ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 17, 2010

'ವಿಕೃತಿ'ಯಲ್ಲಿ ಸಿಕ್ಕ ವಿಕೃತ ಕಲಾವಿದ



Naked Bharatmata - Hussain has shown naked woman

ಮುಸ್ಲಿಂ ಬಾಂಧವರು ಕ್ಷಮಿಸಬೇಕು, ಇವತ್ತಿನ ಕೃತಿ ಅವರಬಗ್ಗೆ ಹೇಳಿದ್ದಲ್ಲ, ಬದಲಾಗಿ ಕಲಾವಿದ ಎನ್ನಿಸಿಕೊಂಡ ಮೂರ್ಖನೊಬ್ಬ ಕಲೆಯ ಹೆಸರಲ್ಲಿ ಕುಲಗೆಡಿಸಿದ ಆತನ 'ಕಲೆಯ' ಕಲೆ ಬಗ್ಗೆ ಬರೆದಿದ್ದೇನೆ. ಇದು ಬಟ್ಟೆಯ ಮೇಲಾದುದಾದರೆ ತೊಳೆಯಬಹುದಿತ್ತು, ಮನಸ್ಸಿಗೆ ಆದ ಕಲೆ ! ಮನಸ್ಸಿಗೆ ಎಳೆದ ಬರೆ ! ಇಂಥವರೂ ಇರುತ್ತಾರೆ ನಮ್ಮಲ್ಲಿ, ಕಳ್ಳ ಕಾವಿಗಳಿಗೂ ಇವರಿಗೂ ಬಹಳ ಅಂತರವಿಲ್ಲ ! ಅವರು ಕಾವಿ ವೇಷ ಹಾಕಿದ್ದರೆ ಇವರು ಜೀನ್ಸ್ ಹಾಕಿದ್ದಾರೆ,ಖಾದಿ ಹಾಕಿದ್ದಾರೆ ಅಷ್ಟೇ ! ಅಲ್ಲಿ ದೇವರ ಹೆಸರಲ್ಲಿ ಬೂಟಾಟಿಕೆ ಇಲ್ಲಿ ಕಲೆಯ ಹೆಸರಲ್ಲಿ ಸಲ್ಲದ ನಡವಳಿಕೆ ! ಎರಡೂ ವಿಕೃತವೇ ಇದು ನಮಗೆ ಬಂದ ಮೊದಲ 'ವಿಕೃತಿ'ಯ ವಿಕೃತ ! ಹಾಸ್ಯಸ್ಪದವೇ ಓದಬನ್ನಿ ----



Naked Draupadi.



Mother Teresa fully clothed




Muslim poets Faiz, Galib are shown well-clothed




Photo of MF Hussain




Naked Saraswati




M.F. Hussain's Mother fully clothed



Full Clad Muslim King and naked Hindu Brahmin. The above painting clearly indicates Hussain's



Goddess Lakshmi naked on Shree Ganesh's head



Hussain's Daughter well clothed

'ವಿಕೃತಿ'ಯಲ್ಲಿ ಸಿಕ್ಕ ವಿಕೃತ ಕಲಾವಿದ


Goddess Durga in sexual union with Tiger



Well clothed Muslim Lady.


Naked Lord Hanuman and Goddess Sita sitting on thigh of Ravana


ಸಂಗೀತ-ಸಾಹಿತ್ಯ-ಕಲೆ ಎಂಬುದು ಒಳ್ಳೆಯ ದಿಕ್ಕಿನತ್ತ ಸಾಗಿದರೆ ಅದು ತರುವ ಸಂತೋಷ ಅಪಾರ. ಅದರಿಂದ ಜನಮಾನಸಕ್ಕೆ ಉಂಟಾಗುವ ಒಳ್ಳೆಯ ಪರಿಣಾಮವೂ ಅಪಾರ. ಅದಕ್ಕೇ ನಮ್ಮ ಸಂಸ್ಕೃತದಲ್ಲಿ

