ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 26, 2010

ಈ ಭೂಮಿ ಬಣ್ಣದ ಬುಗುರಿ......

ನಮ್ಮ ಡ್ಡೆ : ಟೀ ಹೋಟ್ಲು [ತಿರುಪತಿ ರೆಸ್ಟಾರೆಂಟ್ !]

ಈ ಭೂಮಿ ಬಣ್ಣದ ಬುಗುರಿ......


" ಏನ್ ಸರ್ ಏನ್ ಕೊಡ್ಲಿ ? "

" ಏನೈತೆ ತಿನ್ನಾಕೆ ? "

" ಇಡ್ಲಿ, ಸಾಂಬಾರ್ ಬಿಸಿಇದೆ[ಸ್ವಗತ:ಇಡ್ಲಿ ನಿನ್ನೇದು ಸಾಂಬಾರ್ ಮಾತ್ರ ಬಿಸಿ ಐತೆ], ಪರೋಟ, ಪೂರಿ, ಚಪಾತಿ, ಕೇಸ್ರಿಬಾತು, ಖಾರಾಬಾತು, ರೈಸ್ ಬಾತು ದೋಸೆ-ಪ್ಲೇನ್ ಸೆಟ್ ಮಸಾಲೇ "

"ಒಂದು ರೈಸ್ ಬಾತ್ ಕೊಡಪ್ಪಾ "

" ಆಯ್ತು ಸರ್ ಕೊಟ್ಟೆ "

" ಏನಪ್ಪಾ ಇದು ಈ ಥರ ಸ್ಮೆಲ್ಲು ಹಳ್ಸೋಗಿರೋ ಅನ್ನಕ್ಕೆ ಒಗ್ಗರಣೆ ಹಾಕ್ಬುಟ್ರಾ ? "

" ಇರಿ ಸರ್ ನಮ್ ಅಣ್ಣವ್ನೆ ಕೇಳ್ಕಂಬತ್ತೀನಿ "

--------------

" ಲೇ ಒಂದ್ ಕಾಪಿ ಕೊಡಪ್ಪಾ "

" ಅಣಾ ಒಂದ್ ಕಾಪಿ "

" ತಗಂಡೋಗ್ಲಾ ಸಿವಾ ರೆಡಿ ಅದೆ ಕೊಟ್ಬುಟ್ ಅಂಗೇ ಬಿಲ್ಲಿಸ್ಕ "

" ಸಾರ್ ಕಾಪಿ ತಗೊಳಿ "

" ಏನಯ್ಯಾ ಇದು ಕಾಪಿನೋ ಟೀನೋ ಒಂದ್ಸಲ ಕುಡ್ದ್ರೆ ಕಾಪಿ ಸ್ಮೆಲ್ಲು ಇನ್ನೊಂದ್ಸಲ ಕುಡ್ದ್ರೆ ಟೀ ಸ್ಮೆಲ್ಲು "

"ಅದೇ ನಮ್ಮೋಟ್ಲು ಸ್ಪೆಸಲ್ಲು "

------------

" ಅಣಾ ನಿಮ್ ಕೋಳಿ ಯಾಕೆ ಕೂಗ್ಲೇ ಇಲ್ಲ "

" ಇದ್ರಲ್ವೇನೋ ಕೊಗಕೆ "

" ಎಲ್ ’ಪಾದ’ಯಾತ್ರೆಗೆ ಹೋಗೈತಾ "

" ಹಾಂಗಂದ್ರೇನ್ಲಾ ಸಿವಾ ? ಮನಸ್ರು ಮಾತ್ರ ಪಾದಯಾತ್ರೆ ಮಾಡ್ತರೆ ಅಂತ ಕೇಳೀನಿ "

" ಅಣಾ ನೀ ಕೋಳಿ ಮುಗ್ಸುತ್ಲೂ ಅದ್ರ ಕಾಲೈತಲ್ಲಾ ಅದುನ್ನಾ ಚೀನಾಕ್ಕಳಸ್ತವ್ರೆ, ಸಾನೆ ಡಿಮ್ಯಾಂಡೈತೆ "

" ಮೊದ್ಲೇ ಹೇಳೋದಲವೇನ್ಲಾ ಮೂದೇವೀ "

"ಯಾಕೆ ಏನಾಯ್ತಣಾ ? "

" ಕಸದ್ ಬುಟ್ಟೀನಾಗಿಟ್ಟಿದ್ನಾ ಈಗ್ತಾನೇ ಕಾರ್ಪುರೇಸ್ನವ ಬಂದು ತನ್ ಗಾಡೀಲಾಕಂಬುಟ್ ಹೋದ, ಥೂ ಹೊಟ್ಟೆ ಉರ್ದೋಯ್ತು "

" ಯಾಕಣೋ ಪಾಪ ಕಸಕ್ಬಿಸಾಕಿದ್ನೆಲ್ಲಾ ತಿನ್ನಾಕ್ ಕೊಡೊದಾ ? "

