ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, June 26, 2011

ಪೈಪು ಕೊಟ್ಟ ಗೋವಿಂದ ಹೆಗಡೆಯವರಿಗೆ ನಮ್ಮ ವಂದನೆಗಳು!

ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ
ಪೈಪು ಕೊಟ್ಟ ಗೋವಿಂದ ಹೆಗಡೆಯವರಿಗೆ ನಮ್ಮ ವಂದನೆಗಳು!

[ ಆತ್ಮೀಯ ಸ್ನೇಹಿತರೇ, ನಮಸ್ಕಾರ. ಹಾಸ್ಯಸಪ್ತಾಹದ ೭ನೇ ದಿನ ಇಂದು. ರಾತ್ರಿ ಹತ್ತುಗಂಟೆಗೆ ಸಮಾರೋಪ : ಬ್ಲಾಗ್ ಮತ್ತು ಬಜ್ ಮುಖಾಂತರ ನೇರವಾಗಿ ನಿಮ್ಮೊಡನೆ ಸಂವಹಿಸಿವುದರೊಂದಿಗೆ ನಡೆಯುತ್ತದೆ. ಆಸಕ್ತರು ಭಾಗವಹಿಸಲು ವಿನಂತಿಸುತ್ತೇನೆ.ವಿಷಯ: ’ ನಿಮ್ಮೊಡನೆ ವಿ.ಆರ್.ಭಟ್ ಬ್ಲಾಗಿನ ಬಗ್ಗೆ ನಿಮ್ಮ ಅನಿಸಿಕೆ’. ವಾರದಕಾಲ ನೀವು ಹಲವು ಹಾಸ್ಯ ಕಥಾನಕಗಳನ್ನು ಓದಿದ್ದೀರಿ. ಯಾವುದೇ ಪೂರ್ವತಯಾರಿಯಿಲ್ಲದೇ ಅಂಕದ ಪರದೆಯನ್ನು ಸರಿಸಿಬಿಟ್ಟಿದ್ದೆ; ವೇದಿಕೆಗೆ ಬಂದಮೇಲೇ ರೂಪಿಸಿದ ೭ ದಿನಗಳ ಪ್ರಹಸನ ಇದಾಗಿದೆ. ಬಂದ ಅತಿಥಿಗಳು ಊಟಕ್ಕೆ ಕುಳಿತಾಗ " ನಮ್ಮ ಅಡುಗೆ ನಿಮಗೆ ರುಚಿಸುವುದಿಲ್ಲವೋ ಏನೋ " ಎಂದು ಹೇಳುವುದು ನಮ್ಮ ಸಹಜ ವಾಡಿಕೆ, ಅದೇ ರೀತಿ ನನ್ನ ಹಾಸ್ಯ ಬರಹಗಳು ತಮಗೆ ಖುಷಿಕೊಟ್ಟವೋ ಅಥವಾ ಮತ್ತೊಂದಷ್ಟು ನೋವು ಕೊಟ್ಟವೋ ಅಷ್ಟಾಗಿ ಪಕ್ಕಾ ಆಗಲಿಲ್ಲ. ಆದರೂ ಹೀಗೊಂದು ಅಪರೂಪದ ಪ್ರಯತ್ನವನ್ನು ಬ್ಲಾಗ್ ಮೂಲಕ ನಡೆಸಿದ್ದೇನೆ ಎಂಬ ಸಮಾಧಾನವಿದೆ. ಹಲವು ಸಮ್ಮಿಶ್ರ ಸರಕಾರಗಳನ್ನು ನೋಡಿದ ನಿಮಗೆ ಇವತ್ತಿನ ಈ ಸಮ್ಮಿಶ್ರ ಕಥಾನಕ ಕೊಡುವುದರೊಂದಿಗೆ ಹಾಸ್ಯಸಪ್ತಾಹ ಮುಕ್ಕಾಲು ಭಾಗ ಸಂಪನ್ನಗೊಂಡಿದೆ. ರಾತ್ರಿಯ ನೇರ ಸಂವಹನದೊಂದಿಗೆ ಅದು ಮುಗಿಯುತ್ತದೆ. ಮತ್ತೆ ಎಂದಿನಂತೇ ಹಲವು ಮಜಲುಗಳ ಬರಹಗಳು ಮುಂದುವರಿಯುತ್ತವೆ, ಜೊತೆಗೆ ಆಗಾಗ ಹಾಸ್ಯ ಕೂಡಾ. ಸಮಯ ವ್ಯಯಿಸಿ ಓದುವ ನಿಮ್ಮಲ್ಲರಿಗೂ ಸತತ ಅಭಾರಿಯಾಗಿದ್ದೇನೆ]

