ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 14, 2011

ಸ ರಿ ಗ ಮ ಪ ದ ನಿ ಸ..........!!!


ರಿ ನಿ ..........!!!

" ಅಣಾ ಇಸ್ಯ ಗೊತ್ತಾಯ್ತಾ ? ಹರಾಮಿ ಮತ್ತೆ ಭೂಕೆಂಪು ಎರ್ಡೂವೆ ಸೇರ್ಕೆಂಡು ಪಾಕಿಸ್ತಾನ ತೊಳ್ಕಂಡೋಗ್ಬುಟ್ಟದೆ. ಜನ್ಗೋಳೆಲ್ಲಾ ಹೋಯ್ತಾ ಇರೋದ್ ಕಂಡ್ಬುಟ್ಟು ತಲೆ ಗಿರಿಕ್ ಅಂದ್ಬುಡ್ತು "

" ಯಾರಲೇ ಪಾಕಿಸ್ತಾನ ಹಂತಾ ಯೋಳಿದ್ದು ಮುಂಡೇದೆ ನಿಂಗೆ ಅದು ಜಪಾನ್ ಕಣಲೇ ಜಪಾನು. ಹರಾಮಿ ಹಂತೀಯಲ್ಲ ಅಷ್ಟೂನೂ ಗೊತಾಯಾಕಿಲ್ವಾ ತುನಾಮಿ ಅಂತಾವ ಅದು. ಭೂಕೆಂಪಗಲ್ಲ ಭೂಕಂಪ ಹಂತಾವ ಅಂಗಂದ್ರೆ ಭೂಮಿ ಇದ್ದಲ್ಲೇ ಒದರಕಂತದೆ ಹಂತರ್ಥ "

" ಎಂತೆಂಥಾ ಸಬ್ದನೆಲ್ಲಾ ತಂದಾಕ್ಬುಟ್ರು ನಮ್ ಇಗ್ನಾನಿಗಳು. ತುನಾಮಿ ಅಂದ್ರೇನ್ಕಣಣ್ಣಾ ಒಸಿ ಯೋಳ್ತೀಯಾ ಅಂಗೇ ಭೂಮಿ ಒದರಕಂಬುದೂ ಯೋಳ್ಬುಡಣಾ ನಿನ್ ಕಡೀಕಿಂದ್ಲೇ ಕೇಳ್ಕಬುಡುವಾ "

