ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, January 8, 2011

”ವೇದಸುಧೆ’ಯ ವಾರ್ಷಿಕೋತ್ಸವ

’ವೇದಸುಧೆ’ಯ ವಾರ್ಷಿಕೋತ್ಸವ

ಸಹೃದಯರೇ,

ನಮ್ಮ ನಿಮ್ಮೆಲ್ಲರ ಪ್ರೀತಿಯ ವೇದಿಕೆ ’ವೇದಸುಧೆ’ ---ಜಾತಿ,ಮತ,ಪಂಥ,ಜನಾಂಗವನ್ನೆಲ್ಲಾ ಮೀರಿನಿಂತ ಜ್ಞಾನದಾಹೀ ಬಳಗ. ವೇದಸುಧೆ ಎಂದರೆ ಕೇವಲ ಮಡಿಯುಟ್ಟವರ ತಾಣ ಎಂಬ ಪರಿಕಲ್ಪನೆ ಹೊರಗೋಡಿಸಿ ತಮ್ಮೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಬಯಸುತ್ತೇವೆ. ವೇದ ಎಂದರೆ ಜ್ಞಾನವೇ ಹೊರತು ಮತ್ತೇನೋ ಅರಗಿಸಲಾರದ ಕಬ್ಬಿಣದ ಕಡಲೇಕಾಳಲ್ಲ. ಹಿರಿಯರಾದ ಶತಾಯುಷಿ ಪಂಡಿತ್ ಸುಧಾಕರ ಚತುರ್ವೇದಿಯವರು ಬಯಸಿ, ವೇದಮೂರ್ತಿ ಸುಧಾಕರ ಶರ್ಮಾರವರು ಅನುಮೋದಿಸಿ, ಅಭಿಯಂತರರೂ ಮಿತ್ರರೂ ಆದ ಹರಿಹರಪುರ ಶ್ರೀಧರ್ ರವರು ತಮ್ಮ ನಿತ್ಯಬೆಳಕುನೀಡುವ ವೃತ್ತಿಯೊಂದಿಗೆ ಸೇವೆಗಾಗಿ ಈ ಒಂದು ಬಳಗವನ್ನು ರೂಪಿಸಿದರು. ದೈವೀಪ್ರೇರಣೆಯೋ ನಿಸರ್ಗದ ಇಚ್ಛೆಯೋ ಎಲ್ಲೆಲ್ಲೋ ಇದ್ದ ನಾವುಗಳನೇಕರು ’ವೇದಸುಧೆ ಬಳಗ’ವಾಗಿ ಬೆಳೆಯುತ್ತಿದ್ದೇವೆ. ಯಾವುದೇ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಕೇವಲ ಎಲ್ಲರ ಒಳಿತಿಗಾಗಿ ಒಂದಷ್ಟು ಜ್ಞಾನವನ್ನು ಹಂಚುವ ಸಲುವಾಗಿ ’ವೇದಸುಧೆ’ ಒಂದುವರ್ಷದಿಂದ ಶ್ರಮಿಸುತ್ತಿದೆ.

