುದಿಲ್ಲ. ದೇಶಗಳನ್ನು ಪರ್ಯಟನೆಮಾಡಿ ಹಲವು ಜನರನ್ನು ಸಂಪರ್ಕಿಸುವುದರಿಂದ ಹೆಚ್ಚಿನ ಧನ-ಕನಕ ಸಂಪಾದನೆಯಾಗುತ್ತದೆ. ಬರುವುದಾದರೆ ಬಾ ನಾನು ವಿದೇಶಯಾತ್ರೆಗೆ ಹೋಗುವವನಿದ್ದೇನೆ." ಗೆಳೆಯನ ಮಾತಿನಲ್ಲಿ ಧೂರ್ತ ಭಾವವನ್ನು ಗ್ರಹಿಸದ ಧರ್ಮಬುದ್ಧಿ ಗೆಳೆಯನೊಟ್ಟಿಗೆ ವಿದೇಶ ಯಾತ್ರೆಗೆ ನಡೆದ. ವಿದೇಶ ಸಂಚಾರದಲ್ಲಿ ಅವರೀರ್ವರೂ ಹೇರಳ ಧನ-ಕನಕಗಳನ್ನು ಸಂಪಾದಿಸಿ ಮನೆಗೆ ಮರಳಲು ಮುಂದಾದರು. ಊರು ಸಮೀಪಿಸುತ್ತಿರುವ ಸಮಯದಲ್ಲಿ ಪಾಪಬುದ್ಧಿ ಧರ್ಮಬುದ್ಧಿಗೆ ಹೇಳಿದ: "ಗೆಳೆಯಾ, ನಾವೀಗ ಹೇರಳ ಸಂಪತ್ತುಗಳನ್ನು ಗಳಿಸಿದ್ದೇವೆ. ಇದು ಪರಭಾರೆಯಾಗಬಾರದಷ್ಟೇ? ಊರಿಗೆ ಕೊಂಡೊಯ್ದರೆ ಮನೆಯಲ್ಲಿನ ಜನರಿಗೋ ನೆಂಟರಿಗೋ ಪಾಲುಕೊಡಬೇಕಾದ ಪ್ರಮೇಯ ಬರುತ್ತದೆ. ಮೇಲಾಗಿ ನೀರಿನಲ್ಲಿರುವ ಮೀನು, ಹಾರುವ ಹಕ್ಕಿ, ಭೂಮಿಯಮೇಲಿರುವ ಪ್ರಾಣಿಗಳು ಮಾಂಸಭಕ್ಷಕರ ಪಾಲಾಗುವುದು ಸರಿಯಷ್ಟೇ? ಅದೇರೀತಿ ನಗದು ಸಂಪತ್ತನ್ನು ಇಟ್ಟುಕೊಂಡವರಿಗೆ ಕಳ್ಳರಕಾಟ ತಪ್ಪಿದ್ದಲ್ಲ, ಸಂಪತ್ತನ್ನು ಕಾದುಕೊಳ್ಳುವುದು ಕಠಿಣ ಕೆಲಸ. ಹೀಗಾಗಿ ಇಲ್ಲೇ ಕಾಡಿನಲ್ಲಿ ಮರವೊಂದರ ಬುಡದಲ್ಲಿ ಸಂಪತ್ತನ್ನು ಹೂತಿಡೋಣ ಮತ್ತು ಖರ್ಚಿಗೆ ಬೇಕಾದಾಗ ಬೇಕಾದಷ್ಟನ್ನೇ ತೆಗೆದುಕೊಳ್ಳುತ್ತಾ ಇರೋಣ ಆಗದೇ?" ಎಂದ. ಧರ್ಮಬುದ್ಧಿ ಅದಕ್ಕೂ ಸಮ್ಮತಿಸಿದ. ತಂದಿದ್ದ ಸಂಪತ್ತನ್ನು ಮರವೊಂದರ ಬುಡದಲ್ಲಿ ಹೂತಿಟ್ಟು ಈರ್ವರೂ ಊರಿಗೆ ಮರಳಿ ನಿಶ್ಚಿಂತೆಯಿಂದಿದ್ದರು.

ಕೆಲವುದಿನಗಳ ನಂತರ ಒಂದು ಮಧ್ಯರಾತ್ರಿ ಪಾಪಬುದ್ಧಿ ಕಾಡಿಗೆ ತೆರಳಿ, ಮರದ ಬುಡದಲ್ಲಿದ್ದ ಸಂಪತನ್ನು ಪೂರ್ತಿಯಾಗಿ ಎತ್ತಿಕೊಂಡು ಪುನಃ ಆ ಜಾಗಕ್ಕೆ ಮಣ್ಣುತುಂಬಿಸಿ ಮನೆಗೆ ಮರಳಿದ. ಮಾರನೇದಿನ ಧರ್ಮಬುದ್ಧಿಯನ್ನು ಕರೆದು ತನಗೆ ಹಣದ ಅಗತ್ಯ ಹೆಚ್ಚಿರುವುದಾಗಿಯೂ ಕಾಡಿಹೋಗಿ ತರೋಣವೆಂತಲೂ ಒತ್ತಾಯಿಸಿದ. ಸಮ್ಮತಿಸಿದ ಧರ್ಮಬುದ್ಧಿಯ ಜೊತೆ ಕಾಡಿಗೆ ತೆರಳಿ ಮರದಬುಡದಲ್ಲಿ ಅಗೆಯಲಾಗಿ ಹುದುಗಿಸಿಟ್ಟಿದ್ದ ಸಂಪತ್ತು ಇಲ್ಲವಾಗಿತ್ತು! ತನಗೇನೂ ಸಂಶಯವೇ ಇಲ್ಲವೆಂದೂ ಧರ್ಮಬುದ್ಧಿಯೇ ಅದನ್ನು ತೆಗೆದುಕೊಂಡಿದ್ದಾನೆಂದೂ ಪಾಪಬುದ್ಧಿ ಜಗಳ ತೆಗೆದ. ಜಗಳ ರಾಜ್ಯದ ರಾಜನ ನ್ಯಾಯಾಲಯಕ್ಕೆ ಹೋಯ್ತು. ನ್ಯಾಯಾಧಿಕಾರಿಗಳ ಸಮ್ಮುಖದಲ್ಲಿ ವಿಷಯ ಮಂಡಿತವಾಯ್ತು. ಸಂಪತ್ತು ಇಟ್ಟಬಗ್ಗೆಯಾಗಲೀ, ಕದ್ದಬಗ್ಗೆಯಾಗಲೀ ಲಿಖಿತ ರೂಪದ ದಾಖಲೆಗಳು, ಸಾಕ್ಷಿಗಳು ಇಲ್ಲದಿರುವುದರಿಂದ ದೇವರಮುಂದೆ ಆಣೆಪ್ರಮಾಣ ಮಾಡಬೇಕೆಂದು ನ್ಯಾಯಾಧೀಶರು ಹೇಳಿದರು. ತನಗೆ ದೇವರಮೇಲೆ ನಂಬಿಕೆಯಿದ್ದು ಮರದಲ್ಲಿರುವ ವನದೇವಿ ತನ್ನ ಪರವಾಗಿ ಸಾಕ್ಷಿ ನುಡಿಯುವ ಖಾತ್ರಿ ಇರುವುದರಿಂದ ಕಾಡಿಗೇ ತೆರಳಿ ಮರದ ಸಾಕ್ಷಿ ಕೇಳಲು ಅನುಮತಿಸಬೇಕೆಂದು ಪಾಪಬುದ್ಧಿ ವಿನಂತಿಸಿದ. ನ್ಯಾಯಾಲಯ ಅದಕ್ಕೆ ಸಮ್ಮತಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಕಳಿಸಲು ಒಪ್ಪಿತು. ಅಂದಿನ ನ್ಯಾಯಾಲಯದ ಕಲಾಪ ಮುಗಿಸಿಕೊಂಡ ಪಾಪಬುದ್ಧಿ ಶೀಘ್ರ ಮನೆಗೆ ದೌಡಾಯಿಸಿದ. ತಂದೆಯನ್ನು ಕಂಡು ನಡೆದ ಘಟನೆ ತಿಳಿಸಿ, "ಅಪ್ಪಾ ನೀನು ಮನಸ್ಸುಮಾಡಿ ಒಂದು ವಾಕ್ಯ ಉಸುರಿದರೆ ಸಂಪತ್ತೂ ನಮ್ಮದಾಗುತ್ತದೆ ಮತ್ತು ನನ್ನ ತಯೂ ಉಳಿಯುತ್ತದೆ" ಎಂದ. ಮಗನ ಒತ್ತಾಯಕ್ಕೆ ಅಪ್ಪ ಮಣಿದ. ಮರದಲ್ಲಿ ದೊಡ್ಡ ಪೊಟರೆಯೊಂದು ಇರುವುದೆಂದೂ ಅದರಲ್ಲಿ ಅಪ್ಪ ಅವಿತಿರಬೇಕೆಂದೂ ಮಗ ತಿಳಿಸಿದ.

