ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 5, 2013

ಮೊಟ್ಟೆಯೊಡೆದಷ್ಟುದಿನ


ಮೊಟ್ಟೆಯೊಡೆದಷ್ಟುದಿನ
ರಥವಿಳಿದು ನಡೆತಂದು ಭಕ್ತಿಯೊ
ಳತಿಶಯದಿ ನಮಿಸುತಲಿ ಪದತಲ
ನುತಿಪೆ ಭಾರತ ಕವಿಜನಂಗಳ ಸತತವಾದಿಯಲಿ |
ಅತುಳಭುಜಬಲ ಕಾಳಿದಾಸನ
ಚತುರಮತಿಯಾ ನಾರಣಪ್ಪನ
ಪಥಿಕ ನಾನೆನೆಸುತ್ತ ಬೇಡುವೆ ಮತಿಯ ವೇದಿಯಲಿ || 

[ಸ್ವರಚಿತ ಭಾಮಿನಿಯೊಂದಿಗೆ ಭಾರತದ ಕವಿಪರಂಪರೆಯನ್ನು ನೆನೆಸಿಕೊಳ್ಳುತ್ತಿದ್ದೇನೆ. ಸಾಂಪ್ರದಾಯಿಕ ಕಾವ್ಯರಥವನ್ನೇರಿಯೇ ಇರುವ ನಾನು, ಆಗಾಗ ಆ ರಥವಿಳಿದು ಬಂದು, ಅಲ್ಲಿಂದ ನಾನೆಸೆವ ಕಾವ್ಯಬಾಣಗಳು ಕಾವ್ಯಾಸಕ್ತರಿಗೆ ನಾಟಿ-ಮುದವೀಯಲಿ ಎಂಬ ಪ್ರಾರ್ಥನೆಯನ್ನು ಆದಿಕವಿಗಳಿಂದ ಹಿಡಿದು ಇಂದಿನ ಸಾಂಪ್ರದಾಯಿಕ ಹಿರಿಯ ಕವಿಗಳ ಪದತಲದಲ್ಲಿ ಅರ್ಪಿಸಿ, ಕಾವ್ಯ ರಚನೆಗೆ ಸು-ಮತಿಯನ್ನು ಬೇಡುತ್ತಿದ್ದೇನೆ ಎಂಬುದು ಮೇಲಿನ ಪದ್ಯದ ಅರ್ಥ. 

ಕಾವಿಕಾವ್ಯ ಪರಂಪರೆಯಲ್ಲಿ, ತನ್ನ ಅಮೋಘವಾದ ಪರಿಕಲ್ಪನೆಗಳಲ್ಲಿ, ೨೪ಕ್ಕೂ ಅಧಿಕ ಛಂದಸ್ಸುಗಳನ್ನು ಬಳಸಿ, ಉಪಮೆ-ಪ್ರತಿಮೆ ಮತ್ತು ಪ್ರತಿಕೃತಿಗಳಿಂದ ಜನಮನಸೂರೆಗೊಂಡ ಮಹಾಕವಿ ಕಾಳಿದಾಸನಿಗೆ ಅನಂತ ನಮನಗಳು. ಇಂದಿನ ಕಾವ್ಯವಿನೋದಿಗಳಿಗೆ ಛಂದಸ್ಸು-ವ್ಯಾಕರಣ-ಪ್ರಾಸ ಇವೆಲ್ಲ ರುಚಿಸದ ಅಡುಗೆ. ನವ್ಯ, ನವ್ಯೋತ್ತರ ಮತ್ತು ನವೋದಯ ಕಾವ್ಯಗಳ ಭಯಂಕರ ಚಂಡಮಾರುತ ಬೀಸಿದರೂ ಕನ್ನಡಮ್ಮ ತನ್ನತನವನ್ನು ಉಳಿಸಿಕೊಳ್ಳಲು ಅಲ್ಲಲ್ಲಿ ತನ್ನ ಸ್ವಸ್ವರೂಪದ ಅಭಿಮಾನಿಗಳನ್ನು ಉಳಿಸಿಕೊಂಡೇ ಇರುತ್ತಾಳೆ. ಅಂತಹ ಅಪ್ಪಟ ಕನ್ನಡಾಭಿಮಾನಿ ಬಳಗವನ್ನು ನಾನು ಆಗಾಗ ನೆನೆದುಕೊಳ್ಳುವುದಿದೆ. ಶತಾವಧಾನಿ ಡಾ|ರಾ.ಗಣೇಶರ ಮಾರ್ಗದರ್ಶನದಲ್ಲಿ ’ಪದ್ಯಪಾನ’ದಲ್ಲಿ [http://padyapaana.com] ಪದ್ಯ)ಪಾನಮತ್ತರನೇಕರು ವಿಜೃಂಭಿಸುತ್ತಲೇ ಇರುವುದು ಖುಷಿಕೊಟ್ಟ ವಿಚಾರ. ಅವಧಾನಿ ಗಣೇಶರಿಗೆ ಸಾಷ್ಟಾಂಗ ನಮಸ್ಕಾರಗಳು ಮತ್ತು ಹೊಸಪೀಳಿಗೆಯ ಸಾಂಪ್ರದಾಯಿಕ ಕವಿಗಳೆಲ್ಲರಿಗೂ ನನ್ನ ಅಭಿನಂದನೆಗಳು.  

ಪ್ರಾಸಬದ್ಧ ಕವನಗಳನ್ನು ಬರೆಯುವ ಮನಕ್ಕೆ ಎಟಕುವ ವಿಷಯವಸ್ತುಗಳು ಹಲವು; ಅಂಥವುಗಳಲ್ಲಿ ಒಂದೊಂದು ವಿಷಯ ಒಂದೊಂದು ವಿಧದ ಭಾವದಿಂದ ಕೂಡಿರುತ್ತದೆ. ಹಡೆದಮ್ಮನಿಗೆ ತನ್ನ ಮಗುವನ್ನು ರಕ್ಷಿಸುವುದು ದೇವರೊಪ್ಪಿಸಿದ ಜವಾಬ್ದಾರಿ! ಹಲವು ಸಂಕಷ್ಟ ಮತ್ತು ಸಂದಿಗ್ಧಗಳ ನಡುವೆಯೂ ಪ್ರತಿಯೊಂದೂ ಜೀವಪ್ರಭೇದಕ್ಕೂ ಸಂತಾನದ ಪಾಲನೆ ಪೋಷಣೆಯ ವ್ಯಾಮೋಹ ಸಹಜ. ಹಸಿದ ತನ್ನ ಮರಿಗಳಿಗೆ ಹದ್ದು-ಗಿಡುಗಗಳು ಸಣ್ಣ ಹಕ್ಕಿಯ ಮೊಟ್ಟೆ-ಮರಿ, ಇಲಿ ಇವೇ ಮೊದಲಾದವುಗಳನ್ನು ಆಹಾರವಾಗಿ ಕೊಡುತ್ತವೆ. ಸಣ್ಣ ಹಕ್ಕಿಗಳು ತಮ್ಮ ಮರಿಗಳಿಗೆ ಹುಳ-ಹುಪ್ಪಟೆ-ಜಿರಲೆ ಇತ್ಯಾದಿಗಳನ್ನು ಆಹಾರವಾಗಿ ನೀಡುತ್ತವೆ. ಹುಳ-ಹುಪ್ಪಟ-ಜಿರಲೆಗಳಿಗೆ ಇನ್ನೂ ಸಣ್ಣಗಿನ ಕೆಲವು ಜೀವ ಪ್ರಭೇದಗಳು ಆಹಾರವಾಗಿರುತ್ತವೆ. ಇಲ್ಲಿ ಪ್ರತಿಯೊಂದೂ ವರ್ಗದ ಅಮ್ಮನಿಗೆ ತನ್ನ ಕಂದಮ್ಮಗಳ ಹಸಿವು ಮಾತ್ರ ಗೊತ್ತು, ಬೇರೆ ಯಾವುದೇ ಜೀವವರ್ಗ ಬದುಕಲಿ ಅಥವಾ ಸಾಯಲಿ ಆ ಬಗೆಗೆ ಅವು ಚಿಂತಿಸುವುದಿಲ್ಲ! ಸಣ್ಣ ಹಕ್ಕಿಯ ಮರಿಯನ್ನು ತಿಂದರೆ ಅದರ ಅಮ್ಮನಿಗೆ ಆಗುವ ನೋವು ಹದ್ದು-ಗಿಡುಗಗಳಿಗೆ ತಿಳಿಯದು! ಒಂದೊಮ್ಮೆ ತಿಳಿದರೂ, ಕ್ರೌರ್ಯವೇ ಅವುಗಳ ಜೀವನ. ನವ್ಯ-ನವೋದಯ-ನವ್ಯೋತ್ತರಗಳೆಂಬ ಕಾವ್ಯರಣಹದ್ದುಗಳು ಸಾಂಪ್ರದಾಯಿಕ ಕಾವ್ಯಹಕ್ಕಿಯ ಮರಿಗಳನ್ನು ಕುಕ್ಕುತ್ತಲೇ ಇದ್ದರೂ ಕಾವ್ಯಹಕ್ಕಿಗಳ ವಂಶಕ್ಕೆ ಅಳಿವೇನೂ ಇಲ್ಲವೆಂಬುದು ಇಲ್ಲಿನ ಹೋಲಿಕೆ. ಇಂಥಾದ್ದೊಂದು ಚಿತ್ರಣ ಮನದಲ್ಲಿ ಮೂಡಿದಾಗ ನನ್ನೊಳಗಿನ ಕವಿ ಬರೆದ ಕವನ ಇಲ್ಲಿದೆ, ದಯಮಾಡಿ ಒಪ್ಪಿಸಿಕೊಳ್ಳಿ:]

ಮೊಟ್ಟೆಯೊಡೆದಷ್ಟುದಿನ ಮರಿಯೆಂಬ ಕರುಣೆಯಲಿ
ಹೊಟ್ಟೆ ತುಂಬಿಸಿ ಹೊತ್ತು ಹೊತ್ತಿನಲ್ಲಿ
ರಟ್ಟೆ ಬಲಿಯುವೊಲಿನಿತು ಬಲುಕಷ್ಟದಲಿ ಬೆಳೆಸಿ
ಜಟ್ಟಿ ಹದ್ದುಗಳಟ್ಟಿ ಕುತ್ತಿನಲ್ಲಿ

ಅಟ್ಟಹಾಸದಿ ಹಾಯ್ವ ಗಿಡುಗ ಗೂಬೆಗಳನ್ನು
ಮಟ್ಟಸದಿ ಬೆವರಿಳಿಸಿ ಎವೆಯಿಕ್ಕದೇ
ಬೆಟ್ಟದಲಿ ಬಣಿವೆಯಲಿ ಥಟ್ಟನಿಳಿದೇಳುತ್ತ
ಪುಟ್ಟನಿಗೆ ಗುಟುಕಿಡುತ ಕಹಿಕಕ್ಕದೇ

ಸಟ್ಟನೇ ಹಾವೊಂದು ಸದ್ದುಮಾಡದೆ ಬರಲು
ಕುಟ್ಟಿ ಕೊಕ್ಕಿನೊಳದರ ಒದ್ದೋಡಿಸಿ
ದಟ್ಟಮಳೆ ಸುರಿವಂದು ರೆಕ್ಕೆಮಾಡನು ಹಿಡಿದು
ಗಟ್ಟಿಗಾಳಿಯ ಭಯದ ಸದ್ದಡಗಿಸಿ ! 

ಕಟ್ಟೆ ಕೆರೆಗಳು ತುಂಬಿ ಭೋರ್ಗರೆವ ನೀರುಕ್ಕಿ
ನಟ್ಟಿರುಳು ನಿಡುಸುಯ್ದು ದಿನವಗಳೆದು
ಹುಟ್ಟಿಸಿದ ಪರಮಾತ್ಮ ಭುವಿಯ ಬಂಧನವಿಕ್ಕಿ
ಪುಟ್ಟ ಅಮ್ಮನ ಋಣದ ಗೆರೆಯನೆಳೆದು  


Tuesday, July 2, 2013

ಗುಟ್ಟೊಂದು ಹೇಳುವೆ-’’ಟೆಕ್ಕಾಣಿ’’ ತಿಳಿಯುವರೇ!


ಗುಟ್ಟೊಂದು ಹೇಳುವೆ-’’ಟೆಕ್ಕಾಣಿ’’ ತಿಳಿಯುವರೇ!

ಪುಟ್ಟಾಣಿ ಮಕ್ಕಳಿಗೆ ಗುಟ್ಟನ್ನು ಹೇಳುವ ಕಾಲ ಹೊರಟ್ಹೋಯ್ತು!! ಕಾಲದ ಮಹಿಮೆ ಹೇಗಿದೆಯೆಂದರೆ ಎಷ್ಟೋ ಮನೆಯಲ್ಲಿ ಪುಟ್ಟಾಣಿ ಮಕ್ಕಳೇ ಅಪ್ಪ-ಅಮ್ಮಂದಿರಿಗೆ ಕೆಲವನ್ನು ಹೇಳಿಕೊಡುತ್ತಾರೆ. ನಂಬುವುದಾದರೆ ನಂಬಿ ಬಿಟ್ಟರೆ ಬಿಡಿ-7 ವರ್ಷದ ನನ್ನ ಮಗ ಯಾವ ಮೊಬೈಲ್ ಹ್ಯಾಂಡ್ಸೆಟ್ ತೆಗೆದುಕೊಂಡರೂ ಕ್ಷಣಾರ್ಧದಲ್ಲಿ ಆಪರೇಟ್ ಮಾಡುತ್ತಾನೆ; ಆದರೆ ನನಗೆ ಅಷ್ಟುಬೇಗ ಅವು ಆಪ್ತವಾಗುವುದಿಲ್ಲ. "ಅಪ್ಪಾ, ಹಾಗಲ್ಲಾ..ಹೀಗೆ" ಎಂದು ಆತ ತೋರಿಸಿಕೊಡುವಾಗ ಆತನ ತಲೆ ಎಷ್ಟು ಓಡುತ್ತಿದೆ ಎಂದುಕೊಂಡರೂ ಓದಿಗಿಂತ ಇತರ ಚಟುವಟಿಕೆಗಳಲ್ಲಿ ಮಕ್ಕಳು ಜಾಸ್ತಿ ಆಸಕ್ತರಾಗುತ್ತಿದ್ದಾರೆ ಎಂಬ ವಿಷಯ ಮನದಮೂಸೆಯಲ್ಲಿ ರಿಂಗಣಿಸುತ್ತದೆ. ದಿನಮಾನ ಹೇಗಿದೆ ಎಂದರೆ ಎಲ್ಲೆಲ್ಲೂ ಗಣಕ ತಂತ್ರಾಂಶದ್ದೇ ಆಳ್ವಿಕೆ, ತಂತ್ರಾಂಶವಿಲ್ಲದೇ ಯಾವ ಕೆಲಸ ಮಾಡಿಕೊಳ್ಳಹೋದರೂ ಅದು ಅಪೂರ್ಣವಾಗುತ್ತದೆ ಎನ್ನಬಹುದು. ಎಲ್ಲಾ ವೈಜ್ಞಾನಿಕ ಆವಿಷ್ಕಾರಗಳಂತೇ ತಂತ್ರಾಂಶ ಪೂರಕವೂ ಹೌದು ಮತ್ತು ಮಾರಕವೂ ಹೌದು! ಉದಾತ್ತ ಧ್ಯೇಯಗಳಿಂದ ಬಳಸುವಾಗ ಪೂರಕವಾಗಿದ್ದರೆ ದುರುದ್ದೇಶಗಳಿಂದ ಬಳಸುವಾಗ ಮಾರಕವಾಗುತ್ತದೆ. ತಂತ್ರಾಂಶಗಳನ್ನವಲಂಬಿಸಿ ನಡೆಯುವ ಗಣಕಯಂತ್ರಗಳ ಮಾಮೂಲಿ ನಡೆಯನ್ನೇ ಬದಲಿಸಬಹುದಾದ ಸಾಧ್ಯಾಸಾಧ್ಯತೆಗಳ ಗುಟ್ಟನ್ನು ರಟ್ಟುಮಾಡುವುದೇ ಈ ಕಥೆ:

ಬಹುದಿನಗಳ ಕಾಲ ಅನಾಥವಾಗಿ ಬಿದ್ದಿದ್ದ ಈ ಕಥೆಯ ನಿಜನಾಮಧೇಯ ‘’ಎಥಿಕಲ್ ಹ್ಯಾಕಿಂಗ್’’ ಎಂದು; ಯಾಕೋ ಹ್ಯಾಕಿಂಗ್ ಎಂಬ ಹೆಸರೇ ಹಲವರನ್ನು ಹೆದರಿಸುತ್ತಿರುವುದರಿಂದ ಅನಾಮತ್ತಾಗಿ ಅದಕ್ಕೆ ಬೇರೇ ಶೀರ್ಷಿಕೆ ಕೊಟ್ಟು ಪೂರ್ವಾಶ್ರಮದ ಹೆಸರು ’ಎಥಿಕಲ್ ಹ್ಯಾಕಿಂಗ್’ ಎಂದಿತ್ತು ಎಂಬುದನ್ನು ನಿಮಗೆ ಈಗಷ್ಟೇ ಹೇಳುತ್ತಿದ್ದೇನೆ. ಜೊತೆಗೆ ಇನ್ನಷ್ಟು ಊರೊಟ್ಟಿನ ಗೊಜ್ಜು-ಚಟ್ನಿ ಎಲ್ಲಾ ಇಟ್ಟಿರುವುದರಿಂದ ಇದಕ್ಕೆ ಬರೇ ’ಎಥಿಕಲ್ ಹ್ಯಾಕಿಂಗ್’ ಹೆಸರೂ ಸರಿಹೊಂದುವುದಿಲ್ಲ ಬಿಡಿ. ಇರಲಿ, ವಿಷಯಕ್ಕೆ ಬಂದುಬಿಡೋಣ. ನಮ್ಮಲ್ಲಿ ಗಣಕಯಂತ್ರದ ಸಾಮಾನ್ಯ ಬಳಕೆದಾರರನೇಕರಿಗೆ ವೈರಸ್ ಎಂದರೇನು ಎಂಬುದರ ಬಗ್ಗೇನೆ ಸರಿಯಾದ ಮಾಹಿತಿಯಿಲ್ಲ! ಮನುಷ್ಯರಿಗೆ  ಹುಷಾರಿಲ್ಲದಾಗ, ಜ್ವರಬಂದಾಗ ಕೆಲವೊಮ್ಮೆ ’ವೈರಲ್ ಫೀವರ್’ ಎಂದೆಲ್ಲಾ ಮಾತನಾಡುತ್ತೇವಲ್ಲಾ ಅದರಂತೇ ಕಂಪ್ಯೂಟರಿಗೆ ಯಾವುದೋ ರೀತಿಯ ಜ್ವರಹತ್ತುತ್ತದೆ ಎಂದುಕೊಳ್ಳುವವರೇ ಬಹಳಜನ ಇದ್ದಾರೆ! "ವೈರಸ್ ಬಂದರೆ ಏನೇನು ತಿಂದುಹಾಕಿಬಿಡುತ್ತದೋ ಯಾರಿಗೆ ಗೊತ್ತು?" ಎಂದು ಅದೆಷ್ಟೋ ಜನ ನನ್ನಲ್ಲಿ ಹೇಳಿದ್ದುಂಟು. ವೈರಸ್ ಎಂದರೆ ಕಣ್ಣಿಗೆ ಕಾಣದ ಕೀಟಾಣು ಎಂದುಕೊಂಡು ಕಥೆ ಕೊರೆಯಲು ಆರಂಭಿಸಿದವರ ಮಾತುಗಳನ್ನು ನೆನೆಸಿಕೊಂಡರೆ ಏಕದಮ್ 72 ಗಂಟೆಗಳ ಸತತ ನಗುವನ್ನು ಏಕಾಏಕಿಯಾಗಿ ತಂದುಕೊಳ್ಳಬಹುದು! ಸದ್ಯ, ಅಂಥವರು ಮೆಡಿಕಲ್ ಶಾಪ್ ನಿಂದ ಯಾವ ಮಾತ್ರೆಗಳನ್ನು ತರಬೇಕೆಂದು ಮಾತ್ರ ಕೇಳಲಿಲ್ಲ. 

ವೈರಸ್ ಎಂಬುದಕ್ಕೆ ಆಂಗ್ಲಭಾಷೆಯಲ್ಲಿ ಒಂದೇ ವಾಕ್ಯದಲ್ಲಿ ಸರಳವಾಗಿ ತಿಳಿಸುವುದಾದರೆ:Virus is also a software, destructive in nature[ವೈರಸ್ ಎಂಬುದು ಕೂಡ ಒಂದು ತಂತ್ರಾಶ, ಹಾಳುಗೆಡಹುವುದೇ ಅದರ ಉದ್ದೇಶ.] ಮನುಷ್ಯ ಶರೀರಕ್ಕೆ ದಾಳಿ ಇಡುವ ವೈರಾಣುವಿಗೂ ಕಂಪ್ಯೂಟರ್ ವೈರಸ್ಸಿಗೂ ಭೌತಿಕ ಹೋಲಿಕೆಯಿಲ್ಲ. ಇದನ್ನು ಮನದಟ್ಟು ಮಾಡಿಸುವಾಗ ನನ್ನನ್ನೇ ಹಣ್ಣುಗಾಯಿ ನೀರುಗಾಯಿ ಮಾಡಿದ ಮಹಾಶಯರಿದ್ದಾರೆ! ಆದರೂ ಗಣಕಯಂತ್ರಗಳ ಬಗ್ಗೆ ಮತ್ತು ಅವುಗಳ ಕಾರ್ಯವೈಖರಿ ಬಗ್ಗೆ ಉಪನ್ಯಾಸಕೊಡುವ ಆಸೆ ನನ್ನನ್ನು ಬಿಟ್ಟುಹೋಗಲೇ ಇಲ್ಲ. ಗಣಕಯಂತ್ರದ ಮತ್ತು ತಂತ್ರಜ್ಞಾನ, ತಂತ್ರಾಶ ಈ ಎಲ್ಲವುಗಳ ಮತ್ತು ಅವುಗಳನ್ನಾಧರಿಸಿದ ನನ್ನ ವೃತ್ತಿಯ ಕುರಿತು ತಮಾಷೆಯಾಗಿ ಕೆಲವೊಮ್ಮೆ ಹಾಸ್ಯ ಕಷಾಯಗಳನ್ನೋ ರಸಾಯನಗಳನ್ನೋ ನನ್ನ ಮಿತ್ರರಲ್ಲಿ ಹಂಚಿಕೊಂಡಿದ್ದಿದೆ. ಶಾಲೆಯಲ್ಲಿ ಮಕ್ಕಳಿಗೆ ಮಿಸ್ ಹೇಳಿದ್ದೇ ಸತ್ಯವಾದಂತೇ ನಮ್ಮ ಗಣಕಯಂತ್ರಗಳ ಜನಸಾಮಾನ್ಯ ಬಳಕೆದಾರರಿಗೆ ಗಣಕಯಂತ್ರಗಳ ಬಗೆಗೆ ಅವರು ಊಹಿಸಿದ್ದೇ ಸತ್ಯ!  

ಅಯ್ಯಾ ಮಹಾಜನಗಳೇ, ಉಪಕಥೆಯೊಂದನ್ನು ಕೇಳುವಂಥವರಾಗಿ: ಒಂದಾನೊಂದು ಕಾಲದಲ್ಲಿ ಕೆಂಪೇಗೌಡ ಕಟ್ಟಿಸಿದ ಈ ಬೆಂದಕಾಳೂರಿನ ಪ್ರದೇಶವೊಂದರಲ್ಲಿ, ಗಣಕಯಂತ್ರವನ್ನು ಮನೆಯಲ್ಲೇ ಇಟ್ಟುಕೊಂಡು ಅಕೌಂಟ್ಸ್ ಮಾಡಿಕೊಡುತ್ತಿದ್ದ ಬ್ರಹ್ಮಚಾರಿಯೊಬ್ಬನ ಮನೆಗೆ ಅವನ ರೂಮ್ ಮೇಟ್ ಆಗಿರುವ ವ್ಯಕ್ತಿಯ ತಂದೆ ಹಳ್ಳಿಯಿಂದ ಬಂದಿದ್ದರು. ರಾತ್ರಿಯ ಊಟವೆಲ್ಲಾ ಮುಗಿದು ಹಳ್ಳಿಯಕಡೆಗಿನ ಸುದ್ದಿಗಳು-ಲೋಕಾಭಿರಾಮವಾಗಿ ಹರಿದು, ಇನ್ನೇನು ಮಲಗಬೇಕು ಎಂಬ ಹೊತ್ತಿಗೆ, ಅಗೋ ಕಂಡಿತು: ಪೊಲ್ಲಂಬಲಮೇಡುವಿನಲ್ಲಿ ದಿವ್ಯಜ್ಯೋತಿ!! ಹಳ್ಳಿಯಿಂದ ಬಂದಿದ್ದ ವ್ಯಕ್ತಿ ಎಲೆಯಡಿಕೆ ಹಾಕಿಕೊಂಡು ತನ್ನ ಗೊರಗೊರ ಮಾತಿನಲ್ಲೇ ಮಗನಲ್ಲಿ ಕೇಳಿದರು:"ತಮ್ಮಾ, ಅದ್ಯಾಕ ಅಂವ ಅಲ್ಲಿ ಒಬ್ಬನೇ ಟಿವಿ ನೋಡ್ತಾನಲ?" ಹಳ್ಳಿಯಾತ ’ಟಿವಿ’ ಎಂದು ಹೇಳಿದ್ದು ಯಾವುದಕ್ಕೆ ಗೊತ್ತೇ? ಅಕೌಂಟ್ಸ್ ಮಾಡುತ್ತಿದ್ದ ಬ್ರಹ್ಮಚಾರಿ ಇನ್ನೊಂದು ಕೋಣೆಯಲ್ಲಿ ಗಣಕಯಂತ್ರ ಹಚ್ಚಿಕೊಂಡು[ಆಗ ಕಲರ್ ಮಾನಿಟರ್ ಇರಲಿಲ್ಲ, ಬ್ಲಾಕ್ ಅಂಡ ವ್ಹೈಟ್ ಅಥವಾ ಎಸ್.ವಿ.ಜಿ.ಏ ಮೊನೊಕ್ರೋಮ್ ಮಾನಿಟರ್ ಬಳಕೆಯಲ್ಲಿತ್ತು]ಮಾನಿಟರ್ ನೋಡಿಕೊಂಡು ಕೆಲಸಮಾಡುತ್ತಿದ್ದುದನ್ನು ಕಂಡು!! ಅಂದಿನವರೆಗೆ ಗಣಕಯಂತ್ರವನ್ನು ಚಿತ್ರದಲ್ಲೂ ಸರಿಯಾಗಿ ಗಮನಿಸಿರದ ಹಳ್ಳಿಯ ವ್ಯಕ್ತಿಗೆ ಮಾನಿಟರ್ ಎಂಬ್ದು ಟಿವಿಯಂತೇ ಗೋಚರವಾಗಿತ್ತು. ಇಂತಹ ತಮಾಷೆಯ ಪ್ರಸಂಗಗಳು ಒಂದೆರಡಲ್ಲ.        

ಗಣಕಯಂತ್ರಗಳು ಬಳಕೆಗೆ ಬಂದ ಹೊಸದರಲ್ಲಿ, ಮಹಾನಗರದಲ್ಲಿ ನಾನು ನೋಡಿದ ಅನೇಕ ಅಪ್ಪ-ಅಮ್ಮಂದಿರಿಗೆ ತಮ್ಮ ಮಕ್ಕಳಿಂದ ಕಂಪ್ಯೂಟರ್ ಹೇಳಿಸಿಕೊಳ್ಳಲು ಮರ್ಯಾದೆಯಾಗುತ್ತಿತ್ತು, ಕಲಿಕಾಕೇಂದ್ರಗಳಿಗೆ ಹೋದರೆ ಅಲ್ಲಿ ಪಕ್ಕದಲ್ಲಿರುವ ಜ್ಯೂನಿಯರ್ ಗಳ ಜೊತೆ ನಮ್ಮ ಸೀನಿಯರ್ ಮಂದಿಗೆ ಕೂತು ಕಲಿಯಲು ಒಂಥರಾ ಮುಜುಗರವಾಗುತ್ತಿತ್ತು. ರಾತ್ರಿಶಾಲೆಯಲ್ಲಿ ಅಕ್ಷರ ಕಲಿಯುವವರಲ್ಲಿರುವ ಮುಖಭಾವ ಹೊತ್ತು ಅಳುಕುತ್ತಲೇ ಕೀಬೋರ್ಡು ಅದುಮಿದವರು-ಆ ನಮ್ಮ ಸೀನಿಯರುಗಳು. ಹಳೆಯ ಸಿನೆಮಾವೊಂದರಲ್ಲಿ ಇರುಳುಗಣ್ಣನ ಪಾತ್ರದಲ್ಲಿ ನಟ ದಿನೇಶ್ "ಆ ಒಂದು ಆ ಎರಡು ಆ ಮೂರು" ಎಂದುಕೊಳ್ಳುತ್ತಾ ಕೂರಲುಹೋಗಿ ಜಾರಿಬೀಳುವ ಸನ್ನಿವೇಶದಂತೇ, ಬಳಕೆಯ ಕ್ರಮ ಪಕ್ಕಾ ಗೊತ್ತಾಗದಿದ್ದರೂ ಗೊತ್ತಾಯ್ತೆಂದು ಬಾಯ್ತುಂಬ ಹಲಬುತ್ತಲೇ ಇರುತ್ತಿದ್ದವರು ಹಲವರು! ಕಚೇರಿಗಳಲ್ಲಿ ಅದಾಗತಾನೇ ಒಂದೊಂದೋ ಎರಡೆರಡೋ ಬಂದು ಕುಂತಿದ್ದ ಗಣಕಯಂತ್ರಗಳನ್ನು ಕಂಡರೆ, ಸರ್ಕಸ್ಸಿನ ಹುಲಿಗೆ ರಿಂಗ್ ಮಾಸ್ಟರ್ ಕಂಡಾಗ ಉಂಟಾಗುವ ಅಸಹಾಯ ಭಾವ ನಮ್ಮ ಸೀನಿಯರುಗಳಲ್ಲಿ! ಗಣಕಯಂತ್ರ ಯಾರಾದರೂ ಚಾಲೂಮಾಡಿಕೊಳ್ಳಲಿ ಎಂದುಕೊಂಡು ನೋಡಿಯೂ ನೋಡದಂತೇ ದೂರನಿಲ್ಲುತ್ತಿದ್ದವರು ಕೆಲವರಾದರೆ, ಚಾಲೂ ಮಾಡಿದಮೇಲೆಯೇ ತಲುಪಬೇಕೆಂಬ ಧೋರಣೆಯಿಂದ ಹತ್ತು ನಿಮಿಷ ತಡವಾಗೇ ಕಚೇರಿಗೆ ಬರುತ್ತಿದ್ದವರು ಇನ್ನೂ ಕೆಲವರು.

ಇಂಥಾ ಕಾಲಘಟ್ಟದಲ್ಲಿ, ಇಂದಿನ ಇನ್ಫೋಸಿಸ್ಸಿನ ನಾರಾಯಣ ಮೂರ್ತಿಗಳು, "ಸಾಫ್ಟ್ ವೇರ್ ಕಂಪನಿ ಮಾಡುವುದಕ್ಕೆ ಸಾಲಕೊಡಿ" ಎಂದು ಬ್ಯಾಂಕುಗಳಿಗೆ ಹೋದಾಗ, [ಸಾರಿ, ಆಗ ’ಸಾಫ್ಟ್ ವೇರ್’ ಎಂಬ ಪದ ಇನ್ನೂ ಕನ್ನಡೀಕೃತವಾಗಿರಲಿಲ್ಲ.] "ಸಾಫ್ಟ್ ವೇರ್ ಎಂದರೇನು?" ಎಂಬ ಬ್ಯಾಂಕಿನವರ ಪ್ರಶ್ನೆಗೆ ನಾರಾಯಣ ಮೂರ್ತಿಗಳು ತಮ್ಮ ಅಷ್ಟೂ ಎನರ್ಜಿಯನ್ನು ಉಪಯೋಗಿಸಿ ವಿವರಿಸಿದರೂ, ಬ್ಯಾಂಕಪ್ಪಗಳ ’’ಟ್ಯೂಬ್ ಲೈಟ್’’ ಹತ್ತಲೇ ಇಲ್ಲ! ಕಣ್ಣಿಗೆ ಕಾಣದ ಯಾವುದನ್ನೋ ‘ಸಾಫ್ಟ್ ವೇರ್’ ಎನ್ನುತ್ತಾ ಬಂದರೆ ಅವರಾದರೂ ಹೇಗೆ ಒಪ್ಪಬೇಕು ಪಾಪ! ನಮ್ಮದೇ ಅಕೌಂಟಿನಲ್ಲಿ ನಮ್ಮದೇ ಹಣ ಕಣ್ಣಿಗೆ ಕಂಡರೂ ಕೊಡುವಮೊದಲು ಹತ್ತತ್ತು ಸರ್ತಿ ಪರಾಂಬರಿಸಿ ನೋಡುವ ಜನ ಅವರು-ಹಣಕಾಸಿನ ವ್ಯವಹಾರ ನೋಡಿ, ಸುಲಭವಲ್ಲ! ಕಣ್ಣಿಗೆ ಕಾಣದ ವ್ಯವಹಾರ ಎಂದಮೇಲೆ ಏನೋ ಗಿಲ್ಮಿಟ್ಟು ಇರಲೇಬೇಕು ಎಂದುಕೊಂಡ ಬ್ಯಾಂಕಪ್ಪಗಳು "ಮಿಸ್ಟರ್ ಮೂರ್ತಿ, ವಿ ಆರ್ ಸಾರಿ" ಎಂದು ಕೈಚೆಲ್ಲಿದಾಗ ನಾರಾಯಣ ಮೂರ್ತಿಗಳು ಕೈಕೈ ಹೊಸಕಿಕೊಂಡು ಹೊರಬರಬೇಕಾಯ್ತು. ದಶಕಗಳ ನಂತರ ಇದೇ ನಾರಾಯಣಮೂರ್ತಿಗಳು ಅಂತಹ ಬ್ಯಾಂಕುಗಳಿಗೇ ಬ್ಯಾಂಕಿಂಗ್ ಸಾಫ್ಟ್ ವೇರ್ ಮಾಡಿಸಿಕೊಟ್ಟಾಗಲಾದರೂ ’ಸಾಫ್ಟ್ ವೇರ್ ಎಂದರೇನು’  ಎಂಬುದಕ್ಕೆ ಬ್ಯಾಂಕಪ್ಪಗಳಿಗೆ ಉತ್ತರ ಸಿಕ್ಕಿತೋ ಇಲ್ಲವೋ ದೇವರಾಣೆ ನನಗಂತೂ ಗೊತ್ತಿಲ್ಲ! ಆದರೆ, ಅದಾಗಲೇ ಮೂರ್ತಿಗಳ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಸಾವಿರಾರು ಎಂಜಿನೀಯರುಗಳಿಗೆ ಬಹುರಾಷ್ಟ್ರೀಯ ಬ್ಯಾಂಕುಗಳು ಸಾಲನೀಡಿದ್ದವು ಎಂಬುದು ನಿಮ್ಮಾಣೆಗೂ ಸತ್ಯ.            

