ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 28, 2010

ಗೋಪುರ ಗಾನ !!


ಗೋಪುರ ಗಾನ !!

ತಿಳಿ ಗುಲಾಬಿ ಪಂಚೆ, ಗಿಳಿಹಸಿರು ಬಣ್ಣದ ಜುಬ್ಬಾ ತೊಟ್ಟುಕೊಂಡು,ಎರಡೂ ಹೆಗಲಿಗೆ ಶಾಲನ್ನು ಹೊದ್ದು, ಹಣೆತುಂಬಾ ಢಾಳಾಗಿಕಣ್ಣಿಗೆ ಹೊಡೆಯುವಂತೇ ಭಸ್ಮ ತ್ರಿಪುಂಡ್ರ[ವಿಭೂತಿ], ಕೊರಳಲ್ಲಿ ಎರಡೆರಡು ಮಧ್ಯಮ ಗಾತ್ರದ,ಚಿನ್ನದಲ್ಲಿ ಕಟ್ಟಿದ ರುದ್ರಾಕ್ಷಿ ಹಾರಹೇರಿಕೊಂಡು, ಕೈಯ್ಯಲ್ಲಿ ಹೊಸ ಲ್ಯಾಪ್ ಟಾಪ್ ಮತ್ತು ಬ್ಲಾಕ್ ಬೆರ್ರಿ ಮೊಬೈಲು ಹಿಡಿದು ಕೊಂಡು ಬಂದೇ ಬಿಟ್ಟರು ನಮ್ಮಚಂದ್ರಕಾಂತ ಗುರೂಜಿ, ಇವರು ನಾನು ತಮಗೆಲ್ಲಾ ಮೊದಲೊಮ್ಮೆ ಪರಿಚಯಿಸಿದ " ಪುನರ್ಜನ್ಮ" ಖ್ಯಾತಿಯ ದಾಮೋದರಗುರೂಜಿಯ ಖಾಸಾ ತಮ್ಮ. ಏನಿಲ್ಲಾ ಅಂದರೂ ೧೦ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ, ಮಹೀಂದ್ರಾ ಸ್ಕಾರ್ಪಿಯೋ ಗಾಡಿಯಲ್ಲಿ ಅತೀ ಸಾಮಾನ್ಯನಂತೇ ಓಡಾಡಿಕೊಂಡಿದ್ದಾರೆ. ತಾವಾಯಿತು,ತಮ್ಮ ಕೆಲಸವಾಯಿತು. ಹಾಗಂತ ಅವರಿಗೆ ಯಾವ ಅಹಮ್ಮೂ ಇಲ್ಲ. ತುಂಬಾ ಡೌನ್ ಟು ಅರ್ಥ್ ಮ್ಯಾನ್ ! ತುಂಬಾನೇ ಸಿಂಪಲ್ಲು !

ಮಾಧ್ಯಮದಲ್ಲಿ ಗುರೂಜಿ ಕಾಣಿಸಿಕೊಂಡರೆ ಸಾಕು ಮಾರನೇ ದಿನವೇ ಗುರೂಜಿ ಅಫೀಸಿನ ಬಾಗಿಲಲ್ಲಿ ಸಾವಿರಾರು ಜನ! ಗುರೂಜಿಯ ಭವಿಷ್ಯವೇ ಹಾಗೆ. ಅದು ಫಲಕಾರಿಯೋ ಇಲ್ಲವೋ ಹರನೇ ಬಲ್ಲನಾದರೂ ಹೆದರಿ ಓಡಿ ಬಂದುಪರಿಹಾರಕಂಡುಕೊಳ್ಳುವ ಮಂದಿ ಬಹಳ. ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ಗುರೂಜಿ ಕಷ್ಟಪಟ್ಟು ಮೂರನೇ ತರಗತಿ ಓದಿದ್ದಾರೆ. ನಂತರಅಣ್ಣ ದಾಮೋದರ ಗುರೂಜಿಯ ಸಹಾಯಕರಾಗಿ ಇತ್ತೀಚಿನವರೆಗೂ ಕೆಲಸ ಮಾಡಿ ಅಣ್ಣನ ಗರಡಿಯಲ್ಲಿ ಪಳಗಿದ ಹುಲಿಯಾಗಿದ್ದಾರೆ. ಯಾರನ್ನೋ ಕರೆಸಿ ಇಂಗ್ಲೀಷ್ ಅಭ್ಯಾಸ ಮಾಡಿಕೊಂಡು ಕಂಪ್ಯೂಟರ್ ಕಲಿತುಕೊಂಡಿದ್ದಾರೆ.

ಕಳಪೆ ಟಿವಿಯ ಸಂದರ್ಶನ ಕೋಣೆಗೆ ಪ್ರವೇಶಿಸಿಯೇ ಬಿಟ್ಟರು ನಮ್ಮ ಗುರೂಜಿ.


" ನಮಸ್ಕಾರ ವೀಕ್ಷಕರೇ ನಾನು ನಿಮ್ಮ ಅಸಹ್ಯಾ... ಇಂದು ನಮ್ಮೊಂದಿಗಿದ್ದಾರೆ ಖ್ಯಾತ ಜ್ಯೋತಿಷಿ ಚಂದ್ರಕಾಂತ ಗುರೂಜಿಯವರು, ನಿನ್ನೆ ಕಾಳಹಸ್ತಿಯಲ್ಲಿ ರಜಗೋಪುರ ಕುಸಿದು ಬಿದ್ದ ಮೇಲಿನ ಶಕುನ ಮತ್ತು ಪರಿಣಾಮಗಳ ಬಗ್ಗೆ ಅವರು ತಮ್ಮ ಪ್ರಶ್ನೆಗಳಿಗೆಉತ್ತರಿಸಲಿದ್ದಾರೆ, ಪ್ರಶ್ನೆ ಕೇಳಲಿಚ್ಛಿಸುವವರು ನಮ್ಮ ಕೆಳಗಿನ ದೂರವಾಣಿಗಳ ಮೂಲಕ ನಮ್ಮನ್ನು ಸಂಪರ್ಕಿಸಬಹುದು... ೯೯೮೭೬೧೨೩೪_ ಹಾಗೂ ೯೯೮೭೬೧೨೪೪_ "