ಮಾರನೇ ಬೆಳಿಗ್ಗೆ ಸ್ನಾನ ಮುಗಿಸಿ ಹೊಸ ಬಟ್ಟೆ ತೊಟ್ಟ ಪಾಪಬುದ್ಧಿ,  ಧರ್ಮಬುದ್ಧಿ ಮತ್ತು ನ್ಯಾಯಾಲಯದ ಅಧಿಕಾರಿಗಳೊಡನೆ ಅಡವಿಯ ಮರದ ಹತ್ತಿರ ಬಂದ. ಮರದಮುಂದೆ ನಿಂತು " ಎಲೈ ಸೂರ್ಯ-ಚಂದ್ರರೇ, ವಾಯು-ಅಗ್ನಿಗಳೇ, ಸ್ವರ್ಗ ಮತ್ತು ಭೂಮಿಗಳೇ, ಹೃದಯ ಮತ್ತು ಮನಸ್ಸುಗಳೇ, ಹಗಲು ರಾತ್ರಿಗಳೇ, ಸೂರ್ಯೋದಯ ಮತ್ತು ಸೂರ್ಸ್ತಗಳೇ ನೀವೆಲ್ಲವೂ ಧರ್ಮಮಯವಾಗಿದ್ದೀರಿ. ಮನುಷ್ಯನ ಪ್ರತಿಯೊಂದು ಕರ್ಮಗಳನ್ನೂ ನೀವು ಪ್ರತ್ಯಕ್ಷವಾಗಿ ನೋಡುತ್ತೀರಿ. ಮರದಲ್ಲಿರುವ ದೇವತೆಯೇ ನಿನ್ನಲ್ಲಿ ಪ್ರಾರ್ಥಿಸುತ್ತೇನೆ. ನಮ್ಮೀರ್ವರಲ್ಲಿ ಯಾರು ಕಳ್ಳರು ಎಂಬುದನ್ನು ಸಾರಿಬಿಡು" ಎಂದು ಜೋರಾಗಿ ಕೂಗಿ ಹೇಳಿದ. ಮಗನ ಮಾತನ್ನು ಆಲೈಸಿದ ಪಾಪಬುದ್ಧಿಯ ತಂದೆ ಅವಿತಿದ್ದ ಪೊಟರೆಯಿಂದ ಹೇಳಿದ:" ಕೇಳೀ ಕೇಳೀ ಹಣವನ್ನು ಕದ್ದಿದ್ದು ಧರ್ಮಬುದ್ಧಿಯೇ." ದಂಡಾಧಿಕಾರಿಗಳಿಗೆ ಅಶರೀರವಾಣಿಯಿಂದ ಅಚ್ಚರಿಯಾಯ್ತು! ನ್ಯಾಯಲಯದ ಅಪ್ಪಣೆಯಂತೇ ಧರ್ಮಬುದ್ಧಿಗೆ ಶಿಕ್ಷೆನೀಡಲು ಅವರು ಸಿದ್ಧತೆ ನಡೆಸಿದರು. ಧರ್ಮಬುದ್ಧಿ ಮರುಮಾತನಾಡಲಿಲ್ಲ. ಮರದ ಸುತ್ತ ಒಮ್ಮೆ ಸುತ್ತಿದ ಧರ್ಮಬುದ್ಧಿ ತ್ವಿತಾಗಿ ಉರಿಯುವಸ್ತುವಿನಿಂದ ಮರದ ಬುಡಕ್ಕೆ ಬೆಂಕಿಹಚ್ಚಿದ. ಧಗಧಗನೇ ಮರ ಹೊತ್ತಿ ಉರಿಯುವಾಗ ಮರದ ಪೊಟರೆಯೊಳಗೆ ಅವಿತಿದ್ದ ಪಾಪಬುದ್ಧಿಯ ತಂದೆ ಚೀರುತ್ತಾ ಕೆಳಕ್ಕೆ ಉರುಳಿದ. ದಂಡಾಧಿಕಾರಿಗಳು " ಏನಪ್ಪಾ ಇದು?" ಎಂದು ಆತನನ್ನು ಗದರಿದರು. ಆತ ನಿಜವನ್ನು ಒಪ್ಪಿಕೊಂಡ ಮತ್ತು ಮರುಘಳಿಗೆಯಲ್ಲೇ ಪ್ರಾಣಬಿಟ್ಟ. ತಪ್ಪುಮಾಡುವುದರೊಂದಿಗೆ ತಪ್ಪನ್ನು ಮುಚ್ಚಲು ಮತ್ತಷ್ಟು ತಪ್ಪುಮಾಡಿರುವ ಪಾಪಬುದ್ಧಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತು. ಅನ್ಯಾಯವಾಗಿ ಕಾಡಿನ ಮರ ಬೆಂಕಿಗೆ ಆಹುತಿಯಾಗುವಂತೇ ಮಾಡಿದ ಪಾಪಬುದ್ಧಿ ತನ್ನಪ್ಪನ ಹಾಗೂ ತನ್ನ ಸಾವನ್ನು ತಾನೇ ತಂದುಕೊಂಡ.

ಈ ಕಥೆಯಲ್ಲಿ ನೀತಿಯನ್ನು ಹೊಸದಾಗಿ ಹೇಳಬೇಕಿಲ್ಲ. ತಪ್ಪುಮಾಡುವುದು ಮಾನವ ಸಹಜವಾಗಿರಬಹುದು; ಆದರೆ ತಪ್ಪನ್ನೇ ಮಾಡದಂತೇ ಆಧಾರಸಹಿತವಾಗಿ ಆದೇಶ ನೀಡುವುದು ಹಿಂದೂಧರ್ಮ. ಇನ್ಯಾವುದೋ ಧರ್ಮ  ಕಳ್ಳತನ ಮಾಡು-ಆದರೆ ಸಿಕ್ಕಿಬೀಳಬೇಡ ಎಂದೂ ಹೇಳಬಹುದು, ಆದರೆ ಅದು ನಿಜವಾದ ಮಾರ್ಗವಲ್ಲ. ಕಳ್ಳತನ ತರವಲ್ಲ ಎಂದು ತಿಳಿಸುವುವೇ ನಿಜವಾದ ಜೀವನಧರ್ಮ. ಅಂತಹ ಧರ್ಮ ಜಗತ್ತಿನಲ್ಲಿಯೇ ಏಕೈಕ, ಅದು ನಮ್ಮ ಸನಾತನ ಜೀವನಧರ್ಮ ಎಂದು ಹೇಳುತ್ತಾ ಪ್ರಥಮೋಧ್ಯಾಯವನ್ನು ಪೂರೈಸಿದ್ದೇನೆ, ನಮಸ್ಕಾರ.

Wednesday, October 17, 2012

|| ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||


 || ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||

ಕಲ್ಯಾಣಾಯುತ-ಪೂರ್ಣಚಂದ್ರವದನಾಂ ಪ್ರಾಣೇಶ್ವರಾನಂದಿನೀಮ್
ಪೂರ್ಣಾಪೂರ್ಣತರಾಂ ಪರೇಶಮಹಿಷೀಂ ಪೂರ್ಣಾಮೃತಾಸ್ವಾದಿನೀಮ್ |
ಸಂಪೂರ್ಣಾಂ ಪರಮೋತ್ತಮಾಮೃತಕಲಾಂ ವಿದ್ಯಾವತೀಂ ಭಾರತೀಮ್
ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||

ಶಕ್ತಿದೇವತೆಯ ಆರಾಧನೆಗೆ ಶರನ್ನವರಾತ್ರಿ ಪ್ರಶಸ್ತವಾಗಿದೆ; ಶರದೃತುವಿನಲ್ಲಿ ಬರುವುದರಿಂದ ಶರನ್ನವರಾತ್ರಿ ಎಂದು ಹೆಸರು. ಶಾರದೆಯ ಆರಾಧನೆಯೂ ಇರುವುದರಿಂದ ಶಾರದಾ ನವರಾತ್ರಿ ಎಂತಲೂ ಕರೆಯುತ್ತಾರೆ. ಶಾರದೆ ಬ್ರಹ್ಮ ಮಾನಸ ಪುತ್ರಿ; ಆದರೆ ಬ್ರಹ್ಮನ ಮಡದಿ ಕೂಡ ಹೌದು. ಸೃಷ್ಟಿಕರ್ತನೇ ಅವನಾದಮೇಲೆ ಎಲ್ಲರ ಸೃಷ್ಟಿಗೆ ಅವನೇ ಕಾರಣನಲ್ಲವೇ? ಹೀಗಾಗಿ ಆತ ಶಾರದೆಯ ಸೃಷ್ಟಿಕರ್ತನೂ ಹೌದು ಅತ್ತು ಆಕೆಯ ಪತಿಯೂ ಹೌದು.

ಹರಿಯ ಉರವನು ಮೆಟ್ಟಿ ಹ ಿರು ತುಳಿದ
ಸರಸಿಜೋದ್ಭವನ ಮೊಗಗೆಡಿಸಿ ಮೀರಿದಳು
ಹಿರಿಯರಿನ್ನಾರು | ಸರ್ವಜ್ಞ

ಎಂದ ಸರ್ವಜ್ಞ ವಚನದಲ್ಲಿ ಆತ ಹೇಳಿದ್ದು ಮೂರು ರೂಪದಲ್ಲಿ ಕಾಣಿಸಿದ ಸ್ತ್ರೀಯನ್ನು. ಗಂಗೆಯಾಗಿ ಶಿವನ ಜಟೆಯಲ್ಲಿ ನೆಲೆಸಿದರೆ, ಸಿರಿಯಾಗಿ ಹರಿಯ ಹೃದಯದಲ್ಲೇ ನಿಂತಳು, ವಾಣಿಯಾಗಿ-ಜನ್ಮಕೊಟ್ಟ ವಿರಂಚಿಯನ್ನೇ ಮದುವೆಯಾದಳು ಎಂಬುದು ಅರ್ಥ. ಅಪ್ಪನನ್ನೇ ಮಗಳು[ಮಾನಸ ಪುತ್ರಿಯಾದರೂ ಸಹಿತ] ಮದುವೆಯಾಗಿದ್ದರಿಂದ ಬ್ರಹ್ಮದೇವರು ಕೆಲವುಕಾಲ ತಬ್ಬಿಬ್ಬಾಗಿದ್ದೂ ಇದೆ ಎಂದು ಕೇಳಿದ್ದೇನೆ. ಹೀಗಾಗಿ ಸ್ತ್ರೀ   ಅಂದರೇ ಶಕ್ತಿ ಎಂಬುದು ತಿಳಿದುಬರುತ್ತದೆ. ಈ ಕಾಲದಲ್ಲಿ ನಾವು ಅಬಲೆ ಗಿಬಲೆ ಎಂದೆಲ್ಲಾ ಕರೆದರೂ ಹೆಣ್ಣಿಗೆ ಇರುವ ರ್ಢ್ಯತೆ ಗಂಡಿಗೆ ಇಲ್ಲವೆಂಬುದೂ ಕೆಲವೊಮ್ಮೆ ತಿಳಿದುಬರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮರ್ಯಾದೆಯನ್ನೇ ಕೊಡಲಿಲ್ಲ ಎನ್ನುವ ಮಹಿಳೆಯರು ನಮ್ಮಲ್ಲಿನ ನವರಾತ್ರಿಗೆ ಆಗಮಿಸಬೇಕು! ನವರಾತ್ರಿಯಲ್ಲಿ ದಿನಕ್ಕೊಂದು ಶಕ್ತಿ ದೇವತೆಯಂತೇ ನವದುರ್ಗೆಯರ ಆರಾಧನೆ, ಅಷ್ಟಲಕ್ಷ್ಮಿಯರ ಆರಾಧನೆ ಜೊತೆಗೆ ಸರಸ್ವತಿಯ ಆರಾಧನೆ ಜೊತೆಜೊತೆಗೇ ನಡೆಯುತ್ತವೆ. ಸುಹಾಸಿನೀ ಪೂಜೆ ಮತ್ತು ಕುಮಾರಿಕಾ ಅಥವಾ ಕೌಮಾರೀ ಪೂಜೆ ನಮ್ಮ ಪ್ರತಿಯೊಂದೂ ವಿಶೇಷ ಪೂಜೆಗಳ ಒಂದು ಭಾಗ ಎಂಬುದನ್ನೂ ಇಲ್ಲಿ ಮರೆಯುವಂತಿಲ್ಲ. ಸದ್ಗೃಹಿಣಿಯೊಬ್ಬಳು ಮನೆಯಲ್ಲಿ ಶುಚಿರ್ಭೂತಳಾಗಿ ಅಡುಗೆ ತಯಾರಿಸಿ, ತಯಾರಿಸಿ ಭಕ್ಷ್ಯ ಭೋಜ್ಯಗಳನ್ನು ದೇವಿಗೆ ನಿವೇದಿಸಿ, ಅಗ್ರದ[ಕುಡಿಬಾಳೆ]ಎಲೆಯಿಟ್ಟು ಅವುಗಳಲ್ಲಿ ಮುತ್ತೈದೆಯರಿಗೆ ಕುವರಿಯರಿಗೆ ಊಟನೀಡಿ, ಯಥಾನ್ ಶಕ್ತಿ ದಕ್ಷಿಣೆ, ಬಟ್ಟೆ, ಅರಿಶಿನ-ಕುಂಕುಮ-ಬಳೆ-ಹೂವು ಇವೇ ಮೊದಲಾದ ಮಂಗಲ ದ್ರವ್ಯಗಳನ್ನು ಕೊಟ್ಟು ಅವರಲ್ಲೇ ದೇವಿಯ ರೂಪವನ್ನು ಕಾಣುವುದು ನವರಾತ್ರಿಯುದ್ದಕ್ಕೂ ನಡೆಯುವ ವೈಶಿಷ್ಟ್ಯ! -ಇದು ಜಗತ್ತಿನ ಇನ್ನವುದೇ ಮತದಲ್ಲಿ ಕಾಣುವುದಿಲ್ಲ!! 

