ಕವಿ ಸ್ಮರಣೆಯಲ್ಲಿ ಬರೆದ ಕೆಲವು ಚುಟುಕಗಳು, ಹಿರಿಯ ಸ್ನೇಹಿತರೂ ಕವಿ-ಸಾಹಿತಿಗಳೂ ಆದ ಶ್ರೀ ಜಯಂತ್ ಕಾಯ್ಕಿಣಿಯವರಿಗೆ 'ಕುಸುಮಾಗ್ರಜ' ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಕೆಲವು ಕವಿ-ಸಾಹಿತಿಗಳನ್ನು ಕಲೆಹಾಕಿ ನೆನೆಸಲು ಪ್ರಯತ್ನಿಸಿದ ರೀತಿ.
ಕುಸುಮಾಗ್ರಜರು
ಕಾವ್ಯವನು ಬರೆದಂದು ಹಬ್ಬ ಕವಿಮನೆಯಲ್ಲಿ
ದಿವ್ಯ ಮಂಗಳ ಕೂಸ ಹಡೆದ ರೀತಿಯಲಿ
ಭವ್ಯ ಭಾರತದ ಕನಸನು ಹೊತ್ತು ತಾ ಬರೆವ
ನವ್ಯನೋವನು ಮರೆತು | ಜಗದಮಿತ್ರ
ಕುಸುಮಾಗ್ರಜರು
ಕಾವ್ಯವನು ಬರೆದಂದು ಹಬ್ಬ ಕವಿಮನೆಯಲ್ಲಿ
ದಿವ್ಯ ಮಂಗಳ ಕೂಸ ಹಡೆದ ರೀತಿಯಲಿ
ಭವ್ಯ ಭಾರತದ ಕನಸನು ಹೊತ್ತು ತಾ ಬರೆವ
ನವ್ಯನೋವನು ಮರೆತು | ಜಗದಮಿತ್ರ
ಧರ್ಮವೆಂಬುದು ಮನುಜಮತದ ತತ್ವವದಕ್ಕು
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ

ಭಾರೀ ಗಾತ್ರದ ಕೊಡುಗೆ ಕನ್ನಡಮ್ಮನಿಗೆ
ಯಾರ ಹಂಗಿಲ್ಲದಲೆ ನಡೆದರವರದೇ ದಾರಿ
ಭೂರಿ ಭೋಜನ ತಲೆಗೆ | ಜಗದಮಿತ್ರ

ಚರಕದಲಿ ತೆಗೆದರದೊ ಹಲವು ನೂಲುಗಳ
ಮರಕತ ಮಾಣಿಕ್ಯ ವೇದ ವೇದಾಂತಗಳ
ಸರಕು ತುಂಬುತ ನೋಡು | ಜಗದಮಿತ್ರ

ಹರನ ಹೃದಯದಿ ಹರಿಯ ಕಂಡರದೋ ತಿಳಿದು
ಬರಿದೇ ಭಾಗವ ಮಾಡಿ ಪೂಜಿಸುವ ಜನರಲ್ಲಿ
ಗುರಿ ತೋರಿದರು ಹದದಿ | ಜಗದಮಿತ್ರ

ಮಂಗಳದ ಅಂಗಳಕೆ ಕಬ್ಬದಾವುಗಳ !
ಮಂಗಳೂರಿನ ಜನತೆ ಸತತ ನೆನೆಯುವಹಾಗೆ
ಬೆಂಗಳೂರನೂ ಮಿಳಿಸಿ | ಜಗದಮಿತ್ರ

ಕಸುವಿನಲ್ಕಡೆದು ಕೊಡಲದುವೆ ಮಹಾಕಾವ್ಯ
ಹಸುವಿನಂದದಿ ಕವಿಯು ಉಪಕಾರಿ ಲೋಕದಲಿ
ಕುಸುಮಾಗ್ರಜರ ನುತಿಸು | ಜಗದಮಿತ್ರ