ಬ್ಯಾಂಕುಗಳು ಸಾಫ್ಟ್ ವೇರ್ ಮಾಡಿಸಿಕೊಂಡಿದ್ದು ನಿಜ. ಬಳಕೆ ಆರಂಭಗೊಂಡಿದ್ದೂ ನಿಜ. ಆದರೆ ತಂತ್ರಾಂಶ ಅಳವಡಿಸಿಕೊಂಡ ಕೆಲವು ಬಹುರಾಷ್ಟ್ರೀಯ ಬ್ಯಾಂಕುಗಳು ಗಿರಾಕಿಗಳನ್ನು ಆಕರ್ಷಿಸಲು,  ಕೋರ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಎ.ಟಿ.ಎಂ ಮೊದಲಾದ ಸವಲತ್ತುಗಳನ್ನು ಆರಂಭಿಸಿಯೇಬಿಟ್ಟವು. ಸೌಲಭ್ಯವಂಚಿತರಾಗುತ್ತೇವೆ ಎನಿಸಿದರೆ ಗಿರಾಕಿಗಳು ಬರದೇ ಉಳಿದಾರು ಎಂದುಕೊಂಡ ಭಾರತೀಯ ಬ್ಯಾಂಕುಗಳೂ ಕೂಡ ಅಂತಹ ಸವಲತ್ತುಗಳನ್ನು ಕೊಡುವಲ್ಲಿ ತಯಾರಾದವು. ಸಂಬಂಧಿತ ಯಂತ್ರೋಪಕರಣಗಳೆಲ್ಲಾ ಪ್ರತಿಷ್ಠಾಪಿತವಾಗಿ ವ್ಯವಹಾರ ಆರಂಭಗೊಂಡಮೇಲೆ ಕೆಲವರ ಅಕೌಂಟ್ ’ಹ್ಯಾಕ್’ ಆಗಿದ್ದುದು ತಿಳಿದುಬಂತು. ಭಾರೀಮೊತ್ತವಿದ್ದ ಅಕೌಂಟಿನಲ್ಲಿ ಹಣವೇ ಇಲ್ಲದಿರುವುದು ಅಥವಾ ಹಣ ಕಡಿಮೆ ಆಗಿರುವುದು ಕಂಡುಬಂತು. ಆಗಲೇ ಗೊತ್ತಾಗಿದ್ದು ಬ್ಯಾಂಕಿಂಗ್ ಸಾಫ್ಟ್ ವೇರ್ ಗಳಲ್ಲೇ ತೊಂದರೆ ಇದೆ ಎಂಬುದು! ಸಾಫ್ಟ್ ವೇರ್ ತಂತ್ರಜ್ಞರನ್ನು ಕರೆಸಿ ಕೇಳಿದಾಗಲೇ, ’ಹ್ಯಾಕಿಂಗ್’ ಎಂಬ ಪದ ಮತ್ತು ಪ್ರಕ್ರಿಯೆಗಳ ಬಗ್ಗೆ ಮೊದಲಾಗಿ ತಿಳಿದಿದ್ದು. ಹಾಗಾದರೆ ಹ್ಯಾಕಿಂಗ್ ಎಂದರೇನು ಎಂಬ ಅವರ ಪ್ರಶ್ನೆಗೆ ತಂತ್ರಜ್ಞರು ವಿವರಿಸಿ ಹೇಳಿದರು.                     

’ಹ್ಯಾಕಿಂಗ್’ ಎಂದರೆ ಅತಿಕ್ರಮಣವಿದ್ದಂತೆ. ಅನುಮತಿಯಿಲ್ಲದೇ, ಕಳ್ಳತನದಿಂದ ಇನ್ನೊಬ್ಬರ ಖಾತೆಯನ್ನು ಬಳಸಿ ಲಾಭ ಪಡೆಯುವುದು ಹ್ಯಾಕಿಂಗ್ ಎನಿಸುತ್ತದೆ. ಅದು ಇಮೇಲ್ ಖಾತೆಯಿರಬಹುದು, ಬ್ಯಾಂಕ ಖಾತೆಯಿರಬಹುದು ಅಥವಾ ಇನ್ನಿತರ ಸಾಮಾಜಿಕ ತಾಣಗಳಲ್ಲಿನ ಖಾತೆಯಿರಬಹುದು. ಹ್ಯಾಕಿಂಗ್ ಬಗ್ಗೆ ಜಾಸ್ತಿ ತೆಲೆಕೆಡಿಸಿಕೊಳ್ಳುವುದೆಲ್ಲಪ್ಪಾ ಅಂದರೆ ಬ್ಯಾಂಕ್ ಖಾತೆಗಳು ಹ್ಯಾಕ್ ಆದಾಗ! ಮಾಹಿತಿತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಾ ನಡೆದಾಗ, ತಮ್ಮ ಕಚೇರಿಗಳಲ್ಲಿನ ಸರದಿಯ ಸಾಲನ್ನು ಕಮ್ಮಿಗೊಳಿಸಲು ’ನೆಟ್ ಬ್ಯಾಂಕಿಂಗ್’ ಎಂಬ ಸೌಲಭ್ಯವನ್ನು ಬ್ಯಾಂಕುಗಳು ಕೊಡಮಾಡಿದವು. ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳುತ್ತಾ ಆನ್ ಲೈನ್ ನಲ್ಲಿ ಕೆಲಸಮಾಡುತ್ತಿರುವ ಜನರಬಗೆಗೆ ಮಾಹಿತಿ ಕಲೆಹಾಕುವ ಹ್ಯಾಕರ್ ಗಳು ತಯಾರಾಗೇಬಿಟ್ಟರು. ಜೊತೆಗೆ ಮ್ಯಾಗ್ನೆಟಿಕ್ ಕೋಡ್ ಇರುವ ಸ್ವೈಪಿಂಗ್ ಕಾರ್ಡ್ [ಕ್ರೆಡಿಟ್, ಡೆಬಿಟ್ ಕಾರ್ಡ್]ಗಳಲ್ಲಿನ ಇಲೆಕ್ಟ್ರಾನಿಕ್ ಚಿಪ್ ಗಳಲ್ಲಿ ಅಡಕವಾಗಿರುವ ಮಾಹಿತಿಗಳನ್ನು ಕಲೆಹಾಕುವ ಕೆಲಸ ಅಲ್ಲಲ್ಲಿ ನಡೆಯಿತು. ಅಂತಹ ಕಳ್ಳರೇ ಸೇರಿಕೊಂಡು ಹ್ಯಾಕ್ ಮಾಡುವ ಬಗ್ಗೆ ತರಬೇತಿ ನೀಡುವುದಕ್ಕೇ ಕೆಲವು ಜಾಲತಾಣಗಳನ್ನು ಆರಂಭಿಸಿದರು.  ಸಂಗ್ರಹಿಸಿದ ಮಾಹಿತಿಗಳ ಮೂಲಕ ನಕಲೀ ಕಾರ್ಡುಗಳನ್ನು ತಯಾರಿಸಿ ಬಳಸುವ ಮಟ್ಟಕ್ಕೆ ಹ್ಯಾಕರ್ಸ್ ಪಡೆಗಳು ತಯಾರಾದವು. ಕಾರ್ಡುಗಳ ಬಳಕೆದಾರರ ಜೊತೆಗೆ ಬ್ಯಾಂಕುಗಳ ಆಡಳ್ತೆಗಳಿಗೂ ಅಂತಹ ಹ್ಯಾಕರ್ ಗಳು ದುಃಸ್ವಪ್ನವಾಗಿ ಕಾಡಿದರು. ಅಂತಹ ಹ್ಯಾಕರ್ಸ್ ಗಳನ್ನು ನಿಭಾಯಿಸಲು ಬ್ಯಾಂಕ್ ಆಡಳ್ತೆಗಳೂ ಮತ್ತು ಮಾಹಿತಿ ತಂತ್ರಜ್ಞಾನಕ್ಷೇತ್ರಗಳವರೂ ಚಿಂತನಮಂಥನ ನಡೆಸಿದರು.

ವಿಪರ್ಯಾಸವೆಂದರೆ ಯಾರು ಮಾಹಿತಿ ತಂತ್ರಜ್ಞಾನವನ್ನು ಬಲ್ಲವರೋ ಅಂಥವರಲ್ಲೇ ಕೆಲವು ದುಷ್ಟರು ಹ್ಯಾಕರ್ಸ್ ಗಳಾಗಿದ್ದರು. ಅವರನ್ನು ನಿಭಾಯಿಸುವುದು ಮನೆಯೊಳಗೆ ಹೊಕ್ಕ ಇಲಿಯನ್ನು ನಿಭಾಯಿಸಿದಂತೇ ಆಗಿತ್ತು; ಇಲಿಗಾದರೂ ತನ್ನನ್ನು ಹಿಡಿಯುತ್ತಾರೋ ಹೊಡೆಯುತ್ತಾರೋ ಎಂಬ ಮುಂದಿನ ಬೆಳವಣಿಗೆಗಳ ಬಗೆಗಿನ ಮಾಹಿತಿ ಸಿಗುವುದಿಲ್ಲ, ಆದರೆ ಇಲ್ಲಿ ಹಾಗಲ್ಲ! ಹ್ಯಾಕರ್ಸ್ ವಿರುದ್ಧ ಜನಿಸುವ ಬ್ರಹ್ಮಾಸ್ತ್ರಗಳ ಬಗೆಗೆ  ಪ್ರತಿನಿತ್ಯದ, ಪ್ರತೀಹಂತದ ಮಾಹಿತಿ ಹ್ಯಾಕರ್ಸ್ ಗಳಿಗೆ ರವಾನೆಯಾಗುತ್ತಿತ್ತು! ಯಾರು ಗೂಢಚಾರರು, ಯಾಹು ಬೇಹುಗಾರಿಕೆಯವರು ಮತ್ತು ಯಾರು ಸಂಭಾವಿತರು ಎಂದು ಗುರುತಿಸುವುದೇ ಬಹಳ ತ್ರಾಸದಾಯಕ ಕೆಲಸವಾಗಿತ್ತು. ಅಂತಹ ಸನ್ನಿವೇಶದಲ್ಲಿ, ಜಾಗತಿಕ ಮಟ್ಟದಲ್ಲಿ ಹಾರ್ಡ್ ವೇರ್ ತಯಾರಕ ಸಂಸ್ಥೆಯಾಗಿ ಕಂಪ್ಯೂಟರನ್ನು ಜನಪ್ರಿಯಗೊಳಿಸಿದ ’ಐಬಿಎಂ’ ಸಂಸ್ಥೆ ’ಎಥಿಕಲ್ ಹ್ಯಾಕಿಂಗ್’ ಎಂಬ ಹೊಸಮಾರ್ಗವನ್ನು ಕಂಡುಕೊಂಡಿತು. ದುರ್ಬಲವಾದ ಶರೀರದಲ್ಲಿ ವೈರಾಣುಗಳು ಪ್ರವೇಶಿಸಿ ಬಹುಬೇಗ ತಮ್ಮ ಅಸ್ತಿತ್ವವನ್ನು ಸ್ಥಾಪಿಸುತ್ತವೆ ಹೇಗೋ ಹಾಗೆಯೇ ದುರ್ಬಲವಾದ ತಂತ್ರಾಂಶದಲ್ಲಿ ಹ್ಯಾಕರ್ಸ್ ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬ ತೀರ್ಮಾನಕ್ಕೆ ಬಂದ ’ಐಬಿಎಂ’ ಸಂಸ್ಥೆಯ ತಜ್ಞರು ತಂತ್ರಜ್ಞಾನದ ದೌರ್ಬಲ್ಯವನ್ನು ಪತ್ತೆ ಹಚ್ಚುವುದಕ್ಕಾಗಿ ತಮ್ಮಲ್ಲೇ ಕೆಲವರು, ಬಳಕೆದಾರರ ಪರವಾನಗಿಯನ್ನು ಪಡೆದುಕೊಂಡು, ಪರೀಕ್ಷಾರ್ಥವಾಗಿ ಹಾರ್ಡ್ ವೇರ್ ಮತ್ತು ತಂತ್ರಾಂಶಗಳ ಹ್ಯಾಕಿಂಗ್ ನಡೆಸಲು   ಪ್ರಯತ್ನಿಸಿದರು.    

’ಎಥಿಕಲ್ ಹ್ಯಾಕಿಂಗ್’ ಎಂಬ ಕಾರ್ಯ ಹ್ಯಾಕಿಂಗಿನ ಅಣುಕು. ಅದು ತಂತ್ರಾಂಶ ತಯಾರಕರ ಅಥವಾ ಬಳಕೆದಾರರ ಅನುಮತಿಯನ್ನು ಪಡೆದು ನಡೆಸುವಂತಹ ಕಾರ್ಯ. ಯಾವೆಲ್ಲಾ ರೀತಿಯಿಂದ ಹ್ಯಾಕಿಂಗ್ ನಡೆಸಲು ಸಾಧ್ಯವೋ ಅಷ್ಟೂ ವಿಧಗಳಲ್ಲಿ ಗಣಕಯಂತ್ರಗಳನ್ನು ಪರೀಕ್ಷೆಗೆ ಒಡ್ಡುವುದು ಎಥಿಕಲ್ ಹ್ಯಾಕಿಂಗ್. ಎಥಿಕಲ್ ಹ್ಯಾಕಿಂಗ್ ನಡೆಸುವ ನಿಪುಣ, ಒಮ್ಮೆ ಹ್ಯಾಕ್ ಮಾಡಿನೋಡಿ ಮತ್ತೆ ತಾನು ಹ್ಯಾಕ್ ಮಾಡಿದ ಯಂತ್ರಕ್ಕೋ ತಂತ್ರಾಂಶಕ್ಕೋ ಹ್ಯಾಕ್ ಮಾಡಿದ್ದು ಗೊತ್ತಾಗದಂತೇ ತೇಪೆಹಾಕುತ್ತಾನೆ. ಯಾವುದೇ ವಿಧದಲ್ಲೂ ಹ್ಯಾಕ್ ಮಾಡಲು ಬರುತ್ತಿಲ್ಲವೆಂದಾದರೆ ತಂತ್ರಾಂಶ ಚೆನ್ನಾಗಿದೆ ಎಂದು ತಿಳಿಯಬಹುದು. ಹಾರ್ಡ್ ವೇರಿಗೆ ಸಂಬಂಧಿಸಿದಂತೇ ಅದರ ಸಂಪೂರ್ಣ ನಿಗ್ರಹ ಸಾಧ್ಯವಾಗಿಲ್ಲವಾದರೂ, ಹ್ಯಾಕಿಂಗ್ ತಡೆಗಟ್ಟುವಲ್ಲಿ-ಗಣನೀಯ ಪ್ರಮಾಣದಲ್ಲಿ ಎಥಿಕಲ್ ಹ್ಯಾಕಿಂಗ್ ಎಂಬ ಕಾರ್ಯ ಸಹಾಯಮಾಡಿದೆ. ಎಥಿಕಲ್ ಹ್ಯಾಕಿಂಗನ್ನು ಕರಗತಮಾಡಿಕೊಳ್ಳಲು ಕೆಲವು ನಿಯಮ-ನಿಬಂಧನೆಗಳು ಹೇಳಲ್ಪಟ್ಟಿವೆ.  ಬಳಕೆದಾರರು ತಮ್ಮ ಖಾಸಗೀ ಕಂಫ್ಯೂಟರನ್ನು ಹ್ಯಾಕ್ ಮಾಡಿನೋಡಲೂ ಎಥಿಕಲ್ ಹ್ಯಾಕಿಂಗ್ ನಿಪುಣರನ್ನು ಒಡಂಬಡಿಕೆಯ ಮೇಲೆ ಕರೆಯಿಸಿಕೊಳ್ಳಬಹುದಾಗಿದೆ. ಎಥಿಕಲ್ ಹ್ಯಾಕಿಂಗ್ ಮಾಡುವ ಮಂದಿ ಹ್ಯಾಕರ್ಸ್ ಆಗಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಉದಾಹರಣೆಗೆ ಎಥಿಕಲ್ ಹ್ಯಾಕಿಂಗ್ ನಿಪುಣರನ್ನು ಕರೆಸಿಕೊಂಡ ಬ್ಯಾಂಕೊಂದು ತನ್ನಲ್ಲಿನ ಕೆಲವು ಅಕೌಂಟುಗಳನ್ನು ಹ್ಯಾಕ್ ಮಾಡಲು ಪರವಾನಗಿ ನೀಡುತ್ತದೆ, ಹಾಗೊಮ್ಮೆ ಹ್ಯಾಕ್ ಮಾಡಲು ಸಾಧ್ಯವಾದರೆ ತಾನು ಬಳಸುವ ತಂತ್ರಾಂಶದಲ್ಲಿ ಸುರಕ್ಷತೆ ಸಾಲುತ್ತಿಲ್ಲ ಎಂಬುದು ಬ್ಯಾಂಕಿನ ಗಮನಕ್ಕೆ ಬರುತ್ತದೆ ಮತ್ತು ಬದಲಾಯಿಸಿಕೊಳ್ಳಲು ಅನುಕೂಲವಾಗುತ್ತದೆ. ಹ್ಯಾಕ್ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದಾದರೆ ತಂತ್ರಾಂಶ ಚೆನ್ನಾಗಿದೆ ಎಂದು ತಿಳಿದುಬರುತ್ತದೆ. ಈ ಚೆಕ್-ಅಪ್ ಸೇವೆಗೆ ಎಥಿಕಲ್ ಹ್ಯಾಕಿಂಗ್ ನಿಪುಣರಿಗೆ ಸೇವೆಪಡೆದುಕೊಂಡ ಬ್ಯಾಂಕಿನವರು ಸೇವಾಶುಲ್ಕ ನೀಡುತ್ತಾರೆ.     

ಹಾಗಾದರೆ ಹ್ಯಾಕಿಂಗ್ ಯಾವ ಯಾವ ಮಟ್ಟದಲ್ಲಿ ನಡೆಯುತ್ತದೆ ಎಂಬ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದರೆ ಒಳ್ಳೆಯದು. ಹ್ಯಾಕರ್ಸ್ ಗಳಲ್ಲಿ ಮೂರು ವಿಧ: 1.] ವ್ಹೈಟ್ ಹ್ಯಾಟ್ ಹ್ಯಾಟ್ ಹ್ಯಾಕರ್ಸ್, 2] ಗ್ರೇ ಹ್ಯಾಕರ್ಸ್ ಮತ್ತು 3]ಬ್ಲ್ಯಾಕ್ ಹ್ಯಾಟ್ ಹ್ಯಾಕರ್ಸ್. ಇವರ ಕಾರ್ಯವಿಧಾನಗಳು ಆರಂಭವಾಗುವ ಮೂಲವನ್ನು ಗಮನಿಸೋಣ: ಗಣಕಯಂತ್ರ ಮಾನವ ನಿರ್ಮಿತವೇ ಆಗಿರುವುದರಿಂದ, ಅದರ ಕಾರ್ಯಾರಂಭ ನಿಗದಿತ ರೀತಿಯಲ್ಲಿ ನಡೆಯುತ್ತದೆ. ಆನ್ ಮಾಡಿದಾಗ ಇಂತಿಂಥಾ ಮಾಹಿತಿ ಇಂತಿಂಥಾ ಜಾಗಗಳಿಗೆ ರವಾನೆ ಆಗಬೇಕೆಂಬುದು ಮೊದಲೇ ಫೀಡ್ ಆಗಿರುತ್ತದೆ. ಅಗತ್ಯವಾದ ಆರಂಭಿಕ ಮಾಹಿತಿ ರವಾನೆಯಾಗುವ ಜಾಗವನ್ನೇ ಹ್ಯಾಕರ್ಸ್ ಗಳು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳುತ್ತಾರೆ. ಗಣಕಯಂತ್ರದ ಮಾಹಿತಿಯಲ್ಲಿ ಪ್ರಮುಖವಾಗಿ ಎರಡು ಭಾಗಗಳು: ಒಂದು ಡಾಟಾ ಇನ್ನೊಂದು ಸಂಜ್ಞೆ[ಇನಸ್ಟ್ರಕ್ಷನ್]. ಈ ಮಾಹಿತಿ ಬೈನರಿ ಭಾಷೆಯ ಒಂದೊಂದೇ ’ಬಿಟ್’[ಬೈನರಿ ಅಂಕೆ]ಗಳ ಮೂಲಕ ವರ್ಗಾವಣೆಗೊಳ್ಳುತ್ತದೆ. ಉದಾಹರಣೆಗೆ: ಒಂದು ಗಣಕಯಂತ್ರದಲ್ಲಿರುವ ಆರಂಭಿಕ ಸ್ಥಿರಮಾಹಿತಿಯ ಪ್ರಕಾರ, ಮೊದಲನೇ ಸರ್ತಿ 8ಬಿಟ್ ಡಾಟಾ ಮತ್ತು 2ಬಿಟ್ ಸಂಜ್ಞೆಗಳನ್ನು ಮತ್ತು ಎರಡನೇ ಸರ್ತಿ ಉಳಿದ 8ಬಿಟ್ ಡಾಟಾ ಮತ್ತು 2ಬಿಟ್ ಸಂಜ್ಞೆಗಳನ್ನು ಮುಂದಿನಕಾರ್ಯಕ್ಷೇತ್ರಕ್ಕೆ ಲಭ್ಯವಾಗುವಂತೇ ಪ್ರಧಾನ ನೆನಪಿನ ಕೋಶಗಳಿಗೆ[ಮೇನ್ ಮೆಮೊರಿ] ವರ್ಗಾವಣೆಗೊಳಿಸಬೇಕಾಗಿರುತ್ತದೆ.

8ಬಿಟ್ ಡಾಟಾ ಬದಲಿಗೆ 9ಬಿಟ್ ಅಥವಾ 10ಬಿಟ್ ಡಾಟಾ ಕಳಿಸಲು ಹ್ಯಾಕರ್ಸ್ ಆಗಿರುವವರು ಪ್ರಯತ್ನಿಸುತ್ತಾರೆ! ಗಣಕಯಂತ್ರಕ್ಕೆ ಸರಿಯಾದ ಸಮಯಕ್ಕೆ ಸಮರ್ಪಕವಾದ ಡಾಟಾ ಮತ್ತು ಸಂಜ್ಞೆ ಸಿಗದ ಕಾರಣ "ಮುಂದೇನು?"-ಎಂಬುದನ್ನು ಚಿಂತಿಸಲೂ ಆಗದೇ ಗಣಕಯಂತ್ರ ತನ್ನ ಕೆಲಸದಗತಿಯನ್ನು ನಿಲ್ಲಿಸಿ ’ಆಪರೇಟಿಂಗ್ ಸಿಸ್ಟಮ್’ ಎಂಬ ತಂತ್ರಾಂಶದ ಸಲಹೆಯನ್ನು ಪಡೆಯಲು ಮುಂದಾಗುತ್ತದೆ. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ ’ಬಫರ್ ಓವರ್ ಫ್ಲೋ’ ಎಂದು ಕರೆಯುತ್ತಾರೆ. ನುಸುಳುಕೋರರಿಗೆ ಗಡಿಯಲ್ಲಿ ಅವಕಾಶ ಸಿಕ್ಕಿ ಅವರು ಒಳನುಗ್ಗಿ ಕೆಲವು ಪ್ರದೇಶಗಳನ್ನೋ ವಸಾಹತುಗಳನ್ನೋ ವ್ಯಾಪಿಸಿಕೊಂಡು ತಾತ್ಕಾಲಿಕವಾಗಿ ಅಧಿಕಾರ ಚಲಾಯಿಸಿದಂತೇ, ಹ್ಯಾಕರ್ಸ್ ಗಳು ಗಣಕಯಂತ್ರಗಳಲ್ಲಿ ಇಂಥಾದ್ದೇ ಅವಕಾಶಕ್ಕಾಗಿ ಕಾಯುತ್ತಾರೆ. ಮುಂದಿನ ಸಂಜ್ಞೆಗಳನ್ನು ತಮಗೇ ಬೇಕಾದ ರೀತಿಯಲ್ಲಿ ಕೊಡತೊಡಗುವುದರಿಂದ ಗಣಕಯಂತ್ರ ಅವರ ಸಂಜ್ಞೆಗಳಂತೇ ವರ್ತಿಸುತ್ತದೆ.

ದಿನಗಟ್ಟಲೇ ಕುಳಿತು ಹೇಗಾದರೂ ಮಾಡಿ ಗಣಕಯಂತ್ರಗಳನ್ನು ಹಾಳುಗೆಡಹುವುದು ’ವ್ಹೈಟ್ ಹ್ಯಾಟ್ ಹ್ಯಾಕರ್ಸ್’ ಎಂಬ ಮಾದರಿಯ ಹ್ಯಾಕರುಗಳ ಕಾರ್ಯವೈಖರಿಯಾದರೆ, ಗ್ರೇ ಹ್ಯಾಟ್  ಹ್ಯಾಕರ್ಸ್ ಎಂಬ ಗುಂಪು ಕೂಡ ಹೀಗೇ ಮಾಡುವ ಮೂಲಕ ಹೊಸ ಹೊಸ ದಾರಿಯಲ್ಲಿ ಯಂತ್ರಗಳನ್ನು ಕೆಡಿಸಲು ನೋಡುತ್ತದೆ ಮತ್ತುಅದರಿಂದ ತನಗೆ ಆದಾಯ ಬರುವಂತೇ ನೋಡಿಕೊಳ್ಳುತ್ತದೆ. ಇನ್ನೊಬ್ಬರ ಪರವಾಗಿ ಯಂತ್ರಗಳನ್ನು ಕೆಡಿಸುವಂತಹ ಕೆಲಸಗಳನ್ನು ಮಾಡುವ ಈ ಗುಂಪು ಯಾರು ಯಂತ್ರಗಳನ್ನು ಹಾಳುಮಾಡಲು ಹೇಳುತ್ತಾರೋ ಅವರಿಂದ ’ಸುಪಾರಿ’ ಪಡೆಯುತ್ತದೆ! ಇಷ್ಟೇ ಅಲ್ಲದೇ ಹ್ಯಾಕ್ ಮಾಡುವ ಯಂತ್ರಗಳಿಂದ ಹೆಚ್ಚಿನ ಆರ್ಥಿಕ ಸಂಪತ್ತು ತಮಗೆ ದೊರೆಯುತ್ತದೋ ಎಂದೂ ಪರಿಶೀಲಿಸುತ್ತದೆ. ಗಣಕಯಂತ್ರಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಆರ್ಥಿಕ ಲಾಭ ಪಡೆಯುವುದರೊಟ್ಟಿಗೆ ಯಾವಯಾವ ಯಂತ್ರಗಳನ್ನು ಹೇಗೆ ಹೇಗೆ ಹ್ಯಾಕ್ ಮಾಡಬೇಕೆಂಬ ’ಕೋಡ್’ಗಳನ್ನು ಬರೆದುಕೊಟ್ಟು ಹಣಗಳಿಸುವುದು ಬ್ಲ್ಯಾಕ್ ಹ್ಯಾಟ್ ಹ್ಯಾಕರ್ಸ್ ಗಳ ದಾರಿಯಾಗಿದೆ. ಮೂರೂ ಗುಂಪುಗಳ ಸಾಮಾನ್ಯ ಉದ್ದೇಶ ಒಂದೇ: ಯಂತ್ರಗಳನ್ನು ಹ್ಯಾಕ್ ಮಾಡುವುದು. ಹ್ಯಾಕ್ ಮಾಡಿದ ಯಂತ್ರಗಳಿಂದ ಲಭಿಸುವ ಮಾಹಿತಿಗಳನ್ನಾಧರಿಸಿ ಅವರ ಮುಂದಿನ ಕೆಲಸಗಳು ನಿರ್ಧಾರವಾಗುತ್ತವೆ. ಈ ಮೂರೂ ಗುಂಪುಗಳ ಕೆಲಸ ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ. ಇಂತಹ ಅಪರಾಧಿಗಳು ಸಿಕ್ಕಿಬಿದ್ದಲ್ಲಿ ಕನಿಷ್ಠ ಎರಡು ವರ್ಷಗಳ ಜೈಲುವಾಸ ಮತ್ತು ದಂಡ ಅಥವಾ ಗರಿಷ್ಠ ಹತ್ತುವರ್ಷಗಳ ಸೆರೆವಾಸ ಮತ್ತು ಜುಲ್ಮಾನೆಯನ್ನು ವಿಧಿಸಲಾಗುತ್ತದೆ.      

ಒಟ್ಟಾರೆಯಾಗಿ ಹೇಳಬೇಕೆಂದರೆ ಹ್ಯಾಕಿಂಗ್ ಎಂಬುದು ಹೈಜಾಕಿಂಗ್ ಆಫ್ ಕಂಪ್ಯೂಟರ್ ಆಪರೇಶನ್ಸ್. ಹ್ಯಾಕಿಂಗ್ ನಡೆಸುವ ಮಂದಿ ಸದಾ ಆನ್ ಲೈನ್ ನಲ್ಲೇ ಗಾಳಬಿಟ್ಟುಕೊಂಡು ಕೂತುಕೊಳ್ಳುತ್ತಾರೆ! ಮೊಬೈಲುಗಳ ಮೂಲಕ, ಇಮೇಲ್ ಗಳ ಮೂಲಕ ಹಲವಾರು ಜನರಿಗೆ ಆಕರ್ಷಕ ಸಂದೇಶ ಕಳುಹಿಸಿ, ಅವರೆಲ್ಲರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ’ಪುಕ್ಕಟ್ಟೆಯಾಗಿ ಲಾಟರಿ ಹೊಡೆದಿದೆ’ ಎಂದರೆ ಬಿಡಲಾರದ ಕಡುಲೋಭಿಗಳು ಅಂಥವರಿಗೆ ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಯಾರಿಗೂ ತಿಳಿಯದಂತೇ ಗುಪ್ತವಾಗಿ ಕಳಿಸುತ್ತಾರೆ! ಲೋಭಿಗಳ ಅಥವಾ ಜಾಸ್ತಿ ಹಣಮಾಡಿಕೊಳ್ಳುವವರ/ ಹಣದ್ವಿಗುಣ ಮಾಡಿಕೊಳ್ಳಬಯಸುವರ ಬ್ಯಾಂಕ್ ಖಾತೆಗಳ ಮಾಹಿತಿ ತಮಗೆ ದೊರೆಯುತ್ತಲೇ ಹ್ಯಾಕರ್ಸ್ ಪಡೆ ಜಾಗೃತವಾಗಿಬಿಡುತ್ತದೆ; ಕೆಲವೇ ಗಂಟೆಗಳಲ್ಲಿ ಮಾಹಿತಿ ಕಳಿಸಿದವರ ಬ್ಯಾಂಕ್ ಖಾತೆಗಳು ಹ್ಯಾಕ್ ಆದರೂ ಆಗಿಬಿಡಬಹುದು!! 