ಹಾಗೆ ನೋಡಿದರೆ ಒಂದು ಸಂವತ್ಸರದಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ: ೧. ವಸಂತ ನವರಾತ್ರಿ, ೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ, ೩ ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ, ೪. ಪೌಷ ನವರಾತ್ರಿ ಮತ್ತು ೫. ಮಾಘ ನವರಾತ್ರಿ. ಚಿಕ್ಕದಾಗಿ ವಿವರಣೆ ತಿಳಿಯೋಣ:

೧. ವಸಂತ ನವರಾತ್ರಿ: ಇದು ಮಾರ್ಚ್ ಏಪ್ರಿಲ್ ಸಮಯದಲ್ಲಿ ಘಟಿಸುತ್ತದೆ. ಚೈತ್ರಶುದ್ಧ ಪಾಡ್ಯದಿಂದ ನವಮಿಯವರೆಗೆ ನಡೆಯುವ ಈ ನವರಾತ್ರಿ ರಾಮನವಮಿಯನ್ನು ಒಳಗೊಂಡಿರುವುದರಿಂದ ರಾಮನವರಾತ್ರಿ ಎಂತಲೂ ಕರೆಯುತ್ತಾರೆ. ಈ ಕಾಲದಲ್ಲೂ ಕೂಡ ನವ ಶಕ್ತಿಗಳ ಆರಾಧನೆ ನಡೆಯುತ್ತದೆ.

೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ: ಅಷಾಢ ಮಾಸದ ಶುಕ್ಲಪಕ್ಷದ ಪ್ರಿಪಯಿಂದ ನವಮಿಯವರೆಗೆ ದೇವಿಯರ ಆರಾಧನೆ, ವಿಶೇಷವಾಗಿ ಗಾಯತ್ರೀಮಾತೆಯ ಆರಾಧನೆ ಈ ಕಾಲಘಟ್ಟದ ನವರಾತ್ರಿಯದ್ದು.

೩. ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ: ಮೇಲೆ ಹೇಳಿದಹಾಗೇ ಶರನ್ನವರಾತ್ರಿ ಅಥವಾ ಮಹಾನವರಾತ್ರಿ ಎಂತಲೂ ಕರೆಯಲ್ಪಟ್ಟಿದೆ. ದುಷ್ಟ ಶಕ್ತಿಗಳ ನಿಗ್ರಹ ಮತ್ತು ಶಿಷ್ಟರ ಪರಿಪಾಲನೆ ನಡೆದ ನೆನಪಿನಲ್ಲಿ ಈ ಆಚರಣೆ. ಪಾಂಡವರು ಬನ್ನಿ ಮರಕ್ಕೆ ಕಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ಕಾಲ, ಶ್ರೀರಾಮ ರಾವಣನನ್ನು ವಧಿಸಿದ ಕಾಲ, ಕೌರವರನ್ನು ಕೊಂದು ಪಾಂಡವರು ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದ ಕಾಲ ಇದಾಗಿತ್ತು ಎಂಬುದು ಪ್ರಾಗೈತಿಹಾಸದಿಂದ ತಿಳಿದುಬಂದ ವಿಷಯ. ಇಲ್ಲಿ ನವದಿನಗಳಲ್ಲಿ ಯಾವ ಯಾವ ದೇವಿಯರನ್ನು ಆರಾಧಿಸುತ್ತಾರೆ ಸ್ವಲ್ಪ ನೋಡೋಣ:

ಅ> ಪ್ರತಿಪದೆಯ ದಿನ : ಶೈಲಪುತ್ರಿ: ಜಗನ್ಮಾತೆ ಈ ದಿನ ಗಿರಿಜೆಯಾಗಿ ಪೂಜೆ ಸ್ವೀಕರಿಸುತ್ತಾಳೆ.ದುರ್ಗೆಯ ಮೊದಲನೇ ಮುಖ. ಅರ್ಧಚಂದ್ರನನ್ನು ಶಿರದಲ್ಲಿ ಧರಿಸಿ ನಂದಿವಾಹನೆಯಾಗಿ ಬಂದಿದ್ದಳಂತೆ ಜಗತ್ತಿಗೆ ಈ ದಿನ, ಆ ನೆನಪಿನಲ್ಲಿ ಹಾಗೇ ಪೂಜೆ.

ಬ>ಬಿದಿಗೆಯ ದಿನ:  ಬ್ರಹ್ಮಚಾರಿಣಿರೂಪದಲ್ಲಿ ದೇವಿಗೆ ಪೂಜೆ. ದುರ್ಗೆಯ ಎರಡನೇ ಮುಖ, ಕೈಯಲ್ಲಿ ಗುಲಾಬಿ ಹೂಗಳನ್ನೂ ಕಮಂಡಲವನ್ನೂ ಧರಿಸಿದ್ದಳಂತೆ. ಅದೇ ರೀತಿಯಲ್ಲಿ ಧ್ಯಾನಿಸಿ ಪೂಜಿಸಲ್ಪಡುತ್ತಾಳೆ.

ಕ> ತದಿಗೆಯ ದಿನ: ಚಂದ್ರಘಂಟಾ ಎಂಬ ರೂಪದಲ್ಲಿ ದೇವಿಯನ್ನು ದರ್ಶಿಸುತ್ತೇವೆ. ಜಗದ್ಧಾತ್ರಿಯ ಮೂರನೇ ಮುಖ ಇದಾಗಿದ, ಬಹಳ ಕೋಪದಿಂದ ಹೊರಡುತ್ತಾ ಶಿರದಲ್ಲಿ ಅರ್ಧಚಂದ್ರನನ್ನು ಧರಿಸಿ ಹುಲಿಯಮೇಲೆ ಕುಳಿತು, ಚಂದ್ರಘಂಟಾ ಎಂದು ಕರೆಯಲ್ಪಟ್ಟಳಂತೆ-ಅದೇ ರೂಪದಲ್ಲಿ ಪೂಜೆ.

ಡ> ಚತುರ್ಥಿಯ ದಿನ : ಕೂಷ್ಮಾಂಡ ರೂಪಿಣಿಯಾಗಿ ಕಾಣುತ್ತಾಳೆ. ಎರಡು ಕೈಗಳಲ್ಲಿ ರಕ್ತತುಂಬಿದ ಎರಡು ಹೂಜೆಗಳನ್ನು ಹಿಡಿದು ಆರ್ಭಟಿಸುವ ಶಕ್ತಿ ಸೃಷ್ಟಿಯ ಸೃಷ್ಟಿ, ಸ್ಥಿತಿ. ಲಯ ಕರ್ತೆಯಾಗಿ, ಸೂರ್ಯಮಂಡಲವನ್ನು ತನ್ನ ಶಕ್ತಿಯಿಂದ ಸೃಜಿಸಿದಳೆಂಬ ಕಾರಣಕ್ಕಾಗಿ ಆಕೆಯನ್ನು ಅದೇ ರೂಪದಲ್ಲಿ ಆರಾಧಿಸಲಾಗುತ್ತದೆ.

ದ> ಪಂಚಮಿಯ ದಿನ: ಸ್ಕಂದಮಾತಾ ಅಂದರೆ ಕಾರ್ತಿಕೇಯನಿಗೆ ಜನ್ಮವಿತ್ತ ದೇವಿ ಸಿಂಹಾಸನದಮೇಲೆ ಕುಳಿತು  ಕಮಲದ ಹೂಗಳನ್ನು ಧರಿಸಿದ್ದಳಂತೆ-ಅದೇ ರೂಪದಲ್ಲಿ ಈ ದಿನ ಪೂಜೆ.

ನ> ಷಷ್ಠಿಯ ದಿನ :  ಕಾತ್ಯಾಯಣಿಯಾಗಿ ಅಲಂಕಾರಗೊಳ್ಳುತ್ತಾಳೆ.ಕಾತ್ಯ ಋಷಿಯ ಮಗಳಾಗಿ, ಚಂದ್ರಹಾಸವೆಂಬ ಆಯುಧವನ್ನು ಹಿಡಿದು ಸಿಂಹವಾಹನೆಯಾಗಿ ಕಡುಕೋಪದಲ್ಲಿ ವಿಜೃಂಭಿಸಿದ ಶಕ್ತಿ ಕಾತ್ಯಾಯಣಿ. ಈ ದಿನ ಆ ರೂಪದಲ್ಲಿ ಪೂಜೆ.

