ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ
Showing posts with label ರಾಜಕೀಯ ವಿಡಂಬನಾ ಕಾವ್ಯ[Rajakkeya Vidambanaa Kaavya]. Show all posts
Showing posts with label ರಾಜಕೀಯ ವಿಡಂಬನಾ ಕಾವ್ಯ[Rajakkeya Vidambanaa Kaavya]. Show all posts

Tuesday, September 13, 2011

ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!


ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!

[ನಾಕಾರು ದಿನ ಕೆಲವರನ್ನು ಹೀಗೇ ಸ್ತುತಿಸೋಣ ಎಂಬ ತುಂಬುಹೃದಯದ ಹಂಬಲದಿಂದ ಮೊದಲನೆಯದಾಗಿ ಇಂದು ಜನಾರ್ದನ ಭಜನೆ!]

ಗದರಿದನು ಗಣಿರಾಯನುದಯಿಸಿ
ಹೆದರಿಸುತ ಹಲವರನು ಹಣದೊಳು
ಒದರಿದನು ತಾಂಕೃಷ್ಣರಾಯುಡುವಿಜಯನಗರಧಿಪ !!
ಸದರಿ ಮಾನವ ಹುದುಗಿ ನಿಧಿಗಳ
ಬದರಿನಾರಾಯಣನ ಮೀರಿಸೆ
ಚದುರಿನಿಂತನು ರಾಜಕೀಯದ ಬಿದಿರು ಬೊಂಬೆಗಳ !

ಎದುರು ಜಾವದ ಮೂರುಗಂಟೆಗೆ
ಖದರುವೇಷವದೈದು ಕೋಟಿದು
ನಿದಿರೆ ತೊರೆದರು ನೆಂಟರಿಷ್ಟರು ಅದನು ನೋಡುವೊಲು !
ಮಧುರ ನುಡಿಗಳ ಕೇಳಿ ವಿನಯದಿ
ಅಧರವಾಡದೆ ಶರಣು ನಿಂದರು
ಪದರಪದರದಿ ಕಾಸನಿರಿಸಿದ ದೊರೆಗೆ ವಂದಿಸುತ !!

ಗೆದರಿ ದಾಖಲೆ ಕಾಗದಂಗಳ
ಮುದುರಿ ಸಿಬಿಐ ಜನಂಗಳು

ಉದಯನುದಿಸುವ ಮೊದಲೆ ಹಾಜರು ಬದಲಿ ಗುರುತಿನಲಿ !
ಮದಿರೆ ಮಾನಿನಿ ಹಣದ ಥೈಲಿಯ
ಉದುರಿಸಿದರದನೊಲ್ಲೆನೆಂದರು
ಅದಿರು ದಂಧೆಯ ಪ್ರಮುಖ ಕುಳವನು ಹದನೆ ಕರೆದೊಯ್ದು !!

ಉದರ ಭರ್ತಿಗೆ ಎದುರು ಖರ್ಚಿಗೆ
ಮೊದಲಿರುವ ಮೂವತ್ತು ಸಾವಿರ
ಅದರಲೇ ಅತಿಕಡಿಮೆ ಬಳಸುತ ಸರಳ ತಾನೆಂದ !
ಕುದುರದಾಯಿತು ಯಾವ ಆಮಿಷ
ಕುದುರೆಗಳು ಮಾರಾಟಗೊಳ್ಳವು
ಬೆದರಿನಿಂದನು ಕಂಬಿಯೆಣಿಸುತ ತಾ ಜನಾರ್ದನನು !!

Friday, June 25, 2010

’ಇದು ದೀಪ ಇರುತ್ತದೆ’!!!


’ಇದು ದೀಪ ಇರುತ್ತದೆ’!!!


ದೀಪಕ್ಕೆ ’ಇದು ದೀಪ ಇರುತ್ತದೆ’ ಎಂದು ಯಾರೂ ಬೋರ್ಡು ಹಾಕುವುದಿಲ್ಲ ಅಲ್ಲವೇ? ದೀಪವನ್ನು ನೋಡಿದ ತಕ್ಷಣ ನಮಗೆ ಗೊತ್ತು ಅದು ದೀಪ್ ಎಂಬುದು! ಯಾಕೆಂದರೆ ಅದು ಸುತ್ತಲ ಪ್ರದೇಶಕ್ಕೆ ಬೆಳಕು ಹರಿಸಿರುತ್ತದೆ. ಹಾಗೆಯೇ ಜ್ಞಾನಿಗಳು, ಮಹಾತ್ಮರು ಎಲ್ಲರ ಬದುಕು. ಅವರು ತಾವು ಇಂಥವರು ಅಂಥವರು ಮೆಂತೆ ಕದ್ದವರು ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಅದೆಲ್ಲಾ ಏನಿದ್ದರೂ ರಾಜಕೀಯದವರಿಗೆ ಬಿಟ್ಟಿದ್ದು. ಇತ್ತೀಚಿನ ರಾಜಕೀಯದ ಹಲವು ದುಂದುಗಾರಿಕೆಗಳಲ್ಲಿ ಸಮಾವೇಶಗಳೂ ಒಂದು. ಸಾಧನೆ ಮಾಡಿದ್ದರೆ ಅದನ್ನು ಜನತೆ ಮೆಚ್ಚುತ್ತಾರೆ, ಅದಕ್ಕಾಗಿ ಸಮಾವೇಶ ಯಾತಕ್ಕೆ ಬೇಕು ? ಹಿಂದೆ ರಾಮರಾಜ್ಯವನ್ನು ನಾವು ಕೇಳಿಲ್ಲವೇ? ಅಂತಹ ಅನ್ವರ್ಥಕ ನಾಮ ಪಡೆದ ರಾಜ್ಯ ಅದಾಗಿತ್ತು, ಅಲ್ಲೆಲ್ಲೂ ಈ ಥರದ ಸಮಾವೇಶಗಳು ನಡೆದಿರಲಿಲ್ಲ ಅಲ್ಲವೇ? ನಡೆದಿದ್ದಾದರೆ ಅದು ಉಲ್ಲೇಖಗೊಳ್ಳುತ್ತಿತ್ತು.

ಇಂದಿನ ಜನತೆ ಪಾಲಾಗಿ ಹೋಗಿದ್ದಾರೆ, ಕೈ ಬೆಂಬಲಿಗರು,ಕಮಲ ಬೆಂಬಲಿಗರು,ತೆನೆಹೊತ್ತ ಮಹಿಳೆ ಬೆಂಬಲಿಗರು ಹೀಗೆಲ್ಲ ಹಲವಾರು ಬೆಂಬಲಿಗರುಗಳು--ಆ ಬೆಂಬಲಿಸುವಿಕೆಗೆ ಅರ್ಥವೇ ಇಲ್ಲ! ಪಕ್ಷದ ಕಾರ್ಯಕರ್ತನಾಗಿ ಕಾಸು ಹೊಡೆಯುವ ಪ್ಲಾನು! ಅಲ್ಲಿ ನ್ಯಾಯ-ನೀತಿ-ಧರ್ಮ ಎಲ್ಲ ಬರೇ ಪುಸ್ತಕಗಳಲ್ಲಿವೆ. ನಾನು ಈ ಮೊದಲೇ ಬರೆದಂತೆ ಹಳ್ಳಿ ಹಳ್ಳಿಗಳಲ್ಲೂ ಈ ರಾಜಕೀಯ ಹೊಕ್ಕು ಅಕ್ಕ-ಅಣ್ಣ ಎಂದುಕೊಂಡಿದ್ದ ಮಂದಿಯೆಲ್ಲ ಈಗ ಆ ಪಕ್ಸದ ಅಧ್ಯಕ್ಸರು ಈ ಪಕ್ಸದ ಕಾರ್ಯಕರ್ತ್ರು ಅಂತಲೇ ಗುರುತಿಸಿಕೊಳ್ಳುತ್ತಾರೆ....ಏನಾಗಿದೆ ನಮ್ಮ ಜನರಿಗೆ? ನಮಗೆ ಬೇಕಾದುದು ಒಳ್ಳೆಯ ಸೌಲಭ್ಯಸಹಿತ ಸಂತೃಪ್ತ ಜೀವನ-ಅದನ್ನು ದೊರಕಿಸಿ ಕೊಡುವಂತಹ ಸರಿಯಾದ ವ್ಯಕ್ತಿ ಯಾರೋ ಅವನಿಗೆ ಪಕ್ಷಭೇದವಿಲ್ಲದೇ ಮತದಾನ ಮಾಡಬೇಕು. ಮೇಲಾಗಿ ಇಡೀ ದೇಶದಲ್ಲಿ ಎರಡೇ ಪಕ್ಷಗಳಿದ್ದರೆ ಆಗ ದಿನಬೆಳಗಾಗಿನ ದ್ಯಾವು,ಸಿದ್ದು,ಜಾನು, ರಾಮು ಇವರೆಲ್ಲರ ಕಿತ್ತಾಟ-ತೇಪೆ ಹಚ್ಚಿಕೊಂಡು ರಾಜಕೀಯ ಅಧಿಕಾರ-ದುಡ್ಡಿನ ಲಾಲಸೆಗಾಗಿ ತೆಕ್ಕೆಹಾಕಿಕೊಳ್ಳುವುದು ನಿಲುತ್ತದೆ, ಪಕ್ಷಾಟನೆ- ಕುದುರೆ ವ್ಯಾಪಾರ ಎಲ್ಲಾ ಮಾಯವಗಿ ಜನತೆ ನಿರುಂಬಳರಾಗುತ್ತಾರೆ! ಆದರೆ ’ಅಂದಕಾಲತ್ತಿಲ್’ ಎಂಬಂತೆ ಸ್ವಾತಂತ್ರ್ಯ ಬಂದಾಗ ಅರ್ಜೆಂಟಾಗಿ ಮಾಡಿದ ನಮ್ಮ ಸಂವಿಧಾನದಲ್ಲಿ ಅನೇಕ ನ್ಯೂನತೆಗಳಿವೆ-ಅವುಗಳು ಹಾಗೇ ಇರುವವರೆಗೂ ರಾಜಕೀಯದವರ ಆಸ್ತಿ ಬೆಳೆಯುತ್ತದೆ-ಹಲವಾರು ಅನುಪಯುಕ್ತ ಸಮಾವೇಶಗಳು ನಡೆಯುತ್ತಲೇ ಇರುತ್ತವೆ!

ಎಲ್ಲಿಯವರೆಗೆ ಸಂವಿಧಾನದ ತಿದ್ದುಪಡಿ ಆಗುವುದಿಲ್ಲವೋ ಅಲ್ಲೀವರೆಗೆ ನ್ಯಾಯವೇ ಮೂರ್ತಿವೆತ್ತಂತ ವೆಂಕಟಾಚಲೈಯ್ಯ, ಸಂತೋಷ ಹೆಗ್ಡೆ ಇಂಥವರಿಗೆಲ್ಲ ನೋವು ಸಹಜ! ಕಥೆಯೋಮ್ದು ನೆನಪಿದೆ -ನೀನು ಹೊಡೆದ ಹಾಗೇ ಮಾಡು, ನಾನು ಸತ್ತಹಾಗೇ ನಟಿಸುತ್ತೇನೆ’ ಎಂದು, ಅದೇ ರೀತಿ ನೀವು ಹಿಡಿದ ಹಾಗೇ ಮಾಡು, ನಾವು ಶಿಕ್ಷಿಸಿದ ಹಾಗೇ ಮಾಡುತ್ತೇವೆ ಎಂದು ಆಳುವ ದೊರೆಗಳು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರುವ ಕೆಲಸ ಸದ್ಯ ಲೋಕಾಯುಕ್ತ ಸ್ಥಾನದ್ದು! ಅದರಲ್ಲೂ ಕಳ್ಳರನು-ಖೂಳರನ್ನು ಹಿಡಿಯುವಗಲೇ ಫೋನು,ಬೆದರಿಕೆ ಇತ್ಯಾದಿ! ಯಾಕಾಗಿ ಮಾಡಬೇಕು ಇದನ್ನು, ನಮ್ಮ ಜನರಿಗೆ ದಮ್ಮಿದ್ದರೆ ಎದ್ದು ಬಂದು ಚಳುವಳಿ ನಡೆಸಿ ಲೋಕಯುಕ್ತರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿಸಲಗುವುದಿಲ್ಲವೇ? ಇದು ಲೋಕಾಯುಕ್ತರಿಗೆ ಮಾತ್ರವಲ್ಲ- ಎಲ್ಲ ಆ.ಭಾ.ಸೇ, ಆ.ಕ.ಸೇ ಮುಂತಾದ ಬ್ಯೂರೋಕ್ರಾಟ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಎತ್ತಾಕಿ ಅವನನ್ನು ಎಂದರೆ ಅಲ್ಲಿಂದ ರಾತ್ರೋ ರಾತ್ರಿ ವರ್ಗಾವಣೆ- ಏನು ಅ ಅಧಿಕಾರಿಗೆ ನಮಗಿರುವಂತೆ ಹೆಂಡತಿ-ಮಕ್ಕಳು ಇರುವುದಿಲ್ಲವೇ, ಸಂಸಾರದ ಆರೋಗ್ಯ,ಮಕ್ಕಳ ವಿದ್ಯಾಭ್ಯಾಸ ಇವೆಲ್ಲದರ ಕುರಿತು ವರ್ಗಾಯಿಸುವಾಗ ದೊರೆಗಳು ವಿಚಾರಿಸುತ್ತಾರೆಯೇ? ಇಲ್ಲವಲ್ಲ. ತನ್ನ ಬಚಾವಿಗಾಗಿ, ತನ್ನ ಉಳಿವಿಗಾಗಿ ತನ್ನಿಂದ ಆದ ಹೆಚ್ಚಿನ ಕಾಣಿಕೆಯನ್ನು ಕಾಣದ ಕೈಗೆ ಕೊಡಬೇಕಾಯಿತು ಆತ! ಅಲ್ಲಿಂದಲೇ ಶುರು ಬ್ರಷ್ಟಾಚಾರ! ಬ್ರಷ್ಟಾಚಾರದ ನಿರ್ಮೂಲನೆ ಮೇಲಿಂದ ಕೆಳತನಕ ಆಗ್ಬೇಕೇ ಹೊರತು ಕೆಳಗಿನಿಂದ ಮೇಲೆ ಹೋಗುತ್ತಾ ಹೋದರೆ ಶತಶತಮಾನಗಳು ಕಳೆದರೂ ಅದು ಲಂಗು-ಲಗಾಮು ಇಲ್ಲದೇ ಬೆಳೆಯುತ್ತದೆ! ಇದನ್ನು ನೋಡಿದಾಗ ನಮಗೆ ರಾಜರುಗಳ ಆಳ್ವಿಕೆಯೇ ಮೇಲೆಸುತ್ತದೆ ಅಲ್ಲವೇ?

ಇನ್ನೊಂದನ್ನು ತಮ್ಮೆಲ್ಲರಲ್ಲಿ ಹೇಳಬೇಕಾಗಿದೆ, ಇವತ್ತು ಜನಸಂಖ್ಯೆಯ ದೃಷ್ಟಿಯಲ್ಲಿ ಮೈನಾರಿಟಿ ಎಂಬುದು ಆ ಮಟ್ಟದಲ್ಲಿ ಇಲ್ಲ, ಎಲ್ಲಾ ಮೈನಾರಿಟಿ ಈಗ ಬದಲಾಗಿ ಮೆಜಾರಿಟಿಗೆ ಬಂದಿದೆ! ಮೈನಾರಿಟಿ-ಮೆಜಾರಿಟಿ, ಆ ಕೋಮು -ಈ ಕೋಮು,ಆ ಜಾತಿ-ಈಜಾತಿ, ಹಿಂದ-ಅಹಿಂದ,ಮೀಸಲಾತಿ-ಒಳಮೀಸಲಾತಿ ಇವೆಲ್ಲ ಯಾತಕ್ಕೆ ಸ್ವಾಮೀ? ಭಾರತ ಒಂದೇ, ಇಲ್ಲಿನ ಪ್ರಜೆಗಳೆಲ್ಲ ಒಂದೇ ಎಂಬ ಏಕರೂಪದ, ತಾರತಮ್ಯವಿರದ ಆಢಳಿತವನ್ನು ಇಟ್ಟು ಯಾರು ಪರಿಶ್ರಮದಿಂದ ಮೇಲೆಬರುತ್ತಾರೋ ಅಂತವರಿಗೆ ಆದ್ಯತೆ ಕೊಟ್ಟರೆ ಅಲ್ಲಿಗೆ ಬಹುಪಾಲು ಬ್ರಷ್ಟಾಚಾರ ವೇಗವಾಗಿ ಕಡಿಮೆಯಾಗುತ್ತದೆ. ಸುಳ್ಳು ಸರ್ಟಿಫಿಕೇಟ್ ಗಳು,ಜಾತಿ ಪತ್ರಗಳು, ಆದ್ಯತಾ ಪತ್ರಗಳು, ಶಾಸಕ-ಸಂಸದ-ಮಂತ್ರಿಗಳ ಪರ್ಸನಲ್ ಆದ್ಯತೆಗಳು ಎಲ್ಲವೂ ಹೊರಹೊರಟು ಟ್ರಾನ್ಸ್ಪರಂಟ್ ಆಢಳಿತವಾಗುತ್ತದೆ. ಖಜಾನೆಗೆ ಬರುವ ಮತ್ತು ಹೋಗುವ ಹಣದ ಲೆಕ್ಕದ ಜೊತೆಗೆ ಸರಕಾರೀ ಕೆಲಸಗಳನ್ನು ಮಾಡುವ ಗುತ್ತಿಗೆದಾರರಿಗೆ ಕೆಲವೊಂದು ನಿಬಂಧನೆಗಳನ್ನು ಹಾಕಿದರೆ ಅಲ್ಲಿ ಬ್ರಷ್ಟಚಾರ ಕಮ್ಮಿ ಆಗುತ್ತದೆ. ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಹುಕಾಲ ತಿಂದು ಬದುಕಿರುವ ಹಳೆಯ ಭೂತಗಳಮೇಲೆ ಸ್ವತಂತ್ರ ಲೋಕಾಯುಕ್ತರು ತಮ್ಮ ಮಾಂತ್ರಿಕತೆಯನ್ನು ಮೆರೆದರೆ ಅಲ್ಲಿಗೆ ಹಲವು ಹಂತಗಳ ಬ್ರಷ್ಟಾಚಾರ ಕಮ್ಮಿ ಆಗುತ್ತದೆ. ಆದರೆ ನಮ್ಮ ಸ್ಥಿತಿ ಹೇಗಿದೆ ಎಂದರೆ ಬೆಕ್ಕಿಗೆ ಘಂಟೆ ಕಟ್ಟುವವರಾರು ಎಂಬಂತಾಗಿದೆ! ಇದನ್ನೆಲ್ಲ ಗ್ರಹಿಸಿಯೇ ಸರಿಯಾದ ವ್ಯಕ್ತಿ ಲೋಕಾಯುಕ್ತರಾಗಿರಲು ಹೇಸುತ್ತಾರೆ, ಈಗ ಶ್ರೀ ಹೆಗ್ಡೆಯವರಿಗೆ ಆಗಿದ್ದೂ ಅಷ್ಟೇ!