ಕೆಲವೊಮ್ಮೆ ಕಂಪನಿಗಳ ಸೀಕ್ರೆಟ್ಟುಗಳನ್ನು ತಿಳಿದುಕೊಳ್ಳಲೂ ಹ್ಯಾಕಿಂಗ್ ನಡೆಯುತ್ತದೆ. ಆ ಸೀಕ್ರೆಟ್ಟುಗಳನ್ನು ಬೇರೇ [ಕಾಂಪಿಟೀಟರ್ಸ್]ಜನರಿಗೆ ಹಂಚುವುದರಿಂದ ಹ್ಯಾಕರ್ಸ್ ಗಳಿಗೆ ಆರ್ಥಿಕ ಲಾಭ ದೊರೆಯುತ್ತದೆ. ಅಂತರ್ಜಾಲದ ಮೂಲಕ ಬರುವ ಹ್ಯಾಕರ್ಸ್ ಕೆಲವರಾದರೆ ಇನ್ನೂ ಕೆಲವರು ’ರೇಡಿಯೋ ಫ್ರೀಕ್ವೆನಿ ಐಡೆಂಟಿಫಿಕೇಶನ್’[ಆರ್.ಎಫ್.ಐಡಿ] ಎಂತ ತಂತ್ರಜ್ಞಾನದ ಸಹಾಯದಿಂದ ಹ್ಯಾಕ್ ಮಾಡುತ್ತಾರೆ. ಮ್ಯಾಗ್ನೆಟಿಕ್ ಬಾರ್ ಕೋಡ್ ಸಿಗ್ನಾಲ್ ಗಳಿರುವ ಕಾರ್ಡುಗಳ ನ್ನು ಖಾತೆಗಳಲ್ಲಿ ಚಲಾಯಿಸಲು ಕನಿಷ್ಠ 29 ಸೇಕಂದು ಸಮಯ ಹಿಡಿಯುತ್ತದೆ; ಅದೇ ಆರ್.ಎಫ್.ಐಡಿ ಕಾರ್ಡುಗಳಾದರೆ 16 ಸೇಕಂದುಗಳು ಸಾಕು. 13 ಸೇಕಂದುಗಳ ಸಮಯ ಉಳಿತಾಯ ಆಗುತ್ತದೆ ಎಂಬ ಉದ್ದೇಶದಿಂದ ವಿದೇಶಗಳಲ್ಲಿ ಆರ್.ಎಫ್.ಐಡಿ ಕಾರ್ಡುಗಳು ಜಾರಿಗೆ ಬಂದಿವೆ. ಆದರೆ ಆರ್.ಎಫ್.ಐಡಿ ಕಾರ್ಡುಗಳ ಮೂಲಕ ಮಾಹಿತಿ ಸೋರಿಕೆ ಬಹಳ ತ್ವರಿತವಾಗಿ ಮತ್ತು ಇನ್ನೂ ಸುಲಭವಾಗಿ ನಡೆಯುತ್ತದೆ ಎಂಬ ಆಧಾರಸಹಿತ ಆಕ್ಷೇಪಣೆ ಎದ್ದಿದೆ. ಹೀಗಾಗಿ ಆರ್.ಎಫ್.ಐಡಿ ತಂತ್ರಜ್ಞಾನಕ್ಕೆ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ಜಾಗತಿಕ ಮಟ್ಟದಲ್ಲಿ ಪ್ರಚಲಿತಗೊಂಡಿದೆ.

ಎಷ್ಟೋ ಸಲ ಅಂತರ್ಜಾಲದಲ್ಲಿ ಯಾವುದೋ ಕಾರಣಕ್ಕೆ ಸಂಪರ್ಕಿಸುವ ಅಪರಿಚಿತರು ಬಹಳ ಮಾನವೀಯತೆ ತೋರುವಂತೇ ನಟಿಸುತ್ತಾ, ಸ್ಲೋ ಆಗಿರುವ ನಿಮ್ಮ ಗಣಕಯಂತ್ರದ ಸ್ಪೀಡ್ ಹೆಚ್ಚಿಸಿಕೊಡುವ ನೆಪದಲ್ಲಿ, ಗಣಕಯಂತ್ರದ ಕಂಟ್ರೋಲನ್ನು ತಮಗೆ ವರ್ಗಾಯಿಸುವ ತಂತ್ರಾಂಶದ ಮೂಲಕ ಒಪ್ಪಿಗೆ ಸೂಚಿಸುವಂತೇ ಕೋರಬಹುದು. ಇನ್ನೂ ಕೆಲವೊಮ್ಮೆ ನಿಮ್ಮ ಯಂತ್ರಗಳ, ಖಾತೆಗಳ ಐಡಿ, ಪಾಸ್ ವರ್ಡ್ ಮೊದಲಾದ ಮಾಹಿತಿಗಳನ್ನು ನಿಮ್ಮನ್ನು ಕೇಳಿಯೇ ಪಡೆದುಕೊಳ್ಳಬಹುದು. ನಿಮ್ಮ ಅನುಮತಿಯಿಂದಲೇ ಅವರಿಗೆ ಸಿಗುವ ಮಾಹಿತಿ ನಿಮಗೇ ಮಾರಕವಾಗಿಬಿಡಬಹುದು. ನಿಮ್ಮ ಅನುಮತಿಯಿಂದ ಸಿಕ್ಕ ಮಾಹಿತಿಯಾದುದರಿಂದ ಅಪರಾಧ ಎಸಗಿದವರು ತಪ್ಪಿಸಿಕೊಳ್ಳಲು ಆವರಿಗದು ಸಹಾಯಕವಾಗಬಹುದು. ಅನೇಕ ಕಚೇರಿಗಳಲ್ಲಿ ನೆಟ್ ವರ್ಕ್ ಪ್ರಿಂಟರುಗಳನ್ನು ಬಳಸುತ್ತಿದ್ದಾರೆ. ಗಣಕಯಂತ್ರಕ್ಕಿರುವಂತೇ ಅದಕ್ಕೂ ಒಂದು ಪ್ರತ್ಯೇಕ ಐಪಿ ಎಡ್ರೆಸ್ [ಇಂಟರ್ನೆಟ್ ಪ್ರೊಟೊಕಾಲ್ ಎಡ್ರೆಸ್] ಇರುತ್ತದೆ. ಅಂತಹ ಮಾಹಿತಿ ಹ್ಯಾಕರ್ಸ್ ಗಳಿಗೆ ದೊರಕಿದರೆ ಅವರು ಆ ಮೂಲಕ ನೆಟ್ ವರ್ಕ್ ಪ್ರವೇಶ ಪಡೆಯಬಲ್ಲರು! ಹೀಗಾಗಿ ನೆಟ್ ವರ್ಕ್ ಪ್ರಿಂಟರ್ ಅಥವಾ ಯಾವುದೇ ಗಣಕಯಂತ್ರದ ಐಪಿ ಎಡ್ರೆಸ್ ಗಳನ್ನು  ಅಥವಾ ಯಂತ್ರಗಳ ಯಾವುದೇ ಪೋರ್ಟುಗಳ ವಿವರಗಳನ್ನು [ಈ ಬಗ್ಗೆ ಮಾಹಿತಿಯಿರುವ ಸಿಬ್ಬಂದಿ ಅಥವಾ ಮ್ಯಾಂಟೆನನ್ಸ್ ಮಾಡುವ ಸಿಸ್ಟಮ್ ಎಡ್ಮಿನಿಸ್ಟ್ರೇಟರ್ ಗಳು] ಬೇಜವಾಬ್ದಾರಿಯಿಂದ ಪರಭಾರೆ ಮಾಡುವುದು ಹ್ಯಾಕಿಂಗಿಗೆ ಅನುಕೂಲ ಕಲ್ಪಿಸಬಹುದು.   

ಭಾರತದಲ್ಲಿ ನಗರಗಳಲ್ಲಿ, ಪಟ್ಟಣಗಳಲ್ಲಿ, ಮೇಲಾಗಿ ಹಳ್ಳಿಗಳಲ್ಲಿಯೂ ಸಹ ಕಂಪ್ಯೂಟರುಗಳ ಬಳಕೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ನಗರಗಳಲ್ಲಿ ಗಲ್ಲಿಗಲ್ಲಿಗೆ ಎಟಿಎಂ ಗಳು ಬಂದಿವೆ. ಭರಪೂರ ಮಾಹಿತಿಯ ಮಹಾಪ್ರವಾಹ ಅಂತರ್ಜಾಲದ ಮೂಲಕ ಹರಿದಾಡುತ್ತಿದೆ. ಮಾಹಿತಿಗಳನ್ನು ಒದಗಿಸುವವರಲ್ಲಿ ಮತ್ತು ಪಡೆದುಕೊಳ್ಳುವವರಲ್ಲಿ ಪರಸ್ಪರ ಪರಿಚಯ, ನೇರಸಂಪರ್ಕ ಇರದೇ ಇದ್ದಪಕ್ಷದಲ್ಲಿ ಮಾಹಿತಿ ಕೊಡುವ ಜನ ಹತ್ತಾರುಸರ್ತಿ ಹಿನ್ನೆಲೆ ಮುನ್ನೆಲೆ ವಿಚಾರಿಸಿಕೊಂಡು, ಮಾಹಿತಿಕೇಳಿದವರಿಗೆ ಕೊಡುವುದು ಉತ್ತಮ. ಇಲ್ಲದಿದ್ದರೆ ಹ್ಯಾಕ್ ಆಗಿದೆಯೆಂದು ತಲೆಯಮೇಲೆ ಕೈಹೊತ್ತುಕೊಳ್ಳುವ ಸಂದರ್ಭ ಎದುರಾಗಬಹುದು, ಜೋಕೆ. ನಗುನಗುತ್ತಾ ಓದಲಾರಂಭಿಸಿದ ’’ಟೆಕ್ಕಾಣಿ’’ಯ ಕಥೆ ಬಹಳ ಗಂಭೀರವಾಗಿರುವುದನ್ನು ಈಗ ಕಂಡಿರಲ್ಲವೇ? ಹೇಗಿದೆ ಗುಟ್ಟು? ಜಾಗರೂಕರಾಗಿರುತ್ತೀರಲ್ಲವೇ ನೆನಪಿನಲ್ಲಿಟ್ಟು?           

Sunday, June 2, 2013

ಸಾಫ್ಟ್ ವೇರ್ ಬೆಳದಿಂಗಳಮನೆಗೆ ಬಿಸಿಲು ಪ್ರವೇಶಿಸುತ್ತಿದೆ!

 
ಚಿತ್ರಋಣ : ಅಂತರ್ಜಾಲ 
ಸಾಫ್ಟ್ ವೇರ್ ಬೆಳದಿಂಗಳಮನೆಗೆ ಬಿಸಿಲು ಪ್ರವೇಶಿಸುತ್ತಿದೆ!
                                                      
ಏರುಜವ್ವನೆಯಲ್ಲಿ ಆದ ದಿಡೀರ್ ಬದಲಾವಣೆಯಂತೇ ತೊಂಬತ್ತರ ದಶಕದಲ್ಲಿ ಇಡೀ ಜಗತ್ತಿಗೇ ಸರಕ್ಕನೆ ಚುರುಕುಮುಟ್ಟಿಸಿದ್ದು ಗಣಕಯಂತ್ರರಂಗ. ತಂತ್ರಜ್ಞಾನದಲ್ಲಿ ಪ್ರತಿದಿನ ನಡೆಯುತ್ತಿದ್ದ ಪರಿಶೀಲನೆ ಮತ್ತು ಪರಿಶೋಧನೆಗಳಿಂದ ನವನವೀನ ಮಾದರಿಯ ಹಾರ್ಡ್ ವೇರ್ ಗ್ಯಾಜೆಟ್ ಗಳೂ ಮತ್ತು ಅವುಗಳನ್ನು ಬಳಸಿಕೊಳ್ಳಲು ವಿವಿಧ ತೆರನಾದ ತಂತ್ರಾಂಶಗಳೂ ಸಿದ್ಧಗೊಳ್ಳುತ್ತಲೇ ನಡೆದವು. ಜನಸಾಮಾನ್ಯರಿಗೆ ಈ ಬೆಳವಣಿಗೆ ತೀರಾ ಅತಿರೇಕ ಎಂಬಷ್ಟು ವೇಗೋತ್ಕರ್ಷ ಪಡೆದುಕೊಂಡು, ನಿನ್ನೆ ಇದ್ದದ್ದು ಇಂದಿಲ್ಲ, ಇಂದಿದ್ದು ನಾಳೆ ಇಲ್ಲ ಎಂಬ ಮಟ್ಟಕ್ಕೆ ವ್ಯತ್ಯಾಸಗಳು ಜರುಗುತ್ತಿದ್ದವು. ಜಗತ್ತು ಹೊಸತನ್ನು ಸ್ವಾಗತಿಸಿತು, ಆದರೆ ಭಾರತದಂತಹ ಮಧ್ಯಮವರ್ಗ ಜಾಸ್ತಿ ಇರುವ ದೇಶಗಳಲ್ಲಿ, ಬದಲಾವಣೆಗೆ ಒಗ್ಗಿಕೊಳ್ಳುವ ಹಂತದಲ್ಲಿ, ಆ ದಿಸೆಯಲ್ಲಿ ತೆರಬೇಕಾದ ಹಣವನ್ನು ನೆನೆಸಿಕೊಂಡು ಅಲ್ಲಲ್ಲಿ ಕೆಲವರು ಕೆಮ್ಮಿದರೆ, ತಾವು ಜೀವಮಾನದಲ್ಲೇ ಎಣಿಸಿರದ ಐದಂಕಿಯ ಸಂಬಳವನ್ನು ತಮ್ಮ ಮಕ್ಕಳು 25ನೇ ವಯಸ್ಸಿನಲ್ಲೇ ಪಡೆದುಕೊಳ್ಳುತ್ತಿರುವುದನ್ನು ಕಂಡು ಹಲವರು ಹೆಮ್ಮೆಪಟ್ಟುಕೊಂಡರು. ತಂತ್ರಾಂಶ ತಯಾರಿಕೆಯಲ್ಲಿ ಇಡೀ ಜಗತ್ತಿಗೇ ಭಾರತ ಗುರುವೆನಿಸಿತು, ಅಗ್ರಮಾನ್ಯವೆನಿಸಿತು. ಪಿ.ಯೂ.ಸಿ ಮುಗಿಸಿದ ಮಕ್ಕಳನ್ನು ಹೇಗಾದರೂ ಮಾಡಿ ಕಂಪ್ಯೂಟರ್ ಸೈನ್ಸ್ ಓದಿಸಿಬಿಟ್ಟರೆ ಒಳ್ಳೆಯ ಆದಾಯದಿಂದ ಉತ್ತಮ ಜೀವನ ನಡೆಸಬಹುದು ಎಂಬ ಧೋರಣೆ ಜನಮಾನಸದಲ್ಲಿ ನಿಂತು, ಯಾರನ್ನೇ ಕೇಳಿದರೂ "ಕಂಪ್ಯೂಟರ್ ಸೈನ್ಸ್" ಎನ್ನುತ್ತಿದ್ದರು!

ನೂತನ ತಂತ್ರಜ್ಞಾನಗಳ ಆವಿಷ್ಕಾರದಿಂದ ಮತ್ತು ಅಳವಡಿಕೆಯಿಂದ ಪ್ರತಿಯೊಂದು ರಂಗವೂ ಹೊಸ ಮಾರ್ಪಾಡುಗಳನ್ನು ಕಂಡಿತು. ಭಾರತದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೆಲವು ಸಾಫ್ಟ್ ವೇರ್ ಕಂಪನಿಗಳು ಹುಟ್ಟಿ, ಬಹುಬೇಗ ಅಂಬೆಹರೆದು, ಎದ್ದುನಿಂತು ಅಮೆರಿಕಾದಂತಹ ರಾಷ್ಟ್ರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ತಂತ್ರಾಂಶ ತಯಾರಿಸಿಕೊಡುವ ಹಂತಕ್ಕೆ ಉದ್ಯಮ ಬೆಳೆದುನಿಂತಿತು! ಸಾಫ್ಟ್ ವೇರ್ ಎಂದರೇನೆಂಬುದನ್ನು ಅರ್ಥವಿಸಿಕೊಳ್ಳಲಾಗದೇ ಅದೊಂದು ಪ್ರಾಡಕ್ಟ್ ಕೂಡ ಆಗಬಲ್ಲದು ಎಂಬುದನ್ನು ಒಪ್ಪಿಕೊಳ್ಳದ ಬ್ಯಾಂಕಿಂಗ್ ಸಿಬ್ಬಂದಿ, ಚಿಗುರುತ್ತಿದ್ದ ಹೊಸ ಸಾಫ್ಟ್ ವೇರ್ ಕಂಪನಿಗಳಿಗೆ ಸಾಲನೀಡಲು ಹಿಂಜರಿಯುತ್ತಿದ್ದವರು, 3-4ವರ್ಷಗಳಲ್ಲಿ ಆ ಕುರಿತು ಹಲವು ಕಮ್ಮಟಗಳಲ್ಲಿ ಭಾಗವಹಿಸಿ, ಬ್ಯಾಂಕಿಂಗ್ ಕ್ಷೇತ್ರಕ್ಕೇ ಸಾಫ್ಟ್ ವೇರ್ ಬಳಸಿಕೊಂಡು ಹೇರಳ ಸಾಲ ಸೌಲತ್ತನ್ನು ಧಾರಾಳವಾಗಿ ನೀಡಿದರು. ಸಿವಿಲ್, ಮೆಕಾನಿಕಲ್, ಇಲೆಕ್ಟ್ರಿಕಲ್, ಬ್ಯಾಂಕಿಂಗ್, ಮ್ಯಾನ್ಯುಫ್ಯಾಕ್ಚರಿಂಗ್, ಟ್ರೈನಿಂಗ್, ಡಿಸೈನಿಂಗ್ ಹೀಗೇ ಯಾವುದೇ ಕ್ಷೇತ್ರಗಳನ್ನು ತೆಗೆದುಕೊಂಡರೂ ಆ ಎಲ್ಲಾ ರಂಗಗಳಲ್ಲೂ ಕಂಪ್ಯೂಟರ್ ಅಳವಡಿಕೆ ಪ್ರಾಶಸ್ತ್ಯ ಪಡೆದುಕೊಂಡು, ಜಡ್ಡುಹಿಡಿದಿದ್ದ ಹಳೆಯ ಜಾಯಮಾನಕ್ಕೆ ಸಡ್ಡುಹೊಡೆದು ಪ್ರತಿಯೊಂದು ರಂಗವೂ ಮೈಕೊಡವಿ ನಿಂತಿತು. ಬೆಂಗಳೂರಿನಂಥಾ ನಗರಗಳಲ್ಲಿ ಎಲ್ಲಿ ನೋಡಿದರೂ ಸಾಫ್ಟ್ ವೇರ್ ಕಂಪನಿಗಳ ಬಸ್ಸುಗಳು ಓಡಾಡುವುದು ಕಂಡಿತು. ನವನವೀನ ವಿನ್ಯಾಸಗಳ, ಅಂಬರ ಚುಂಬಿತ ಕಟ್ಟಡಗಳು ಎದ್ದುನಿಂತವು.   

ಸಾಫ್ಟ್ ವೇರ್ ರಫ್ತು ವ್ಯವಹಾರದಿಂದ ದೇಶಕ್ಕೂ ರಾಜ್ಯಕ್ಕೂ ಆದಾಯ ಹೆಚ್ಚಿತು.  ಅಂತೂ ಜಗತ್ತು ಶತಶತಮಾನಗಳಲ್ಲಿ ಕಂಡರಿಯದ ಭವ್ಯ ಬದಲಾವಣೆ ಕೇವಲ ದಶಕವೊಂದರಲ್ಲೇ ಘಟಿಸಿಬಿಟ್ಟಿತು! ಬೆಳೆದ ತಂತ್ರಜ್ಞಾನಕ್ಕೆ ತಕ್ಕಂತೇ, ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಹುಡುಕುತ್ತಾ ಎಂಜಿನೀಯರಿಗಳು ಮತ್ತು ಅವರೆಲ್ಲರ ಕೆಲಸಕ್ಕೆ ಪೂರಕ ಸಹಾಯಕರಾಗಿ ಇನ್ನಿತರ ಕೆಲಸಗಳನ್ನು ನಡೆಸಿಕೊಡುವ ಸಿಬ್ಬಂದಿಗಳು, ದೇಶದ ಹಲವೆಡೆಗಳಿಂದ ಬೆಂಗಳೂರಿನತ್ತ ಮುಖಮಾಡಿದರು. ಅಷ್ಟೇ ಏಕೆ, ವಿದೇಶೀ ಯುವಜನತೆ ಕೆಲಸ ಹುಡುಕುತ್ತ ಭಾರತಕ್ಕೆ-ಬೆಂಗಳೂರಿಗೆ ಬಂದಿತು. ಅಹೋರಾತ್ರಿ ಕೆಲಸಗಳು ನಡೆಯಹತ್ತಿದವು. ಕೆಲಸದ ಹೊರೆಯನ್ನು ಬಿಟ್ಟರೆ ಸಿಗುವ ಅಧಿಕ ಸಂಬಳವನ್ನು ನೆನೆದೇ ಖುಷಿಗೊಳ್ಳುತ್ತಿದ್ದ  ಎಂಜಿನೀಯರುಗಳು ಸ್ವಂತಕ್ಕೆ ಕಾರು-ಬಂಗಲೆ ಇತ್ಯಾದಿ ವ್ಯವಸ್ಥೆಗಳನ್ನು ಖರೀದಿಸಲು ಮನಮಾಡಿದರು. ಅಗತ್ಯಕ್ಕೆ ತಕ್ಕಂತೇ ಅಥವಾ ತುಸು ಅಧಿಕವಾಗಿಯೇ ಕ್ರೆಡಿಟ್ ಕಾರ್ಡುಗಳೂ, ಎ.ಟಿ.ಎಂ ಸೌಲಭ್ಯಗಳೂ ಸಹ ಆವಿರ್ಭವಿಸಿದವು. "ವಾರ ಪೂರ್ತಿ ದುಡಿಯುತ್ತೇವೆ, ವಾರಾಂತ್ಯದಲ್ಲಿ ಮೋಜು-ಮಜಾ ಇರಲಿ" ಎಂಬ ಅಮೆರಿಕನ್ ಸ್ಟೈಲ್ ಬೆಂಗಳೂರಿನಲ್ಲೂ ಕಂಡುಬಂತು; ದುಂದುಗಾರಿಕೆ ವಿಪರೀತವಾಯ್ತು.

ಸಾಫ್ಟ್ ವೇರ್ ಜನರೆಂದರೆ ಬೇರೇ ಯಾವುದೋ ಪ್ಲಾನೆಟ್ ನಿಂದ ಕೆಳಗಿಳಿದವರು ಎಂಬ ರೀತಿಯಲ್ಲಿ ಎಂಜಿನೀಯರುಗಳು ನಡೆದುಕೊಳ್ಳುತ್ತಿದ್ದರು; ಜನಸಾಮಾನ್ಯರೊಟ್ಟಿಗೆ ಎಂದೂ ಯಾವ ಸಭೆ-ಸಮಾರಂಭಗಳಲ್ಲೂ ಬೆರೆಯುತ್ತಿರಲಿಲ್ಲ. ಸ್ವತಃ ಅದೇ ವೃತ್ತಿಯಲ್ಲಿ ಇದ್ದರೂ ಇಂಥಾ ದರ್ಪ-ದುರಹಂಕಾರವನ್ನು ದೂರದಿಂದ ನೋಡುತ್ತಲೇ ಇದ್ದವನು ನಾನು. ಐಶಾರಾಮೀ ಉತ್ಪನ್ನಗಳನ್ನು ಖರೀದಿಸುತ್ತಿದ್ದ ಆ ಜನರಲ್ಲಿ ಇಲ್ಲದ್ದೇ ಇಲ್ಲ! ತರಾವರಿ ಬಟ್ಟೆಗಳು, ಫಾರಿನ್ ಸೆಂಟುಗಳು, ದುಬಾರಿ ಬೆಲೆಯ ಕ್ಯಾಮೆರಾಗಳು-ಸೆಲ್ ಫೋನ್ ಗಳು ಹೀಗೇ ಕೊಳ್ಳುಬಾಕತನ ಕೂಡ ಹೆಚ್ಚುತ್ತಲೇ ಇತ್ತು. ಕೆಲವರ ಅಕೌಂಟಿನಲ್ಲಿ ಸಾಲದ ಲೆಕ್ಕ ಹೆಚ್ಚುತ್ತಲೇ ಇದ್ದರೂ ಹೊರಜಗತ್ತಿಗೆ ಅವರು ಶ್ರೀಮಂತರಾಗೇ ಕಾಣುತ್ತಿದ್ದರು. ರಸ್ತೆಬದಿಯಲ್ಲಿ ಎಳನೀರು ಮಾರುತ್ತಿದ್ದ ವ್ಯಕ್ತಿಗೆ ನೂರರ ನೋಟುಕೊಟ್ಟು, ಎರಡು ಎಳನೀರನ್ನು ಆತ ಕಾರಿಗೆ ಏರಿಸಿಕೊಟ್ಟಮೇಲೆ, ಚಿಲ್ಲರೆ  ಕೇಳದೇ ಸರ್ರನೆ ಗ್ಲಾಸು ಏರಿಸಿಕೊಂಡು ಬುರ್ರನೆ ಹೊರಟು ಮಾಯವಾಗುವ ಮಂದಿ ಅಕ್ಷರಶಃ ಶೋಕಿಲಾಲಾಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಹಣ್ಣು-ತರಕಾರಿ ಅಂಗಡಿಗಳವರು ಮಿಕ್ಕಿದ ಗಿರಾಕಿಗಳನ್ನು ಅಲಕ್ಷ್ಯಿಸಿ, ಸಾಫ್ಟ್ ವೇರ್ ಎಂಜಿನೀಯರುಗಳನ್ನು ಅತಿ ದೂರದಿಂದಲೇ ಗುರುತಿಸಿ, ಅವರ ಕಾರು ಬಂದು ನಿಲ್ಲುತ್ತದೆ ಎನ್ನುವಾಗಲೇ ಸೆಲ್ಯೂಟ್ ಹೊಡೆದು ಸ್ವಾಗತಿಸುತ್ತಿದ್ದರು! ವ್ಯಾಪಾರಿಗಳಿಗೆ ಅಂಥಾ ಎಂಜಿನೀಯರುಗಳು ದೇವಮಾನವರಂತೇ ಕಾಣುತ್ತಿದ್ದರೋ ಏನೋ.   

’ಏ’ ಸೈಡ್ ಮುಗಿಯಿತು, ಈಗ ’ಬಿ’ ಸೈಡ್ ನೋಡೋಣ: ಯಾವ ರಂಗ ಅತೀಶೀಘ್ರವಾಗಿ ಉತ್ತುಂಗ್ಗಕ್ಕೆ ಏರುತ್ತದೋ ಆ ರಂಗ ಅಷ್ಟೇ ಶೀಘ್ರವಾಗಿ ದೊಪ್ಪೆಂದು ನೆಲಕ್ಕೆ ಕುಸಿಯುತ್ತದೆ ಎಂಬುದು ಕೆಲವು ಅನುಭವಿಕರ ಮಾತು; ’ಅನುಭವ ಇರುವಲ್ಲಿ ಅಮೃತತ್ವ ಇದೆ’ ಎಂಬ ನಾಣ್ನುಡಿಯನ್ನು ಎಲ್ಲೋ ನೋಡಿದ ನೆನಪು, ಆದಕಾರಣ ಅನುಭವಿಗಳ, ಅನುಭಾವಿಗಳ ಅನುಭವಕ್ಕೆ ನಾವು ತಲೆಬಾಗಲೇ ಬೇಕು. ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ’ಸಾಫ್ಟ್ ವೇರ್ ಕಿಚನ್ ಅಫ್ ದಿ ವರ್ಲ್ಡ್’ಎಂಬ ಕಿರೀಟವನ್ನು ತಂದುಕೊಟ್ಟ ಸಾಫ್ಟ್ ವೇರ್  ಕಂಪನಿಗಳ ಭವಿಷ್ಯ ಡೋಲಾಯಮಾನವಾಗಿದೆ. ಇದಕ್ಕೆ ಕಾರಣಗಳು ಪ್ರಮುಖವಾಗಿ ಎರಡು: ಮೊದಲನೆಯದು, ಜಾಗತಿಕ ಮಟ್ಟದಲ್ಲಿ ಸಾಫ್ಟ್ ವೇರ್ ಪ್ರಾಜೆಕ್ಟುಗಳು ಮಾಡುವುದಕ್ಕೆ ಉಳಿದಿರುವುದು ಕಮ್ಮಿ. ಎರಡನೆಯದು, ತಂತ್ರಾಂಶ ತಯಾರಿಕಾ ಸಂಸ್ಥೆಗಳ ನಡುವಣ ಪೈಪೋಟಿ ತೀರಾ ಹೆಚ್ಚಿದೆ. ಡಿಮಾಂಡ್ ವರ್ಸಸ್ ಸಪ್ಲೈ ನಲ್ಲಿ ಸಪ್ಲೈ ಜಾಸ್ತಿಯಾದಾಗ ಡಿಮಾಂಡ್ ಕಮ್ಮಿಯಾಗುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಈಗ ಡಿಮಾಂಡ್ ಕಮ್ಮಿಯಾಗಿದೆ, ಸಪ್ಲೈ ಹೇಗಿದೆ ಎಂದರೆ ಇನ್ನೆರಡು ವರ್ಷಗಳು ಸಂದರೆ ಸಾಫ್ಟ್ ವೇರುಗಳನ್ನು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಮಾರಬೇಕಾದ ಸ್ಥಿತಿ ಇದೆ!! 

ಜಾಗತಿಕ ಮಾರುಕಟ್ಟೆಯಲ್ಲಿ ಏನಾಗುತ್ತಿದೆ ಎಂಬ ಕುತೂಹಲವಿಲ್ಲದ ಜನ ಇನ್ನೂ ಮಕ್ಕಳನ್ನು ಸಾಫ್ಟ್ ವೇರ್ ಎಂಜಿನೀಯರುಗಳನ್ನಾಗಿ ಮಾಡುತ್ತಲೇ ಇದ್ದಾರೆ; ಸಾಫ್ಟ್ ವೇರ್ ಎಂಬುದು ನೋಟು ಮುದ್ರಿಸುವ ಯಂತ್ರ ಇದ್ದಹಾಗೇ ಎಂಬ ಲೆಕ್ಕಾಚಾರದಲ್ಲೇ ಅವರಿದ್ದರೆ, ತಮ್ಮ ’ರಂಗದ ಹಿರಿಯಣ್ಣ’ಗಳು ದಶಕದಿಂದ ಅನುಭವಿಸುತ್ತಿದ್ದ ಸೌಲತ್ತು, ಸೌಲಭ್ಯ ಮತ್ತು ಹಣದಮೇಲೆ ಕಣ್ಣಿಟ್ಟು, ಅಂಥದ್ದನ್ನೇ ಪಡೆಯುವ ಕನಸು ಕಾಣುತ್ತಿರುವ ಎಳೆವಯಸ್ಸಿಗರನ್ನು ಕಂಡರೆ ಒಳಗೊಳಗೇ ಖೇದವಾಗುತ್ತದೆ! ಅಳಿಯನಾಗುವವ ಸಾಫ್ಟ್ ವೇರ್ ಎಂಜಿನೀಯರಾಗಿರಬೇಕೆಂಬ ಆಸೆ ವಧುಗಳ ಪಾಲಕರಿಗಿದ್ದರೆ, ಗಂಡನಾಗುವವ ಸಾಫ್ಟ್ ವೇರ್ ಎಂಜಿನೀಯರ್ ಆಗಿರದಿದ್ದರೆ ಬದುಕೇ ಬರಡು ಎಂಬಂಥಾ ಮನೋಗತ ವಧುಗಳದಾಗಿದೆ! ಆದರೆ ಸಾಫ್ಟ್ ವೇರ್ ಕಂಪನಿಗಳಿಗೆ ಜಾಗತಿಕ ಹಿನ್ನಡೆಯ ಬಿಸಿ ಆಗಲೇ ತಟ್ಟಿದೆ. ಅದರ ಪರಿಣಾಮವಾಗಿ, ಅಧಿಕ ಸಂಬಳ ತೆಗೆದುಕೊಳ್ಳುವ ನುರಿತ ಹಿರಿಯ ಎಂಜಿನೀಯರುಗಳನ್ನು ಉಪಾಯವಾಗಿ ಮನೆಗೆ ಕಳಿಸುತ್ತಿದ್ದಾರೆ, ಅವರ ಜಾಗಕ್ಕೆ ಅವರ ಕೆಳದರ್ಜೆಯವರನ್ನು ಕೂರಿಸಿ, ಖಾಲಿ ಬೀಳುವ ಜಾಗಕ್ಕೆ ಹೊರಗಿನಿಂದ ಹೊಸಬರನ್ನು ’ಸದ್ಯಕ್ಕೆ ತರಬೇತಿ’ ಎಂಬ ಕಾರಣವೊಡ್ಡಿ ಬಿಟ್ಟಿಯಾಗಿಯೋ ಅಥವಾ ಕಮ್ಮಿ ಸಂಬಳಕ್ಕೋ ಭರ್ತಿಮಾಡಿಕೊಳ್ಳುತ್ತಿದ್ದಾರೆ-ಆದರೆ ಅಪಾಯಿಂಟ್ ಮೆಂಟ್ ಆರ್ಡರ್ ಇರುವುದಿಲ್ಲ! ’ಅಪಾಯಿಂಟ್ ಮೆಂಟ್ ಆರ್ಡರ್’ ಸಿಗದ ದೊಡ್ಡ ಕಂಪನಿಗಳ ಕೆಲಸ ಯಾವತ್ತಾದರೊಂದು ದಿನ ಹೊರದಬ್ಬುವ ಅಪಾಯದಿಂದ ತಪ್ಪಿದ್ದಲ್ಲ ಎಂಬುದು ಎಷ್ಟೋ ನವ ಎಂಜಿನೀಯರುಗಳಿಗೆ ಗೊತ್ತಿಲ್ಲ.  