" ಇನ್ನೇನ್ಲಾ ಜಗತ್ತು ? ನಾವ್ ಮದ್ಲ್ ಬದೀಕ್ಕಾ ಬೇಕು, ಬದೀಕ್ಕಬೇಕೂಂದ್ರೆ ಕಾಸ್ ಮಾಡ್ಕಬೇಕು, ಕಾಸ್ ಮಡ್ಕಬೇಕೂಂದ್ರೆ ಇಂತಿಂಥಾ ವೈನಾದ್ ಕೆಲ್ಸಾನೆಲ್ಲ ಮಾಡ್ತಾ ಇರ್ಬೇಕಾಯ್ತದೆ "

------------

" ಅಣಾ ಕಾರ್ಪೋರೇಸ್ನವ ಬಂದಿದ್ದ, ಅಲ್ಲೈತಲ್ಲ ಆ ಪ್ಲಾಸ್ಟಿಕ್ ಡ್ರಮ್ನಾಗೆ ಏನೈತೆ ಅಂದ "

" ಹೌದೇನ್ಲಾ ನೀ ಏನಂದೆ ? "

" ಏನಿಲ್ಲಾ ಸೋಮಿ ಅದೆಲ್ಲಾ ನಮ್ ಹೋಟಲ್ನಾಗೆ ತಿಪ್ಪೆಗ್ ಬಿಸಾಕೋದ್ನ ಹಾಕಿದ್ದು, ಕಳ್ಸಾಕಾಗಿರ್ಲಿಲ್ಲ ಅದ್ಕೇ ಹಂಗೈತೆ ಅಂದೆ "

" ಅಲ್ಲಯ್ಯಾ ನಿಂಗಿದೆಲ್ಲಾ ಬ್ಯಾಡ ನಿನ್ ಅಣ್ಣವ್ನಲ್ಲಾ ಅವನ್ತಾವ ನಾವ್ ಬಂದಿದ್ ಯೋಳ್ಬುಡು, ಬಂದ್ ನಮ್ನ ನೋಡ್ಕಂಡ್ರೆ ಸರಿ ಇಲ್ಲಾಂದ್ರೆ ಗುಲ್ಲೆಬ್ಬ್ಸಿ ಗಲಾಟ್ಯಾಗೋತದೆ ಅಂತ ಗದರ್ಬುಟ್ಟು ಹೊಂಟೋದ, ಅಣ ಯಾಕಣ ? "

" ಅದ್ರಿಂದ ಬಟ್ಟಿ ಇಳಸ್ತಾರಲೇ ಬುದ್ದು, ಚೆನ್ನಾಗ್ ಹುಳಿ ಬಂದಿರ್ತದೆ ನೋಡು, ಅದ್ನೆಲ್ಲಾ ಸಲ್ಪ ಮಿಕ್ಸ್ ಮಾಡ್ಕೆಂಡು ಅದ್ಕಿನ್ಸಲ್ಪಾ ಅದೇನೇನೋ ಆಕಿ ಕುದ್ಸಿ ಭಾಳಾ ರುಚಿ ಇರೋ ಭಟ್ಟಿ ಮಾಡ್ತರೆ, ಅದ್ನ ತುಂಬಾ ಜನ ಕೂಲ್ಯೋರೆಲ್ಲ ಕುಡೀತವೆ, ಒಂದ್ಕಿತಾ ರುಚಿ ಕಂಡ್ರೆ ಮತ್ ಬಿಡಾಕಿಲ್ಲ, ಅದೆಲ್ಲಾ ನಿಂಗ್ ಬ್ಯಾಡ ನಾ ಇಲ್ಲೇ ಸಲ್ಪ ಕಾರ್ಪುರೇಸ್ನ ತಾವ ಹೋಗ್ ಬತ್ತೀನಿ ಅವನೇನಾನಾ ಜರ್ ಇಲ್ಲಗ್ ಬಂದ್ರೆ ನಂಗೊಂದ್ ಪೋನಾಕು "

------------

" ತಿನ್ಲಾ ಸಿವಾ ಯಾಕಂಗ್ ನೋಡ್ತಾಯ್ಕಂಡೆ "

" ಏನಿಲ್ಲಾ ಇದ್ನ ಹೆಂಗೆ ತಿಂಬೋದು ಅಂತ ತಿಳ್ಯಾಕಿಲ್ಲ ಅದಕ್ಕೇ "

" ಯಾಕೋ ಪಸ್ಟ್ ಟೈಮಾ ನೀ ಬೆಂಗ್ಳೂರ್ಗ್ ಬತ್ತಾ ಇರೋದು ? "

" ಒದಣಾ ನಾ ಮೊದಲ್ನೇ ಸರ್ತಿ ಬಂದಿವ್ನಿ ಇದ್ಯೇನಣಾ ಇದು ? "

" ಸಣ್ಣಕ್ಕೇಳೋ ಪೆದ್ದೆ, ನೀ ಆತರ ದೊಡ್ಕೆ ಬೊಗಳ್ದ್ರೆ ನಮ್ ಗೌರವ್ಕೇ ಕಮ್ಮಿ, ಇದುಕ್ಕೆ ಪಿಡ್ಜಾ ಪಿಡ್ಜಾ ಅಂತರೆ ಬೋ ಚೆನ್ನಾಗಿರ್ತೈತೆ ತಿನ್ನಕೆ "