ತಮ್ಮೊಳಗೇ ಕಿತ್ತಾಟ, ಮುಸುಕಿನ ಗುದ್ದಾಟ ಮುಗಿಸಿಕೊಳ್ಳದ ಜನ ಸಮಾವೇಶ ಮಾಡುವುದೇತಕ್ಕೆ? ಅಷ್ಟಾಗಿಯೂ ಇವರು ಮಾಡಿದ ಅಂತಹ ಘನಂದಾರೀ ಕೆಲಸ ಯಾವುದೇ ಸರಕಾರ ಮಾಡಲಗದಂತಹ ಅಸಾಮಾನ್ಯ ಕೆಲಸವೇನು? ನೆರೆಪರಿಹಾರದ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ, ಬೇಕಾದಲ್ಲಿ ರಸ್ತೆ ಮಾಡುವುದು ಬಿಟ್ಟು ಬೇಡದಲ್ಲಿ ರಸ್ತೆ, ಬೋರು, ಅಂಡರ್ಪಾಸು ಇತ್ಯದಿ ಮಾಡುತ್ತ ಇದನ್ನೇ ಹೆಗ್ಗಳಿಕೆಯೆನ್ನುವವರಿಗೆ ಏನೆನ್ನಬೇಕು? ಇದಕ್ಕೇ ಹೇಳಿದ್ದು ಸಾಧಿಸಿದವರು ಅದನ್ನು ಸಮಾವೇಶ ಕರೆದು ತೋರಿಸಬೇಕಿಲ್ಲ, ಜನರಿಗೆ ಕಣ್ಣಿದೆ,ಬುದ್ಧಿಯಿದೆ. ಮತದಾರ ದೂರದಿಂದ ನೋಡುತ್ತಿರುತ್ತಾನೆ! ಹೊಗೆಯ ಮೂಲ ಬೆಂಕಿ ಎಂಬುದು ಎಲ್ಲರಿಗೂ ಗೊತ್ತು! ಇದಕ್ಕಾಗಿ ಕೋಟಿಗತ್ತಲೇ ಖರ್ಚುಮಾಡಿ ಸಮಾವೇಶಬೇಕೆ? ಹೋಗಲಿ ಸಮಾವೇಶದಲ್ಲಿ ನಿಜವಾಗಿ ’ಸಾಧನೆ’ಗೈದ ಸಂಪಂಗಿ,ರೇಣುಕ, ಹಾಲಪ್ಪ ಇವರೆಲ್ಲರಿಗೂ ಸನ್ಮಾನವನ್ನಾದರೂ ಮಾಡಿ!

ಕೊನೆಯದಾಗಿ ಒಂದುಮಾತು,ನಿನ್ನೆಯ ಒಂದು ದಿನಪತ್ರಿಕೆಯೊಂದರಲ್ಲಿ ಒಬ್ಬರು ಬರದ್ರು ಇಂಥಾ ಮಂತ್ರಿ-ಅವರೊಳಗೆ ನೀವರಿಯದ ಇಂಥಾ ಒಳ್ಳೆಯ ಮುಖಗಳು ಅಂತ. ಸ್ವಾಮೀ ಹತ್ತುಮಂದಿಯ ಆಸ್ತಿಯಾದ ಭೂಮಿಯಲ್ಲಿ ನಿಸರ್ಗವನ್ನು ದೋಚುವ ಗಣಿಗಾರಿಕೆಯಿಂದ ಗಳಿಸಿದ ಹಣವನ್ನು ತಮ್ಮ ಸ್ಥಾನಭದ್ರತೆಗೆ ಉಪಯೋಗಿಸುತ್ತಿದ್ದಾರೆ, ಅದಿಲ್ಲಾ ಅವರು ಮುಂದೆ ಅಧಿಕಾರಕ್ಕೆ ಬರುವುದಿಲ್ಲ! ಅಧಿಕಾರವಿಲ್ಲದಿದ್ದರೆ ಗಣಿ ಕೈತಪ್ಪಿ ಹೋಗುತ್ತದೆ! ಹೀಗಾಗೇ ಬರೆದ ಆ ಮಹನೀಯರಿಗೊಂದು ಹೇಳುತ್ತೇನೆ ನಾವರಿಯದ ಅ ಮುಖ ನಾವರಿಯದಿದ್ದರೂ ಅರಿತೇ ಇರುವುದು! ಅಲ್ಲಿ ಸ್ವಾರ್ಥವೇ ಇದೆ! ನಮ್ಮ ಹಿಂದಿನ ಜನಾಂಗ ನಿಸರ್ಗವನ್ನು ಇಷ್ಟೊಂದು ದೋಚಿರಲಿಲ್ಲ! ನನಗೂ ಒಂದಷ್ಟು ಅನುಕೂಲ ಕೊಡಿ-ಹಲ್ವಾರು ಜನರಿಗೆ ದಿನಾ ಅನ್ನಸತ್ರ ಮಾಡುತ್ತೇನೆ, ಹಲವು ಚಿಕ್ಕ-ಪುಟ್ಟ ಸೌಲಭ್ಯ ಕೊಡಿಸುತ್ತೇನೆ, ಸಾಮೂಹಿಕ ಮದುವೆಮಾಡಿಸುತ್ತೇನೆ--ಇದೆಲ್ಲಾ ರಾಜಕೀಯದವರ ಅಂಗಸೌಷ್ಟವ ಸ್ವಾಮೀ, ಅದಕ್ಕಿಂತಾ ಭಿನ್ನವಾದ ಬೇರಾವ ರೀತಿಯ ಮುಖವಿದೆಯೇ ಹೇಳಿ? ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಬಹಳಕಾಲ ಬರೋದಿಲ್ಲ ಅನ್ನೋ ಗಾದೆ ಇದ್ಯಲ್ಲ ಹಾಗೇ ಜನಸಾಮಾನ್ಯನಿಗೆ ಅವನು ದುಡಿದು ತಿನ್ನಲು ಅನುಕೂಲವಾಗುವ ಪರಿಸರ ನಿರ್ಮಿಸಬೇಕೇ ಹೊರತು ಕ್ಷಣಿಕ ಆಮಿಷಗಳು-ದಾಸೋಹಗಳು ಜನರಲ್ಲಿ ಆಲಸ್ಯವನ್ನು ಬೆಳೆಸುತ್ತವೆ, ಜನ ತಮ್ಮತನವನ್ನು ಕಳೆದುಕೊಳ್ಳುತ್ತಾರೆ-ಇದು ಸಮಾಜಕ್ಕೆ ಅಂಟುವ ಪಾರ್ಕಿನ್ಸನ್ ಕಾಯಿಲೆಯಾಗುತ್ತದೆ. ದಾಸೋಹ ನಡೆಸಲು ಮಠ-ಮಾನ್ಯಗಳಿವೆ,ಮಂದಿರ-ಮಸೀದಿಗಳಿವೆ, ಅವುಗಳನ್ನು ನಡೆಸುವುದಕ್ಕಿಂತ ಆ ಅನಿವಾರ್ಯತೆ ಜನರಲ್ಲಿ ತಲೆದೋರದಂತೆ ನೋಡಿಕೊಳ್ಳಿ! ವೀರ ಮಯೂರವರ್ಮರು-ಹೊಯ್ಸಳರು-ವಿಜಯನಗರದ ಅರಸರು ಆಳಿದ ಈ ನಾಡಿನಲ್ಲಿ ಸ್ವಾವಲಂಬನೆಯ ಮಂತ್ರ ಹೇಳಿಕೊಡಿ, ಭಿಕ್ಷಾಟನೆ ಬೇಡ ಅಲ್ಲವೇ? ನಮ್ಮಲ್ಲಿನ ರಾಜಕೀಯಕ್ಕೆ ಸದ್ಯ ಎಚ್.ಎನ್ ರಂತಹ ಶಿಕ್ಷಣ ಕೊಡುವವರು, ನಿಜಲಿಂಗಪ್ಪ-ಕಡಿದಾಳು ಮಂಜಪ್ಪ ಥರದವರು ಬೇಕು. ಆವರು ನಿತ್ಯ ಅವರ ಮನೆಗಳಲ್ಲಿ ದಾಸೋಹ ಮಾಡಲಿಲ್ಲ, ಪತ್ರಿಕೆಗಳಲ್ಲಿ ಬಹಳ ಕಾಣಿಸಿಕೊಳ್ಳಲಿಲ್ಲ ಬದಲಿಗೆ ಜನಸಾಮಾನ್ಯನ ಮನೆಯಲ್ಲಿ ದಿನದ ದಿನಸಿಗೆ ಕೊರತೆ ಆಗದಂತೆ ನೋಡಿಕೊಂಡರು, ಅವರ ಮನೆಗಳಲ್ಲಿ ದಿನವೂ ದೀಪ ಬೆಳಗುವಂತೆ ಕಣ್ಣಿಟ್ಟು ಕಾದರು! ಅವರು ಮಡಿದಾಗ ಅವರ ಅಂತ್ಯಕಿಯೆಗೆ ಹೊರತಾಗಿ ಅವರಲ್ಲಿ ಬೇರಾವ ಕಾಸೂ ಇರಲಿಲ್ಲ-ಹೇಳಿಕೊಳ್ಳುವಂತಹ ಸ್ಥಿರಾಸ್ತಿಯೂ ಇರಲಿಲ್ಲ! [ಆದ್ರೆ ಆಂಧ್ರದಲ್ಲಿ ವೈ ಎಸ್ ಆರ್ ಸತ್ತಾಗ ಅವರ ಪರಿವಾರದ ಆಸ್ತಿ ೩೩ಸಾವಿರ ಕೋಟಿ ರೂಪಾಯಿ ಅಂತ ಹಲವು ಮಿಂಚಂಚೆಗಳು ಇನ್ನೂ ಪ್ರಚಲಿತದಲ್ಲಿವೆ -ಇವರೂ ಬದುಕಿದ್ದಾಗ ದಾಸೋಹಿಗಳಾಗಿದ್ದರು,ಈ ಮಿಂಚಂಚೆ ತಮಗೂ ಬಂದಿರಬಹುದು!] ಅಂತಹ ಸುಪುತ್ರರು ಬೇಕು ಕರ್ನಾಟಕಕ್ಕೆ, ಅಂತಹ ನಿಸ್ಪೃಹರು ಬೇಕು ನಮ್ಮ ದೇಶಕ್ಕೆ !

ಬಹಳ ಕೊರೆದುಬಿಟ್ಟೆನೇ? ಬೇಸರವಾಯಿತೇ? ಎಂದಿನಂತೆ ಒಂದು ಚಿಕ್ಕ ಹಾಡಿನೊಂದಿಗೆ ಮಂಗಳ ಹಾಡೋಣ ಅಲ್ಲವೇ?


ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಭೂಮ್ಯಾಗೆ ಹಣವಚೆಲ್ಲಿ ಮಂಕ್ರಿಯಪ್ಪ ಕಾರೇರಿ ಬಂದ ................

ಮಳೆ-ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ
ಸ್ಯಾಮಿಯಾನ್ದ ಮೇಲ್ ಮಂಜು ಹನಿ ಇಂಗೋಗೈತೆ
ಫ್ಲೆಕ್ಸು ಹಾರುತಿದೆ ಧೂಳು ಹರಡುತಿದೆ
ಜನತೆ ನೋಡುತಿದೆ ಹಣೆ ಚಚ್ಚಿಕೊಳ್ಳುತಿದೆ !

ಯಾಕ್ಲಾ ಲೂಸ್ ಮಾದ ಗುರ್ ಗುಟ್ತೀಯ್ಯಾ......?
ಎಣ್ಣೆ ಸಾಕಾಯಕಿಲ್ವಾ.....?

ರೈತರಿಗೆ ಹೊಸ ಸೌಲತ್ತನ್ನು
ಕೊಡುವೆನೆಂದು ಕಿತ್ತು ಭೂಮಿಯನ್ನು
ಕೈತೋರಿಸಿ ಅವರ್ಗೆ ಆಕಾಸ್ನಾಗೆ
ಹಾರೋದರು ಬೇಗ ಇಮಾನ್ದಾಗೆ
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಗಣಿಗಳಲಿ ಧಣಿಗಳು ಚೆನ್ನಾಗ್ಮೆದ್ದು
ಗಡಿಭಾಗದ ಜನಕ್ಕೊರ್ಸಿ ’ಜೇನುಕೈನ’
ಪೇಪರ್ನಾಗೆ ಮಿಂಚಿ ನಾ ನಾ ಥರ
ಆಗವ್ರೆ ಬಲು ಜೋರು ಶಿವನೇ ಹರ
ಓಹೋ ಹೋ ಹೋ ಹೋ ಹೋ ಆಹಾಹಾ......ಹೋ

ನೆರೆಕಂಬಳ ಗ್ಲೋಬಲ್ ಇನ್ವಸಟ್ಮಂಟು
ಎಲ್ಲಾದ್ರಾಗೂ ಉಂಟು ನೋಟಿನ ನಂಟು!
ತಮ್ಮೊಳಗೇ ತಾವ್ಯಾರು ತೋರ್ಸ್ಗಂಬುದು
ಈ ಇಸ್ಯಕ್ಕೊಂದಷ್ಟು ಖರ್ಚಾಕೋದು
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಏ ಏ ಎಲ್ಲಾಪ್ಪಾ ಇವ್ರೂ ಏಳ್ಲಾ ಮಾದ ಹೊತ್ತಾಯ್ತದೆ, ಹೊಟ್ಟೆ ಚುರುಗುಟ್ತೈತೆ ಮನೇಲಿ ಹಿಟ್ಟು ಆಗೋಗದೆ....ಮಂಕ್ರಿಯಪ್ಪೋರ್ನ ಕೇಳ್ದೆ ಒಸಿ ಇರು ಇನ್ನೊಂದ್ಕಿತಾ ಇಲೆಕ್ಸನ್ನಾಗೆ ಬತ್ತೀನಿ ಅಂತಂದ್ರು...ಹೋಗುದ್ಕೆ ಕೈಗೊಂದ್ ಕೆಂಪ್ ನೋಟ್ ಕೊಟ್ಟವ್ರೆ..ಭಾಳಾ ವಳ್ಳೆ ಜನ ನಮ್ಮ ಮಂಕ್ರಿಯಪ್ಪ್ನೋರು...ಊಟಿಲ್ಲಾ ಅಂದ್ರೆ ತಮ್ಮನೆತಾವ ಮಾಡ್ಕಂಡೋಗ್ಬುಡು ಅಂದ್ರು....ಏಳ್ರಪೋ .....ಹೇ ಹೇ...ಹೇ........

Monday, June 7, 2010

ಸಹಾಯ ’ಹಸ್ತ’!


ಸಹಾಯ ’ಹಸ್ತ’!

ಭಳಿರೇ ಪರಾಕ್ರಮ ಕಂಠೀರವ ! ನಮೋನ್ನಮಃ !

"ಇತ್ತ ಕಾಂಗ್ರೆಸ್ ಪಾಳೆಯದಲ್ಲಿ ಬಹುದಿನಗಳಿಂದ ಯಾವುದೇ ಕಜ್ಜಾಯದ ತಿನಿಸು ಸಿಕ್ಕಿರಲಿಲ್ಲ, ಇದನ್ನೇ ಯೋಚಿಸುತ್ತ ಬರುತ್ತಿರಲಾಗಿ ಏನದು ಯಾರದದು ಕೂಗು? ಓಹೋ ಮಾಧ್ಯಮದವರೇ ? ಕೆಲವಾದರೂ ಒಳ್ಳೆಯ ಕೆಲಸ ನಿಮ್ಮಿಂದ ಆಗುತ್ತಿದೆಯಲ್ಲಾ, ಬಹಳ ಸಂತೋಷ, ಬಹಳ ಸಂತೋಷ!