" ತುನಾಮಿ ಹಂದ್ರೆ ಸಮುದ್ರಕ್ಕೆ ಅಪರೂಪದಗೆ ಕೋಪಬಂದೋತದೆ. ಟೇಮ್ನಾಗೆ ಅದು ಜೋರಾಗಿ ಹಲೆ ಹೆಬ್ಸಿ ಹತ್ತರ್ದ ಊರೊಳೀಕೆಲ್ಲಾ ಕಳ್ಸಬುಡ್ತದೆ ಕಣ್ಲಾ. ಪ್ಯಾಟೆ ಮಂದಿ ಮುಳಕಟ್ಟಮ್ಗೂ ಕರುಮಾರಮ್ಗೂ ಸರ್ಯಾಗಿ ನಡ್ಕಳಾಕಿಲ್ಲ. ಹವ್ರಿಬ್ರೂ ಅಕ್ಕತಂಗೀದೀರು ಸೇರ್ಕಂಡು ಸಮುದ್ರಕೋಗಿ ಅಲ್ಲಿ ಕೋಪ ಬರುಸ್ತವೆ. ಕೋಪ ಬಂದೇಟ್ಗೆ ಅಗ್ಲೋ ರಾತ್ರ್ಯೋ ನೋಡ್ದೇಯಾ ನೀರು ನುಗ್ಗಸ್ಬುಡ್ತರೆ. ಜನೀಕೆ ಸಾಕೋ ಸಾಕಾಗೋತದೆ. ಇತ್ಲಗೆ ಭೂಕಂಪ್ಸು ಹೇಳಿದ್ನಲ್ಲ ಭೂಮಿಗೂವ ಆಗಾಗ ಮೈ ಒದರಕಂಬೋ ಅಭ್ಯಾಸ ಕಣ್ಲಾ. ಅದು ಯಾಪಾಟೀ ಎಲ್ಲಾತದೆ ಹಂತ ಯಾರ್ಗೂ ಮೊದ್ಲೇ ಗೊತಾಯಾಕಿಲ್ಲ..ಇಲ್ಲಾಂದ್ರೆ ತಪ್ಸಕಬುಟ್ಟಿರೋರು. ಭೂಮಿಗೆ ಚಂದ್ರನ ಕಂಡ್ರೆ ಆಯಾಕಿಲ್ಲ. ಯಾವ್ದೋ ಅಳೇ ದ್ವೇಸ. ಆಯಪ್ಪ ಅಂಗೂ ಇಂಗೂ ಒಂದೊಂದಪಾ ಹದೇನೋ ಭೂಮಿ ಅತ್ರ ಬತ್ತವ್ನಂತೆ...ಹಂತ ಅದ್ಯಾರೋ ಟೀವಿನೋರು ಯೋಳ್ತಾ ಇದ್ರು. ಅಂಗಾಂಗುತ್ಲೂವೆ ಭೂಮಿ ತಿರೀಕಬೇಕಾಯ್ತಾ ? ಹದ್ಕೇಯ ಅದು ಮಗ್ಗಲ ಬದಲಾಯ್ಸ್ತದೆ ಕಣ್ಲಾ. ತಿರೀಕಂಬೋ ಟೇಮ್ನಾಗೆ ಮನೀ ಒಳಿಕ್ಕೆ ಬಿರಡಿಂಗ್ನಾಗೆ ಇದ್ದೋರ್ಗೆಲ್ಲಾ ಒಳ್ಳೇ ಟ್ರೈನಗೆ ಆದಾಂಗಾತದೆ. ಕೆಲೂ ಸರ್ತಿ ಕಟ್ಟಡಗೋಳು ಬಿದ್ದೋಯ್ತವಂತೆ. ಹದ್ಕೇಯ ಭೂಕಂಪ್ಸು ಹಂತರೆ. ಅಲ್ಲಯ್ಯಾ ಚಂದ್ರಂಗಾದ್ರೂ ಒಸಿ ಬುದ್ಧಿ ಬ್ಯಾಡ್ವಾ ? "

" ಈಗ ನಮ್ಕತೆ ಯೋಳು ಮುಂದೆ ಭಾರತ ದೇಸ್ದಾಗೂ ಐತಾ ತುನಾಮಿ ಭೂಕಂಪ್ಸು ಎಂಗೆ?"

" ಅದೆ ಕಣ್ಲಾ ಎಲ್ಲಾಕಡೀಕ್ಕೂ ಅದೆ. ವರ್ಸಾ ವರ್ಸಾ ಊರಬ್ಬ ಮಾಡಿ ಕುರಿ-ಕೋಳಿ ಕೊಡ್ದೇವೋದ್ರೆ ಇದು ಆಗೇ ಆತದೆ"

---------------

" ಓಗ್ಲಿ ಬುಡಣಾ ನಮ್ ಮುಕ್ಮಂತ್ರಿ ಮುಂದೆ ಹದೇನೋ ಬುವನೇಸ್ವರಿ ದೇವಿ ಹಂತಾ ಕಟ್ಟುಸ್ತಾವ್ರಂತೆ. ಅದ್ಕೇ ಅದೆಷ್ಟೋ ಕೋಟಿ ಎತ್ತಿ ಮಡ್ಗವ್ರೆ ಅಷ್ಟೆಲ್ಲಾ ಬೇಕಾತದ ಒಂದು ಮೂರ್ತಿಗೆ ? "