ಸುಮಾರು ೨೫ ವರ್ಷಗಳಿಗೂ ಮೊದಲಿನ ಕಾಲ. ಆಗೆಲ್ಲಾ ಹಳ್ಳಿಗಳಲ್ಲಿ ನಾಟಕವೇ ಪ್ರಧಾನ ಆಕರ್ಷಣೆ. ಯಾಕೆಂದರೆ ಸ್ಥಳೀಯ ಜನರೇಸೇರಿಕೊಂಡು ನಾಟಕವಾಡುತ್ತಿದ್ದರು. ಬಣ್ಣ, ಸಾಮಗ್ರಿ, ವೇಷ-ಭೂಷಣ ಅಂತ ಅದೂ ಇದೂ ಖರ್ಚುಗಳಿರುವುದರಿಂದ ವರ್ಷಕ್ಕೆಕೇವಲ ಒಮ್ಮೆಮಾತ್ರ ಸಿಗುವಂತಹ ಮನೋರಂಜನೆ ಇದಾಗಿರುತ್ತಿತ್ತು. ಇಲ್ಲಿ ನಾಟಕ ಹೇಗಿತ್ತು ಅನ್ನುವ ಬದಲು ನಾಟಕದಲ್ಲಿಅಭಿನಯಿಸಿದವರು ನಿಭಾಯಿಸುವ ರೀತಿಯೇ ನಗುಬರಿಸುತ್ತಿತ್ತು.

ಮೂಲತಃ ಅಭಿನಯಿಸುವ ಹಳ್ಳಿಗರು ಹುಟ್ಟು ಕಲಾವಿದರೇನಲ್ಲ. ಹರೆಯದಲ್ಲಿ ಹತ್ತಾರು ಜನರೆದುರಿಗೆ ’ಚೆನ್ನಾಗಿ ಪಾತ್ರ ಮಾಡಿದ್ದಾನಪ್ಪಾ’ ಎನಿಸಿಕೊಳ್ಳುವ ಆಸೆ, ಹಾಗೊಮ್ಮೆ ಚಾರ್ಜ್ ಆದ ಬ್ಯಾಟರಿ ಮುಂದಿನ ವರ್ಷದ ತನಕ ಸ್ಟ್ಯಾಂಡ್ ಬೈ ಮೋಡ್ ನಲ್ಲಿ ಬಾಳಿಕೆ ಬರುತ್ತಿತ್ತು! ಅದರಲ್ಲಂತೂ ಮದುವೆಯ ವಯಸ್ಸಿನ ಹುಡುಗರಿಗೆ ಪಾತ್ರಮಾಡಿ ಸೈ ಎನಿಸಿಕೊಂಡುಬಿಟ್ಟರೆ, ವೇದಿಕೆಯ ಮುಂದೆ ಕುಳಿತ ಹುಡುಗಿಯರ ಮುಖದಲ್ಲಿ ನಗು ಕಂಡುಬಿಟ್ಟರೆ ಮೌಂಟ್ ಎವರೆಸ್ಟ್ ಹತ್ತಿ ದಾಖಲೆ ಮಾಡಿದ್ದಕ್ಕಿಂತಾ ಒಂದು ಕೈ ಹೆಚ್ಚೇ ಎಂಬ ಅನುಭವ!

ವೇದಿಕೆಯನ್ನು ಶಾಲೆಯ ಅಂಗಳದಲ್ಲಿ ನಿರ್ಮಿಸುತ್ತಿದ್ದುದು ಅಭ್ಯಾಸ. ಅಲ್ಲಿ ವೇದಿಕೆಗಳಿಗೆಲ್ಲ ರೆಡಿ ಮೇಡ್ ವ್ಯವಸ್ಥೆ ಯಾವುದೂ ಇರುತ್ತಿರಲಿಲ್ಲ. ಶಾಲೆಯ ಹುಡುಗರು ತಮ್ಮ ಶ್ರಮದಾನದಿಂದ ಸುತ್ತಲೂ ಕಲ್ಲಿನ ಕಟ್ಟೆ ಕಟ್ಟಿ ಅದರೊಳಗೆ ಮಣ್ಣು ತುಂಬಿಸಿ ಪರ್ಮನೆಂಟ್ ವೇದಿಕೆ ನಿರ್ಮಿಸಿದ್ದು ಅದಾಗಲೇ ನಮ್ಮೂರಿನ ಇತಿಹಾಸದ ಪುಟದಲ್ಲಿ ದಾಖಲಾಗಿತ್ತು. ಅದೇ ವೇದಿಕೆಯ ಮೇಲೆ ಹವ್ಯಾಸೀ ಕಲಾವಿದರೇ ತಮ್ಮ ಮನೆಗಳಿಂದ ಹಾಗೂ ಪಕ್ಕದ ಮನೆಗಳಿಂದ ಅಡಕೆ ಮರದ ತುಂಡುಗಳನ್ನು ತಂದು ನಾಲ್ಕು ಮೂಲೆಯಲ್ಲಿ ಕಂಬ ನಿಲ್ಲಿಸುತ್ತಿದ್ದರು. ಮೇಲ್ಗಡೆ ತೆಂಗಿನ ಗರಿಯಿಂದ ಮಾಡಿದ ಮಡಲು ತಡಿಕೆಯ ಹೊದಿಕೆ. ಇದು ವೇದಿಕೆಯ ಸ್ಕೆಲಟನ್ !