ಅದೇನು ಟೈಲ್ಸ್ ವ್ಯವಹಾರ ಅಂತೆಲ್ಲಾ ಕೇಳುತ್ತಿರುವಿರಲ್ಲ ಯಾಕೆ? ಟೈಲ್ಸ್ ದುಬಾರಿಯಾಯಿತೇ?
ಅದಲ್ಲವೇ? ಇನ್ನೇನು ವಿಷಯ? ಏನೂ ನೆರೆಪರಿಹಾರ ಕಾಮಗಾರಿ ಜೋರಾಗಿದೆಯೇ? ಅಲ್ಲಲ್ಲ ಹಾಗಾದ್ರೆ ? ನೆರೆಪರಿಹಾರಕ್ಕೆ ಸಂಗ್ರಹಿಸಿದ ಹಣ ಹೆಗ್ಗಣದ ಜರುವಿಗೆ ಬಿದ್ದು ಕಾಣದಾಯಿತೇ? ಅದೂ ಅಲ್ಲ? ಏನ್ ಹೇಳ್ತಿದೀರಾ ನೀವು ನನಗೊಂದೂ ಅರ್ಥವಾಗ್ತಾ ಇಲ್ಲ. ಇರಲಿ ಸ್ವಲ್ಪ ನೀವೇ ಹೇಳೊದನ್ನ ಓದಿ/ನೋಡಿ ತಿಳಿದು ಆಮೇಲೆ ಮಾತಾಡುತ್ತೇನೆ."

" ಸ್ವಾಮೀ ಗುಪ್ತಚಿತ್ರರೇ ನಿಮ್ಮಿಂದ ಸುಧಾರಿಸಲು ಆಗದ ಕೆಲಸ ಇದು, ತಾವು ತಮ್ಮ ರಾಜ್ಯಕ್ಕೆ ಮರಳಬಹುದು"

" ಯಾರೂ ಯಾರದೂ ಮತ್ತೆ ಬಡಬಡಿಸುತ್ತಿರುವುದು ? "

ಮನುಜ ಲೋಕದ ಮಾರಿಹಬ್ಬವನ್ನು ನೋಡಬೇಕು ಎಂದರೆ ಕಾಂಗ್ರೆಸ್ ಪಾಳೆಯಕ್ಕೆ ಬರಬೇಕು. ಇಡೀ ಉತ್ತರ ಕರ್ನಾಟಕದ ಬಹುಭಾಗ ಜಲಾವೃತವಾಗಿರಲು ಒಬ್ಬ ವಿಮಾನದಲ್ಲಿ ಕುಳಿತು ಸಂಚರಿಸಿ ಮಜಾ ತೆಗೆದುಕೊಳ್ಳುತ್ತಾನೆ, ಇನ್ನೊಬ್ಬ ಏಸಿ ಕಾರಿನ ಒಳಗೆ ವೀಡಿಯೋ ನೋಡುತ್ತ ಹರಟುತ್ತಾನೆ, ಮತ್ತೊಬ್ಬ ಮೊಬೈಲ್ ನಲ್ಲಿ ತಾಸುಗಟ್ಟಲೇ ಯಾವುದೋ ರಾಂಗ್ ಕನೆಕ್ಷನ್ ನವಳೊಂದಿಗೆ ಸರಸಸಲ್ಲಾಪದಲ್ಲಿ ತೊಡಗಿರುತ್ತಾನೆ, ಇನ್ಯಾರೋ ಒಬ್ಬ ಕಮಲಕ್ಕೆ ಕೆಸರು ತುಂಬುವುದನ್ನಷ್ಟೇ ಕಾಣುತ್ತಾನೆ! ಇದೆಲ್ಲ ಇಲ್ಲಿನ ’ಕೈ’ಗುಣ! ಹಿಂದೊಮ್ಮೆ ನನಗೆ ನಗುತರಿಸಿದ್ದು ಭಸ್ಮಾಸುರ ಮೋಹಿನಿಯ ಪ್ರಸಂಗ. ಮತ್ತದೇ ಪ್ರಸಂಗ ಮರುಕಳಿಸುತ್ತಿದೆಯೇ ಎಂಬಂತೇ ಕೈಯ ಜನ ತಮ್ಮ ಕೈಯ್ಯನ್ನೇ ತಮ್ಮ ತಲೆಯಮೇಲೆ ಇಟ್ಟು ಕುಣಿಯತೊಡಗಿದ್ದಾರೆ!ಸ್ವಾಮೀ, ಮನುಷ್ಯಮಾತ್ರರು ಸರಿಯಾಗಿ ತಿಂದುಣ್ಣಲೂ ಬೇಸರಪಟ್ಟ ದಿನಗಳು ಆ ಕರಾಳ ನೆರೆಯ ದಿನಗಳು. ಅಂತಹ ಘಟನೆಗಳನ್ನು ಟಿ.ವಿ.ಯಲ್ಲಿ ನೋಡಿದ ಇನ್ನೇನು ಸಾಯುವ ಕಾಲ ಸಮೀಪಿಸಿದ, ಯಾವುದೇ ಆರ್ಥಿಕ ಆದಾಯವಿಲ್ಲದ ಹಣ್ಣು ಹಣ್ಣು ಮುದುಕಿಯರು, ಮುದುಕರು, ಏನೂ ಅರಿಯದ ಮಕ್ಕಳು-ಮರಿಗಳಾದಿಯಾಗಿ ಹಲವು-ಹತ್ತು ಕೈಲಾಗದ ನಮ್ಮ ಜನ ನಮ್ಮದೇ ಬಾಂಧವರನೇಕರು ಕಷ್ಟದಲ್ಲಿದ್ದಾರೆಂದು ಅನ್ನಿಸಿದ ಕ್ಷಣದಿಂದ ತಮ್ಮಿಂದಾದ ರೀತಿಯಲ್ಲಿ ಮೊಗೆದು ಮೊಗೆದು ದಾನಮಾಡಿದಾಗ ಮಧ್ಯದಲ್ಲೇ ತಾವೂ ಅದನ್ನು ತಲ್ಪಿಸುತ್ತೇವೆ ಅಂತ ’ಕೈ’ಯ್ಯೊಡ್ಡಿ ಬೇಡಿದ ಈ ಮಂದಿ ಹಂದಿಗಿಂತ ಕೀಳಾದ ಬದುಕನ್ನು ಬದುಕಬೇಕೆ? ಹಂದಿ ಹೊಲಸನ್ನು ತಿನ್ನುತ್ತದೆ, ಆದರೆ ಅದಕ್ಕಾದರೂ ಒಂದು ನ್ಯಾಯ ನೀತಿ ಧರ್ಮ ಇರಬಹುದು, ಆದರೆ ಈ ’ಕೈ’ಯ್ಯೊಡ್ಡುವ ಜನರಿಗಿಲ್ಲ.

ಗಾದೆ ಹೀಗಿದೆ- ಪರರ ಕಾಲ್ಕೆಳಗೆ ಕೊಳೆಯುವುದನ್ನು ನಾತಬರುತ್ತಿದೆ ಎನ್ನುವ ಜನ ತಮ್ಮ ಕಾಲ ಬುಡದಲ್ಲೇ ಕುಂಬಳಕಾಯಿ ಕೊಳೆತಿದ್ದರೂ ನೋಡುತ್ತಿಲ್ಲ !

ಹೌದೌದು, ಕುಂಬಳಕಾಯಿ ಕೊಳೆತರೆ ಮಾತ್ರ ಅದರಂತ ಕೆಟ್ಟ ನಾತ ಬೇರೆ ಯಾವುದೂ ಇಲ್ಲ ಎನ್ನಬೇಕೇನೋ. ಅದೇ ಮಾತನ್ನು ಜನಪದರು ನಾಣ್ಣುಡಿಯಾಗಿ ಬಳಸಿದರು.


ಏನೇ ಇರಲಿ ರಾಜಕಾರಣದಲ್ಲಿ ಏನೆಲ್ಲಾ ನಡೆಯಬ್ನಹುದು ಎಂಬುದಕ್ಕೆ ಇವತ್ತಿನ ನೆರೆಪರಿಹಾರದ ನಿಧಿಯನ್ನು ಖೊಳ್ಳೆ ಹೊಡೆದಿದ್ದೇ ಅತ್ಯಂತ ಸಕಾಲಿಕ ಉದಾಹರಣೆ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದರೂ ಮುಖವಡಿಯಾಗಿ ಬಿದ್ದರೂ ಮೂಗಿಗೆ ಏನೂ ಆಗಿಲ್ಲವೆಂಬಂತೆ ಒರೆಸಿಕೊಳ್ಳುತ್ತಿರುವ ’ಕೈ’ಗಳು ಮತ್ತೆ ಯಾವ ಹೊಸ ಮಾರ್ಗದಿಂದ ಇಲ್ಲಿಂದ ಪಾರಾಗಬಹುದು ಎಂದು ಯೋಚಿಸುತ್ತಿರಬಹುದೇ ? ಅಷ್ಟಾಗಿ ಯಾವ ರೀತಿ, ನೀತಿ,ರಿವಾಜು ಇಲ್ಲದ ಜನರಿಗೆ ತಪ್ಪಿಸಿಕೊಳ್ಳಲು ಮಾರ್ಗ ಬೇರೆ ಬೇಕೆ? ಏನನ್ನೂ ಮಾಡಲು ಹೇಸದ, ಅಧಮರನ್ನು ನಮ್ಮ ಮುಂದಾಳುಗಳೆಂದು ನಾವು ಭಾವಚಿತ್ರ.ಭಿತ್ತಿಚಿತ್ರ ರೂಪದಲ್ಲಿ ಅಂಟಿಸುತ್ತ ಜೈಕಾರ ಹಾಕುವಾಗ ಕಾಣದ ’ಕೈ’ಗಳು ಯಾವ್ಯಾವ ಕೆಲಸಮಾಡುತ್ತವೆ ಎಂಬ ಒಂದೇ ಒಂದು ಸುಳಿವಾದರೂ ನಮಗೆ ಸಿಕ್ಕೀತೆ? ಅಥವಾ ಜನತಂತ್ರದಲ್ಲಿ ತಂತ್ರಗಾರಿಕೆಯ ಅರ್ಥವೇ ಆಗದ ಮುಗ್ಧ,ಸ್ನಿಗ್ಧ, ನಿಷ್ಕಪಟ ಮನೋಭಾವದ ಜನ ನಾವು ಅತಂತ್ರರಾಗಲು ಇಂತಹ ಕೆಲವೇ ಕೆಲವು ’ಕೈ’ಗಳು ಸಾಕಲ್ಲವೇ? ಜೀವನದಲ್ಲೇ ಸುಳ್ಳು ಎಂಬ ಪದವನ್ನು ಹೊಡೆದುಹಾಕಿ ಅದರ ಬದಲಿಗೆ ಅದರಮೇಲೆ ಬಿಳಿಯ ಬಣ್ಣ ಹಚ್ಚಿ ಅದರ ಮೇಲೆ ಸತ್ಯ ಎಂಬ ಶಬ್ಧವನ್ನು ಬಳಸಿಕೊಳ್ಳುವ ’ಕೈ’ಗಳು ಎಲ್ಲವೂ ಸತ್ಯ ಎಂಬ ಧೋರಣೆಯಿದ್ದವರಗಿದ್ದರೆ ಈಗ ಅದೇ ಸತ್ಯ ಎಂಬ ಶಬ್ಧವನ್ನು ನೆರೆಪರಿಹಾರ ನಿಧಿಯವಿಷಯದಲ್ಲಿ ಯಾವ ರೀತಿ ಬಳಸಿಯಾರು ?

ಸರಿಯಾದ ನಾಥರಿಲ್ಲದೇ ಆನಾಥವಾಗಿದೆ ದೇಶ್ ಅಂದರೆ ತಪ್ಪೆ? ಇದಕ್ಕೆಲ್ಲ ನಮ್ಮ ಅಸಮರ್ಪಕ ಹಳೆಯ ತಿದ್ದುಪಡಿಯಾಗದ ಸಂವಿಧಾನವೇ ಕಾರಣವಲ್ಲವೇ ? ಬುದ್ದುಗಳು ನಾವು! ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುವುದಷ್ಟೇ ಗೊತ್ತು ನಮಗೆ ಬಿಟ್ಟರೆ, ಧೂರ್ತರಾಜಕರಣಿಗಳನ್ನು, ಬ್ರಷ್ಟರನ್ನು ಮಟ್ಟಹಾಕುವ ತಾಕತ್ತು, ಆಡ್ಯತೆ, ಸಾಮರ್ಥ್ಯ ನಮ್ಮಲ್ಲಿದೆಯೇ ? ನೆತ್ತಿಯ ಮೇಲೆ ಕೂತ ಕಾಗೆ ಕಿವಿಯ ಉಣ್ಣಿಯನ್ನು ಕಚ್ಚಿ ತಿನ್ನುವ ನೆಪದಲ್ಲಿ ನಮ್ಮದೇ ನೆತ್ತರು ಹೀರುವಾಗ ಕಣ್ಮುಚ್ಚಿ ಮಲಗುವ ನನ್ನ ದೇಶ ಬಾಂಧವಏ ಇನ್ನಾದರೂ ನಾವು ಎಚ್ಚೆತ್ತುಕೊಂಡು ಬಾಳ್ವೆ ನಡೆಸಲು ಸಾಧ್ಯವೇ? ಹಗಲುಗಳ್ಳರನ್ನು, ಅಸಾಧ್ಯ ಹೊಟ್ಟೆಯ ಹೆಗ್ಗಣಗಳನ್ನು ಹಿಡಿದು ಹೊಡೆಯಲು ಸಾಧ್ಯವೇ ?

ಹೋಗಲಿ ಬಿಡಿ ಹಾಡಾದರೊ ಹಾಡೋಣ--

[ಈ ದೇಹದಿಂದ ದೂರವಾದೆ ಏಕೆ ಆತ್ಮನೆ ಹಾಡಿನ ರಾಗದಲ್ಲಿ]


ಸಹಾಯ ’ಹಸ್ತ’!

ಈ ಡಬ್ಬಿಯಿಂದ ದೂರಹೋದೆ ಕಾಂಚಾಣವೇ
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ?

ಬೆಂಗಳೂರು ಮಂಗಳೂರಲೆಲ್ಲ ಸುತ್ತುತಾ
ತಿಂಗಳಾರು ದಿನದಿ ನಿನ್ನ ಹೊತ್ತುನಡೆದೆವು
ಅಂಗಳದಲಿ ನೆರೆಯು ಸೋಕಿ ಮಲಗಿದವರಿಗೆ
ಸಂಘ-ಸಂಸ್ಥೆಗಳೂ ಸೇರಿ ಕೊಟ್ಟ ಕಾಣಿಕೆ
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ?

ಡೀಕೇಸೀ ದೇಸುಪಾಂಡೆ ಸಿದ್ಧರೆಲ್ಲರು
ಹೂಕೋಸು ಕುಯ್ದು ತಂದ ಹಾಗೆ ತಂದರು
ಆಕಾಸು ನಾಕುಜನರ ಮನೆಯದಲ್ಲವೇ?
ಪಿರಕಾಸು ನಮ್ಮ ಜನಕೆ ಬುದ್ಧಿಯಿಲ್ಲವೇ?
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ?

ಬಡವರ ಉದ್ಧಾರಕಾಗಿ ಜನಿಸಿ ಬಂದೆವು!
ಗಿಡವನೆಟ್ಟು ಜಗದ ತುಂಬ ಕಾಡ ಬೆಳೆದೆವು!
ಕೊಡಲಿ ಪೆಟ್ಟು ಕೊಡಲು ಸುಮ್ಕೆ ಸುಳ್ಳು ಸುದ್ದಿಯಾ
ಬಿಡುತ ಗಾಳಿಯಲ್ಲಿ ಹಬ್ಬಿಸಿಹರು ಮೂರ್ಖರು
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ?

ಕಮಲದಲ್ಲಿ ಕೆಸರು ಕಂಡು ಮೈಯ ಝಾಡಿಸಿ
ವಿಮಲ ವಾದ ಬಾಯಿಗಳಲಿ ಪಾಠಹೇಳಿಸಿ
ಅಮಲಿನಲ್ಲಿ ಹಗಲು ಕಂಡ ಪಾಳು ಬಾವಿಗೆ
ಸುಮಲರೂಪದಲ್ಲಿ ಬೀಳಿಸುತಲಿ ಹೋದೆಯಾ?
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ ?

ನೆರೆಯ ಜನರು ಪರಿಪರಿಯಲಿ ಅಳುತ ಕೂತಿರೆ
ಮೊರೆಯ ಹೊಕ್ಕು ಜನತೆಯಲ್ಲಿ ’ಕೈ’ಯ್ಯ ಒಡ್ಡುತ
ಸರಿಯ ಬದುಕು ಕಟ್ಟಿಕೊಡಲು ಸೂರೆ ಹೊಡೆದೆವು
ಮರೆಯ ಕತ್ತಲಲ್ಲಿ ಭರನೆ ಜರುಗಿಸಿಟ್ಟೆವು
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ ?

