ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, November 19, 2010

ರಾಧಿಕೆ ನಿನ್ನ ಸರಸವಿದೇನೆ ..........?


ರಾಧಿಕೆ ನಿನ್ನ ಸರಸವಿದೇನೆ ..........?

" ಏನ್ಲಾ ಸಿವಾ ಆರಾಮಿದೀಯೇನ್ಲಾ ? "

" ಹೌದಣೋ ಸಂದಾಕಿವ್ನಿ, ಮತ್ತೇನಿಸ್ಯ ? "

" ಏನಿಲ್ಕಣೊ ಮಗಾ ಯಡ್ಯೂರಣ್ಣನ್ ತಾವ ಬಾಳಾ ಜಮೀನದಾವಂತೆ ಒಸಿ ಕೊಡುಸ್ಕ್ಯಬೇಕಾಗಿತು "

" ಅವ್ರಲ್ಲ ಸೋಬಕ್ಕ ಅವ್ರುನ್ನೆ ಹಿಡ್ದ್ಬುಡಿ ಕೆಲ್ಸ್ ಸಲೀಸಾಗೋತದೆ "

" ಒಹೊಹೊಹೊ ಸೋಬಕ್ಕ ಅಂಗೇ ಎಲ್ಲಾ ಮಾತಾಡ್ಸಕಿಲ್ಲ ಸಿವಾ ಅವರೀಗ ೧೬೬ ಎಕ್ರೆ ಕಾಪೀ ಎಸ್ಟೇಟ್ ಮಡಗವ್ರೆ "

" ಹೌದೇನಣಾ ? ನಂಗೊತ್ತೇ ಇರ್ಲಿಲ್ಲಾ "

" ಸುಮ್ಕೇನಾ ರಾಜ್ಕೀಯಕ್ಕೆ ಬಂದಿರಾದು, ಅವ್ರುಗೆ ರಾತ್ರೋರಾತ್ರಿ ಅದ್ಯಾವ್ದೋ ಕಂಪ್ನಿ ಮೂರುವರೆ ಕೋಟಿ ಸಾಲ ಕೊಟ್ಟದೆ, ಜಾಮೀನಿಲ್ಲ-ಗೀಮೀನಿಲ್ಲ.....ಆ ದುಡ್ನೇ ನಾ ಕಾಪೀ ತೋಟ ತಗಳಕೆ ಬಳ್ಸಿರಾದು ಅಂತ ಹೇಳ್ಯವ್ರೆ ಎಲ್ಲೀ.....ಲೋಕಾಯ್ತರಲ್ಲಿ.....ಅವ್ರುಗೆ ಸಾನೆ ಡೌಟ್ ಬಂದದೆ....ಅದೆಂಗೆ ನಿಂಗೆ ಅಷ್ಟೆಲ್ಲಾ ಸಾಲ ಕೊಟ್ಬುಟ್ರು ಅಂತ ರಾಗತೆಗ್ದವ್ರೆ....ಅಷ್ಟೊತ್ಗೆ ನಮ್ಮ ಯಡ್ಯೂರಣ್ಣ ಫೋನಾಕವ್ರೆ ಅನ್ಸುತ್ತೆ.....ಬಿಟ್ಟಾಕವ್ರೆ "

" ಹೌದೇನಣಾ ? ಇಷ್ಟೆಲ್ಲಾ ಆಗೈತಾ ? ಅಂಗಾರೆ ಕಷ್ಟಕಣಣ್ಣೋ ಸದ್ಯ ನೀ ಸೋಬಕ್ಕನ್ ತಾವ ಹೋಗ್ಬ್ಯಾಡ "

" ಸುಮ್ಮುನ್ಕುತ್ಗೊಳೋ ತರ್ಲೆ ನನ್ಮಗನೆ ನಂಗೊತ್ತಿಲ್ವಾ ಈ ಕೆಲಸಕ್ಕೆ ಯಾರ್ನ ಹಿಡೀಬೇಕು ಯಾರ್ನ ಮಡೀಕಬೇಕು ಅಂತಾವ "

-----------------------

" ಅಣಾ ಭೂಕಬಳಿಕೆ ಅಂತಾವ ವಾತ್ರೆಲಿ ಹೇಳವ್ರಲ್ಲ ಹದೇನಣಾ ಅಂಗಂದ್ರೆ ಕಬಳ್ಸೋದೂ ಅಂದ್ರೆ ನುಂಗೋದಲ್ವಾ.... ? "