" ಬಿಚ್ಚಕೋದ್ರೆ ದಾರ್ ದಾರ್ದ್ ಥರ ಎಳ್ಕೊಂಡೇ ಬರ್ತೈತಣೋ ನಂಗ್ಯಾಕೋ ಬ್ಯಾಡಾಗ್ಬುಟ್ಟದೆ "

" ಏನಾಯಾಕಿಲ್ಲ ತಿನ್ನೋ ಎಂಥಾ ರುಚಿ ಗೊತ್ತೇನ್ಲಾ ಮುಂಡೇದೆ ಒಂದ್ ಪಿಡ್ಜಾ ತಿಂದ್ ನೈಂಟಿ ಹಾಕ್ಕೊಂಬುಟ್ರೆ ಜಗತ್ತೇ ಸುಂದರ, ನಾವೆಲ್ಲಾ ಆಗ ಇಲ್ಲೇ ಇದ್ರೂ ಫಾರಿನ್ನಾಗಿದ್ದಂಗೇ "

--------------

" ಏಲ್ಲೋಗಿದ್ಯಯ್ಯ ಇಷ್ಟೊತ್ತು "

" ಹಲ್ಲಿ ನಯ್ನ ಸಭಾಂಗಣ್ದಾಗೆ ಜಲನಯ್ನ ಮೇಡಂ ಬತ್ತರೆ ಅಂತ ಸುದ್ದಿ ಇತ್ಕಣಣ್ಣೋ ಅದ್ಕೇ ನೋಡವಾ ಅಂತ ಹೋದೆ "

" ಬಂದವ್ರಾ ? ನೀ ಹೇಳಿದ್ರೆ ನಾನೂ ಬತ್ತಿದ್ನಲ್ಲೋ ಅದೆಂಗಿದ್ರು ನೋಡಾಕಾಯ್ತಿತ್ತು "

" ಇಲ್ಕಣಣೋ ಅದು ಮೇಡಂ ಅಲ್ಲಾ ಯಾರೋ ಸಾರು ಬಂದಿರೋದು, ನಂಗ್ಯಾರೋ ತಪ್ಪೇಳ್ಬುಟ್ಯವ್ರೆ "

" ಹೋಗ್ಲಿ ಒಂದೇ ಚಾಕ್ಲೇಟೈತೆ ಒಸಿ ಕಾಗೆ ಎಂಜ್ಲಮಾಡೀನಿ ತಕಾ ತಿನ್ನು ಒಂಚೂರ "

" ಅಲ್ಲಣೋ ಗುಬ್ಬಿ ಎಂಜ್ಲು ಅಂದ್ರೇನು ? ಅಲ್ಲಿ ಆ ಪಟೆ ಬೋಲ್ಡಾಕಿದ್ರು "

" ಗುಬ್ಬಿ ಎಂಜ್ಲು ಅಂದ್ರೆ ನಂಗೊತ್ತಿಲ್ಲಪ್ಪ ನೀ ಹಲ್ಲೇ ಯಾರ್ನಾರ ಕೇಳಿರೋದು "

" ಇಲ್ಲಣೋ ಕೇಳ್ದೆ ಅದೇನೋ ಪುಸ್ತಕುಕ್ಕೇ ಆ ಹೆಸ್ರಂತೆ, ಸಿರ್ಸಿ ಕಡೀಗೆಲ್ಲ ಹಂಗೇ ಅಂತಾರಂತೆ ಕಾಗೆ ಎಂಜ್ಲಗೆ"

" ಹಂಗ್ ಬೇರೆ ಐತಾ, ವೈನಾತು ಬಿಡು ಕಾಗೆ ಎಸ್ರು ಚಂದಾಯಾಕಿಲ್ಲ ಅದ್ಕೇ ಗುಬ್ಬಿ ಅಂದ್ರೇನೆ ಸರಿ"

" ಅದ್ಯಾರೋ ಬೇನಾಮಿ ಬೆರ್ಚಪ್ಪ ಅಂತಾ ಬಂದವ್ನಂತೆ ಬಾಳ ಕಿಲಾಡಿ ಅಂತಂದ್ರು "

" ಹೋಗ್ಲಿ ಅವ್ನಿಸ್ಯ ಇಲ್ಲ್ಯಾಕ್ಲ ನಮ್ಗೆ? "

" ಅಲ್ಲ ಕಣಣೋ ಪಾಪ ಹವ್ರು ಹಷ್ಟ್ ಕಷ್ಟಾಪಟ್ಟು ಪಂಕ್ಸನ್ ಮಾಡ್ಯವ್ರೆ ಆ ಮನ್ಸ ಅದೇನೇನೋ ಇರುದ್ದ ಬರ್ದವ್ನಂತೆ "