ಇನ್ನು ಸೀನರಿಗಳು, ಧ್ವನಿವರ್ಧಕ, ಸಂಗೀತ ಪರಿಕರಗಳು, ಸಭೆಗೆ ಬಂದವರಿಗೆ ಹಾರತುರಾಯಿಗಳು ಹೀಗೇ ಹಲವು ಹತ್ತು ಬೇಕು. ತೀರಾ ತುಟ್ಟಿಯಾಗಿಬಿಟ್ಟರೆ ಸಾಧ್ಯವಿಲ್ಲ. ಹಾಗಾಗಿ ಅಗ್ಗದಲ್ಲಿ ಸಿಗುವ ಮಾಲುಗಳನ್ನು ಹುಡುಕುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಹಳ್ಳಿಗಳಲ್ಲಿ ಅಲ್ಲಲ್ಲಿ ಆ ಯಾ ಪರಿಕರಗಳಿಗೆ ಸಂಬಂಧಿಸಿದಂತೇ ಕೆಲವು ಜನ ಇರುತ್ತಿದ್ದರು. ಅವರುಗಳಲ್ಲಿ ಆ ಯಾ ಸೌಲಭ್ಯ ಬಾಡಿಗೆಗೆ ದೊರೆಯುತ್ತಿತ್ತು ಮಾತ್ರವಲ್ಲ ಬಾಡಿಗೆಗೆ ಕೊಟ್ಟ ವಸ್ತುವಿನ ಜೊತೆ ಅವರು ತಾವೂ ಬಿಜಯಂಗೈದು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬಣ್ಣದ ಸೀನರಿಗಳು ಮಣಕಿ ಮಡಿವಾಳರಲ್ಲಿ ಸಿಗುತ್ತಿದ್ದವು, ಕಡತೋಕದಲ್ಲೊಬ್ಬರು ಹೊಸದಾಗಿ ಕೀ ಬೋರ್ಡ್ ತರಿಸಿದ್ದು ಅವರ ಜೊತೆಗೆ ತಬಲಾ ಗಿಬಲಾ ಎಲ್ಲಾ ಬಾರಿಸುವವರ ವ್ಯವಸ್ಥೆ ಸಿಗುತ್ತಿತ್ತು. ಶೆಟ್ಟಿ ಮಾಸ್ತರು ಬಣ್ಣ ಬಳಿಯಲು ಸಹಕರಿಸುತ್ತಿದ್ದರು-ಅವರಲ್ಲಿ ಟೋಪನ್ನು, ಚಿಕ್ಕ-ಪುಟ್ಟ ಸರಗಳು ಇವೆಲ್ಲಾ ಇದ್ದವು.