2001ರಲ್ಲಿ ಒಮ್ಮೆ ಅತೀವ ಹಿನ್ನಡೆಯಾಗಿತ್ತು ಆದಕ್ಕೆ ಹೊಸ ಪ್ರಾಜೆಕ್ಟ್ ಗಳಿಲ್ಲದ್ದು ಕಾರಣವಾಗಿರಲಿಲ್ಲ, 2008-09ರಲ್ಲಿ ಇನ್ನೊಮ್ಮೆ ಹಿನ್ನಡೆ ಜರುಗಿತು, ಅದೂ ಕೂಡ ಅಮೆರಿಕಾದ-ಜಗತ್ತಿನ ಆರ್ಥಿಕತೆಯ ಕುಸಿತದಿಂದ ಹೀಗಾಗಿದೆ ಎಂದು ಅಂದಾಜಿಸಲಾಯ್ತು. ಆಗೆಲ್ಲಾ ನಡೆದಿದ್ದು ಅಲ್ಪಪ್ರಮಾಣದ ಸಾಫ್ಟ್ ವೇರ್ ಪ್ರಳಯ, ಆದರೆ ಎದುರಾಗುತ್ತಿರುವುದು ಪೂರ್ಣಪ್ರಮಾಣದ ಪ್ರಳಯ; ಈ ಪ್ರಳಯದಲ್ಲಿ ಬಹುತೇಕ ಸಾಫ್ಟ್ ವೇರ್ ಕಂಪನಿಗಳು ಬಾಗಿಲು ಹಾಕುತ್ತವೆ ಎಂಬುದು ತಜ್ಞರ ಮುಂಧೋರಣೆ. ಆ ಸಂಭವನೀಯತೆಯನ್ನು ಎದುರಿಸಲು ನಮ್ಮ ಸಾಫ್ಟ್ ವೇರ್ ಎಂಜಿನೀಯರುಗಳು ಮಾನಸಿಕ ಸಿದ್ಧತೆ ನಡೆಸಿದ್ದಾರೆಯೇ? ಗೊತ್ತಿಲ್ಲ. ಯಾಕೆಂದರೆ ಅವರಿನ್ನೂ ’ಮಾನವ’ರಾಗುವುದರಲ್ಲೇ ಇದ್ದಾರೆ; ಆಗಿಲ್ಲ. ಸಾಫ್ಟ್ ವೇರ್ ರಂಗದಿಂದ ಆಚೆ ಬಂದರೆ ಜಗತ್ತಿನಲ್ಲಿ ಇನ್ನೇನು ಮಾಡಬಲ್ಲೆವೆಂಬುದೂ ಅವರಿಗೆ ತಿಳಿದಿಲ್ಲ. ತಮ್ಮ ರಂಗದ ಕೆಲವು ಜನರನ್ನು ಬಿಟ್ಟರೆ ಪರ್ಯಾಯ ಜೀವ-ಜಗತ್ತಿನ ಪರಿಚಯ ಅವರಿಗಿದ್ದಂತಿಲ್ಲ. ಕಂಪನಿಗಳನ್ನು ನಡೆಸುವವರು ಹೇಗೋ ಸುಧಾರಿಸಿಕೊಳ್ಳುತ್ತಾರೆ ಅದು ಬೇರೇ ಪ್ರಶ್ನೆ. ಆದರೆ ಎಂಜಿನೀಯರುಗಳು  ಎಲ್ಲಿಗೆ ಹೋಗುತ್ತಾರೆ? ಯಾವ ಕೆಲಸವನ್ನು ಮಾಡುತ್ತಾರೆ? ಕಡಿಮೆ ಸಂಬಳವನ್ನು ಒಪ್ಪಿಕೊಳ್ಳುತ್ತಾರೆಯೇ? ಕಡಿಮೆ ಸಂಬಳ ತೆಗೆದುಕೊಂಡರೆ ಅವರು ಅದಾಗಲೇ ಮಾಡಿಕೊಂಡ ಸಾಲ-ಬಡ್ಡಿ-ಚಕ್ರಬಡ್ಡಿಗಳನ್ನು ತೀರಿಸಲು ಸಾಧ್ಯವೇ? ಇದಕ್ಕೆಲ್ಲಾ ಚಿಂತಕ ಸಮಾಜ ಉತ್ತರ ಕಂಡುಕೊಳ್ಳಬೇಕಾಗಿದೆ; ಯಾಕೆಂದರೆ ಸಾಫ್ಟ್ ವೇರಿನವರಿಗೆ ಸದ್ಯ ನಾವ್ಯಾರೂ ಏನೂ ಅಲ್ಲದಿದ್ದರೂ ಅವರೆಲ್ಲಾ ನಮ್ಮ ಸಮಾಜದ ಭಾಗವೆಂಬ ಭಾವನೆ ನಮ್ಮಲ್ಲಿ ಇನ್ನೂ ಇದೆಯಲ್ಲಾ?   

ಇನ್ನು ದೇಶದ ಆರ್ಥಿಕತೆ ಇಂದು ಪ್ರಮುಖವಾಗಿ ಸಾಫ್ಟ್ ವೇರ್ ರಫ್ತು ವಹಿವಾಟುಗಳನ್ನೇ ಅವಲಂಬಿಸಿದೆ. ಸಾಫ್ಟ್ ವೇರ್ ಬಿಟ್ಟರೇನೇ ಮಿಕ್ಕುಳಿದ ರಂಗಗಳು ಎಂಬಷ್ಟು ಆದ್ಯತೆಯನ್ನು ನೀಡಲಾಗಿರುವುದರಿಂದ ಸಾಫ್ಟ್ ವೇರ್  ರಫ್ತು ವ್ಯವಹಾರ ಕ್ಷೀಣಿಸಿದಾಗ ಅಥವಾ ನಿಂತಾಗ ದೇಶದ ಆರ್ಥಿಕತೆಯ ಮೇಲೂ ಕೂಡ ಸಾಕಷ್ಟು ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಜಾಗತಿಕ ಮಟ್ಟದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಹುಟ್ಟಿದರೂ ಕೂಡ, ಮತ್ತೆ ಸಾಫ್ಟ್ ವೇರಿಗೆ ಮೊದಲಿನ ಡಿಮಾಂಡ್ ಬರುವುದಿಲ್ಲ. ಮ್ಯಾಂಟೆನನ್ಸ್ ಕೆಲಸಕ್ಕೆ ಸೀಮಿತ ಸಿಬ್ಬಂದಿ ಸಾಲುವುದರಿಂದ ಕಂಪನಿಗಳು ಮತ್ತೆ ಹೊಸತನವನ್ನು ಕಂಡುಕೊಳ್ಳುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ. ತಾಂತ್ರಿಕತೆ ಬೆಳವಣಿಗೆ ಹೆಚ್ಚಿ ಕೊನೆ ಮಟ್ಟವನ್ನು ತಲ್ಪಿದ್ದಾಗಿದೆ. 25ವರ್ಷಗಳ ಹಿಂದೆ ಸಿವಿಲ್ ಎಂಜಿನೀಯರಿಂಗ್ ಇದೇ ಅನಾಹುತವನ್ನು ಅನುಭವಿಸಿತ್ತು. ಅದು ಸಿವಿಲ್ ಆಗಿರುವುದರಿಂದ ಬದುಕಿನ ಅನಿವಾರ್ಯ ಭಾಗವಾಗಿ ಮತ್ತೆ ಹಾಗೇ ನಿಂತಿತು, ನಶಿಸಲಿಲ್ಲ. ಆದರೆ ಜೀವನದ ಅನಿವಾರ್ಯತೆಗಳ ಆದ್ಯತೆಯಲ್ಲಿ ಸಾಫ್ಟ್ ವೇರ್ ಸೇರುವುದಿಲ್ಲ, ಸಾಫ್ಟ್ ವೇರ್ ಇಲ್ಲದೆಯೂ ಜನತೆ ಬದುಕಬಲ್ಲದು ಅಲ್ಲವೇ?  ಈ ಎಲ್ಲಾ ದೃಷ್ಟಿಕೋನದಿಂದ, ’ಸಾಫ್ಟ್ ವೇರ್ ವಹಿವಾಟು ರಹಿತ ದೇಶ’ವನ್ನು ಕಲ್ಪಿಸಿಕೊಳ್ಳಲು ದೇಶದ ಆರ್ಥಿಕ ತಜ್ಞರು ತಯಾರಾಗುವ ಕಾಲ ಸನ್ನಿಹಿತವಾಗಿದೆ. ಬೆಳದಿಂಗಳ ಅರಮನೆಯಾಗಿದ್ದ ಸಾಫ್ಟ್ ವೇರ್ ರಂಗಕ್ಕೆ ಬಿಸಿಲು ಸೋಕಿದ ಪರಿ ಇದಾಗಿದೆ. 


Wednesday, May 29, 2013

ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...ಮಿಸುಕಾಡುತಿರುವೆ ನಾನು

ಚಿತ್ರ ಋಣ: ಯುನಿಸೆಫ್ , ದ್ವಾರಾ : ಅಂತರ್ಜಾಲ 
ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...ಮಿಸುಕಾಡುತಿರುವೆ ನಾನು

ಪತ್ರಕರ್ತ ಖುಷ್ವಂತ್ ಸಿಂಗ್ ಹೇಳುತ್ತಾರೆ: ಇವತ್ತಿನ ಪತ್ರಿಕೆಗಳಲ್ಲಿ ಓದುವುದಕ್ಕಿಂತಾ ಓದದೇ ಇರಬೇಕಾದ ಕಾಲಕಸದಂತಹ ಕೆಲಸಕ್ಕೆ ಬಾರದ ಹೂರಣಗಳೇ ಹೆಚ್ಚು ಎಂದು. ದೇಶವಿದೇಶಗಳಿಂದ ಮಿಂಚಂಚೆಯ ಮೂಲಕ ಲೇಖನಗಳು, ಸುದ್ದಿಗಳು ಸಂಪಾದಕರನ್ನು ತಲ್ಪಿದಾಗ, ಅವುಗಳನ್ನೆಲ್ಲಾ ಅಳೆದು-ಸುರಿದು-ತೂಗಿ ನೋಡುವ ಕೆಲಸ ಕೇವಲ ಪ್ರಧಾನ ಸಂಪಾದಕನಿಂದ ಸಾಧ್ಯವಿಲ್ಲ, ಹಲವು ಕೈಗಳು ಸೇರಿ ಇಂದು ಪತ್ರಿಕೆಗಳನ್ನು ನಡೆಸುತ್ತವೆ. ಪತ್ರಿಕೆಗಳಲ್ಲಿ ಬರುವ ವಿಷಯಗಳು ಪತ್ರಿಕೆಯ ಮಾಲೀಕರ ನಿಯಂತ್ರಣಕ್ಕೂ ಒಳಪಟ್ಟಿರುತ್ತವೆ ಎನ್ನುತ್ತಾರವರು. ಪತ್ರಕರ್ತ ಮತ್ತು ಸಾಹಿತಿಯಲ್ಲಿ ತಾನಂತೂ ವ್ಯತ್ಯಾಸವನ್ನು ಕಾಣುತ್ತಿರಲೇ ಇಲ್ಲ, ಪತ್ರಕರ್ತ ತನ್ನ ಸಾಮಾಜಿಕ ಹೊಣೆಯನ್ನರಿತು ಲೇಖನಗಳನ್ನು ಸಿದ್ಧಪಡಿಸುವಾಗ ಆತನೊಬ್ಬ ಬರಹದ ಕಲಾವಿದನಾಗಿರುತ್ತಾನೆ ಎಂಬುದು ಅವರ ಅಂಬೋಣ. ಮೊದಲ ನಾಲ್ಕು ಸಾಲುಗಳಲ್ಲಿ ಓದುಗರನ್ನು ಆಕರ್ಷಿಸಲು ವಿಫಲನಾದರೆ ಲೇಖಕನ ಇಡೀ ಬರಹವೇ ಬಿದ್ದುಹೋಗುತ್ತದೆ ಎಂಬುದು ಅವರ ಅಭಿಪ್ರಾಯ; ಅವರ ಈ ಅಭಿಪ್ರಾಯಕ್ಕೆ ನನ್ನ ಕೀರಲು ದನಿಯನ್ನೂ ಸೇರಿಸಿ ನಿಮ್ಮ ಮುಂದಿಡುತ್ತಿರುವುದೇ ಈ ಲೇಖನ.  

ಭಟ್ಟರ ಚಾ ದುಖಾನಿನಲ್ಲಿ ದೊನ್ನೆ ಬಿರ್ಯಾನಿಯನ್ನು ನಿರೀಕ್ಷಿಸಿ ಬರುವವರು ಯಾರೂ ಇರಲಾರರು ಎಂಬುದು ನನ್ನ ವೈಯ್ಯಕ್ತಿಕ ಅನಿಸಿಕೆ; ಅದನ್ನು ನಿರೀಕ್ಷಿಸುವುದು ತರವಲ್ಲ ಕೂಡ.  ಹಾಗಂತ ಹುಳಿ ಇಡ್ಲಿ-ಹಳಸಿದ ಸಾಂಬಾರು ಇಟ್ಟುಕೊಂಡು, ನೆಗೆದೆದ್ದು ಮುತ್ತುತ್ತ ಕೂರುವ ನೊಣಗಳನ್ನು ಹಾರಿಸುತ್ತಿದ್ದರೆ ಜನ ಬರುತ್ತಾರ್ಯೇ?ಇಲ್ಲ. ಬಿಸಿಬಿಸಿಯಾಗಿ ಸರ್ವ್ ಮಾಡಬಲ್ಲ ನೀರುದೋಸೆ, ಗೋಳಿಬಜೆ[ಮಂಗಳೂರು ಬಜ್ಜಿ], ಪಕೋಡ, ಮಿರ್ಚಿ, ಉದ್ದಿನವಡೆ ಇತ್ಯಾದಿಗಳನ್ನಿಟ್ಟು ನಿರೀಕ್ಷಿಸಿದರೆ ನಿಮ್ಮಂತಹ ಹಲವು ಗಿರಾಕಿಗಳು ಬರಹದ ತಿಂಡಿಗಳನ್ನು ತಿನ್ನಲು ಬಂದೇಬರುತ್ತಾರೆ ಎಂಬುದು ನನಗೆ ಎಂದೋ ಖಚಿತವಾಗಿಬಿಟ್ಟಿದೆ. ಮೈಸೂರು ಮಲ್ಲಿಗೆಯ ನರಸಿಂಹಸ್ವಾಮಿಗಳು ಜೀವನದುದ್ದಕ್ಕೂ ಬಡತನವನ್ನೇ ಅನುಭವಿಸಿದವರು; ಆದರೆ ಅವರ ಕಾವ್ಯಶ್ರೀಮಂತಿಕೆಗೆ ಯಾವುದೇ ಕೊರತೆಯಾಗಲಿಲ್ಲ. ಮಾತ್ರವಲ್ಲಾ, ಕವಿ-ಸಾಹಿತಿ-ಬರಹಗಾರ ತನ್ನೊಳಗಿನ ನೋವನ್ನು ಮರೆತು ಸಂತಸವನ್ನು ಹಂಚಿಕೊಳ್ಳುತ್ತಾ ಪರರ/ಓದುಗರ/ಗ್ರಾಹಕರ ಸಂತಸಕ್ಕೆ ಕಾರಣವಾಗಬೇಕು ಎನ್ನುತ್ತಿದ್ದರಂತೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ | ಬಂಗಾರವಿಲ್ಲದ ಬೆರಳು...

ಹಾಡನ್ನು ಗಾಯಕ ಅಶ್ವತ್ಥರ ದನಿಯಲ್ಲಿ ಅನೇಕಾವರ್ತಿ ಕೇಳಿದ ನನಗೆ ಆ ಹಾಡನ್ನು ಕೇಳುವಾಗಲೆಲ್ಲಾ ನರಸಿಂಹಸ್ವಾಮಿ ಆವರಿಸಿಕೊಂಡ ಅನುಭವ ಆಗುತ್ತದೆ. ನರಸಿಂಹಸ್ವಾಮಿಯವರ ಈ ದನಿಗೂ ನನ್ನ ದನಿಯ ಬೆಸುಗೆಯಾಗಿದೆ! ಅಷ್ಟುದೂರದಿಂದ ನೀವೆಲ್ಲಾ ಭಟ್ಟರ ಅಂಗಡಿಗೆ ಬರುವುದು ಯಾವುದೋ ಒಂದು ಉತ್ತಮ ತಿಂಡಿ ಸಿಗುತ್ತದೆ ಎಂಬ ಭರವಸೆಯ ಗಂಟನ್ನು ಹೊತ್ತು. ಹೀಗಿರುವಾಗ ಕೇವಲ ರಾಜಕೀಯ, ಕೇವಲ ಸಾಮಾಜಿಕ ಸುದ್ದಿಗಳನ್ನಷ್ಟೇ ಬಿತ್ತರಿಸುತ್ತಿದ್ದರೆ  ಭಟ್ಟರ ರೇಡಿಯೋ ಎತ್ತಿ ಬಿಸಾಕಿ ಬಣ್ಣದ ಸುದ್ದಿಗಳನ್ನು ತೋರಿಸುವ ಟಿವಿಗಳ ಮುಂದೆ ನೀವು ಹೋದೀರಿ! ಶಿವಸೇನೆಯ ವಿರುದ್ಧ ಲೇಖನ ಬರೆದರೂ ಶಿವಸೇನೆಯವರು ಕಚೇರಿಗೆ ಮುತ್ತಿಗೆ ಹಾಕಿ ಕಲ್ಲುಹೊಡೆಯದಂತೇ ನಿಭಾಯಿಸುವ ಅಕ್ಷರಕಲೆ ಬರಹಗಾರನ ತಾಕತ್ತು ಎಂದ ಖುಷ್ವಂತ ಸಿಂಗರ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. ಯಾವುದೇ ಉದ್ವೇಗವಿದ್ದರೂ ಅದನ್ನು ಉಪಾಯವಾಗಿ ಪರ್ಯಾಯ ಪದಗಳಲ್ಲಿ ಬಗೆಗೊಳಿಸುವುದು ಬರಹಗಾರನ ಚಾತುರ್ಯವೇ ಸರಿ. ಯಕ್ಷಗಾನ ನೋಡಿ ಬಲ್ಲವರಿಗೆ ವೇಷಗಳ ’ಪ್ರವೇಶ’ಕ್ಕೆ ಇರುವ ಮಹತ್ವ ಗೊತ್ತು. ಕೇವಲ ಪ್ರವೇಶದಿಂದಲೇ ಪ್ರಮುಖ ಕಲಾವಿದರ ಆ ದಿನದ ಮನೋಭೂಮಿಕೆಯನ್ನು ಅಳೆಯುತ್ತಿದ್ದವರು ನಾವು; ತಮ್ಮ ಖಾಸಗೀ ಬದುಕಿನ ನೋವು-ಕಾವುಗಳನ್ನು ಕಿಂಚಿತ್ತೂ ತೋರ್ಗೊಡದೇ ಕಲೆಗಾಗಿ ಬದುಕಿದವರು ಅನೇಕ ಮಹನೀಯರು. ಅವರಲ್ಲಿನ ಅಂತರಾಳವೂ ಕೂಡ ಅದನ್ನೇ ಹೇಳುತ್ತಿತ್ತು: ಪಾಪ, ಅಷ್ಟುದೂರದಿಂದ ನಮ್ಮ ಪಾತ್ರವನ್ನು ನೋಡಲಾಗಿ ಬಂದಿದ್ದಾರೆ-ನಮ್ಮೊಳಗಿನ ನೋವನ್ನು ಮರೆತು ನಲಿವನ್ನು ಉಣಬಡಿಸೋಣ. ಯಕ್ಷಕಲಾವಿದರ ಈ ಅಂತರಾಳಕ್ಕೂ ನನ್ನ ಅಂತರ್ಯದ ತಂತಿ ಮೀಟಿದೆ.    

ಕಥೆಗಳನ್ನು ಜಾಸ್ತಿ ಓದದಿದ್ದವ ಕಥೆಯೊಂದನ್ನು ಓದಿಬಿಟ್ಟೆ. ಕೃಶಕಾಯದ-ಕೈಲಾಗದ ಗಂಡನ ವಿಪರೀತ ಕುಡಿತಕ್ಕೆ ಬೇಸತ್ತ ಮಹಿಳೆಯ ಆರ್ಥಿಕ ಅಸಹಾಯದ ದಿನವೊಂದರಲ್ಲಿ, ಸಿರಿವಂತ ಕುಟ್ಟಿ ಆಕೆಯನ್ನು ಬಳಸಿಕೊಂಡಿದ್ದನ್ನು ಪರೋಕ್ಷವಾಗಿ ಅರಿತ ಆಕೆಯ ಗಂಡ, ಆಕೆಯನ್ನು ರಾತ್ರಿಯಿಡೀ ಹೊಡೆಯುತ್ತಾನೆ, ಗಾಯಗೊಳಿಸುತ್ತಾನೆ. ಚಿಕ್ಕ ಮಗ ಅದನ್ನು ನೋಡಿಯೂ ತಪ್ಪಿಸಲಾಗದೇ ಕಾರಣವನ್ನೂ ತಿಳಿಯಲಾಗದೇ ಒದ್ದಾಡುತ್ತಾನೆ. ಮಾರನೇ ಬೆಳಿಗ್ಗೆ ಬಿಸಿಲೇರುವ ಹೊತ್ತಿಗೆ ಅಪ್ಪನೆಲ್ಲೋ ಹೊರಟುಹೋದದ್ದನ್ನು ಹುಡುಗ ಕಾಣುತ್ತಾನೆ. ಮನೆಯೊಳಗೆ ರಕ್ತದ ಕಮಟುವಾಸನೆ ಹರಡಿರುತ್ತದೆ. ಕೆಲಸಮಯದಲ್ಲೇ ಕೆಂಪುಸೀರೆಯನ್ನುಟ್ಟ ಅಮ್ಮ, ತುಸುಹೊತ್ತಿನಲ್ಲೇ ಅಲ್ಲಿಗೆ ಬಂದ ಕುಟ್ಟಿಯೊಡನೆ ಎಲ್ಲಿಗೋ ಹೊರಟುನಿಲ್ಲುತ್ತಾಳೆ. ಸೀರೆಯಲ್ಲಿ ಅಂದು ಬಹಳ ಚಂದವಾಗಿ ಕಾಣಿಸುವ ಅಮ್ಮನನ್ನು "ಎಲ್ಲಿಗೆ ಹೊರಟೆ" ಎಂದರೆ ಅಮ್ಮನಿಂದ ಮಾತಿಲ್ಲ, ಕೈಗೆ ಹತ್ತರ ನೋಟನ್ನು ತುರುಕಿ, ಕೊನೆಯಬಾರಿ ಎಂಬಂತೇ ಮುದ್ದಿಸಿ, ಕುಟ್ಟಿಯೊಡನೆ ಹೆಜ್ಜೆಹಾಕಿದ ಅಮ್ಮನನ್ನು ಮತ್ತೆ ತಡೆದು ಕೇಳಿದಾಗ, ಅಮ್ಮನನ್ನು ಪಕ್ಕಕ್ಕೆ ಸರಿಸಿ, ಹಿಂಗಾಲಲ್ಲಿ ಕುಟ್ಟಿ ಎದೆಗೆ ಒದೆದಾಗ, ಚೇತರಿಸಿಕೊಳ್ಳುವ ಮೊದಲೇ ಎದುರಿನ ಜಾಗದಲ್ಲಿ ಯಾರೂ ಇರದಿರುವುದು ಮಗುವಿಗೆ ಕಾಣುತ್ತದೆ."ಅಬ್ಬೇ...ಅಬ್ಬೇ" ಎಂದು ಬೊಬ್ಬಿರಿದ ದನಿ ಕೇವಲ ಅರಣ್ಯರೋದನವಾಗಿ ಅಬ್ಬೆಯ ಪ್ರೀತಿಯಿಂದ ವಂಚಿತನಾಗಿ ಬೆಳೆಯುವ ಆ ಮಗು ಕೆಲಕಾಲದಲ್ಲೇ ಅಪ್ಪನನ್ನೂ ಕಳೆದುಕೊಂಡು ಒಂಟಿಯಾಗಿ ಹೇಗೆ ಬೆಳೆದ ಎಂಬ ಕಥೆಯ ಹಿಂಚುಮುಂಚಿನ ಎಲ್ಲಾ ಘಟನೆಗಳಿಗಿಂತಾ ಹಡೆದಮ್ಮನೆದುರೇ ಕುಟ್ಟಿ ಮಗುವನ್ನು ಒದೆದಿದ್ದು-ಹಡೆದಮ್ಮ ಹೃದಯ ಕಲ್ಲುಮಾಡಿಕೊಂಡು ಮಾತನಾಡದೇ ಬಿಟ್ಟುಹೋಗಿದ್ದು-ಅಬ್ಬೇ ಅಬ್ಬೇ ಎಂದು ಏನೂ ಅರಿಯದ ಆ ಚಿಕ್ಕ  ಮಗು ಅತ್ತಿದ್ದು ---ಈ ಸನ್ನಿವೇಶಗಳು ಹೃದಯವನ್ನು ಹಿಂಡಿ ಮನಸ್ಸಿಗೆ ಅರಿವಳಿಕೆ ನೀಡಿಬಿಟ್ಟವು. ||ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ|| [ಒಬ್ಬ ಕೆಟ್ಟ ಮಗು ಜನಿಸಬಹುದು ಆದರೆ ಒಬ್ಬ ಕೆಟ್ಟ ತಾಯಿ ಇರಲಾರಳು] ಎಂಬ ಆದಿಶಂಕರರ ಮಾತನ್ನು ಗಮನಿಸಿದೆ. ಬದುಕಿನ ಯಾವ ಅನಿವಾರ್ಯತೆಯಲ್ಲಿ ಆ ಮಾತಿಗೆ ಅಪವಾದವೆನಿಸುವ ಕೆಲವು ತಾಯಂದಿರೂ ಇರುತ್ತಾರೆ ಎಂಬುದು ಅರ್ಥವಾಗದೇ ಹೋಯ್ತು. 

ಮುಂಜಿಮನೆಯೊಂದರಲ್ಲಿ ಊಟಮಾಡಿ ಕೈತೊಳೆದು ಬಾಯೊರೆಸಿಕೊಳ್ಳುತ್ತಾ ಎದುರು ಸಿಕ್ಕ ಪರಿಚಿತರ, ನೆಂಟರ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದೆ. ಆಪ್ತವೆನಿಸುವ ಮುಖವೊಂದನ್ನು ಕಂಡು ಮಾತನಾಡಿಸಿದಾಗ, ತನ್ನ ಹೃದಯದ ಭಾವಗಳಿಗೆ ಮಾತುಗಳ ರೂಪಕೊಟ್ಟ ವೃದ್ಧ ಮಹಿಳೆಯ ಕಣ್ಣಾಲಿಗಳಲ್ಲಿ ಮಡುಗಟ್ಟಿದ ನೋವು ಮೈಕೊಡವಿ ಎದ್ದುನಿಂತಿತ್ತು. ಜೀವನದ ಸಂಜೆಯ ಭಾಗದಲ್ಲಿ ಪಾರ್ಶ್ವವಾಯುವಿನಿಂದ ಪೀಡಿತರಾಗಿ ಕಳೆದೆಂಟು ವರ್ಷಗಳಿಂದ ಮಲಗಿಯೇ ಇರುವ ಪತಿಯ ಬಗೆಗೆ ಆಕೆ ಹೇಳಿಕೊಂಡರು. ಅಶಕ್ತವಾದ ಶರೀರದಲ್ಲಿ ಮಲಗಿದಲ್ಲೇ ಸೊಂಟದ ಕೀಲುಗಳು ಸ್ವಲ್ಪ ಜಾರಿ, ಕಟ್ ಆಗಿ  ಸರಿಪಡಿಸಲಾಗದ ಸ್ಥಿತಿಯಲ್ಲಿ, ನೋವನ್ನು ಅನುಭವಿಸುತ್ತಾ ದಿನಗಳನ್ನು ನೂಕುತ್ತಿರುವ ಗಂಡನ ಆರೈಕೆಯೇ ಆಕೆಯ ದಿನಚರ್ಯೆಯ ಬಹುಮುಖ್ಯ ಭಾಗವಂತೆ. ಮಧ್ಯಾಹ್ನದ ಒಂದೆರಡು ಗಂಟೆಗಳ ಕಾಲ ಮಾತ್ರ ಹತ್ತಿರದಲ್ಲೇ ಎಲ್ಲಾದರೂ ನೆಂಟರಿಷ್ಟರ ಬಳಗದಲ್ಲಿ ಮದುವೆ-ಮುಂಜಿ ಕಾರ್ಯಕ್ರಮಗಳಿದ್ದರೆ, ಮನೆಯಲ್ಲಿರುವ ಸೊಸೆಯಂದಿರಿಗೆ ಹೇಳಿ ಹೊರಬಂದು ಹೋಗುವುದೇ ಪ್ರಯಾಸದ ಕೆಲಸ; ಅದು ಕೇವಲ ತನ್ನನ್ನು ಆಮಂತ್ರಿಸಿದ ನೆಂಟರ ಓಲೈಕೆಗಾಗಿ ಮಾತ್ರ ಎಂದ ಆಕೆಯ ಕಣ್ಣಲ್ಲಿ ಬದುಕಿನ ಅರ್ಥದ ಜಾಡನ್ನು ಕಂಡೆ!

"ಇದೇ ನನ್ನ ಪಾಲಿಗೆ ಬಂದ ಪಂಚಾಮೃತವೆಂದು ನಿರ್ಧರಿಸಿಬಿಟ್ಟಿದ್ದೇನೆ; ದೇವರು ಇಟ್ಟಹಾಗೇ ಇದ್ದು ಅದೇ ನನ್ನ ಸುಖ-ಸಂತೋಷವೆಂದು ಸ್ವೀಕರಿಸಿಬಿಟ್ಟಿದ್ದೇನೆ. ನಾನು ಮಾಡುತ್ತಿರುವ ಕರ್ತವ್ಯದಲ್ಲಿ ನನಗೆ ಸಮಾಧಾನವಿದೆ, ಆದರೆ ಯಜಮಾನರು ಬಳಲುವುದನ್ನು ನೋಡಿ ಬೇಸರವಾಗುತ್ತದೆ" ಎನ್ನುತ್ತಾ ತನ್ನ ಒಳಗನ್ನು ನನ್ನಲ್ಲಿ ಹರಹಿಕೊಂಡ ಆ ತಾಯಿಗೆ ನನ್ನ ಮಾತುಗಳಿಂದ ಸಾಂತ್ವನ ಹೇಳಲು ಸಾಧ್ಯವೇ? ಅಷ್ಟಕ್ಕೂ ನನ್ನ ಕಿರಿಯ ವಯಸ್ಸಿಗೂ ಅವಳ ಹಿರಿಯ ವಯಸ್ಸು-ವರ್ಚಸ್ಸಿಗೂ ಅಜ-ಗಜಾಂತರ ಕಾಣುತ್ತಿತ್ತು. ಸಾರಸ್ವತಲೋಕದ ಜನರನ್ನು ಅಪಾರವಾಗಿ ಗೌರವಿಸುವ ಆಕೆಗೆ, ಪತಿಯ ಪಕ್ಕದ ಬಿಡುವಿನ ವೇಳೆಗಳಲ್ಲಿ ಪುಸ್ತಕಗಳೇ ಜೀವಾಳವಂತೆ. ಉತ್ತಮ ಬರಹಗಾರರ ಪುಸ್ತಕಗಳಲ್ಲಿ ಹುದುಗಿದ ಕಥೆ-ಕವನ-ಕಾದಂಬರಿ-ಪ್ರಬಂಧ-ಹಾಸ್ಯ ಇವೆಲ್ಲವುಗಳಲ್ಲಿ ಬರುವ ಪಾತ್ರಗಳು ಬಿಂಬಿಸುವ ನವರಸಗಳು ಅವಳ ಹೃದ್ಗತವನ್ನು ಪ್ರತಿನಿಧಿಸಿ, ಅವಳೊಡನೆ ಮಾತನಾಡುತ್ತವಂತೆ. ಬರಹಾರನೊಬ್ಬನ ಬರಹಗಳು ಅಷ್ಟರಮಟ್ಟಿಗೆ ಜೀವಂತಿಕೆ ಇಟ್ಟುಕೊಂಡರೆ ಆ ಬರಹಗಾರನಿಗೆ ಇನ್ಯಾವ ಪ್ರಶಸ್ತಿಯ ಅಗತ್ಯ ಬೀಳುತ್ತದೆ?   