" ಬೇನಾಮಿ ತಾನೇ ಹೋತಾನೆ ಸುಮ್ಕಿರಲೋ ಎಂತೆಂಥಾ ದಾಕ್ಲೆ ಇರೋ ಹತ್ತತ್ ಹೆಸ್ರಿಟ್ಗಂಡವ್ರೆ ಇದಾನ್ ಸೌದ್ದಗೆ ಎಣಗಾಡ್ತವ್ರೆ ಇನ್ ಈ ಬೇನಾಮಿ ಜನ ಎಲ್ಲಾ ಬಾಳ್ ದಿವ್ಸ ಇರಾಕಿಲ್ಲ ಬಿಡು "


---------------

"ಯಾಕೋ ಎರಡ್ದಿನದಿಂದ ಮಳೆ ಬರೋ ಅಂಗೈತೆ ಅಲ್ವೇನಣಾ ? "

" ಹಾಂ ನಮ್ ಯಡ್ಯೂರಣ್ಣ ಸಾನೆ ಕಣ್ಣೀರ್ ಹಾಕ್ತರೆ ಅದ್ಕೇಯ ದೇವರ್ಗೆ ಬೇಜಾರಾಗಿ ಹೋಕ್ಕಳ್ಳಿಬುಡು ಒಂದಷ್ಟ್ ದಿನ ಅಂತಾ ಮಳೆ ಬೀಳುಸ್ತನೆ "

" ಮೋಡ ಬಿತ್ನೆ ಅಂತೆಲ್ಲಾ ಅಂತಿದ್ರಲ್ಲ ಅದೆಲ್ಲಾ ಇಲ್ವೇನಣಾ ಈಗ ? "

" ಈಗ ಬಿತ್ನೆ ಗಿತ್ನೆ ಮಾಡಕೆ ಸರಕಾರದ್ ತಾವ ತಾಕತ್ತಿಲ್ಲ ಕಣ್ಲಾ, ಮತ್ತೇನಾರ ಮಾಡಾಕೊಂಟು ಯಡವಟ್ಟಾಗೋದ್ರೆ ಇರೋದ್ ಪಕ್ಸ್ದೋರು ಹುಡ್ಕ್ತಾ ಕುಂತವ್ರೆ ಅದ್ಕೇ ಮಾಡಾಕಿಲ್ಲ"

" ಗೋ ಅತ್ಯೆ ನಿಸೇಧಕ್ಕೆ ಬೈಬಲ್ನಾಗೇ ನಿಸೇಧ ಅದ್ಯಂತೆ, ಮನ್ಸಾಗುಟ್ಟದ್ ಮ್ಯಾಗೆ ನೀ ಏನ್ ಬೇಕಾರೂ ಮಾಡ್ಕ, ಈ ಗಾಳಿ, ನೀರು, ಗಿಡ-ಮರ, ಪ್ರಾಣಿ, ಪಕ್ಸಿ ಎಲ್ಲಾ ನಿಂಗೇಯ ಅಂದವ್ರಂತೆ, ಅದ್ನ ಸದ್ಬಳಕೆ ಮಾಡ್ಕೋ ಅಂದವ್ರಂತೆ "

" ಹೋದ್ಕಣೋ ನಿಂಗರ್ಥಾಯಾಕಿಲ್ಲ ಆಲ್ ಕುಡೀವಷ್ಟು ಕುಡ್ಕಂಡು, ಮತ್ತಷ್ಟ್ ಆಲ್ ಇಂಡ್ಬುಟ್ ಮಡೀಕಂಡು ಗೋ ನ ಚೆನ್ನಾಗಿ ಕತ್ತರ್ಸಿ ಒಂಚೂರು ಬಿಡ್ದಲೇ ತಿಂದ್ಬುಡು ಎಲ್ಲಾ ನಿಂಗೇಯ ಅಂತ ಬರದವ್ರಂತೆ ಅದ್ಕೇಯ ತಮ್ ಅಮ್ದೀರ್ನ ತಿನ್ನಾಕಾಯಾಕಿಲ್ಲ ನೋಡು ಇಂಗಾಗಿ ಹಸಾನಾದ್ರು ಹೊಡ್ಕಂಡು ತಿನ್ನಾವ ಅಂತ ಹೇಳ್ಯವ್ರೆ "

" ಬೈಬಲ್ ನಾಗೆ ಇರೋ ರೂಲು ಗಣಿಧಣಿಗಳ್ಗೂ ಬತ್ತದೆ, ಯಾಕೆಂದ್ರೆ ಈ ಭೂಮಿ,ಗಾಳಿ,ನೀರು ಇದೆಲ್ಲಾ ನಿಂದೇಯಾ ಅಂದವ್ರಲ್ಲ, ಇರೋದ ಮಾಡ್ಬಾರ್ದು, ಇರೋದ ಮಾಡುದ್ರೆ ಪ್ರಜಾಪ್ರಬುತ್ವ ಒಂಟೋಯ್ತದೆ ಅಲ್ವೇನಣಾ ? "