ಒಂದು ನಾಟಕ ನಡೆಯಬೇಕೆಂದರೆ ವ್ಯವಸ್ಥಾಪಕರಿಗೆ ಏಳು ಕೆರೆ ನೀರು ಕುಡಿದ ಅನುಭವ! ಪರದೆಗಳನ್ನು ಕಟ್ಟಬೇಕಲ್ಲಾ, ಅದಕ್ಕೆ ಮೊದಮೊದಲು ಬಿದಿರುಗಳಗಳನ್ನು ಬಳಸುತ್ತಿದ್ದರು, ನೇರವಾಗಿರುವ ಬಿದಿರ ಗಳ ಸಿಗದೇ ಇದ್ದರೆ ಸೀನರಿ ಸ್ವಲ್ಪ ಸೊಟ್ಟಗೆ ನಿಲ್ಲುತ್ತಿತ್ತು! ಅದೆಲ್ಲಾ ನಮ್ಮಲಿ ಅಡ್ಜಸ್ಟ್ ಆಗುತ್ತಿತ್ತು ಬಿಡಿ. ವಿಶಾಲ ಹೃದಯದ ಗೋವಿಂದ ಹೆಗಡೆಯವರು ಬಿದಿರಗಳಗಳ ಬದಲಾಗಿ ಪರ್ಪೋಪೈಪು ಕೊಡಲು ಮುಂದಾಗಿದ್ದರು! ಪೈಪುಗಳು ನೇರವಾಗಿ ಇರುವುದರಿಂದ ಆ ಸರ್ತಿ ಸೊಟ್ಟಗೆ ನಿಲ್ಲುವ ಸೀನರಿಗಳು ನೆಟ್ಟಗೆ ನಿಲ್ಲಲು ಕಲಿತವು! ಮಡಚಲಾಗುವ ಸೀನರಿಗಳನ್ನು ಆ ಯಾ ಸನ್ನಿವೇಶಗಳಿಗೆ ತಕ್ಕಂತೇ ಗಡಗಡೆ ಹಾಗೂ ಹಗ್ಗಗಳ ಸಹಾಯದಿಂದ ಕೆಳಗೆ ಬಿಡುವುದು ಮತ್ತು ಮೇಲೆತ್ತುವುದು ನಡೆಯುತ್ತಿತ್ತು. ಕರೆಂಟನ್ನು ಅಷ್ಟುದೂರದಲ್ಲಿರುವ ಕಂಬದಿಂದ ಲೈನ್ ಮನ್ ಕೊಡುವ ವ್ಯವಸ್ಥೆ ಮಾಡುತ್ತಿದ್ದ-ಆತನನ್ನು ಸ್ವಲ್ಪ ನೋಡಿಕೊಂಡ್ರೆ ಸಾಕಾಗುತ್ತಿತ್ತು. ಸೈಡ್ ವಿಂಗ್‍ಗಳಿಗೆ ಆಯ ಅಳತೆ ಒಂದೇ ತೆರನಾಗಿ ಇರುತ್ತಿರಲಿಲ್ಲವಾಗಿ ಮಡಿವಾಳರು ತಂದ ಸೀನರಿಗಳು ಸಾಲದೇ ಬಿದ್ದಾಗ ಊರಲ್ಲಿ ಧಾರಾಳಿಗಳಾದ ಕೆಲವು ಹೆಂಗಸರಲ್ಲಿ ಬೇಡಿ ಬಣ್ಣದ ಸೀರೆಗಳನ್ನು ತರಿಸಿ ಖುಲ್ಲಾ ಜಾಗವನ್ನು ಭರ್ತಿಮಾಡುವ ವ್ಯವಸ್ಥೆಯಾಗುತ್ತಿತ್ತು. ದೀಪದ ಬಲ್ಬುಗಳು ಮತ್ತು ಅದಕ್ಕೆ ಕಲರ್ ಕಲರ್ ಹೊದಿಕೆಗಳನ್ನೂ ಮಡಿವಾಳರೇ ಏಕಗವಾಕ್ಷೀ ವ್ಯವಸ್ಥೆಯಂತೇ ತಂದುಬಿಡುತ್ತಿದ್ದರು. ವರ್ಷಾ ವರ್ಷಾ ಬರುವ ಪ್ರೀತಿಯಿಂದ ಅವರು ಹೊಸದಾಗಿ ಆ ವರ್ಷ ಜಿಗ್ ಜಾಗ್ ಲೈಟು ತಂದಿದ್ದರು.