" ನಮಸ್ಕಾರ ಗುರೂಜಿ, ಕಾರ್ಯಕ್ರಮಕ್ಕೆ ತಮಗೆ ಸ್ವಾಗತ "

" ನಮಸ್ಕಾರ,

ವಂದೇ ಶಂಭುಮುಮಾಪತಿಂ .....ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಶಿವಂ ಶಂಕರಂ, ಜಗತ್ಪಿತೃವಾದ ಪರಮೇಶ್ವರನಿಗೆ ನಮಿಸುತ್ತ ಎಲ್ಲಾ ವೀಕ್ಷಕರಿಗೂ ಭಗವಂತನ ಕರುಣೆ ದೊರಕಲಿ ಎಂದು ಹೇಳುತ್ತ ಇವತ್ತಿನ ಕಾರ್ಯಕ್ರಮಆರಂಭಿಸೋಣ "

" ಸ್ವಾಮೀ ನಾವು ಬರಗಾಲಪುರದಿಂದ ಕಾಲ್ ಮಾಡ್ತಿರೋದು "

" ಏನು ನಿಮ್ಮ ಹೆಸರು ? ಏನ್ ಕೇಳಬೇಕಾಗಿತ್ತು "

" ನಾನು ಬೀರಣ್ಣಾ ಅಂತ, ಈಗ ಕಾಳಹಸ್ತಿಯಲ್ಲಿ ರಾಜಗೋಪುರ ಬಿದ್ದಿರೋದ್ರಿಂದ ಪರಿಣಾಮ ಏನಾಗ್ಬೌದು ಹೇಳ್ತೀರಾ? "

" ಇದೊಂದು ದೊಡ್ಡ ದುರಂತ, ದೇಶಕ್ಕೇ ಏಕೆ ಜಗತ್ತಿಗೇ ಇದರಿಂದ ವಿಪತ್ತು ತಪ್ಪಿದ್ದಲ್ಲ, ಹಿಂದೆಂದೂ ನಡೆಯದ ಇಂತಹ ಘಟನೆಇದೀಗ ಸಂಭವಿಸಿದೆ, ಗುರುಗ್ರಹದ ಸ್ಥಾನಪಲ್ಲಟವೇ ಇದಕ್ಕೆಲ್ಲ ಕಾರಣ"

" ಗುರೂಜಿ ಹಾಗಾದ್ರೆ ಮುಂದೆ ಇನ್ನೇನಾಗ್ಬೌದು ? "

" ಸುನಾಮಿ ಬರುವ ಲಕ್ಷಣ ಕಂಡು ಬರ್ತಾ ಇದೆ, ಜಗತ್ತಲ್ಲೇ ಅಲ್ಲೋಲ-ಕಲ್ಲೋಲ್, ಎಲ್ಲೆಲ್ಲೂ ದೊಂಬಿ-ಗಲಾಟೆ, ಬಾಂಬು "

" ಮತ್ತೆ ಈಗಾಗಲೇ ನಡೀತಿರೋದೇ ಆಗೋಯ್ತಲ್ಲ ಸ್ವಾಮಿ ಬೇರೆ ಇನ್ನೇನೂ ಆಗೋದಿಲ್ಲ ತಾನೇ ? "

" ಸದ್ಯಕ್ಕೆ ಹಾಗೇನೂ ಕಾಣಿಸ್ತಾ ಇಲ್ಲ, ಈಗಿರುವ ಪರಿಸ್ಥಿತಿ ನೋಡಿದ್ರೆ ಜನ ತಕ್ಷಣಕ್ಕೆ ಶಾಂತಿ-ಹೋಮ ಪೂಜೆ ಇತ್ಯಾದಿಗಳನ್ನುನುರಿತ ಪಂಡಿತರಿಂದ ಗುರೂಜಿಗಳ ಆಶೀರ್ವಾದ ಪಡೆದುಕೊಂಡು ಮಾಡ್ಸಿದ್ರೆ ಬರಬಹುದಾದ ಅನೇಕ ದೊಡ್ಡ ಕೆಟ್ಟಪರಿಣಾಮಗಳನ್ನು ಸ್ವಲ್ಪ ಮಟ್ಟಿಗೆ ಕಮ್ಮಿಮಾಡಿಕೊಳ್ಳಬಹುದು "

" ಅಲ್ಲಾ ಸ್ವಾಮ್ಯೋರೇ ಬುಡಬುಡಿಕೆ ಹಕ್ಕಿ ನರಸಪ್ಪ ಜಾವ್ದಲ್ಲೇ ಕೂಕ್ಕೊಂಡು ಹೋಯ್ತಾ ಇರ್ತಾನಲ್ಲ, ಎಲ್ಲಾ ರಕ್ತವಾಂತಿಮಾಡ್ಕತಾರೆ, ಅದ್ಯಾರೋ ಸತ್ತೋಗ್ಬುಡ್ತಾರೆ, ಮತ್ಯಾರ್ಗೋ ತುಂಬಾ ತ್ರಾಸಾಗ್ತೈತೆ,ಮಕ್ಳು-ಮರಿಗಳ್ಗೆಲ್ಲ ಹುಸಾರಿರಾಕಿಲ್ಲಅಂತೆಲ್ಲ.... ರೀತಿ ಏನೂ ಆಯಾಕಿಲ್ಲ ತಾನೇ ? "