" ಅದ್ಕೇ ಅಲ್ವೇನ್ಲಾ ನಮ್ಮಲ್ಲಿ ಹಿಂತಾದ್ನೆಲ್ಲಾ ಮಡೀಕಂಡಿರಾದು. ಮಗಾ ಮಗಾ ಹಂತ ಅಪ್ಪ-ಅಮ್ಮ ಬೆಳುಸ್ತರೆ, ದೊಡ್ಡಾಗುತ್ಲೆ ಮಗ ಅಪ್ಪ-ಅಮ್ಮುನ್ನ ನಾಯಿಮರಿ ಬಿಟ್ಟಂಗೆ ರುದ್ಧಾಸ್ರಮಕ್ಕೆ ಬಿಟ್ಟು ಬತ್ತನೆ. ಮಗಂಗೆ ಒಂದೇ ಜೀವ್ನ ಇರಾದು, ಅದ್ನ ಹೆಂಜಾಯ್ ಮಾಡೋದ್ಬೇಡ್ವೇನ್ಲಾ ಸಿವಾ, ಇದೇ ತತ್ವಾನೇ ಬೈಬಲ್ನಾಗೆ ಹೇಳವ್ರೆ ಹಂತ ಅವರ್ಯಾರೋ ಹೇಳವ್ರೆ "

----------------

" ರಾಘುವೇಂದ್ರ ಸ್ವಾಮ್ಗೋಳ್ ಆರಾಧ್ನ್ಯಂತೆ ಹಂಗಂದ್ರೇನಣಾ ? "

" ಛೆ ನೀ ಇದ್ದೂ ವೇಷ್ಟು ಕಣೋ, ನಿಂಗೇನೂ ತಿಳ್ಯಾಕಿಲ್ಲ ಬಿಡು, ಕೆಲ್ಸಿಲ್ಲಾದ್ ಪುರೋಯ್ತ್ರು ಪೂಜೆ ಮಾಡ್ಸಕೆ ಒಂದ್ ಸೋಮಿ ಮಡ್ಗವರೆ, ಜನ್ರಿಗೂ ಬುದ್ದಿಲ್ಲ, ಅಲ್ಯಾರೋ ಸ್ವಾಮ್ಗೋಳು ಇದ್ರಂತೆ ಮುಂಚೆ "

" ಈಗೆಲ್ಲೋದ್ರೂ ಹವ್ರೂ"

" ಹವ್ರು ಜೀವಂತ ಸಮಾಧಿ ಕಟ್ಟಸಕ್ಯಬುಟ್ಟವ್ರಂತೆ ಅಂತ ಹಿವ್ರೆಲ್ಲಾ ಬಡ್ಕತರೆ ಆದ್ರೆ ಅವ್ರಿಲ್ಲೇ ಬಂದ್ಬುಟ್ಟರೆ "

" ಕಲಿಗಾಲ ಅಲ್ವೇನ್ಲ ಜಾಸ್ತಿದಿನ ಸಮಾಧಿ ಅಂತ ಕೂತ್ರೆ ಜನ ಬರಾಕಿಲ್ಲ-ಜಾಸ್ತಿ ದುಡ್ ಸಿಗಾಕಿಲ್ಲ ಹಂತ ತಿಳ್ದಿದ್ದೇ ಇವೇಕಾನಂದ ಹಂತ ಹೊಳ್ಳೇ ಎಸ್ರ ಮಡೀಕಂಡು ಮಾನವ ಅಕ್ಕು ಪರಿಷತ್ತು ಹಂತಾವ ಒಂದ್ ಆಪೀಸ್ ಮಾಡ್ಕಂಡವ್ರೆ "

" ನೀ ಸುಳ್ಳಾದ್ರು ಏಳ್ತೀಯಣೋ "

" ಏ ಇಲ್ಲ ಕಣ್ಲಾ ಟಿವಿನಾಗೆ ತೋರ್ಸಿಲ್ವೆ, ನಾನೇ ಖುದ್ದಾಗ್ ನೋಡಿದ್ದು "

" ಹದ್ರಿಂದ ಇವೇಕಾನಂದ್ಗೆ ಹೇನ್ ಪ್ರಯೋಜ್ನ ? "

" ಮಾನವ ಅಕ್ಕು ಅಂತ ಸರ್ಕಾರೀ ಸಬ್ ರಜಿಸ್ತ್ರಿ ತಿರುಗ್ದಾಂಗೆ ತಿರೀಕಂಡು ಜನರಿಗೆಲ್ಲ ಹಲ್ಲಲ್ಲಿ ಬೆದ್ರಕೆ ಆಕಿ ದುಡ್ ವಸೂಲಿ ಮಾಡ್ಕಳಾದು, ಮಳೆ ಬೀಳೂತ್ಲೂವೆ ಆಪೀಸ್ನಾಗ್ ಕುತ್ಗಂಡು ಆದುಡ್ನ ಮೇಯದು "

" ಓ ಇದ್ಬೇರೆ ನಿತ್ಯಾನಂದ ಹಂತೀಯೇನು ? "

" ಹಾಂ ಹೊಂಥರಾ ಅಂಗೇ ಹನ್ಕ "

18 comments:

  1. ಯಿಂಗೆಲ್ಲಾ ಆಯ್ತದಾ ಬುದೀ ಈ ದೇಸ್ದಾಗೆ..? ಭೋ ಮೋಸಾ ಕಣ್ ಬುದೀ.. ನರ್ ಮನ್ಸಾ ಬದ್ಕೋದೂ ಸಾನೆ ಕಷ್ಟಾ ಆಗ್ ಬುಟ್ಟೈತೆ..
    ನಮ್ ಕಪ್ ಕನ್ನಡ್ಕದ್ ನಾಗ್ರಾಜಪ್ಪೋರ್ ತಾವ ಯೋಳ್ಬಿಟ್ಟು ಒಂದ್ ಸ್ಟ್ರೈಕ್ ಮಡ್ಗಿದ್ರೆ ಎಂಗೆ..?