ಇಷ್ಟೆಲ್ಲಾ ಆದಮೇಲೆ ಕಾವಲುಪಡೆಯ ನಿರ್ಮಾಣ ಆಗಬೇಕಾಗುತ್ತಿತ್ತು. ಯಾರೋ ಮಜಕ್ಕೆ ಹತ್ತಿರದ ಕರೆಂಟ್ ಲೈನುಗಳಿಗೆ ಹಳೆಯ ಸೈಕಲ್ ಚೈನು/ ಎರಡೂ ಬದಿಗೆ ಕಲ್ಲುಕಟ್ಟಿದ ಹಗ್ಗದ ತುಂಡು ಈಥರದ್ದೇನನ್ನಾದರೂ ಎಸೆದು ವಿದ್ಯುದ್ದೀಪ ಆರಿಹೋಗುವ ಸಂಭವನೀಯತೆ ಇರುತ್ತಿತ್ತು. [ಇದೆಲ್ಲಾ ಅನುಭವ ಜನ್ಯವೇ ಆಗಿ ಕೆಲವಾರು ವರ್ಷಗಳೇ ಸಂದಿದ್ದವು.]ಹಾಗೆ ಕರೆಂಟು ಹೋದರೆ ಲೈನ್ ಮನ್ ಏನೂ ಮಾಡಲೂ ಕಷ್ಟವಾಗುತ್ತಿತ್ತು. ಬೇರೆ ಯಾವುದೋ ಅನಿವಾರ್ಯತೆಯಲ್ಲಿ ಕರೆಂಟು ಹೋದರೆ ಸೀಮೆ ಎಣ್ಣೆ ಗ್ಯಾಸ್ ಲೈಟು ಬೇಕಾಗುತ್ತಿತ್ತು. ಹಾಗೆ ಕರೆಂಟು ಹೋದಾಗ ಮಾತನಾಡಿದ್ದು ಕೇಳಿಸಲಿ ಎಂಬ ಕಾರಣಕ್ಕೆ ಧ್ವನಿವರ್ಧಕಕ್ಕೆ ಬ್ಯಾಟರಿ ತರುತ್ತಿದ್ದರು. ಅಕಸ್ಮಾತ್ ಕರೆಂಟು ಹೋದರೆ ಬೇಗ ಬರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿರುತ್ತಿತ್ತು. ಹಾಗೆ ಕರೆಂಟು ಹೋದರೆ ವ್ಯವಸ್ಥಾಪಕರ ಮುಖದಲ್ಲಿ ಎಷ್ಟೆಷ್ಟೋ ನೋವಿನ ನಿರಿಗೆಗಳು ಕತ್ತಲಲ್ಲೂ ಕಾಣುತ್ತಿದ್ದವು! ಯಾಕೆಂದರೆ ವ್ಯವಸ್ಥಾಪಕರೇ ಪಾತ್ರಧಾರಿಗಳೂ ಆಗಿರುತ್ತಿದ್ದರು. ಬಣ್ಣ ಹಚ್ಚಿಕೊಂಡೂ ಒಮ್ಮೊಮ್ಮೆ ಹೊರಗೆಬಂದು ಅವರು ಚಡಪಡಿಸುವ ರೀತಿ ಮಾತ್ರ ಇಂದಿಗೂ ಕಣ್ಣೆದುರು ಬಂದು ನಿಲ್ಲುತ್ತದೆ.

ಹೀಗೆ ಪೂರ್ಣರಾತ್ರಿ ನಾಟಕ ಪ್ರದರ್ಶಿಸುವ ಈ ಮೇಕ್ ಶಿಫ್ಟ್ ನಾಟಕ ಮಂಡಳಿಯವರಿಗೆ ನಿದ್ದೆ ಬಾರದಿರಲೆಂದು ಪೊಮ್ಮನ ಅಂಗಡಿಯ ಬುಂಚಾಣಿ ಚಾ ಸಪ್ಲೈ ಆಗುತ್ತಿತ್ತು. ಇದಕ್ಕಾಗಿ ಒಂದು ಮೇಜು ಮತ್ತು ಒಂದೇ ಮುರುಕು ಖುರ್ಚಿ, ಐದಾರು ಪಾತ್ರೆಗಳು, ಸೀಮೆ ಎಣ್ಣೆ ಗ್ಯಾಸ್ ಸ್ಟವ್ ಹೀಗೆ ಇವಿಷ್ಟರಿಂದಲೇ ನಡೆಯುವ ಇಡೀ ಪೊಮ್ಮನ ಅಂಗಡಿಯೇ ನಾಟಕ ತಾಣದ ಹೊರಬದಿಗೆ ಬಂದು ಸ್ಥಾಪಿತವಾಗುತ್ತಿತ್ತು. ಅತಿಯಾದ ಖಾರದ ಮಿರ್ಚಿ ಮತ್ತು ಕುದಿಸಿ ಕುದಿಸಿ ಏನೂ ಸಾರವೇ ಉಳಿಯದ ಟೀ ಪುಡಿಯನ್ನೇ ಮತ್ತೆ ಮತ್ತೆ ಕುದಿಸಿ ತೆಗೆದ ಚಾ ಕಣ್ಣಿನ [ಡಿಕಾಕ್ಶನ್‍ಗೆ ನಾವು ಬಳಸುವ ಶಬ್ದ] ಕೆಟ್ಟ ಚಾ ಕುಡಿದ ಅನುಭವ ಜೀವನ ಪರ್ಯಂತ ಪೊಮ್ಮನ ಸವಿನೆನಪನ್ನು ಮರುಕಳಿಸುತ್ತದೆ. ಇಷ್ಟಿದ್ದರೂ ಪೊಮ್ಮನಿಗೆ ಬೆಳವರೆಗೆ ನಡೆಯುವ ವ್ಯಾಪಾರ ಇಡೀ ವರ್ಷದಲ್ಲೇ ಆತನಿಗೆ ಬೇರೇ ಕಡೆ ಸಿಗದಷ್ಟು !