ಬ್ಯಾಂಕಿನಲ್ಲಿ ಠೇವು ಇಟ್ಟು ಮರಿಯಬೆಳೆಸಲು
ಸಾಂಖ್ಯಯೋಗ ನ್ಯಾಯವನ್ನೇ ಒತ್ತೆ ಇಟ್ಟೆವು
ಟ್ಯಾಂಕು ತುಂಬ ತುಂಬುತಿರಲು ಕುಹಕಮಕ್ಕಳು
ಟ್ಯಾಂಕು ಒಡೆದು ಬೀದಿರಂಪ ಮಾಡಿಬಿಟ್ಟರು
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ ?

Saturday, May 8, 2010

ಹಾಳು ಮಂಡೆ ಖಾದಿಯ ದೆವ್ವ !!


ಕೆಲವು ಸನ್ನಿವೇಶಗಳಿಗೆ ನಮ್ಮ ಜನಪದರು ರಚಿಸಿದ ಹಾಡುಗಳು ಬಹಳ ರುಚಿಸುತ್ತವೆ. ಅವುಗಳ ತಿಟ್ಟನ್ನು ಬಳಸಿಕೊಂಡು ಹಾಡು ಬರೆದರೆ ಬರೆದ ನಮಗೇ ನಗ್ಬೇಕೋ ಅಳಬೇಕೋ ಅನ್ನೋ ಪರಿಸ್ಥಿತಿ ! ರಾಜಕೀಯದಲ್ಲಿ ಬಹಳಜನ ಹಾರಪ್ಪಗಳಿದ್ದಾರೆ! ನಮಗೆ ಎದುರಿಗೆ ಕಾಣುವುದು ಕೆಲವೇ ಕೆಲವು! ಅಲ್ಲಿ ಯಾವ ಹಾರಪ್ಪರಿಗೂ ಹಾರುವಾಗ ಮರ್ಯಾದೆ, ಪರಿಣಾಮ ಇದರ ಬಗ್ಗೆಲ್ಲ ಲಕ್ಷ್ಯವಿಲ್ಲ, ಇದನ್ನೆಲ್ಲ ಅರಿತೇ ಆದಿಶಂಕರರು ಆ ಕಾಲದಲ್ಲೇ ಹೇಳಿದ್ದಾರೆ

|| ಕಾಮಾತುರಾಣಾಂ ನಭಯಂ ನ ಲಜ್ಜಾ ||

ಕಾಮುಕರು ಆತುರದಲ್ಲಿ ನಾಚಿಕೆ,ಭಯ ಇವೆಲ್ಲವನ್ನೂ ಬಿಟ್ಟಿರುತ್ತಾರಂತೆ. ಅವರ ಏಕಮೇವ ಗುರಿ ಕಾಮದ ತೆವಲನ್ನು ತೀರಿಸಿಕೊಳ್ಳುವುದಾಗಿರುತ್ತದೆ. ಷಡ್ರಸೋಪೇತವಾದ ಪಂಚಭಕ್ಷ್ಯ ಪರಮಾನ್ನ ನೀಡಿ-ಬೇಡ, ಹಣದ ಥೈಲಿ ನೀಡಿ-ಆಗ ಅದೂ ಬೇಡ, ಓ ಅವಳಿದ್ದಾಳಲ್ಲ ಆ ಅವಳು-ಅವಳು ಮಾತ್ರ ಬೇಕು! ಅವಳ ಸಂಗಡ ಆಟ ಮುಗಿದಮೇಲೇ ಮುಂದಿನ ಕೆಲಸ ! ಅಲ್ಲೀವರೆಗೆ ಅವರು ’ಸರಕಾರದ ಕೆಲಸಗಳಲ್ಲಿ’ ತುಂಬಾ ಬ್ಯೂಸಿ! ಸುಮ್ಮನೇ ಅಂದಾಜಿಗೆ ನೀವು ಸಿ.ಡಿ. ಎನ್ನೋ ಪದ ಬಳಸಿನೋಡಿ ಬಹುತೇಕರು ದುಸ್ವಪ್ನ ಕಂಡವರಂತೆ ಹೌಹಾರಿ ಬೀಳುತ್ತಾರೆ. ತಮ್ಮ ಎಲ್ಲಾ ’ಬಳಕೆಯ ಜಾಗ’ಗಳನ್ನು ಕುಂತಲ್ಲಿಂದಲೇ ಬಿಗಿಗೊಳಿಸಲು ಪ್ರಯತ್ನಿಸುತ್ತಾರೆ. ಕೆಲವೇ ದಿನಗಳಲ್ಲಿ ಸಿ.ಡಿ. ಮಾಧ್ಯಮ ನಿಷೇಧಕ್ಕೆ ಒಳಗಾದರೂ ಆಶ್ಚರ್ಯವಿಲ್ಲ! ಇಂಥವರನ್ನು ನಮ್ಮ ಆಳುವ ದೊರೆಗಳಾಗಿ ಪಡೆದ ನಾವು ನತದೃಷ್ಟರೋ ಅಥವಾ ಹತಭಾಗ್ಯರೋ ಗೊತ್ತಾಗುತ್ತಿಲ್ಲ. ನಿನ್ನೆಯೇ ಹೇಳಿದ ಹಾಗೇ ಹಲವಾರು ಪಕ್ಷಗಳು ಇರುವ ಅಪಕ್ವ-ಅಸಿಂಧು ಆಡಳಿತ ವೈಖರಿ ನಮ್ಮ ರಾಜಕೀಯ. ಮತ್ತೆ ಚುನಾವಣೆ, ಅಪವಿತ್ರ ಮೈತ್ರಿ, ಸಮ್ಮಿಶ್ರ ಸರಕಾರ, ಹಗ್ಗ-ಜಗ್ಗಾಟ, ಮತ್ತೆ ಪತನ, ಮತ್ತೆ ಚುನಾವಣೆ-ಏನೀ ಡೊಂಬರಾಟ? ಚುನಾವಣೆಗೆ ತಗಲುವ ಎಲ್ಲಾ ವೆಚ್ಚಗಳನ್ನು ಭರಿಸುವವರು ಯಾರು ? ಅಧಿಕಾರಿಗಳ ಆಸ್ತಿಯನ್ನು ಶೋಧಿಸುವ ನಮ್ಮ ಲೋಕಾಯುಕ್ತರಿಗೆ ರಾಜಕೀಯ ಪುಢಾರಿಗಳ,ಮುಖಂಡರ,ಮುಂದಾಳುಗಳ ಆಸ್ತಿಗಳನ್ನು-ಅವು ಅಷ್ಟು ಬೇಗ ಹೇಗೆ ಯಾವ ಆದಾಯ ಮೂಲದಿಂದ ಬಂದದ್ದೆನ್ನುವುದನ್ನು ಶೋಧಿಸಲು ಅವಕಾಶವಿಲ್ಲವೇಕೆ? ಯಾರು ಕೇಳಬೇಕು ಇದನ್ನು? ಯಾರು ಕೇಳುತ್ತಾರೆ ಇದನ್ನು? ನಾವೆಲ್ಲ ನಮ್ಮಪಾಡಿಗೆ ನಾವು ನಮ್ಮ ಹೊಟ್ಟೆಪಾಡಿಗೆ ದುಡಿಯುವುದರಲ್ಲಿ ಬ್ಯೂಸಿ, ಚುನಾವಣೆ ಬಂದರೆ ಸರದಿಯಲ್ಲಿ ನಿಂತು ಮತ ಚಲಾಯಿಸಿಬಿಟ್ಟರೆ ನಮ್ಮ ಕರ್ತವ್ಯ ಮುಗಿಯಿತು ! ಏನು ಮಾಡೋಣ ಮಹಾಶಯರೇ ಇನ್ನಾದರೂ ನಾವು ಎಚ್ಚೆತ್ತುಕೊಳ್ಳುವೆವೇ? ಹೋಗ್ಲಿ ಸದ್ಯ ಈ ಹಾಡನ್ನಾದ್ರೂ ಕೇಳಿ.....

ಹಾಳು ಮಂಡೆ ಖಾದಿಯ ದೆವ್ವ

ಹಾಳು ಮಂಡೆ ಖಾದಿಯ ದೆವ್ವ ಕ್ವಾರಣ್ಯಕ್ಕೆ ತಾ ಬಂದವ್ನೇ
ಕ್ವಾರಣ್ಯ ನೀಡವ್ವ ಖಾದಿ ದೆವ್ವನಿಗೆ

ಕೊಡವಾಗೆಲ್ಲ ಕೊಡುತ್ತಾನಪ್ಪಾ ರಾತ್ರಿ ಹಾಲಪ್ಪ
ಅವನ್ ಮುನದ್ರೆ ರೌಡೀಪಡೆ ಬಿಡ್ತಾನ ಕಣಪ್ಪ
ಬಾಯ್ತೆಗದ್ರೆ ತಂದೇನ್ ತಪ್ಪಿಲ್ಲ ಅಂತಾನಪ್ಪ
ಕುಂಬಳಕಾಯಿ ಕದ್ದವ್ರು ಯಾರೆಂದ್ರೆ ತನ್ ಹೆಗಲ ನೋಡ್ಕಂಡ ಹಾರಪ್ಪಾ......ಕ್ವಾರಣ್ಯ


ಗೆಳ್ಯ ಗೆಳ್ಯ ಅಂತ ತಿರುಗ್ತಾ ಇದ್ನಪ್ಪ ಹಾಳಪ್ಪ
ಲೋಕಸಭೆ ಇಲೆಕ್ಸನ್ನಾಗೆ ಜೊತೆಗೆ ಭಾಳ ಓಡಾಡಿದ್ನಂತಪ್ಪ
ಆವಾಗ್ಲೇ ಅಟಕಾಯ್ಸಿ ಕಣ್ಣಿಟ್ಟು ಆಮೇಲೆ ಒಂದಪ
ರಾತ್ರೀ ನಿಮ್ಮನೆಲೇ ಊಟ ಅಂದ್ಕೊಂಡು ಬಂದು ನಡುರಾತ್ರಿ ತನ್ ಪುಂಗಿ ಹೊರತಗ್ದ ಹಾರಪ್ಪಾ.....ಕ್ವಾರಣ್ಯ


ಹುಡುಗೀರಂದ್ರೆ ಭೋ ಇಷ್ಟ ಕಣಪ್ಪ ಹಾರಪ್ಪಂಗೆ
ಅವರನ್ ಬಿಟ್ಟ್ ಇರೋದು ಭೋ ಕಷ್ಟ ಕಣಪ್ಪ ಹೋರಪ್ಪಂಗೆ
ಅವ್ರಿಲ್ದೆ ಇದ್ರೆ ಹೊಟ್ಟೆಗ್ ಆಹಾರ ಸರಬ್ರಾಜೇ ಆಗಲ್ಲಪ್ಪ
ಅವ್ರೊಂದ್ ಕಿತಾ ಜೊತೆಗ್ ಮಲೀಕಂಡ್ರೆ ಜಗವೆಲ್ಲಾ ಭೋ ಸುಂದ್ರ ಅಂದವ್ನೇ ಹಾರಪ್ಪಾ........ಕ್ವಾರಣ್ಯ


ರಾಜೀ ಆದ್ರೆ ರಾಜೀನಾಮೆ ಹೋಗಿ ವಾಪಸ್ ಕೂರ್ತಾನಪ್ಪ
ರಾಜೀಗ್ ಬೇಕು ಕೋಟಿ ಕೋಟಿ ಕಳ್ಳ ದುಡ್ಡು ಕಾಂಚಾಣ ನೋಡಪ್ಪ
ಒಳ್ಳೆ ಐನಾತಿ ಪಾಲ್ಟಿ ಕೈಲಿ ಸಿಗಾಕಂಡ್ನಲ್ಲಪ್ಪ ಹಾರಪ್ಪ
ಇನ್ನ್ ಪುಂಗಿ ಊದೋದಿರ್ಲಿ ತನ್ ಒಳಸೇರಿದ ಪುಂಗಿ ಎಲ್ಲೋತು ಅಂತ ಹುಡುಕಾಕತ್ತಾನಪ್ಪ ಹಾರಪಾ.....ಕ್ವಾರಣ್ಯ


ಅಭವಾಗುತೈತಣ್ಣೋ ..... ಪ್ರಜೆಗೋಳ ಪುಣ್ಯವೋ ಸರಕಾರ್ದ ಪಾಪಾನೋ
ಯಡವಟ್ಟಿನ್ ಹಾರಪ್ಪ ಸೊರ ಸೊರ ಸೊರಬಾದಿಂದ ಬಂದ್ನೋ
ಮಾತಾಡನೋ ಯಪ್ಪಾ ಮಾತಾಡನೋ
ಬೀಸಾಡಿದ್ನೋ ಹಂಗೇ ರಾಜೀನಾಮೆನೋ
ನಾಳೆ ಬರ್ತೀನಿ ಅಂತ ಟಿವಿ ಜನರ್ತಾವ ಕುಂತು ಸಾರಿ .....ಅಲೆಲೆಲೆಲೆಲೆ
ಎದ್ದೋದ ಎಲ್ಲೋ ಕಾಣೆ ಆರಕ್ಸಕ್ರು ಇದ್ದು ಪೆದ್ದಾಗಿ ನೋಡಿ ..........ಅಲೆಲೆಲೆಲೆಲೆಲೆಲೆಲೆಲೆ

Monday, April 12, 2010

ಮೇಕೆ ಹೋಗಿ ಮಂಗ ಬಂತು ಡುಂ ಡುಂ ಡುಂ ......

ಸಾಧಿಸಲಾರದ್ದು ಅಂತ ಯಾವುದೂ ಇಲ್ಲದೇ ಹೋಗಿರುವುದು ರಾಜಕೀಯದ ನೆಂಟಸ್ತನಗಳಲ್ಲಿ ಮಾತ್ರ ! ನಾವು ಯಾರನ್ನು ಯಾವಾಗ ಹೇಗೆ ಯಾಕೆ ಬೆಂಬಲಿಸಬೇಕು ಎಂದು ತಿಳಿಯದೇ ಬೆಪ್ಪರಾಗಿ ಕೂರುವುದು ಅಲ್ಲಿ ಮಾತ್ರ, ಯಾಕೆಂದರೆ ಕಂಡ ಅಮಾವಾಸ್ಯೆ ಕಾಣುವ ಹುಣ್ಣಿಮೆಯಾಗುವುದು ಅಲ್ಲಿನ ವೈಶಿಷ್ಟ್ಯಗಳಲ್ಲೊಂದು ! ಆಮೇಲೆ

  1. ಯಾರೂ ಶಾಶ್ವತವಲ್ಲ
  2. ಆಗಿದ್ದು ಆಗಿಹೋಯಿತು ಬಿಟ್ಬಿಡಿ
  3. ನನ್ನ ತೇಜೋವಧೆಮಾಡಲು ಯಾರೋ ಹೊಂಚುಹಾಕಿದ ಕ್ರಮ
  4. ನನ್ನ ವಿರುದ್ಧ ಉದ್ದೇಶ ಪೂರಿತವಾಗಿ ಮಾಡಿದ ರಾಜಕೀಯ ಷಡ್ಯಂತ್ರ
  5. ಇರಲಿ ಬಿಡಿ ಅವರಿಗೂ ಒಂದು ಕಾಲ ಬರತ್ತೆ
  6. ಈಗ ಎಲ್ಲ ಮರೆತು ಹೊಂದಿಕೊಂಡು ಹೋಗೋಣ
  7. ನಮ್ಮ ಒಗ್ಗಟ್ಟಿನ ಪ್ರಯತ್ನ ಸಾಲಲಿಲ್ಲ
  8. ಸತ್ಯಕ್ಕೆ ದೂರವಾದ ಆಪಾದನೆ
  9. ನನ್ನ ಇಮೇಜ್ ಹಾಳುಮಾಡಲು ಆಗದವರು ಕೈಗೊಂಡ ಕ್ರಮ
  10. ನನ್ನ ಜನರಿಗಾಗಿ ನಾನು ಹಗಲಿರುಳೂ ಶ್ರಮಿಸುತ್ತೇನೆ
  11. ನನ್ನದು ಪಾರದರ್ಶಕ ನಡವಳಿಕೆ
  12. ಎಷ್ಟೇ ತೊಂದರೆ ಬರಲಿ ನಮ್ಮ ನಾಗರಿಕರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡು ಅವರ ಸೇವೆ ಮಾಡುತ್ತೇನೆ
---ಇವೆಲ್ಲಾ ರಾಜಕೀಯ ಲೈಬ್ರರಿಯ ಶಬ್ಧಕೋಶದ 12 ಸ್ಯಾಂಪಲ್ ಗಳು. ನಮ್ಮಲ್ಲಿ ಯಾರಾದರೂ ರಾಜಕೀಯ ಸೇರುವವರಿದ್ದರೆ ಈ ಮೇಲಿನದು ಸೇರಿದಂತೆ ಅನೇಕ ಒಕ್ಕಣೆಗಳನ್ನು ಮತ್ತು ಅವುಗಳನ್ನು ಬಾಂಬು ಹಾಕಿದಂತೆ ಎಲ್ಲೆಲ್ಲಿ ಯಾವ್ಯಾವಾಗ ಹಾಕಬೇಕು ಎಂಬುದನ್ನು ಚೆನ್ನಾಗಿ ಚೋರಗುರುವಿನಲ್ಲಿ ಚಾಂಡಾಲ ಶಿಷ್ಯವೃತ್ತಿಯಿಂದ ಕಲಿತು, ಪಳಗಿ, ಉರುಹೊಡೆದು ನಂತರ ಒಂದು ದೊಡ್ಡ ಗಂಟನ್ನು ರೆಡಿ ಮಾಡಿಕೊಂಡು ರಾಜಕೀಯ ಪ್ರವೇಶಮಾಡಬೇಕು, ಹೇಗೆ ಭರತನಾಟ್ಯಕ್ಕೆ, ಕೂಚಿಪುಡಿ, ಕಥಕ್ ಇವಕ್ಕೆಲ್ಲ ರಂಗಪ್ರವೇಶ ಇದೆಯೋ ರಾಜಕೀಯದಲ್ಲೂ ಹಾಗೇ ಕಾರ್ಪೊರೇಟರ್ ಅಥವಾ ಪಂಚಾಯ್ತಿ ಸದಸ್ಯತ್ವದಿಂದ ವೇದಿಕೆಯಲ್ಲಿ ಪ್ರದರ್ಶನ ಆರಂಭ.