" ರೀತಿ ಏನೂ ಆಗಲ್ಲ ಅಂತ ಹೇಳೋಕಾಗಲ್ಲ, ಆದ್ರೆ ಆದಷ್ಟು ನೀವು ಶಾಂತಿ ಕರ್ಮ ಮಾಡ್ಸೋದು ತುಂಬಾ ಒಳ್ಳೆದು "

" ಅಂದ್ರೆ ಈಗ ಅರ್ಜೆಂಟ್ ಗೆ ಶಾಂತಿ ಮಾಡ್ಬೇಕೂ ಅಂತೀರಿ,ಎಲ್ಲಿ ಮಾಡ್ಸಬೇಕೂ ಸುಮಾರು ಎಷ್ಟು ಖರ್ಚಾಗ್ಬೌದುಹೇಳಾಕಾಗ್ಬೋದಾ "

" ಅದು ಎಲ್ಲರ್ಗೂ ಸೇರಿ ಸಮೂಹಿಕ ಆದ್ರೆ ಒಂಥರಾ, ನಿಮ್ಗೆ ಒಬ್ಬರ್ಗೇ ಆದ್ರೆ ಒಂಥರಾ ಆಗತ್ತೆ, ಒಬ್ಬರ್ಗೇ ಆದ್ರೆ ಸುಮ್ನೇ ಭಾರ ಜಾಸ್ತಿಅಂತಾದ್ರೆ ಎಲ್ಲಾ ಸೇರ್ಕೊಂಡು ಮಾಡ್ಸ್ಕೋಬೌದು, ಒಟ್ಟೆಲ್ಲಾ ಸುಮಾರು ಲಕ್ಷ ಖರ್ಚು ಆಗ್ಬೌದು, ೨೦ ಜನ ಪುರೋಹಿತ್ರು ಬೇಕು, ೧೫ ಕ್ವಿಂಟಾಲ್ ತುಪ್ಪ ಬೇಕು ಹೀಗೇ ಬಹಳ ಸಾಮಾನು ಬೇಕಾಗ್ತವೆ ಬೀರಣ್ಣೋರೇ, ನೀವು ಖುದ್ದಾಗಿ ಭೇಟಿ ಆದ್ರೆ ಎಲ್ಲಾಮಾತಾಡ್ಬೌದು "


" ಮೊನ್ನೆ ಅಕ್ಷಯ ತದಿಗೆ ದಿವ್ಸ ಬೆಂಗ್ಳೂರ್ ಬಂಟಿ ಜಿವೆಲ್ಲರಿ ಶಾಪ್ನಾಗೆ ತಾವು ಕುಂತು ಭಾಳ ಮಂದಿಗೆ ಉಪಕಾರ ಮಾಡುದ್ರಿ"

" ಉಪಕಾರ ಏನ್ಬಂತು, ಬಂಟಿ ಮಾಲೀಕರಾದ ನಮ್ಮ ಸುಂದರೇಶು ನಮ್ಗೆ ತುಂಬಾ ಬೇಕಾದವ್ರು, ಸ್ವಲ್ಪ ಬಂದು ಕೂತ್ಗಂಡುರತ್ನ,ಹಅಳು,ವಜ್ರಗಳ ಬಗ್ಗೆ ಸ್ವಲ್ಪ ಗಿರಾಕಿಗೆ ತಿಳ್ಸ್ಕೊಡಿ ಅಂದ್ರು, ಅಷ್ಟಾಗಿ ಕರ್ದ್ರಲ್ಲ ಅಂತ ಹೋಗಿದ್ದೆ, ಬೆಳಿಗ್ಗೆಯಿಂದ ರಾತ್ರಿ ೧೦ಘಂಟೆತನ್ಕ ಭಾಳಾ ಸುಸ್ತಾಗ್ಬುಡ್ತು"

" ನೀವು ಕುಂತಿದ್ದೇ ಕುಂತಿದ್ದು ಆಯಪ್ಪಂಗೆ ಒಳ್ಳೆ ಯಾಪಾರ್ವಂತೆ, ಅಂತೂ ತಮ್ಮ ದಯದಿಂದ ಒಳ್ಳೇ ಯಾಪಾರ ಮಾಡ್ಕಂಡ್ರುಅನ್ನಿ, ತಮ್ಮ ಕಾಲ್ಗುಣವೇ ಹಾಗೆ ಅಲ್ವಾ ಸ್ವಾಮೀ? "

" ಇರ್ಲಿ ಬಿಡಿ, ಹೊಗಳಿಕೆ ನಂಗೆ ಇಷ್ಟ ಆಗಲ್ಲ, ನಿಮ್ಗೆ ಬೇಕಾದ್ರೆ ಬಂದು ಭೇಟಿ ಮಾಡಿ ಆಯ್ತಾ? "

" ಆಯ್ತು ಸ್ವಾಮಿ, ನಾನು ಒಂದೆರ್ಡದಿನದಲ್ಲೇ ತಮ್ಮನ್ಕಾಣ್ತೀನಿ"

" ನಂಸ್ಕಾರ ನಾನು ರಂಗಣ್ಣಾ ಅಂತ,ಸಿಡ್ಲಘಟ್ಟದಿಂದ, ಸರ್ತಿ ನಂಗೆ ಸೈಕಲ್ ಪಕ್ಷದೋರು ರಾಜ್ಯಸಭೆಗೆ ಅವಕಾಶ ಕೊಡ್ತೀನಿಅಂದವ್ರೆ,ಅದ್ರ ಬಗ್ಗೆ ಕೇಳೊಣ ಅಂತ "