ಇಷ್ಟೆಲ್ಲಾ ಆಯಾಮಗಳ ನಡುವೆ ಯಾರಾದರೂ ಲೋಕಲ್ ರಾಜಕೀಯದವರನ್ನು ವೇದಿಕೆಯ ಮೇಲೆ ಕರೆದು ಸಭೆ ನಡೆಸುವುದು ಪದ್ದತಿಯೇ ಆಗಿಬಿಟ್ಟಿತ್ತು; ಹಾಗೊಮ್ಮೆ ಮಾಡದಿದ್ದರೆ ಮುಂದಿನವರ್ಷದಿಂದ ನಾಟಕಮಾಡಲು ಅವರು ತೊಂದರೆ ಕೊಡುತ್ತಿದ್ದರು. ನಾಟಕದ ಆರಂಭಕ್ಕೂ ಮುನ್ನ ವೇದಿಕೆಯಲ್ಲಿ ಕೆಲಸಕ್ಕೆ ಬಾರದ ಜನ ಕೂತು ತಲೆಚಿಟ್ಟು ಹಿಡಿಸುವ ಭಾಷಣ ನಡೆಸುತ್ತಿದ್ದರು. ಅವರಿಗೆಲ್ಲಾ ಹಾರ-ತುರಾಯಿ ಅರ್ಪಣೆಯಾಗಿ ಅವರೆದ್ದು ಆಚೆ ಬಂದಮೇಲೆ ’ಪಾಹಿ ಶಾಂತ ಭುವನೇಶ್ವರ’ ಆರಂಭ. ಇದಕ್ಕೆ ಅಷ್ಟೂ ಪಾತ್ರಧಾರಿಗಳು ವೇದಿಕೆಯ ಅಂಕದ ಪರದೆಯ ಹಿಂದೆ ಬಂದು ನಿಲ್ಲುತ್ತಿದ್ದರು. ತೆಂಗಿನಕಾಯಿ ಒಡೆದು ಧೂಪ ಹಚ್ಚಿ ಹಾಡಿದ್ದೋ ಹಾಡಿದ್ದು. ನನ್ನಂಥವರು ಮಡಿವಾಳರ ಪರದೆಯ ಸಂದಿಯಿಂದ ಇಣುಕಿ ಒಳಗೆ ನಡೆಯುವುದನ್ನು ’ಎಕ್ಸ್ ಕ್ಲೂಸಿವ್’ ಆಗಿ ನೋಡುತ್ತಿದ್ದೆವು. ಮಡಿವಾಳರು ಕಣ್ಣುಬಿಟ್ಟರೆ ಅವರಿಗೆ ಪರದೆಯ ಹಗ್ಗ ಎಳೆಯಲು ಸ್ವಲ್ಪ ಸಹಕಾರ ಕೊಟ್ಟರೆ ಆಯ್ತಪ್ಪ-ಸಮಸ್ಯೆಗೆ ಅಲ್ಲೇ ಪರಿಹಾರ!

ನಾಟಕದ ಬಗ್ಗೆ ಹೊಸದಾಗಿ ಮತ್ತೆ ಹೇಳಬೇಕೆ? ಹಳ್ಳೀ ನಾಟಕ.ಆದರೆ ನಾಟಕ ನಡೆಯುವಾಗ ಅಗೊಮ್ಮೆ ಸ್ವಲ್ಪ ’ಸುಧಾರಣೆ’ಯೂ ಆಗಿತ್ತು. ನಾಟಕದ ಹೆಣ್ಣು ಪಾತ್ರವೊಂದನ್ನು ಪಕ್ಕದ ಊರಿನ ಶಾಂತಲಾ ನಿರ್ವಹಿಸಿದ್ದಳು. ಇರುವುದರಲ್ಲೇ ಸುಂದರಿ ಎನಿಸಿಕೊಂಡ ಆಕೆಯ ಪ್ರೇಮಿಯ ಪಾತ್ರವನ್ನು ಸುಧಾಕರ ನಿರ್ವಹಿಸಿದ್ದ. ನಾಟಕ ಹಳ್ಳಿಗರ ಲೆಕ್ಕದಲ್ಲಿ ಚೆನ್ನಾಗೇ ನಡೆಯಿತು. ಬೆಳಿಗ್ಗೆ ೬ ಗಂಟೆಗೆ ವಂದನಾರ್ಪಣೆ ನಡೆಯಬೇಕು. ಅದು ಅಲ್ಲಿ ಸಾಮಗ್ರಿಗಳನ್ನು ಕೊಟ್ಟವರಿಗೆ, ಸಹಕಾರ ಕೊಟ್ಟವರಿಗೆ, ಬಾಡಿಗೆಗೆ ಸೌಲಭ್ಯಗಳನ್ನು ಕೊಟ್ಟವರಿಗೆ ಹೀಗೇ ಈ ಎಲ್ಲರಿಗೆ. ಸುಧಾಕರ ವಂದನಾರ್ಪಣೆ ಮಾಡಬೇಕಾಗಿತ್ತು. ಆದರೆ ನಾಟಕ ಮುಗಿಯುತ್ತಿದ್ದಂತೇ ಸುಧಾಕರ ಮತ್ತು ಶಾಂತಲಾ ನಾಪತ್ತೆಯಾಗಿದ್ದರು ಎಂಬುದು ಗೊತ್ತಾಗಿದ್ದು! ನಾಟಕದಲ್ಲಿ ಅವರದ್ದು ಮುರಿದು ಬಿದ್ದ ಪ್ರೇಮ; ಹೊರಗಡೆ ಅದು ಏನೋ ಅರ್ಥವಾಗಿರಲಿಲ್ಲ. ಅವರ ಸೀನುಗಳು ಸುಮಾರು ಬೆಳಗಿನ ಜಾವ ೩ ಗಂಟೆಗೇ ಮುಗಿದಿದ್ದವು. ಆಮೇಲೆ ಅವರನ್ನು ಕಂಡವರಿದ್ದೇವೆ ಎಂದವರಿಲ್ಲ.

