ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, July 25, 2010

ಯಾರು ?


ಚಿತ್ರ ಋಣ: ಅಂತರ್ಜಾಲ

ಯಾರು ?


ಸೌರಮಂಡಲದಲ್ಲಿ ಇರುವೆಲ್ಲ ಕಾಯಗಳ
ಗೌರವದಿ ಹಿಡಿದಿಟ್ಟು ನಡೆಸುವುದು ಯಾರು ?
ಪೌರುಷದಿ ಕುಂಟ ಕುರುಡಾದಿ ಹಲವರ ಸೃಜಿಸಿ
ರೌರವದ ನರಕವನು ಉಣಿಸುವರು ಯಾರು ?

ಬುದ್ಧಿಮಾಂದ್ಯರ ತಂದು ಬುದ್ಧಿವಂತರನಡುವೆ
ಇದ್ದುಬಿಡಿ ನೀವೆಂತ ಹುಟ್ಟಿಸುವರಾರು ?
ಎದ್ದೇಳಲಾಗದಾ ಪೋಲಿಯೋ ಹಬ್ಬಿಸುತ
ಒದ್ದಾಟ ಮೂಡಿಸುವ ಆ ಅದುವೆ ಯಾರು ?

ದೇಹದೊಳಗೊಂದೇನೋ ಕಾಣದುದನಿಳಿಬಿಟ್ಟು
ದಾಹ ತಣಿಸಿಕೊ ಎಂದು ಕಳಿಸಿದವರಾರು ?
'ಆಹಾ ಇದು ಏನು ಮಹಾ' ಹಾರಾಟ ಜೋರಾಗೆ
ವಾಹ ವಾ ಬಾ ಎಂದು ಕಿತ್ತವರು ಯಾರು ?

ಅಂಚಿರದ ಆಗಸವ ಕಟ್ಟಿನಿಲ್ಲಿಸುತಲ್ಲಿ
ಕಂಚು-ತಾಮ್ರಗಳನ್ನು ಕೊಟ್ಟವರು ಯಾರು?
ಮಂಚ ಮಾನಿನಿ ಮದ್ಯ ಮಾಂಸಾದಿಗಳ ತುಂಬಿ
ಸಂಚಿನಲಿ ಸಿಲುಕಿಸುತ ಬಂಧಿಸುವರಾರು?

ಬಿರುಗಾಳಿ ನೆರೆಗಳನು ಥರಥರದಿ ತಂದಿಡುತ
ಒರೆಹಚ್ಚಿ ಓರೆಯಲಿ ನೋಡುವುದದಾರು?
ತೆರೆಯೆಳೆದು ಹಲವಕ್ಕೆ ಮರುಮಾತಲೆಕ್ಕಿಸದೆ
ಅರಿವಿಡದೆ ಕರೆದೊಯ್ವ ಅಗೋಚರವಾರು?

ವೈದ್ಯರನು ಕಂಡು ನಸುನಕ್ಕು ತಾ ಮುಸುಕಿನಲಿ
ವೇದ್ಯವಾಗದ ಅವಧಿ ನೀಡುವವರಾರು?
ವಾದ್ಯಮೇಳಗಳಲ್ಲಿ ಖಾದ್ಯ ತೈಲಗಳಲ್ಲಿ
ಬಾಧ್ಯಸ್ಥವಾಗಿರುವ ಅಣುರೂಪವಾರು?

ಬಾಂಬು ಗರ್ನಾಲು ತೋಪು ತಪರಾಕಿಗಳ
ಕಾಂಬಕೈಯಲೆ ಕೊಟ್ಟು ಆಡಿಸುವರಾರು ?
ಸಾಂಬ ನಿನ್ನಯ ರೂಪ ಕಾಣುವೆನು ಕಣಕಣದಿ
ಮಾಂಬರದಿ ಕುಳಿತ ನೀನಲ್ಲದಿನ್ಯಾರು?

----------

ಆತ್ಮೀಯ ಬ೦ಧು, ಪ್ರಣಾಮಗಳು.

ತಮ್ಮ ಮೈಲ್ ಮತ್ತು ಬ್ಲಾಗ್ ಗಳನ್ನು ನೋಡಿದೆ. ಸ೦ತಸವಾಯ್ತು. ತಮ್ಮ ಮೈಲ್ ವಿಳಾಸವನ್ನು ಹಿಡಿದುಇಟ್ಟಿದ್ದೇನೆ. ನನಗೆ ಸಮಯ ಸಿಕ್ಕಾಗ ನನ್ನ ಕೆಲವು ಲೇಖನಗಳನ್ನು ಕಳುಹಿಸುತ್ತೇನೆ. ತಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ. ತಮ್ಮೊ೦ದಿಗೆ ಈ ಮೂಲಕ ಮಾತಾಡಲು ನನಗೆ ಪ್ರೇರೇಪಿಸಿದ್ದು ನಮ್ಮ ಪೂಜ್ಯ ಗುರುಗಳೂ, ನಮ್ಮ ನಾಟಕವನ್ನು ಸಾಗರದಲ್ಲಿ 1959 ರಲ್ಲಿ ನೋಡಿ, ಅನುಗ್ರಹಿಸಿ ತಮ್ಮ ಬ೦ಗಾರದ ಪಾದುಕೆಗಳನ್ನಿತ್ತು ಹರಸಿದ, ಇ೦ದಿಗೂ ನನ್ನೊಳಗೇ ಇದ್ದು ಪ್ರತಿ ನಿಮಿಷವೂ ನಮ್ಮನ್ನೆಲ್ಲಾ ಹರಸುತ್ತಿರುವ ಶ್ರೀ ಶ್ರೀಧರಸ್ವಾಮಿಗಳ ಭಾವಚಿತ್ರ. ನಿಮಗೆಲ್ಲಾ ಶುಭವಾಗಲಿ. ವ೦ದನೆಗಳು.