ಮಲ್ಲೇಶ್ವರದಲ್ಲಿ ನಾನುಕಂಡ ವೃದ್ಧ ದಂಪತಿಯ ಬಗೆಗೆ ತಿಳಿಸಿ, ಮಕ್ಕಳು ಓದಿ, ವಿದೇಶವಾಸಿಗಳಾಗಿ, ಮುಪ್ಪಿನ-ಅನಾರೋಗ್ಯದ ಸಮಯದಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಆ ದಂಪತಿಯ ಬವಣೆಯ ಬಗ್ಗೆ ಆ ತಾಯಿಗೆ ತಿಳಿಸಿದೆ. ಕೇಳಿದ ಆ ಕ್ಷಣದಲ್ಲಿ "ಹೌದಪ್ಪಾ ಮಕ್ಕಳ ಬಾಲ್ಯ, ಅವರು ಅಂಬೆಹರೆದ ದಿನಗಳು, ತೊದಲುಮಾತುಗಳನ್ನಾಡುತ್ತಿದ್ದ ದಿನಗಳು ಇವನ್ನೆಲ್ಲಾ ಯಾವ ತಾಯಿಯೂ ಮರೆಯಲಾರಳು." ಎಂದ ಆಕೆಗೆ  ತನ್ನಂತಹ ಅನೇಕ ಜನ ಜೀವನದಲ್ಲಿ ವಿವಿಧ ತೆರನಾಗಿ ಅಸಹಾಯರಾಗಿರುವ ಸಂಗತಿಗಳು  ನೆನಪಿಗೆ ಬಂದಿರಬೇಕು. ಅವಿಭಕ್ತ ಕುಟುಂಬ-ಸಂಸ್ಕೃತಿ ಕಾಲುಶತಮಾನದ ಹಿಂದಿನ ಇತಿಹಾಸದ ಭಾಗವಾಗಿ ಹೋದ ಈ ದಿನಗಳಲ್ಲಿ, ಮಕ್ಕಳು ಬೆಳೆದು ಉನ್ನತ ವ್ಯಾಸಂಗಗಳನ್ನು ಮುಗಿಸಿಕೊಂಡು ತಮ್ಮ ಪಾಡಿಗೆ ತಾವು ತಮ್ಮ ಜೀವನವನ್ನು ಕಟ್ಟಿಕೊಂಡು ದೂರವೇ ಇರಬೇಕಾಗುತ್ತದೆ. ಅವಕಾಶವಿದ್ದರೂ, ಅಧುನಿಕ ಜೀವನ ಶೈಲಿಗಾಗಿಯೋ, ಹೆಂಡತಿಯ ಮಾತು ಕೇಳಿಕೊಂಡೋ ಅದೆಷ್ಟೋ ಜನ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಇನ್ನೂ ಕೆಲವು ’ಬುದ್ಧಿಜೀವಿ ಮಕ್ಕಳು’ ಪಾಲಕರ ಅನಾರೋಗ್ಯದಲ್ಲಿ, ಅವರಿಗೆ ಸಮಯಕ್ಕೆ ಸರಿಯಾಗಿ ಉಪಚಾರ ನಡೆಯಲಿ ಎಂಬ ಕಾರಣಕ್ಕಾಗಿ ವೃದ್ಧಾಶ್ರಮಗಳಲ್ಲಿ ಬಿಟ್ಟುದಾಗಿ ಹೇಳುತ್ತಾರೆ.  ಹಣದಿಂದ ಸೇವೆಯನ್ನು ಖರೀದಿಸಿ ಕೊಡಬಹುದು ಆದರೆ ಪ್ರೀತಿಯನ್ನಲ್ಲ ಎಂಬುದು ಈ ಮೇಲಿನ ತರಗತಿಯ ಮಕ್ಕಳಿಗೆ ತಿಳಿದಿದೆಯೇ? ಗೊತ್ತಿಲ್ಲ. ಪ್ರೀತಿಸಿ, ಮುದ್ದಿಸಿ ವಿದ್ಯೆ-ಬುದ್ಧಿ ಕಲಿಸಿ ಬೆಳೆಸಿದ ನನ್ನಮ್ಮನಿಂದ ದೂರದಲ್ಲಿ ವಾಸವಾಗಿರುವ  ನಾನು ಈ ಮಾತನ್ನು ಹೇಳಲು ಹಕ್ಕುದಾರನೇ? ಖಂಡಿತಕ್ಕೂ ಅಲ್ಲ. ಮರೆಯಲಾಗದ, ಮರೆಯಬಾರದ ಆಮ್ಮನ ಋಣಕ್ಕೆ ಬೆಲೆಕಟ್ಟಲು ಬರುವುದೇ? ಆ ಪ್ರೀತಿ ಜೀವನದಲ್ಲಿ ಇನ್ಯಾರಿಂದಲಾದರೂ ದೊರೆವುದೇ? ದೇವರಾಣೆಗೂ ಇಲ್ಲ. ಅಂತಹ ಮಾತಾಮಹಿಗೊಂದು ಸಾಷ್ಟಾಂಗ ನಮಸ್ಕಾರ.

೧೯೬೯ ರಲ್ಲಿ ವಿದೇಶದಲ್ಲಿದ್ದಾಗಲೇ ’ಇಲ್ಲಸ್ಟ್ರೇಟೆಡ್ ವೀಕ್ಲಿ’ಗೆ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡವರು ಖುಷ್ವಂತ್ ಸಿಂಗರು; ಅದು ನಾನು ಕೇಳಿದ ಕಥೆ. ಹುಟ್ಟಿ-ಬೆಳೆದು-ಬುದ್ಧಿ ಬಲಿತು, ತಡವಾಗಿ ಕೆಲವೆಡೆ ಹಳೆಯ ಪುಸ್ತಕಗಳನ್ನೆಲ್ಲಾ ಹುಡುಕಿ, ಸಿಕ್ಕ ಇಲ್ಲಸ್ಟ್ರೇಟೆಡ್ ವೀಕ್ಲಿಯ ಆ ಕಾಲದ ಕೆಲವು ಸಂಚಿಕೆಗಳಲ್ಲಿ ಅವರ ಬರಹಗಳನ್ನು ಓದಿದ್ದೇನೆ. ಸಂಪಾದಕರಾಗಿ, ಬರಗಾರರಾಗಿ, ಪತ್ರಕರ್ತರಾಗಿ ಅವರು ಬರೆದ ಪ್ರತಿಯೊಂದೂ ಲೇಖನ, ಸಂಪಾದಕೀಯ ಎಲ್ಲವೂ ವಿಶಿಷ್ಟವಾಗಿವೆ. ಇಂದಿನ ಬರಹಗಾರರಿಗೆ ಓದಿನ ಕೊರತೆಯಿದೆ ಎನ್ನುವ ಅವರ ಹೇಳಿಕೆಯಲ್ಲಿ ಪತ್ರಿಕಾಮಾಧ್ಯಮ ಪರಸ್ಪರ ಪೈಪೋಟಿಯಲ್ಲಿ, ಬೇಡದ ವಿಷಯಗಳನ್ನು ಬಣ್ಣಗಳ ಮೆರುಗುಹಚ್ಚಿ ಬಡಿಸುತ್ತಿದೆ ಎಂಬ ವಿಷಾದವಿದೆ. ಪತ್ರಿಕಾರಂಗದ ಹೊಸಶಕೆಗಾರನೆನ್ನಿಸಿದ ಖುಷ್ವಂತ್ ಸಿಂಗ್ ಅವರ ಬರಹಗಳ ಹಿಂದೆ ಸತತ ಓಡಾಟದ ಪರಿಶ್ರಮವಿದೆ, ನಿರಂತರ ಓದಿನ ಜಾಗತಿಕ ಮಾಹಿತಿ ಭಂಡಾರವಿದೆ. ಓದುಗರ ಹೃದಯದ ಭಾವಗಳಿಗೆ ಅವರು ಬರಹಗಳ ರೂಪಕೊಟ್ಟಿದ್ದಾರೆ; ಆ ಬರಹಗಳಲ್ಲಿ ಜನ ತಮ್ಮ ಪ್ರತಿಬಿಂಬಗಳನ್ನು ಕಂಡು, ಅವುಗಳನ್ನು ಇಷ್ಟಪಟ್ಟಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು, ಅದರಲ್ಲೂ ಪತ್ರಕರ್ತರು ತಮ್ಮ ವೃತ್ತಿಬದುಕು-ಪ್ರವೃತ್ತಿಬದುಕು ಮತ್ತು ಖಾಸಗೀ ಬದುಕಿನಲ್ಲಿ ಶುದ್ಧ ಚಾರಿತ್ರ್ಯ ಉಳ್ಳವರಾಗಿರಬೇಕು-ಆಡಿದ್ದನ್ನೇ ತಾವೂ ಮಾಡಿತೋರಿಸುವವರಾಗಿರಬೇಕು ಎಂಬುದು ಖುಷ್ವಂತ್ ಸಿಂಗರ ಬಯಕೆ. ಆದರೆ ಎಷ್ಟು ಪತ್ರಕರ್ತರು ಇಂದು ಹಾಗಿದ್ದಾರೆ? ಪ್ರಶ್ನೆ ಹಾಗೇ ಉಳಿಯುತ್ತದೆ! 

ಬಹುಕಾಲದಿಂದ ನನಗೊಂದು ಚಾಳಿಯಿದೆ: ಅದೆಂದರೆ ಮನೆಯಲ್ಲಿ, ಕಚೇರಿಯಲ್ಲಿ, ಕಣ್ಣೆದುರಲ್ಲಿ ಚಲನೆಯುಳ್ಳ, ಚಾಲನೆಯುಳ್ಳ ವಸ್ತುಗಳನ್ನು ನೋಡಬಯಸುವುದು; ಆ ದೃಷ್ಟಿಯಿಂದ ಹಳೆಯ ಗಡಿಯಾರಗಳಲ್ಲಿದ್ದಂತಹ ಓಲಾಡುವ ಪೆಂಡೂಲಂ ನನಗೆ ವಿಶಿಷ್ಟವೆನಿಸುತ್ತದೆ. ಇಂದಿನ ಇಲೆಕ್ಟ್ರಾನಿಕ್ ಕ್ಲಾಕ್ ಗಳಲ್ಲಿರುವ ಸೇಕಂದು ಮುಳ್ಳಿನ ಹಾರುವ ತಿರುಗಾಟ ಇಷ್ಟವಾಗುತ್ತದೆ. ಸದಾ ಉರಿಯುತ್ತಿರುವ ಎಣ್ಣೆ-ಬತ್ತಿಯ ದೀಪ ಇಷ್ಟವಾಗುತ್ತದೆ. ದಿನದ ಯಾವುದೇ ಘಳಿಗೆಯಲ್ಲೂ ಸೂರ್ಯನ ಬೆಳಕು ಇಷ್ಟವಾಗುತ್ತದೆ. ನಿಶೆಯಲ್ಲಿ ಚಂದ್ರಮನ ಬೆಳದಿಂಗಳು ಇಷ್ಟವಾಗುತ್ತದೆ. ಮಂದಮಾರುತಕ್ಕೆ ಮೈಕುಲುಕುವ ಗಿಡಮರಗಳು ಇಷ್ಟವಾಗುತ್ತವೆ. ಸದಾ ಲವಲವಿಕೆಯಿಂದ ಹಾರುವ-ಕೂಗುವ ಹಕ್ಕಿಪಕ್ಷಿಗಳು ಇಷ್ಟವಾಗುತ್ತವೆ. ಆಲಸ್ಯದ ನಾಯಿ, ಮಲಗೇ ಇರುವ ಬೆಕ್ಕು, ದಟ್ಟಗೆ ಕವಿದು ಗಂಟೆಗಟ್ಟಲೆ ಹಾಗೇ ನಿಂತಿರುವ ಮೋಡಗಳು, ಬೊಂಬೆಯಂತೇ ಅಲ್ಲಾಡದೇ ನಿಂತ ಗಿಡಮರಗಳು ಇಂಥವೆಲ್ಲಾ ನನಗೆ ಇಷ್ಟವಲ್ಲ; ನಿಂತುಹೋದ ಗಡಿಯಾರ, ಆರಿಹೋದ ಎಣ್ಣೆಬತ್ತಿಯ ದೀಪ ಮೊದಲಾದ ಕೆಲವನ್ನು ನಾನು ನೋಡಲು ಬಯಸುವುದಿಲ್ಲ. ವ್ಯಕ್ತಿ ಆಕ್ಟಿವ್ ಆಗಿರಬೇಕೆಂದರೆ ತನ್ನ ಸುತ್ತಲಿನ ಜಾಗದಲ್ಲಿ ಅಂತಹ ಆಕ್ಟಿವ್ ನೆಸ್ ಅನುಭವಿಸಬೇಕು. ಸುತ್ತಲಿನ ವಸ್ತು, ವಿಷಯಗಳಲ್ಲಿ ಜೀವಂತಿಕೆಯನ್ನು ಕಾಣಬೇಕು. ಬಿದ್ದುಕೊಂಡಿರುವ ಕಲ್ಲಿನಲ್ಲೂ ಮೂರ್ತಿಯರಳಬಲ್ಲ ಆಲೋಚನೆ ವ್ಯಕ್ತಿಯಲ್ಲಿ ಮೂಡಬೇಕು. ಅಂತಹ ಚಲನಶೀಲತೆಯನ್ನು ವ್ಯಕ್ತಿ ತನ್ನೊಳಗೆ ಆಹ್ವಾನಿಸಿ ತನ್ನ ಜೀವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ವ್ಯಕ್ತಿಗೆ ಬದುಕಿನ ಬಹುಮುಖಗಳ, ಮಜಲುಗಳ ಅನುಭವ ಪ್ರಾಪ್ತವಾಗುತ್ತಾ ಹೋಗುತ್ತದೆ. ನೀರವದ ನಕಾರಾತ್ಮಕತೆಯಲ್ಲೂ ಸಕಾರಾತ್ಮಕವಾಗಿ ಚಿಂತಿಸುವ ಮನಸ್ಸು ಸಿದ್ಧಗೊಳ್ಳುತ್ತದೆ.  

ಪತ್ರಕರ್ತನೊಬ್ಬ ಅಧ್ಯಯನಶೀಲನಾದರೆ ಸಮಾಜಕ್ಕೂ, ಸರಕಾರಕ್ಕೂ, ಅಷ್ಟೇ ಏಕೆ ವಿದ್ಯೆಕಲಿಸುವ ಉಪಾಧ್ಯಾಯರುಗಳಿಗೂ ಆತ ಅಧ್ಯಾಪಕನಾಗಬಹುದು! ತನ್ನ ಓದಿನಾಳದಿಂದ ಹಲವು ಅನುಭವದ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು  ಬೊಗಸೆಗಟ್ಟಲೆ ಹೆಕ್ಕಿ ಹೆಕ್ಕಿ ಸಮಾಜಕ್ಕೆ ಬಡಿಸಬಹುದು. ಸಮಾಜದ ಸಕಲ ಕ್ಷೇತ್ರಗಳ, ಸಕಲ ವರ್ಗಗಳ ಜನರಿಗೆ ’ಇದಮಿತ್ಥಂ’[ಇದು ಹೀಗೇ ಸರಿ] ಎಂಬುದನ್ನು ಮನದಟ್ಟುಮಾಡಿಸಬಹುದು. ಅಧ್ಯಯನದ ಕೊರತೆಯಿರುವ ಜನಗಳೂ ಲೇಖಕರಾಗಿರುವ ಇಂದಿನ ದಿನಗಳಲ್ಲಿ ಯಾವ ಮೌಲ್ಯದ ಬರಹಗಳನ್ನು ನಿರೀಕ್ಷಿಸಲು ಸಾಧ್ಯ?  ಬರಹವೆಂದರೆ ನಾಲ್ಕಾರು ಪದಗಳ ಸರ್ಕಸ್ಸಲ್ಲ, ಬರವಹೆಂದರೆ ಕೇವಲ ಒಮ್ಮುಖವಾಗಿ ಹೊಮ್ಮುವ ಭಾವಗಳ ಮಿಡಿತವಲ್ಲ, ಬರವೆಂದರೆ ಕೇವಲ ಯಾವುದೋ ಒಂದು ಜನಾಂಗದ ಖಾಸಗೀ ಧೋರಣೆಗಳ ಅಭಿವ್ಯಕ್ತಿಯಲ್ಲ, ಬರಹವೆಂದರೆ ಸಿನಿಮಾ-ಚಿತ್ರಗಳ-ಗಾಸಿಪ್ ಗಳ ಕಲಸುಮೇಲೋಗರವಲ್ಲ, ಬರಹವೆಂದರೆ ಬರಹಗಾರನ ಸ್ವಂತದ ಅಭಿಪ್ರಾಯ ಕೂಡ ಅಲ್ಲ. ಹಾಗಾದರೆ ಬರಹವೆಂದರೆ ಏನು ಎಂದರೆ ಬರಹವೆನ್ನುವುದು ಬರಹಗಾರನ ವಿಶ್ವತೋಮುಖತ್ವದ ಅಭಿವ್ಯಕ್ತಿ; ಬರೆಯುವ ಬರಹಗಳು ಸರ್ವಸಮ್ಮತವಾಗಬೇಕು, ಬರೆಯುವ ಬರಹಗಳು ಸಮಾಜಕ್ಕೆ ತಿಳುವಳಿಕೆ ನೀಡುವಂತಿರಬೇಕು, ಬರೆಯುವ ಬರಹಗಳು  ರಂಜನೆಯ ಜೊತೆಜೊತೆಗೆ ಉದಾತ್ತ ಜೀವನಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಹೀಗಾದಾಗ ಮಾತ್ರ ಬರಹಗಾರನ ಬರಹಗಳಲ್ಲಿ ಜೀವಂತಿಕೆ ಮೇಳೈಸಿರುತ್ತದೆ. ಅಂಥವರ ಬರಹಗಳ ಮಾನಸ ಸರೋವರಗಳಲ್ಲಿ ಖುಷ್ವಂತ್ ಸಿಂಗ್ ರಂತಹ ಉತ್ತಮ ಬರಹಗಾರರೆಲ್ಲರೂ ಈಜು ಹೊಡೆಯುತ್ತಿರುತ್ತಾರೆ! ಬರಹವೆಂಬುದು ಸಾರಸ್ವತ ಪೀಠದಿಂದ ಹೊಮ್ಮುವ ಅಭಿಪ್ರಾಯವಾದರೆ ಅಂತಹ ಘನತರದ ಪೀಠದಲ್ಲಿ ಕುಳಿತು ಬರೆಯಲು ತಾನು ಸಮರ್ಥನೇ ಎಂಬುದನ್ನು ಬರಹಗಾರ ತನ್ನಲ್ಲೇ ಸದಾ ಕೇಳಿಕೊಳ್ಳುತ್ತಿರಬೇಕು; ಅನರ್ಹನೆಂದು ಅಂತರಾತ್ಮ ಘೋಷಿಸಿದ ಕ್ಷಣದಿಂದ ಆ ಪೀಠವನ್ನು ತ್ಯಜಿಸಿ ಬರೆಯುವುದನ್ನು ನಿಲ್ಲಿಸಿಬಿಡಬೇಕು.   

Monday, May 27, 2013

ಹೊಲೆಯನಾರೂರ ಹೊರಗಿರುವವನೆ ಹೊಲೆಯ ?


ಹೊಲೆಯನಾರೂರ ಹೊರಗಿರುವವನೆ ಹೊಲೆಯ ?

ಬಸವಣ್ಣನವರ ವಚನಗಳಲ್ಲಿ ಇಂಥಾದ್ದನ್ನು ನಾವು ಕೇಳಿದ್ದೇವೆ. ’ಹೊಲೆಯ’ ಎಂಬ ಪದ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ನಾವು ಪರಾಂಬರಿಸಿದರೆ ಆ ಪದದ ಬಳಕೆಯ ಅನಿವಾರ್ಯತೆ ಇಂದಿಗೂ ಇದೆ ಎಂಬುದು ಸ್ವಷ್ಟವಾಗುತ್ತದೆ. ನಾಯಿಯ ಬಾಲ ಜನ್ಮತಃ ಸಹಜವಾಗಿ ಡೊಂಕೇ ಇರುತ್ತದೆ; ಅದನ್ನು ದಿನ, ವಾರ, ತಿಂಗಳು, ವರ್ಷಗಟ್ಟಲೆ ನೆಟ್ಟಗಿರುವ ಪೈಪಿನಲ್ಲಿ ಹಾಕಿಟ್ಟು ಆಮೇಲೆ ತೆಗೆದು ನೋಡಿದರೂ ಅದು ಬದಲಾಗುವುದಿಲ್ಲ. ಬಸವಣ್ಣನವರೇನೋ ತಮ್ಮ ಉದಾತ್ತತೆಯಿಂದ ಹೊಲೆಯರೆಂಬವರನ್ನೂ ಬದಲಿಸಲು ಹೊರಟರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಹಾಗಾದರೆ ಯಾರು ಹೊಲೆಯ ಎಂದರೆ ಹಾಲು ಕುಡಿದ ಬಗ್ಗೆ ಕನಿಷ್ಠ ಕೃತಜ್ಞತೆ ಇಟ್ಟುಕೊಳ್ಳದೇ ಹಾಲೂಡಿದ ಹಸುವನ್ನೇ ಕತ್ತರಿಸಿ ಹೊಟ್ಟೆಗೆ ಇಳಿಸುವವ ಹೊಲೆಯ. ಕಾಂಗೈ ಬರುವಾಗಲೇ ಅದರ ಕೆಟ್ಟ ಗಾಳಿ ಬೀಸತೊಡಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ, ರಾಜರ ಆಳ್ವಿಕೆಯಲ್ಲಿ ಸುಭಿಕ್ಷದಿಂದಿದ್ದ ದೇಶವನ್ನು ಹಡಾಲೆಬ್ಬಿಸಿದವರೇ ಇಂದಿರಾ ಕಾಂಗ್ರೆಸ್ಸಿಗರು. ಮಹಾತ್ಮಾ ಗಾಂಧಿಯವರು ಮಡಿದಾನಂತರ ಕಾಂಗ್ರೆಸ್ಸು ತನ್ನ ವರ್ಚಸ್ಸನ್ನು ಕಳೆದುಕೊಂಡೇ ಬಿಟ್ಟಿತು. ನೆಹರೂ ಕುಟುಂಬದ ಅನುವಂಶೀಯ ಮೊಕ್ತೇಸರಿಕೆಯಲ್ಲಿ ನಡೆದುಬಂದ ಆ ಪಕ್ಷ ದೇಶಕ್ಕೆ ಎಸಗದ ಹಾನಿಯಿಲ್ಲ! ಪ್ರಮುಖವಾಗಿ ಅಧಿಕಾರ ಲಾಲಸೆಯಿಂದ ದೇಶದ ಸನಾತನ ಸಂಸ್ಕೃತಿಯನ್ನು ಬಲಿಗೊಟ್ಟಿರುವುದು ಕಾಣುತ್ತದೆ.   

ಅನೇಕ ಜನ ’ಬುದ್ಧಿಜೀವಿಗಳು’ ಬಂದು ಟಿವಿ ಚಾನೆಲ್ ಗಳಲ್ಲಿ ಅನಾವಶ್ಯಕವಾಗಿ ಗಂಟೆಗಟ್ಟಲೆ ಕಾಲಹರಣಮಾಡುತ್ತಾರೆ. ಎಲ್ಲರೂ ಡಾಕ್ಟರುಗಳೇ!! ಡಾಕ್ಟರೇಟ್ ಪಡೆದುಕೊಳ್ಳುವ ಬಗೆಯನ್ನು ಹಿಂದೊಂದು ಲೇಖನದಲ್ಲಿ ವಿವರಿಸಿದ್ದೆ, ಮತ್ತೆ ಅದನ್ನು ಈಗ ಪ್ರಸ್ತಾಪಿಸುವುದಿಲ್ಲ. ಅಂಥಾ ಡಾಕ್ಟರೇಟ್ ಪಡೆದವರಿಗೂ ಸನಾತನ ಸಂಸ್ಕೃತಿಗೂ ಯಾವುದೇ ಸಂಬಂಧವಿರುವುದಿಲ್ಲ; ಅವರೆಲ್ಲಾ ಸುಸಂಸ್ಕೃರೂ ಆಗಿರಬೇಕೆಂದಿಲ್ಲ. ಕಾಲದ ವೈಪರೀತ್ಯದಿಂದ ಮಾಂಸಾಹಾರವನ್ನು ತಿನ್ನದ ವರ್ಗವನ್ನು ಹೀಗಳೆಯುವ ಮಂದಿ ಹೇರಳವಾಗಿದ್ದಾರೆ. ಮಾಂಸಹಾರ ಯಾಕೆ ವರ್ಜ್ಯ ಎಂಬ ಕಾರಣಕ್ಕೆ ಮಹತ್ವ ಕೊಡದೇ ಕೇವಲ ವಾದಕ್ಕಾಗಿ ವಾದವನ್ನು ಮಂಡಿಸುತ್ತಾ, ತಮ್ಮದೇ ಸತ್ಯವೆಂದು ಜಯಭೇರಿ ಬಾರಿಸುತ್ತಾರೆ; ಸಂಖ್ಯಾಬಲದಲ್ಲಿ ಸಣ್ಣವರಾದ ಶಾಕಾಹಾರಿಗಳು ಸುಮ್ಮನಾಗುತ್ತಾರೆ. ಅಧುನಿಕ ಯುಗದಲ್ಲಿ ಮಾಹಿತಿತಂತ್ರಜ್ಞಾನದ ಬೆಳವಣಿಗೆಯಿಂದ ಮಾಹಿತೆಗೇನೂ ಕೊರತೆಯಿಲ್ಲ. ಆದರೆ ಪೂರ್ವಾಗ್ರಹ ಪೀಡಿತರಾಗದೇ ಮಾಹಿತಿಯನ್ನು ಸ್ವೀಕರಿಸುವ ಸ್ವಭಾವಜನಕೊರತೆಯುಂಟು. ಅಧುನಿಕ ವಿದ್ಯೆಯನ್ನು ಓದಿಕೊಂಡ ಮಾತ್ರಕ್ಕೆ ವ್ಯಕ್ತಿ ಸುಸಂಸ್ಕೃತನಾಗುವುದಿಲ್ಲ, ತಾನೇನು ಮಾಡಬೇಕು ಎಂಬುದನ್ನು ಅರಿತುಕೊಂಡು ತನ್ನಲ್ಲಿರುವ ಲೋಪಗಳನ್ನು ಬದಲಾಯಿಸಿಕೊಂಡರೆ ಮಾತ್ರ ವ್ಯಕ್ತಿ ಸುಸಂಸ್ಕೃತನೆನಿಸುತ್ತಾನೆ.

ಹುಟ್ಟಿದ ಎಲ್ಲಾ ಪ್ರಾಣಿಗಳೂ ಬದುಕುತ್ತವೆ, ಬದುಕಿಗಾಗಿ ಹೋರಾಡುತ್ತವೆ, ತಿನ್ನುತ್ತವೆ-ವಿಶ್ರಾಂತಿ ಪಡೆಯುತ್ತವೆ-ಸಂತತಿ ವೃದ್ಧಿಸುತ್ತವೆ ಹೀಗೇ ಬದುಕಿ ಒಂದು ದಿನ ಸಾಯುತ್ತವೆ. ಇದರ ಪುನರಾವರ್ತನೆ ಸೃಷ್ಟಿಯ ನಿಯಮ. ಆದರೆ ಜೀವಿಗಳಲ್ಲಿ ಅತಿ ಹೆಚ್ಚು ವಿಕಸಿತ ಬುದ್ಧಿಮಟ್ಟದ ಮೆದುಳನ್ನು ಹೊಂದಿದ ಜೀವಿಯೆಂದರೆ ಮನುಷ್ಯ. ಹುಟ್ಟಿನಿಂದ ಮಾನವನೆನ್ನಿಸಿಕೊಳ್ಳುವುದಕ್ಕೂ ಸಂಸ್ಕಾರದಿಂದ ಮಾನವನೆನಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ||ಮನುಷ್ಯ ರೂಪೇಣ ಮೃಗಾಶ್ಚರಂತಿ|| ಎಂಬ ಹಾಗೇ ಕೆಲವರು ಮನುಷ್ಯ ರೂಪದಲ್ಲೇ ಇದ್ದರೂ ಮೃಗಗಳಂತೇ ವರ್ತಿಸುತ್ತಾರೆ. ಹುಟ್ಟಿನಿಂದ ಎಲ್ಲರೂ ಸಂಸ್ಕಾರವಂತರಾಗಿರುವುದಿಲ್ಲ. ಸಂಸ್ಕಾರ ಪಡೆಯುವಲ್ಲಿ ವ್ಯಕ್ತಿಯೊಬ್ಬ ಹುಟ್ಟಿ ಬೆಳೆದ ಪರಿಸರವೂ ವ್ಯಕ್ತಿಯ ಮೇಲೆ ಹಲವು ಪರಿಣಾಮ ಬೀರುತ್ತದೆ.

ಬಾಲ್ಯದಲ್ಲಿ ಮಗುವಿಗೆ ತಂದೆ-ತಾಯಿ ಮತ್ತು ಪರಿಸರ ಕೊಡುವ ಸಂಸ್ಕಾರ ಬಹಳ ಮುಖ್ಯ. ಮಗುವಿನ ಮನಸ್ಸು  ಹಸಿಮಣ್ಣಿನ ಗೋಡೆಯಿದ್ದಂತೇ. ಹಸಿಮಣ್ಣಿನ ಗೋಡೆಗೆ ದೂರದಿಂದ ಚಿಕ್ಕ ಕಲ್ಲುಗಳನ್ನು ಎಸೆದರೆ ಹೇಗೆ ಅಂಟಿಕೊಳ್ಳುವುದೋ ಹಾಗೇ ಚಿಕ್ಕ ಮಗುವಿಗೆ ಗ್ರಾಹಕ ಶಕ್ತಿ ಜಾಸ್ತಿಯಿರುತ್ತದೆ. ತಾನು ಗ್ರಹಿಸಿದ್ದನ್ನು ನೆನಪಿನಲ್ಲಿಟ್ಟು ಅನುಕರಿಸುವ ಮನಸ್ಸೂ ಕೂಡ ಇರುತ್ತದೆ. ಕೂಡುಕುಟುಂಬದ ಪದ್ಧತಿಯನ್ನು ಕಳೆದುಕೊಂಡಿದ್ದೇವೆ. ಇಡೀ ಸಮಾಜ ಆಧುನಿಕೀಕರಣಕ್ಕೆ ಮೊರೆಹೋಗಿ ಎಲ್ಲಾ ಅಪ್ಪ-ಅಮ್ಮ-ಮಗು ಇಷ್ಟೇ. ಎಲ್ಲೋ ಅಪ್ಪಿ-ತಪ್ಪಿ ಇಬ್ಬರು ಮಕ್ಕಳಿದ್ದರೆ ಆಶ್ಚರ್ಯ. ಮಕ್ಕಳು ಜಾಸ್ತಿ ಬೇಕು ಎಂದು ಹೇಳುತ್ತಿಲ್ಲ, ಆದರೆ ಹಿಂದಿನ ದಿನಗಳಲ್ಲಿ ಹುಟ್ಟಿದ ಮಗುವಿಗೆ ಸುತ್ತಮುತ್ತ ಹತ್ತಾರು ಜನ ಎತ್ತಿ ಆಡಿಸುವವರಿರುತ್ತಿದ್ದರು. ಮನೆಯಲ್ಲಿ ಹಿರಿಯರು, ಅನುಭವಿಕರು ಇರುತ್ತಿದ್ದು ಮಕ್ಕಳಿಗೆ ರಾಮಾಯಣ-ಮಹಾಭಾರತಗಳಿಂದ ಹಾಗೂ ಇತರ ಅನೇಕ ನೀತಿಕಥೆಗಳಾದ ಪಂಚತಂತ್ರ ಮೊದಲಾದವುಗಳಿಂದಲೂ ಇದಲ್ಲದೇ ಜನಪದರು ಹೊಸೆದ ಗ್ರಾಮೀಣ ಕಥೆಗಳಿಂದಲೂ ಮಕ್ಕಳನ್ನು ರಂಜಿಸುತ್ತಾ, ಅವರಿಗೆ ಆ ಮೂಲಕ ತಿಳುವಳಿಕೆಯ ಮಾರ್ಗವನ್ನು ತೋರಿಸುತ್ತಿದ್ದರು, ಒಳ್ಳೆಯತನವನ್ನು ಬೋಧಿಸುತ್ತಿದ್ದರು. ಇಂದು ಇವೆಲ್ಲಾ ನೆನೆಸಲೂ ಸಾಧ್ಯವಿಲ್ಲದಷ್ಟು ನಾವೆಲ್ಲಾ ಬಿಡುವಿಲ್ಲದ ಕೆಲಸಗಳಲ್ಲಿ ನಿರತರು! ಹೀಗಾಗಿ ಮಕ್ಕಳು ಎಂದಿದ್ದರೂ ಮಕ್ಕಳೇ ಆಗಿರುವುದರಿಂದ ಅವರಿಗೆ ಸರಿಯಾಗಿ ತಿಳಿಹೇಳುವವರಾರು ಎಂಬುದು ಪ್ರಶ್ನೆಯಾಗಿದೆ.