ವಂದನಾರ್ಪಣೆ ಮಾಡಲು ಬೇರಾರಿಗೂ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ನಾಟಕದ ಮಾತುಗಳನ್ನು ಎಲ್ಲರೂ ಕಂಠಪಾಠ ಮಾಡಿರುತ್ತಿದ್ದರು. ಒಳಗಡೆ ಅವರವರಲ್ಲೇ "ಬೀದಿ ದೃಶ್ಯ ಬೀದಿ ದೃಶ್ಯ " "ಜಂಗಲ್ ಸೀನು ಜಂಗಲ್ ಸೀನು " ಹೀಗೆಲ್ಲಾ ಕೂಗುವುದು ಆಗಾಗ ಪ್ರೇಕ್ಷಕರಿಗೂ ಕೇಳುತ್ತಿತ್ತು! ಅಂತೂ ವಂದನಾರ್ಪಣೆ ಮಾಡಲು ’ಸ್ವಲ್ಪ ಅಡ್ಡಿಲ್ಲ’ ಎನಿಸಿಕೊಂಡ ೩೦ ವಯಸ್ಸಿನ ಗೋವಿಂದ ಹೆಗಡೆಯವರೇ ಸ್ವತಃ ಬಂದರು. ಸಹೃದಯರಾದ ಅವರು ಊರಿನ ಮರ್ಯಾದೆ ಕಾಪಾಡಲು [ಪರ ಊರ ಪ್ರೇಕ್ಷಕರೂ ಇರುತ್ತಾರೆ ಎಂಬುದನ್ನು ಗಮನಿಸಿ]ಹಾಗೆ ಬಂದಿದ್ದರು." ಈಗ ವಂದನಾರ್ಪಣೆ. ವೇದಿಕೆಗೆ ಹಾಸಲು ಜಮಖಾನ ಕೊಟ್ಟ ರಾಮಚಂದ್ರ ಭಟ್ಟರಿಗೆ ನಮ್ಮ ವಂದನೆಗಳು, ಅಡಕೆ ಕಂಬ ಕೊಟ್ಟ .........ವಂದನೆಗಳು, ಮಡ್ಲು ತಡಿಕೆ ಕೊಟ್ಟ...ವಂದನೆಗಳು"...ಮಧ್ಯೆ ಗಾಡಿ ನಿಲ್ಲುತ್ತಿತು. ನಾಟಕ ಮಂಡಳಿಯ ಯಾರ್ಯಾರೋ ಒಂದೊಂದೇ ಹೆಸರು ಬರೆದು ಚೀಟಿ ತಂದುಕೊಟ್ಟಾಗ ವಂದನಾರ್ಪಣೆ ಮುಂದುವರಿಯುತ್ತಿತ್ತು. " ಪರ್ಪೋ ಪೈಪುಗಳನ್ನು ಕೊಟ್ಟ ಗೋವಿಂದ ಹೇಗಡೆಯವರಿಗೆ ನಮ್ಮ ವಂದನೆಗಳು [ಅವರು ತಮಗೇ ಹೇಳಿಕೊಂಡಿದ್ದು ಎಂಬುದನ್ನು ಗಮನಿಸಿ], ಸಮಯಕ್ಕೆ ಸರಿಯಾಗಿ ಕೆಂಪು ಸೀರೆ ಕೊಟ್ಟ ಪಾರ್ವತಮ್ಮನವರಿಗೆ ವಂದನೆಗಳು, ಸೀಮೆ ಎಣ್ಣೆ ಗ್ಯಾಸ್ ಲೈಟು ಕೊಟ್ಟ ನಾಗೇಶ್ ಶೆಟ್ಟರಿಗೆ ವಂದನೆಗಳು, ಕರೆಂಟು ಸರಿಯಾಗಿರುವಂತೇ ದೊರಕಿಸಿಕೊಟ್ಟ ಲೈನ್ ಮನ್ ....ವಂದನೆಗಳು "