ಲಂಚಾಧಿಪ ನಮಸ್ತುಭ್ಯಂ ಪ್ರಜಾನಾಂ ಸಂಕಷ್ಟದಾಯಕಃ |
ಕೊಂಚವೂ ಬಿಡದೆ ನೆಕ್ಕುತ್ತ ಅರ್ಥ ಸಂಚಯನಂ ಕುರು ||

---ಇದು ಅವರ ಮೂಲ ಮಂತ್ರವಾಗಿರುತ್ತದೆ, ಇದನ್ನು ಉಪದೇಶವಿಲ್ಲದೇ ಹಾಗೇ ಬಳಸುವಂತಿಲ್ಲ ! ಹೀಗಾಗಿ ರಾಜಕೀಯಕ್ಕೆ ಉಪದೇಶವೂ ಬೇಕು. ಇಂತಹ ರಾಜಕೀಯದ ಹಲವು ಡೊಂಬರಾಟಗಳನ್ನು ನಾವು ಸದಾ ನೋಡುತ್ತಿರುತ್ತೇವೆ. ಕ್ಷಮಾಶೀಲರಾದ ನಮ್ಮ ಸಹಜ ಮನೋವೃತ್ತಿ ಎಲ್ಲವನ್ನೂ ಕ್ಷಮಿಸಿ ಸಹಿಸುತ್ತ ಖೂಳರ ಬೆಳವಣಿಗೆಗೆ ಸುಗಮ ಹಾದಿಯನ್ನು ಕಲ್ಪಿಸುತ್ತದೆ. ಸಾಲದ್ದಕ್ಕೆ ಇಂದಿನ ಹೊಸ ತಂತ್ರಜ್ಞಾನ ಪೂರಕದಷ್ಟೇ ಮಾರಕವೂ ಆಗಿರುವುದರಿಂದ ಅದನ್ನೇ ಏಟಿಗೆ ತಿರುಗೇಟಾಗಿ, ಬ್ರಹ್ಮಾಸ್ತ್ರಕ್ಕೆ ಸರ್ಪಾಸ್ತ್ರವಾಗಿ ಉಪಯೋಗಿಸುತ್ತಾ ಸಡ್ಡುಹೊಡೆದು ಎದ್ದು ನಿಲ್ಲಲು ಅವಕಾಶ ಸಿಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಕಾಣುತ್ತಿರುವ ದೃಶ್ಯಗಳಲ್ಲಿ ನನ್ನ ಫೋಟೋ ಬಳಸಿಕೊಂಡು ಅನಿಮೇಷನ್ ನಿಂದ ತಿರುಚಲಾಗಿದೆ--ತಕ್ಕಳ್ರಪ್ಪಾ ಮುಗಿದೇ ಹೋಯಿತು, ಇದೂ ಒಂದು ಬಾಂಬು! ಹೀಗೆ ವರ್ಷಗಳ ಹಿಂದೆ ಹೂತಿಟ್ಟ ಒಂದು ಬಾಂಬು ನಿನ್ನೆ ಸಿಡಿದಿದೆ ! ಮೂರು-ನಾಲ್ಕುವರ್ಷಗಳಿಂದ ನಡೆದುಕೊಂಡು ಬಂದಿದ್ದ ಕೇಸು ಪರಸ್ಪರರ ಆಪಸ್ನಾತೀ ಮಾತುಕತೆಯಿಂದ ರಾಜಿಯಾಗಿದೆ,ಕೇಸು ಖುಲಾಸೆಗೊಂಡಿದೆ ! ಇದರಲ್ಲಿ ಸೋತವರು ಪ್ರಜೆಗಳೇ ವಿನಃ ರಾಜಕೀಯವೂ ಅಲ್ಲ, ವಾದಿ-ಪ್ರತಿವಾದಿಗಳೂ ಅಲ್ಲ. ಯಾವುದನ್ನು ಸತ್ಯ ಅಂತ ನಿರ್ಧರಿಸಿ ಬೆಂಬಲಿಸಿ ಇಲ್ಲಿಯವರೆಗೆ ತಲೆಯಮೇಲೆ ಹೊತ್ತರೋ ಅದನ್ನು " ಸತ್ಯಾಸತ್ಯದ ಮಾತು ನಮಗ್ಯಾಕೆ, ಬನ್ನಿ ಹೋಗೋಣ ಸಾಕು " ಎಂಬ ರೀತಿಯಲ್ಲಿ ಒಂದೇ ನಿಮಿಷದಲ್ಲಿ ಇಬ್ಬರೂ ಸೇರಿಕೊಂಡು ಉಳಿದವರನ್ನು ಮಂಗಗಳ ಥರ ನೋಡಿ ನಗುತ್ತಿದ್ದಾರೆ ! ಎಂತಹ ವೈಪರೀತ್ಯ ನೋಡಿ ! ಇದನ್ನು ನೋಡಿದ ನಮ್ಮ ಗೀ ಗೀ ಮೇಳ ತಂಬೂರಿ ಮೀಟುತ್ತ ಹೀಗೆ ಹಾಡಿತು .........





ಮೇಕೆ ಹೋಗಿ ಮಂಗ ಬಂತು ಡುಂ ಡುಂ ಡುಂ ......
[ ರೇಣುಕಾ ಮಹಾತ್ಮೆ-ಭಾಗ ]

ನಾವು ಬಂದೇವ ನಾವು ಬಂದೇವ ನಾವು ಬಂದೇವ ಕೇಸನ್ನು ನೋಡುದಕ್ಕ
ಮತ್ತೆ ವಾಪಸ್ ಪಡೆದು ರಾಜಿಯಾಗುದಕ್ಕ ಗೀಯ ಗೀಯ ಗಾಗೀಯ ಗೀಯ
ಗೀಯ ಗೀಯ ಗಾಗೀಯ ಗೀಯ.......


ಏನ್ರಪಾ ಎನಾತು ರಾಜೀ ಮಾಡ್ಕೊಳ್ಲಾಕ ಹತ್ತೀರಲ್ಲ ಅಂದ್ರ........ ಪೆದ್ರಾಂಗ ನಕ್ರಂತ..............
ಹಿರೀಕರು ಹೇಳ್ಯಾರಂತ .......ಎಂತಾ ನಗ್ತಾ ನಡೆದರಂತ............ ವಾರೆವ್ಹಾ ನಗ್ತಾ ನಡೆದರಂತಾ ತಾ ತಾ ತಾತಾ ಗೀಯ ಗೀಯ ಗಾಗೀಯಗೀಯ.......


ಎಂದೂ ಇಲ್ದಂತಾ ಖುಸಿ ಇಂದು ಮುಸುಡಾಗ್ ಬಂದು ನಾವು ಒಂದೇ ಎಂದರಂತ............. ಜನಾ ಕೇಳ್ರಿ ಮುಂದೆ ನಾವು ಒಂದೇ ಅಂದರಂತ........... ಯಾಕ್ರಪಾ ಏನಾತು ? ಮಠದೋರು ಹೇಳ್ಯಾರಂತ........ ಸುಮ್ನೇ ಒಂದಾಗಿ ಇರಿ ಅಂತ ಅದ್ಕೇ ಸುಮ್ನೇ ಒಂದಾಗುತಾರಂತ......... ಅದ್ಕೇ ಸುಮ್ನೇ ಒಂದಾಗುತಾರಂತಾ......... ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......


ಹೊನ್ನಾಳಿ ಪ್ಯಾಟ್ಯಾಗ ಪಡಗಾ ಹಿಡಿದು ಹಾನಾ ತಗೀತೀನಂತ ಕುಂತಿದ್ಳಲ್ಲ ಯವ್ವ ಆಕಿ ಕರಾಮತ್ತು ಎಲ್ಲಿಗೋತ ? .........ಸುಮ್ಕಿರಪ್ಪಾಸಿವಾ ನಿಂಗೊತ್ತಾಗಾಕಿಲ್ಲ.............. ಅವೆಲ್ಲ ಬರೇ ಡೊಂಬರಾಟ ನೋಡಂತ ಸುಮ್ಕೇ ಅದು ಡೊಂಬರಾಟ ನೋಡಂತ ................ತಾ ತಾ ತಾತಾ ಗೀಯಗೀಯ ಗಾಗೀಯ ಗೀಯ.......


ಯಪ್ಪಗ ಈಗ ಮಂಕ್ರಿಯಪ್ಪನ ಜಾಗ ಸಿಕ್ಕಾವಂತ ಬಕಾರಿ ಮಂಕ್ರಿಯಂತ
ಹಾಂಗಂದ್ರೇನಪಾ
ಸಿವಾ .........ಸಾರಾಯಿ ಹಿಡ್ಯೊದಂತ ........ಕಳ್ಳ ಭಟ್ಟಿ ನಿಲ್ಸೋದಂತ ಊರೂರು ಕೇರೀಲಿ ಅಲ್ದಾಡಿ ಸಾರಾಯಿ ನಿಲ್ಸೊದಂತಾ ತಾ ತಾ ತಾತಾ ಗೀಯ ಗೀಯ ಗಾಗೀಯಗೀಯ.......


ಯಕ್ಕನ್ನ ಕರಸ್ಕೊಂಡು ಬುದ್ಧಿ ಹೇಳಿದ್ರಂತ............. ಈಗ ಅಧಿಕಾರ ಐತಿ ನೋಡ ...........ಅದ್ಕ ಹೊಂದಾಣ್ಕಿ ಮಾತನಾಡ............... ನಿಂಗಒಳ್ಳೇದಾಗುತೈತ ............ಮತ್ತೆ ಸುಖಾ ಸಿಗುವುದೆಂತ ........ಒಹೋಹೋ ಅದ್ಕ ರಾಜಿ ಆತೇನು ? ....ಹುಂ ಮತ್ತ .............ಖುರ್ಚಿ ದುಡ್ಡು ಇರುವುದೆಂತ........ಅರಿತು ನಡೆದಾಗ ಖುಸಿಯಂತಾ ......ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......


ನರ್ಸಮ್ಮ ಆಚಾರಪ್ಪ ಒಂದೇ ಕಾರಲ್ಲಿ ಸದ್ಯ ಹೋಗಿಲ್ವಂತ ಮತ್ತೆ ಅದು ಮುಂದೀನ ಎಪಿಸೋಡ ಒಳ್ಳೆ ಬಣ್ಣಾದ ಎಪಿಸೋಡ ಕಣ್ಣುತಂಪಾಗೋ ಎಪಿಸೋಡ.............. ಯಾಕ್ರಪ್ಪಾ ಅಚಾರಪ್ಪಂಗ ತಡ್ಕೊಳ್ಳಾಕಾತೇನು?....ಸ್ವಲ್ಪ ತಡ್ಕೊಂಡು ಹೋದನಂತ ..ಹೆಂಗೂಗೊತ್ತಿರೋ ಮಾಲು ಅಂತ ......ರಾತ್ರಿ ಮತ್ತೆ ಸಿಗುವ ಅಂತಾ ........ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......

Saturday, February 27, 2010

ಖಂಡವಿದೆಕೋ ಮಾಂಸವಿದೆಕೋ




[ಸ್ನೇಹಿತರೇ, ಇಂದಿನ ನನ್ನ ಲೇಖನಕ್ಕೆ ಪೂರ್ವಭಾವಿಯಾಗಿ ಒಂದು ಪ್ರಸ್ತುತಿ- ಮೊನ್ನೆ ತಮ್ಮನ್ನೆಲ್ಲಾ ದಿ|ಶ್ರೀ ಮಹಾಬಲ ಹೆಗಡೆ,ಕೆರೆಮನೆ ಇವರ ನಾದ-ನಮನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆನಷ್ಟೇ? ಕಾರ್ಯಕ್ರಮ ತುಂಬಾ ಚೆನ್ನಾಗಿ ಸಾಂಗವಾಯ್ತು. ಸಾವಿರ ಸಂಖ್ಯೆಯಲ್ಲಿದ್ದ ಪ್ರೇಕ್ಷಕರನ್ನು ಮಹಾಬಲ ಹೆಗಡೆಯವರ ಮಗ ಶ್ರೀ ರಾಮ ಹೆಗಡೆಯವರು ತಮ್ಮ ಭಾವಗೀತೆ ಮತ್ತು ಯಕ್ಷಗಾನದ ಹಾಡುಗಳಿಂದ ಮಹಾಬಲರ ಕಾಲಕ್ಕೆ ಕರೆದೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾದರು. ಅವರ ಇಡೀ ಕುಟುಂಬವೇ ಬಂದು ಹಾಡು-ಭಜನೆಗಳ ಮುಖಾಂತರ ಮನಸೂರೆ ಗೊಂಡರು.ನುಡಿನಮನ ಸಲ್ಲಿಸುತ್ತಾ ನಮ್ಮ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿ ಉತ್ತರಕನ್ನಡದ ಭಾಷಾ ಸೊಗಡನ್ನು-ಅಲ್ಲಿನ ಜೀವನದ ಸೊಗಸನ್ನು ಹದ ಪಾಕ ಇಳಿಸಿ, ಮಹಾಬಲರ ಬಗ್ಗೆ-ಯಕ್ಷಗಾನದ ಬಗ್ಗೆ ತಮಗಿದ್ದ-ಇರುವ ಕಳಕಳಿ ವ್ಯಕ್ತಪಡಿಸಿದರು, ಕೆರೆಮನೆ ಶಿವಾನಂದ ಹೆಗಡೆಯವರ ನೇತ್ರತ್ವದ ಇಡಗುಂಜಿ ಮೇಳ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶಿಸಿ ಕಳೆಕಟ್ಟಿದರು, ಯಕ್ಷಗಾನ-ಹಿಂದೂಸ್ತಾನಿ ಸಂಗೀತವನ್ನು ಉಟ್ಟ-ಉಂಡ,ಆ ಕಲೆಯಲ್ಲೇ ತಮ್ಮೆಲ್ಲ ಕಷ್ಟ-ಬವಣೆ-ಬಡತನ ಮರೆತು ಜನತೆಗಾಗಿ ಭಾವುಕರಾಗಿ ಮೆರೆದು ಬದುಕು ಪೂರ್ತಿ ಪ್ರೇಕ್ಷಕರನ್ನ-ಆಸಕ್ತರನ್ನ ರಂಜಿಸಿದ ಮಹಾಬಲರು 'ಯಕ್ಷಗಾನಕ್ಕೊಬ್ಬ ಮಹಾಬಲ'ರೇ ಸರಿ ! ಕಾರ್ಯಕ್ರಮ ರೂಪಿಸಿ,ಅಳವಡಿಸಿ ಪ್ರಸ್ತುತಪಡಿಸಿದ 'ಸಪ್ತಕ' ಕ್ಕೆ ನಾವೆಲ್ಲಾ ಆಭಾರಿಗಳಾಗೋಣ. ಒಟ್ಟಾರೆ
ತಮ್ಮೆಲ್ಲರ ಪರವಾಗಿ ನಾನು ಕಾರ್ಯಕ್ರಮದಲ್ಲಿ ಸಹಭಾಗಿಯಾಗಿ ತಮಗೆ ಸಂದೇಶ ತಲ್ಪಿಸುತ್ತಿದ್ದೇನೆ-ಒಪ್ಪಿಸಿಕೊಳ್ಳಿ
]
---------

ಖಂಡವಿದೆಕೋ ಮಾಂಸವಿದೆಕೋ

[ಚಿತ್ರಗಳ ಋಣ : ಅಂತರ್ಜಾಲದಿಂದ ಕೆಲವು ]














ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ತನ್ನ ಮೂಲ ಸತ್ವ ಸಾರವಾದ, ಸಂಪತ್ತಿನ ಆಗರವಾದ, ಅನೇಕ ವನ್ಯಜೀವಿಗಳಿಗೆ ಆಶ್ರಯ ತಾಣವಾದ ಹಸಿರು ಕಾಡನ್ನೂ, ಆಶ್ರಯಿಸಿದ ಪಶು-ಪಕ್ಷಿಗಳಾದಿಯಾಗಿ ಎಲ್ಲಾ ವನ್ಯಜೀವಿಗಳನ್ನೂ ಕಳೆದುಕೊಳ್ಳುತ್ತದೆ. ಬೇರೆ ರಾಜ್ಯಗಳ ಮೂಲದಲ್ಲಿ ಹುಟ್ಟಿ, ಬೆಳೆದು ಇಲ್ಲಿ ಕಂಡಲ್ಲಿ ಜನರ ಒಳ್ಳೆಯತನವನ್ನೂ ದುರುಪಯೋಗಪಡಿಸಿಕೊಳ್ಳುತ್ತಾ, ಇಲ್ಲಿನ ಸಿರಿಯನ್ನು ಸೂರೆಹೊಡೆಯುತ್ತಿರುವ ಗಣಿಧಣಿಗಳಿಗೆ ನಮ್ಮ ರಾಜ್ಯದ ಮೀಸಲು ಅರಣ್ಯಗಳು ಮಾರಾಟವಾಗಿವೆ ! ಈ ಮಾರಾಟದಲ್ಲಿ ಬರುವ ನಿಕ್ಕಿ ಕಳ್ಳ ಹಣದಲ್ಲಿ ಯಾವ ಯಾವ ರಾಜಕಾರಣಿಗಳಿಗೆ-ಶಾಸಕರಿಗೆ ಪಾಲೆಷ್ಟು ಎಂಬುದು ಇನ್ನೂ premature ಸ್ಥಿತಿಯಲ್ಲಿದೆ, ಸ್ವಲ್ಪ ಸಮಯದ ನಂತರ ತಿಳಿಯಲ್ಪಡುತ್ತದೆ. ರಾಜ್ಯದ ಸ್ಥಿತಿ - ದೇವರಾಣೆ ಹೇಳುತ್ತೇನೆ ಬ್ರಿಟಿಷರೂ ಇಷ್ಟು ಕಟುಕರಾಗಿರಲಿಲ್ಲ; ಇಷ್ಟು ಹಾಳುಗೆಡವಿರಲಿಲ್ಲ,ಇಷ್ಟು ಖೊಳ್ಳೆ ಹೊಡೆದಿರಲಿಲ್ಲ ! ಅವರಿಗಾದರೂ ಒಂದು ನೀತಿ ಇತ್ತು, ರೀತಿ ಇತ್ತು ! ನಂಬಿ : ಇಂದಿನ ರಾಜಕಾರಣಿಗಳಿಗಿಂತ ಬ್ರಿಟಿಷರೇ ವಾಸಿ ಎನಿಸುತ್ತದೆ, ಯಾಕೆಂದರೆ ಕಣ್ಮುಂದೆ ನಡೆಯುವ ಬ್ರಷ್ಟಾಚಾರ, ದುರಾಚಾರ ಸಹಿಸಲಾಗುತ್ತಿಲ್ಲ.