" ರಂಗಣ್ಣೋರೇ ಇವತ್ತಿನ ವಿಷ್ಯ ಗೋಪುರ ಉರುಳಿದ ಬಗ್ಗೆ ಮಾತ್ರ, ಇರ್ಲಿ ನೀವು ಕೇಳಿದೀರಿ ಅಂತ ಹೇಳ್ತೀನಿ, ನಿಮ್ಗೆ ಸ್ಥಾನ ದಕ್ಕಲುಸ್ವಲ್ಪ ತಡೆ ಇದೆ, ನಿಮ್ಮ ಹತ್ತಿರದವ್ರೇ ಸ್ವಲ್ಪ ಅಡ್ಡಗಾಲು ಹಾಕ್ತಾ ಇದಾರೆ. ಹೀಗಾಗಿ ಸ್ಥಾನ ನಿಮ್ಗೆ ದಕ್ಬೇಕು ಅಂದ್ರೆ ಒಂದೆರಡು ಕ್ರಮಜರುಗಿಸಬೇಕು, ನೀವು ನನ್ನನ್ನು ಇವತ್ತೇ ಭೇಟಿ ಆಗಿ..ಎಲ್ಲಾ ಮಾತಾಡೋಣ "

ಗುರೂಜಿ ಕನ್ನಡಿಯಲ್ಲಿ ಕಾಣುತ್ತಿರುವ ಹಾಗೆ ಹೇಳುತ್ತಾ ಮುಂದುವರಿಸಿದರು --

" ವೀಕ್ಷಕರೇ ಇದು ಅಂತಿಥ ವಿಪತ್ತಲ್ಲ, ಭಾರೀ ಅಪಶಕುನ, ದೇಶ ಒಬ್ಬ ಒಳ್ಳೆಯ ರಾಜಕಾರಣಿಯನ್ನು, ಒಬ್ಬ ಮೇರು ನಟನನ್ನುಹಾಗೂ ಒಬ್ಬ ಅತ್ಯಂತ ಪ್ರಭಾವೀ ಮಹಿಳೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಬರುವ ಮಳೆಗಾಲದಲ್ಲಿ ಅಕಾಲಿಕ ಮಳೆ, ಭಯಂಕರ ಚಂಡಮಾರುತ ಬೀಸಿ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಹಾನಿಯುಂಟುಮಾಡಲಿದೆ, ಒಂದು ನದಿಯ ಅಣೆಕಟ್ಟೆಗೆಧಕ್ಕೆಯಾಗಲಿದೆ, ಭಾರೀ ವಿಮಾನ ದುರಂತದ ಸಾಧ್ಯತೆ ಕೂಡ ಕಂಡು ಬರ್ತಾ ಇದೆ "

" ವೀಕ್ಷಕರೇ ಈಗ ಒಂದು ಚಿಕ್ಕ ವಿರಾಮ ತಗೋತೀವಿ, ವಿರಾಮದ ನಂತರ ಗುರೂಜಿ ಅಪಶಕುನದ ಬಗ್ಗೆ ಇನ್ನೂ ಬಹಳತಿಳಿಸಿಕೊಡುವವರಿದ್ದಾರೆ, ಪ್ಲೀಸ್ ಡೋಂಟ್ ಗೋ ಅವೇ "

ಫೇಸ್ ಈಸ್ ದಿ ಇಂಡೆಕ್ಸ್ ಆಫ್ ಮೈಂಡ್


ಫೇಸ್ ಈಸ್ ದಿ ಇಂಡೆಕ್ಸ್ ಆಫ್ ಮೈಂಡ್

ಮನುಷ್ಯ ಯಾವ ತರಗತಿಯವನು ಎಂಬುದನ್ನು ಅವನ್ ಮುಖ ನೋಡಿಯೇ ಹೇಳಬಹುದು ಎನ್ನುತ್ತದೆ ಆಂಗ್ಲ ಗಾದೆ. ಇದುಸಮಂಜಸ್ವೇ ಸರಿ. ಇದುವರೆಗಿನ ನನ್ನ ವೃತ್ತಿನಿರತ ಕಾರ್ಯಕಲಾಪಗಳಲ್ಲಿ ಲಕ್ಷಾಂತರ ಜನರನ್ನು ನೋದಿದ್ದೇನೆ. ಜಗತ್ತಿನಲ್ಲಿ ಒಬ್ಬರಮುಖದಂತೇ ಇನ್ನೊಬ್ಬರದಿಲ್ಲ. ಒಂದೊಮ್ಮೆ ತದ್ರೂಪ ಹೋಲಿಕೆ ಇದ್ದರೂ ಪ್ರತಿವ್ಯಕ್ತಿಯೂ ಒಂದೆಲ್ಲಾ ಒಂದು ರೀತಿಯಲ್ಲಿ ಭಿನ್ನ! ಬೀಗನಿರ್ಮಿಸುವ ಗಾಡ್ರೆಜ್ ನಂತಹ ಕಂಪನಿಗಳು ಎಷ್ಟೋ ಕೊಟಿ ಬೀಗಗಳನ್ನು ಮಾಡಿರಬಹುದು-ಆದರೆ ಅವುಗಳಲ್ಲಿ ಹಲವಷ್ಟುಒಂದೇತೆರನಾಗಿರುತ್ತವೆ, ಆದರೆ ನಮ್ಮ ನಿರ್ಮಾತೃವಿನ ಚಾಕಚಕ್ಯತೆ ವಿಷಯದಲ್ಲಿ ನಕಲು ಮಾಡಲಾಗದ ಕೆಲಸವಾಗಿದೆ!