|| ಸಂಗೀತ-ಸಾಹಿತ್ಯ-ಕಲಾ ವಿಹೀನಾಂ ಸಾಕ್ಷಾತ್ ಪಶೂನಾಂ ಪರಪುಚ್ಚ ವಿಹೀನಃ ||

ಎಂದಿದ್ದಾರೆ ಅಂದರೆ ಈ ಮೂರರ ಗಂಧ-ಗಾಳಿ ಯಾರಿಗೆ ಇರುವುದಿಲ್ಲವೋ ಅಂಥವರು ಪಶುವಿಗೂ ಕಡೆ ಎಂದಿದ್ದಾರೆ-ಪ್ರಾಜ್ಞರು. ಯಾರ ಜೀವನದಲ್ಲಿ ಇವುಗಳಲ್ಲಿ ಆಸಕ್ತಿ ಇರುವುದಿಲ್ಲವೋ ಅವರ ಜೊತೆ ಬದುಕುವುದು ಮತ್ತು ಒಡನಾಡುವುದು ಕೂಡಾ ಕಷ್ಟದ ಕೆಲಸ. ತಾಳ್ಮೆಯಿಂದ ಅವಲೋಕಿಸಿ ಇವುಗಳ ರಸಾಸ್ವಾದನೆ ಮಾಡಿದಾಗ ನಮಗಿರುವ ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನರ ದೌರ್ಬಲ್ಯ, ಮಾನಸಿಕ ಕ್ಲೀಷೆ,ಕ್ಲೇಶ, ಅಸಮಾಧಾನ, ಅಸಂತೋಷ, ಕ್ಷಣಿಕ ಮನೋ ವಿಕೃತಿಗಳು, ಕೋಪ-ತಾಪ, ಗೊತ್ತಿರದ ವಿಷಯಕ್ಕೆ ಗೊಂದಲ, ಏನೋ ಆತಂಕ ಇನ್ನೂ ಹಲವಾರು ದುಗುಡಗಳು ನಿವಾರಿಸಲ್ಪಡುತ್ತವೆ. ಇದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಮಗುವಿನ ಅಳುವನ್ನು ನಿಲ್ಲಿಸುವಾಗ, ಮಗುವನ್ನ್ನು ನಿದ್ದೆಮಾಡಿಸುವಾಗ ಅಮ್ಮ ಹಾಡನ್ನು ಹಾಡುತ್ತಾಳೆ. ಬಹಳ ಸಂಪರ್ಕ ಮಾಧ್ಯಮಗಳಿರದ ಆ ಕಾಲದಲ್ಲೇ ನಮ್ಮ ಜನಪದರು ಹಾಡಿದರು

ಕಾಡೀಗಚ್ಚಿದ ಕಣ್ಣು ತೀಡೀ ಮಾಡಿದ ಹುಬ್ಬು
ಮಾವೀನ ಹೋಳು ನಿನ ಕಣ್ಣು
ಮಾವೀನ ಹೋಳು ನಿನ ಕಣ್ಣು ಕಂದಮ್ಮ
ಮಾವ ಬಣ್ಣಿಸೀ ಕರೆದಾನ

ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ್ಕ
ಕೂಸು ಕಂದಮ್ಮ ಒಳ ಹೊರಗ
ಕೂಸು ಕಂದಮ್ಮ ಒಳ ಹೊರಗ ಆಡಿದರ
ಬೀಸಣಿಕೆ ಗಾಳೀ ಸುಳಿದಾS


ಅಂದರೆ ನಾವು ತಿಳಿಯಬೇಕು ಸಂಗೀತ-ಸಾಹಿತ್ಯ-ಕಲೆ ಎಂಬುದು ನಮ್ಮೆಲ್ಲರ ಬದುಕಿನ ಹಾಸು-ಹೊಕ್ಕು, ನಮ್ಮ ಮನಸ್ಸಿನಲ್ಲಿ ಅಚ್ಚೊತ್ತು ಉಳಿವ ಬಣ್ಣದ ರಂಗೋಲಿಗಳವು. ನನ್ನ ಪ್ರೀತಿಯ ಕವಿಗಳಲ್ಲಿ ಒಬ್ಬರಾದ ಶ್ರೀಯುತ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನ ತಾವು ಕೇಳಿರುತ್ತೀರಿ --