" ಮಂತ್ರಿಗಿರಿ ಯಾಕೆ ಸುಮ್ನೇ ಏನ್ಲಾ? ಈಗೆಲ್ಲಾ ಎಲ್ಲಾ ಇಸ್ಯಾನೂ ಇರೋದ ಪಕ್ಸದವ್ರು ಕಣ್ಣಲ್ಲಿ ಎಣ್ಣೆಬಿಟ್ಗಂಡು ನೋಡ್ತಾ ಕೂತವ್ರೆ. ನಮ್ ಕುಮಾರಣ್ಣಂಗಂತೂ ಬಿಳೀ ಮಗಳಾಯ್ತಲ ಹದ್ಕೇಯ ಮುಂದೆ ಎಂಗಿದ್ರೂ ಸೀಟು ನಿಂಗೇಯ ಅಂದವ್ರಂತೆ. ಕಾಗದಪತ್ರ ಎಲ್ಲಾ ಕಂಪೂಟ್ರಗೆ ಸಿಕ್ಕಾಕಬುಟ್ಟದೆ...ಯಾರೇನ್ಮಾಡದ್ರೂ ಸಿಕ್ಕಾಕಬುಡ್ತರೆ.. ಇಂಗಾಗಿ ಓದಲ್ಲೆಲ್ಲಾ ಹದೂ ಇದೂ ಅಂತಾ ಕೊಟ್ಗಂಬುಟ್ಟು ಸಲ್ಪ ಸಿಗೋ ಪ್ರಸಾದ ಇಸ್ಗಂಡು ಸುಮ್ಕಿರ್ಬೋಕು"

-----------

" ಅಲ್ಲಣಾ ಸಾಲ್ಮರ್ದ ತಿಮ್ಮಕ್ಕ ಅಷ್ಟೆಲ್ಲಾ ಕೂಕ್ಕತದೆ ಒಂದ್ ಹೆರಿಗೆ ಆಸ್ಪತ್ರೆ ಕಟ್ಟಾಕಿ ಹಂತಾವ. ಬರೇ ಪಂಕ್ಸನ್ ಮಾಡದು ಪ್ರಸಸ್ತಿ ಕೊಡದು ಮಾಡ್ತರೆ ಬಿಟ್ರೆ ಆಯಮ್ಮಂಗೆ ಉಳ್ಕಳಕೊಂದು ಮನೆನೂ ಹಿಲ್ವಂತೆ, ಅದ್ಕೇನಾರಾ ಮಾಡ್ಬಾರ್ದಾ ? "

" ಹೋಗಲೇ ಗೂಬೆ ಅದರ್ತಾವ ಎಷ್ಟು ಓಟೈತೆ. ಅಬ್ಬಬ್ಬಾ ಹಂದ್ರೆ ಒಂದೇಯ...ಈಗ್ಲೋ ಆಗ್ಲೋ ನೆಗ್ದ್ ಬೀಳೋ ಮುದ್ಕಿಬೇರೆ..ಹದ್ಕೆಲ್ಲಾ ಕೊಡೋ ಬದ್ಲು ಯಾರಾನಾ ಸಲ್ಪ ಗಟ್ಟಿ ಜನೀನ ಕಂಡು ಮುಂದೆ ಇಲೆಕ್ಸನ್ನಾಗೆ ಕೆಲ್ಸಕ್ಬರೋ ಅಂಗೆ ಮಡೀಕಂಡ್ರೆ ಎಲ್ಲಾ ಸಲೀಸು ಅಂಬೋ ಲೆಕ್ಕಾಚಾರ "

-----------

" ಅಣಾ ಒಬ್ಬ್ ಮನಷ್ತೀಗೆ ಬದೀಕಣಕೆ ಲಕ್ಸಾಂತ್ರ ಎಕರೆ ಕಾಪೀ ತೋಟ ಬೇಕಾ ? ಅದೂ ಯಾವ್ದೇ ಆದಾಯ್ದ ಗಟ್ಟಿ ಮೂಲ ಇಲ್ದೇ ಇರೋ ರಾಜ್ಕೀಯ್ದೋರ್ಗೆ ಯಾವನೋ ಬ್ಯಾಂಕೋನು ಕೋಟಿಗಟ್ಲೆ ಅಣ ಸುರೀತಾನಲ್ಲಣಾ ಇದ್ಯಾವ್ ಮಾಯ ಹಂತೀಯ ? "