ನಾವು ಹಲವು ವ್ಯಕ್ತಿಗಳನ್ನು ನೋಡಿದಾಗ ಅವರು ಕಣ್ಣಲ್ಲೇ ನಗುತ್ತಾರೆ ಎಂದು ಹೇಳುತ್ತೇವೆ. ಇನ್ನು ಕೆಲವರದು ಕಣ್ಣಲ್ಲೇಮಾತನಾಡುವಷ್ಟು ಚಾಲಾಕೀ ಕಣ್ಣುಗಳು-ಆಕರ್ಷಕ ಕಣ್ಣುಗಳು. ಮುಖದ ಬಹುಮುಖ್ಯ ಅಂಗವಾದ ಕಣ್ಣು ಕತ್ತಲಲ್ಲಿ ದೀಪವಿದ್ದಂತೇಜೀವಂತಿಕೆಯ ಸಂಕೇತ. ಅದರಲ್ಲೂ ವಿದ್ಯುತ್ ದೀಪಕ್ಕಿಂತ ಎಣ್ಣೆಬತ್ತಿಯ ದೀಪ ಅಲ್ಲಾಡುತ್ತ ಉರಿಯುತ್ತ ತನ್ನ ಜ್ವಲಂತ ಸ್ಥಿತಿಯಲ್ಲಿವಿಭಿನ್ನವಾದ ಹೊಂಬಣ್ಣದಿಂದ ಕಂಗೊಳಿಸುತ್ತ ಇಹದ ಬದುಕಿಗೆ ಬಹಳ ಉತ್ತೇಜನ ನೀಡುವ ಉತ್ಕೃಷ್ಟ ಮಾಧ್ಯಮ, ಮನಸ್ಸನ್ನುಪೂರಕ ಪ್ರಚೋದನೆಗಳಿಂದ ತುಂಬುವ ದೀಪದಂತೇ ಮುಖದಲ್ಲಿ ಕಣ್ಣುಗಳೂ ಕೂಡ. ಕಣ್ಣಿಲ್ಲದ ದಿನಗಳನ್ನು ನೆನೆಸಿಕೊಳ್ಳಲೂಕಣ್ಣಿದ್ದವರಿಗೆ ಸಾಧ್ಯವಿಲ್ಲ! ಹೀಗಿರುವ ಕಣ್ಣುಗಳಲ್ಲೂ ಆಕಾರ,ಗಾತ್ರ,ವಿನ್ಯಾಸ ವೈವಿಧ್ಯತೆ ಇದೆ. ಮುಖದ ಪ್ರತಿ ಇಂಚಿಂಚಿನಲ್ಲೂಒಂದಷ್ಟು ಸೂಕ್ಷ್ಮತೆಯನ್ನು ಸೃಶ್ಟಿಕರ್ತ ಕಲಾಕಾರ ಮೆರೆಯುತ್ತ ಒಬ್ಬರಿಗಿಂತ ಒಬ್ಬರನ್ನು ಭಿನ್ನವಾಗಿ ತೋರಿಸುವಲ್ಲಿ ಸಂಪೂರ್ಣಯಶಸ್ವಿಯಾಗಿದ್ದಾನೆ!

ಪ್ರತೀ ಮುಖದಲ್ಲಿ ಪ್ರತಿಯೊಂದು ಅವಯವವೂ ವಿಭಿನ್ನ,ವಿಶಿಷ್ಟ. ಹೆಣ್ಣಾದರೆ ಕಣ್ಣು ಹುಬ್ಬಿನಲ್ಲೋ, ಕಣ್ಣ ವಿನ್ಯಾಸದಲ್ಲೋ,ಗಡ್ಡದವಿನ್ಯಾಸದಲ್ಲೋ,ಕೆನ್ನೆಯ ಆಯಗಲದ ವಿನ್ಯಾಸದಲ್ಲೋ,ಕೆನ್ನೆ ಗುಳಿಯ ಮಾರ್ಪಾಡಿನಲ್ಲೋ,ಕೇಶವಿನ್ಯಾಸದಲ್ಲೋ, ತಲೆಯಆಕಾರದಲ್ಲೋ,ತುಟಿಯ ಅಳತೆ-ಆಕಾರ-ಬಣ್ಣ-ವಿನ್ಯಾಸದಲ್ಲೋ, ಕಿವಿಯ ಪ್ರಸ್ತುತಿಯಲ್ಲೋ, ಕಿವಿಯ ಉದ್ದಗಲ ವಿನ್ಯಾಸದಲ್ಲೋಹೀಗೆ ಭಿನ್ನವಾಗಿಸುವ ಸೃಷ್ಟಿ, ಗಂಡಾದರೆ ಇವೆಲ್ಲವೂ ಸೇರಿದಂತೆ ಮೀಸೆ,ಗಡ್ಡ ಇವುಗಳ ಉದ್ದಗಲ,ವಿನ್ಯಾಸ,ಬಣ್ಣ,ಗಡುಸುತನಇವುಗಳನ್ನೆಲ್ಲ ಮೇಳೈಸಿ ಭಿನ್ನತೆ ಕಾಣುವ ಹಾಗೆ ಮಾಡುತ್ತದೆ.

ಒಟ್ಟಾರೆ ಮುಖದ ಚಹರೆ ನಮಗೆ ಮುಖ್ಯಗುರುತು. ದೃಶ್ಯಮಾಧ್ಯಮಗಳಲ್ಲಿ ಅದಕ್ಕೇ ಯಾರನ್ನಾದರೂ ಕಾರಣಾಂತರಗಳಿಂದತೋರಿಸಬಾರದು ಎಂದಿದ್ದರೆ ಅವರ ಮುಖಕ್ಕೆ ಮಾಸ್ಕ್ ಹಾಕಿ ತೋರಿಸುತ್ತಾರೆ ಅಲ್ಲವೇ?