ಸುಮಾರು ೪೦ ವರ್ಷಗಳ ಹಿಂದೆಯೇ ’ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಜನಾನುರಾಗಿಯಾಗಿದ್ದ ಸಿದ್ದಯ್ಯ ಪುರಾಣಿಕರು ತಮ್ಮ ಕಾವ್ಯದಲ್ಲಿ ಹೇಳುತ್ತಾರೆ:

ಏನಾದರೂ ಆಗು ನೀ ಬಯಸಿದಂತಾಗು
ಏನಾದರೂ ಆಗು ನಿನ್ನಿಚ್ಛೆಯಂತಾಗು
ಏನಾದರೂ ಸರಿಯೇ ಮೊದಲು ಮಾನವನಾಗು 

ಇವತ್ತಿನ ದಿನಮಾನದಲ್ಲಿ ನಾವು ನಮ್ಮ ಸುತ್ತಲ ಪರಿಸರದಲ್ಲಿ ನೋಡಿದಾಗ, ನಡೆಯುತ್ತಿರುವ ಕೊಲೆ-ಸುಲಿಗೆ-ದರೋಡೆಗಳು, ಅನ್ಯಾಯ-ಅತ್ಯಾಚಾರ-ಅನಾಚಾರ-ಮೋಸ ಇತ್ಯಾದಿ ಹೇಸಿಗೆಯ ಕೃತ್ಯಗಳು ಇವೆಲ್ಲಾ ಕಣ್ಣಿಗೆ ಬಿದ್ದಾಗ, ಸುದ್ದಿ ತಿಳಿದು ಮನಸ್ಸು ನೋವನ್ನು ಅನುಭವಿಸುತ್ತದೆ. ಎಷ್ಟೋ ಪ್ರಾಣಿಗಳು ಅವುಗಳಿಗೆ ಬುದ್ಧಿ ಕಮ್ಮಿ ಇದ್ದರೂ ಸಂಕೇತಗಳಿಂದಲೇ ತಮ್ಮ ತಮ್ಮ ತೊಂದರೆಗಳನ್ನು ಪರಸ್ಪರರಲ್ಲಿ ಹಂಚಿಕೊಂಡು ಅರ್ಥಮಾಡಿಕೊಂಡು ಬದುಕುತ್ತವೆ. ಇರುವೆಗೆ ಸಾಲಾಗಿ ಹೋಗಲು ಯಾರು ಹೇಳಿಕೊಟ್ಟರು, ಮೀನಿಗೆ ಈಜಲು ಯಾರು ಕಲಿಸಿದರು, ಹಕ್ಕಿಗೆ ಹಾರಲು ಯಾರು ತರಬೇತಿಕೊಟ್ಟರು....ಇವೆಲ್ಲಾ ನಿಸರ್ಗದ ನಿಯಮಗಳು. ದಯಾಮಯಿಯಾದ ಜಗನ್ನಿಯಾಮಕ ಮನುಷ್ಯನಿಗೆ ವಿಕಸಿತ ಮನಸ್ಸನ್ನು ಕೊಟ್ಟು ಅದರ ಕೀಲಿಯನ್ನೂ ನಮಗೇ ಕೊಟ್ಟ. ಆದರೆ ಆ ಕೀಲಿಯನ್ನು ನಾವೀಗ ದುರುಪಯೋಗಮಾಡಿಕೊಳ್ಳುತ್ತಿದ್ದೇವೆ. ಕವಿ ಮುಂದುವರಿದು ಹೇಳುತ್ತಾರೆ :

ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು ದುಡಿದು ಗಳಿಸಿ

ನಾವು ಇಚ್ಛಿಸಿದಂತೇ ನಮ್ಮ ವೃತ್ತಿ. ನಮ್ಮ ವೃತ್ತಿಯಿಂದಲೇ ನಮ್ಮ ಜಾತಿ. || ಚಾತುರ್ವಣ್ಯಂ    ಮಯಾಸೃಷ್ಟಂ  ಗುಣಕರ್ಮ ವಿಭಾಗಶಃ || ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ. ನಾವು ಯಾವ ಯಾವ ಕೆಲಸವನ್ನು ಮಾಡುತ್ತೇವೋ ಅದರಿಂದಲೇ ನಾವು ಆಯಾ ಜಾತಿಗೆ ಸೇರಿದವರೇ ವಿನಃ ಜಾತಿ ಜನ್ಮಜಾತವಲ್ಲ ಎಂದನಲ್ಲವೇ ?  ಚೆನ್ನಾಗಿ ಓದು, ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸ; ಉತ್ತಮ ಸಂಸ್ಕಾರ ಪಡೆ --ಈ ಮೂಲಕ ನೀನು ಬ್ರಾಹ್ಮಣನಾಗುತ್ತೀಯ. ದೇಶದ ರಕ್ಷಣೆಗಾಗಿ ಯೋಧನಾಗಿ ಮೆರೆ ನೀನಾಗ ಕ್ಷತ್ರಿಯನಾಗುತ್ತೀಯ. ವ್ಯಾಪಾರಮಾಡಿದಾಗ ವೈಶ್ಯನೂ ಹೊಲದಲ್ಲಿ ದುಡಿದಾಗ ಶೂದ್ರನೂ ಆಗುತ್ತೀಯ. ಅಂದರೆ ಈ ನಾಲ್ಕೂ ಅಂಶಗಳು ಒಬ್ಬ ವ್ಯಕ್ತಿಯಲ್ಲೇ ಇರಲು ಸಾಧ್ಯವಷ್ಟೇ ? ಸಮಯಕ್ಕೆ ತಕ್ಕಂತೆ ಒಬ್ಬನೇ ವ್ಯಕ್ತಿ ಈ ನಾಲ್ಕೂ ವರ್ಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ.  ಕವಿ ಮತ್ತೆ ಸಾರುತ್ತಾರೆ:

ಹಿಂದೂ ಮುಸ್ಲಿಮನಾಗು ಬೌದ್ಧ ಕ್ರೈಸ್ತನೇ ಆಗು
ಚಾರುವಾಕನೆ ಆಗು ಭೋಗ ಬಯಸಿ

ನೀನೊಬ್ಬ ಹಿಂದೂವೋ ಮುಸ್ಲಿಮನೋ ಬೌಧ್ಧನೋ ಕ್ರೈಸ್ತನೋ ಆಗು ಅಥವಾ ಭೋಗ ಬಯಸುವ ಚಾರ್ವಾಕನೇ ಆಗು ಆದರೆ ಅದೆಲ್ಲಕ್ಕೂ ಮೊದಲು ನೀನು ಮಾನವನಾಗು --ಎಷ್ಟು ಚೆನ್ನಾಗಿದೆ ನೋಡಿ !

ರಾಜಕಾರಣಿಯಾಗು ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು

ರಾಜಕಾರಣಿಯಾದರೂ ಆಗಬಹುದು, ದೇಶಭಕ್ತನಾಗಿ ಹಲವಾರು ರೀತಿಯಲ್ಲಿ ಸೇವೆಸಲ್ಲಿಸಬಹುದು,  ಶಿಲ್ಪಿ-ಕಲೆಗಾರ-ವಿಜ್ಞಾನಿ-ವೈದ್ಯ ಇತ್ಯಾದಿ ಯಾವುದೇ ಉದ್ಯೋಗಲ್ಲೂ ತೊಡಗಬಹುದು...ಆದರೆ ಇದೆಲ್ಲಕ್ಕೂ ಮೊದಲು ಮಾನವರಾಗುವುದನ್ನು ಕಲಿಯಬೇಕು ಎಂಬುದು ಕಾವ್ಯದ ಸಾರ, ಸಂದೇಶ.

ಒಬ್ಬ ದರ್ಜಿ, ಒಬ್ಬ ಮೋಚಿ ಮತ್ತು ಒಬ್ಬ ನಾಪಿಕ ಈ ಮೂರು ಜನರಿದ್ದರೆ ಯಾವ ವ್ಯಕ್ತಿಯೂ ಹೊರಗಿನಿಂದ ಸಿಂಗಾರಗೊಂಡು ಚೆನ್ನಾಗಿ ಕಾಣಬಹುದು. ಆದರೆ ಅದೇ ಆತನ ನಡವಳಿಕೆಗೆ ಇವರಾರೂ ಏನೂ ಮಾಡಲಾರರು. ಹರುಕು ಬಟ್ಟೆಯನ್ನೇ ತೊಟ್ಟಿದ್ದರೂ ಉತ್ತಮ ಗುಣನಡತೆ ಹೊಂದಿದ್ದರೆ ಆತ ಮಾನ್ಯನೇ ಸರಿ. ಏನೋ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಧನಿಕನಾಗದವನು ಹೃದಯಶ್ರೀಮಂತಿಕೆಯಲ್ಲಿ ಕೊರತೆ ಹೊಂದಿದವನಾಗಿರಲೇ ಬೇಕೆಂದೇನಿಲ್ಲ.

ಇವತ್ತಿನ ಮಾಧ್ಯಮ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲವು ಬೇಡದ ಪ್ರಸಂಗಗಳನ್ನು, ಮನಕಲಕುವ ದೃಶ್ಯಗಳನ್ನೂ ಮಕ್ಕಳು ನೋಡುತ್ತಿರುತ್ತಾರೆ. ನಾವು ಒಳ್ಳೆಯ ಸಂಸ್ಕಾರವನ್ನು ಪಡೆದಮೇಲೆ ಮಕ್ಕಳನ್ನೂ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೇ ತಿದ್ದಬೇಕಲ್ಲವೇ?  ಮೊನ್ನೆ ದೀಪಾವಳಿಯ ಸಡಗರದಲ್ಲಿ ದೇಶವೇ ನಲಿಯುತ್ತಿದ್ದರೆ ಒಂದು ಹಳ್ಳಿಯ ಒಬ್ಬರ ಮನೆಯಲ್ಲಿ ಹುಡುಗನೋರ್ವ ಅಡುಗೆ ಮನೆಗೆ ಬಂದ. ಅಮ್ಮ ಮಾಡುತ್ತಿದ್ದ ಹೋಳಿಗೆ ಪಡೆದು ತಿಂದ. ಅಮ್ಮ ಕೆಲಸದಲ್ಲಿ ನಿರತರಾಗಿರುವಾಗ ಈ ಹುಡುಗ ಮಹಡಿಯೇರಿ ಹೋಗಿ ಅಲ್ಲಿ ಮೊದಲೇ ತಾನು ತಂದಿಟ್ಟಿದ್ದ ನೇಣನ್ನು ಹಾಕಿಕೊಂಡು ನೇತಾಡಿದ !  ಏನಾಗುತ್ತದೆ ಎಂಬುದನ್ನು ಅನುಭವಿಸಿ ನೋಡಲು ಆತ ಹಾಗೆ ಮಾಡಿದ್ದು. ಹುಡುಕುತ್ತಾ ಅಮ್ಮ ಮತ್ತು ಮಿಕ್ಕುಳಿದವರು ಬರುವಷ್ಟರಲ್ಲಿ ಆತ ಶಿವನಪಾದ ಸೇರಿದ್ದ. ಇದು ಇಂದಿನ ಧಾರಾವಾಹಿ ಹಾಗೂ ಚಲನಚಿತ್ರಗಳ ಒಂದು ಮುಖದ ಪರಿಣಾಮ.

ದಿನಾಲೂ ಅನೇಕ ಮನೆಗಳಲ್ಲಿ ಮಲಗುವ ಮುನ್ನ ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಕೊಲೆಸುಲಿಗೆಯ ದೃಶ್ಯಗಳ ವಿವರಣೆಗಳನ್ನು ನೋಡುತ್ತಾರೆ. ಇದರಿಂದ ಮನಸ್ಸಿಗೆ ಋಣಾತ್ಮಕ ಭಾವಗಳು ಆವರಿಸಿಕೊಂಡು ಒಳಗೊಳಗೇ ಮನಸ್ಸು ಚಡಪಡಿಸುತ್ತದೆ. ಪೂರ್ವಜರು ಹಿಂದಕ್ಕೆ ರಾಮಾಯಣದಂತಹ ಕಥೆಯ ರಾಮನಿರ್ಯಾಣ, ಮಹಾಭಾರತದ ಕರ್ಣಾವಸಾನ ಇಂಥದ್ದನ್ನೆಲ್ಲಾ ಕೂಡ ರಾತ್ರಿ ಮಲಗುವ ಮುನ್ನ ಓದುವುದೋ, ಕೇಳುವುದೋ, ಗಮಕವಾಚಿಸುವುದೋ ಮಾಡುತ್ತಿರಲಿಲ್ಲ. ರಾತ್ರಿ ಮಲಗುವ ಮುನ್ನ ಮನಸ್ಸಿಗೆ ಧನಾತ್ಮಕ ಸಂದೇಶಗಳನ್ನು ಕೊಡಬೇಕು. ಬೇಳಿಗ್ಗೆ ಎದ್ದಾಗಲೂ ಅಷ್ಟೇ. ಇದೆಲ್ಲವನ್ನೂ ಕಡ್ಡಾಯವಾಗಿ ಅನುಸರಿಸಲಿ ಎಂಬ ದೃಷ್ಟಿಯಿಂದ ಕೆಲವು ಸಂಪ್ರದಾಯಗಳನ್ನೂ ಕಟ್ಟುಪಾಡುಗಳನ್ನೂ ಆ ಕಾಲದ ಜನ ಜಾರಿಯಲ್ಲಿಟ್ಟುಕೊಂಡಿದ್ದರು. ಆದರೆ ಇಂದು ಅಂತಹ ಯಾವುದೇ ಸಂಪ್ರದಾಯವನ್ನು ನಾವು ಪಾಲಿಸುತ್ತಿಲ್ಲ. ಎಲ್ಲದಕ್ಕೂ ನಮ್ಮ ಕುತ್ಸಿತ ಬುದ್ಧಿ ಕಡ್ಡಿಹಾಕಿ ವೈಜ್ಞಾನಿಕವಾಗಿ ನೋಡತೊಡಗುತ್ತದೆ. ವಿಜ್ಞಾನ ಶಾಸ್ತ್ರ ಕೂಡ ಮಾನವನೇ ಮಾಡಿರುವುದರಿಂದ ಅದಕ್ಕೆ ಗೋಚರವಾಗದ ಎಷ್ಟೋ ಕ್ರಿಯೆ-ಪ್ರಕ್ರಿಯೆಗಳಿವೆ ! ಮನಸನ್ನು ಶುದ್ಧೀಕರಿಸಲು ವಿಜ್ಞಾನದಲ್ಲಿ ಯಾವುದೇ ಯಂತ್ರಗಳಿಲ್ಲ. ಬದಲಾಗಿ ಧ್ಯಾನವೇ ನಾವು ಮನಸ್ಸಿಗೆ ಮಾಡಿಸಬಹುದಾದ ಸ್ನಾನವಾಗಿರುತ್ತದೆ. 

ಇದನ್ನೆಲ್ಲಾ ಅರಿತೇ ಪ್ರಾಜ್ಞರು ಹೇಳಿದ್ದು : ’ ಸಜ್ಜನರ ಸಂಗವದು ಹೆಜ್ಜೇನು ಸವಿದಂತೇ ’ ಎಂದು. ಉತ್ತಮ ಸಂಸ್ಕಾರವನ್ನು ಪಡೆಯಬೇಕಾದರೆ ಉತ್ತಮರನ್ನು ಹುಡುಕಿಕೊಳ್ಳಬೇಕು. ಅಂಥವರ ಸಮಯವನ್ನು ನಿರೀಕ್ಷಿಸಿ ಅವರಿಂದ ಹಲವನ್ನು ಕಲಿಯಬೇಕು, ಅಂಥವರು ತಿಳಿಸುವ ಉತ್ತಮ ಪುಸ್ತಕಗಳನ್ನು ಓದಬೇಕು, ಸತ್ಯ, ಅಹಿಂಸೆ, ಪ್ರಾಮಾಣಿಕತೆಗಳೇ ಮೊದಲಾದ ಅಂಶಗಳನ್ನು ಸಕ್ರಿಯವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೋಗಬೇಕು. ನಾವು, ನಮ್ಮ ನಾಲಿಗೆ, ನಮ್ಮ ನಡತೆ ಒಳ್ಳೆಯದಾದಾಗ ನಾಡೆಲ್ಲಾ ಒಳ್ಳೆಯದಾಗುತ್ತಾ ಹೋಗುತ್ತದೆ. ಇದಕ್ಕೆಂತಲೇ ಮಹಾತ್ಮರಾದ ಸ್ವಾಮೀ ವಿವೇಕಾನಂದರು ಹೇಳಿದರು : ’ ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು’  ನಾವು ನಮ್ಮ ನ್ಯೂನತೆಗಳನ್ನು, ದೌರ್ಬಲ್ಯಗಳನ್ನು ಅರಿಯೋಣ, ಸನ್ಮಾರ್ಗದಲ್ಲಿ ನಡೆಯೋಣ, ಮಾನವರಾಗೋಣ.

ಗೋವುಗಳನ್ನು ಹಿಂಸಿಸಬೇಡಿ, ಮಾಂಸಕ್ಕಾಗಿ ಕತ್ತರಿಸಬೇಡಿ ಎಂದು ಎಷ್ಟೇ ಹೇಳಿದರೂ ಅದು ನಿತ್ಯವೂ ನಡೆದೇ ಇದೆ. ಕಾಂಗ್ರೆಸ್ಸಿನ ಪಟ್ಟಭದ್ರ ಹಿತಾಸಕ್ತಿಯಿಂದ ಭಾರತೀಯ ಮೂಲನಿವಾಸಿಗಳು ತಮ್ಮತನವನ್ನೂ ತಮ್ಮ ಸಂಸ್ಕೃತಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಅದರಲ್ಲೂ ಮಹಮ್ಮದೀಯರ ಓಲೈಕೆಗಾಗಿ ಕಾಂಗೈ ತಾನು ಹೋದೆಡೆಯಲ್ಲೆಲ್ಲಾ ಅವರ ಹಿತಾಸಕ್ತಿಯನ್ನು ಎತ್ತಿಹಿಡಿಯುತ್ತದೆ! ಕಳೆದ ೯ ವರ್ಷಗಳಿಂದ ಕೇಂದ್ರಾಡಳಿತವನ್ನು ನಡೆಸುತ್ತಿರುವ ಯುಪಿಏ ಗುಂಪಿನ ನಾಯಕತ್ವ ವಹಿಸಿರುವ ಕಾಂಗೈ, ಮಾಡಬಾರದ ಅನಾಚಾರಗಳನ್ನು ಮಾಡಿದ್ದಕ್ಕೆ ಹೊಸ ಪುರಾವೆಗಳು ಬೇಕೆ? ಭ್ರಷ್ಟಾಚಾರದಲ್ಲಿ ನಿತ್ಯವೂ ಹೊಸದೊಂದು ದಾಖಲೆ ನಿರ್ಮಿಸುತ್ತಾ ನಿನ್ನೆ ನಿರ್ಮಿಸಿದ್ದ ತನ್ನ ದಾಖಲೆಯನ್ನು ತಾನೇ ಮುರಿಯುತ್ತಾ ಹೊರಟ ಕಾಂಗೈ, ಹಿಂದೂಗಳನ್ನು ಅವ್ಯಾಹತವಾಗಿ ಮತಾಂತರಿಸಿದ್ದ ಮಹಾಪಾತಕಿ ಟಿಪ್ಪುವಿನ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಹೊರಟಿದೆ! ಬನವಾಸಿಯ ಮಯೂರವರ್ಮ ಕನ್ನಡದ ಪ್ರಥಮ ದೊರೆ, ಆತನ ಹೆಸರಿಡಬಹುದಲ್ಲವೇ? ರನ್ನಮ್, ಪೊನ್ನ, ಜನ್ನ, ಕುಮಾರವ್ಯಾಸಾದಿ ಕವಿಗಳ ಹೆಸರಲ್ಲಿ ಒಂದನ್ನು ಇಡಬಹುದಲ್ಲವೇ? ಅಷ್ಟಕ್ಕೂ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿಯ ಅಗತ್ಯ ಇದೆಯೇ? ಹಾಗೆ ಅವಕಾಶ ಕೊಟ್ಟರೆ ಅದೊಂದು ಭಯೋತ್ಪಾದಕರ ಆಶ್ರಯತಾಣವಾಗಲೂಬಹುದಲ್ಲವೇ? ಅಥವಾ ವಿಶೇಷ ಮದರಸಾ ಆಗಿ ಕೆಲಸಮಾಡಬಹುದಲ್ಲವೇ? 

ಗೋವು ಭಾರತೀಯರಿಗೆ ಪೂಜನೀಯ ಎಂಬುದು ಗೊತ್ತಿದ್ದೂ, ಭಾರತದಲ್ಲಿ ಬದುಕಿರುವ ಮುಸ್ಲಿಂ ಸಂಘಟನೆಗಳು ಗೋವುಗಳನ್ನು ಕಡಿಯುವುದನ್ನು ನಿಲ್ಲಿಸಲು ಮುಂದಾಗರಲ್ಲಾ! ಅವರಿಗೆ ತಿಳಿಹೇಳಿ ಪ್ರಯೋಜನವಿದೆಯೇ? ಸಾಧ್ಯವಾದಲ್ಲೆಲ್ಲಾ ಪಾಕಿಸ್ತಾನದ ಬಾವುಟವನ್ನು ಕದ್ದುಮುಚ್ಚಿ ಹಾರಿಸುತ್ತಿರುವ, ಕ್ರಿಕೆಟ್ಟಿನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಾಗ ಪಟಾಕಿ ಸಿಡಿಸಿ ಆನಂದಿಸುವ ಮನೋವೈಕಲ್ಯತೆ ಹೊಂದಿರುವ ಮುಸ್ಲಿಮರನ್ನು ಭಾರತೀಯರೆಂದು ನಾವು ಒಪ್ಪಿಕೊಳ್ಳಬೇಕೆ? ಭಾಯಿ-ಭಾಯಿ ಎಂದು ಅಪ್ಪಿಕೊಳ್ಳಬೇಕೆ? ಭಾರತೀಯರ ಹಿತಾಸಕ್ತಿಗಳಿಗೆ, ಭಾವನೆಗಳಿಗೆ ಕಿಂಚಿತ್ತೂ ಬೆಲೆನೀಡದ ಜನರನ್ನು, ಭಯೋತ್ಪಾದಕರಿಗೆ ಆಶ್ರಯನೀಡಿ ರಕ್ಷಿಸಿ ಅದಕ್ಕೆ ಕುಮ್ಮಕ್ಕು ನೀಡುವ ಜನರನ್ನು ಬಗಲಲ್ಲಿ ಇರಿಸಿಕೊಂಡು ಪ್ರೀತಿಯಿಂದ ಕಾಣಬೇಕೆ? ಹೆಜ್ಜೆಹೆಜ್ಜೆಯಲ್ಲೂ ತಮ್ಮ ಮತವನ್ನೇ ದೇಶವ್ಯಾಪಿ ಕಡ್ಡಾಯಗೊಳಿಸಲು ಸಿದ್ಧರಾಗಿ, ಸನ್ನದ್ಧರಾಗಿ ನಿಂತಿರುವ ಮಂದಿಯನ್ನು ಪರಧರ್ಮ ಸಹಿಷ್ಣುಗಳೆಂದು ನಂಬಿಕೊಂಡು ಅವರ ಬಲವಂತದ ಮತಾಂತರಕ್ಕೆ ತಲೆಬಾಗಬೇಕೆ? ಹಿಂದೆಂದೋ ಅಲ್ಪಸಂಖ್ಯಾರಾಗಿದ್ದರು ಎಂದ ಮಾತ್ರಕ್ಕೆ ದೇಶದ  ಜನಸಂಖ್ಯೆಯ ಕಾಲುಭಾಗಕ್ಕಿಂತ ಅಧಿಕಸಂಖ್ಯೆಯಲ್ಲಿ ಬೆಳೆದ ಅವರ "ನಮಗೆ ಅನ್ಯಾಯವಾಗುತ್ತಿದೆ, ಯಾರೂ ಬೆಂಬಲಿಸುವುದಿಲ್ಲ" ಎಂಬ ಮೊಸಳೆಗಣ್ಣೀರಿಗೆ ನಾವು ಕರಗಿಹೋಗಬೇಕೆ?

ಕಥೆಯೊಂದು ಹೀಗಿದೆ: ಇಬ್ಬರು ಮಿತ್ರರು ಒಟ್ಟಿಗೇ ಸತ್ತರಂತೆ. ಪೂರ್ವಜನ್ಮದ ಸುಕೃತದ ಫಲವಾಗಿ ಒಬ್ಬಾತ ಸ್ವರ್ಗವಾಸಿಯಾದ, ತನ್ನ ಕುಕೃತದ ಫಲವಾಗಿ ಇನ್ನೊಬ್ಬಾತ ನರಕವಾಸಿಯಾದ. ಇನ್ನೂ ಘನಘೋರ ಶಿಕ್ಷೆಯನ್ನು ಅನುಭವಿಸುವುದಕ್ಕಾಗಿ ನರಕವಾಸಿಯಾಗಿದ್ದಾತ ಬಚ್ಚಲಕೊಚ್ಚೆಹೊಂಡದ ಹುಳವಾಗಿ ಜನಿಸಿದ. ಸ್ವರ್ಗವಾಸಿಗೆ ತನ್ನ ಪರಮ ಸ್ನೇಹಿತನ ನೆನಪಾಯ್ತಂತೆ. ಆತ ದೈವಕೃಪೆಯಿಂದ ಒಮ್ಮೆ ಭೂಮಿಗೆ ಬಂದ, ಹುಡುಕಾಡುತ್ತಾ ಬಚ್ಚಲಕೊಚ್ಚೆಯಲ್ಲಿ  ಹುಳವಾಗಿ ಬದುಕುತ್ತಾ ಬಿದ್ದಿರುವ ಸ್ನೇಹಿತನನ್ನು ದೂರದಿಂದ ಕೂಗಿ ಕರೆದನಂತೆ. ಒಂದನೇ ಕರೆ ಹುಳಕ್ಕೆ ಕೇಳಲಿಲ್ಲ, ಎರಡನೇ ಕರೆಯಲ್ಲಿ ಹುಳ ಮೇಲಕ್ಕೆ ಬಂದು ಒದ್ದಾಡಿತು, ಮೂರನೇ ಕರೆಯನ್ನು ಕೇಳಿಯೂ ತನಗಿದೇ ಸುಖವೆಂದು ತೀರ್ಮಾನಿಸಿದ ಆ ಹುಳ ಮತ್ತದೇ ಕೊಚ್ಚೆಗುಂಡಿಯಲ್ಲಿ ಮುಳುಗಿಹೋಯ್ತು! ಔನ್ನತ್ಯಕ್ಕೆ ಕರೆಯಲು ಬಂದ ಸ್ನೇಹಿತ ಮರುಗುತ್ತ ಮರಳಿದ; ಹುಳಸತ್ತು ಇನ್ನಷ್ಟು ಜನ್ಮಗಳನ್ನು ಉತ್ತರಿಸಿ, ಮತ್ತೆ ಮನುಷ್ಯನಾಗಿ ಬರುವುದು ಇನ್ನೆಂದೋ, ಮನುಷ್ಯನಾದಾಗಲೂ ಹೊಲೆಯನಾಗದೇ, ಪುಣ್ಯಪುರುಷನಾಗಿ ಬಾಳುವುದು ಮತ್ತೆಂದೋ, ಒಂದೂ ತನ್ನ ಊಹೆಗೂ ನಿಲುಕದ ಭವಿಷ್ಯವೆಂದು ಸ್ನೇಹಿತನಿಗಾಗಿ ಕಂಬನಿಗರೆದ.
ನಿಮ್ಮಲ್ಲಿ ಯಾರೇ ವಿಜ್ಞಾನಿಗಳು, ತಾರ್ಕಿಕರು ಇರಬಹುದು, ದನದ ಮಾಂಸವನ್ನು ತಿನ್ನುವ ಜನರ ಮೆದುಳಿನ ವ್ಯವಹಾರದ ಸ್ಥಿತಿಗತಿಗೂ ಮತ್ತು ಶುದ್ಧ ಶಾಕಾಹಾರಿಗಳಾದವರ ಮೆದುಳಿನ ವ್ಯವಹಾರದ ಸ್ಥಿತಿಗತಿಗೂ ವೈಜ್ಞಾನಿಕವಾಗಿ ತುಲನೆಮಾಡಿ ಏನನ್ನೂ ಮರೆಮಾಚದೇ ಸಂಶೋಧನೆ ನಡೆಸಿನೋಡಿ, ಅಲ್ಲಿ ವ್ಯತ್ಯಾಸ ಕಾಣುವುದಿಲ್ಲವೆಂದರೆ ನಾನಿನ್ನೆಂದೂ ನನ್ನ ಬರವಣಿಗೆಯನ್ನು ಮುಂದುವರಿಸುವುದಿಲ್ಲ!! ವ್ಯತ್ಯಾಸವನ್ನು ನೀವು ಕಂಡಿರಾದರೆ ಮತ್ತೆ ಸನಾತನೆಯ ಮೌಲ್ಯವನ್ನು ಸುಖಾಸುಮ್ಮನೆ ಪ್ರಶ್ನಿಸುವ ಹಕ್ಕು ನಿಮಗಿರುವುದಿಲ್ಲ. ಎಲ್ಲಾ ಜೀವಿಗಳಂತೇ ಮನುಷ್ಯ ಹುಟ್ಟುವುದು-ಬದುಕುವುದು-ಸಾಯುವುದು ಇಷ್ಟೇ ಅಲ್ಲ, ಆದರಾಚೆ ಇರುವ ಇನ್ನೊಂದು ಲೋಕವನ್ನು ತೆರೆದಿಟ್ಟ ಮಹಾನ್ ಮನೀಷಿಗಳು ನಮಗೆ ಆದರ್ಶರಾಗಿದ್ದಾರೆ. ಅವರ ಕಳಕಳಿಯ ಸಂದೇಶವೆಂದರೆ ಮಾಂಸಾಹಾರವನ್ನು ಭುಂಜಿಸಬೇಡಿ ಎಂಬುದು. ಸಾಧ್ಯವಿಲ್ಲವೇ?ಹೋಗಲಿಬಿಡಿ. ಅಮ್ಮನ ಹಾಲನ್ನು ಶೈಶವಾವಸ್ಥೆಯಲ್ಲಿ ಎರಡುವರ್ಷವಷ್ಟೇ ಕುಡಿಯುತ್ತೇವೆ, ಎರಡನೇ ಅಮ್ಮನಾಗಿ ಗೋವು ಕೊಡುವ ಹಾಲನ್ನು ಜೀವನಪೂರ್ತಿ ಕುಡಿಯುತ್ತಿರುತ್ತೇವೆ ! ಕೊನೇಪಕ್ಷ, ಅಮ್ಮನಂತೇ ಹಾಲನ್ನು ಉಣಿಸುವ ಗೋವುಗಳನ್ನು ಕತ್ತರಿಸದೇ ಇದ್ದರೆ ನಾವು ಮನುಷ್ಯರೆಂದುಕೊಳ್ಳಬಹುದು. ಗೋವುಗಳನ್ನು ನಾವು ಕೊಂದರೆ ತಿಂದರೆ ಮತ್ತು ನಮ್ಮೀ ಭಾರತದಲ್ಲಿ ಅದನ್ನು ತಿನ್ನುವವರನ್ನು ಉಳಿಯಗೊಟ್ಟರೆ ನಾವು ಮನುಷ್ಯರೆಂಬುದನ್ನು ನಮ್ಮ ಪೂರ್ವಜರು ಒಪ್ಪಿಕೊಳ್ಳುವುದಿಲ್ಲ, ಅವರ ಆತ್ಮಗಳು ಒಪ್ಪಿಕೊಳ್ಳುವುದಿಲ್ಲ, ಇಂದಿಗೂ ಚಿರಂಜೀವಿಗಳಾಗಿರುವ ಅನೇಕ ಋಷಿಮುನಿಗಳು ಒಪ್ಪಿಕೊಳ್ಳುವುದಿಲ್ಲ. ಅದರರ್ಥ ದನಗಳನ್ನು ತಿನ್ನುವ ಜನ ಹೊಲೆಯರಾಗಿರುತ್ತಾರೆ. ಬಚ್ಚಲಕೊಚ್ಚೆಗುಂಡಿಯ ಹುಳಗಳಾಗಿ ಅವರು ಮರುಹುಟ್ಟು ಪಡೆದು, ಮತ್ತೆ ಮುಂದೆಂದೋ ದೈವಕಾರುಣ್ಯ ಒಲಿದರೆ ಹಸುಗಳಾಗಿ, ಈಗ ಹಸುಗಳಿಗೆ ನೀಡುತ್ತಿರುವ ಹಿಂಸೆಯನ್ನು ಆಗ ತಾವು ಅನುಭವಿಸುತ್ತಾರೆ ಎಂಬುದು ನಿಶ್ಚಿತ. ಹೊಲೆಯರು ಊರ ಹೊರಗಿಲ್ಲ, ಅಧುನಿಕ ಯುಗದಲ್ಲಿ ಹೊಲೆಯರು ನಮ್ಮನಡುವೆಯೇ ಇದ್ದಾರೆ, ಅದು ವ್ಯಕ್ತಿಯ ಸಂಸ್ಕಾರ-ಸಂಸ್ಕೃತಿಗೆ ಸಂಬಂಧಿಸಿದ ವಿಷಯ. ಭಾರತದಲ್ಲಿದ್ದೂ, ಇಲ್ಲಿನ ಸ್ಕಲ ಸೌಲಭ್ಯಗಳನ್ನೂ ಅನುಭವಿಸಿಯೂ, ಯಾರು ಭಾರತೀಯ ಸನಾತನ ಸಂಸ್ಕೃತಿಯನ್ನು ಮೆಚ್ಚುವುದಿಲ್ಲವೋ ಅವರೇ ಹೊಲೆಯರು.    


ಭಾರತೀಯ ಸನಾತನ ಸಂಸ್ಕೃತಿಗೆ ಒತ್ತುಕೊಡುವ ಬಿಜೆಪಿ ಸರಕಾರ, ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರುವಲ್ಲಿ ಬಹಳ ಶ್ರಮವಹಿಸಿತ್ತು. ಮತಗಳ ಪೆಟ್ಟಿಗೆಯ ಮೇಲೆ ಕಣ್ಣಿಟ್ಟ ಕಾಂಗೈ ಮತ್ತು ಇನ್ನಿತರ ಪಕ್ಷಗಳು ಅದನ್ನು ಜಾರಿಗೆ ತರದಂತೇ ಬಹಳ ಶ್ರಮಿಸಿದ್ದವು. ಗೋವು ಪೂಜನೀಯವೆಂದು ಲಿಖಿತವಾದ ಈ ನಾಡಿನಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಬರದಂತೇ ನೋಡಿಕೊಂಡವರನ್ನು ಏನೆನ್ನಬೇಕು? ಈಗ ಮತ್ತೆ ಸರಕಾರ ಬದಲಾಗಿದೆ, ಗೋಹತ್ಯಾ ನಿಷೇಧವನ್ನು ತೆರವುಗೊಳಿಸುತ್ತೇವೆ ಎಂಬ ಹೇಳಿಕೆ ಬಂದಾಗಲೇ ಗೋವುಗಳ ಕಳ್ಳಸಾಗಾಣಿಕೆಗಳು ವಿಪರೀತ ಹೆಚ್ಚಿವೆ. ಯಾರೂ ಕಾಯ್ವವರಿಲ್ಲ, ಗೋಳು ಕೇಳ್ವವರಿಲ್ಲ. ಈ ನಾಡಿನ ಹುಲಿಗಾದರೂ ಒಂದಷ್ಟು ನೀತಿಯಿತ್ತು, ಆದರೆ ಇಂದಿನ ಹೊಲೆಯರಿಗೆ ನೀತಿ ಎಂಬ ಪದವೇ ಗೊತ್ತಿಲ್ಲ.