ಪ> ಸಪ್ತಮಿಯ ದಿನ : ಭಯಂಕರವಾಗಿ ಘರ್ಜಿಸುತ್ತಾ ಬೆಳಕೇ ಕಾಣಿಸದಂತೇ ಕತ್ತಲರೂಪವನ್ನೂ ಕತ್ತಲಲ್ಲೇ ಮಿರುಗುವ ಬಣ್ಣಬಣ್ಣದ ಆಭರಣಗಳನ್ನೂ ಧರಿಸಿದ ದೇವಿ ಕತ್ತೆಯನ್ನೇರಿ ಕಾಣಿಸಿಯೂ ಕಾಣಿಸದಂತಾಗಿ ದುಷ್ಟರನ್ನು ಮಟ್ಟಹಾಕುವ ಕಾಲರಾತ್ರಿಯಾಗಿ ಸಂಹರಿಸಿದ ದಿನವೆಂದು ತಿಳಿಯಲಾಗಿದೆ, ಕಾಲರಾತ್ರಿಯ ಆರಾಧನೆ.

ಫ> ಅಷ್ಟಮಿಯ ದಿನ : ಮಹಾಗೌರಿಯಾಗಿರುತ್ತಾಳೆ. ಷೋಡಶಿಯಾಗಿದ್ದ ಗಿರಿಜೆ ಮಹಾದೇವನ ಮಡದಿಯಾಗುತ್ತಾಳೆ-ಮಹಾದೇವಿ ಮಹಾಗೌರಿ ಎನಿಸುತ್ತಾಳೆ. ಗೌರನ ಅರ್ಧಾಂಗಿ ಶ್ರೀಗೌರಿಯ ಆರಾಧನೆ ಈ ದಿನ ನಡೆಯುತ್ತದೆ.  

ಮ> ನವಮಿಯ ದಿನ : ಸಿದ್ಧಿದಾತ್ರಿ! ಸಿದ್ಧರು, ಯಕ್ಷರು, ಗಂಧರ್ವರು, ಕಿನ್ನರರು, ಕಿಂಪುರುಷರು, ಕೆಲವು ಅಸುರರು, ದೇವತೆಗಳು ಎಲ್ಲರೂ ತಮ್ಮ ತಮ್ಮ ಸಿದ್ಧಿಗಾಗಿ ಪ್ರಾರ್ಥಿಸಿದಾಗ ಸಿದ್ಧಿದಾತ್ರಿಯಾಗಿ ಸಿದ್ಧಿಯನ್ನು ಅನುಗ್ರಹಿಸುವವಳಾಗಿ ಕಾಣಿಸಿಕೊಂಡಳಂತೆ. ಅದಕ್ಕೇ ಈ ದಿನ ಸಿದ್ಧಿದಾತ್ರಿಯ ಆರಾಧನೆ ನಡೆಯುತ್ತದೆ. ದುರ್ಗೆಯನ್ನು ಆಹ್ವಾನಿಸಿ ವಾಹನ, ಯಂತ್ರೋಪಕರಣ, ಆಯುಧಗಳ ಪೂಜೆ ನಡೆಯುತ್ತದೆ.

ಇದಲ್ಲದೇ ಬ್ರಹ್ಮಾಣಿ, ವೈಷ್ಣವಿ, ಮಾಹೇಶ್ವರಿ, ಇಂದ್ರಾಣಿ, ಕೌಮಾರಿ, ವಾರಾಹಿ ಮತ್ತು ಚಾಮುಂಡಾ ಎಂಬ ಅಷ್ಟಮಾತೃಕೆಯರ  ಆರಾಧನೆಯೂ ಸಹ ನಡೆಯುತ್ತದೆ. ಮೂಲಾ ನಕ್ಷತ್ರ ಆರಂಭವಾದ ದಿನ ವಿಗ್ರಹ ರೂಪದಲ್ಲೋ ಯಾ ಪುಸ್ತಕಗಳ ರೂಪದಲ್ಲೋ ಶಾರದೆಯನ್ನು ಸ್ಥಾಪಿಸಲಾಗುತ್ತದೆ. ಅಂದಿನಿಂದ ದಶಮಿಯ ವರೆಗೆ ನಾಲ್ಕು ದಿನಗಳ ಪರ್ಯಂತ ಸರಸ್ವತಿಗೆ ಪೂಜೆ ಸಲ್ಲುತ್ತದೆ. ಅಷ್ಟಮಿ ನವಮಿ ಮತ್ತು ದಶಮಿಗಳಂದು ಮಹಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತೀ ಪೂಜೆ ನಡೆಯುತ್ತದೆ. 

ವಿಜಯದಶಮಿ ವಿಜಯದ ಸಂಕೇತವಂತೆ. ಪಾಂಡವರಿಗೆ ಗೆಲುವುತಂದ ದಿನ, ಶ್ರೀರಾಮನಿಗೆ ಿಜ ದೊರೆತ ದಿನ ಇದೇ ಆಗಿದೆ ಎಂದು ಪ್ರಾಗೈತಿಹಾಸ ಹೇಳುತ್ತದೆ. ವಿಜಯ ದಶಮಿಯಂದು ಶಾರದೆಗೆ ವಿಶೇಷ ಪೂಜೆ ಮಧ್ಯಾಹ್ನದಲ್ಲಿ ಸಲ್ಲಿಸಲ್ಪಟ್ಟು, ಸ್ಥಾಪಿತ ಶಾರದೆಯನ್ನು ಷೋಡಶೋಪಚಾರ ಮಹಾಪೂಜೆಗಳಿಂದ   ಆರಾಧಿಸಿದನಂತರ ಶಾರದಾ ವಿಸರ್ಜನೆ ನಡೆಯುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸದ ಆರಂಭದ ದಿನ ಇದಾಗಿದೆ. ಹಲವು ಜನ ಹೊಸ ಉದ್ಯಮಗಳನ್ನು ಇಂದೇ ಆರಂಭಿಸುತ್ತಾರೆ. ಕೆಲವರು ಅಂಗಡಿಮುಂಗಟ್ಟುಗಳಲ್ಲಿ ಪೂಜೆ ನಡೆಸುತ್ತಾರೆ. ಕರ್ನಾಟಕದಲ್ಲಿ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುತ್ತದೆ. ಶೃಂಗೇರಿ, ಕೊಲ್ಲೂರು ಮೊದಲಾದ ಜಾಗೃತ ದೇವಾಲಯಗಳಲ್ಲಿ ತ್ರಿಗುಣಸ್ವರೂಪೀ ದೇವಿಯ ಆರಾಧನೆ ನಡೆಸಲ್ಪಡುತ್ತದೆ. ಸಂಜೆ ಉತ್ತರಭಾರತದಲ್ಲಿ ರಾವಣದಹನ ಕಾರ್ಯಕ್ರಮ ನಡೆಸಲ್ಪಡುತ್ತದೆ.

ಈಗತ್ತಾಕಿ ಉಳಿದ ನಾತ್ರಿಗನ್ನಿಳಿಯೋಣ: 
 
೪. ಾತ್ರಿ: ಿಸೆಂಬರ್-ಜಿ ಸಂದರ್ಲ್ಲಿ ುಗುವಾತ್ರಿ ಇದು. ಮತ್ತೆ ದೇವಿಯ ಆರೆ. ಪಷ್ಯಾಸ ುಕ್ಲ ಪ್ರಿಪತ್ ನಿಂದಿಯೆಗೆ ಜುವ ಅಮ್ಮ ಆರೆ.

೫. ಮಾತ್ರಿ :  ಾಸ ುಕ್ಲ ಾಡ್ಯಿಂದ ಿಯೆಗೆ ಜುವ  ಂಬೆಯ ಆರೆ. ಸಾನ್ಯಾಗಿ ಜಿ ತಿಂಗೊನೆ ಅಬ್ರಿ ತಿಂಗಲ್ಲಿ ಬುತ್ತ
 
[ಈ ಎಲ್ಲಾ ನವರಾತ್ರಿಗಳನ್ನೂ ಅಖಂಡ ಭರತವರ್ಷದ ರಾಜರುಗಳು ನಡೆಸುತ್ತಿದ್ದರು. ದೇವರನ್ನು ಅಮ್ಮನ ರೂಪದಲ್ಲಿ ಕಂಡರೆ ಸ್ವಂತ ಅಮ್ಮನನ್ನು ಕಂದಷ್ಟೇ ತೃಪ್ತಿ-ತಮ್ಮ ನೋವು-ನಲಿವುಗಳನ್ನು ಹಡೆದಮ್ಮನಲ್ಲಿ ಹೇಳಿಕೊಂಡ ಹಾಗೇ ಜಗದಮ್ಮನಲ್ಲಿ ಹೇಳಿಕೊಳ್ಳುತ್ತಿದ್ದರು. ಕಾಲಾನಂತರ ಅಧುನಿಕ ಜೀವನದ ಭರದಲ್ಲಿ, ರಾಜರುಗಳ ಆಳ್ವಿಕೆ ಅಳಿದಮೇಲೆ ಈಗ ಶಾರದಾ ನವರಾತ್ರಿ ಮಾತ್ರ ಪ್ರಮುಖವಾಗಿ ಆಚರಣೆಯಲ್ಲಿದೆ. ಉತ್ತರಭಾರತದಲ್ಲಿ ಬಹಳ ಕಡೆ ವಸಂತ ನವರಾತ್ರಿಯನ್ನೂ ಆಚರಿಸುತ್ತಾರೆ. ]