" ಯಾರೋ ನಿಂಗೇಳಿದ್ದು ರಾಜ್ಕೀಯ್ದೋರ್ಗೆ ಇನ್ಕಮ್ಮು ಇರಾಕಿಲ್ಲಾ ಹಂತಾವ...? ಅದೂ ಕೂಡ ಬಿಜ್ನೆಸ್ಸು ಕಣಲೇ ಗೂಬ್ನನ್ಮಗನೇ...ಆಳೋರು ನೇರಾಗಿ ಕೊಟ್ಬುಟ್ರೆ ಕಂಡೋತದೆ ಹಂತ ಬ್ಯಾಂಕೋನ್ಗೆ ಯೋಳಿ ಯವಸ್ತೆ ಮಾಡಿರಾದು. ಪಿರೂತಿ ಮುಂದೆ ಯಾವ್ದೈತೆ..ಹದ್ಕೇ ಹಿರೀಕ್ರಂದಿಲ್ವಾ ಗಂಡುಸ್ನ ಸಾಧ್ನೆ ಇಂದೆ ಹೆಂಗ್ಸು ಇದ್ದೇ ಇರ್ತಳೆ ಅಂತ ಅಷ್ಟೇಯ ತಿಳ್ಕ. ಇಂದಿರೋ ಗೆಳ್ತೀಗೆ ಎಂಗಾರಾಮಾಡಿ ಒಂದಷ್ಟು ಕೊಡ್ದೇವೋದ್ರೆ ಎಂಗೆ ಯೋಳು. ಹದ್ಕೇಯ ನಮ್ ಮಣ್ಣಿನ ಮಕ್ಳವ್ರ ಮಕ್ಳೂ ಬಿಳೀ ಬೊಂಬೆಗೆ ಅದೇನೆಲ್ಲಾ ಕೊಡುಸ್ಯವ್ರೆ."

------------

" ಅಣಾ ಟ್ರಷ್ಟು ಪಷ್ಟು ಹಂದ್ರೆಲ್ಲಾ ಯೇನಣಾ ? "

" ಅಂಗಂತವಾ ಒಂದು ಕಮೀಟಿ ಮಾಡ್ಕತರೆ. ರಾಜ್ಕೀಯದೋರ್ ಕಾಲ್ದಗೆ ಯಾರೋ ಒಳ್ಳೇ ಜನ ಮಾಡ್ದ ಟ್ರಷ್ಟ್ಗೂ ಬೆಲೆಯಿಲ್ದಾಂಗಾಗೋಗದೆ. ರಾಜ್ಕೀಯ್ದೋರು ಮಾಡ್ಕಂಬುದು ಕಳ್ ಕಮೀಟಿ. ಎಲ್ಲೆಲ್ಲಿ ತಿಂಬುಕಾತದೆ ಹದ್ನೆಲ್ಲಾ ತಮ್ಕಡೀಗೆ ಮಾಡ್ಕಳಕೇಯ ಕಮೀಟಿ ಎಲ್ಲಾನೂವೆ. ನಿತ್ಯಾನಂದ್ನ ಕಂಡು ಕಾವಿ ಬಟ್ಯೋರ್ನೆಲ್ಲಾ ಹಳ್ದೀಕಣ್ಣಿಂದ ನೋಡ್ತವ್ರಲ್ಲ ಹದೇತರ ಹೀಗ ಎಲ್ಲಾ ಟ್ರಷ್ಟೂನೂ ಆಗ್ಬುಟದೆ. ನಡ್ವೆ ರಾಜ್ಕೀಯ್ದೋರ್ ಬುಟ್ಟು ಯಾರಾನಾ ಸಾಲೆ-ಕಾಲೇಜು ನಡುಸ್ತರ ನೋಡು."

" ಹೌದಣೋ ನಮ್ ಮಾದ ಯೋಳ್ತಿತ್ತುಬೇಸ್ಗೆ ಬಂತು ಅಂದ್ರೆ ಇತ್ಲಾಗೆ ಕುಡಿಯೋ ನೀರ್ಗೂ ಪರ್ದಾಟ ಆಕಡೀಕೆ ಸ್ಕೂಲ್ನಾಗೆ ಸೀಟ್ಗೂ ಪರ್ದಾಟಹಂತಾವ "

" ಇದ್ಯಾದಾನ ಹನ್ನೋ ಹೆಸ್ರಲ್ಲಿ ಬೇಕಷ್ಟು ಅಣಾ ಮಾಡವ್ರೆ ಕಣಪಾ. ಬಡವ್ರ ಕುಡಿಯೋ ಗಂಜೀ ಕಸ್ದಾದ್ರೂ ತಮ್ಗೆ ಬೇಕಾದ್ನ ಮಡೀಕತರೆ."