    ReplyDelete
  2. ಐ!ಬ್ಯಾಡ್ ಕಣ್ ದಿಲೀಪಣ್ಣ ,ಆ ಮನ್ಸಾ ಕತ್ತೆ ಮೆರವಣಿಗೆ ಮಾಡ್ಸಿಬುಡ್ತಾನೆ!ಉಸಾರಾಗಿರು ಮತ್ತೆ!

    ReplyDelete
  3. ಕಂಡಿತ ಸರ್ ನೀವು ಹೇಳಿರೊ ಹಾಗೆ "ಈ ಭೂಮಿ ಬಣ್ಣದ ಬುಗುರಿ"... ನಮ್ಮ ಜನಗಳು ಅದರ ಚಾಟಿ ತಮ್ಮಲ್ಲಿದೆ ಅಂತ ಆಟ ಅಡಲಿಕ್ಕೆ ಹೊಗ್ತರೆ ಸರ್... ಅದರೆ ಅದು ಕೇವಲ ತಮ್ಮ ಕಲ್ಪನೆ ಅಂತ ತಿಳಿಯೊದೆ ಇಲ್ಲ ಹಹಹಹ್... ಪಾಪಿಗಳ ಲೊಕದಲ್ಲಿ...

    ReplyDelete
  4. ಅಲಾ ನಮ್ ಮಂಡ್ಯಾ ಬಾಸೇಲಿ ಬಾಳಾ ಸಂದಾಗೆ ಬರ್ದು ಬುಟ್ರಲ್ಲಾ ಬಟ್ರೆ. ಬಲ್ ಸಂದಾಕೈತೆ ಬುಡಿ !! ನಮ್ ಅಳ್ಳಿ ಒಟ್ಳಲ್ಲು ಇಂಗೆಯ ನಾವ್ ಮಾತಾಡಾದು!! ಸಂತೋಸದಿಂದ ಶಕ್ರೆ ತಿನ್ದನ್ಗಾಯ್ತು ಬಟ್ರೆ ಇಂಗೆ ನಮ್ ಬಾಸೆಲೇ ಬರೀರಿ ನಮ್ಗೂ ಒದೂಕೆ ಅನ್ಕೂಲ ಆಯ್ತತೆ.ಬಲ್ ಸಂದಾಕೈತೆ ಸಾ ಬರ್ನೆ ನಮ್ಸ್ಕಾರ .

    ReplyDelete
  5. ಊ೦ ಸ೦ದಾಕೈತೆ..ಭಟ್ರೆ...ಎಲ್ಲಾ ಇಸ್ಯಾನೂ ಭಲೆ ಪಸ೦ದಾಗಿ ಏಳೀವ್ರಿ..ಮ೦ಡ್ಯಾ ದೇಸದ ಬಾಸೆ ನೆ ಅ೦ಗೆ..ಬೋ ಇಸ್ಟ ಆಗ್ ಬುಡ್ತದೆ..

    ಶುಭಾಶಯಗಳು
    ಅನ೦ತ್

    ReplyDelete
  6. ಭಟ್ರೆ...

    ನಿಮ್ಮುನ್ನ ...
    ಹಿಂಗೆಲ್ಲ ಬರುದ್ರೆ ಬುಡಾಕಿಲ್ಲ..
    ವಸಿ ಹೊರಕೆ ಬನ್ನಿ..
    ನೋಡ್ಕತೀನಿ ಒಂದ್ಕೈನಾ..
    ಎಂಗೈತೆ ಮೈಕೆ?

    ಆದ್ರೆ..
    ನೀವ್ ಏಳೂದಾಗೂ ಒಸಿ.. ಸತ್ಯ ಐತೆ ಸಿವಾ...
    ಬರಿರಿ..

    ಆ ಜಲನಯನ ಮೇಡಮ್ ಗೂ..
    ""ಗುಬ್ಬಿಯೆಂಜಿಲು ಬುದ್ಧಿಯೋರ್ಗು ನಮ್ಮ ನಮಸ್ಕಾರ ತಿಳ್ಸಿ ಬುಡಣ್ಣೋ..

    ಕಾರ್ಯಕ್ರಮ ಸಂದಾಗಿತ್ತು ಬಿಡಣ್ಣೋ..

    ಜೈ ಹೋ.. ಭ್ಹಟ್ರೆ..

    ಇಂಥಹದು ಇನ್ನಷ್ಟು ಬರಲಿ...