ವ್ಯಕ್ತಿಯನ್ನು ನೋಡಿದಾಕ್ಷಣ ನಮ್ಮ ಮನಸ್ಸಲ್ಲಿ ಯಾವುದೋ ತರಂಗಗಳ ಉದ್ಭವವಾಗುತ್ತದೆ. ತರಂಗಗಳೇ ಸಂದೇಶಗಳಾಗಿದ್ದುಸರಿಯಾಗಿ ಅರ್ಥವಿಸುವ ತಾಕತ್ತು ಇರುವ ಜನರಿಗೆ ಎದುರಿನ ವ್ಯಕ್ತಿ ಯಾವರೀತಿಯವನು ಎಂಬುದು ಸಾಮಾನ್ಯವಾಗಿತಿಳಿದುಹೋಗಿರುತ್ತದೆ. ಒಂದು ತಮಾಷೆಯೆಂದರೆ ಭವಿಷ್ಯವನ್ನು ಹೇಳುವವರ ಮುಖಗಳನ್ನು ನೋಡಿಯೇ ಅವರ ಭವಿಷ್ಯಹೇಳಿಬಿಡಬಹುದು- ವಿಷಯದಲ್ಲಿ ನನ್ನ ವೈಯಕ್ತಿಕ ನಿರ್ಧಾರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ! ಭವಿಷ್ಯ ಹೇಳುವವರೂಕೂಡ ಬಹುತೇಕ ಮುಖ ನೋಡಿ ಅರಿಯಲು ಪ್ರಯತ್ನಿಸುವ ಕಲೆಯನ್ನು ಮೈಗೂಡಿಸಿಕೊಂಡಿರುತ್ತಾರೆ.

ಮುಖವನ್ನು ಅವಲೋಕಿಸಿದಾಗ, ಅವರು ಕಣ್ಣಿಗೆ ಕಣ್ಣುಕೊಟ್ಟು ಮಾತನಾಡುವವರೋ ಅಲ್ಲವೋ, ಅವರು ಎತ್ತನೋಡುತ್ತಮಾತನಾಡುತ್ತಾರೆ, ಅವರ ಮುಖದ ಭಾವನೆಗಳು ಹೇಗೆ ಬದಲಾಗುತ್ತವೆ, ಅವರ ಹಣೆಯಲ್ಲಿ ಯಾವರೀತಿ ಗೆರೆಗಳುಗೋಚರಿಸುತ್ತವೆ, ಅವರ ಮುಖವನ್ನು[ಬಾಯಿ,ಗಡ್ಡ ಇಅವುಗಳನ್ನು] ಯಾವ ಆಕಾರಕ್ಕೆ ಅವರು ತಿರುಗಿಸುತ್ತಿರುತ್ತಾರೆ ಎಲ್ಲಾಅಂಶಗಳು ಅವರ ಸಂಸ್ಕೃತಿ ಮತ್ತು ಭಾವನೆಗಳನ್ನು ಹೊರಹೊಮ್ಮಿಸಿದರೆ ಮುಖದ ಮೇಲಿನ ಕೂದಲು, ಅವುಗಳ ಆಕಾರ, ಮುಖದಸ್ವಚ್ಛತೆ, ಕಣ್ಣುಗಳ ಬಣ್ಣ ಕೆಲವು ಅಂಶಗಳು ಅವರ ಬಹುಮುಖದ ವ್ಯಕ್ತಿತ್ವದ ಪ್ರಾತ್ಯಕ್ಷಿಕೆ ತೋರಿಸುವ ಶೋ ರೂಮ್ ಗಳಾಗಿಕೆಲಸಮಾಡುತ್ತವೆ.

ವ್ಯಕ್ತಿಯೊಬ್ಬ ಖೂಳನೋ, ಒಳ್ಳೆಯವನೋ, ಸಾಧುವೋ, ಕಳ್ಳನೋ, ಸುಳ್ಳನೋ, ಅಪರಾಧಿಯೋ, ನಿರಪರಾಧಿಯೋ, ನಿಸ್ಪೃಹನೋ, ಸ್ವಾರ್ಥಿಯೋ, ಸಾದಾ-ಸೀದಾ ಮನುಷ್ಯನೋ, ಢೋಂಗಿಯೋ, ಕ್ರೂರನೋ, ಕರುಣಿಯೋ, ಹೃದಯವಂತನೋ, ಸಮರ್ಥನೋ, ಅಸಮರ್ಥನೋ, ಅರ್ಹತೆಯುಳ್ಳವನೋ ಅಥವಾ ಅನರ್ಹನೋ, ಉಪದ್ರವಿಯೋ, ನಿರುಪದ್ರವಿಯೋ, ಪ್ರಾಮಾಣಿಕನೋ,ಧೂರ್ತನೋ,ದೂತನೋ,ಸಾತ್ವಿಕನೋ, ಮೈಗಳ್ಳನೋ ಎಲ್ಲವನ್ನೂ ಬಹುತೇಕ ಮುಖದರ್ಶನದಿಂದಲೇಒಮ್ಮೆ ಕೆಲವು ಮಟ್ಟಿಗೆ ನಿರ್ಧರಿಸಿಬಿಡಬಹುದು.