ಒಂದಾನೊಂದು ಕಾಲವಿತ್ತು, ಅಂದು ನಮ್ಮ ಅಖಂಡ ಭಾರತವನ್ನು ವಂಗ.ಕಳಿಂಗ, ಚಾಲುಕ್ಯ, ರಾಷ್ಟ್ರಕೂಟ, ಮಗಧ, ಮೌರ್ಯ ಮುಂತಾದ ಚಪ್ಪನೈವತ್ತಾರು ದೇಶಗಳ ರಾಜರುಗಳು ಆಳುತ್ತಿದ್ದರು. ಆಳುವ ರಾಜರೆಲ್ಲರಲ್ಲಿಯೂ ತಮ್ಮ ಪ್ರಜೆಗಳಬಗ್ಗೆ-ರಾಜ್ಯ ಅಥವಾ ದೇಶದಬಗ್ಗೆ ಬಹಳ ಕಳಕಳಿ ಇತ್ತು. ರಾಜ ಯಾರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಹಲವಾರು ಕಲೆ-ಸಾಹಿತ್ಯ-ಸಂಗೀತ ಮುಂತಾದ ೬೪ ಯಾವುದಾದರೊಂದು ವಿದ್ಯೆಯಲ್ಲಿ ಪಾರಂಗತನಾದ ವ್ಯಕ್ತಿಯನ್ನು ರಾಜ ಗುರುತಿಸಿ, ಗೌರವಿಸಿ ಅವನಿಗೆ ವಿಶೇಷ ಬಹುಮಾನಾದಿ ಕೊಟ್ಟು ಅವನ ಉಪಜೀವನಕ್ಕೆ ಏನಾದರೂ ಮಾರ್ಗವನ್ನು ತೋರಿಸುತ್ತಿದ್ದ.

ಒಂದೊಂದುಸಲ ನೋಡಿದರೆ, ನಮ್ಮ ಹಳೆಯಕಾಲವೇ ಚೆನ್ನಾಗಿತ್ತು. ರಾಜರನೇಕರು ಧರ್ಮಮಾರ್ಗದಲ್ಲಿ ರಾಜ್ಯಭಾರಮಾಡುತ್ತಿದ್ದರು.ಪ್ರಜೆಗಳ ಕೂಗು ಅವರನ್ನು ತಟ್ಟುತ್ತಿತ್ತು. ಪ್ರಜೆಗಳಮೇಲೆ ಅಪಾರ ಅಸ್ತೆಯುಳ್ಳವರು,ಪ್ರಜೆಗಳು ಸುಖವಾಗಿದ್ದರೇ ತಾವು ಸುಖಪಡಬಹುದೆಂಬ ಇಂಗಿತವನ್ನು ಹೊಂದಿದ್ದರು. ಪ್ರಜೆಗಳೂ ರಾಜರನ್ನು ಅತ್ಯಂತ ಭಯ-ಭಕ್ತಿಯಿಂದ ಕಾಣುತ್ತಿದ್ದರು.

|| ರಾಜಾ ಪ್ರತ್ಯಕ್ಷ ದೇವತಾ ||

-ಎಂಬಂತೆ ಪ್ರಜೆಗಳು ರಾಜರನ್ನು ಪೂಜಿಸುವಮಟ್ಟಿಗೆ ಗೌರವಿಸುತ್ತಿದ್ದರು, ಕಣ್ಣಿಗೆ ಕಾಣುವ-ತಮ್ಮ ದುಃಖ ದುಮ್ಮಾನಗಳನ್ನು ಖುದ್ದಾಗಿ ಅವಲೋಕಿಸಿ ಪರಿಹರಿಸುವ ದೇವರೆಂದು ತಿಳಿಯುತ್ತಿದ್ದರು;ಅದಕ್ಕೆ ತಕ್ಕಂತೆ ರಾಜರು ಮಾರು ವೇಷಧರಿಸಿ ಪ್ರಜೆಗಳ ನಡುವೆ ಬಂದು ತಮ್ಮನ್ನೇ [ರಾಜರನ್ನೇ]ದೂರುತ್ತ ಪ್ರಜೆಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಇಂದು ಜನತಾದರ್ಶನವೆಂಬುದು ಬರೇ ನಾಟಕವಾಗಿದೆ ಅಷ್ಟೇ, ಹಾಗೊಮ್ಮೆ ನೋಡಿದರೆ ಆ ಕಾಲದ ಆಳ್ವಿಕೆ ಚೆನ್ನಾಗೇ ಇತ್ತು, ಅಲ್ಲಿ ಲಂಚವಿರಲಿಲ್ಲ, ರುಶುವತ್ತಿರಲಿಲ್ಲ, ಪಕ್ಷಾಟನೆಯಿರಲಿಲ್ಲ, ಜಾತಿ-ಮತ ಭೇದವಿರಲಿಲ್ಲ, ಅನ್ಯಾಯವಿರಲಿಲ್ಲ,ಅಸತ್ಯವಿರಲಿಲ್ಲ, ದೊಂಬಿಯಿರಲಿಲ್ಲ, ಧರಣಿಯಿರಲಿಲ್ಲ, ಹಿಂಸೆಯಿರಲಿಲ್ಲ. ಇಂದು ಅವುಗಳೆಲ್ಲ ಸಾಂಬಾರಿಗೆ ಬಳಸುವ ಮಸಾಲೆ ಪದಾರ್ಥಗಳಂತೆ ಅತೀ ಸಾಮಾನ್ಯವಾಗಿಬಿಟ್ಟಿವೆ, ಜನರ ಜೀವಕ್ಕೆ ಕಿಮ್ಮತ್ತೇ ಇಲ್ಲ, ಎಲ್ಲಿ ನೋಡಿದರೂ ಗೂಂಡಾಗಿರಿ, ಲಂಚ, ಹಿಂಸೆ, ದರೋಡೆ, ಕೊಲೆ-ಸುಲಿಗೆ, ಧರ್ಮದ ರಾಜಕೀಯ ಇವೆಲ್ಲ ಹೆಚ್ಚುತ್ತಲೇ ಇವೆಯೇ ಹೊರತು ಇವಕ್ಕೆಲ್ಲ ಕಡಿವಾಣವೇ ಇಲ್ಲ. ಇದರ ಬದಲಿಗೆ ಮೈಸೂರು ಅರಸರಂಥ ರಾಜರ ಆಳ್ವಿಕೆ ಅನುಕೂಲವಿರಬಹುದಿತ್ತಲ್ಲವೇ ? ಅಲ್ಲಿ ಒಬ್ಬ ವಿಶ್ವೇಶ್ವರಯ್ಯ, ಒಬ್ಬ ಮಿರ್ಜಾ ಇಸ್ಮಾಯಿಲ್, ಒಬ್ಬ ವೀಣೆ ಶೇಷಣ್ಣ, ಒಬ್ಬ ಪಿಟೀಲು ಚೌಡಯ್ಯ ಎಲ್ಲರೂ ಇದ್ದರಲ್ಲವೇ ? ಅಂದಮೇಲೆ ಪ್ರಜಾರಕ್ಷಕರಾಗಿ ಅವರೂ ನಮ್ಮ ಪ್ರಜಾ ಸರಕಾರಕ್ಕಿಂತ ಚೆನ್ನಾಗಿಯೇ ನಡೆಸಿದ ಉದಾಹರಣೆಗಳು ನಮಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಥರದ ರಾಜರಲ್ಲಿ ನೋಡಸಿಗುತ್ತವಲ್ಲವೇ ?














ಇಂದು ಈ ಯಾವುದೂ ವಿದ್ಯೆ ಮುಖ್ಯವಲ್ಲ. ಇಂದು ಉಪಜೀವನವೇ ಮುಖ್ಯಜೀವನವಾಗಿ ಪರಿಣಮಿಸಿದೆ. ಎಲ್ಲರಿಗೂ ದುಡ್ಡಿನದೇ ಚಿಂತೆ, ಬೇಗ ದುಡ್ಡು ಮಾಡಬೇಕು-ಅದು ನ್ಯಾಯವೋ ಅನ್ಯಾಯವೋ ಗೊತ್ತಿಲ್ಲ, life is short and one has to enjoy to the fullest ಎನ್ನುವ ಯಾರೋ ಹೇಳಿದ ಮಾತಿಗೆ ಕಟ್ಟುಬಿದ್ದು ಅದರ ಹಿಂದೆ ಬಿದ್ದು ಮೌಲ್ಯ ಕಳೆದುಕೊಂಡೆವು!















ಯಾವತ್ತಿದ್ರೂ ನಮಗೆ ಮಕ್ಕಳು ಮರಿಮಕ್ಕಳ ಕಾಲಕ್ಕೂ ಇರಲಿ ಅಂತ, ಅತೀ ದುರಾಸೆಯಿಂದ ಹಣವನ್ನು ಗೋಚಲು ಈ ಹಿಂದೆ ಹಾಗೂ ಹೀಗೂ ಗೋಚಿದ,ಬಾಚಿದ ಹಣವನ್ನೇ ಬಂಡವಾಳವನ್ನಾಗಿಟ್ಟುಕೊಂಡು ರಾಜ್ಯವನ್ನೇ ಹೆಚ್ಚೇಕೆ ದೇಶವನ್ನೇ ಕರೀದಿಸಲು ಮುಂದಾದ, ಖೊಳ್ಳೆ ಹೊಡೆಯಲು ಮುಂದಾದ ಖೂಳರು ನಮ್ಮ ಆಳುವ ಸ್ಥಾನಕ್ಕೆ ಬಂದಿರುವುದು ಇದು ನಿಜಕ್ಕೂ ಕಲಿಗಾಲ ! ಇದು ಪ್ರಜಾಪ್ರಭುತ್ವದ ವಿಪರ್ಯಾಸ; ವಿಪ್ಲವ, ದುರಂತ.


















ಮನೆಗೊಂದು ಪಕ್ಷ, ಪಕ್ಷಕ್ಕೊಬ್ಬ ಖೂಳ ಮುಖಂಡ, ಅವನ ಹಿಂದೆ ಅಧಿಕಾರಲಾಲಸೆ-ದುಡ್ಡಿನಲಾಲಿತ್ಯಕ್ಕಾಗಿ ನಾಯಿಗಳ ಥರ ಹಿಂಬಾಲಿಸುವ ಬೆಂಬಲಿಗರೆಂಬ ದಂಡು-ದುಡ್ಡಿರುವವರೆಗೆ ಉಂಡು, ಆಮೇಲೆ ಬೇರೆ ಪಕ್ಷಕ್ಕೆ ಹಾರಿಬಿಟ್ಟರು ಅವರ ಚಂಡು! ಎಂಥಾ ಆಭಾಸ ಅಲ್ಲವೇ ?

ಪುನರಪಿ ಚುನಾವಣೆ, ಹಲವು ಪಕ್ಷಗಳು ಅಧಿಕಾರಕ್ಕಾಗಿ ಮಾಡಿಕೊಂಡ ಚುನಾವಣಾನಂತರದ ದುಪಟ್ಟಾ [ಹರಿದ ಹಲವು ಬಟ್ಟೆಗಳನ್ನು ಸೇರಿಸಿ ನಮ್ಮ ಉತ್ತರಕರ್ನಾಟಕದ ಮಂದಿ ಮಾಡುತ್ತಾರಲ್ಲ ಅದು] ಮತ್ತೆ ಹರಿಯುವಿಕೆ-ಮುರಿಯುವಿಕೆ ಮತ್ತೆ ಕೂಡುವಿಕೆ-ಒಳ ಒಡಂಬಡಿಕೆ, ಮತ್ತೆ ಗೋತಾ ಇವೆಲ್ಲ ಯಾರಿಗಾಗಿ ಇನ್ನೂ ತಿಳಿಯದಾಯ್ತಾ ?













ಪ್ರಪಂಚದಲ್ಲಿ ಅತಿ ವಿಶೇಷ ಗಿಡಮೂಲಿಕೆಗಳನ್ನೊಳಗೊಂಡ ನಮ್ಮ ಹೆಮ್ಮೆಯ ಕಾಡು ಪಶ್ಚಿಮ ಘಟ್ಟದ್ದು. ಇದರಲ್ಲೇ ಕೆಲವು ಭಾಗ ಮೀಸಲು ಅರಣ್ಯ ಅಥವಾ ಅಭಯಾರಣ್ಯ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ವನ್ಯಜೀವಿ ಪ್ರಭೇದಗಳು ಇಲ್ಲಿವೆ. ಆನೆ,ಸಿಂಹ,ಹುಲಿ,ಚಿರತೆ,ಕರಡಿ,ಕಾಡೆಮ್ಮೆ-ಕೋಣ,ಹಂದಿ,ಕತ್ತೆಕಿರುಬ,ನವಿಲು, ಕಾಡಿಕೋಳಿ ಒಂದೇ ಎರಡೇ ? ಈ ಜೀವ ವೈವಿಧ್ಯದ ಕೆಲವು ಈಗಾಗಲೇ ಕಾಯಿಲೆ-ಕಸಾಲೆಯಿಂದ, ಆಹಾರದ ಕೊರತೆಯಿಂದ, ಜಾಗದ ಅಭಾವದಿಂದ ನಾಶವಾಗಿದ್ದರೆ, ಇನ್ನು ಕೆಲವೇ ಕೆಲವು ಮಾತ್ರ ಉಳಿದುಕೊಂಡಿದ್ದು ಅವುಗಳಬಗ್ಗೆ ಸಾಹಿತಿ,ಕವಿ-ನಾಟಕಕಾರರು,ಬುದ್ಧಿಜೀವಿಗಳು ಹೇಗೆ ಕಾಪಾಡಬೇಕೆಂಬ ಚಿಂತನೆಯಲ್ಲಿ ಇರುವಾಗ

’ಎಲ್ಲಮರೆತಿರುವಾಗ ಇಲ್ಲಸಲ್ಲದ ನೆಪವ ಹೂಡಿಬರದಿರು ಮತ್ತೆ.......’ಎಂಬ ಕವಿ ಸಾಲಿನಂತೆ ಮನ ಮರುಗುವ ಕೆಲಸಕ್ಕೆ ಸರಕಾರ ಮುಂದಾಗಿದೆ. ಇನ್ನೇನಿದ್ದರೂ ಕೆಲವೇ ದಿನಗಳಲ್ಲಿ ಕಾಡೆಂಬುದು ಬರೇ ನೆನೆಪು ಮಾತ್ರ! ಸರಕಾರ ತಯಾರಿಸುವ ಅಕೇಶಿಯಾ ನೆಡುತೋಪಿಗೆ ಕಾಡು ಎಂದು ಕರೆಯಬೇಕಾದ ದಿನ ಬಹಳ ದೂರವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೇ ತಲೆಯಲ್ಲಿ ಅಧಿಕಾರದ ಹುಚ್ಚೊಂದೇ ತುಂಬಿದ್ದರೆ, ಅವರೇ ಬೇರೇ ಖೂಳ ರಕ್ಕಸ ರಾಜಕಾರಣಿಗಳ ಮುಂದೆ ಭಿಕ್ಷೆಯಥರ ಅಧಿಕಾರ ಉಳಿಸಿಕೊಡಲು ಕೈಯ್ಯೊಡ್ಡಿದರೆ ಆಗುವ ದುರಂತ ಇದೇ ಅಲ್ಲದೇ ಇನ್ನೇನು? ನಮಗೆ ಇರುವ ದಾರಿ ಎರಡೇ- ಒಂದು: ಸುಮ್ಮನಿದ್ದು ಎಲ್ಲವನ್ನೂ ಕಳೆದುಕೊಂಡು ದುರಂತಕ್ಕೆ ಮೂಕ ಪ್ರೇಕ್ಷಕರಾಗುವುದು, ಎರಡು : ದುರಂತವನ್ನು ತಡೆಗಟ್ಟಲು ಸ್ವಯಂ ಸೇವಕರಾಗಿ[ಆರ್.ಎಸ್.ಎಸ್. ಅಂತ ಹೇಳುತ್ತಿಲ್ಲ] ಸರಕಾರಕ್ಕೆ ಬುದ್ಧಿ ಕಲಿಸುವುದು. ಕೊನೇ ಹಂತದಲ್ಲಿದ್ದೇವೆ-ಆಯ್ಕೆ ನಿಮ್ಮದು!