ಎ೦ದೂನಿಮ್ಮವ,.

ಮಾಸ್ಟರ್ ಹಿರಣ್ಣಯ್ಯ.

-----ಮಾನ್ಯ ಮಿತ್ರರೇ, ಇವತ್ತು ' ನಿಮ್ಮೊಡನೆ.....' ಬ್ಲಾಗಿಗೆ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯ ಬಂದು, ಗುರು ಶ್ರೀಧರರ ಬಗ್ಗೆ ಓದಿದ್ದು, ಶ್ರೀಗಳ ಬಗೆಗಿನ ಅವರ ಸ್ವಂತದ ಅನಿಸಿಕೆಗಳನ್ನು ನನ್ನೊಡನೆ ಮೇಲ್ ಮುಖಾಂತರ ಹಂಚಿಕೊಂಡಿದ್ದಾರೆ, ಜ್ಞಾನಿಗಳಾದ- ಪಕ್ವ ಮನದವರಾದ ಶ್ರೀಯುತರನ್ನು ಬ್ಲಾಗಿಗೆ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದೇನೆ ಮತ್ತು ಧನ್ಯತೆಗಳನ್ನು ಅರ್ಪಿಸಿದ್ದೇನೆ. ಸಮಾಜವನ್ನು ಸುಧಾರಿಸುವ ಕೆಲಸವನ್ನು ನಾಟಕಗಳ ಮುಖಾಂತರ ಮಾಡಲು ಸಾಧ್ಯ ಎಂಬುದನ್ನು ಶ್ರೀಯುತರು ತೋರಿಸಿಕೊಟ್ಟ ಬಗ್ಗೆ ಋಜುಮಾರ್ಗದವರಾದ ತಮಗೆಲ್ಲ ಹೊಸದಾಗಿ ಹೇಳಬೇಕಿಲ್ಲ. ಅವರ ಆಪ್ತ ನುಡಿಗಳು ನನ್ನ ಮನಸ್ಸನ್ನು ತುಂಬಾ ಸೆಳೆದವು. ಅವರು ನೂರ್ಕಾಲ ನಮ್ಮೊಡನಿರಲಿ ಮತ್ತು ನಮಗೆಲ್ಲ ಮಾರ್ಗದರ್ಶಕರಾಗಿರಲಿ ಎಂದು ಹಾರೈಸುತ್ತೇನೆ.

14 comments:

  1. ತುಂಬಾ ಚೆನ್ನಾಗಿದೆ

    ವೈಚಿತ್ರಮಯ ಜಗತ್ತಿನ ಸಚಿತ್ರ ಚಿತ್ರಣ

    ReplyDelete
  2. ಭಟ್ಟರೆ,
    ಅದ್ಭುತ,ಸುಂದರ ಹಾಗು ಕೆಲವೊಮ್ಮೆ ಭಯಾನಕವೂ ಆದ ಈ ವಿಶ್ವವನ್ನು ನಡೆಯಿಸುತ್ತಿರುವ ಶಕ್ತಿ ಯಾರು?---ಎನ್ನುವ ನಿಮ್ಮ ಕವನ ವಿಶ್ವಕರ್ತನ ಅನಂತ ಮುಖಗಳ ದರ್ಶನವನ್ನೇ ಮಾಡಿಸುವಂತಿದೆ.

    ReplyDelete
  3. ಮೊದಲಾಗಿ ಬಂದು ಚಿತ್ರಣವನ್ನು ಅನುಭವಿಸಿದ ಶ್ರೀ ಗುರುಪಾದರೆ ಮತ್ತ್ತು ಓದುವ ಮನಸ್ಸಿಗೆ ದಣಿವೇ ಇಲ್ಲ ಎಂಬಂತೆ ರಾತ್ರಿಯೂ ಓದುವ ಶ್ರೀ ಸುಧೀಂಧ್ರರೆ
    ತಮ್ಮೀರ್ವರಿಗೂ ಅನಂತ ಧನ್ಯವಾದಗಳು, ಇದೊಂದು ಏನನ್ನೋ ಹುಡುಕುವ-ಅವಲೋಕಿಸುವ ಹಾದಿಯಾದ್ದರಿಂದ ಈ ಮಾಲಿಕೆಗೆ 'ಹೀಗೊಂದು ಪ್ರಯತ್ನ' ಎಂತಲೇ ಕರೆದಿದ್ದೇನೆ.