ಮಾನವ ಸಂಪನ್ಮೂಲವನ್ನು ಅರಿತಿರುವ ನುರಿತ ವ್ಯಕ್ತಿಗಳಿಗೆ ಅಳಯುವಿಕೆ ಒಗ್ಗಿಕೊಂಡಿರುವುದರಿಂದ ಅವರು ಬಂದ ಬಹಳಅಭ್ಯರ್ಥಿ,ವ್ಯಕ್ತಿಗಳನ್ನು ಮೊದಲ ನೋಟದಲ್ಲೇ ಇಂಥಾ ವ್ಯಕ್ತಿ ಎಂದು ಗುರುತಿಸಲು ಸಮರ್ಥರಾಗಿರುತ್ತಾರೆ. ಹೀಗಾಗಿ ವ್ಯಕ್ತಿತ್ವದಲ್ಲಿಮುಖಲಕ್ಷಣವೂ ಕೂಡ ಬಹಳ ಪ್ರಾಮುಖ್ಯ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಹುಟ್ಟಿನಿಂದ ಪಡೆದ ತಲೆಬುರುಡೆ-ಮುಖದ ಆಕಾರ ಬದಲಾಯಿಸಲಾಗದ್ದಾದರೆ ವ್ಯಕ್ತಿಯ ಹುಟ್ಟು, ಪರಿಸರ,ಸಂಘ-ಸಾಹಚರ್ಯೆ,ಅನುಕರಣೆ,ಅಂಧಾನುಕರಣೆ, ಅತಿರೇಕದ ಅಭಿಮಾನ, ಹೊಸತನವನ್ನು ಅಳವಡಿಸಿಕೊಳ್ಳುವ ತಹತಹ, ತಾನೂ ಏನೂಕಮ್ಮಿ ಇಲ್ಲ ಎಂದು ಮುಖದಲ್ಲೇ ತೋರಿಸಬೇಕೆಂಬ ಅಹಂ ಇವೆಲ್ಲ ವ್ಯಕ್ತಿಯ ಮುಖವನ್ನು ಲೌಕಿಕವಾಗಿ ಮಾರ್ಪಾಡುಗೊಳಿಸುತ್ತವೆ.

ವ್ಯಕ್ತಿಯ ಮುಖ ಯಾವ ರೀತಿ ವಿಸ್ತ್ರತವಾಗಿದೆ, ಕೂದಲು[ಗಡ್ಡ-ಮೀಸೆ-ತಲೆಗೂದಲು-ಹುಬ್ಬು]ಯಾವರೀತಿ ವಿನ್ಯಾಸ ಹೊಂದಿದೆ, ಮುಖದ ಹಾಗೂ ಕಣ್ಣುಗಳ ಬಣ್ಣ ಏನು, ಕಿವಿಯಲ್ಲಿ ಏನಾದರೂ ಆಭರಣವಿದೆಯೇ[ಇದ್ದರೆ ಒಂದೇ ಕಿವಿಯಲ್ಲೋ ಅಥವಾಎರಡರಲ್ಲೋ] ಎಂಬೆಲ್ಲಾ ಅಂಶಗಳು ವ್ಯಕ್ತಿ ಸಾಮಾನ್ಯವಾಗಿ ಯಾವರೀತಿ ಎಂದು ನಿರ್ಧರಿಸಲು ಪೂರಕ ಅಂಶಗಳಾಗಿಕೆಲಸಮಾಡುತ್ತವೆ.

ಹೀಗಾಗಿ ಶಾರೂಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ರಜನೀಕಾಂತ್,ಪ್ರಭುದೇವ್,ದೋನಿ ಸ್ಟೈಲ್ ಎಂದುಕೊಳ್ಳುತ್ತಾಹೊಸ ಹೊಸ ಮಾದರಿಯ ಕೇಶವಿನ್ಯಾಸಗಳನ್ನು ತಮ್ಮ ಮುಖಕ್ಕೆ ಹೊಂದದಿದ್ದರೂ ಅಳವಡಿಸಿಕೊಂಡು, ಒಂಟಿಯಂತಹಆಭರಣಗಳನ್ನು ಒಂದೇ ಕಿವಿಗೆ ಸಿಕ್ಕಿಸಿಕೊಂಡು, ಹರಕುಗಳಿರುವ ಲೋ ಜೀನ್ಸ್ ಮತ್ತು ಟೀ ಶರ್ಟ್ ಹಾಕಿಕೊಂಡು, ಸ್ಪೋರ್ಟ್ಸ್ ಶೂಹಾಕಿಕೊಂಡು, ಸರಿಯಾದ ದಾಖಲು ಪತ್ರಗಳನ್ನು ತರದೇ ಸಂದರ್ಶನಕ್ಕೆ ಬರುವವರಿಗೆ ಏನನ್ನುತ್ತೀರಿ? ಅವರ ಮುಖವಂತೂ ಬಹಳಕಳಪೆಯದ್ದಾಗಿರುತ್ತದೆಂದು ಬೇರೆ ಹೇಳಬೇಕೆ?
ಮುಖವನ್ನು ಬೇಕಾಬಿಟ್ಟಿ ತಿರುಗಿಸುತ್ತ, ಭುಜಗಳನ್ನು ಕುಣಿಸುತ್ತ, ಕಣ್ಣುಗಳಲ್ಲಿ ಇವನೇನು ಮಹಾ ಎಂಬರೀತಿ ವಿಚಿತ್ರ ಭಾವನೆಗಳನ್ನುಹೊಮ್ಮಿಸುತ್ತ, ಒಂದು ಕಾಲಮೇಲೆ ಇನ್ನೊಂದು ಕಾಲುಹಾಕಿಕೊಂಡು ಕೈಯಿಂದ ತಲೆತುರಿಸಿಕೊಳ್ಳುತ್ತ ಸಂದರ್ಶನಕ್ಕೆ ಕೂರುವಹುಡುಗರಿದ್ದಾರೆ! ಇಂಥವರಿಗೆಲ್ಲ ದೇವರೇ ಗತಿ! ಇನ್ನು ಕೆಲವು ಮುಖಗಳಲ್ಲಿ ಭಾವನೆಗಳೇ ಇರುವುದಿಲ್ಲ, ಕಳಾಹೀನಮುಖ-ಸಪ್ಪೆ,ಸಪ್ಪೆ. ವ್ಯಕ್ತಿಯ ಜೀವಂತಿಕೆ ಅವನ ಕಳೆ ಕಳೆಯಾಗಿರುವ ಹುರುಪಿನ ಮುಖದಲ್ಲಿರತ್ತದಲ್ಲವೇ? ಆದರೆ ಇಂದಿನ ನಮ್ಮಅನೇಕ ಯುವಜನರಿಗೆ ಅದರ ಅನಿಸಿಕೆಯೇ ಇಲ್ಲ!