ತಮ್ಮಲ್ಲೆಲ್ಲಾ ಅತ್ಯಂತ ವಿನಮ್ರನಾಗಿ ನಾನು ಬೇಡಿಕೊಳ್ಳುವುದಿಷ್ಟೇ-ನಮ್ಮ ನಮ್ಮ ಮನಸ್ಸಲ್ಲಿ-ನಮ್ಮಲ್ಲಿ ವೀರಭದ್ರರು ಹುಟ್ಟಿಬರಲಿ, ಈ ರಾಜಕೀಯವನ್ನು ಭಸ್ಮಮಾಡುವ ಭಸ್ಮಾಸುರ ಹುಟ್ಟಿಬರಲಿ, ಎಲ್ಲಾ ಸೇರೋಣ, ಆಗಬಹುದಾದ ಅನಾಹುತವನ್ನು ತಡೆಗಟ್ಟೋಣ. ಆಗದೇ ? ಕರೆದರೆ ಬರುವಿರಲ್ಲವೇ ?
ಸ್ವಾರ್ಥರಹಿತ ಬದುಕು ಬದುಕೋಣ ಅಲ್ಲವೇ ? ಪಾಪದ ಕಾಡು ಜೀವಿಗಳ ಕಣ್ಣೀರ ಕಥೆಯನ್ನ ಕಿವಿಗೊಟ್ಟು ಕೇಳೋಣ ಅಲ್ಲವೇ ? ಮಾತುಬಾರದೆ ಮೂಕವಾಗಿ ರೋದಿಸುವ ಗಿಡ-ಮರಗಳ ಬಗ್ಗೆ ಚಿಂತಿಸೋಣವೇ ? ಅವುಗಳ ಉಳಿವಿಗಾಗಿ , ಪ್ರಕೃತಿಯ ಸಮತೋಲನಕ್ಕಾಗಿ ಪರೋಕ್ಷ ನಮ್ಮ ಒಳಿತಿಗಾಗಿ ಸಾತ್ವಿಕ ಚಳುವಳಿಗೆ ಚಾಲನೆ ನೀಡೋಣವೇ ?

ದುರಂತ ವೀಕ್ಷಿಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಿ


ಹಲೋ ಹಲೋ, ಕ್ಷಮಿಸಿ ಓದುಗರೇ ಈಗ ಸರ್ಕಾರದ ಪರವಾಗಿ ನಮ್ಮ ಯಡ್ಯೂರಪ್ಪ ಒಂದು ಹಾಡುಹಾಡಲಿದ್ದಾರೆ. ಮೂಲ ಸಂಗೀತ ಸಂಯೋಜನೆ ದಿ| ಶ್ರೀ ಸಿ.ಅಶ್ವಥ್ [ಕ್ಷಮಿಸಿ ಸರಕಾರದ ಕೆಲಸವಾದ್ದರಿಂದ ದೇವರಕೆಲಸವೆಂದು ತಿಳಿದು ಅವರ ಮರಣಾನಂತರ ಇಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದೇನೆ!] , ಪಕ್ಕವಾದ್ಯದಲ್ಲಿ : ಘಟಂ -ಖೇಣಿ[ಅತಿಥಿ ಕಲಾವಿದರು], ತಾಳ- ಜನಾರ್ದನ ರೆಡ್ಡಿ, ಮೃದಂಗ-ಶ್ರೀರಾಮುಲು , ವಾಯೋಲಿನ್- ಕರುಣಾಕರ ರೆಡ್ಡಿ, ತಂಬೂರ-ರಾಮಚಂದ್ರ ಗೌಡ, ಮೋರ್ಸಿಂಗ್ -ಆರ್ ಅಶೋಕ್, ಬೆಳಕು-ಈಶ್ವರಪ್ಪ, ಬಣ್ಣ ಮತ್ತು ಧ್ವನಿವರ್ಧಕ-ರೇಣುಕಾಚಾರ್ಯ, ವೇದಿಕೆ ಮತ್ತು ಸಹಕಾರ- ಎಲ್ಲಾ ಶಾಸಕ ಮಿತ್ರ ಮಂಡಳಿ, ಪರಿಕಲ್ಪನೆ, ಪ್ರಧಾನ ನಿರ್ದೇಶನ ಮತ್ತು ನಿರ್ಮಾಣ-ಲಕ್ಷ್ಮಿ ಮಿತ್ತಲ್ [ಅಂತರ್ರಾಷ್ಟ್ರೀಯ ಖ್ಯಾತಿ], ಓದುಗರನ್ನು ಕ್ಷಣಕಾಲ ವಿಧಾನಸೌಧದ ಬಾಂಕ್ವೆಟ್ ಹಾಲ್ ಗೆ ಕರೆದೊಯ್ಯುತ್ತಿದ್ದೇವೆ !

ವಿ.ಸೂ. ಪ್ರಾಯೋಜಿತ ಕಾರ್ಯಕ್ರಮದಿಂದ ಬರುವ ಎಲ್ಲಾ ಹಣವನ್ನೂ 'ಕಾಡು ನಿರ್ಮೂಲನಾ ಸಮಿತಿ'ಯ ಕಟ್ಟಡ ಕಟ್ಟುವಿಕೆಗೆ ಬಳಸಲಾಗುವುದು.


ಯಡ್ಯೂರಪ್ಪರ ಹಾಡು
[ಸಂತ ಶಿಶುನಾಳ ಶರೆಫರನ್ನು ಕ್ಷಮೆಕೋರಿ ಅವರ 'ಹಾವು ತುಳಿದೇನೆ ' ಹಾಡಿನ ರಾಗವನ್ನು ಬಳಸಿಕೊಂಡಿದ್ದೇನೆ ]

ಕಾಡೂ ಕಡಿದೇನೆ ಪ್ರಜೆಗಳೇ
ಕಾಡೂ ಕಡಿದೇನೆ ......

ಕಾಡು ಕಡಿದು ನಾಡಿಗಾಗಿ ಬೀಡು ಕಟ್ಟುವ ಕೆಲಸಮಾಳ್ಪೆ
ಮೂಢತನದಲಿ ಯಾರೇಕೂಗಲಿ ನಾಡಜನ ನೀವ್ ನೋಡುತಿರಲು!

ತೇಗ ಹೊನ್ನೇ ಮತ್ತಿ ಭರಣಿ
ಮಾಗಿ ತೂಗುವ ಮಾವು ಹಲಸು
ವೇಗದಲಿ ಬೇರೆಡೆಗೆ ಬೆಳೆದು
ಬೇಗ ನಿಮಗೆ ತಂದುಕೊಡುವೆ !
ಕಾಡೂ ಕಡಿದೇನೆ ......

ಕರಡಿ ನವಿಲು ಹಾವು ಸಿಗಲು
ಜನಗಳೆಲ್ಲಾ ಹೆದರಿ ದಿಗಿಲು
ಗದರಿಕೊಂಬರು ರೈತಜನರು
ಬೆದರಿ ನಾ ಬೇಸತ್ತು ಹೋದೆ !
ಕಾಡೂ ಕಡಿದೇನೆ ......

ಆನೆ ಸಿಂಹಗಳಿಹವು ಬರಿದೇ
ಏನು ಫಲವುಂಟವುಗಳುಳಿದು ?
ಸ್ಥಾನವಂತರು ಹಣವ ಸುರಿದು
ಮೌನದಿಂದ ಕಾಯುತಿಹರು !
ಕಾಡೂ ಕಡಿದೇನೆ ......

ಮೀಸಲಿರುವಾ ಸ್ವಲ್ಪ ಕಾಡು
ಯಾತಕಿನ್ನು ಹೊಲಸುಗೋಳು ?
ಮೀಸೆಚಿಗುರದ ಗಣಿಧಣಿಗಳು
ಆಸೆಯಿಂದ ಕೇಳುತಿಹರು !
ಕಾಡೂ ಕಡಿದೇನೆ ......

ಹುಲಿಯ ದೇವರ ಬನದ ಕಾಡು
ಬಲಿದು ನಿಂತಿಹ ಪುಟ್ಟ ಕಾಡು
ಬಲಿಯಥರದಲಿ ದಾನಗೈದು
ಒಲಿದ ಪಟ್ಟವ ಉಳಿಸಿಕೊಂಬೆ !
ಕಾಡೂ ಕಡಿದೇನೆ ......

Saturday, February 20, 2010

ಕನ್ನಡಮ್ಮ ಅತ್ತಾಗ !!



ಹೀಗೂ ನಡೆಯುತ್ತಾ ? ಅಂದರೆ "ಹೌದು ಹೀಗೂ ನಡೆಯುತ್ತದೆ " ಅಂತ ನಮ್ಮ ೭೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನವನ್ನು ನೋಡಹೋದವರು ಹೇಳುತ್ತಾರೆ. ಕೇವಲ ಅಪಹಾಸ್ಯಕ್ಕಾಗಿ ಥರದ ಸಮ್ಮೇಳನವನ್ನು ಮಾಡಬೇಕೆ ? -ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ೭೫ ಕೋಟಿ ರೂಪಾಯನ್ನು ೫೦೦ ವರ್ಷಗಳ ಹಿಂದೆ ಆಳಿದ್ದ ಕೃಷ್ಣದೇವರಾಯನ ನೆನಪಿಗೆ ಖರ್ಚುಮಾಡುವಾಗ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆನಪು ನಮಗಾಗುವುದಿಲ್ಲ! ಸತತವಾಗಿ ಉನ್ನತಮಟ್ಟದಲ್ಲಿ ನಡೆಯಬೇಕಾದ ಸಂಸ್ಕೃತಿ-ಸಂಸ್ಕಾರಗಳ ಕಮ್ಮಟ, ನಮ್ಮ ತಾಯಿಯ ಜಾತ್ರೆ, ನಮ್ಮತನದ ಪ್ರದರ್ಶನ, ನಮ್ಮ ಅಭಿಮಾನದ ಕನ್ನಡಮ್ಮನಿಗೆ ನಮ್ಮಿಂದ ಸಲ್ಲಬೇಕಾದ ಗೌರವ--ಇದಕ್ಕೆ, ಇದರ ಖರ್ಚಿಗೆ ಹೊರಟಾಗ ನಮಗೆ ನೆನಪಾಗುವುದು 'ಉತ್ತರಕರ್ನಾಟಕದ ನೆರೆ ಪೀಡಿತ ಪ್ರದೇಶ' . ಏನ್ರೀ ಇದು ರಾಜಕೀಯದ ಡೊಂಬರಾಟ ! ಮಾಡುವ ಕೆಲಸಕ್ಕೊಂದು ಮರ್ಯಾದೆ ಬೇಡವೇ? ಯಾವನೋ ರೌಡಿ ಇಂದು ಮಂತ್ರಿ ,ಶಾಸಕ, ಪುಡಾರಿ-ಇವರ ಹೇಳಿಕೆಯ ಆದ್ಯತೆಯ ಮೇರೆಗೆ ಕೆಲಸ ಕಾರ್ಯ!












ಹುಚ್ಚು
ಅಂದರೆ ಇದು ! ಕನ್ನಡವನ್ನು ಸ್ಪಷ್ಟವಾಗಿಮಾತನಾಡಲಾಗದೇ ಅನೇಕ ಶಬ್ಧಗಳನ್ನು ತೊದಲುವ ಶ್ರೀರಾಮುಲು ಇದಕ್ಕೆ ಉಸ್ತುವಾರಿ-ಉದ್ಘಾಟನಾ ರಾಯಭಾರಿ ! ನಿನ್ನೆ ಅಂದರೆ ೨೦.೦೨.೨೦೧೦ ಸಭೆಯಲ್ಲಿ ಆಕಳಿಸುತ್ತಾ-ತೂಕಡಿಸುತ್ತಾ ಶ್ರೀಮಾನ್ ಶ್ರೀರಾಮುಲು ಅವರು ಸಭೆಗೆಕಳೆಕಟ್ಟಿದರು-ಕಲಶಪ್ರಾಯರಾದರು ! ಜನ ಮರುಳೋ ಜಾತ್ರೆಮರುಳೋ ಎಂಬುದು ಗಾದೆ ತಾನೇ ? ಇಲ್ಲಿ ನಮ್ಮ ಜನವೂಮರುಳೆನ್ನುವವ ನಾನು. ಯಾಕೆ ಅಂದರೆ ನಮ್ಮ ಜನರಿಗೆ ನಾಡಿಮಿಡಿತವೇ ಹೋಗಿಬಿಟ್ಟಿದೆ, ಇಲ್ಲದಿದ್ದರೆ ಸರಕಾರದ ಪೂರ್ವತಯಾರಿಯನ್ನು ಸರಿಯಾಗಿ ಪರಿವೀಕ್ಷಿಸಬೇಕಿತ್ತು ! ಒಮ್ಮೊಮ್ಮೆಅನಿಸುತ್ತಿದೆ ರಾಜಕೀಯ ಬರೀ ಗೂಂಡಾ ಸಂತೆ ! ಅದಕ್ಕೇ ಮರ್ಯಾದಸ್ತ ನಮ್ಮ ಜನ ಬೇಸತ್ತು ಯಾವುದರಲ್ಲೂ ಆಸಕ್ತಿ ತೋರುತ್ತಿಲ್ಲ. ಯಾವ ರೀತಿಯಲ್ಲಿ ಚಿಂತಿಸಿದರೂ ಸಮಾಧಾನ ಅನ್ನೋದು ಸಿಗುತ್ತಲೇ ಇಲ್ಲ ! ಯಾವ
! ದೃಷ್ಟಿಕೋನದಿಂದ ನೋಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲ, ರಾಜಕೀಯ ಮೇಲಾಟಕ್ಕೆ ದುಡ್ಡಿನ ಕೊರತೆ ಇಲ್ಲ ; ಸುಸಂಸ್ಕೃತರು ಸೇರುವ ಈ ಸಂಸ್ಕೃತಿ ಜಾತ್ರೆಗೆ ಮಾತ್ರ ದುಡ್ಡಿಲ್ಲ ಎಂಬ ಹೇಳಿಕೆ!

ಇನ್ನೊಬ್ಬ ಅಮ್ಮ ಬಂದರು, ಅವರಿಂದ ಒಂದಷ್ಟು ಕೊಡು-ಕೊಳ್ಳುವ ವ್ಯವಹಾರವೇ ? ಕೇರಳದಿಂದ ಬಂದು ನಮ್ಮ ಮುಖ್ಯಮಂತ್ರಿಗಳಿಗೆ ಕೀಲಿಕೈ ಗಳನ್ನು ಕೊಡಲು ಬಂದರು, ಅದಕ್ಕೊಂದು ಸಮಾರಂಭ ರಸ್ತೆ ಮೋರಿ ಉದ್ಘಾಟನೆಗೊಂದು, ಹೊಸದಾಗಿ ಡಾಂಬರೆಂಬ ಬಣ್ಣ ಬಳಿದ ರಸ್ತೆಗೊಂದು, ಅಂಡರ್ ಪಾಸ್ ಗೊಂದು, ಫ್ಲೈ ಓವರ್ ಗೊಂದು ಹೀಗೇ ನಾ ನಾ ಥರದ ಇಂತಹ ಕ್ಷುಲ್ಲಕ ಸಭೆಗಳಿಗೆ, ಹಾರ-ತುರಾಯಿಗಳಿಗೆ, ಪಕ್ಷದ ಬಾವುಟ-ಬ್ಯಾನರ್ ಗಳಿಗೆ, ರಸ್ತೆಯುದ್ದದ ಕಟ್ ಔಟ್ ಗಳಿಗೆ ಇದಕ್ಕೆಲ್ಲ ಖರ್ಚಿಗೆ ದುಡ್ಡಿದೆ ! ಇಲ್ಲಿ ಬಂದ ಕೇರಳದ ಅಮ್ಮಗೆ ೧೫ ಎಕರೆ ಭೂಮಿ, ೫ ಕೋಟಿ ಹಣ ಕೊಡುವ ಮಾತು, ಯಾಕ್ರೀ ಅಂತಹ ಸಂತರಿಗೆ ಜಾಗ ? ಅವರಿಗೆ ಕೊಡುವ ಆ ದುಡ್ಡು + ಅಳಿದ ಅರಸನ ವ್ಯಸನಕ್ಕೆ ಖರ್ಚಾಯಿಸಿದ ಆ ದುಡ್ಡು + ಸಮಾವೇಶಗಳಿಗೆ ಖರ್ಚುಮಾಡುವ ದುಡ್ಡು + ಆಪರೇಶನ್ ಕಮಲವೋ ವಿಮಲವೋ ಅದಕ್ಕೆ ಸುರಿವ ಕಳ್ಳ ದುಡ್ಡು ಎಲ್ಲಾ ಸೇರಿಸಿ ಅದರಲ್ಲಿ ನಾಲ್ಕು ಭಾಗ ಮಾಡಿ ಕೇವಲ ಕೇವಲ ಕೇವಲ ಒಂದು ಭಾಗವನ್ನು ನಮ್ಮ ಉತ್ತರ ಕರ್ನಾಟಕದ ಜನತೆಯ ಉದ್ಧಾರಕ್ಕೆ ಉಪಯೊಗಿಸಿದ್ದರೆ ಇವತ್ತಿನ ಈ ಹಾ ಹಾ ಕಾರವಿರುತ್ತಿರಲಿಲ್ಲ ಅಂದರೆ ನಂಬುತ್ತೀರಾ? ನೀವೇ ಕಾಲಿ ಇರುವಾಗ ಕುಳಿತು ಲೆಕ್ಕಹಾಕಿ!

ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರು ಅಂದರೆ ಅದೊಂದು ಸ್ಥಾನಕ್ಕೆ ಕೊಡುವ ಗೌರವ ಸ್ವಾಮೀ, ಹೇಗೆ ರಾಷ್ಟ್ರಪತಿ ಎನ್ನುತ್ತೇವೋ , ಹೇಗೆ ರಾಜ್ಯಪಾಲರು ಎನ್ನುತ್ತೇವೋ ಹಾಗೇ. ಅಲ್ಲಿ ಸರ್ತಿ ಒಬ್ಬರು ಮತ್ತೆ ಮುಂದೆ ಇನ್ನೊಬ್ಬರು ಬರುತ್ತಿರುತ್ತಾರರಲ್ಲವೇ ? ಸಾಹಿತ್ಯಿಕ ಕೃತಿಗಳಿಂದಲೂ, ವಯಸ್ಸಿನಿಂದಲೂ ಹಿರಿಯರಾಗಿ ತೋರ್ಪಡುವ ಮುತ್ಸದ್ಧಿ ವ್ಯಕ್ತಿಯೋರ್ವರನ್ನು ಸ್ಥಾನದಲ್ಲಿ ಗೌರವಯುತವಾಗಿ ಕೂರಿಸುವುದು ಕನ್ನಡಮ್ಮನಿಗೆ ಒಂದು ಸಾಂಕೇತಿಕ ಸೇವೆ ಅಷ್ಟೇ ! ಅದು ಆ ವ್ಯಕ್ತಿಗೆ ಜೀವಮಾನದಲ್ಲಿ ಒಮ್ಮೆ ಮಾತ್ರ ದೊರೆಯುವ ಸ್ಥಾನ - ಇದರಿಂದಾಗಿ ಇದೇ ಒಂದು ಹೆಮ್ಮೆಯ ಸಮ್ಮಾನ ! ಕೊನೇಪಕ್ಷ ಒಂದು ಸಣ್ಣ ಸುಂದರ ರಥ, ಕೆಲವಾದರೂ ಭಾಜಾ ಭಜಂತ್ರಿಗಳು, ಕೆಲವು ಜನಪದ ನೃತ್ಯಗಳು, ಛದ್ಮ ವೇಷಗಳು ಇವಕ್ಕೆಲ್ಲ ಖರ್ಚಿಗೆ ಎಷ್ಟು ಬರುತ್ತದೆ ಅಂತೀರಾ ? ಇಷ್ಟನ್ನೂ ಮಾಡದ ಯಾವನ್ರೀ ಅವನು ಸಂಸ್ಕಾರರಹಿತ ಮಂತ್ರಿ ! ಇಂತಹ ಕೆಟ್ಟ ರಾಜಕಾರಣಿಗಳಿಗೆ ನಮ್ಮ ಧಿಕ್ಕಾರವಿರಲಿ !! ನಮ್ಮ ಧಿಕ್ಕಾರವಿರಲಿ !!

ಹಳೆಯ ಮುರುಕಲು ಜೀಪಿಗೆ ಬಣ್ಣ ಹೊಡೆದು, ನಾಲ್ಕು ಹೂವಿಟ್ಟು, ಮೇಲೆ ಅಸಹ್ಯಕರವಾಗಿ ಗಲಗಲನೆ ಅಲುಗಾಡುವ ಕೊಡೆಯೊಂದನ್ನು ಸಿಗಿಸಿ ಅದರಲ್ಲಿ ನಮ್ಮ ಕನ್ನಡದ ಹಿರಿಯಕ್ಕ ಶ್ರೀಮತಿ ಗೀತಾ ನಾಗಭೂಷಣ ರನ್ನು ಕರೆತಂದರಲ್ಲ, ಎಷ್ಟುಸೌಜನ್ಯವಿರಬೇಕ್ರೀ ಸಾಹಿತ್ಯಕ್ಕನಿಗೆ ? ಅಂತಹದುರಲ್ಲಿ ಕುಳಿತು ಬಂದರಲ್ಲ ಮಹಾತಾಯಿ ! ನನ್ನ ಮಗನ ಹುಟ್ಟು ಹಬ್ಬಕ್ಕೆನಾನು ಖರ್ಚುಮಾಡುವ ದುಡ್ಡು ಕೊಡುತ್ತಿದ್ದೆನಲ್ಲರೀ ರಾಜಕೀಯ ಧನಪಿಶಾಚಿಗಳಿಗೆ; ಅದು ಸಾಕಾಗಿತ್ತು ಒಂದು ರಥವನ್ನುಕಟ್ಟಲಿಕ್ಕೆ !!

ಈ ರಥ ಕಥೆಯನ್ನು ಹೇಳುತ್ತಿರುವಾಗ ಅಷ್ಟನ್ನೂ ಕೇಳುತ್ತಿದ್ದವನಂತೆ ತಲೆದೂಗುತ್ತಿದ್ದ ಒಬ್ಬ ವ್ಯಕ್ತಿಯ ಹತ್ತಿರ ಅರ್ಥವಾಯ್ತಾ ಅಂತ ಕೇಳಿದೆ ಸ್ವಾಮೀ , ಬಂತು ಮಾರುತ್ತರ

" ನೀ ಎನ್ನ ಪೇಸರಂಗ ಎನಕೆ ತೆರಿಯಾದು ? " !

ಅಯ್ಯೋ ಎನ್ನಿಸುತ್ತದಲ್ಲವೇ ? ಸತ್ಯ ಕಹಿಯಾಗಿದ್ದರೂ ಸ್ವೀಕರಿಸಲೇ ಬೇಕಲ್ಲವೇ?

ಕನ್ನಡದ ಯುವಕರೇ ಎದ್ದೇಳಿ , ಇನ್ನಾದರೂ ಇಂತಹ ಅಪಚಾರವನ್ನು ತಪ್ಪಿಸಿ, ಇದೋ ನಿಮ್ಮಮ್ಮ ಕನ್ನಡಮ್ಮ ನಿಮ್ಮನ್ನ ಕೈಬೀಸಿಕರೆಯುತ್ತಿದ್ದಾಳೆ, ಕೈಮುಗಿದು ಹೊರಡಲು ಅಣಿಯಾಗಿದ್ದಾಳೆ, ಅವಳ ಬಗ್ಗೆ ಅವಳ ಬೇಕು-ಬೇಡ, ಆರೋಗ್ಯದ ಬಗ್ಗೆ ನಿಮ್ಮಗಮನವಿರಲಿ,


ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಸಿರಿಗನ್ನಡಂ ಗಲ್ಲಿಗಲ್ಲಿಗೆ

|| ಜೈ ಭುವನೇಶ್ವರಿ ||




[ಸಮ್ಮೇಳನದ ಎರಡು ಚಿತ್ರಕೃಪೆ : ಸಂಜು ವಡೆಯರ್]

' ಕನ್ನಡಮ್ಮ ಅತ್ತಾಗ '

ಹೊಳೆವ ಬಿಸಿಲಿನ ರಸ್ತೆಯೊಳಗೆ ಹಳೆಯ ಜೀಪನು ತಂದು ನಿಲ್ಲಿಸಿ
ತೊಳೆದು ನಾಲ್ಕು ಹೂವ ಹಚ್ಚಲು ರಥವು ನಮಗದು ಸಿದ್ಧವು !

ಮೊಳೆಗೆ ಸಿಗಿಸುತ ಒಂದು ಕೊಡೆಯನು ಗಲಗಲನೆ ಅಲುಗಾಡಿಸುತಲಿರೆ
ಕಳೆಯೆ ಇಲ್ಲದ ಮೆರವಣಿಗೆಯದು ನಮ್ಮ ತಾಯಿಯ ಜಾತ್ರೆಯು !

ಆರ ಬಳಿಯಲಿ ಹೇಳಲಿ ಮಗೂ ಆರ ಜೊತೆಯಲಿ ಕಳೆಯಲಿ ಮಗೂ
ಆರು ದುಡ್ಡನು ನುಂಗದವರು ಆರು ನನಗೆ ಹಿತವರು ?

ಅಮ್ಮಗಳಿರಾ ಅಕ್ಕಗಳಿರಾ ನನ್ನ ತಾಯೊಡ ಹುಟ್ಟುಗಳಿರಾ
' ಕನ್ನಡಮ್ಮನು ನಿಮ್ಮ ಅಮ್ಮನು 'ಎನುತ ಮನವದು ಕೂಗಲು

ಒಂದು ಬಿನ್ನಹ ಜನರೇ ಕೇಳಿ ಅಮ್ಮನಿರುವಳು ಸಂಕಟದಲಿ !
ಒಂದು ನಿಮಿಷದಿ ಕಿವಿಯಕೊಟ್ಟು ಆಲಿಸಿರಿ ಅವಳಳಲನು

ಕನ್ನಡಮ್ಮನು ಬಿಟ್ಟುಬಂದು ಊರು ತೊರೆದು ದೇಶ ತೊರೆಯುತ
ಒಮ್ಮೆ ಹಾದಿಯೊಳಡ್ಡನಿಂತು ನಮ್ಮ ಕಡೆ ಕೈ ಮುಗಿದಳು

ಸತ್ಯವೇ ಕನ್ನಡವು ಎಂಬಾ ನಮ್ಮ ತಾಯಿಯ ಕಥೆಯಿದು !

Sunday, January 24, 2010

ರೇಣುಕಾಚಾರ್ಯರ ಅಖಂಡ ಕೃಷಿ‌ಅಧ್ಯಯನ !!


‘ಸೀಡಿ’ ಎಂಬ ಬಟ್ಟೆ ಹಾವು
ರೇಣುಕಾಚಾರ್ಯರ ಅಖಂಡ ಕೃಷಿ‌ಅಧ್ಯಯನ
[ಸಂಪೂರ್ಣ ರಾಮಾಯಣ ಎಂಬಂತೆ]


ನಾವು ಬಂದೇವ ನಾವು ಬಂದೇವ
ನಾವು ಬಂದೇವ ಭಿನ್ನಮತ ತೋರುದಕ್ಕ
ಮತ್ತೆ ತಿಂದು-ಕುಡ್ದು ನುಂಗಿ ತೇಗೋದಕ್ಕ
ಗೀಯ ಗೀಯ ಗಾಗೀಯ ಗೀಯ ಹಾ ಹಾ ಹಾ ಹಾ ಹಾ......

ಹೈದ್ರಾಬಾದಿನಾಗ ರಿಸಾರ್ಟು ಯಾಕಂತ ?
ಹೂಂ... ಹೇಳಪಾ....... ಕೃಷಿ‌ಅಧ್ಯಯನಕ್ಕಂತ
ಸಿವಾ ಕೃಷಿ‌ಅಧ್ಯಯನಕ್ಕಂತಾ ತಾ ತಾತಾತಾ..ಗೀಯ ಗೀಯ..

ನರ್ಸ ಜಯಲಕ್ಷ್ಮಿಗೆ ಏನಪಾ ಆತಂತ....?
ಪ್ರೇಮಾಮಾಡ್ಯಾರಂತ..ಏನೆಲ್ಲಾ ಮಾಡ್ಯಾರಂತ...
ಯಾರಂತಾ.....? ರೇಣುಕಾಚಾರ್ಯರಂತ ನಮ್ಮ
ರೇಣುಕಾಚಾರ್ಯರಂತಾ ತಾ ತಾತಾತಾ..ಗೀಯ ಗೀಯ..

ಹೊನ್ನಾಳಿಯಾಗೆಲ್ಲ ‘ಉದ್ಧಾರ’ಮಾಡ್ತಾರಂತ....
ಯಾರಂತ....?.ನಮ್ಮ ರೇಣುಕಾಚಾರ್ಯರಂತ...
ಯಾಕಪ್ಪಾ ಸಿವಾ.?.ಮುಂದೆ ಮುಖ್ಮಂತ್ರಿ ಅಗ್ಬೇಕಂತ..
ಮುಖ್ಮಂತ್ರಿ ಅಗ್ಬೇಕಂತ..ತಾ ತಾತಾತಾ..ಗೀಯ ಗೀಯ..

ಯಡ್ಯೂರಪ್ಪರ ಸರ್ಕಾರ್ದಾಗೆ ಬಡ್ಯೂರಪ್ಪರೆ
ಜಾಸ್ತಿ‌ಆಗ್ಯಾರಂತ..ಯಾಕಂತ..... ?
ಆ ದಾರಿ ಕಂಡಾರಂತ.. ಎಲ್ಲಾರ್ಗೆ ಮಂತ್ರಿಗಿರಿ ಬೇಕಂತ..
ಮಂತ್ರಿಗಿರಿ ಬೇಕಂತ.. ತಾ ತಾತಾತಾ..ಗೀಯ ಗೀಯ..

ಸರ್ಕಾರ್ದಾಗಾಗಾಗ ಬಟ್ಟೆ ಹಾವು ಬಿಟ್ಟಾರಂತ..
‘ಸೀಡಿ ಮಡ್ಗ್ಯಾರಂತ’... ಯಾಕಪ್ಪಾ..ಹಾಂಗಂದ್ರೆ ಏನಾತು.?.
ಏ.. ಎಂತೆಂಥಾ ಮನುಷ್ಯರೆಲ್ಲಾ ಗಡಗಡಾ ಅಂತಾರಂತ
‘ಕೆಲ್ಸಾ’ ಆಗುತಂತ..!. ‘ಹಾವುಬಿಟ್ರೆ’…..
‘ಕೆಲ್ಸಾ’ ಆಗುತಂತ ತಾ ತಾತಾತಾ..ಗೀಯ ಗೀಯ..

ನಮ್ ಮುಖ್ಮಂತ್ರಿ ಸಾಹೇಬ್ರು ಬಡವಾಗಿ ಹೋಗ್ಯಾರಂತ..
ಯಾಕಂತಪ್ಪಾ.....?. ಸುಸ್ತಾಗಿ ಬುಟ್ಟಾರಂತ....
ಕುಣ್ದೂ ಕುಣ್ದೂ ಸುಸ್ತಾಗಿ ಬುಟ್ಟಾರಂತ....ಯಾಕಂತ...?
ಸೋಬಕ್ಕನ್ನ ಇಳ್ಸೂಂದ್ರಂತ ಇಳ್ಸದ್ರಂತ...ಬಳ್ಗಾರ್ ಬ್ಯಾಡಾಂದ್ರಂತ
ಕಳ್ಸದ್ರಂತ.. ಅವ್ರನ್ನೂ ಕಳ್ಸದ್ರಂತಾ ತಾತಾತಾ..ಗೀಯ ಗೀಯ..

ಅಂಗೈಕೊಟ್ನಲ್ಲಪ್ಪ ಸಿವಾ..ಮುಂಗೈನೂ ಕೇಳ್ತಾಕುಂತ್ರಲ್ಲ
ಯಾಕಪಾ... ಏನಾತು..?.ಹಿತ್ಲಬಾಗ್ಲಿಂದ ಬಂದಾರಂತ..
‘ಮಂತ್ರಿಪಟ್ಟಾ ಕೊಡು’ಅಂತ..ಮುಂದೇನಾತು...?
ಕೊಟ್ರಂತಲ್ಲಪ್ಪಾ ನಮ್ ಸಿವಾ...ಹೊಟ್ಟೇ‌ಉರಿದುಹೋತ
ಹೊಟ್ಟೇ‌ಉರಿದುಹೋತ ತಾತಾತಾ..ಗೀಯ ಗೀಯ..

ಮೀಡಿಯಾದಾಗ್ ಕೂತ್ಗಂಡು ನಾನಾಥರ ಹೇಳ್ಯಾರಂತ
“ಕೃಷಿ‌ಅಧ್ಯಯನ”ಕ್ಕೋಗಿದ್ರಂತ...ಮತ್ತೆ ಬೇರೇನು ಇಲ್ವಂತ..
‘ಎಲ್ಲಾ ಒಟ್ಟಾಗೇ’ ಇದಾರಂತ.. ‘ಬಿಕ್ಕಟ್ಟೆಲ್ಲ ಸುಳ್ಳಂತ'
ಸಲ್ಪ ‘ಯಾಯಾಮ’ಮಾಡದ್ರಂತ..ಸುಮ್ಕೇ ಇದ್ಬುಟ್ಟು ಬಂದ್ರಂತ...
ಉದ್ಧಾರ ಮಾಡ್ತಾರಂತ ರಾಜ್ಯ ಉದ್ಧಾರ
ಮಾಡ್ತಾರಂತಾ ತಾ ಗೀಯ ಗೀಯ !
---------