ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 1, 2011

ಉರಿಮೂತ್ರದ ಮಹಿಮೆ!



ಉರಿಮೂತ್ರದ ಮಹಿಮೆ!

ಕ್ಷಮಿಸಿ ಉರಿಮೂತ್ರವಾದಾಗ ಬರೆಯ ಹೊರಟೆ
ಬಂದಿದ್ದು ಒಂದೊಂದೇ ಹನಿ ! ಅದೂ ಉರಿಯುತ್ತಾ ಉರಿಸುತ್ತಾ
ಏನೂ ಮಾಡಗೊಡದ ಸ್ಥಿತಿಗೆ ತಳ್ಳುವಂತೇ

ಆಗೊಮ್ಮೆ ನೋವಲ್ಲೂ ದೇಶದ ನಕಾಶೆಯ ನೆನಪಾಗಿ
ನಡುವೆ ಕಾವೇರಿಯ ಹರವು ಹರಿವೂ ನೆರವಾಗಿ
ಕಂಡೆ ತಮಿಳುರಾಜ್ಯವ ಬಿರುಬೇಸಿಗೆಯಲ್ಲಿ ಬತ್ತಿಹೋಗಿ
ನನ್ನಂತೇ ಅಲ್ಲಿ ಉಂಟುಮಾಡಿರಬಹುದೇ ಹಲವರಿಗೆ ಉರಿಮೂತ್ರವ ?

ಕತ್ತುಮೇಲೆತ್ತಿದರೆ ರಾಜಸ್ಥಾನದಿ ಕಣ್ಣು
ಎಡಕ್ಕೆ ಚಲಿಸಿದರೆ ಆಂಧ್ರದಲ್ಲೂ ಅದೇ ಹುಣ್ಣು!
ಗುಜರಾತಿನಲ್ಲೂ ಬಹುತೇಕ ನನ್ನ ಪಂಗಡವೇ !
ನೀರಿಲ್ಲದೂರಿನಲಿ ದೂರುವುದು ಯಾರಲ್ಲಿ ?
ಮತ್ತೆ ಭಗೀರಥ ಹುಟ್ಟಿಬರನೇ ?

ಗಾದೆ ಬದಲಾಗಿದೆ!
ಸಮುದ್ರದ ನಂಟು ಸಿಹಿನೀರಿಗೆ ಬಡತನ !
ನಗಬೇಕಾಗಿದೆ ಮಾನವನ ತಾಕತ್ತಿಗೆ
ಕೋಟಿ ಕೋಟಿ ಮುಂಗಡಪತ್ರ ಘೋಷಿಸಿದರೂ
ನೀರನ್ನು ಕೊಂಡು ತರಲಾಗದ ವಿಪತ್ತಿಗೆ !

ಮುಂಗಾರು ಬಂದಿದೆ ಎಂದು ಕೇಳಿದೆ
ಅದಾಗಲೇ ನೋವಿರುವ ಮೂತ್ರನಾಳದಲ್ಲೋ
ಕೋಶದಲ್ಲೋ ತಂಪಿನ ಅನುಭವ !
ಸುರಿಯಲಿ ಮುಂಗಾರು ಭೋರ್ಗರೆದು ಹದದಲಿ
ಹರಿಯಲಿ ನದಿ-ಕೊಳ್ಳ ಸರೋವರಗಳು ತುಂಬಿತುಳುಕಲಿ
ತಣಿಯಲಿ ದಾಹಗೊಂಡ ನೆಲ
ತಣಿಸಲಿ ಜನಗಳ ಮನ-ಹೊಲ
ನೀಗಲಿ ಉರಿಮೂತ್ರದಿ ಹನಿಯುವ ಉರಿಯುರಿ ಜಲ