ಮಲಗೋ ಮಲಗೆನ್ನ ಮರಿಯೇ
ಬಣ್ಣದ ನವಿಲಿನ ಗರಿಯೇ
ಎಲ್ಲಿಂದ ಬಂದೆ ಈ ಮನೆಗೆ ?
ನಂದನ ಇಳಿದಂತೆ ಭುವಿಗೆ

ಕವಿ ಬಾಲ್ಯವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಈ ಕಾವ್ಯದಲ್ಲಿ. ಇದರಲ್ಲಿ ಮುಂದೆ ಎಲ್ಲಿಯವರೆಗೆ ಹೇಳಿದ್ದಾರೆಂದರೆ ಮಗುವಿನ ಸೌಂದರ್ಯ [ಎಲ್ಲರೂ ಸಹಜವಾಗಿ ಹೇಳುವುದು ಮೊಸಹೊಗುವುದಕ್ಕೆ ನಾಮಹಾಕಿಸಿಕೊಳ್ಳುವುದು ಅಂತ, ಅದಕ್ಕೆತಿರುಪತಿ ನಾಮ ಅಂತಲೂ ಅನ್ನುವುದಿದೆ !] ತಿರುಪತಿ ತಿಮ್ಮಪ್ಪನಿಗೇ ಮೂರು ನಾಮ ಹಾಕುವಷ್ಟು ಎಂದು! ಅಂದರೆ ಕವಿಯ ಕಲ್ಪನೆ ನೋಡಿ, ಇದು ಒಂದು ಅದ್ಬುತ ರಸಾನುಭೂತಿ ! ಹೀಗೇ ಸಂಗೀತ-ಸಾಹಿತ್ಯ-ಕಲೆಗಳು ಸಮಾಜದ ಒಳಿತನ್ನು ವರ್ಣಿಸಲು, ಸಂಸ್ಕೃತಿಯನ್ನು ಎತ್ತಿಹಿಡಿಯಲು ಉಪಯೋಗವಾಗಬೇಕೆ ಹೊರತು ಅವು ವಿಕೃತಿಯ ದಾರಿ ಹಿಡಿದರೆ ಆಗ ಸಮಾಜದಲ್ಲಿ ಋಣಾತ್ಮಕ ಸಂದೇಶ ಹೊಮ್ಮುತ್ತದೆ, ಅದು NEGATIVE ENERGY ಆಗಿ ಪರಿಣಮಿಸುತ್ತದೆ. ಅಂತಹ ಋಣಾತ್ಮಕತೆಯನ್ನು ಸೃಜಿಸುವ-ಪೋಷಿಸುವ-ಬೆಳೆಸುವ 'ಕಲೆ' ನಮ್ಮ ಸಮಾಜದ ಕೆಲವು ಸ್ತರಗಳಲ್ಲಿ ಕಂಡುಬಂದಿದೆ. ಇದಕ್ಕೆ ಉದಾಹರಣೆ ಎಂದರೆ ರಾಷ್ಟ್ರೀಯ ಮಟ್ಟದಲ್ಲಿ ಕಲಾವಿದ[ಅವರ ಕಲೆ ದೇವರಿಗೆ ಪ್ರೀತಿ!] ಎನಿಸಿಕೊಂಡ ಒಬ್ಬ ವ್ಯಕ್ತಿ ಇಂತಹ ಕೆಟ್ಟ ಭಾವನೆಗಳು ಕೆರಳುವಂತಹ ಚಿತ್ರಗಳನ್ನು ಗೀಚಿದ್ದಾರೆ! ಯಾರು ಎಂದಿರೇ ? ಆ ಕೆಟ್ಟ ಕ-ಲಾವಿದನೇ M.F.HUSSAIN


ಹುಣಿಸೆ ಮುದುಕಾದರೂ ಹುಳಿ ಮುಪ್ಪೇ ಎನ್ನುವಂತೆ ಇನ್ನೂ ಕಾಮದಿಚ್ಛೆ ಹೊಂದಿರುವ ಮುದಿ ಹಂದಿಗಳಲ್ಲಿ ಇದೂ ಒಂದು. ಇಷ್ಟು ಹೇಳಲು ಕಾರಣ ಅವರು ಇತ್ತೇಚೆಗೆ ಚಿತ್ರಿಸಿದ ಕೆಲವು ಚಿತ್ರಗಳು. ಅವುಗಳನ್ನು ತಮ್ಮೆಲ್ಲರ ಅವಲೋಕನೆಗೆ ಇಲ್ಲಿ ಸಾಧ್ಯವಾದಷ್ಟು ಬಿತ್ತರಿಸುತ್ತಿದ್ದೇನೆ. ನಾನು ಹುಸೇನ್ ಬಗ್ಗೆ ಲೇಖನ ಹಾಕುತ್ತಿರಲಿಲ್ಲ, ಸ್ನೇಹಿತ ಕೆರೆಮನೆ ಶಿವಾನಂದ ಹೆಗಡೆಯವರು ನಿನ್ನೆ ಮತ್ತೆ ಮಿಂಚಂಚೆ ಕಳಿಸಿ ಇದರ ಬಗ್ಗೆ ಬರೆದರೆ ಒಳ್ಳೆಯದೆಂಬ ಅಭಿಪ್ರಾಯ ಸೂಚಿಸಿದರು, ಅವರ ಹಾಗೂ ಸರಿಸುಮಾರು ಸಾವಿರ ಸಂಖ್ಯೆಯ ಸ್ನೇಹಿತರು ಈ ವಿಷಯದ ಸಲುವಾಗಿ ನನಗೆ ಮಿಂಚಂಚೆ ಕಳಿಸುತ್ತಲೇ ಇದ್ದಾರೆ-ಈ ಎಲ್ಲರ ಇಚ್ಛೆಯಂತೆ ಅಂತೂ ಇಂದು ಬರೆಯೋಣ ಅಂತ ಬರೆದಿದ್ದೇನೆ.

