ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 18, 2010

ದಾಮೋದರ ಗುರೂಜಿ


ದಾಮೋದರ ಗುರೂಜಿ

ಹಿಂದೆ ಬೇಲೂರು-ಹಳೇಬೀಡು ದೇವಸ್ಥಾನಗಳನ್ನೆಲ್ಲ ಕೆತ್ತಿ ಕಟ್ಟಿದ್ದು ಜಕಣಾಚಾರಿ ಎಂಬುದು ಹಲವರಿಗೆ ವಿದಿತವಷ್ಟೆ ? ಈ ಸಾಲಿನಲ್ಲಿಮಾನಸಿಕವಾಗಿ’ ನಿಲ್ಲುವವರು ನಮ್ಮ ದಾಮೋದರ ಗುರೂಜಿ!

“ದಾಮೇನ ಉದರಂ ಬದ್ಧಃ ಇತಿ ದಾಮೋದರಃ” ಎಂದುಕೊಳ್ಳುತ್ತ ತಮ್ಮ ಲಂಬೋದರವನ್ನು ನೀಟಾಗಿ ನೀವಿಕೊಳ್ಳುತ್ತನಗೆಯಾಡುವುದು ಬಲು ಆಕರ್ಷಕ. ಹದವಾದ ಹುರಿಮೀಸೆ, ಹಿಂದಕ್ಕೆ ಬಾಚಿ ಹರಡಿದ ತಲೆಗೂದಲು, ಗರಿಗರಿ ಜುಬ್ಬ-ಪೈಜಾಮು, ಹೆಗಲಮೇಲೊಂದು ಶಾಲು, ಕೊರಳಲ್ಲಿ ಒಂದು ನವರತ್ನ ಹಾರ, ಕೈಯ್ಯಲ್ಲೊಂದು ಬ್ಲಾಕ್ ಬೆರ್ರಿ ಮೊಬೈಲು -ಇದು ನಮ್ಮಗುರೂಜಿಯ ಭೌತಿಕ ಸ್ವರೂಪ.

ಹಿನ್ನೆಲೆ [ಯಾರಿಗೂ ಹೇಳತಕ್ಕದ್ದಲ್ಲ; ನಿಮ್ಮಲ್ಲೇ ಇರಲಿ]-ಪೂರ್ವಾಶ್ರಮ
________________________________________
ರಿಪ್ಪನ್ಪೇಟೆಯಲ್ಲಿ ಸಣ್ಣದೊಂದು ಬೀಡಿ ಅಂಗಡಿ ಇಟ್ಟು ಗಿರಾಕಿ ಇಲ್ಲದೇ ಲಾಸು ಹೊಡೆದಿದ್ದ ದಾಮು ಟರ್ನಿಂಗ್ ಪಾಯಿಂಟ್ಗಾಗಿಕಾದಿದ್ದ. ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದೇ ಹೊತ್ತಿದ್ದು;ಹೇಗೋ ಏನೋ ದೇವರು ಕೃಪೆ ತೋರೇ ಬಿಟ್ಟ. ಕ್ಲಾಸ್ ಮೇಟ್ ಆಗಿದ್ದಸುರೇಶ O2 tv channel ನಲ್ಲಿ ಹೊಸ ಕಾರ್ಯಕ್ರಮ ನೀಡಲು ತಡಕಾಡುತ್ತಿದ್ದ. ಅನಿರೀಕ್ಷಿತವಾಗಿ ದೀಪಾವಳಿಗೆ ಊರಿಗೆ ಬಂದವಶಿವಮೊಗ್ಗದ ಅದ್ಯಾವುದೋ ಬೀದಿಯಲ್ಲಿ ದಾಮು ಎದುರಿಗೆ ಪ್ರತ್ಯಕ್ಷನಾದ. ಪರಸ್ಪರ ಲೋಕಾಭಿರಾಮ ಆದಮೇಲೆಒಳಒಪ್ಪಂದವಾಯ್ತು. ದಾಮು ‘ದಾಮೋದರ ಗುರೂಜಿ’ಎಂಬ ನಾಮಾಭಿದೇಯವನ್ನು ಪಡೆದು ಬೆಂಗಳೂರಿನಚೋಳೂರ್ಪಾಳ್ಯದಲ್ಲಿ ಸಣ್ಣರೂಮ್ನಲ್ಲಿ ಸೆಟ್ಲ್ ಆದರು!
“ ಬನ್ನಿ ವೀಕ್ಷಕರೇ, ನೀವು ಈ ದಿನ ಆಧ್ಯಾತ್ಮಿಕವಾಗಿ ಹಲವು ವರ್ಷಗಳಕಾಲ ಸಾಧನೆಮಾಡಿ ಸಿದ್ಧಿಪಡೆದ, ಆಸ್ಟ್ರಾಲಜಿ ಹಾಗೂವಾಸ್ತುಶಾಸ್ತ್ರಗಳಲ್ಲಿ ಪ್ರಾವೀಣ್ಯತೆಗಳಿಸಿರುವ ಬಹಳ ಅಪರೂಪದ ವ್ಯಕ್ತಿಯನ್ನು ಭೇಟಿಮಾಡಲಿದ್ದೀರಿ. ” --O2 ಬಿತ್ತರಿಸಿತು.