ಹಿಂದೂ ತಮ್ಮನ್ನೆಲ್ಲಾ ಆಗಾಗ "ವೇದಸುಧೆಗೆ ಬನ್ನಿ" ಎಂದು ಕರೆದಿದ್ದೇನೆ. ಈಗ ವೇದಸುಧೆ ವರ್ಷದ ಕೂಸು. ನಿಧಾನಕ್ಕೆ ಅಂಬೆಗಾಲಿಕ್ಕುತ್ತಿದೆ. ಈ ಕೂಸಿನ ಬೆಳವಣಿಗೆಯ ಜೊತೆಜೊತೆಗೆ ನಮ್ಮೆಲ್ಲರ ಮಾನಸಿಕ ವಿಕಸನ ಸಾಧ್ಯ ಎಂಬುದು ಹಲವು ಓದುಗರ ಅಭಿಪ್ರಾಯ. ಇಲ್ಲಿ ವೇದ ಮಂತ್ರಗಳನ್ನಷ್ಟೇ ಅಲ್ಲದೇ ಹಲವು ಜ್ಞಾನಪೂರಿತ ಕವನಗಳು, ಮುಕ್ತಕಗಳು, ಸ್ವಾರಸ್ಯಕರ ಘಟನೆಗಳು, ಧ್ವನಿಮುದ್ರಿತ ಹಾಡುಗಳು, ಪ್ರವಚನಗಳು ಇತ್ಯಾದಿ ಹಲವು ಹತ್ತು ಕೃತಿಗಳನ್ನು ತಾವು ಕಾಣಬಹುದಾಗಿದೆ. ನಮ್ಮ ನಿಮ್ಮೆಲ್ಲರ ವೇದಸುಧೆಗೆ ವರ್ಷ ತುಂಬಿದ ಹರ್ಷವನ್ನು ಹಂಚಿಕೊಳ್ಳಲು 'ವೇದಸುಧೆ ಬಳಗ' ಹಾಗೂ ಹಾಸನದ 'ಮನೆಮನೆ ಕವಿಗೋಷ್ಠಿ'ಯ ಸದಸ್ಯರಿಂದ ಇದೇ ಜನವರಿ ೩೦ ರಂದು ಭಾನುವಾರ ಹಾಸನದ ಶ್ರೀಶಂಕರಮಠದ ಸಭಾಭವನದಲ್ಲಿ ದಿನಪೂರ್ತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜ್ಞಾನದಾಯೀ ಕಾರ್ಯಕ್ರಮಗಳ ಜೊತೆಗೆ ಮನೋರಂಜಕ ಗೀತಗಾಯನಗಳು, ಗೋಷ್ಠಿಗಳು ನಡೆಯುತ್ತವೆ. ವೇದಸುಧೆ ಬಳಗದ ಸದಸ್ಯಮಿತ್ರರಾದ ಕವಿನಾಗರಾಜರ ಪುಸ್ತಕ ಹಾಗೂ ಇನ್ನಿತರ ಒಂದೆರಡು ಪುಸ್ತಕಗಳ ಬಿಡುಗಡೆಯೂ ಇದೆ.

ಹಾಸನದ ಜನರ ಉತ್ತಮ ಮನೋಭೂಮಿಕೆ ಹೇಗಿದೆಯೆಂಬುದು ಅಲ್ಲಿಗೆ ನೇರವಾಗಿ ಹೋಗಿ ನೋಡಿವದರಿಗೆ ಮಾತ್ರ ಗೊತ್ತಾಗುವ ವಿಷಯ. ಸಜ್ಜನರನೇಕರು ಸೇರಿರುವ ಹಾಸನದ ಕೇಂದ್ರ ಭೂಮಿಕೆಗೆ ಬೆಂಗಳೂರೂ ಸೇರಿದಂತೇ ರಾಜ್ಯದ/ದೇಶದ/ವಿಶ್ವದ ಎಲ್ಲಾ ಕಡೆಯ ಜನರನ್ನು ಆಹ್ವಾನಿಸುತ್ತಿದ್ದೇವೆ. ವಿವರಗಳನ್ನು ಈ ಕೆಳಗೆ ಲಗತ್ತಿಸಿದ ಆಹ್ವಾನ ಪತ್ರಿಕೆಯಲ್ಲಿ ನೋಡಿ.




http://vedasudhe.blogspot.com/

ಮತ್ತಷ್ಟು ವಿವರಗಳಿಗೆ ಭೇಟಿಕೊಡಿ :
http://vedasudhe.blogspot.com/2011/01/normal-0-false-false-false-en-us-x-none.html
ಬರಲಿಚ್ಛಿಸುವವರು ತಮ್ಮ ವಿವರಗಳನ್ನು ವೇದಸುಧೆಗೆ [ ಮಿಂಚಂಚೆಯ] vedasudhe@gmail.com ಮೂಲಕ ಕಳುಹಿಸಿದರೆ ವ್ಯವಸ್ಥೆಗೆ ಅನುಕೂಲವಾಗುತ್ತದೆ.

ತಮಗೆಲ್ಲಾ
ಆದರದ ಸ್ವಾಗತ. ಬನ್ನಿ ವೇದಸುಧೆಗೆ ಕೈಜೋಡಿಸೋಣ, ಇದು ವೇದದ ಪ್ರಚಾರಕ್ಕಾಗಿಯಲ್ಲ-ಬದಲಾಗಿ ನಮ್ಮ ಒಳಿತಿಗಾಗಿ ವೇದವನ್ನು ತಿಳಿಯುವ ಸಲುವಾಗಿ. ತಮ್ಮೆಲ್ಲರ ಉಪಸ್ಥಿತಿಯನ್ನು ಅಪೇಕ್ಷಿಸಿ ಈ ಆಮಂತ್ರಣ, ನಮಸ್ಕಾರ.