    ReplyDelete
  4. ಯಾರು ? ಸೃಷ್ಟಿ ಮೂಲವ ಹುಡುಕಿ ಗೆದ್ದವರಾರು ? ಬ್ರಹ್ಮಸತ್ಯವಾದ ಜಗತ್ತಿನ ಅನಂತ ವರ್ಣನೆ ಸೊಗಸಾಗಿದೆ. ಎಂದೆಂದಿಗೂ ಇದು ಪ್ರಶ್ನೆಯೇ
    !

    ReplyDelete
  5. ಶ್ರೀಯುತ ಸುಬ್ರಹ್ಮಣ್ಯ, ನೀವು ಹೇಳಿದ್ದು ಸರಿಯೇ ಇದೆ, ಆದರೆ ನಮ್ಮ ಜಂಜಾಟಗಳಲ್ಲಿ ತೊಡಗಿಕೊಂಡು ಇವುಗಳನ್ನು ನಾವು ಮರೆತುಬಿಡುತ್ತೇವೆ, ಲೋಕದಲ್ಲಿ ಎಲ್ಲಿ ನಮಗೆ ಯಾವುದಕ್ಕೆಲ್ಲ ಅನುಕೂಲವಾಗುವುದೋ ಅದರ ಬೆನ್ನು ಹತ್ತುತ್ತ ಸೃಷ್ಟಿಯ ನಿಯಾಮಕನನ್ನು ಅರೆಘಳಿಗೆ ಕೂಡ ನೆನಪಿಸ್ಕೊಳ್ಳುವುದನ್ನು ಮರೆಯುತ್ತೇವೆ, ಜಗವನ್ನು ನಿರ್ಮಿಸಿ, ಅದನ್ನು ನಿಯಂತ್ರಿಸಿ, ಅದರೊಳಗೂ ಹೊರಗೂ ವ್ಯಾಪಿಸಿರುವ 'ವಿಶ್ವಂಭರ'ನನ್ನು ನೆನಪಿಸಿಕೊಳ್ಳಲು ಹವಣಿಸಿದ್ದು ಈ ಕವನ, ತಮಗೆ ಧನ್ಯವಾದಗಳು

    ReplyDelete
  6. tumba chennagide sir kavana.... prakrutiya moola kandukoLLalaagadu allave..

    ReplyDelete
  7. ತುಂಬಾ ಚೆನ್ನಾಗಿದೆ ಕವನ.

    ReplyDelete
  8. ಪ್ರಕೃತಿಯನ್ನುಯನ್ನು ಕುರಿತು ಇದು ವಿಭಿನ್ನ ಅವಲೋಕನವಷ್ಟೇ, ಅದರ ಮೂಲ ನಮಗೆ ತಿಳಿದುಬಂದರೆ ನಾಳೆ ಅಲ್ಲೇ ರಾಜಕೀಯ ಶುರುಮಾಡುವ ಶೂರ ಮಾನವರು ನಾವು! ಪ್ರತಿಕ್ರಿಯೆಗಳಿಗಾಗಿ ಮೇಡಂ ತಮಗೂ ಮತ್ತು ಸೀತಾರಾಮ್ ಸರ್ ತಮಗೂ ಧನ್ಯವಾದಗಳು

    ReplyDelete
  9. ಯಾರು?
    ಯಾರು?
    ಯಾರು?




    ಎಂದೂ ಅರಿಯಲಾಗದ, ಎಂದೂ ಕಾಣಲಾಗದ, ಎಂದೂ ಉತ್ತರ ದೊರಕದ ಪ್ರಶ್ನೆ!

    ಕವನ ಚನ್ನಾಗಿದೆ,


    ಶ್ರೀಯುತ ಮಾಸ್ಟರ್ ಹಿರಿಯಣ್ಣಯ್ಯನವರು ಪ್ರತಿಕ್ರಿಯಿಸಿದ್ದು ಸಂತೋಷದ ಸಂಗತಿ.....

    ReplyDelete
  10. ಧನ್ಯವಾದಗಳು ಶ್ರೀ ಪ್ರವೀಣ್ ತಮಗೆ

    ReplyDelete
  11. ಯಾರು..............
    ಪ್ರಯತ್ನ ವಷ್ಟೇ ಮಾಡಬಹುದು... ಕೊನೆಗೆ ಉಳಿಯುವ ಪ್ರಶ್ನೆ....... ಯಾರು......?

    ReplyDelete
  12. ಶ್ರೀಯುತ ದಿನಕರ್ , ಥ್ಯಾಂಕ್ಸ್ ಫಾರ್ ಯುವರ್ ಕಾಮೆಂಟ್ಸ್

    ReplyDelete