" ಹೌದ್ಕಣಪ್ಪಾ ಖುರ್ಚೀಲಿದ್ದಾಗ ಮಾಡ್ಮಡೀಕಬುಟ್ರೆ ಮೊಮ್ಮಕ್ಳ ಕಾಲಕ್ಕೂ ಬತ್ತದೆ ಅಂತ ಎಲ್ಲಾ ಸುರುಹಚ್ಕಂಡವ್ರೆ "

" ಕಟ್ಟಾ ಮೀಟಾ ಅಂತೆಲ್ಲ ಬರುದ್ರಲ್ಲ ಪೇಪರ್ರಗೆ ಈಗ ಎಲ್ಲಾವ್ರೂ ಕಟ್ಟಾನೇ ಹಂತೀಯಾ ? "

" ಹಿನ್ನೆಲ್ಲಾ ಅಂಗೇಯ ಕಣ್ಲಾ .....ಒಂದಷ್ಟ್ ಕಾಸ್ಮಾಡ್ಕೆಂಬುಟ್ಟು ಅಲ್ಲಿ ಹಿಲ್ಲಿ ನಿತ್ಗಂಬೋದು...ಗೆದ್ ಬರೂತ್ಲೂವೆ ಎಲ್ಲಾ ಸ್ಕೆಚ್ ಹಾಕ್ಕಂಬೋದು.....ಯಾರಾದ್ರೂ ಅಡ್ಡ ಬಂದ್ರೆ ಸರ್ಕಾರ ಉರುಳುಸ್ತೀವಿ ಅಂತಾ ಕಾಗೆ ಹಾರ್ಸೋದು ....ತಾವೇನೇ ಮಾಡುದ್ರೂ ಎಲ್ಲಾರೂ ಸುಮ್ಕಿರ್ಬೇಕು .....ಆಮೇಲಾಮೇಲೆ ಎಲ್ಲರೂ ತಮ್ಮಂಗೇ ಆಗೋಯ್ತರೆ .....ಆಗಿರೋದು ಒಂದೇ ಪಾಲ್ಟಿ .....ಇರೋಧಾನೇ ಇರಾಕಿಲ್ಲ "

" ಎಂತಾ ಕಾಲ ಬಂದೋಯ್ತಣಾ.....ನಮ್ ಕುಮಾರಣ್ಣ ಅಂಗೆಲ್ಲಾ ಮಾಡಾಕಿಲ್ಲ ಹಲ್ವಾ "

" ಕುಮಾರಣ್ಣ್ನೇ ಸುರುಹಚ್ಕಂಡಿದ್ ಕಣ್ಲಾ ಮೂದೇವಿ .........ಆವಯ್ಯಾ ಸುರುಮಾಡಿದ್ನೇ ಈವಯ್ಯಂದ್ರು ಮುಂದರ್ಸ್ಕೋತ ಬಂದವ್ರೆ "

" ನಮ್ಮ ಕಿಷ್ಣಪ್ಪೋರ್ ಕಾಲಕ್ಕೆಲ್ಲಾ ಒಳ್ಳೇದಿತ್ತಲ್ಲಾ ? "

" ಕತ್ತೇನ್ ತಂದು...ಕಿಷ್ಣಪ್ಪೋರು ದಿಲ್ಲಿ ದರ್ಬಾರಿಂದ್ಲೇ ಮೊನ್ನೆ ಅಳೀಮಯ್ಯ ಮುಕಾಂತ್ರ ರಿಸಾಟ್ರ ಬಿಲ್ನೆಲ್ಲಾ ಶೆಟ್ಲಮಾಡ್ಸಿಲ್ವೇಲ್ನಾ ? ನಿಂಗೆ ರಾಜ್ಕೀಯ ಗೊತ್ತಾಯಾಕಿಲ್ಲ ನೀ ಬಿಡಾಕಿಲ್ಲ .... ಜೀವಾ ತಿಂತೀಯ"

------------------

" ದೀಪಾವಳಿ ಗಿಫ್ಟು ಕೊಡ್ಲೇ ಇಲ್ಲಾ ಕಣಣ್ಣಾ ನೀನು .....ದೀಪಾವಳೀನೂ ಆಗೋಯ್ತು...ತುಳ್ಸಿ ಪೂಜೆನೂ ಆಗೋಯ್ತು"