“ ನಮಸ್ಕಾರ ಗುರೂಜಿ, ತಮ್ಮ ಬಗ್ಗೆ ಬಹಳ ಕೇಳಿದ್ದೇನೆ, ನಾನು ಸರೋಜಮ್ಮಾ ಅಂತ ಹಾಸನದಿಂದ ”

“ ನಮಸ್ಕಾರ,ಹೇಳಿ ಯಾವ ವಿಷಯದ ಸಲುವಾಗಿ ಕಾಲ್ ಮಾಡಿದ್ದೀರಿ ?”
“ ನನ್ನ ಮಗನ ಬಗ್ಗೆ ಗುರೂಜಿ, ಆತನಿಗೆ ಎಕ್ಸಿಡೆಂಟ್ ಆಗಿತ್ತು,ಆಸ್ಪತ್ರೆಯ
ಲ್ಲಿ ...............................”
“ಏನೂ ಹೆದರುವ ಅವಶ್ಯಕತೆ ಇಲ್ಲಮ್ಮಾ, ಆತ ಬೇಗ ಗುಣಮುಖನಾಗುತ್ತಾನೆ.”
“ ಗುರೂಜಿ, ಅವನು ತೀರಿಕೊಂಡು 22 ದಿನಗಳಾದವು,ಅವನ ಆತ್ಮಕ್ಕೆ ಸದ್ಗತಿ ಸಿಗುತ್ತಾ ಅಂತ? ”
“ ವೀಕ್ಷಕರೆ ಕ್ಷಮಿಸಿ, ಈ ಕರೆ ಕಟ್ಟಾಗಿದೆ,ನಮ್ಮ ಮುಂದಿನ ಕಾಲರ್ ಯಾರು ಅಂತ ನೋಡೋಣ”-[ಸಂದರ್ಶಕ]
“ನಮಸ್ಕಾರ,ನಾನು ಸುಬ್ಬರಾವ್ ಅಂತ, ಇತ್ತೀಚೆಗೆ recession ಬಂದಾಗಿನಿಂದ ನಮ್ಮ factory ಲಾಸ್ನಲ್ಲಿ ನಡೀತಾ ಇದೆ ”
“ ನಿಮ್ಮ factory building ಯಾವ ದಿಕ್ಕಿಗೆ ಮುಖವಾಗಿದೆ?”
“ ಪೂರ್ವಕ್ಕೆ, ಎದುರಿಗೆ ರಸ್ತೆ ಇದೆ ”

