ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 29, 2010

ಬೆಳೆಯದ ಪೈರು !!



ಬೆಳೆಯದ ಪೈರು
!!

[ ಹಳೆಯಬೇರು-ಹೊಸಚಿಗುರು ತತ್ವದ ಆಧಾರದಲ್ಲಿ, ಇಂಡಿಪಾಪ್ ವಿಧದಲ್ಲಿ ಗಿಟಾರ್ ಹಿಡಿದು ಹಾಡಿಕೊಳ್ಳಲು ಬರುವ ಹಾಡು, ಯಾವುದೇ ಗುರಿಯಿಲ್ಲದೇ ಎಲ್ಲವನ್ನೂ ಪ್ರಯತ್ನಿಸಿ ಮಾಡಲು ಹೊರಟು ವಿಫಲನಾದಾಗ ಏನಾಗುತ್ತದೆ ಎಂದು ತಿಳಿಸುತ್ತದೆ, ಸ್ವಲ್ಪಮಜಾ-ಸ್ವಲ್ಪ ಸಂದೇಶ, ೫೦-೫೦: ಕುಚ್ ಖಟ್ಟಾ- ಕುಚ್ ಮೀಠಾ, ಓದಿ ಎಂಜಾಯ್ ಮಾಡಿ !]


ಹತ್ತಾರು ಪೇಜು ಗೀಚಿ ಗೀಚಿ
ಹರಿದು ಬಿಟ್ಟೆನಾ
ಕುವೆಂಪುವಾಗೆ ಕವಿ ಬೇಂದ್ರೆಯಾಗೆ !
ಮತ್ತಾರು ಸೂತ್ರ ಹೆಣೆದು ಹೆಣೆದು
ಕೂತು ಬಿಟ್ಟೆನಾ
ವಿಜ್ಞಾನಿಯಾಗೆ ನಾಸಾಕ್ಕೆ ಹೋಗೆ !||ಪ||

ಬರಿ ಪಾತ್ರೆ ಏನದಿಲ್ಲ
ಬತ್ತಳಿಕೆ ಖಾಲಿ ಇದ್ಯಲ್ಲ
ಮತ್ತೇನುಮಾಡೆ ತೋಚದಾಗಿ
ಮಂಚಹಿಡಿದು ಮಲಗಿ ಬಿಟ್ಟೆನಾ ಟರಂಟ...ರಂಟ.. ಟರಂಟ ...ರಂಟ || ಅನು ಪ||

ಅತ್ತಿತ್ತ ನೋಡಿ ಕುಣಿದು ಕುಣಿದು
ಕುಸಿದು ಬಿಟ್ಟೆನಾ
ಜಾಕ್ಸನ್ನನಾಗೆ ಪ್ರಭುದೇವನಾಗೆ!
ಸುತ್ತುತ್ತ ಕೊಳಲ ಊದಿ ಊದಿ
ಕಾದು ಬಿಟ್ಟೆನಾ
ಗೋಡ್ಕಿಂಡಿ ಯಾಗೆ ಹರಿಪ್ರಸಾದರಾಗೆ !

ನಡುರಾತ್ರಿ ತಾಲೀಮಿನಲಿ
ನಡುಗಿತ್ತು ಭೂಮಿಯೆಲ್ಲ !
ಪಡಪೋಶಿ ನೀನು ಎಂದಘಳಿಗೆ
ಬೇಸರಾಗಿ ಕಂಡದಾರಿ ಹಿಡಿದುಬಿಟ್ಟೆನಾ ಟರಂಟ...ರಂಟ..
ಟರಂಟ...ರಂಟ ||೧||

ಕತ್ತೆತ್ತಿ ಬಿಡದೆ ಆಡಿ ಆಡಿ
ದಣಿದು ಬಿಟ್ಟೆನಾ
ರೆಹಮಾನನಾಗೆ ಮನೋಮೂರ್ತಿಯಾಗೆ !
ಒತ್ತಟ್ಟಿಗಿಷ್ಟು ಪ್ಯಾಂಟು ಶರ್ಟು
ತಂದು ಇಟ್ಟೆನಾ
ಅಮಿತಾಭನಾಗೆ ಅಮೀರ್ಖಾನನಾಗೆ !

ಸಂಗೀತ ನಟನೆಗಳಲಿ
ಒಟ್ಟಾಯ್ಸಿ ತಿಳಿಯಲಿಲ್ಲ
ಮಂಗಣ್ಣ ನೀನು ಮನೆಗೆ ಹೋಗು
ಎಂದವೇಳೆ ಚಪ್ಲಿಬಿಟ್ಟು ಓಡಿಹೋದೆನಾ ಟರಂಟ..ರಂಟ ಟರಂಟ.. ರಂಟ ||೨||

ಹೊತ್ತಗೆಯ ತೆರೆದು ಓದಿ ಓದಿ
ಕೂಚು ಬಟ್ಟನಾ
ವೈದ್ಯನಾಗೆ ತಂತ್ರಜ್ಞಾನಿಯಾಗೆ !
ಇಪ್ಪತ್ತು ಸರ್ತಿ ನಿಂತು ನಿಂತು
ಬಿದ್ದುಬಿಟ್ಟೆನಾ
ಮಂತ್ರಿಯಾಗೆ ಪ್ರಧಾನಿಯಾಗೆ !

ಓದಿದ್ದು ಹತ್ತಲಿಲ್ಲ
ಇಪ್ಪತ್ತು ಕೋಟಿಯಿಲ್ಲ
ನೀ ವೇಸ್ಟು ಎನಲು ಸೋತಮುಖವ
ಸಣ್ಣಗಾಗಿ ಹೊತ್ತುಬಿಟ್ಟೆನಾ ಟರಂಟ... ರಂಟ ಟರಂಟ... ರಂಟ || ೩ ||

ಉತ್ತುತ್ತ ಹೊಲವ ಬಿತ್ತು ಬಿತ್ತು
ಬೆಳೆಯದಾದೆ ನಾ
ರೈತನಾಗೆ ಅನ್ನಬೇಗೆ ನೀಗೆ !
ಹತ್ತೇರಿ ಮೇಲೆ ಹೋಗಿ ಹೋಗಿ
ತಪವಗೈಯ್ಯದಾದೆ ನಾ
ಸ್ವಾಮಿರಾಮನಾಗೆ ವಿಶ್ವಾಮಿತ್ರನಾಗೆ !

ಹುತ್ತದೊಳಗೆ ಇರುವ ಹಾವು
ಮತ್ತೇರಿ ಮರೆತು ಮೆರೆದು
ನೆತ್ತಿ ಹಿಡಿದು ಕತ್ತಲಾಗೆ
ಅತ್ತುಕರೆದು ಸತ್ತುಹೋದೆನಾ ಟರಂಟ.. ರಂಟ ಟರಂಟ... ರಂಟ || ೪ ||