ಇದರ ಬಗ್ಗೆ ಬರೆಯಲು ಮನಸ್ಸಿರಲಿಲ್ಲ, ಯಾಕೆಂದರೆ ಮುದುಕನೊಬ್ಬ ನಟೀಮಣಿಯರ ಹಿಂದೆ ಬಿದ್ದು ನಗೆಯಾಡುತ್ತ ಅವರ ಸಾಮೀಪ್ಯಕ್ಕೆ, ಆವರ ದೇಹ ಗಂಧಕ್ಕೆ-ಚಂದಕ್ಕೆ, ಅವರ ಕಡೆಗಣ್ಣ ಕುಡಿನೋಟಕ್ಕೆ, ಅವರು ಎಳೆಯ Low Jeans ಪಡ್ಡೆ ಹುಡುಗರ ಮೇಲೆ ಬಿಡುವ ಕುಡಿನೋಟಕ್ಕೆ, ಅವರ ಜೊತೆಗಿನ ಸಲ್ಲಾಪಕ್ಕೆ, ಅವರ ಪ್ರೀತಿಯ ಮೈ ಸೋಕಿಗೆ, ಶೋಕಿಗೆ, ಅವರು ಬೀಸಿದ ನಗೆಯ ಅಲೆಯ ಹಿಂದೆ ಕಳೆದುಹೋಗಿ ತನ್ನನ್ನೇ ತಾನು ಹುಡುಕಿಕೊಳ್ಳುವ ಸಮಸ್ಯೆ ಎದುರಿಸುತ್ತ ಅಂತೂ ಅವರನ್ನಪ್ಪಿ ಮುದ್ದಾಡುವ ಮುಪ್ಪಿನ 'ಕಾಮ ವಾಂಛೆ'ಗೆ, ತನ್ನ ತೋಳ್ತೆಕ್ಕೆಯಲ್ಲಿ ಬಹುಕಾಲ ಅವರನ್ನು ಬಂಧಿಸಬೇಕೆಂಬ ಹುಚ್ಚು ಕುದುರೆಯ ಹೆಗಲೇರಿದ ಬೊಚ್ಚು ಬಾಯಿಯ ಬೊಂಬಾಯಿ ಮನುಷ್ಯನ ಬಗ್ಗೆ ಬರೆಯಬೇಕೆ ? ಆದರೂ ನಿಮ್ಮೆಲ್ಲರ ಸಲುವಾಗಿ ನವ್ಯ ಕಾವ್ಯವನ್ನೂ ಬರೆದಿದ್ದೇನೆ, ಓದಿಕೊಳ್ಳಿ ಇದು ನಮ್ಮ ಹುಚ್ಚು ಹುಸೇನರ ಹಚ್ಚಹಸನಾದ ಹುಚ್ಚಿನ ಕಲೆ !


ಹುಸೇನಗೊಂದು ಹುಚ್ಚು ಕವನ

ಎಂ. ಎಫ್.ಹುಸೇನನೋ ಎಮ್ಮೆಪುಸೇನನೋ ಅರಿಯದಾದೆ
ಹಮ್ಮಿನಲ್ಲಿ ಎಳೆದ ಗೆರೆಗಳಿಗೆ
ಅರ್ಥವಿರದ ಅಸಂಬದ್ಧಗಳಿಗೆ !
ದಮ್ಮು ಎಳೆಯುತ್ತ ಬರೆದ ತನ್ನ 'ಮಾನಸಿಕ ಹುಣ್ಣುಗಳಿಗೆ'
ಸುಮ್ಮನೇತಕೆ ಜನ ಕರೆವರು ನಿನ್ನ ಕಲಾವಿದನೆಂದು ?

ನೀನೇನೋ ಬರೆವೆಯೋ ಮಂಕೆ ?
ಬರೆದಿದ್ದೆಲ್ಲ ಒಪ್ಪಿಕೊಳ್ಳಲೇ ಬೇಕೇ ?
ನಿನಗೆ ರಾಜಕೀಯದವರ ಬೆಂಬಲವೇ?
ನೀನೂ ಒಬ್ಬ ಕಲಾವಿದನೇ?
ನನಗ್ಯಾಕೋ ಡೌಟು !
ಯಾರು ಹೇಳಿದರಯ್ಯ ನೀನೊಬ್ಬ ಕಲಾವಿದನೆಂದು ?
ನೋಡಿದರೆ ಹೇಳಬಹುದು ನೀನೊಬ್ಬ ತಲೆಹಿಡುಕನೆಂದು !