“ ನೀವು ನಿಮ್ಮ factory ಗಿಲನ್ನು ಪಶ್ಚಿಮಕ್ಕೆ ಮಾಡಿ, ಈಶಾನ್ಯ ದಿಕ್ಕಿನಲ್ಲಿ ಒಂದು ವಾಟರ್ ಟ್ಯಾಂಕ್ ಕಟ್ಟಿಸಿ ಎಲ್ಲಾಸರಿಹೋಗುತ್ತೆ,ನಮಸ್ಕಾರ”
ಸಂದರ್ಶಕ-“ ಗುರೂಜಿ ತಮ್ಮ ಬಗ್ಗೆ ತಾವು ಹೇಳುತ್ತಾ ಇದ್ದೀರಿ, ಹೋದಜನ್ಮದಲ್ಲಿ ತಾವು ಜಕಣಾಚಾರಿಯಾಗಿದ್ದೂ, ಕೈಗಳನ್ನುಕಳೆದುಕೊಂಡಿದ್ದೂ ಎಲ್ಲ ಬಹಳ ಆಶ್ಚರ್ಯವಾಗ್ತಾಇದೆ. ಬಹುಶಃ ತಾವು ಜಕಣಾಚಾರಿ ಅಗಿದ್ದುದರಿಂದಲೇ ಈಗ ವಾಸ್ತು ಬಗ್ಗೆಕರಾರುವಾಕ್ಕಾಗಿ ಹೇಳುತ್ತಿದೀರಿ ಅನಿಸುತ್ತದೆ. ”
“ ಹೌದು ಹೌದು, ಅದ್ರಿಂದ್ಲೇ ಇದೆಲ್ಲಾ ಸಾಧ್ಯಾನೇ ಹೊರ್ತು ಇಲ್ಲಾಂದ್ರೆ ಹೇಗೆ? ”
[ಗುರೂಜಿ -ಸ್ವಗತ: TV ಯಲ್ಲಿ ಯಾರ್ಯಾರೋ ಎನೇನೋ ಪ್ರಶ್ನೆ ಕೇಳುತ್ತಾರಲ್ಲಪ್ಪಾ, ಏನು ಮಾಡ್ಲಿ? ಮೆಜೆಸ್ಟಿಕ್ಫ಼ೂಟ್ಪಾತ್ನಲ್ಲಿ ೫೦% ಡಿಸ್ಕೌಂಟ್ನಲ್ಲಿ 5 ಪುಸ್ತಕ ತಂದೆ-ಜ್ಯೋತಿಷ್ಯದ ಮೇಲೆ 3 , ವಾಸ್ತು ಶಾಸ್ತ್ರದಮೇಲೆ 2. ಓದಕ್ಕೂ ಬಿಡಲ್ಲಈ ಜನ. ಅಕಸ್ಮಾತ್ ನಾನು ಹೇಳಿದ್ದು ತಪ್ಪಾಗಿ ನಾಳೆದಿನ ಕಲ್ಲುಹೊಡೆದರೆ ಏನಪ್ಪ ದೇವ್ರೆ ಗತಿ? ಕೆಲವರಿಗೆ ತಪ್ಪಿಸಿಕೊಳ್ಳುವಸಲುವಾಗಿ 6 ತಿಂಗಳು ಅಪಾಯಿಂಟ್ಮೆಂಟ್ ಕೊಡ್ಲೇ ಇಲ್ಲ,ಹಲವರಿಗೆ 1 ವರ್ಷ. ‘ಗುರೂಜಿ ತುಂಬಾ ಬೀಜಿ’ ಅಂದುಕೊಂಡಿರುತ್ತಾರೆ. ಇಲ್ಲಿ ನೋಡಿದ್ರೆ ಕೆಲವೊಮ್ಮೆ ಖರ್ಚಿಗೇ ಸಾಲದು.]
ಅಷ್ಟರಲ್ಲಿ ರಾಜಕಾರಣಿಯೊಬ್ಬರಿಗೆ ಭವಿಷ್ಯಹೇಳಿದ್ದು ಸುಳ್ಳಾಗಿದ್ದು ಅವರು ಚುನಾವಣೆಯಲ್ಲಿ ಸೋತಿದ್ದಾರಾಗಿಯೂ, ಅವರ ಕಡೆಶಿಳ್ಳೇರಾಮ’ಎಂಬ ರೌಡಿಯು ಗುರೂಜಿಗೆ ‘ಗೂಸಾ’ತಿನ್ನಿಸಲು ಬಂದಿದ್ದಾಗಿಯೂ sms ಬಂತು. ಕೂತಲ್ಲೇ ಗುರೂಜಿಗೆ ಬಟ್ಟೆ ಎಲ್ಲಾಒದ್ದೆಯಾಗಿಹೋಯ್ತು. ಹಾಗೂ ಹೀಗೂ 30 ನಿಮಿಷ ಕಳೆದು ಗುರೂಜಿ ತಮ್ಮ ಸ್ವಕ್ಷೆತ್ರ ರಿಪ್ಪನ್ ಪೇಟೆಗೆ ಸೀದಾ ಓಡಿಹೋಗಿತಲೆಮರೆಸಿಕೊಂಡರು. ಅಪಾಯಿಂಟ್ಮೆಂಟ್ಮೇಲೆ ಅವರನ್ನು ಭೇಟಿಮಾಡಲು ಬಂದವರು “ ಗುರೂಜಿಗೆ ಆರೋಗ್ಯ ಸರಿಯಿ,15 ದಿವಸದ ಮೇಲೆ ಬನ್ನಿ “ ಎಂಬ ಉತ್ತರ ತೆಗೆದುಕೊಂಡು ವಾಪಾಸ್ಸಾದರು.