" ಗೋವಾದಿಂದ ತರಕ್ ಯೋಳಿದ್ದೆ ಕಣ್ಲಾ ನಮ್ ಬಾಮೈದ ಹಲ್ಲೇ ಕೆಲ್ಸ ಮಾಡದು....ಬರೋವಾಗ ಒಂದಷ್ಟ ಹಿಡ್ಕಂಬಾ ಅಂತಂದೆ .....ಆವಯ್ಯ ರಜಾ ಸಿಗ್ನಿಲ್ಲಾ ಅಂತಾವ ಬರೋದೇ ಬಂದಮಾಡ್ದ್ನ ...ನಂಗೊಂತರಾ ಕೈಮುರ್ದಾಂಗಾಗೋಗದೆ "

" ಹೋಗ್ಲಿ ರವಿಬೆಳಗೆರೆ ಅದೇನೋ ’ಕಾಮರಾಜ ಮಾರ್ಗ’ ಅಂತ ಬರ್ದವನಂತಲ್ಲಾ ಓದುದ್ರಾ ? "

" ನಮ್ಮಂತೋರ್ಗೆ ಗೀತೆ ಗೀತೆ ಕಣ್ಲಾದೂ....ವೈನಾಗಿ ಎರಡು ತುಂಡ್ ತಿಂದ್ಕಬುಟ್ಟು ಒಸಿ ಏರ್ಸ್ಕಬುಟ್ಟಿದ್ದೇ ಓದೋಕ್ಕೂತ್ರೆ ಸ್ವರ್ಗ... ಸ್ವರ್ಗನೇ ಇಳ್ದ್ ಬತ್ತದೆ....ಅದ್ಕೇ ಕಣ್ಲಾ ...ಪ್ರಿಂಟಾದಂಗೂ ಖರ್ಚಾಗೋತದೆ ನೋಡ್ತಾಯಿರು ! "

" ಹಂತಾದೇನಣಾ ಅದ್ರಲ್ಲಿ ? "

" ನೇರೂ ಕಾಲ್ದಿಂದ ಹಿಡ್ದು ಇಲ್ಲೀಗಂಟ ಸುಮಾರೆಲ್ಲಾ ದೊಡ್ ಮನ್ಸೂರ ಬಗ್ಗೆ ಬರದವ್ನೆ.... ಅವರೋ ಅವರಾಟಾನೋ ನಾ ಯೋಳ್ತಾಯಿದ್ರೇ ಇಂಗ್ ಬಾಯ್ಬಾಯ್ ಬಿಟ್ಕಂಡು ನೋಡ್ತಾಯ್ಕಂತೀಯ ....ಇನ್ನು ನಿಂಗೇನಾರ ಪುಸ್ತ್ಕಾ ಸಿಕ್ಕುದ್ರೆ ದಿನಾ ಓದಕಾಯ್ತದೆ ಅಂತಾವ ದೇವರ್ಕೋಣೇಲಿ ಪೂಜೆಗಿಟ್ಕಂಬುಡ್ತೀಯ ಬುಡು "

" ಅಣಾ ಬೆಂಗ್ಳೂರ್ಗೋದ್ರೆ ನಂಗೊಂದ್ ಕಾಪಿ ತಗಂಬಾರಣ...ಅದೆಷ್ಟಾತದೆ ಅಂತಾ ಕೊಟ್ಬುಡ್ತೀನಿ "

" ಅದ್ಕಿರೋದು ಹಿನ್ನೂರೈವತ್ತು ರೂ. ಬ್ಲಾಕಲ್ಲಿ ಡಬಲ್ ರೇಟ್ ಮಡ್ಗ್ಯವ್ರೆ ಅಂದವ್ನೆ ನಮ್ ಬಸ್ಯ "

" ಏನಾರಾ ಆಕ್ಕೊಂಡೋಗ್ಲಿ ಕಣಣ್ಣೋ ನಂಗೊಂದ್ ಕಾಪಿ ಬೇಕೇ ಬೇಕು "

-------------------

" ಅಣಾ ಕನಡಾ ಸಾಯ್ತ್ಯ ಸಮ್ಮೇಳ್ನ ಮಾಡ್ತವ್ರಂತಲ್ಲ "

" ಹೌದ ಕಣೋ ಈ ಸರ್ತಿ ಬೇಂಗ್ಳೂರಾಗೇ ಮಾಡಾದು "

" ಹದ್ಯಾರೋ ಜೀವಿ ನ ಕರೀತಾರಂತೆ ....ಹದ್ಯಾರ್ಲ ಅಂಗಂದ್ರೆ ? "