ನಿನಗೊಂದು ಕವನವೇ ಛೆ !
ನಿನಗೇಕೆ ಅದು ವೇಸ್ಟು ?
ನೀನೊಬ್ಬ ತರಲೆ ಬುರುಡೆ
ನೀನೊಬ್ಬ ಅರಳು-ಮರಳು
ನೀನೊಬ್ಬ ತಿಳಿಗೇಡಿ !
ಹಿಂದೀ ಚಿತ್ರನಟಿಯರ ಹಿಂದೆ ಬಿದ್ದ ಸೋಗಲಾಡಿ !
ಅವರ ಚಿತ್ರವನ್ನು ಗಜಗಾಮಿನಿಯಾಗಿ ಬರೆಯುವ
ಮುದುಕಾದರೂ ಇನ್ನೂ ಚಾಲ್ತಿಯಲ್ಲಿ ಇಟ್ಟಿರುವ 'ಮಶಿನ್ನು' ನಿನ್ನದು !

ಏನಯ್ಯ
ನಿನಗೆ ಕೆಲಸವಿಲ್ಲವೇ ?
ಬೇರೆಲ್ಲಾ ಚಿತ್ರಗಳಿಗೆ ಬಟ್ಟೆ
ನಿನಗೆ ಬೇಡದ ಚಿತ್ರಗಳು ವಿವಸ್ತ್ರ ?
ಹಿಂದೂ ದೇವತೆಗಳನ್ನು ಗುತ್ತಿಗೆ ಹಿಡಿದೆಯೇನೋ ತಲೆಹಿಡುಕ ?
ಓಡು ದೇಶವ ಬಿಟ್ಟು ಖಾಲೀಮಾಡು
ನೀನಿದ್ದರೆ ತಲೆ ಚಿಟ್ಟು
ನೀನು ತಲೆಯ ಹೊಟ್ಟು !
ನೀನು ದೇಶಕಂಡ ತರಲೆ ವಿಕೃತ ಕಲಾವಿದ
ದೇಶದ ದುರಂತಕ್ಕೆ ನಾಂದಿ ಹಾಡಬಹುದಾದ ನಿನಗೆ
ಇನ್ನೂ ಮಣೆಹಾಕಿದರೆ ಆ ಮಣೆಹಾಕುವವರಿಗೂ ಧಿಕ್ಕಾರ!
ನಿನಗೆ ಮೊದಲೇ ಧಿಕ್ಕಾರ!
ಇದು ಸಾಕಾಗಲ್ಲ
ಬೀದಿಗಿಳಿದು ಗುಲ್ಲೆಬ್ಬಿಸಿ ಮಾರಿ ಬಿಡಿಸಿದರೇನೆ
ಸ್ವಲ್ಪ ......
ತಾಗಬಹುದೇನೋ ನಿನಗೆ
ಇಲ್ಲದಿರೆ ನಿನ್ನ ' ಕಲೆಯ ಸೊಬಗು '
ಆ ಹುಚ್ಚುತನ ಹೆಚ್ಚುತ್ತಲೇ ಹೋಗುವ ನಿರೀಕ್ಷೆ !
ಹಳೇ ಪೊರಕೆ ಚಪ್ಪಲಿಗಳೇ ಬೇಕೇ ?
ಬಾಯಿ ಮಾತು ಸಾಕೆ ?
ಹೋಗು ಹೋಗೆಲೋ ಮೂರ್ಖ
ನೀನೂ ಕ-ಲಾವಿದ ?? !!!!


ಜಗದಮಿತ್ರ ಬಂದು ಕೊನೆಗೊಮ್ಮೆ ಹಾಡಿದ್ದಾನೆ------------

ಸಂಗೀತ ಸಾಹಿತ್ಯ ಕಲೆಗಳೆಲ್ಲವು ನಿನ್ನ
ಅಂಗಾಂಗಗಳು ಬದುಕ ತುಂಬಿ ನೀ ಬದುಕೆ
ಭಂಗತಾರದ ರೀತಿ ಬಳಸು ನೀ ಅವುಗಳನು
ನುಂಗದದು ಮಿತಿಮೀರೆ | ಜಗದಮಿತ್ರ