    ReplyDelete
  7. ಭಟ್ಟರೇ ನಕ್ಕು ನಕ್ಕು ಸಾಕಾಯ್ತು . ಸಧ್ಯ ಆಫಿಸ್ನಲ್ಲಿ ಓದಿಲ್ಲ- ಮನೆಲ್ಲಿ ಒಬ್ಬನೇ ಇದ್ದಾಗ ಓದಿದ್ದು!ಇಲ್ಲಾಂದರೆ ಜನ ಕೂಡಿರೋರು!

    ನಿಜಾವಾಗಿ ಇದು ಬಣ್ಣದ ಬುಗರಿ. ಚಾಟಿ ನೀವೇ!
    ಬಹಳ ಅದ್ಭುತವಾಗಿ ಬೇರೆ ಬೇರೆ ವಿಷಯಗಳ ಬಗ್ಗೆ ಚಾಟಿ ಬೀಸಿ ಬಗುರಿ ತಿರುಗಿಸಿದ್ದಿರಾ...
    ಧನ್ಯವಾದಗಳು.
    hats off to you !!!

    ReplyDelete
  8. Bhatre,

    nam kundaapra basheg heludaare ' baari laikitte'..odr mel matt matt odkambeg aatt kaani....

    ReplyDelete
  9. ಬೋ ಪಸ೦ದಾಗೈತೆ ಕಣಣ್ಣೋ, ಇನ್ನೊ೦ದಪಾ ಬರೀರಿ ಸಿವಾ ಇದೆ ತರದ ವಿಚಾರಾನ, ಓದಕ್ಕೆ ಸ೦ದಾಕಿರುತ್ತೆ.

    ReplyDelete
  10. ವಾಸ್ತವವನ್ಣೇ ಹೇಳಿದ್ದೀರಿ. ಗ್ರಾಮ್ಯ ಭಾಷೆಯಲ್ಲಿ ಕೇಳೊಕೆ ಮಜಾ ಐತೆ !. ಇನ್ನೂ ವಸಿ ಬರೀರಪಾ.

    ReplyDelete
  11. ಗ್ರಾಮ್ಯ ಭಾಷೆಯಲ್ಲಿ ಬರೆಯುವುದು ಸುಲಭವಲ್ಲ. ಇದು ನಿಮಗೆ ಕರಗತವಾಗಿದೆ. ಪ್ರಸ್ತುತಿ ಚೆನ್ನಾಗಿದೆ. ಅಭಿನಂದನೆಗಳು

    ReplyDelete
  12. ಭಟ್ಟರೆ,
    ಈ ಹೊಸ style ಸಹ ತುಂಬ ಚೆನ್ನಾಗಿದೆ. ನಿಮ್ಮ ಸಿಹಿ ತಿಂಡಿಗಳ ಜೊತೆಗೆ ಈ ತರಹದ ಹುರಿಗಾಳನ್ನೂ ಸಹ ನಡುನಡುವೆ ಕೊಡ್ತಾ ಇರಿ.

    ReplyDelete
  13. ಚೆನ್ನಾಗಿದೆ... ಎನ್ ಸರ್ ,ಇದೇನು ಎಲ್ಲರನ್ನು ಕೊಡಕಿ ಬಿಸಾಕಿದ್ದಿರಲ್ಲ ಹ್ಹಾ ಹ್ಹಾ ಹ್ಹಾ

    ReplyDelete
  14. ಹುಟ್ಟಿದರೇ ಕನ್ನಡನಾಡ್ನಾಗ್ ಹುಟ್ಟಬೇಕು ಮೆಟ್ಟಿದರೆ ಅಳ್ಳಿ ಮಣ್ನಾ ಮೆಟ್ಟಬೇಕು ಬಾಯಿದು ಗುಟುಕಾ ಗುಂಡಿ ಹದಿನಾರು ಹಲ್ಲುಗಳ ಅಂಗ್ಡಿ !

    * ಶ್ರೀ ದಿಲೀಪ್ ಹೆಗಡೆ, ವಾಟಾಳು ಬೇಡಾ ಕಣ್ರೀ ಹಾಳಾಗೋತದೆ, ನಮನಗಳು

    * ಡಾ| ಶ್ರೀ ಕೃಷ್ಣಮೂರ್ತಿ ಎಂಗೈತೆ ಸಂದಾಗಿತ್ತ ನಮ್ ತಿರುಪತಿ ಹೋಟ್ಲು ? ಧನ್ಯವಾದಗಳು

    * ಶ್ರೀ ತರುಣ್ , ಅಪ್ಪಂಗುಟ್ದ ಮಾತು [ತಮಾಷೆಗೆ, ಏನಂದ್ಕೊಬೇಡಿ], ಕೃತಜ್ಞತೆಗಳು.

    * ಶ್ರೀ ಬಾಲು, ಅಗಲಗಲ ಬರ್ಯನ ಅಲ್ವೇ ? ನೀವು ಬರೀರಿ ಹನ್ನೋದ್ ಎಚ್ಚೋ ನಾ ಬರ್ಯೋದ್ ಎಚ್ಚೋ, ಹಲವು ನೆನಕೆಗಳು.