ವಂದನಾರ್ಪಣೆ ಮುಗಿದಾಗ ಬರೊಬ್ಬರಿ ಬೆಳಗಿನ ಏಳುಗಂಟೆ ಬಾರಿಸಿತ್ತು. ಬಾರಿಸಿತ್ತು ಎನ್ನಲು ಅಡ್ಡಿಲ್ಲ ಬಿಡಿ, ಆಗೆಲ್ಲಾ ಅದೆಂಥದೋ ಬೆಲ್ಲದಂತಹದ್ದನ್ನು ಹಚ್ಚಿ ರಿಪೇರಿ ಮಾಡುವ ಗೋಡೆ ಗಡಿಯಾರಗಳೇ ಇದ್ದವು! ಎಲ್ಲೋ ಹೋಗಿದ್ದ ಸುಧಾಕರ-ಶಾಂತಲಾ ಎಷ್ಟೋ ದಿನಗಳ ನಂತರ ಮರಳಿದ್ದರು. ಅವರು ಕೆಲವು ಸಿನಿಮಾ ಹೀರೋ-ಹೀರೋಯಿನ್ ಗಳ ರೀತಿ ಮತ್ತೆ ಕಾಯಂ ಕೆಲವು ನಾಟಕಗಳಲ್ಲಿ ಜೋಡಿಯಾಗಿದ್ದರು; ಈಗ ಆ ಜೋಡಿ ದೇಶಕ್ಕೆ ಎರಡೆರಡು ಕೊಡುಗೆ ನೀಡಿದೆ! ಸುಧಾಕರ-ಶಾಂತಲಾ ಎಂದು ನಾವು ಹೇಳಬೇಕಾಗಿಲ್ಲ ’ಶಾಂತಲಾ ಸುಧಾಕರ’ ಎಂದು ಶಾಂತಲಾ ಅವರೇ ಸಹಿಮಾಡುತ್ತಾರೆ!

ಕೆಲವು ಜೋಕುಗಳು :

1. Father: Your teacher says she finds it
Impossible to teach you anything!
Son: That’s why I say she’s no good!

2. If Malika plays roll of Draupadi,
Duryodhan will say pheli bhabhi ko sari to pehna,
hum to dekhen ye vastro mein kaisi lagti hai..?

3. Human brain is the most outstanding object in world.It functions 24 hours a day,365 days a year.It functions right from the time we are born, and stop only when we enter the examination hall.

4. Man at medical store:I need poison
Chemist: I can’t sell you that

Man shows his marriage certificate
.
.
.
Chemist: Oh! sorry, I didn’t knew you had a prescription.

5. Ladies hostel caught Fire

It took 1 hour to bring the Fire under control
& another 3 hours to bring d Firemen under control.


6. After a quarrel, a husband said to his wife,
You know, I was a fool when I married you.
She replied, Yes dear, I know
but I was in love and didn't notice.

7. Doctor to Banta : You will die within 2 hours.
Do you want to see any one before you die?
Banta : Yes. A good doctor.

8. On a romantic day Banta’s girlfriend asks him,
“Darling on our engagement day will you give me a ring?”
Banta : “Ya sure, from landline or mobile”.

9. Santa and Banta were fixing a bomb in a car.
Santa : What would you do if the bomb explodes while fixing.
Banta : Don’t worry, I have a one more.

10. Patient : What are the chances
of my recovering doctor?

Doctor : One hundred percent.
Medical records show that
nine out of ten people die of the disease you have.
Yours is the tenth case I’ve treated.The others all died.

11. Positive thinking is like…..
you are standing on the middle of the road………
&
suddenly a crow beats on your head….
But you remain calm…
and thanks to God…
that cows dont fly

12. A man went to the Police Station wishing
to speak with the burglar who had
broken into his house the night before.

“You’ll get your chance in court,” said the Police officer.

“No, no no!” said the man.
“I want to know how he got into the house without waking my wife. I’ve been trying for years.”

13. Sardarji & his wife going to city in auto.
Driver adjusted mirror.
Sardarji shouted you are seeing my wife.
Go & sit back. I will drive auto

15. A student was asked to write a signboard for the traffic rules near the college campus

He wrote:-

“Drive Carefully!
Don’t kill the students,
wait for the Teachers”wait for the Teachers”

------
hope you enjoyed all these, thank you,
ನಮಸ್ಕಾರ