ತಬ್ಬಲಿಯು ನೀನಾದೆ ಮಗನೇ ಹೆಬ್ಬೊಲೆಯರ ಬಾಯನ್ನು ಸೇರುವೆ
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಗೋವಿನಹಾಡಿನಲ್ಲಿ ಸಾಯುವ ಕೊನೇ ಘಳಿಗೆಯಲ್ಲಿ, ಹುಲಿಗಾದರೂ ಯತ್ಕಿಂಚಿತ್ ಚಣಕಾಲ ಗೋವಿನ ಕೊನೆಯಾಸೆಯನ್ನು ಆಲೈಸುವ ಸಂಸ್ಕಾರವಿತ್ತು! ಇಲ್ಲಿ ಸಾಯುವ ಗೋವಿಗೆ ಕೊನೇಕ್ಷಣ ಯಾವಾಗ ಎಂಬುದೂ ತಿಳಿದಿಲ್ಲ; ತಿನ್ನುವ ಹೊಲೆಯರಿಗೆ ಅವೆಲ್ಲಾ ಬೇಕಾಗಲೇ ಇಲ್ಲ!! ದನದ ಮಾಂಸತಿಂದ ಪರಿಣಾಮವಾಗಿ ಜಗತ್ತಿನಲ್ಲೇ ಕ್ರೌರ್ಯ, ಮತಾಂಧತೆ ಹೆಚ್ಚುತ್ತಿದೆ, ದನದ ಮಾಂಸ ಭುಂಜಿಸಿದ ಫಲವಾಗಿ ಜನ ಮಾನಸಿಕವಾಗಿ ಅಧೋಗತಿಗೆ ಧಾವಿಸುತ್ತಿದ್ದಾರೆ. ಮಾನಸಿಕವಾಗಿ ಅದಾಗಲೇ ಬಚ್ಚಲಕೊಚ್ಚೆಯಲ್ಲಿ ಬಿದ್ದಿರುವ ಮನಸ್ಸು ಅದಕ್ಕೇ ಅಂಟಿಕೊಂಡಿದೆ; ಮತ್ತಿನ್ನೇನೂ ಬೇಡವಾಗಿದೆ. ಬಸವಣ್ಣನಂತಹ ಧಾರ್ಮಿಕ ನಾಯಕರೂ ಹೊಲೆಯರನ್ನು ಪರಿವರ್ತಿಸ ಹೊರಟರು, ಆದರೆ ಅವರು ಪರಿವರ್ತಿತವಾಗಿದ್ದು ಬೇರೇ ಮತಕ್ಕೆ ಎಂಬುದು ಇತಿಹಾಸ!! ಸನಾತನ ಮತದಲ್ಲಿ ಅವರಿಗೆ ಆದ್ಯತೆ ಇರಲಿಲ್ಲವೆಂಬ ಕಾರಣಕ್ಕೆ ಅವರು ಮತಾಂತರ ಗೊಂಡು ಮ್ಲೇಚ್ಛರಾದರು. ಹುಟ್ಟುಗುಣ ಘಟ್ಟಹತ್ತಿದರೂ ಹೋಗದು ಎಂಬಂತೇ ಬಚ್ಚಲಕೊಚ್ಚೆ ಹುಳಗಳ ಬಾಣಂತನವನ್ನು ಅನ್ಯಮತವೊಂದು ಮಾಡಿಸಿತು; ಮಾಡಿಸುತ್ತಲೇ ಇದೆ.

ಹೊಲೆಯರಾರೂರ ಹೊರಗಿರುವವನೆ ಹೊಲೆಯ?
ಚಾಡಿಮಾತನು ಹೇಳಿ  ಮತಾಂತರ ಮಾಡುವವ ಹೊಲೆಯ
ಬೇಡಿದ್ದನ್ನು ನೀಡುತ್ತೇವೆಂದು ಭರವಸೆ ಹುಟ್ಟಿಸಿ
ಮತಾಂತರಗೊಳಿಸುವವ ಹೊಲೆಯ
ಕಾಡಿ-ದೂಡಿ-ಬಡಿದು-ಸಾಗಿಸಿ-ಕೊಂದು ಹಸುಗಳನ್ನು
ಹರಿದು ತಿಂಬವನೇ ಹೊಲೆಯ
ನೋಡ ನೋಡುತ್ತಾ ಬಚ್ಚಲಕೊಚ್ಚೆಯ ಹುಳವಾಗಬಲ್ಲವನೆ ಹೊಲೆಯ

ಝಾಡಿಸಿ ಒದ್ದು ಅಂಥವರನ್ನು ದೇಶದಿಂದಾಚೆ ಓಡಿಸಲಾರೆಯಾ ಸನಾತನೀ ಗೆಳೆಯಾ?
ನಿನ್ನ ಮನೆ-ಮಡದಿ-ಮಕ್ಕಳು ಎಂದೆಂದೂ ಸುಖವಾಗಿರಲಿ, ರೋಗನಿರೋಧಕವಾದ ನನ್ನ ಹಾಲನ್ನೇ ಉಂಡು ನೆಮ್ಮದಿಯಿಂದ ಜೀವಿಸಲಿ....ನಿನಗಿದೋ ನಿತ್ಯ ಹಾಲುಕೊಡುತ್ತಿರುವ ಭಾರತೀಯ ಪುಣ್ಯಕೋಟಿಯ ಜನ್ಮಾಂತರಗಳ ರಕ್ತಕಣ್ಣೀರಿನ ನಮಸ್ಕಾರ. 

Friday, May 24, 2013

ಸರಕಾರೀ ಶಾಲೆಗಳಲ್ಲಿ ಮಕ್ಕಳಿಲ್ಲ ಯಾಕೆಂದರೆ...



 ಸರಕಾರೀ ಶಾಲೆಗಳಲ್ಲಿ ಮಕ್ಕಳಿಲ್ಲ ಯಾಕೆಂದರೆ...
                                                                                        
ಸರಕಾರೀ ಶಾಲೆಗಳ ಶಿಕ್ಷಕರು ಬದಲಾದ ಜಗತ್ತಿಗೆ ಬೇಕಾದ ಗುಣಮಟ್ಟದ ವಿದ್ಯೆಯನ್ನು ನೀಡುವಲ್ಲಿ ಹಿಂದುಳಿದಿದ್ದಾರೆ. ಹುಡುಕಿದರೆ ಇದಕ್ಕೆ ಸಿಗುವ ಕಾರಣಗಳು ಹಲವಾರು. ಆದರೆ ಸ್ಥೂಲವಾಗಿ ನೋಡಿದರೆ, ಶಿಕ್ಷಕರ ನೇಮಕಾತಿಯಲ್ಲಿ ಆಗುವ ನ್ಯೂನತೆಗಳು ಮತ್ತು ಶಿಕ್ಷಕರಲ್ಲಿ ಕುಸಿಯುತ್ತಿರುವ ಕಲಿಸಬೇಕೆಂಬ ಆಸಕ್ತಿ ಪ್ರಮುಖ ಅಂಶವಾಗಿ ಗೋಚರಿಸುತ್ತವೆ. ಕುಲಕಸುಬಾಗಿದ್ದ ಅಧ್ಯಾಪನ ಶತಮಾನದ ಹಿಂದೆಯೇ ತನ್ನತನವನ್ನು ಕಳೆದುಕೊಂಡಿತು. ಅಧ್ಯಾಪಕನಾಗುವವ ಹೇಗಿರಬೇಕೆಂದು ತಿಳಿಯಲ್ಪಟ್ಟಿತ್ತೋ ಅಂತಹ ಅರ್ಹತೆಗಳು ಇಲ್ಲದವರೂ ಕೂಡ ಅಧ್ಯಾಪಕ ಹುದ್ದೆಯನ್ನು ಅಲಂಕರಿಸತೊಡಗಿದರು. ಉದಾಹರಣೆಗೆ ಆಂಗ್ಲ ಭಾಷೆ ಕಲಿಸುವ ಶಿಕ್ಷಕರೇ ಕನ್ನಡದ ಗೈಡು ನೋಡಿಕೊಂಡು ಕಲಿಸುವ ಪರಿಪಾಠ ಬೆಳೆಯಿತು. ಶಿಕ್ಷಕರ ವೃತ್ತಿ ಶಿಕ್ಷಣ-ಪದವಿಗಳನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡ ಆಯ್ಕೆಯಲ್ಲಿ, ಅಲ್ಲಿರುವ ಮೀಸಲಾತಿ-ಒಳಮೀಸಲಾತಿ ವ್ಯವಹಾರಗಳಲ್ಲಿ, ಅಧಿಕಾರಿಗಳ ಲಂಚಗುಳಿತನದ ಆಶ್ರಯದಲ್ಲಿ ಯಾಕೂ ಬೇಡದವರೂ ಶಿಕ್ಷಕರಾಗಹತ್ತಿದರು; ಎಲ್ಲಿಯೂ ಸಲ್ಲದವರು ಅಲ್ಲಿ ಸಂದರು!    

22ನೇ ಶತಮಾನದ ಹೊಸ್ತಿಲಲ್ಲಿರುವ ಜನರಿಗೆ, ಕನ್ನಡಿಗರಿಗೆ, ಕನ್ನಡದ ಅಭಿಮಾನವೆಷ್ಟೇ ಇದ್ದರೂ, ತಮ್ಮ ಮಕ್ಕಳು ಆಂಗ್ಲಮಾಧ್ಯಮದಲ್ಲೇ ಓದಬೇಕು, ಎಲ್ಲರಂತೇ ಚೆನ್ನಾಗಿ ಇಂಗ್ಲೀಷು ಕಲಿತು ಪಟಪಟಾಯಿಸಬೇಕು, ಎಂಜಿನೀಯರಿಂಗ್-ಮೆಡಿಕಲ್ ಓದುವುದಕ್ಕೆ ಆಂಗ್ಲಮಾಧ್ಯಮ ಸಹಕಾರಿಯಾಗುತ್ತದೆ ಎಂಬೆಲ್ಲಾ ಅನಿಸಿಕೆಗಳು ಕನ್ನಡ ಮಾಧ್ಯಮದ ಸರಕಾರೀ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಲ್ಲಿ ತಡೆಯೊಡ್ಡಿದವು. ’’ಅಕ್ಕಿಮೇಲೂ ಆಸೆ ನೆಂಟರಮೇಲೂ ಪ್ರೀತಿ’’ ಎಂಬ ಗಾದೆಯಂತೇ ಕನ್ನಡವನ್ನು ಬಿಟ್ಟಿರಲಾರೆವು ಎಂದುಕೊಂಡರೂ ಪಾಪ್ ಕಾರ್ನ್ ರೀತಿಯಲ್ಲಿ ಬಡಿದೆದ್ದು ಹಾರುತ್ತಿರುವ ಆಂಗ್ಲಮಾಧ್ಯಮದ ಶಾಲೆಗಳು ಮತ್ತು ಬ್ರಿಟಿಷರು ಜಗತ್ತಿಗೇ ರೂಢಿಸಿದ ಇಂಗ್ಲೀಷ್ ಭಾಷೆ ಕನ್ನಡಿಗರನ್ನು ಕಟ್ಟಿಹಾಕಿದವು. ಪರಿಣಾಮವಾಗಿ ಒಂದೊಂದೇ ಕುರಿ, ಮಂದೆಯಿಂದ ತಪ್ಪಿಸಿಕೊಂಡಂತೇ, ನಿಧಾನಗತಿಯಲ್ಲಿ ಪಾಲಕರು ಆಂಗ್ಲಮಾಧ್ಯಮ ಶಾಲೆಗಳತ್ತ ಮುಖಮಾಡಿದರು. ಮನದೊಳಗೆ ನಡೆದ ಜಿದ್ದಾಜಿದ್ದಿಯಲ್ಲಿ, ಡೊನೇಶನ್ ಎಷ್ಟಾದರೂ ಪರವಾಗಿಲ್ಲ ಶಾಲೆ ಚೆನ್ನಗಿರಬೇಕೆಂದೂ ತಮ್ಮ ಮಕ್ಕಳು ಮಾತ್ರ ಆಂಗ್ಲಮಾಧ್ಯಮದಲ್ಲೇ ಓದಿ ಬೆಳಗಬೇಕೆಂದೂ ಮೂಡಿದ ಒಳತೋಟಿ ಹೊರಗೆ ಕನ್ನಡಧ್ವಜ ಹಾರಿಸುತ್ತಲೇ ಮಕ್ಕಳನ್ನು ಆಂಗ್ಲಮಾಧ್ಯಮದ ಶಾಲೆಗಳಿಗೆ ಕಳಿಸುವಲ್ಲಿ ಜಯಗಳಿಸಿಬಿಟ್ಟಿತು!   

ಮುಂಗಾರುಮಳೆಗೆ  ಚಿಗುರೆದ್ದ ಅಣಬೆಗಳಂತೇ ಆಂಗ್ಲಮಾಧ್ಯಮದ ಖಾಸಗೀ ವಿದ್ಯಾಸಂಸ್ಥೆಗಳು ತಲೆ ಎತ್ತಿದವು, ಈಗಲೂ ಎತ್ತುತ್ತಲೇ ಇವೆ. ಗಲ್ಲಿಗಲ್ಲಿಗೊಂದು ಶಾಲೆಯನ್ನು ನೋಡುವಾಗ ಸ್ವರಚಿತ ಭೋಗಷಟ್ಪದಿಯ ಪದ್ಯವೊಂದು ನೆನಪಾಗುತ್ತದೆ:

ವಿದ್ಯೆಕಲಿಸುತೇವೆ ಎಂದು
ಗದ್ಯಪದ್ಯಕಿಂತ ಮೊದಲು
ಅಧ್ಯಯನಕೆ ರಾಶಿ ಕಂತೆ ತಿಂದುಕೊಂಡರು |
ವಾದ್ಯ ನಾಟ್ಯ ಗೀತ ಚಿತ್ರ
ಖಾದ್ಯ ಆಟ ನೋಟ ಎಂದು
ಸಾಧ್ಯವಾದ ಎಲ್ಲ ರೀತಿ ಮೆಂದುಕೊಂಡರು ||

ವಿದ್ಯೆ ಕಲಿಸುವ ಕಾರ್ಖಾನೆಗಳಂತೇ ತಮ್ಮನ್ನು ಬಿಂಬಿಸಿಕೊಂಡ ಖಾಸಗೀ ಸಂಸ್ಥೆಗಳಲ್ಲಿ ಸಿಂಹಪಾಲು ರಾಜಕಾರಣಿಗಳದು; ಅದರಲ್ಲಿ ದೊಡ್ಡ ರಾಜಕಾರಣಿಗಳಿಂದ ಹಿಡಿದು ಮರಿರಾಜಕಾರಣಿ, ಪುಡಿರಾಜಕಾರಣಿ ಎಲ್ಲಾ ಸೇರಿದ್ದಾವೆ. ಹಣಗಳಿಸುವ ಸುಲಭದ ದಂಧೆಗಳಲ್ಲಿ ವಿದ್ಯಾಸಂಸ್ಥೆ ನಡೆಸುವುದೂ ಒಂದು ಎಂದು ಕಂಡುಕೊಂಡ ರಾಜಕೀಯದ ಹಲವು ಜನ ಮತ್ತು ಇನ್ನಿತರ ಕೆಲವುಜನ ಶಾಲೆಗಳನ್ನು ತೆರೆದರು. ಸರಕಾರೀ ಶಾಲೆಗಳಲ್ಲಿ ಇಲ್ಲದ ಕೆಲವು ಸೌಲಭ್ಯಗಳನ್ನು ತೋರಿಸಿದರೆ ಮಕ್ಕಳನ್ನು ಪಾಲಕರು ತಮ್ಮಲ್ಲಿಗೆ ದಾಖಲಿಸುತ್ತಾರೆ ಎಂಬುದು ಖಂಡಿತಾ ಗೊತ್ತಿತ್ತು. ಜೊತೆಗೆ ಆಳರಸರಲ್ಲೇ ಹಲವರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವುದರಿಂದ, ಸರಕಾರೀ ಶಾಲೆಗಳಲ್ಲಿ ಕಲಿಕಾಮಾಧ್ಯಮದಲ್ಲಾಗಲೀ, ಕಲಿಕೆಯ ಉಪಕರಣಗಳಲ್ಲಾಗಲೀ ನಾವೀನ್ಯತೆಯನ್ನು ಜೋಡಿಸಬಾರದೆಂಬ ವೈಯ್ಯಕ್ತಿಕ ಕಳಕಳಿಯನ್ನೂ ಅವರು ಹೊಂದಿದ್ದಾರೆ! ಇದೂ ಅಲ್ಲದೇ ಕಲಿಸುವ ವ್ಯಕ್ತಿಗಳ ವೈಯಕ್ತಿಕ ಗುಣಮಟ್ಟ, ಅವರ ಬೋಧನಾ ಕೌಶಲ ಯಾವುದನ್ನೂ ಗಣಿಸುವ ಇರಾದೆ ಸರಕಾರಕ್ಕಿಲ್ಲ; ಪಠ್ಯಪುಸ್ತಕದ ಹೆಸರನ್ನು ನೆಟ್ಟಗೆ ಓದಲು ಬಾರದವರೂ ಸರಕಾರೀ ಶಾಲೆಗಳಲ್ಲಿ ಶಿಕ್ಷಕರಾಗಿದ್ದನ್ನು ಕಂಡಿದ್ದೇನೆ!

ಬಿಸಿ ಊಟ, ಮತ್ತಿನ್ನೇನೋ ಆಟ ಎಲ್ಲಾ ಡೊಂಬರಾಟಗಳೂ ನಡೆದವು. ಖಾಸಗೀ ಶಾಲೆಗಳಲ್ಲಿ ಎಲ್ಲೂ ಬಿಸಿಯೂಟದ ವ್ಯವಸ್ಥೆ ಕಾಣುವುದಿಲ್ಲ; ಬೇಕೆಂದರೆ ಮಕ್ಕಳು ಮನೆಯಿಂದ ಹೊತ್ತೊಯ್ಯಬೇಕು, ಇಲ್ಲಾ ಲಭ್ಯವಿರುವ ಕ್ಯಾಂಟೀನುಗಳಲ್ಲಿ [ಇದ್ದರೆ] ಹಣಕೊಟ್ಟು ತಿಂಡಿ ತಿನ್ನಬೇಕು. ಇಸ್ಕಾನ್ ನಂತಹ ಸಂಸ್ಥೆಗಳು ಅನೇಕ ನಗರಗಳಲ್ಲಿ, ಸರಕಾರೀ ಶಾಲಾಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಿವೆ. ಆದರೂ ಪರಿಸ್ಥಿತಿ ಎಲ್ಲಿಗೆ ತಲ್ಪಿದೆಯೆಂದರೆ, ಏನೂ ಗತಿಯಿಲ್ಲದವರು ಮಾತ್ರ ಸರಕಾರೀ ಶಾಲೆಗಳಿಗೆ ತಮ್ಮ ಮಕ್ಕಳನ್ನು ನೋಂದಾಯಿಸುತ್ತಾರೆ ಎಂಬಲ್ಲಿಗೆ ಸರಕಾರೀ ಶಾಲೆಗಳ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ದುಡಿಮೆಯ ಅನುಕೂಲವಿದೆಯೆಂದಾದರೆ ಅಂಥವರು ಮಕ್ಕಳನ್ನು ಸೇರಿಸುವುದು ಖಾಸಗೀ ಶಾಲೆಗಳಿಗೇ-ಅದೂ ಆಂಗ್ಲಮಾಧ್ಯಮದ ಶಾಲೆಗಳಿಗೆ ಮಾತ್ರ. ಬೆಂಗಳೂರು ನಗರದಲ್ಲಿ ಖಾಸಗೀ ಶಾಲೆಗಳಲ್ಲಿಯೂ ಕೆಲವೆಡೆ ಕನ್ನಡ ಮಾಧ್ಯಮದ ವಿಭಾಗವಿದೆ. ವಿಪರ್ಯಾಸವೆಂದರೆ ಶಾಲೆ ಖಾಸಗಿಯಾಗಿದ್ದರೆ ಸಾಲದು ಮಾಧ್ಯಮವೂ ಕನ್ನಡವಾಗಿರಕೂಡದು ಎಂಬುದನ್ನು ಜನ ಬಯಸುತ್ತಾರೆ ಎಂದು  ಅಲ್ಲಿಗೆ ಭೇಟಿಯಿತ್ತಾಗ ಗಮನಕ್ಕೆ ಬಂತು. ಖಾಸಗೀ ಸಂಸ್ಥೆಗಳ ಕನ್ನಡ ವಿಭಾಗಗಳು ಡೊನೇಶನ್ ಮುಕ್ತವಾಗಿದ್ದರೂ ಸಹ ಪಾಲಕರು ಮಕ್ಕಳನ್ನು ಅಲ್ಲಿಗೆ ಸೇರಿವುದು ಕಡಿಮೆ!       

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೂ ಹೆಜ್ಜೆಯಿದೆ ಎಂದು ತೋರಿಸಲು ಮಠಮಾನ್ಯಗಳೂ ಶಾಲೆಗಳನ್ನು ತೆರೆದಿವೆ. ಅಂತಹ ಶಾಲೆಗಳು ಮಿಕ್ಕುಳಿದ ಖಾಸಗೀ ಶಾಲೆಗಳ ದರ್ಜೆಯಲ್ಲೇ ನಿಲ್ಲುತ್ತವೆ. ಖಾಸಗೀ ಶಾಲೆಗಳಲ್ಲಿ ಕಲಿಸುವ ಮಂದಿ ಮೀಸಲಾತಿಗಳಿಗೆ ಒಳಪಟ್ಟವರಾಗಿರುವುದಿಲ್ಲ. ಅದು ಅವರ ಮೆರಿಟ್ ಅವಲಂಬಿಸಿ ನಡೆಯುತ್ತದೆ. ಶಿಕ್ಷಕರಿಗೆ ವಿಶೇಷ ಪರಿಣತರಿಂದ ಆಗಾಗ ತರಬೇತಿ ಇರುತ್ತದೆ. ನವನವೀನ ಶೈಕ್ಷಣಿಕ ಉಪಕರಣಗಳನ್ನು ಖಾಸಗೀ ಸಂಸ್ಥಗಳು ಬಳಸಿಕೊಳ್ಳುತ್ತವೆ: ಉದಾಹರಣೆಗೆ ಸ್ಮಾರ್ಟ್ ಕ್ಲಾಸ್ ರೂಮ್ ನಲ್ಲಿ ಕಂಪ್ಯೂಟರ್ ಮತ್ತು ದೊಡ್ಡ ದೊಡ್ಡ ಪರದೆ-ಪ್ರಾಜೆಕ್ಟರ್ ಮೊದಲಾದ ಉಪಕರಣನ್ನು ಬಳಸಿ ವಿಷಯಗಳನ್ನು ಕಲಿಸಲಾಗುತ್ತದೆ. ಸಾಂದರ್ಭಿಕ ಚಿತ್ರಗಳ ಅವಲೋಕನದಿಂದ ಕಲಿಯುವ ಮಕ್ಕಳಿಗೆ ವಿಷಯ ಗಟ್ಟಿಯಾಗಿ ಮನದಟ್ಟಾಗುತ್ತದೆ ಎಂಬ ಪರಿಣಾಮಕಾರೀ ಅಂಶ ಬೆಳಕಿಗೆ ಬಂದುದರಿಂದ  ನಗರಗಳಲ್ಲಿ ಅಂತಹ ವ್ಯವಸ್ಥೆಯ ಪೂರೈಕೆಗೇ ಕೆಲವು ಕಂಪನಿಗಳು ಹುಟ್ಟಿಕೊಂಡಿವೆ. ಬುದ್ಧಿಮಟ್ಟದ ಬೆಳವಣಿಗೆಗೆ ಪಠ್ಯೇತರ ಓದು-ಕಲಿಕೆಗಳನ್ನು ಅಳವಡಿಸುವ ಸಂಸ್ಥೆಗಳು ಖಾಸಗೀ ಶಿಕ್ಷಣ ಸಂಸ್ಥೆಗಳ ಜೊತೆ ಸೇರಿ ಕೆಲಸಮಾಡುತ್ತವೆ. ಇದನ್ನೆಲ್ಲಾ ತಿಳಿದುಕೊಳ್ಳುವ ಪಾಲಕರು ತಮ್ಮ ಮಕ್ಕಳು ಇದರಿಂದ ವಂಚಿತರಾಗಲು ಇಷ್ಟಪಟ್ಟಾರೆಯೇ?   

ಹಾಂ, ಇನ್ನೊಂದು ಮಾತನ್ನು ಗಮನಿಸಬೇಕು, ಓದು ಒಕ್ಕಾಲು-ಬುದ್ಧಿ ಮುಕ್ಕಾಲು ಎಂಬ ಗಾದೆಯೂ ಸಹ ಇದೆ. ಮಕ್ಕಳಲ್ಲಿ ಕೆಲವರು ಏಕಪಾಠಿಗಳು, ಕೆಲವರಿಗೆ ಅದಕ್ಕಿಂತಾ ಜಾಸ್ತಿ ಅಂದರೆ ಒಂದೆರಡು ಸರ್ತಿ ವಿಷಯಗಳ ಅವಲೋಕನದ ಅಗತ್ಯ ಬೀಳುತ್ತದೆ. ಕೆಲವರಿಗೆ ಜಾಸ್ತಿ ಸಮಯದ  ಪುಸ್ತಕಗಳ ಪುನರಾವರ್ತಿತ ಓದು ಬೇಕು. ಇನ್ನೂ ಕೆಲವರಿಗೆ ಎಷ್ಟೇ ಓದಿದರೂ ಅದೊಂದು ಮಟ್ಟಕ್ಕೆ ಮಾತ್ರ, ಆಮೇಲ್ ಅವರ ಎಂಜಿನ್ ಸೀಝ್ ಆಗಿಬಿಡುತ್ತದೆ! ಏಕಪಾಠಿಗಳು ಅಥವಾ ಆ ದರ್ಜೆಯವರನ್ನು ಖಾಸಗೀ ಸಂಸ್ಥೆಗಳು ತಮ್ಮ ಗುಣಮಟ್ಟದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಏಕಪಾಠಿಗಳು ಜಾಸ್ತಿ ಅಂಕಗಳನ್ನು ಪಡೆಯುವುದರಿಂದ , ವಿಶೇಷ ಪರಿಶ್ರಮ ಅನಗತ್ಯವಾಗಿ ಸಹಜವಾಗಿ ಅವರು ಯಾವುದೇ ಶಾಲೆಯಲ್ಲಿದ್ದರೂ ಶಾಲೆಗೆ ಒಳ್ಳೆಯ ಹೆಸರು ತರುತ್ತಾರೆ. ಹೀಗಾಗಿ ಇಂಥಾ ಮಕ್ಕಳು ನಗರಗಳಲ್ಲಿ ಖಾಸಗೀ ಸಂಸ್ಥೆಗಳಲ್ಲೇ ಕಲಿಯುತ್ತಾರೆ ಯಾಕೆಂದರೆ ಸಂಸ್ಥೆಗಳು ಅವರನ್ನೂ ಅವರ ಪಾಲಕರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಾರೆ. ಪಾಲಕರಿಗೆ ತಮ್ಮ ಮಕ್ಕಳು ಎಂದೂ ಹಿಂದೆಬೀಳದಿರಲಿ ಎಂಬ ಅಪೇಕ್ಷೆ ಇರುವುದರಿಂದ ಪಾಲಕರ ಆಯ್ಕೆ ಕೂಡಾ ಖಾಸಗೀ ಸಂಸ್ಥೆಗಳೇ ಆಗಿರುತ್ತವೆ.

ಖಾಸಗೀ ಸಂಸ್ಥೆಗಳಲ್ಲಿ, ಬ್ಯಾನರುಗಳು, ಪೋಸ್ಟರ್ಸ್, ಕರಪತ್ರಗಳು, ಟಿವಿ ಜಾಹೀರಾತುಗಳು, ಪತ್ರಿಕಾ ಜಾಹೀರಾತುಗಳು, ಅಂತರ್ಜಾಲ ಮಾಧ್ಯಮಗಳಲ್ಲಿ ಜಾಹೀರಾತುಗಳು ಬಹಳ ಜೋರಾಗಿವೆ. ಶಿಕ್ಷಣವನ್ನು ಉದ್ಯಮೀಕರಣ ಮಾಡಬಾರದು ಎಂಬ ಮಾತು ಹಳತಾಯ್ತು, ಈಗ ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಎಲ್ಲವೂ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಅಥವಾ ಏಕವ್ಯಕ್ತಿ ಕೇಂದ್ರೀಕೃತ ಟ್ರಸ್ಟುಗಳಾಗಿವೆ!! ಪೈಪೋಟಿ ಹೇಗಿದೆಯೆಂದರೆ ಒಬ್ಬರಿಗಿಂತಾ ಒಬ್ಬರು ವಿಶಿಷ್ಟರು ಎಂದು ತೋರಿಸಿಕೊಳ್ಳಲು ವ್ರಥಾ ಹೆಣಗಾಡುತ್ತಿರುತ್ತಾರೆ. ಇಪ್ಪತ್ತು ರೂಪಾಯಿ ಸೌಲಭ್ಯ ಕೊಟ್ಟರೆ ೨೦೦೦ ಕೋಟಿ ಕೊಟ್ಟವರಂತೇ ಹೇಳಿಕೊಳ್ಳುತ್ತಾರೆ. ಖಾಸಗೀ ಶಾಲೆಗಳಲ್ಲಿ ಶಿಕ್ಷಕರಿಗೆ ಉತ್ತಮ ಸಂಬಳ ಕೊಡುತ್ತಾರೆ ಎಂದೆನಿಸಿದರೂ ಅವರ ಸಂಬಳ ಸರಕಾರೀ ಶಾಲೆಗಳಿಗಿಂತ ಜಾಸ್ತಿ ಇರುವುದಿಲ್ಲ, ಮತ್ತು ಶಿಕ್ಷಕರಿಗೆ ಕೆಲಸಮಾತ್ರ ಸರಕಾರೀ ಶಿಕ್ಷಕರಿಗೆ ಇರುವ ಮೂರುಪಟ್ಟು ಇರುತ್ತದೆ! ಕೆಲಸ ಹೆಚ್ಚಾಯ್ತೆಂದು ಮಾಡಲು ಒಪ್ಪದಿದ್ದರೆ ಕೆಲಸದಿಂದ ವಜಾಗೊಳಿಸುವುದು ಕ್ಷಣಾರ್ಧದ ಮಾತು! ಆ ಸನ್ನಿವೇಶ ದೇವರಿಗೇ ಪ್ರೀತಿ. ಆದರೂ ಸರಕಾರೀ ಶಾಲೆಗಳಲ್ಲಿ ಶಿಕ್ಷಕರಾಗಲು ಅವಕಾಶ ಸಿಗದ ಜನ ಖಾಸಗೀ ಶಾಲೆಗಳಲ್ಲಿ ದುಡಿಯುತ್ತಾರೆ. ಖಾಸಗೀ ಶಾಲೆಗಳಲ್ಲಿ ನೆನಪಾದಾಗಲೆಲ್ಲಾ ರಜಾ ಗುಜರಾಯಿಸುವಂತಿಲ್ಲ, ಮಕ್ಕಳಿಗೆ ಎಮ್ಮೆ ಉಚ್ಚೆ ಹೊಯ್ದ ರೀತಿಯಲ್ಲಿ ಪಾಠಮಾಡುವಂತಿಲ್ಲ, ಎಲ್ಲದಕ್ಕೂ ನಿಮಯ-ನಿಬಂಧನೆಗಳಿವೆ, ಯಜಮಾನರ ನಿಯಂತ್ರಣವಿರುತ್ತದೆ. ಆಡಳಿತ ನಡೆಸುವ ಮಂದಿ ಎರಡನ್ನು ಕೊಟ್ಟು ಇಪ್ಪತ್ತನ್ನು ಇಸಿದುಕೊಳ್ಳುವುದರಲ್ಲಿ ನಿಸ್ಸೀಮರಾಗಿರುತ್ತಾರೆ; ಬಿಟ್ಟಿ ಕೆಲಸ ಮಾಡಿಸಿಕೊಳ್ಳುವುದಕ್ಕೂ ಸಿದ್ಧಹಸ್ತರಾಗಿರುತ್ತಾರೆ.ಆದರೂ, ಕಲಿಸಲು ಸಿಗುವ ಪರಿಕರ-ಸೌಲಭ್ಯಗಳನ್ನು ನೋಡಿ ಶಿಕ್ಷಕ ಹುದ್ದೆಗೆ ಅಬ್ಯರ್ಥಿಗಳು ಹುಡುಕಿಕೊಂಡು ಬರುತ್ತಾರೆ.