ಇಂತೀಪರಿಯಲ್ಲಿ ನವರಾತ್ರಿಯ ಮಹತ್ವವನ್ನು ಸ್ಥೂಲವಾಗಿ ತಿಳಿದಿದ್ದೀರಿ. ಮಧು-ಕೈಟಭರನ್ನೂ, ಶುಂಭ-ನಿಶುಂಭರನ್ನೂ, ಸುಂದೋಪಸುಂದರನ್ನೂ ದೇವಿ ಹನನ ಮಾಡುತ್ತಾಳೆ. ಮೂಕಾಸುರನನ್ನೂ ಮಹಿಷಾಸುರನನ್ನೂ ದೇವಿ ಕೊಲ್ಲುತ್ತಾಳೆ. ತ್ರಿಮೂರ್ತಿಗಳ ಮಡದಿಯರಾಗಿ ಕಾಣುವ ದೇವಿ,  ದೇವಿ ಮಹಾತ್ಮೆಯಲ್ಲಿ ತಾನೇ ಎಲ್ಲದಕ್ಕೂ ಆಧಾರ ಎಂಬುದನ್ನು ಎತ್ತಿ ತಿಳಿಸಿದ್ದಾಳೆ. ಅಪ್ಪ ಇದ್ದಮೇಲೆ ಅಮ್ಮ ಇರಲೇಬೇಕಲ್ಲಾ? ಇಲ್ಲದಿದ್ದರೆ ಅಪ್ಪನನ್ನು ಅಪ್ಪನೆನ್ನಲು ಸಾಧ್ಯವೇ? ಋಷಿಗಳ ಕಾಲದಲ್ಲಿ ಅದು ಸಾಧ್ಯವಾಗಿರಬಹುದಾದರೂ ಮೂಲದಲ್ಲಿ ಋಷಿಗಳಿಗೂ ಒಬ್ಬ ಅಮ್ಮ ಇರಲೇಬೇಕಲ್ಲಾ? ಅಪ್ಪ-ಅಮ್ಮ ಎರಡೂ ಒಂದೇ ಶಕ್ತಿಯ ಎರಡು ಮುಖಗಳಾದರೂ ಎರಡೂ ಮುಖಗಳನ್ನು ತಿಳಿದುಕೊಳ್ಳಬೇಕಾದುದು, ಒಪ್ಪಿಕೊಳ್ಳಬೇಕಾದುದು, ಆರಾಧಿಸಬೇಕಾದುದು ನಮ್ಮ ಧರ್ಮ. ನಾಣ್ಯಕ್ಕೆ ಹೇಗೆ ಎರಡು ಮುಖವೋ, ಸಂಸಾರಕ್ಕೆ ಹೇಗೆ ಗಂಡ-ಹೆಂಡಿರೋ ಹಾಗೇ ಪ್ರಕೃತಿ-ಪುರುಷರ ಪರೋಕ್ಷ ಆರಾಧನೆಯಲ್ಲಿ ನವರಾತ್ರಿ ಪ್ರಕೃತಿ ಆರಾಧನೆ ಅರ್ಥಾತ್ ಸ್ತ್ರೀ ರೂಪದ ಆರಾಧನೆಗೆ ಮೀಸಲಾಗಿದೆ.   

ಸರ್ವರಿಗೂ ಶರನ್ನವರಾತ್ರಿಯ ಹಾರ್ದಿಕ ಶುಭಾಶಯಗಳು. ದೇವಿ ಸಕಲ ಸಮೃದ್ಧಿಯನ್ನೂ ಇತ್ತು ಪೊರೆಯಲಿ ಎಂದು ಹಾಸುತ್ತೇನೆ. ಜಗವನ್ನು ಹೊತ್ತು, ಜಗವನ್ನು ಹೆತ್ತು, ಹೆತ್ತಜಗವನ್ನೇ ಮತ್ತೆ ಹೊತ್ತು ಮುನ್ನಡೆಸುವ, ಆ ನಡೆಯಲ್ಲೇ ಆನಂದವನ್ನು ಅನುಭವಿಸುವ ಅದಿಪರಾಶಕ್ತಿಗೆ ನಮ್ಮ ನಮನಗಳನ್ನು ಹೀಗೆ ಹೇಳೋಣ:

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ|
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೆ || 

Tuesday, October 16, 2012

ಶರನ್ನವರಾತ್ರಿಯ ಪ್ರಾರ್ಥನೆ

ಚಿತ್ರಕೃಪೆ : ಹರೇರಾಮ.ಇನ್ [hareraama.in]
ಶರನ್ನವರಾತ್ರಿಯ ಪ್ರಾರ್ಥನೆ

ಜಗನಾಳುವ ಶಕ್ತಿ ಮೊಗೆದು ತನ್ನನು ತೋರಿ
ಬಗೆಬಗೆಯ ರೂಪದಲಿ ಬರಲು ನಗೆ ಬೀರಿ
ಅಗರು ಕಸ್ತೂರಿ ಸಿರಿಗಂಧ ಪುಷ್ಪಗಳಿಟ್ಟು
ಮುಗುದ ಮನದಲಿ ನಮಿಸಿ ಸ್ವಾಗತವ ಕೋರಿ

ತೆಗೆದು ಮುಗಿಯದ ಗುಪ್ತ ಶಕ್ತಿಯಾಗರ ಗಹನ
ನಗದು ರಾಮನಲೊಮ್ಮೆ ಅಂಬೆ ಕಾಳಿಯಲಿ
ನಗರದೇವತೆಯಾಗಿ ಸಡಗರದಿ ನೆಲೆನಿಂದು
ಖಗವಾಹನನ ಮಡದಿ ಶಿವೆಯು ಸರಸತಿಯು !

ಮೊಗೆಯಲಿಡುವೆವು ಧೂಪ ಚಿನ್ನದಾರತಿ ಬೆಳಗಿ
ಸೊಗದ ಸಿರಿಯದು ಲಭಿಸೆ ನಿನ್ನ ಧ್ಯಾನಿಪೆವು
ನೊಗವ ಹೊತ್ತಿವೆವಿಲ್ಲಿ ನಿನ್ನ ಈ ನೆಲದಲ್ಲಿ
ಜಗದಂಬೆ ಶಕ್ತಿಕೊಡು ಶಕ್ತಿರೂಪಿಣಿಯೇ

ಮೊಗದ ಚೆಲುವನು ಕಂಡು ಮರೆತೆವೀ ಭಾರವನು
ಮಗುದೊಮ್ಮೆ ನವರಾತ್ರಿ ನವದಿನದ ಪೂಜೆ
ಮಿಗಿಲು ಮಾತೆಯ ಪ್ರೀತಿ ಅದನು ಹರಿಸುವ ರೀತಿ
ಮಗುವೆಂಬ ಮಮತೆಯಲಿ ಸಲಹು ಎಲ್ಲರನು 

ಸಗರ ಸಂತತಿಗಲ್ಲಿ ಗಂಗೆಯಾಗುತ ಹರಿದೆ
ಚಿಗರೆಕಂಗಳ ಸೊಬಗ ಶಿರಸಿ ಮಾರಿಕೆಯೇ
ಅಗಲವಿಸ್ತಾರಗಳ ಹರಹು ಬಲ್ಲವರಾರು ?
ತೊಗಲುಗೊಂಬೆಗಳಮ್ಮ ನಿನ್ನ ಮಕ್ಕಳಿವು ! 

Wednesday, October 10, 2012

ಅಚಲ ನಿರ್ಧಾರದ ತಾಕತ್ತು-ಸಾವಿಗೇ ಸವಾಲೊಡ್ಡಿ ನಿಂತು ಗೆಜ್ಜೆ ಕಟ್ಟಿ ಕುಣಿವ ಕರಾಮತ್ತು !

 ಚಿತ್ರಗಳ ಋಣ : ಅಂತರ್ಜಾಲ
ಅಚಲ ನಿರ್ಧಾರದ ತಾಕತ್ತು-ಸಾವಿಗೇ ಸವಾಲೊಡ್ಡಿ ನಿಂತು ಗೆಜ್ಜೆ ಕಟ್ಟಿ ಕುಣಿವ ಕರಾಮತ್ತು !  

ಇದೊಂದು ನೈಜ ಘಟನೆ. ಅದೊಂದು ಹಳ್ಳಿ, ಅಲ್ಲೊಂದು ಶಾಲೆ. ವಿಪರೀತ ಚಳಿಯ ವಾತಾವರಣದಲ್ಲಿ ಶಾಲೆಯಲ್ಲಿ ಚಳಿ ಓಡಿಸಲು ನಿತ್ಯ ಬೆಳಿಗ್ಗೆ ಬೊಡ್ಡೆ ಅಥವಾ ಚರಿಗೆ ಯಾನೇ ಗಡಿಗೆ ಆಕಾರದ ಕಲ್ಲಿದ್ದಲ ಒಲೆಯನ್ನು ಉರಿಸಬೇಕಾಗಿತ್ತು. ಚಿಕ್ಕ ಹುಡುಗನೊಬ್ಬ ಬೇಗನೇ ಎದ್ದು, ಶಿಕ್ಷಕರುಗಳೂ ಮತ್ತು ಸಹಪಾಠಿಗಳೂ ಬರುವುದರೊಳಗೇ ಶಾಲೆಗೆ ಬಂದು ಆ ಕೆಲಸವನ್ನು ನಿಭಾಯಿಸುತ್ತಿದ್ದ. ಹೀಗೇ ಒಂದು ಬೆಳಿಗ್ಗೆ ಅವರೆಲ್ಲಾ ಬರುವ ಹೊತ್ತಿಗೆ ಶಾಲೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುವುದರಲ್ಲಿತ್ತು. ಬೆಂಕಿಯಲ್ಲಿ ಬೇಯುತ್ತಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹುಡುಗನನ್ನು ಹೊರಗೆ ಎಳೆದುಕೊಂಡು ಬಂದು ನೋಡುತ್ತಾರೆ ದೇಹದ ಕೆಳಭಾಗ ಪೂರ್ಣವೇ ಎಂಬಷ್ಟು ಸುಟ್ಟುಹೋಗಿದೆ. ತಕ್ಷಣವೇ ಅವನನ್ನು ಹತ್ತಿರದ ಚಿಕ್ಕ ಆಸ್ಪತ್ರೆಗೆ ಸಾಗಿಸುತ್ತಾರೆ. ಹಾಸಿಗೆಯಲ್ಲಿ ಅರೆಜೀವವಾಗಿ ಬಿದ್ದುಕೊಂಡಿದ್ದಾಗಲೇ ವೈದ್ಯರು ತನ್ನಮ್ಮನಲ್ಲಿ ಮಾತನಾಡಿದ್ದನ್ನು ಹುಡುಗ ಕೇಳಿಸಿಕೊಳ್ಳುತ್ತಾನೆ! ಶರೀರದ ಬಹಳ ಭಾಗ ಸುಟ್ಟುಹೋಗಿರುವುದರಿಂದ ಆತ ಸತ್ತುಹೋದರೇ ಒಳ್ಳೆಯದು, ಬದುಕಿದ್ದರೂ ಆತ ಸರಿಯಾಗಿ ಜೀವಿಸಲಾರ ಎಂಬ ಅಭಿಪ್ರಾಯವನ್ನು ವೈದ್ಯರು ಆತನ ತಾಯಿಗೆ ತಿಳಿಸುತ್ತಿರುವುದು ಗೊತ್ತಾಗುತ್ತದೆ.