ಒಳ್ಳೆಯ ವ್ಯಕ್ತಿತ್ವಕ್ಕೆ ಒಳ್ಳೆಯ ಮುಖಲಕ್ಷಣ ಕೂಡ ಕಾರಣ. ಒಂದು ಕಟ್ಟಡಕ್ಕೆ ಎಲ್ಲಾ ಚೆನ್ನಾಗಿದ್ದು ವಾಸ್ತು ಅದೂ ಇದೂ ಅಂತಯಾರೋ ಅಡ್ಡಕಸುಬಿಗಳ ಸಲಹೆ ಪಡೆದು ಇಡೀ ಕಟ್ಟಡವನ್ನೇ ಹೇಗೆ ವಿರೂಪಗೊಳಿಸುತ್ತಾರೋ ಹಾಗೇ ಯರನ್ನೋ ಅನುಕರಿಸಲುಹೋಗಿ ತಮ್ಮ ಇರುವ ಮುಖಲಕ್ಷಣವನ್ನೂ ಕಳೆದುಕೊಳ್ಳುವ ಇಂದಿನ ಅನೇಕ ಹುಡುಗರು ಸಂದರ್ಶನದಲ್ಲಿ ಮುಖವೇ ಮೊದಲನಿರ್ಧಾರಕ್ಕೆ ಕಾರಣ ಎಂಬ ಅಂಶವನ್ನು ಮರೆಯುವಂತಿಲ್ಲ.

ಕವಿ ಕಾಳಿದಾಸ ಕೂಡ ಅರ್ಥವಿಸಿದ್ದು-|| ಕಮಲೇ ಕಮಲೋತ್ಪತ್ತಿಃ ||
ಅಂದರೆ ಮುಖವೆಂಬುದೇ ಒಂದು ಕಮಲವಾದರೆ ಅದರಲ್ಲಿರುವ ಕಣ್ಣುಗಳು ಎರಡು ಕಮಲಗಳು. ಹೀಗಾಗಿ ಮುಖವನ್ನು ಕಮಲಕ್ಕೆಹೋಲಿಸುತ್ತಾರೆ ಎಂದಾದಮೇಲೆ ಮುಖ ಎಷ್ಟು ಶುಭ್ರ ಮತ್ತು ಕಳಾಭರಿತವಾಗಿರಬೇಕು ಎಂಬುದನ್ನು ಊಹಿಸಿಕೊಳ್ಳಬೇಕಾಗುತ್ತದೆ.

ಯಾವುದೋ ಆಫೀಸಿಗೆ ಹೋಗಿ, ಅಲ್ಲಿ ನೀವು ನೋಡುವ ವ್ಯಕ್ತಿಯನ್ನು ಅವರ ವೇಷ-ಭೂಷಣ,ಆಕಾರ,ಮುಖ,ನಿಲುವು ಇವುಗಳಿಂದಅವನು ದಫೇದಾರನೋ, ಗುಮಾಸ್ತನೋ, ಜವಾನನೋ, ಅಧಿಕಾರಿಯೋ, ಅಭಿಯಂತನೋ ಎಂದು ನೀವೇ ಅಳೆದುಬಿಡುತ್ತೀರಿ! ಅಂದಮೇಲೆ ಮುಖವೇ ಪ್ರಧಾನ ಕಛೇರಿ-ಹೆಡ್ ಆಫೀಸ್. ಇದು ಶಿರೋಭಾಗವನ್ನೂ ಹೊಂದಿರುವುದರಿಂದ ಮುಖ ನಿಜವಾಗಿಯೂಪ್ರಧಾನ ಕಛೇರಿಯೇ.

ನಾವು ನಾವೇ, ನಾವು ಅವರಲ್ಲ, ನಮಗೆ ಬೇರೆಯೇ ಆದ ವ್ಯಕ್ತಿತ್ವ ಇದೆ, ನಮ್ಮತನವನ್ನು ನಾವು ಕಳೆದುಕೊಳ್ಳಬಾರದೆಂಬಅಂಶವನ್ನು ಮನದಟ್ಟುಮಾಡಿಕೊಂಡು ಅಂಧಾನುಕರಣೆಮಾಡದೇ ನಮ್ಮ ವ್ಯಕ್ತಿತ್ವಕ್ಕೆ ಪೂರಕವಾಗುವ ಚಹರೆಗಳನ್ನು ಹೊಂದಲುವ್ಯಕ್ತಿತ್ವ ವಿಕಸನ ತರಬೇತುದಾರರ ಸಲಹೆ ಪಡೆಯಬಹುದು. ಮುಖವನ್ನು ಆದಷ್ಟೂ ತೊಳೆಯುತ್ತ ಸ್ವಚ್ಛವಾಗಿ ಇಟ್ಟುಕೊಂಡಿದ್ದುಕಣ್ಣುಗಳಲ್ಲಿ ಮಡ್ [ಕೊಳೆ] ಕೂತಿರದ ಹಾಗೆ ನೋಡಿಕೊಂಡು, ಮುಖದ ಹಾವ-ಭಾವ, ಕಣ್ಣುಗಳ ಬಳಕೆ-ನೋಟ, ಕ್ಷಣಿಕವಾಗಿಮುಖದ ಕೇಂದ್ರೀಕರಣೆ ಇವುಗಳ ಬಗ್ಗೆ ಸಾಕಷ್ಟು ತಿಳಿದು ನಡೆಯುವುದು ಬಹಳ ಉತ್ತಮ.