ಗುರೂಜಿ ವಾರತಡೆದು ಗೆಳೆಯ ಸುರೆಶ್ಗೆ ಫೋನ್ ಮಾಡಿದರು-“ಸುರೆಶ, ಏನೋ ತುಂಬಾ ಅಧೈರ್ಯವಾಗ್ಬುಟ್ಟಿದೆ ಕಣಪ್ಪಾ, ಬೆಂಗ್ಳೂರಿಗೆ ಬರಕ್ಕೇ ಬೇಜಾರು”

“ ಯಾಕೆ ಏನಾಯ್ತು ದಾಮು? ಮತ್ತೆ ಬ್ಯುಸಿನೆಸ್ ಡೌನಾ?”
“ಇಲ್ಲ ಕಣೋ, ಆ EX-MLA ಕಡೆ ಶಿಳ್ಳೇರಾಮ ಬಹಳ ತೊಂದ್ರೆ ಕೊಡ್ತಾ ಇದಾನೆ. ಬಹುಶಃ ಆತ ಹಿಂದೆ ಮಹಾಭಾರತದಲ್ಲಿಘಟೋದ್ಗಜ ಆಗಿದ್ದಿರಬೇಕು”

“ನಿನ್ನಂಥಾ ಗೆಳೆಯರನ್ನ ಹಾಗೇ ಬಿಡೋಕಾಗುತ್ತಾ? ನೋದ್ತೀನಿ ಬಿಡು, ಬೇರೆ ಏನಾದ್ರೂ ದಾರಿ ಮಾಡೋಣ”