" ಓ ಅದೇ ಕಣ್ಲಾ ಮೊದ್ಲೆಲ್ಲಾ ಹವ್ರೂ ಇವ್ರೂ ಅಂತ ಮಾ ಮಾ ದೊಡ್ ಹೆಸರುಇದ್ದೋರ್ನ ಕರೀತಿದ್ರು....ಅವರಿಗೆಲ್ಲ ಮಾತಾಡಕ್ಕೇ ಕೊಡ್ದೇ ಜೀವಿಲ್ದಿದ್ದಂಗೇ ಕೂತಿರ್ಬೇಕಾಯ್ತಿತ್ತು....ಈವಯ್ಯ ೯೮ ವರ್ಸಾದ್ರೂ ಭಲೇ ಘಾಟಿ .....ಚೆನ್ನಾಗಿ ಮುಕಕ್ಕೇ ಉಗ್ದಂಗೆ ಯೋಳಬುಡ್ತರೆ ಅದಕ್ಕೇ ಜೀವಿ ಜೀವಿ ಹನ್ನದು "

" ಹೌದು ಹದ್ಯಾವನೋ ಮುದ್ಕಪ್ಪನ ಕರ್ದು ಅಲ್ಲಿ ಹೇನೆಲ್ಲಾ ಮಾಡ್ತರೆ ? "

" ಮೂರು ದಿವ್ಸ ಹಬ್ಬ ಹಬ್ಬದ್ ತರ ಇರ್ತದೆ ಕಣ್ಲಾ....ಊಟ...ತಿಂಡಿ ಅಂತ ಎಲ್ಲಾ ಇರ್ತದೆ.....ಕನಡಾ ಬಾವುಟ ಹಾರುಸ್ತರೆ.....ಸುರುವಾಗೋವಾಗ ಸಲ್ಪ ಮೆರವಣ್ಗೆ ಹದೂ ಇದೂ ಇರ್ತದೆ ....ಸುರುಮಾಡಕೂ ಮುಗಿಸಕೂ ರಾಜ್ಕೀಯ ನಾಯ್ಕರು ಬತ್ತರೆ.....ಬಾಳ ಜನ ಸೇರ್ತರೆ...ಹುಡ್ಗೀರು ಅವ್ರು ಇವ್ರು ಅಂತಾವ ಸಾನೆ ಜನ ಓಡಾಡ್ತರೆ "

" ಹುಡ್ಗೀರ್ ಬತ್ತರೆ ಅಂತಾಯ್ತು...ನಾನು ಹೋಬೇಕಣಾ .......ಬೆಂಗಳೂರ್ ಬೊಂಬೆಗೋಳ್ನ ನೋಡ್ದೆ ಸಾನೆ ಬೇಜಾರಾಗೋಗದೆ....ಒಂದ್ ಕಿತಾ ರೌಂಡ್ ಹೊಡ್ದ್ಬುಟ್ಟ್ರೆ ಹೆಲ್ಲಾ ಸರಿಹೋತದೆ "

" ಹೋಗವ ಬಿಡು....ನಾನೂ ನಿನ್ನಂಗೇ ಹೋಬೇಕು ಅಂದ್ಕಂಡಿವ್ನಿ.....ಯಾರಾರಾ ಏನಾರಾ ಮಾಡ್ಕಳ್ಳಿ....ಸರ್ಕಾರ ಒಂದಷ್ಟ್ ಕರ್ಚ್ ಮಾಡ್ತದೆ....ನಾವೂ ಹೋಗಿ ಮಜಾ ಉಡಾಯ್ಸ್ಕಂಬರೋದು "

-------------------


" ಅಣಾ ರಾಧಿಕಾ ಅವ್ಳಲ್ಲಾ ........"

" ಹೇಳ್ಲಾ ಮುಂದೆ ......"

" ಅವ್ಳೀಗೆ ವರ್ಸದ ಹಿಂದೆ ಮಗೂ ಆಯ್ತಲಣಾ ಹದೂ ನಮ್ ಕುಮಾರಣ್ಣಂದಂತೆ ? "

" ಇನ್ನೇನಾತದೆ ಮತ್ತೆ......ತುರ್ಕೆ ಜಾಸ್ತಿ ಆಯ್ತು...ಹೆಂಗೂ ಒಂದ್ ಮಡೀಕಬೇಕು ಚೆನ್ನಾಗಿರೋದಕ್ಕೆ ಕೈ ಹಾಕವ ಅಂತ ಸುರು ಹಚ್ಕಂಡಿದ್ದ "

