ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, August 8, 2012

ಗೊಲ್ಲನಾಗಿ ಮೆಲ್ಲನಿಳಿದೆ

 ಚಿತ್ರಋಣ: ಅಂತರ್ಜಾಲ
ಗೊಲ್ಲನಾಗಿ ಮೆಲ್ಲನಿಳಿದೆ

[ಲೋಕದ ಸಮಸ್ತರಿಗೂ ಜಗದ್ಗುರು ಶ್ರೀಕೃಷ್ಣನ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಶ್ರೀಕೃಷ್ಣ ಸಕಲರಿಗೂ ಸನ್ಮಂಗಳವನ್ನುಂಟುಮಾಡಲಿ.  ಕಳೆದ ವರ್ಷ ಬರೆದ  ಕೃಷ್ಣಕಥೆಯ [ವಿಠೋಬನ ಕಥೆಯ] ಮತ್ತು ಕೃಷ್ಣಗೀತೆಯ ಕೊಂಡಿಗಳ ಜೊತೆಗೆ ಇಂದು ಬರೆದ ಈ ಗೀತೆಯನ್ನು ತಮೆಗೆಲ್ಲಾ ಓದಿಸುವುದರ ಮೂಲಕ ಕೃಷ್ಣಾರ್ಪಣಗೈಯ್ಯುತ್ತಿದ್ದೇನೆ: ]


ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

 ಎಂದೂ ಮುಗಿಯದು ಹರಿಕಥೆಯು ! 




ಗೊಲ್ಲನಾಗಿ ಮೆಲ್ಲನಿಳಿದೆ ಗೋಪಿಕೆಯರ ಎದೆಯೊಳು |
ನಿಲ್ಲುತಲ್ಲಿ ಅವರ ಸೆಳೆದೆ ಗೋಕುಲದಾ ಧರೆಯೊಳು ||

ಎಲ್ಲಿನೋಡಲಲ್ಲಿ ನೀನೆ ಎಲ್ಲರಲ್ಲು ಕಾಣಿಸಿ |
ಚೆಲ್ಲುಚೆಲ್ಲು ನಾಟ್ಯವಾಡಿ ಎಲ್ಲರನ್ನು ಸೋಲಿಸಿ || 

ಹುಲ್ಲು ಕಡ್ಡಿಯಲ್ಲು ನಿನ್ನ ಲೀಲೆಯನ್ನು ತೋರಿಸಿ |
ಕಲ್ಲುಬೆಟ್ಟ ಎತ್ತಿಹಿಡಿದು ಇಂದ್ರನನ್ನೆ ಮೀರಿಸಿ ||

ಬಲ್ಲ ವಿದುರ ಅಕ್ರೂರಗೆ ದಿವ್ಯತೆಯನು ಕರುಣಿಸಿ |
ಎಲ್ಲಕೊಟ್ಟೆ ಅವಲಕ್ಕಿಯ ಕುಚೇಲನಿಗೆ ಹವಣಿಸಿ || 

ಗೆಲ್ಲಿಸುತ್ತ ಧರ್ಮವನ್ನು ಕೌರವರನು ವಧಿಸುತ |
ಸಲ್ಲುವಂತ ಗೀತೆ ನೀಡಿ ಕರ್ಮಬಂಧ ಬಿಡಿಸುತ ||