ಆದರೆ ಆ ಹುಡುಗ ಸಾಯಲು ಸಿದ್ಧನಿರಲಿಲ್ಲ! ತಾನು ಬದುಕಿಯೇ ಬದುಕುತ್ತೇನೆ ಎಂದು ಆತ ತನ್ನೊಳಗೇ ನಿರ್ಧರಿಸುತ್ತಾನೆ. ವೈದ್ಯರಿಗೇ ಪರಮಾಶ್ಚರ್ಯ-ಆತ ಬದುಕಿ ಉಳಿಯುತ್ತಾನೆ! ಆದರೂ ಮತ್ತೆ ವೈದ್ಯರ ಮಾತು ಕೇಳಿಸುತ್ತದೆ ಏನೆಂದರೆ ದೇಹದ ಕೆಳಭಾಗದ ಮಾಂಸಖಂಡಗಳು ಸುಟ್ಟು ಕರಕಲಾಗಿರುವುದರಿಂದ ಆತ ಸಾಯುವುದೇ ಒಳ್ಳೆಯದಿತ್ತು, ಬದುಕಿದ್ದರೂ ಜೀವನಪೂರ್ತಿ ಆತ ಏನೂ ಮಾಡಲಾರದವನಾಗಿ ಪರಾವಲಂಬಿಯಾಗಿ ಬದುಕಬೇಕಾಗುತ್ತದೆ ಎಂಬುದಾಗಿ ಆತನ ಅಮ್ಮನಲ್ಲಿ ಹೇಳಿದರು. ಹೇಗೂ ಬದುಕುಳಿದಿದ್ದೇನೆ ಎಂಬುದು ಖಾತ್ರಿಯಾಗುತ್ತಿದಂತೆಯೇ ಹುಡುಗ ಮನದಲ್ಲೇ ನಿರ್ಧರಿಸುತ್ತಾನೆ: ತಾನೆಂದೂ ನಡೆಯಲಾಗದಂಥಾ ವ್ಯಕ್ತಿಯಾಗಿ, ಪರಾವಲಂಬಿಯಾಗಿ ಇರುವುದಿಲ್ಲ! ಆದರೆ ದುರ್ದೈವವಶಾತ್ ಆ ಕ್ಷಣದಲ್ಲಿ ಆತನಲ್ಲಿ ಸೊಂಟದ ಕೆಳಗಿನ ಅಂಗಾಂಗಗಳು ಕೆಲಸಮಾಡುತ್ತಿರಲಿಲ್ಲ. ಆತನ ತೆಳುವಾದ ಕಾಲುಗಳು ಅಶಕ್ತವಾಗಿ ನೇತಾಡುತ್ತಿದ್ದವು. ಅಂತೂ ಹಾಗೂ ಹೀಗೂ ಗಾಯವಾಸಿಯಾದಮೇಲೆ ಆತನನ್ನು ವೈದ್ಯರು ಮನೆಗೆ ಕಳಿಸಿಕೊಟ್ಟರು. ಆದರೆ ಆ ಕಾಲುಗಳ ಮೇಲೆ ಹುಡುಗನಿಗೆ ಯವುದೇ ಹಿಡಿತವಾಗಲೀ, ಸ್ಪರ್ಶಜ್ಞಾನವಾಗಲೀ ಇರಲೇ ಇಲ್ಲ. ಆತನ ಅಮ್ಮ ಪ್ರತಿದಿನ ಆತನ ಕಾಲುಗಳನ್ನು ಒತ್ತಿ ಮಸಾಜ್ ಮಾಡಿಕೊಡುತ್ತಿದ್ದಳು. ಪ್ರೀತಿಯಿಂದ ಮಗನನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿಡುತ್ತಿದ್ದಳು. 

ತಾನು ಗಾಲಿ ಕುರ್ಚಿಯಲ್ಲಿ ಕೂತು ಬದುಕುವುದಿಲ್ಲ, ತಾನು ನಡೆಯಲೇ ಬೇಕು ಎಂದು ಹುಡುಗ ನಿರ್ಧರಿಸಿದ. ಒಂದು ಭಾನುವಾರ ಎಂದಿನಂತೇ ಗಾಲಿಕುರ್ಚಿಯಲ್ಲಿ ಮಗನನ್ನು ಕೂರಿಸಿ ಎಳೆಬಿಸಿಲಲ್ಲಿ ತಾಜಾ ಹವೆಯ ಸೇವನೆಗೆ ಅಂತ ಹಾಗೇ ಹೊರಗೆ ಅಂಗಳದಲ್ಲಿ ಬಿಟ್ಟು ಆತನ ಅಮ್ಮ ಅಲ್ಲೆಲ್ಲೋ ಕೆಲಸಕ್ಕೆ ತೆರಳಿದ್ದಳು. ನಿಧಾನವಾಗಿ ಪಕ್ಕದಲ್ಲಿರುವ ಬೇಲಿಯ ಕಡೆಗೆ ಗಾಲಿಕುರ್ಚಿ ಓಡಿಸಿಕೊಂಡು, ಬೇಲಿಯ ಗೂಟವನ್ನು ಹಿಡಿದು ಮೇಲೆದ್ದುನಿಂತ ಆ ಹುಡುಗ! ಹಾಗೇ ನಿಧಾನವಾಗಿ ಕುರ್ಚಿಯಿಂದಿಳಿದು ಒಂದೊಂದೇ ಗೂಟವನ್ನು ಹಿಡಿಯುತ್ತಾ ಶರೀರವನ್ನು ಎಳೆದುಕೊಂಡು ಕದಲಲು ಪ್ರಯತ್ನಿಸಿದ!! ಈ ಕೆಲಸವನ್ನು ಆತ ಪ್ರತಿನಿತ್ಯ ಮುಂದುವರಿಸಿದ. ಅದನ್ನು ಕಂಡ ಅಮ್ಮ ಆತನಿಗಾಗಿ ಬೇಲಿಯುದ್ದಕ್ಕೂ ನುಣುಪಾದ ನೆಲಹಾಸನ್ನು ಹಾಕಿಸಿಕೊಟ್ಟಳು. ಹೇಗಾದರೂ ಮಾಡಿ ತ್ರಾಣವಿಲ್ಲದ ತನ್ನ ಕಾಲುಗಳಲ್ಲಿ ಚೈತನ್ಯ ತುಂಬಿಸುವುದು ಆತನ ಇಚ್ಛೆಯಾಗಿತ್ತು, ನಿರ್ಧಾರವಾಗಿತ್ತು. ಪ್ರತಿನಿತ್ಯದ ಮಸಾಜು [ನೀವುವಿಕೆ] ಮತ್ತು ಅವಿರತ ಪ್ರಯತ್ನದಿಂದ ಒಂದುದಿನ ಆತ ಯಾವುದೇ ಸಹಾಯವಿಲ್ಲದೇ ಎದ್ದುನಿಂತ! ನಿಂತವನು ನಿಧಾನವಾಗಿ ಹೆಜ್ಜೆ ಎತ್ತಿಡಲು ಯತ್ನಿಸಿದ. ಹೆಜ್ಜೆ ಎತ್ತಿಡಲು ಮುಂದಾದ ಅವನು ನಿಧಾನವಾಗಿ ನಡೆಯಲು ಯತ್ನಿಸಿದ. ನಂತರ ಜೋರಾಗಿ ನಡೆಯಲು ಯತ್ನಿಸಿದ, ತದನಂತರ ಓಡಲು ಯತ್ನಿಸಿದ. ಮೊದಲಿದ್ದ ಕಾಲುಗಳು ಇಲ್ಲವಾಗಿದ್ದವು; ಹೆಸರಿಗೆ ಮಾತ್ರ ಇರುವ ಕಾಲುಗಳಲ್ಲಿ ಮತ್ತೆ ತ್ರಾಣ ಕಂಡಿತ್ತು, ಕಾಲುಗಳು ಮಾತುಕೇಳುತ್ತಿದ್ದವು-ಹಿಡಿತ ತಕ್ಕಮಟ್ಟಿಗೆ ಸಿಕ್ಕಿತ್ತು. ಹುಡುಗ ಮತ್ತೆ ಶಾಲೆಗೆ ನಡೆದ, ನಂತರ ಶಾಲೆಗೆ ಓಡಿದ. ಶಾಲೆಯಲ್ಲಿ ತನ್ನದೇ ಮುಖಂಡತ್ವದಲ್ಲಿ ಟ್ರಾಕ್ ತಂಡ ಕಟ್ಟಿಕೊಂಡು ಓಡಲು ಆರಂಭಿಸಿದ!

ಯಾವ ಹುಡುಗ ಬದುಕುವುದೇ ಇಲ್ಲಾ ಎಂದು ವೈದ್ಯರು ಭಾವಿಸಿದ್ದರೋ, ಯಾವ ಹುಡುಗ ಬದುಕಿದರೂ ಇನ್ನೊಬ್ಬರಿಗೆ ಭಾರ ಎಂದು ವೈದ್ಯರು ಬಗೆದಿದ್ದರೋ, ಯಾವ ಹುಡುಗ ಓಡುವುದಂತೂ ಕನಸಿನ ಮಾತು ಎಂದು ಮತ್ತೆ ಹೇಳಿದ್ದರೋ,  ಕಾಲಾನಂತರದಲ್ಲಿ, ಮೆಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಆ ಹುಡುಗ ಜಗತ್ತಿನಲ್ಲೇ ವೇಗದ ಓಟದಲ್ಲಿ ಮೊದಲಿಗನೆಂಬ ದಾಖಲೆ ಸೃಷ್ಟಿಸಿದ; ಆ ಹುಡುಗನೇ ಡಾ| ಗ್ಲೆನ್ ಕನ್ನಿಂಗ್ ಹಾಮ್. ೧೬ ಜೂನ್ ೧೯೩೪ರಂದು ೪:೦೬.೮ ನಿಮಿಷಗಳಲ್ಲಿ ಮೈಲು ದೂರ ಓಡಿಮುಗಿಸಿ ಹಿಂದಿನ ವಿಶ್ವದಾಖಲೆಯನ್ನು ಮುರಿದವರು ಈ ಗ್ಲೆನ್ ಕನ್ನಿಂಗ್ ಹಾಮ್.

