ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 24, 2010

ರೇಣುಕಾಚಾರ್ಯರ ಅಖಂಡ ಕೃಷಿ‌ಅಧ್ಯಯನ !!


‘ಸೀಡಿ’ ಎಂಬ ಬಟ್ಟೆ ಹಾವು
ರೇಣುಕಾಚಾರ್ಯರ ಅಖಂಡ ಕೃಷಿ‌ಅಧ್ಯಯನ
[ಸಂಪೂರ್ಣ ರಾಮಾಯಣ ಎಂಬಂತೆ]


ನಾವು ಬಂದೇವ ನಾವು ಬಂದೇವ
ನಾವು ಬಂದೇವ ಭಿನ್ನಮತ ತೋರುದಕ್ಕ
ಮತ್ತೆ ತಿಂದು-ಕುಡ್ದು ನುಂಗಿ ತೇಗೋದಕ್ಕ
ಗೀಯ ಗೀಯ ಗಾಗೀಯ ಗೀಯ ಹಾ ಹಾ ಹಾ ಹಾ ಹಾ......

ಹೈದ್ರಾಬಾದಿನಾಗ ರಿಸಾರ್ಟು ಯಾಕಂತ ?
ಹೂಂ... ಹೇಳಪಾ....... ಕೃಷಿ‌ಅಧ್ಯಯನಕ್ಕಂತ
ಸಿವಾ ಕೃಷಿ‌ಅಧ್ಯಯನಕ್ಕಂತಾ ತಾ ತಾತಾತಾ..ಗೀಯ ಗೀಯ..

ನರ್ಸ ಜಯಲಕ್ಷ್ಮಿಗೆ ಏನಪಾ ಆತಂತ....?
ಪ್ರೇಮಾಮಾಡ್ಯಾರಂತ..ಏನೆಲ್ಲಾ ಮಾಡ್ಯಾರಂತ...
ಯಾರಂತಾ.....? ರೇಣುಕಾಚಾರ್ಯರಂತ ನಮ್ಮ
ರೇಣುಕಾಚಾರ್ಯರಂತಾ ತಾ ತಾತಾತಾ..ಗೀಯ ಗೀಯ..

ಹೊನ್ನಾಳಿಯಾಗೆಲ್ಲ ‘ಉದ್ಧಾರ’ಮಾಡ್ತಾರಂತ....
ಯಾರಂತ....?.ನಮ್ಮ ರೇಣುಕಾಚಾರ್ಯರಂತ...
ಯಾಕಪ್ಪಾ ಸಿವಾ.?.ಮುಂದೆ ಮುಖ್ಮಂತ್ರಿ ಅಗ್ಬೇಕಂತ..
ಮುಖ್ಮಂತ್ರಿ ಅಗ್ಬೇಕಂತ..ತಾ ತಾತಾತಾ..ಗೀಯ ಗೀಯ..

ಯಡ್ಯೂರಪ್ಪರ ಸರ್ಕಾರ್ದಾಗೆ ಬಡ್ಯೂರಪ್ಪರೆ
ಜಾಸ್ತಿ‌ಆಗ್ಯಾರಂತ..ಯಾಕಂತ..... ?
ಆ ದಾರಿ ಕಂಡಾರಂತ.. ಎಲ್ಲಾರ್ಗೆ ಮಂತ್ರಿಗಿರಿ ಬೇಕಂತ..
ಮಂತ್ರಿಗಿರಿ ಬೇಕಂತ.. ತಾ ತಾತಾತಾ..ಗೀಯ ಗೀಯ..

ಸರ್ಕಾರ್ದಾಗಾಗಾಗ ಬಟ್ಟೆ ಹಾವು ಬಿಟ್ಟಾರಂತ..
‘ಸೀಡಿ ಮಡ್ಗ್ಯಾರಂತ’... ಯಾಕಪ್ಪಾ..ಹಾಂಗಂದ್ರೆ ಏನಾತು.?.
ಏ.. ಎಂತೆಂಥಾ ಮನುಷ್ಯರೆಲ್ಲಾ ಗಡಗಡಾ ಅಂತಾರಂತ
‘ಕೆಲ್ಸಾ’ ಆಗುತಂತ..!. ‘ಹಾವುಬಿಟ್ರೆ’…..
‘ಕೆಲ್ಸಾ’ ಆಗುತಂತ ತಾ ತಾತಾತಾ..ಗೀಯ ಗೀಯ..

ನಮ್ ಮುಖ್ಮಂತ್ರಿ ಸಾಹೇಬ್ರು ಬಡವಾಗಿ ಹೋಗ್ಯಾರಂತ..
ಯಾಕಂತಪ್ಪಾ.....?. ಸುಸ್ತಾಗಿ ಬುಟ್ಟಾರಂತ....
ಕುಣ್ದೂ ಕುಣ್ದೂ ಸುಸ್ತಾಗಿ ಬುಟ್ಟಾರಂತ....ಯಾಕಂತ...?
ಸೋಬಕ್ಕನ್ನ ಇಳ್ಸೂಂದ್ರಂತ ಇಳ್ಸದ್ರಂತ...ಬಳ್ಗಾರ್ ಬ್ಯಾಡಾಂದ್ರಂತ
ಕಳ್ಸದ್ರಂತ.. ಅವ್ರನ್ನೂ ಕಳ್ಸದ್ರಂತಾ ತಾತಾತಾ..ಗೀಯ ಗೀಯ..

ಅಂಗೈಕೊಟ್ನಲ್ಲಪ್ಪ ಸಿವಾ..ಮುಂಗೈನೂ ಕೇಳ್ತಾಕುಂತ್ರಲ್ಲ
ಯಾಕಪಾ... ಏನಾತು..?.ಹಿತ್ಲಬಾಗ್ಲಿಂದ ಬಂದಾರಂತ..
‘ಮಂತ್ರಿಪಟ್ಟಾ ಕೊಡು’ಅಂತ..ಮುಂದೇನಾತು...?
ಕೊಟ್ರಂತಲ್ಲಪ್ಪಾ ನಮ್ ಸಿವಾ...ಹೊಟ್ಟೇ‌ಉರಿದುಹೋತ
ಹೊಟ್ಟೇ‌ಉರಿದುಹೋತ ತಾತಾತಾ..ಗೀಯ ಗೀಯ..

ಮೀಡಿಯಾದಾಗ್ ಕೂತ್ಗಂಡು ನಾನಾಥರ ಹೇಳ್ಯಾರಂತ
“ಕೃಷಿ‌ಅಧ್ಯಯನ”ಕ್ಕೋಗಿದ್ರಂತ...ಮತ್ತೆ ಬೇರೇನು ಇಲ್ವಂತ..
‘ಎಲ್ಲಾ ಒಟ್ಟಾಗೇ’ ಇದಾರಂತ.. ‘ಬಿಕ್ಕಟ್ಟೆಲ್ಲ ಸುಳ್ಳಂತ'
ಸಲ್ಪ ‘ಯಾಯಾಮ’ಮಾಡದ್ರಂತ..ಸುಮ್ಕೇ ಇದ್ಬುಟ್ಟು ಬಂದ್ರಂತ...
ಉದ್ಧಾರ ಮಾಡ್ತಾರಂತ ರಾಜ್ಯ ಉದ್ಧಾರ
ಮಾಡ್ತಾರಂತಾ ತಾ ಗೀಯ ಗೀಯ !
---------