    * ಶ್ರೀ ಅನತರಾಜ್, ನಿಮ್ ಧಾರವಾಡ್ ಭಾಷೀ ಬೇರೆ ಬರ್ತದ್ರೀ ನನಗ, ಮುಂದಿನ್ ಸರ್ತಿ ಅದರಾಗ್ ಬರೀತೀನ್ ತಗೋರಿ! ಧನ್ಯವಾದಗಳು

    * ಶ್ರೀ ಪ್ರಕಾಶ್ ಹೆಗಡೆ, ಇದೊಂತರಾ ಇಟ್ಟಗಿ - ಸಿಮೆಂಟು ಕಣ್ರೀ, ನೀವೆಲ್ಲಾ ನೀರು ನೀರು ಹಂತೀರಿ ನಾವು ನೀರಿಲ್ದಲೇ ಕಟ್ಬುಡ್ತೀವಿ, ನಿಮಗೆ ಬಹಳ ಅಭಾರಿ.

    * ಶ್ರೀ ಸೀತಾರಾಮ್, ವೈನಾಗೈತೆ ಹಂದ್ರಾ ಬನ್ನಿ ನಮ್ ಹೋಟ್ಲತಾವ ತಿಂಡೀ ಕೊಡ್ತೀನಿ, ಅನಂತ ನಮನಗಳು

    * ಶ್ರೀ ಕಡ್ಲಾಡಿ ಶೆಟ್ರೆ, ಇದು ಸಖತಾತಿತ್ತ್ ಓದುಕೆ ಮಾರ್ರೆ, ಬರ್ಯೋದೇ ಕಷ್ಟ! ನಿಮಗೆ ವಂದನೆಗಳು

    * ಶ್ರೀ ಪರಾಂಜಪೆ, ಅಡ್ಬಿದ್ದೆ ಕಣಣ್ಣೋ, ನಿಮ್ ಅಭಿಪ್ರಾಯ ಕೇಳಿದ್ದೇ ಕೇಳಿದ್ದು ನಮ್ಮಣ್ಣ ಮತ್ತೆ ಚಿತ್ರಾನ್ನ ಕಲ್ಸ್ಯವ್ನೆ ! ನಮನಗಳು

    * ಶ್ರೀ ಸುಬ್ರಹ್ಮಣ್ಯ, ಸಂದವೂ ಇಲ್ಲ ಎಂಥದೂ ಇಲ್ಲ ಒಟ್ತಾಯ್ಸಿ ಬರ್ಯವ ಅಂತ ಬರ್ದಿವ್ನಿ, ಕೃತಜ್ಞತೆಗಳು

    * ಶ್ರೀ ಕವಿ ಸುರೇಶ್, ಇಂಗೈತ್ರಿ ನಮ್ ಅಳ್ಳಿ, ನೀವು ಒಸಿ ಬರೀರಲಾ ! ನಮಸ್ಕಾರಗಳು.

    * ಶ್ರೀ ಸುನಾಥ್, ನಾವು ಉರಿಗಾಳು ಹಂತೀವಿ ಗೊತ್ತಾಯಾಕಿಲ್ವ ನಿಮ್ಗೆ ? ಅನಂತ ಅಭಿವಂದನೆಗಳು, ಅಭಿನಂದನೆಗಳು

    * ಶ್ರೀ ಶಶಿ ಮೇಡಂ, ಕೊಡ್ಕುದೆಲ್ಲಾ ಸಾನೆ ಕಸ್ಟ ಹದ್ಕೇಯ ಹದ್ನೆಲ್ಲಾ ಮಾಡಾಕಿಲ್ಲ ಬುಡಿ, ಧನ್ಯವಾದಗಳು.

    ಓದಿದ ಎಲ್ಲಾ ಮಿತ್ರರಿಗೂ ಅಭಿನಂದನೆಗಳು, ಅಭಿವಂದನೆಗಳು.

    ReplyDelete
  15. ಶ್ರೀ ಶಿವು ಹಾಗೂ ಕ್ಷಣ ಚಿಂತನೆ...ಶ್ರೀ ಚಂದ್ರು ತಮ್ಮೀರ್ವರಿಗೂ ಸ್ವಾಗತ ಮತ್ತು ನಮನಗಳು, ಹೊಸದಾಗಿ ಬಂದ ಎಲ್ಲಾ ಬ್ಲಾಗಿಗ ಮಿತ್ರರಿಗೂ ಸ್ವಾಗತ ಮತ್ತು ನಮನಗಳು

    ReplyDelete
  16. ಚೆನ್ನಾಗಿದೆ ಸರ್. :)

    ReplyDelete
  17. ಶ್ರೀ ರಾಘವೇಂದ್ರ ಹೆಗಡೆ ತಮಗೆ ಸ್ವಾಗತ ಮತ್ತು ನಮನಗಳು

    ReplyDelete
  18. ಏನ್ ಚಂದನೋ ನಿಮ್ ಭಾಷಿ..

    ReplyDelete