ಇಂತಹ ಅನೇಕರು ಭಾರತದಲ್ಲೂ ಇದ್ದಾರೆ, ಅಜ್ಞಾತವಾಗಿದ್ದಾರೆ-ಪ್ರಚಾರಕ್ಕೆ ಬಂದಿಲ್ಲ. ಅಲ್ಲಲ್ಲಿ ನಮಗೆ ಕೆಲವು ವ್ಯಕ್ತಿಗಳ ಮಾಹಿತಿ ಸಿಗುತ್ತದೆ. ಬದುಕು ಹಲವು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುವುದು ನಿರೀಕ್ಷಿತವೇ! ಯಾರ ಬದುಕು ಯಾವಾಗ ಹೇಗೆ ತಿರುಗುತ್ತದೆ ಎಂಬುದರ ಬಗ್ಗೆ ಮಾತ್ರ ಖಚಿತತೆ ಯಾರಲ್ಲೂ ಇರುವುದಿಲ್ಲ. ಆದರೂ ಭಗವಂತ ಕೊಟ್ಟ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವತ್ತ ನಾವು ಮುನ್ನಡೆಯಬೇಕು. ಹಾಗೆ ಮುನ್ನಡೆಯುವಾಗ ಅಚಲವಾದ, ದೃಢವಾದ ನಿರ್ಧಾರ ಬೇಕೇಬೇಕು. ನೆಪೋಲಿಯನ್ ಹಿಲ್ ಎಂಬಾತ ಬರೆದ ’ ಥಿಂಕ್ ಅಂಡ್ ಗ್ರೋ ರಿಚ್ ’ ಎಂಬ ಪುಸ್ತಕದ ಬಗ್ಗೆ ಬಹಳ ಹಿಂದೊಮ್ಮೆ ಹೇಳಿದ್ದೆ.  ಅದರಲ್ಲಿ ಲೇಖಕ ಸ್ವಾನುಭವವನ್ನು ಹಂಚಿಕೊಂಡಿದ್ದಾನೆ. ೫೦೦ ಕ್ಕೂ ಅಧಿಕ ಖ್ಯಾತನಾಮರನ್ನು ಸಂದರ್ಶಿಸಿ, ಅವರ ಯಶಸ್ಸಿನ ಹಿಂದೆ ಇರುವ ಸಾಹಸಗಾಥೆಯನ್ನು ಹುಡುಕಿದ್ದಾನೆ. ಆ ಮೂಲಕ ನ್ಯಾಯವಾಗಿ ಸಿರಿವಂತಿಕೆಯನ್ನು ಪಡೆಯಲು ಕೆಲವು ಮೂಲಭೂತ ಅಂಶಗಳನ್ನು ಆತ ಯಾದಿಮಾಡಿದ್ದಾನೆ:

೧. ಉತ್ಕಟ ಮನೋಭಿಲಾಷೆ

೨. ನಂಬಿಕೆ

೩. ಸ್ವಯಂ ಸಲಹೆ

೪. ಯಾವುದಾದರೊಂದರಲ್ಲಿ ವಿಶೇಷ ಪರಿಣತಿ

೫. ದೂರದರ್ಶಿತ್ವ

೬. ವ್ಯವಸ್ಥಿತ ಕಾರ್ಯಯೋಜನೆಗಳು

೭. ನಿರ್ಧಾರ

೮. ತಾಳ್ಮೆ

೯. ಮನೋದಾರ್ಢ್ಯತೆ

೧೦. ಲೈಂಗಿಕ ಕಾಮದ ದಾಹವನ್ನು ಪರಿವರ್ತಿಸಿ ಬೇರೇ ಉತ್ತಮ ಕೆಲಸಗಳಿಗೆ ಬಳಸಿಕೊಳ್ಳುವಿಕೆ

೧೧. ಸುಪ್ತ ಮನಸ್ಸಿನಲ್ಲಿ ನಿಲ್ಲಿಸಿಕೊಳ್ಳುವ ಸ್ತಬ್ಧ ಚಿತ್ರಗಳು

೧೨. ಸಕ್ರಿಯ ಮೆದುಳು

೧೩. ಸಿಕ್ತ ಸೆನ್ಸ್ ಅಥವಾ ಮುಂದೆ ಹೀಗೇ ಆಗುತ್ತದೆ ಎಂಬ ಯಾವುದೋ ಅನಿಸಿಕೆ, ವಿಶಿಷ್ಟ ದೂರಗ್ರಾಹಿತ್ವ. 

ಈ ಅಂಶಗಳಲ್ಲಿಯೂ ನಿರ್ಧಾರ ಎಂಬುದನ್ನು ಕಾಣುತ್ತೀರಿ. ಇದೂ ಅಲ್ಲದೇ ಹದಿನಾರು ನೀತಿಗಳನ್ನು ಹದಿನಾರು ಕಥೆಗಳ ರೂಪದಲ್ಲಿ ಲೇಖಕ ಬರೆದಿದ್ದಾನೆ. ಭಾರತವೂ ಕಮ್ಮಿಯೇನಿಲ್ಲ, ಚಾಣಕ್ಯನ ಅರ್ಥಶಾಸ್ತ್ರ ಇವೆಲ್ಲವುಗಳನ್ನೂ ಒಡಗೊಂಡೇ ಇದೆ; ಆದರೆ ನಮಗೆ ಹಿತ್ತಲಗಿಡ ಮದ್ದಲ್ಲವಲ್ಲಾ ? ಒಬ್ಬ ಚಾಣಕ್ಯ, ಮಹರ್ಷಿ ವಿದ್ಯಾರಣ್ಯ ಇವರೆಲ್ಲಾ ಏನೂ ಇಲ್ಲದವರಲ್ಲಿ ಶಕ್ತಿಯನ್ನು ಪ್ರಚುರಗೊಳಿಸಿ ಸಾಮ್ರಾಜ್ಯ ಸ್ಥಾಪಿಸಿದವರು! || ಕ್ಷಣಶಃ ಕ್ಷಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್ || --ಎಂದಿದ್ದಾರೆ ಆದಿ ಶಂಕರರು. ವಿದ್ಯಾರ್ಜನೆ ಮತ್ತು ಧನಾರ್ಜನೆ ಎರಡಕ್ಕೂ ಕ್ಷಣ ಕ್ಷಣಕ್ಕೂ ಸಾಧನೆ ನಡೆಯುತ್ತಲೇ ಇರಬೇಕಂತೆ, ಆದರೆ ಆ ಸಾಧನೆ ನೀತಿಯುತವಾದ ಮಾರ್ಗದಲ್ಲಿರಬೇಕು ಎಂಬುದನ್ನು ಮರೆಯುವಂತಿಲ್ಲ. ನಮಗೆ ಹಣ ಬೇಕೆಂದು, ಯಶಸ್ಸು ಬೇಕೆಂದು ಯಾರಿಗೋ ಮೋಸಮಾಡುವುದು, ತಲೆ ಹೊಡೆದು ಅಪಹರಿಸುವುದು, ಹೆದರಿಸಿ/ಬೆದರಿಸಿ ಕಿತ್ತುಕೊಳ್ಳುವುದು, ಕಳ್ಳತನ-ಲೂಟಿ, ದರೋಡೆ ಮುಂತಾದವುಗಳಿಂದ ಸ್ವಾಧೀನ ಪಡಿಸಿಕೊಳ್ಳುವುದು ನಿಜವಾದ ಸಿರಿವಂತಿಕೆಯಲ್ಲ; ಹೀಗೆ ಬಂದಿದ್ದು ಶಾಶ್ವತವೂ ಅಲ್ಲ.   

ನನ್ನ ಓದಿನ ವ್ಯಾಪ್ತಿಗೆ ನಿಲುಕಿದ ಇನ್ನೂ ಕೆಲವು ಅಂಶಗಳನ್ನು ತಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ:

* Experience has proven that the best-educated people are often those who are known as "self-made," or selfeducated. It takes more than a college degree to make one a person of education. Any person who is educated is one who has learned to get whatever he wants in life without violating the rights of others. Education consists, not so much of knowledge, but of knowledge effectively and persistently APPLIED. Men are paid, not merely for what they know, but more particularly for WHAT THEY DO WITH THAT...?

* The whole course of things goes to teach us faith. We need only obey. There is guidance for each of us, and by lowly listening we shall hear the right word.?

* If you think you are outclassed, you are You've got to think high to rise. You've got to be sure of yourself before You can ever win the prize. Life's battles don't always go To the stronger or faster man. But sooner or later, the man who wins Is the man who thinks he can?

* The greatest achievement was at first and for a time a dream. The oak sleeps in the acorn; the bird waits in the egg; and in the highest vision of the soul a waking angel stirs. Dreams are the seedlings of realities.?

* I trust I have .long since made my peace with the King of kings. No personal consideration shall induce me to abandon the righteous cause of my country. Tell governor Gage, it is the advice of Samuel Adams to him, no longer to insult the feelings of an exasperated people.?

* When Henley wrote the prophetic lines, "I am the Master of my Fate, I am the Captain of my Soul," he should have informed us that we are the Masters of our Fate, the Captains of our Souls, because we have the power to control our thoughts. He should have told us that...?

* Do not wait. The time will never be "just right." Start where you stand, and work with whatever tools you may have at your command, and better tools will be found as you go along.?

* Why then do we longer delay, why still deliberate ? Let this most happy day give birth to the American republic. Let her arise, not to devastate and conquer, but to reestablish the reign of peace and of the laws. The eyes of Europe are fixed upon us ; she demands of...?

* No two minds ever come together without, thereby, creating a third, invisible, intangible force which may be likened to a third mind.?