ಸುರೆಶನ ಮುಖಾಂತರ, ಮರುಚುನಾವಣೆಗೆ ನಿಂತಿದ್ದ EX-MLA ಮುನಿವೆಂಕಟಪ್ಪನ ಸಂಬಂಧ ಕುದುರಿತು.ಯಾವ ಅದೃಷ್ಟವೋ, ಕಾಕತಾಳೀಯವೋ ಮುನಿವೆಂಕಟಪ್ಪಗೆ ಹೇಳಿದ ಭವಿಷ್ಯ ನಿಜವಾಗಿ ಆತ್ ಗೆದ್ದು ಮಂತ್ರಿಯಾದರು. ಎಲ್ಲಾ ರಾಜಕಾರಣಿಗಳಿಗೆ ಇದುಸುದ್ದಿಯಾಯ್ತು. ಮತ್ತೆ ಗುರೂಜಿ ಆಫೀಸ್ ನಲ್ಲಿ ನೂಕುನುಗ್ಗಲು !
ಅಲ್ಲಿಂದಾಚೆ ದಾಮೋದರ ಗುರೂಜಿ ದುಡ್ಡನ್ನು ಗೋಣಿಚೀಲದಲ್ಲೇ ತುಂಬಬೇಕಾಯ್ತು. new aiport ರಸ್ತೆಯಲ್ಲಿ ಆಫ಼ೀಸು, ಓಡಾಡಲು BMW ಕಾರು, ಕೆಲಸಕ್ಕೆ ಇರುವ ಎಲ್ಲಾ ಹಾಂಡ್ಸ್ ಗೆ ಸೇರಿ ಹತ್ತಾರು ಕಾರುಗಳು. ಗುರೂಜಿ ಆಶ್ರಮ ಕಟ್ಟಿದ್ದಾರೆ- 32 ಎಕರೆಗಳಷ್ಟು ವಿಶಾಲವಾದ ಜಾಗದಲ್ಲಿ-ಬಿಡದಿಯ ಹತ್ತಿರದಲ್ಲಿ.ಸದ್ಯದಲ್ಲೇ ಮುನಿವೆಂಕಟಪ್ಪರ ಕೃಪೆಯಿಂದ BMTC ಬಸ್ಸುಆಶ್ರಮಕ್ಕೆ ಹೋಗಿಬರುತ್ತದೆ. ಆಶ್ರಮದ ಆನೆಯನ್ನು ಅದು ಸೊಂಡಿಲಲ್ಲಾಡಿಸುತ್ತ ನಾಣ್ಯ ಸ್ವೀಕರಿಸಿಯೇ ಆಶೀರ್ವದಿಸುವುದುನೋಡಲು ಮನೋಹರ. ಅಶ್ರಮದಲ್ಲಿ ವಿದೇಶೀ ಭಕ್ತರು ಬಂದರೆ ಇರಲಿ ಎಂದು ಸ್ವಿಮ್ಮಿಂಗ್ ಪೂಲ್ ಮತ್ತು ಎಲ್ಲಾ 5 ಸ್ಟಾರ್ವ್ಯವಸ್ಥೆಯುಳ್ಳ ರೂಮ್ ಗಳನ್ನು ಕಟ್ಟಿಸಿದ್ದಾರೆ. ಗುರೂಜಿಗೆ ಯಾರೋ ಭಕ್ತರು ಇತ್ತೀಚೆಗೆ ಬಂಗಾರದ ಪೀಠವನ್ನು ಕೊಡುಗೆ ಯಾಗಿಕೊಟ್ಟಿದ್ದಾರೆ. ಇಷ್ಟೆಲ್ಲಾ ಇದ್ದೂ ನಮ್ಮ ದಾಮೋದರ ಗುರೂಜಿ ವೆರೀ ಸಿಂಪಲ್ಲು.

ಇತ್ತೀಚೆಗೆ ಗುರೂಜಿ ಪುನರ್ಜನ್ಮದ ಕುರಿತು ತಿಳಿಸಿಕೊಡಲು ತಯಾರಿ ನಡೆಸುತ್ತಿದ್ದಾರೆ. ನಿಮ್ಮ ಅನುಕೂಲಕ್ಕಾಗಿ ಮತ್ತು ನೀವು ಅಗತ್ಯಸಂಪರ್ಕಿಸಬೇಕಾದಾಗ ಇರಲಿ ಎಂದು ಇಲ್ಲಿ ಕೊಡುತ್ತಿದ್ದೇನೆ- ಗುರೂಜಿ ಯವರನ್ನು ಸಂಪರ್ಕಿಸಬಹುದಾದ ಮೊಬೈಲ್ : 98450__
_89 ‌‌ ‌‌‌‌ ‌‍‌‌ ‌‌