" ಹವ್ಳೇನೋ ಹದಯಾವ್ದೋ ಉದಯವಾಣಿ ಪೇಪರ್ನಾಗೆ ಹೇಳವ್ಳಂತೆ.....’ನಾನು ಮಾಜಿ ಮಂತ್ರಿಯೊಬ್ಬುರ್ನ ಮದ್ವೆ ಆಗಿದ್ದೌದು....ಮಗೂನೂ ಆಗದೆ..ಆದ್ರೆ... ಎರ್ಡೆರ್ಡಲ್ಲಾ....ಒಂದೇಯ.....ನಾನು ಮಗೂನ ವಿದೇಶಕ್ಕೆಲ್ಲಾ ಕಳುಸ್ಲಿಲ್ಲಾ....ಹಿಲ್ಲೇ ಇದೀವಿ ...ನಾ ಇನ್ನೂ ಸಿನ್ಮಾದಾಗೆ ಮತ್ತೆ ಹಿರೋಯಿಣಿ ಮಾಡ್ತೀನಿ ಆದ್ರೆ ಜಾಸ್ತಿ ಬಿಚ್ಚಾಕಿಲ್ಲಾ...’ ಅಂದವ್ಳಂತೆ "

" ಹೋಕ್ಕಳಿ ಬುಡು ಗೌಡ್ರೂ ಮಾತಾಡಂಗಿಲ್ಲ....ಸೊಸೆದೀರೂ ಮಾತಾಡಾಂಗಿಲ್ಲ...ಮಂತ್ರಿಗಿರಿ ಇಲ್ಡಿರ್ವಾಗ ಸುಮ್ನೇ ಹೋಗಿ ಆಟ ಆಡಕೊಂದ್ಕಿತಾ ಜಾಗ ಬೇಕಲ್ವಾ ? "

" ಜನತಾ ದರ್ಸನ ಮಾಡೀ ಮಾಡೀ ಸುಸ್ತಾಗ್ಬುಟ್ಟಿತ್ತು ಪಾಪ ಹದ್ಕೇ ’ ಜಾನಕಿ ತರ ಒಬ್ಳೇ ಇರ್ಬ್ಯಾಡ....ನಾನಿದೀನಲ್ಲ....ನಿಂಗೆಲ್ಲಾ ಕೊಡ್ತೀನಿ.....ನೀ ನಂಗಬೆಕಾದ್ನೆಲ್ಲಾ ಕೊಟ್ಬುಡು ’ ಅಂದವ್ನೆ....ಭದ್ರಾವತಿ ಬಂಗಾರ್ದ ಬಣ್ಣ ಕಂಡ್ಬುಟ್ಟು ಒಸಿ ಬೇಜಾರಾದ್ರೂ ಇನ್ನೇನ್ ಹಬ್ಬಬ್ಬಾ ಹಂದ್ರೆ ಒಂದ್ ಹತ್ತನ್ನೆರ್ಡ್ ವರ್ಸ .... ಆಮೇಲೆಲ್ಲಾ ಬಣ್ಣ ತಗಂಡೇನೂ ಆಯಾಕಿಲ್ಲ...ಒಳ್ಳೇ ಆಸ್ತಿ ಮನೆ ಇದ್ರೆ ಸಾಕು ಅಂತಾವ ಮನ್ಸಮಾಡ್ಯವಳೆ....ಮಾಡಿದ್ದೇ ಮಾಡಿದ್ದು ಕುಮಾರಣ್ಣ ಮತ್ಯಾರೂ ಕಣ್ಣಾಕ್ ದಂಗೆ ಕೈಲೊಂದ್ ಕೊಟ್ಬುಟ್ಟ "

" ಓಗ್ಲಿ ಬಿಡೋ.....ನಿಂದೇನೋಯ್ತು ಗಂಟು .....ನಾ ಹೋಬೇಕು ಅರ್ಜೆಂಟದೆ "

" ಯಾಕಣಾ ಹಶ್ಟು ಅರ್ಜೆಂಟು ? "

" ಮಾದೇಗೌಡ್ರ ಸೊಸೆ ಹತ್ರ ಏನಾರ ಎಲ್ಪು ಬೇಕಾರೆ ಯೋಳು ಬತ್ತೀನಿ ಅಂದಿದ್ದೆ....ಬೆಳಗ್ಗೆನೇ ಪೋನಾಕವ್ಳೆ ಇನ್ನೂ ಹೋಯಕಾಯ್ತಾ ಇಲ್ಲ .....ಬರ್ಲಾ "

" ಅಣೋ ........................."


" ಬತ್ತೀನಿ ಬತ್ತೀನಿ......... ;) "