ಸಿರಿವಂತಿಕೆ ತಮ್ಮ ಮಗಳ ಬಾಳಿನಲ್ಲಿರಲಿ ಎಂಬ ಅನಿಸಿಕೆಯಿಂದ, ಒತ್ತಾಯ ಪೂರ್ವಕವಾಗಿ, ತಂದೆಯ ವಯಸ್ಸಿನ ಗಂಡಿಗೆ ಮಗಳನ್ನು ಕೊಟ್ಟು ಈಗ ಕಳೆದುಕೊಂಡ ಘಟನೆ ನಿನ್ನೆ ವರದಿಯಾಗಿದೆ. ನಟಿ, ನಿರೂಪಕಿಯಾಗಿ ಕೆಲಸಮಾಡಿಕೊಂಡಿದ್ದ ಹೇಮಶ್ರೀ ಎಂಬಾಕೆ ಇಹಲೋಕ ತೊರೆದುಹೋಗಿದ್ದಾಳೆ; ಅದು ಕೊಲೆಯೇ ಎಂಬುದರಲ್ಲಿ ಅನುಮಾನವೇ ಇಲ್ಲ. ರೂಪವತಿಯನ್ನು ತನಗೆ ಬೇಕಾದಹಾಗೇ ಬಳಸಿಕೊಳ್ಳಲು ರಾಜಕೀಯದ ಒತ್ತಡ ಬೀರಿದ ವ್ಯಕ್ತಿ ಈಗ ಬಾಯಿ ಬಿಡಬೇಕಾಗಿದೆ. ಇಲ್ಲಿ ಹೇಮಶ್ರೀ ತೆಗೆದುಕೊಂಡ ನಿರ್ಧಾರ ತಪ್ಪಿದೆ. ಯಾರದೋ ಬಲವಂತಕ್ಕೆ ಮಣಿದು, ಅಪ್ಪ-ಅಮ್ಮ ಒತ್ತಾಯಿಸುತ್ತಾರೆ ಎಂಬ ಕಾರಣಕ್ಕಾಗಿ ತನ್ನ ಜೀವನವನ್ನು ಆಕೆ ಕಳೆದುಕೊಂಡಳು. ಹೀಗೆ ಮಾಡುವಾಗ ಮನೆಜನರ ಗೌರವಕ್ಕಾಗಿ ತಾನು ಹಾಗೆ ಒಪ್ಪಿದೆನೆಂಬ ಧರ್ಮಸಂಕಟವನ್ನು ಆಕೆ ಹೇಳಿಕೊಂಡಿದ್ದಾಳೆ. ಹಾಗೆ ನಿರ್ಧಾರಕ್ಕೆ ಬರುವ ಮೊದಲು ಆಕೆ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಸಲಹೆ ನೀಡುವ ನಿಪುಣರನ್ನು ಸಂಪರ್ಕಿಸಬಹುದಿತ್ತು. ಅಥವಾ ಸ್ವಂತ ದುಡಿಮೆಗೆ ಆಕೆಗೆ ಅವಕಾಶ ಇದ್ದುದರಿಂದ ಪರಾವಲಂಬಿಯಾಗಿ ಬದುಕಬೇಕಾದ ಹಂಗೇನೂ ಇರಲಿಲ್ಲ. ಕೇವಲ ಹಣದ ಆಸೆಗೆ ಬಲಿಯಾದ ಪಾಲಕರ ಗೊಡ್ಡು ಮನಸ್ಸಿಗೆ ಅವರ ನಿರ್ಧಾರಕ್ಕೆ ಅಸ್ತು ಎಂದಳು. ನಿರ್ಧಾರ ಸರಿಯಾಗಿರಲಿಲ್ಲ.  


ಎಷ್ಟೋ ಅಮ್ಮಂದಿರು ರಸ್ತೆಯಲ್ಲಿ ಚಿಕ್ಕಮಕ್ಕಳನ್ನು ಬಿಟ್ಟು ತಾವುತಾವೇ ಹರಟೆ ಹೊಡೆಯಲು ನಿಂತಿರುತ್ತಾರೆ. ವಾಹನಗಳು ರೊಯ್ಯರೊಯ್ಯನೆ ಸಾಗುತ್ತಿರುವಾಗ ಮಕ್ಕಳು ಎಲ್ಲಿಹೋದರು ಎಂಬ ಕಿಂಚಿತ್ ಪ್ರಜ್ಞೆಯೂ ಅವರಿಗಿರುವುದಿಲ್ಲ. ಗಾಡಿ ಹಾಯ್ದು ಮಗು ಘಾಸಿಗೊಂಡರೆ, ಸತ್ತರೆ ಆಗಮಾತ್ರ ಬೊಬ್ಬೆಯೋ ಬೊಬ್ಬೆ! ಗೊತ್ತಿದ್ದೂ ಹೀಗೆ ಮಾಡುವುದು ತಪ್ಪಲ್ಲವೇ? ಗೊತ್ತಿದ್ದೂ ಕೆಲವು ಪಾಲಕರು ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕೂರಿಸಿ, ಹಾಗೇ ಬಿಟ್ಟು ರಸ್ತೆಯ ಪಕ್ಕದ ಅಂಗಡಿಗಳಿಂದ ಅದೂ ಇದೂ ಖರೀದಿಸಿಕೊಂಡು ಬರಲು ಹೋಗುತ್ತಾರೆ. ಸ್ವಲ್ಪ ಅಲುಗಾಡಿದರೆ ಗಾಡಿಯ ಸಮೇತ ಮಗು ವಾಹನನಿಬಿಡ ರಸ್ತೆಯಮೇಲೆ ಬಿದ್ದರೆ, ಆಗ ಯಾವುದಾದರೂ ವಾಹನ ವೇಗದಿಂದ ಹಾದುಹೋದರೆ ಪರಿಸ್ಥಿತಿ ಏನಾಗಬಹುದು? ಇದು ತಪ್ಪು ನಿರ್ಧಾರವಲ್ಲವೇ? ಎರಡು ನಿಮಿಷ ಹೆಚ್ಚಿನ ಕಾಲವ್ಯಯಮಾಡಿ ಮಗುವನ್ನೂ ಜೊತೆಗೆ ಕರೆದೊಯ್ದರೆ ಮಗು, ಗಾಡಿ ಎರಡೂ ಸುರಕ್ಷಿತವಾಗಿರಬಹುದಲ್ಲಾ ?  ಬಳ್ಳಾರಿಯ ಪ್ರಾಣಿ ಸಂಗ್ರಹಾಲಯದಲ್ಲಿ ಮಗುವನ್ನು ಅಲ್ಲೆಲ್ಲೋ ಬಿಟ್ಟು ಇನ್ನೊಂದು ಕಡೆ ತೆರಳಿದ ತಾಯಿಗೆ ಮಗು ಪ್ರಾಣಿಗಳನ್ನು ಸ್ಪರ್ಶಿಸುತ್ತಿದೆ ಎಂಬ ವಿವೇಚನೆ ಬೇಕಿರಲಿಲ್ಲವೇ? ಜಿಂಕೆ ಸಾಧುಪ್ರಾಣಿಯೇ ಆದರೂ ತಿಂಡಿಕೊಡುವಾಗ ಅಪ್ಪಿತಪ್ಪಿ ಚಿಕ್ಕ ಮಗುವಿನ ಬೆರಳನ್ನು ಅರಿಯದೇ ಕಚ್ಚಿಬಿಟ್ಟರೆ ಆಗ ಅನಾಹುತ ನಡೆಯಬಹುದಿತ್ತಲ್ಲಾ? ಆದರೆ ಅನಾಹುತ ಇನ್ನೂ ದೊಡ್ಡದೇ ನಡೆಯಬೇಕೆಂದು ಬರೆದಿದ್ದರೆ ಯಾರು ಬದಲಾಯಿಸಲು ಸಾಧ್ಯ? ತಾವೆಲ್ಲಾ ತಿನ್ನುವ ಚಾಕಲೇಟ್ ಹಿಡಿದು ಹುಲಿಗೆ ತನ್ನ ಪ್ರೀತಿಯನ್ನು ತೋರಿದ ಮಗುವಿನ ಮಮತೆಯನ್ನು ಹುಲಿ ಬಲ್ಲುದೇ? ಹುಲಿ ಹಸಿದಿತ್ತು, ಮಗು ಅರಿಯದಾಗಿತ್ತು, ಅಮ್ಮನಿಗೆ ಬುದ್ಧಿ ಕಮ್ಮಿ ಇತ್ತು, ಮಗು ಎಡಗೈಯ್ಯನ್ನೇ ಸಂಪೂರ್ಣ ಕಳೆದುಕೊಂಡಿತು. ಆ ಮಗು ನಾಳೆ ದೊಡ್ಡದಾದಾಗ ಅದಕ್ಕೆ ಕಷ್ಟದ ಅರಿವಾಗುತ್ತದೆ. ಹೋದ ಕೈ ಮರಳಿ ಬಾರದಲ್ಲಾ? ಇಲ್ಲಿ ಯಾವ ನಿರ್ಧಾರ ಬೇಕು? ಇಲ್ಲಿಯ ತನಕ ತನ್ನೆರಡೂ ಕೈಗಳಿಂದ ಆಡಿಕೊಂಡಿದ್ದ ಮಗುವಿಗೆ ಎಡಗೈ ಹಂಗಿಲ್ಲದೇ ಬದುಕುವ ತರಬೇತಿ ನೀಡಬೇಕು. ಜೀವನಪೂರ್ತಿ ಒಂದು ಕೈ ಇಲ್ಲದೇ ಹೋದರೂ ಅದರ ಅನಿವಾರ್ಯತೆ ಇಲ್ಲಾ ಎಂಬ ರೀತಿಯಲ್ಲಿ ಬದುಕಲು ಕಲಿಸಬೇಕಾದುದು ಮತ್ತು ಬದುಕುವ ಮಾರ್ಗವನ್ನು ಬೋಧಿಸಬೇಕಾದುದು ಪಾಲಕರ ಪ್ರಸಕ್ತ ನಿರ್ಧಾರವಾಗಬೇಕು. ಸಮಯೋಚಿತ ಮತ್ತು ಸಮರ್ಪಕ ನಿರ್ಧಾರದಿಂದ ತೆಗೆದುಕೊಂಡ ನಿಶ್ಚಿತಗುರಿಯೆಡೆಗೆ  ಅಚಲವಿಶ್ವಾಸದಿಂದ ಸಾಗುವುದು ಬದುಕಿನ ಯಶಸ್ಸಿಗೆ ಬಹಳ ಮುಖ್ಯ.