-----------

" ಅಣಾ ಹೌದೂ ಮರ್ತಿದ್ದೆ ಪಿಸ್ ಬ್ಯಾಂಕಂದ್ರೆ ಯಾವ ಬ್ಯಾಂಕು ? ಮೊನ್ನೆ ಮೂರ್ದಿವ್ಸದ ಕೆಳ್ಗೆ ಪ್ಯಾಟೆಗೆ ಹೋಗಿದ್ನಾ ಹಲ್ಲೆಲ್ಲಾ ತಿರ್ಗೋವಾಗ ಇರೋ ಬರೋ ಎಲ್ಲಾ ಬ್ಯಾಂಕುಗೋಳ್ ಬೋಲ್ಡನ್ನೂ ಓದ್ದೆ ಆದ್ರೆ ಪಿಸ್ ಬ್ಯಾಂಕು ಸಿಗ್ಲೇ ಇಲ್ಲ ಕಣಣೋ "

" ಐತ್ತಲಕಡಿ.... ಅಂಗೆಲ್ಲಾ ಕಾಣ್ಸಕೆ ಅದೇನ್ ಸಣ್ಮುಕಪ್ನ ತಟ್ಟೆ ಇಡ್ಲಿ ಹೋಟ್ಲೇಲ್ನಾ? ಪಿಸ್ ಬ್ಯಾಂಕು ಅಂತ್ಯಲ್ಲ ಎಲ್ಲೂ ಪೇಪರ್ನಗೂ ಓದಿಲ್ವೆ? ಅದು ಸ್ವಿಸ್ ಬ್ಯಾಂಕು ಕಣ್ಲಾ. ಇದೇಸದಾಗಿರೋದು. ರಾಜ್ಕೀಯದೋರು ಮತ್ತೆ ಜಾಸ್ತಿ ದುಡ್ಡಿರೋರು ಸರ್ಕಾರಕ್ಕೆ ಲೆಕ್ಕ ತಪ್ಸಿ ಅಲ್ಲಿ ದುಡ್ ಮಡುಗ್ತರೆ. ಹಲ್ಲಿದ್ರೆ ಅದು ಎಲ್ಲೂ ಹೋಯಾಕಿಲ್ಲ ಅನ್ನೋ ಗ್ಯಾರಂಟಿಮೇಲೆ ಯಾವನೋ ಒಬ್ಬ ಸುರುವಿಟ್ಕಂಡ್ನ..ಅದುನ್ನ ನಮ್ ದುಡ್ಡಿರೋ ಖುಳಗೋಳೆಲ್ಲಾ ಕಂಡ್ಕಬುಟವ್ರೆ"

" ಅಲ್ಲಣಾ ದೇಸಕ್ಕೆ ಬಡ್ತನ ಅಂತವ್ರೆ ಮತ್ಯಾಂಗೆ ಅಲ್ಲೆಲ್ಲಾ ದುಡ್ಡಿಡ್ತರೆ ? "

" ಬಡ್ತನ ಬಡ್ತನ ಅಂಬೋದೆಲ್ಲಾ ಬಾಸಣ ಅಷ್ಟೇಯ. ನಿನ್ನಂತಾ ಮೂದೇವಿಗೊಳ್ನ ಯಾಮಾರ್ಸೋದು ಭಲೇ ಸಲೀಸು. ಇದ್ಯಂಗೆ ಅಂದ್ರೆ ಬೆಂಗ್ಳೂರ್ ಬಸ್ ಸ್ಟ್ಯಾಂಡ್ನಗೆಬ್ಯಾಗ ಕಳ್ದೋಗದೆ ಊರಿಗೋಗಾಕಿಲ್ಲ ಒಸಿ ಹಣ ಕೊಟ್ರೆ ಊರಿಗೋಗುತ್ಲೂವೆ ನಿಮ್ಗೆ ಮನಿ ಆಡ್ರ ಮಾಡ್ತೀನಿಅಂತ ಬತ್ತಾರಲ್ಲ ಹದೇ ರೀತಿ ಬಾಸಣ ಮಾಡ್ಕೋತಾ ಸುಮ್ಕೇ ಹೋಗಿ ಅಲ್ಲಿಟ್ಟು ಬರಾದು."

" ಮತ್ತೆ ಸರಕಾರ ನಡ್ಸೋ ಮಂದಿ ಎಂಗಾದ್ರೂ ಮಾಡಿ ಅದ್ನ ಪತ್ತೆ ಅಚ್ಚಿ ಇಸ್ಗಂಬೋದಲ್ವ ? "

" ಅಂಗೆಲ್ಲಾ ಆಯ್ತದೇನ್ಲಾ ? ಅಲ್ಲೇನಾಗದೆ ನನ್ನ ನಿನ್ನ ಬಿಟ್ಟು ಆಳೋ ಪಕ್ಸ ಇರೋದ್ ಪಕ್ಸ ಹನ್ನೋ ಬೇದ ಇಲ್ದೇ ಎಲ್ರೂ ಸಕ್ತಿಮೀರಿ ಮಡಗವ್ರೆ. ಜರ್ ಯಾರಾನಾ ಒಬ್ಬ ತಕಂಬರೋಕೋದ್ರೆ ಎಲ್ಲರ ಎಸ್ರೂ ಕಾಣಸ್ಕಬುಡ್ತದೆ. ಬರೇ ಯೋಳ್ತರೆ ಅಲ್ಲದೆ ಅಲ್ಲದೆ ಅಂತಾವ ಆದ್ರೆ ಯಾರೂ ತರಾಕೋಯಾಕಿಲ್ಲ "

" ಅಣಾ ನಾ ಬರ್ಲಾ ಹೊತ್ತಾತದೆ ಮತ್ತಿಂಗೆ ಸಿಗುಮು ? "

" ಚೋದಿ ಮಗ್ನೆ ಇಸ್ಯ ಒಟ್ಟಾಕಣಕೆ ಅಣ್ಣ ಬೇಕು ಮಿಕ್ಕಿದ್ದಕ್ಕೆ ಬ್ಯಾಡ ನಿಂಗೆ....ಒಸಿ ಏನಾರಾ ಯವಸ್ತೆ ಗಿವಸ್ತೆ ಮಾಡೀಯೋ ಇಲ್ಲಾ ಅಂಗೇ ಒಂಟೋಯ್ತೀಯೋ ? "

" ಇಲ್ಲಣಾ ಉಗಾದಿಗೆ ಒಸ್ತಡ್ಕು ಮಾಡ್ತೀವಲ್ಲ ಅದ್ಕಿರಲಿ ಅಂದವ್ನೆ ತಿಮ್ಮೇಗೌಡ ಅದ್ಕೇಯ ಇವತ್ತು ತರ್ನಿಲ್ಲ"

" ಮುಂದಿಂದ್ ಮುಂದೆ ಕಣಲೇ ಇಂದ್ನ ಕತೆ ಯೋಳು ನೀ ಈಗೇನ್ ತತ್ತೀಯೋ ಹಿಲ್ಲಾ ನಾನೇ ತರ್ಲೋ ? "

" ಇದೊಂದ್ಕಿತಾ ಬುಟ್ಬುಡಣಾ ಉಗಾದಿ ಆಕ್ಕಬುಡ್ಲಿ ಆಮೇಲೆ ಎಂಗೂ ಇದ್ದೇ ಅದೆ "

" ಆಯ್ತೋಗು ಉಗಾದಿ ಮಾರ್ನೇದಿನ ತರ್ಲಿಲ್ಲಾ ಅಂದ್ರೆ ನಿನ್ ಹುಟ್ಲಿಲ್ಲಾ ಅನ್ನಸ್ಬುಡ್ತೀನಿ ಹೋಗು "