ಸಿ.ಬಿ.ಎಸ್.ಸಿ, ಆಯ್.ಸಿ.ಎಸ್.ಸಿ, ಸ್ಟೇಟ್ ಸಿಲ್ಲೇಬಸ್ ಗಳನ್ನು ಖಾಸಗಿಯವರು ತೆರೆದಿಡುತ್ತಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳನ್ನು ಸ್ಥಾಪಿಸುವಲ್ಲಿ ಧನಿಕರು ತೊಡಗಿಕೊಂಡಿದ್ದಾರೆ. ಎಜ್ಯುಕೇಷನ್ ಹ್ಯಾಸ್ ಬಿಕಮ್ ಮಲ್ಟಿಕ್ರೋರ್ ಬ್ಯುಸಿನೆಸ್ ನೌ!! ಸಭಾಂಗಣ, ಗ್ರಂಥಾಲಯ, ಶೌಚಾಲಯ, ಆಟದಬಯಲು ಎಲ್ಲಾ ಸೌಲಭ್ಯಗಳನ್ನು ತಕ್ಕಮಟ್ಟಿಗೆ ಇಡುವ ಖಾಸಗೀ ಶಾಲೆಗಳಲ್ಲಿ, ಓಡಾಟಕ್ಕೆ ಬಸ್ಸುಗಳನ್ನು ಇಡುತ್ತಾರೆ. [ಎಲ್ಲದಕ್ಕೂ ಹಣ ವಸೂಲು ಪ್ರತ್ಯೇಕ ಬಿಡಿ, ಆದರೆ ಸೌಲಭ್ಯ ಇದೆಯಲ್ಲ!] ಈ ಎಲ್ಲಾ ಅಂಶಗಳ ಮುಂದೆ ಸರಕಾರೀ ಶಾಲೆಗಳನ್ನು ಪರಿಗಣಿಸಿದರೆ, ಶಾಲೆಗಳಿಗೆ ವಿದ್ಯುತ್ ಸಂಪರ್ಕವೇ ಇರುವುದು ಕಮ್ಮಿ, ಗಣಕಯಂತ್ರಗಳಿರುವುದಿಲ್ಲ-ಇದ್ದರೂ ಕೆಲಸಮಾಡಲು ಶಿಕ್ಷಕರಿಗೇ ತಿಳಿದಿಲ್ಲ, ಎಷ್ಟೋ ಶಾಲೆಗಳ ಗಣಕಯಂತ್ರಗಳು ಹಾಳಾಗಿ ವರ್ಷಗಳೇ ಉರುಳಿವೆ!-ಅವುಗಳ ರಿಪೇರಿ ಮಾಸ್ತರಮಂದಿಗೆ ಬೇಕಾಗಿಲ್ಲ. ಕಿತ್ತುಹೋದ ಗೋಡೆಗಳು, ಒಡೆದ ಸೋರುವ ಛಾವಣಿಗಳು, ಕರಿಹಲಗೆ ಇದ್ದರೆ ಸೀಮೆ ಸುಣ್ಣವಿಲ್ಲ, ಸೀಮೆ ಸುಣ್ಣವಿದ್ದರೆ ಕರಿಹಲಗೆಯಿಲ್ಲ[ಸಾರಿ ಈಗೆ ಗ್ರೀನ್ ಹಲಿಗೆಯಾಗಿದೆ], ಸ್ಮಾರ್ಟ್ ಕ್ಲಾಸ್ ರೂಮ್ ಹಾಗಿರಲಿ, ಇರುವ ಖೋಲಿಗಳಲ್ಲಿ ಡೆಸ್ಕು-ಬೆಂಚುಗಳೇ ಇರುವುದಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಅಪರೂಪ, ಸುತ್ತಲಿನ ವಠಾರಗಳೇ ಶೌಚಾಲಯಗಳು! ಗ್ರಂಥಾಲಯ ಇರುವುದೇ ಇಲ್ಲ. ಆಟದ ಪರಿಕರಗಳು ಇಲ್ಲ. ನೆಟ್ಟಗೆ ಇರುವುದೊಂದೇ: ಮಾಸ್ತರಿಗೆ ರಜಾ ಬೇಕಾದಾಗ ಮಕ್ಕಳಿಗೆ ಆಡಲು ಸಮಯ ಸಿಗುತ್ತದೆ! 

ಈ ಮಧ್ಯೆ, ಗೀತೆ ಪಠ್ಯದಲ್ಲಿರಬೇಕೆಂದು ಉದಾತ್ತ ಭಾವದಿಂದ ಒಂದು ಪಕ್ಷ ಹೇಳಿದರೆ, ವಿನಾಕಾರಣ ಗೀತೆಯನ್ನು ದೂಷಿಸುತ್ತಾ-ಪಠ್ಯದಲ್ಲಿ ಸೇರಿಸಬಾರದು ಎಂದು ಇನ್ನೆರಡು ಪಕ್ಷಗಳವರು ಬೊಗಳುತ್ತಿರುತ್ತಾರೆ. ಪಠ್ಯಗಳಲ್ಲಿ ಪ್ರಕಟಿಸಬೇಕಾದ ವಿಷಯಗಳೇ ಇತ್ಯರ್ಥಕ್ಕೆ ಬರದೇ ಪಠ್ಯಪುಸ್ತಕಗಳ ಮುದ್ರಣ-ಸರಬರಾಜು ವಿಳಂಬವಾಗಿ ಅರ್ಧವರ್ಷವೇ ಕಳೆದುಹೋಗುತ್ತದೆ. ರಾಜಕಾರಣಿಗಳ ಹಲವು ಮುಖಗಳ ಹಗಲುವೇಷಗಳು ಸರಕಾರೀ ಶಾಲೆಗಳ ಸಿಬ್ಬಂದಿಯ ಕೆಲಸದಮೇಲೂ ಮತ್ತು ಅಲ್ಲಿ ಕಲಿಯುವ ಮಕ್ಕಳ ಮೇಲೂ ದುಷ್ಪರಿಣಾಮ ಬೀರದೇ ಇರುತ್ತವೆಯೇ? ರಾಜಕೀಯ ಪ್ರೇರಿತ, ರಾಜಕೀಯ ಪೋಷಿತ, ಸೌಲಭ್ಯ ವಂಚಿತ ಸರಕಾರೀ ಶಾಲೆಗಳಲ್ಲಿ, [ಗುಂಡೇ ಹಾರದ, ಬ್ರಿಟಿಷರ ಕಾಲದ ನಾಡಕೋವಿ ಹಿಡಿದು ನಮ್ಮ ಪೋಲೀಸರು ಇಂದಿನ ಅಧುನಿಕ ಶಸ್ತ್ರಾಸ್ತ್ರ ಹೊಂದಿರುವ ಭಯೋತ್ಪಾದಕರನ್ನು ಬೆನ್ನಟ್ಟುವಂತೇ] ಸಿಗುವ ಪರಿಕರಗಳನ್ನೇ ಉಪಯೋಗಿಸಿಕೊಂಡು ಆದಷ್ಟೂ ಚೆನ್ನಾಗಿ ಕಲಿಸುವ ಕೆಲವು ಶಿಕ್ಷಕರೂ ಇದ್ದಾರೆ, ಇಲ್ಲವೆಂದಲ್ಲ. ಆದರೆ ಪರಿಸ್ಥಿತಿಯ ಪ್ರಭಾವದಿಂದ ತಮ್ಮಲ್ಲಿರುವ ನೈಪುಣ್ಯವನ್ನು ಅವರು ಪೂರ್ಣಪ್ರಮಾಣದಲ್ಲಿ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ಆಗರವಾದ ಸರಕಾರೀ ಶಾಲೆಗಳಿಗೆ ಯಾರನ್ನು ಕರೆಯುತ್ತೀರಿ? ಸರಕಾರೀ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಾಗಿರುವುದು ಯಾಕೆಂದು ಈಗ ಗೊತ್ತಾಗಿರಬೇಕಲ್ಲ?    

Wednesday, May 22, 2013

ಕೇಳೆ ಸಖೀ ಕಮಲಮುಖೀ

ಚಿತ್ರ ಋಣ : ಅಂತರ್ಜಾಲ 
ಕೇಳೆ ಸಖೀ ಕಮಲಮುಖೀ
                                                                                 -(C) ವಿ.ಆರ್.ಭಟ್, ಹಡಿನಬಾಳ

[ಕವಿಕಲ್ಪನೆಯ ಭಾವಸ್ಫುರಣೆಯಲ್ಲಿ ಆದಿ-ಅಂತ್ಯ ಪ್ರಾಸಗಳ ಜುಗಲ್-ಬಂಧಿಯನ್ನು ಕಾವ್ಯರೂಪಕ್ಕಿಳಿಸುವಲ್ಲಿ, ಕಸುವನ್ನು ಒರೆಗೆ ಹಿಡಿದು ಬರೆದ ಇನ್ನೊಂದು ಕವನ ಇದು. ಛಂದಸ್ಸು-ವ್ಯಾಕರಣ-ಅಂಗಶುದ್ಧಿಯನ್ನು ಅನುಸರಿಸುತ್ತಾ, ಸಾಂಪ್ರದಾಯಿಕ-ಪ್ರಾಗೈತಿಹಾಸಿಕ ವಿಷಯವನ್ನೇ ಅದೆಷ್ಟು ಸಲ ವಿಭಿನ್ನ ಪದಪುಂಜಗಳಿಂದ ಬರೆಯಬಹುದು ಎಂಬ ದಿಸೆಯಲ್ಲಿ ಪ್ರಯತ್ನಿಸಿದ, ಪ್ರಯತ್ನಿಸುತ್ತಲೇ ಇರುವ ಹಲವು ಹೆಜ್ಜೆಗಳಲ್ಲಿ ಇದೊಂದು ಹೆಜ್ಜೆ; ಈ ಹೆಜ್ಜೆ ಓದುಗರ ಮನದಲ್ಲಿ ಗೆಜ್ಜೆತಟ್ಟಿದ ಸಪ್ಪಳವನ್ನು ಮೂಡಿಸಿದರೆ ಪ್ರಯತ್ನ ಸಾಫಲ್ಯ ಎಂಬ ಭಾವ ಕವಿಮನೆಯ-ಮನದ ಮೂಸೆಯಲ್ಲಿರುವಂಥದ್ದು.

ಗೋಕುಲದಲ್ಲಿ, ಗೊಲ್ಲನ ಅಗಲಿಕೆ ಗೋಪಿಕೆಯರಲ್ಲಿ ಯಾವ ಭಾವ ಕೆರಳಿಸಿತ್ತು ಎಂಬುದು ವಸ್ತುವಿಷಯ. ಕಮಲಮುಖಿಯೆನಿಪ ಸಖಿಯಲ್ಲಿ ಪ್ರತಿಯೊಬ್ಬ ಗೋಪಿಕೆಯದೂ ಇದೇ ಹೇಳಿಕೆ, ಇದೇ ಮಂಡನೆ: ಗೋಪಾಲ ತನ್ನವನು, ಗೋವಿಂದ ತನ್ನವನು ಎಂಬ ಹಪಹಪಿಕೆ. ಸಂಗದೊರೆತಾನಂತರ, ಅಕ್ಷರಶಃ, ಗೋಪಾಲನಿಲ್ಲದ ದಿನಗಳನ್ನು ಗೋಪಿಕೆಯರು ಬಯಸಲೇರ್ ಇಲ್ಲ! ಚಣಕಾಲ ಮಾಧವನಿಲ್ಲ ಎಂದರೆ ಆತ ಎಲ್ಲಿ ಹೋದ? ಯಾವಾಗ ಬರಬಹುದು?-ಎಂಬ ಚಿಂತೆ, ಆಲೋಚನೆ ಅವರನ್ನು ಕಾಡುತ್ತಿತ್ತು, ’ಗೋವಿಂದಕಲೆ’ಯನ್ನು ಸೃಜಿಸಿ ಚಾಣಾಕ್ಷನಾದ ಆ ಗೋವಳನ ಫ್ಲರ್ಟಿಂಗ್ ಅಷ್ಟರಮಟ್ಟಿಗೆ ವರ್ಕೌಟ್ ಆಗಿತ್ತು ಎಂದರ್ಥ !!

ಮಿತ್ರರೊಬ್ಬರು ನೆನಪಿಸಿದಂತೇ ಯಾರೇ ಬೇಕಾದರೂ ಅನೇಕ ಮದುವೆಗಳನ್ನು [ಕದ್ದು-ಮುಚ್ಚಾದರೂ]ಮಾಡಿಕೊಳ್ಳಬಹುದು, ಆದರೆ ಕೃಷ್ಣನಂತೇ ಕಿರುಬೆರಳಲ್ಲಿ ಗೋವರ್ಧನವನ್ನೆತ್ತಿ ನಿಲ್ಲಲು ಸಾಧ್ಯವಿಲ್ಲವಲ್ಲ. ತನ್ನ ಅನೇಕ ಚಾತುರ್ಯಗಳಿಂದ ಜಗದ ಮನವಗೆದ್ದ ಗುರು ಶ್ರೀಕೃಷ್ಣ, ವ್ಯಾಸ-ಗಣೇಶರ ಮೂಲಕ ಗೀತೆಯನ್ನು ಬೋಧಿಸಿ ಜಗದ್ಗುರುವಾಗಿದ್ದಾನೆ. ಏಕದಿಂದ ಅನೇಕ-ಅನೇಕದಿಂದ ಏಕ ಎಂಬ ತಥ್ಯವನ್ನು, ಸತ್ಯವನ್ನು ಆಡಿತೋರಿಸಿದ, ಮಾಡಿತೋರಿಸಿದ ಗೊಲ್ಲನ ಪ್ರೇಮ ಸಿಗುವುದಾದರೆ ಗೋಪಿಕೆಯರೇ ಏಕೆ ಜಗದ ಜನರೆಲ್ಲಾ ಹಾತೊರೆಯುತ್ತಿರಲಿಲ್ಲವೇ? ಗೋಪಿಕೆಯೋರ್ವಳ ಅಂತರಂಗ ತನ್ನ ಸಖಿಯಲ್ಲಿ ಬಹಿರಂಗಗೊಂಡ ಬಗೆಯನ್ನು ಕವನ ತಮಗೆ ತಿಳಿಸುತ್ತದೆ, ನಮಸ್ಕಾರ]


ಕೇಳೆ ಸಖೀ ಕಮಲಮುಖೀ ಅಂತರಂಗವ |
ಬಾಳಕಾವ್ಯಕೆನಗೆ ಅವನೆ ಕವಿಯು ಪುಂಗವ ||ಪ||

ಗಾಳಿಯಲ್ಲಿ ಕೊಳಲಗಾನ ದೂರದಿಂದ ತೇಲಿಬಿಟ್ಟು 
ಹಾಳೆ ಹಾಳೆಯಲ್ಲು ಪದವ ಗೀಚಿದಂಥವ |
ಗೀಳು ಹಿಡಿಸಿ ಸರಿದುಹೋದ ಗಾವುದಗಳ ದೂರಕಷ್ಟು
ಗೋಳುಹುಯ್ದುಕೊಳುವನೆಲ್ಲಿ? ನಾಚಿದಂಥವ ||೧||

ಪಾಳಿಯೇನೊ ಎಂಬರೀತಿ ಕೊಳದಬುಡದಿ ಮರದೊಳಿದ್ದು
ದಾಳಿಯಿಟ್ಟು ಬಟ್ಟೆಗಳನು ಕದ್ದುಕೊಂಡವ |
ನೀಳಗೂದಲನ್ನು ಎಳೆದು ನೋವುನೋಡಿ ಮಜವಮೆದ್ದು
ಗೂಳಿ ಗುಟುರಿದಂತೆ ನಟಿಸಿ ಮುದ್ದನುಂಡವ ||೨||

ಕಾಳಸರ್ಪನನ್ನು ತುಳಿದು ಯಮುನೆ ಮಡುವಿನೊಳಗೆ ಬಿದ್ದು
ಕೇಳಿಯಾಡಿ ಕಾಳಗದೊಳು ಒದ್ದುನಿಂತವ |
ತಾಳಲಾರದಂಥ ಮಳೆಗೆ ಗೋವರ್ಧನವೆತ್ತಿ ಖುದ್ದು
ಬೀಳು ಹರಿಸಿ-ಇಂದ್ರಮೊಗದಿ ಗೆದ್ದುನಿಂತವ ||೩||   

ತಾಳೆಲಾರೆನಮ್ಮ ವಿರಹ ಬಾಳೆ-ಬೇಕು ಗೊಲ್ಲ ಸನಿಹ 
ಧೂಳು ಕವಿದ ರತುನದಂತದಾಯ್ತು ಜೀವನ |
ನಾಳೆನಾವದೆಲ್ಲೊ ಹುಡುಕಿ ಮಾಧವನನು ಸೇರೆ ಪುನಃ
ತಾಳೆಹಿಡಿದು ಜಾಡುನೋಡು ಜನುಮ ಪಾವನ ||೪||

------೦------

Tuesday, May 21, 2013

ಹೆಚ್ಚುತ್ತಿರುವ ಮೈಗಳ್ಳತನ ; ಕರಾಳ ಭವಿಷ್ಯದ ಅನಾವರಣ

ಚಿತ್ರಋಣ : ಅಂತರ್ಜಾಲ 
ಹೆಚ್ಚುತ್ತಿರುವ ಮೈಗಳ್ಳತನ ; ಕರಾಳ ಭವಿಷ್ಯದ ಅನಾವರಣ

ಬೆಂಗಳೂರಿನ ಔಷಧ ಅಂಗಡಿಯೊಂದರ ಮುಂದೆ ’ಕಂಪ್ಯೂಟರ್ ಗೊತ್ತಿರುವ ಕೌಂಟರ್ ಸೇಲ್ಸ್ ಬಾಯ್ಸ್ ಬೇಕಾಗಿದ್ದಾರೆ, ಸಂಬಳ 8,000/- ದಿಂದ 10,000/-’ ಎಂದು ಬರೆದಿತ್ತು. ಅಂಗಡಿಯಾತನಲ್ಲಿ ನಾನು ಕೇಳಿದೆ "ಹೇಗೆ ಅಷ್ಟೆಲ್ಲಾ ಸಂಬಳ ಕೊಡುತ್ತೀರಿ ನೀವು?" ಎಂದು. ಅದಕ್ಕಾತ ಉತ್ತರಿಸಿದ:"ನೋಡಿ ಸರ್, ಬಿಗ್ ಬಜಾರು, ಮಾಲು ಎಲ್ಲಾಕಡೆಗಳಲ್ಲೂ ಎಸ್.ಎಸ್.ಎಲ್.ಸಿಯಲ್ಲಿ ಫೇಲ್ ಆಗಿರುವ ಹುಡುಗರು ಕೆಲಸಕ್ಕೆ ಸೇರಿಕೊಂಡರೂ ಕನಿಷ್ಠ ಹತ್ತು ಸಾವಿರ ಕೊಡ್ತಾರೆ. ಹಾಗಿರುವಾಗ ನಮ್ಮಲ್ಲಿಗೆ ಕಮ್ಮಿ ಸಂಬಳಕ್ಕೆ ಹುಡುಗರು ಬರುತ್ತಾರೆಯೇ? ಹುಡುಗರು ಬೇಕೆಂದರೆ ಒಳ್ಳೇ ಸಂಬಳ ಕೊಡಲೇಬೇಕು. ನಾವೇ ಮಾಡಿಕೊಳ್ಳುವ ಹಾಗಿದ್ದರೆ ಹುಡುಗರ ಅಗತ್ಯ ಬೀಳೋದಿಲ್ಲ, ಕೆಲಸ ಜಾಸ್ತಿ ಇದೆ ಎಂದಾದರೆ ಆಗ ಹುಡುಗರನ್ನು ಹಾಕ್ಕೊಳ್ಳಬೇಕಾಗುತ್ತೆ." ಔಷಧದ ಅಂಗಡಿಯಲ್ಲಿ ಆ ಬೋರ್ಡು ವರ್ಷದಿಂದ ಹಾಗೇ ಇದೆ. "ಯಾಕೆ ಯಾರೂ ಬರಲಿಲ್ಲವೇ?" ಎಂದರೆ, "ಬರ್ತಾ ಇರ್ತಾರೆ ಹೋಗ್ತಾ ಇರ್ತಾರೆ, ಅದಕ್ಕೇ ಬೋರ್ಡನ್ನು ಹಾಗೇ ಇಟ್ಟಿದ್ದೇವೆ." ಎಂಬುತ್ತರ ದೊರೆಯಿತು.  

ಬೆಂಗಳೂರು ಮಹಾನಗರದ ಕೈಗಾರಿಕಾ ಪ್ರದೇಶಗಳಲ್ಲಿ ಪೀಣ್ಯ, ಜಿಗಣಿ ಇಂಥಲ್ಲೆಲ್ಲಾ, ಬಹುತೇಕ ವಸಾಹತುಗಳ ಮುಂದೆ ’ಕೆಲಸಗಾರರು ಬೇಕಾಗಿದ್ದಾರೆ’ ಎಂಬ ಫಲಕ ಕಳೆದೆರಡು ವರ್ಷದಿಂದ ಸದಾ ನೇತಾಡುತ್ತಲೇ ಇದೆ; ಆದರೆ ಅವರು ಕರೆಯಿತ್ತ ಕೆಲಸಕ್ಕೆ ತಕ್ಕುದಾದ ಕೆಲಸಿಗರ ಲಭ್ಯತೆ ಮಾತ್ರ ಕಾಣುತ್ತಿಲ್ಲ. ಜಾಗತೀಕರಣಕ್ಕೂ ಕೆಲಸಿಗರ ಕೊರತೆಗೂ ಸಂಬಂಧ ಇದೆ ಎಂಬುದನ್ನು ತೆಗೆದುಹಾಕುವಂತಿಲ್ಲ. ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕಂತೂ ಜನವೇ ಇಲ್ಲ! ಇಂಚಿಂಚು ಕೆಲಸಕ್ಕೂ ತರಾವರಿ ಯಂತ್ರಗಳನ್ನು ಅವಲಂಬಿಸಬೇಕಾಗಿ ಬಂದಿದೆ, ಆದರೆ ಎಲ್ಲಾ ನಮೂನೆಯ ಯಂತ್ರಗಳನ್ನು ಕೊಳ್ಳಲು ಚಿಕ್ಕ ಹಿಡುವಳಿದಾರರಿಗೆ ಸಾಧ್ಯವಾಗುತ್ತಿಲ್ಲ, ಯಂತ್ರಗಳನ್ನು ಆ ಯಾ ಕೃಷಿ ಸ್ಥಳಗಳಿಗೆ ತೆಗೆದುಕೊಂಡು ಹೋಗಲು ಆಗದ ಪ್ರಾದೇಶಿಕ ತೊಂದರೆ ಅವರಲ್ಲೇ ಕೆಲವರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆ.

ಹೆಂಗಸರ ಕೆಲಸಗಳನ್ನು ಸುಲಭವಾಗಿಸಲು ಬಂದ ಮಿಕ್ಸರ್, ಗ್ರ್ಐಂಡರ್ ಮೊದಲಾದ ಯಂತ್ರಗಳ ಬಳಕೆಯಿಂದಾಗಿ ಹೆಂಗಳೆಯರು ಹೆಚ್ಚುಸಮಯ ಟಿವಿ ಮುಂದೆ ಕುಳಿತು, ಪ್ರಯೋಜನಕ್ಕೆ ಬಾರದ ಧಾರಾವಾಹಿಗಳು, ಅಪರಾಧ ಪ್ರಕರಣಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿರುವುದರಿಂದ, ಶರೀರದಲ್ಲಿ ಅನಾವಶ್ಯಕ ಬೊಜ್ಜು ಬೆಳೆದು ಅದನ್ನು ಕರಗಿಸಲು ಹಣವ್ಯಯಿಸಿ ಜಿಮ್ ಮತ್ತು ಏರೋಬಿಕ್ಸ್ ಗಳಿಗೆ ಹೋಗುವುದು ನಗರಗಳಲ್ಲಿ ಕಂಡುಬಂದರೆ, ಗ್ರಾಮೀಣ ಜನತೆಯೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ಸ್ವಲ್ಪ ಓಡಾಡಿ ನೋಡಿದಾಗ ಅನುಭವಕ್ಕೆ ಬರುತ್ತದೆ. ತಿಳಿಗೊಳಕ್ಕೆ ಕಲ್ಲುಗಳನ್ನೆಸೆದು ಶಬ್ದಗಳ ಗುಲ್ಲೆಬ್ಬಿಸಿದಂತೇ ಬೇಡದ ಧಾರಾವಾಹಿಗಳ ಕೆಟ್ಟ ಸಂದೇಶಗಳು ಮತ್ತು ಅಪರಾಧ ಪ್ರಕರಣಗಳ ಪುನಾರಚಿತ ದೃಶ್ಯಾವಳಿಗಳಿಂದ ಅವರ ಮನಸ್ಸೂ ಮಲಿನಗೊಳ್ಳುತ್ತಿದೆ, ಮನೆಮನೆಗಳಲ್ಲಿ ಕಿಂಚಿತ್ ಕ್ಷುಲ್ಲಕ ಕಾರಣಕ್ಕೂ ಜಗಳ-ವೈಮನಸ್ಸು ಆರಂಭವಾಗಿದೆ; ವಿನಾಕಾರಣ ವಿಚ್ಛೇದನಗಳೂ ಹೆಚ್ಚುತ್ತಿವೆ.          

’ಅಸಂಘಟಿತ ಕಾರ್ಮಿಕ ವಲಯ’ ಎಂಬ ಬುದ್ಧಿ ಜೀವಿಗಳ ಹೇಳಿಕೆ ಕೆಲವೊಮ್ಮೆ ವಿಪರ್ಯಾಸಕ್ಕೂ ಕಾರಣವಾಗುತ್ತದೆ. ಇಂದಿನ ಈ ದಿನಮಾನದಲ್ಲಿ ಯಾರೆಂದರೆ ಯಾರಿಗೂ ನಿರ್ವಹಿಸಬೇಕಾದ ಕೆಲಸಗಳ ಜವಾಬ್ದಾರಿಯೇ ಇಲ್ಲವಾಗಿದೆ. ಮಲ್ಲೇಶ್ವರದ ಹೋಟೆಲ್ ಮಾಲೀಕರೊಬ್ಬರು ಉಂಡುಟ್ಟು ಸುಖವಾಗಿದ್ದರು; ಆದರೆ ಈಗೀಗ ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲವಂತೆ! ಕಾರಣವಿಷ್ಟೇ: ಬೆಳಗಾದರೆ ಯಾವ ಅಡುಗೆಯವ ಮತ್ತು ಯಾವ ಕೆಲಸದ ಹುಡುಗ ಓಡಿಹೋದ ಎಂಬುದನ್ನು ನೋಡುತ್ತಲೇ ಇರಬೇಕಂತೆ. ಬರುವ ಗಿರಾಕಿಗಳಲ್ಲಿ ತಮ್ಮೊಳಗಿನ ತುಮುಲಗಳನ್ನು ಹೇಳಿಕೊಳ್ಳುವ ಹಾಗಿಲ್ಲ, ಗಿರಾಕಿಗಳಿಗೆ ಒದಗಿಸಬೇಕಾದ ತಿಂಡಿ-ತೀರ್ಥ ಪದಾರ್ಥಗಳಲ್ಲಿ ಜಾಸ್ತಿ ವ್ಯತ್ಯಯ ಮಾಡುವಂತಿಲ್ಲ. ಕೆಲಸದವರೇ ಇಲ್ಲದಿದ್ದರೆ ಯಜಮಾನರು ಎಷ್ಟೂ ಅಂತ ಒಬ್ಬರೇ ನಿಭಾಯಿಸಲು ಸಾಧ್ಯ? ಈ ಕಥೆ ಕೇವಲ ಮಲ್ಲೇಶ್ವರದ ಹೋಟೆಲ್ಲಿಗೆ ಸಂಬಂಧಿಸಿದ್ದಲ್ಲ, ಎಲ್ಲೇ ಹೋಗಿ, ಬಹುತೇಕ ಎಲ್ಲಾ ಹೋಟೆಲ್ ಮಾಲೀಕರು ಅನುಭವಿಸುತ್ತಿರುವುದೂ ಇದನ್ನೇ.

ತಾವು ಕಷ್ಟಪಟ್ಟಿದ್ದು ಸಾಕು, ತಮ್ಮ ಮಕ್ಕಳಿಗೆ ತಮ್ಮ ಪಾಡು ಬರುವುದು ಬೇಡ ಎಂದುಕೊಳ್ಳುತ್ತಿದ್ದ ಎಲ್ಲಾ ರಂಗಗಳ, ಎಲ್ಲಾ ವಲಯಗಳ ಕೆಲಸಿಗ ಪಾಲಕರು ಮಕ್ಕಳಿಗೆ ವಿದ್ಯೆಯನ್ನೇನೋ ಕೊಡಿಸಿದರು, ಆದರೆ ಉತ್ತಮ ಸಂಸ್ಕಾರವನ್ನು ಕೊಡಲು ಸಾಧ್ಯವಾಗಲಿಲ್ಲ. ಬೆಳೆದ ಮಕ್ಕಳು ಉನ್ನತ ಔದ್ಯೋಗಿಕ ರಂಗದಲ್ಲಿ ತೊಡಗಿಕೊಂಡರೂ ಸಂಬಳಕೊಡುವ ಕಂಪನಿಗೆಂದೂ ನಿಷ್ಠರಾಗಿ ನಡೆದುಕೊಳ್ಳಲು ಮುಂದಾಗುತ್ತಿಲ್ಲ. ಕೆಲಸ ಕೊಡುವ ಮಾಲೀಕರ ವೃತ್ತಿ-ಉತ್ಪನ್ನ ಸಂಬಂಧಿತ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯತೆ ಕೆಲಸಗಾರರಲ್ಲಿ ಕಂಡುಬರುತ್ತಿಲ್ಲ. ದುಡಿಮೆ ಕೇವಲ ಸಂಬಳಕ್ಕಾಗಿದೆಯೇ ಹೊರತು ದುಡಿಮೆಯೊಂದು ಪವಿತ್ರ ಕೆಲಸ ಎಂಬ ಭಾವನೆ ಎಂದೋ ಹೊರಟುಹೋಗಿದೆ. ವರ್ಷಗಳಕಾಲ ಉತ್ತಮ ಸಂಬಳವನ್ನೇ ಪಡೆದರೂ, ಇನ್ನೊಂದು ಜಾಗದಲ್ಲಿ ನೂರೋ ಇನ್ನೂರೋ ರೂಪಾಯಿ ಜಾಸ್ತಿ ದೊರೆಯುವುದಾದರೆ ಅಲ್ಲಿಗೇ ಹಾರುವ ಸ್ವಭಾವ ಇಂದಿನ ಯುವ ಕೆಲಸಿಗರದು. ಇಂತಿರುವ ದಿನಗಳಲ್ಲಿ ಕೆಲಸದಲ್ಲಿ ಗುಣಮಟ್ಟವನ್ನು ಬಯಸುವುದು ಅಥವಾ ಕಾಣುವುದು ಸಾಧ್ಯವೇ?

ಅಸಂಘಟಿತ ವಲಯದ ಮಕ್ಕಳೆಲ್ಲಾ ತಮ್ಮ ಹಿತಾರ್ಥವಾಗಿ-ತಮ್ಮ ಸುಖಾರ್ಥವಾಗಿ, ತಮ್ಮ ನೇರಕ್ಕೇ ನಡೆಯುತ್ತಿರುವಾಗ, ಅವರನ್ನು ಹೇಗಾದರೂ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವವರು ಕಂಪನಿಗಳ/ಕೃಷಿಭೂಮಿಗಳ/ಉದ್ಯಮಗಳ ಮಾಲೀಕರು. ಕಾರ್ಮಿಕರು/ಕೆಲಸಿಗರು ಇಲ್ಲದೇ ವ್ಯವಹಾರ ನಡೆಯುವುದಿಲ್ಲ; ಕೆಲಸಿಗರು ಇರಬೇಕೆಂದರೆ ಅವರು ಮಾಡುವ ಕೆಲಸವನ್ನು ಅದು ಹೇಗೇ ಇದ್ದರೂ ಉಸಿರೆತ್ತದೇ ಒಪ್ಪಿಕೊಳ್ಳಬೇಕಾದ ಪ್ರಸಂಗವೂ ತಪ್ಪುತ್ತಿಲ್ಲ. ತಮ್ಮ ತೊಡಗಿಕೊಳ್ಳುವಿಕೆಯನ್ನು ಬಯಸುವ, ಬಳಸುವ ಯಜಮಾನರ ಅನಿವಾರ್ಯತೆಯನ್ನು ಮನಗಂಡ ಯುವ ಕೆಲಸಿಗರು, ಅದರ ದುರುಪಯೋಗ ಪಡಿಸಿಕೊಳ್ಳುತ್ತಿರುವುದಂತೂ ಗ್ಯಾರಂಟಿ. ಇವತ್ತು ಇಲ್ಲಿ, ವಾರದಲ್ಲೋ ತಿಂಗಳಲ್ಲೋ ಇನ್ನೊಂದೆಡೆಗೆ, ಆ ನಂತರ ಮತ್ತೆಲ್ಲೋ ಹೀಗೇ ಕೆಲಸವನ್ನು ಬದಲಿಸುತ್ತಲೇ ಇರುವುದರಿಂದ ಮಾಲೀಕ-ಕೆಲಸಿಗರ ಪ್ರೀತಿಯ ಸಂಕೋಲೆ ಇಂದು ಬದುಕಿ ಉಳಿದಿಲ್ಲ. ಕಾಯ್ದೆ ಬದ್ಧವಾಗಿ ತಮಗೆ ಸಿಗಬೇಕಾದುದನ್ನು ಹಠಮಾಡಿಯಾದರೂ ಪಡೆಯುವ ಕೆಲಸಿಗರು ಯಜಮಾನರ ಮನಸ್ಸನ್ನು ಗೆಲ್ಲಲಂತೂ ಸಾಧ್ಯವಾಗುತ್ತಿಲ್ಲ.

ಇನ್ನೊಂದು ಅನಾಹುತಕಾರೀ ಬೆಳವಣಿಗೆಯೆಂದರೆ, ಕೆಲವು ರಂಗಗಳಲ್ಲಿ ಕೆಲಸಗಳ ಗುಣಮಟ್ಟ ಪಾತಾಳಕ್ಕೆ ಇಳಿಯುತ್ತಿದೆ. ’ಊರಿಗೊಬ್ಳೇ ಪದ್ಮಾವತಿ’ ಎಂಬ ರೀತಿಯಲ್ಲಿ ತಮ್ಮನ್ನು ತೋರಿಸಿಕೊಳ್ಳುತ್ತಿರುವ ಕೆಲಸಿಗರಲ್ಲಿ, ಮಾಡುವ ಕೆಲಸಗಳ ಬಗ್ಗೆ ನೈಪುಣ್ಯ ಇಲ್ಲವಾಗುತ್ತಿದೆ. ’ಯಾರೂ ಸಿಗುತ್ತಿಲ್ಲ’ ಎಂಬ ಅಂಜಿಕೆಯಿಂದ, ಸಿಕ್ಕವರ ಮನಸ್ಸಿಗೆ ವಿರೋಧ ಉಂಟುಮಾಡಿದರೆ ಅವರೂ ಓಡಿಹೋದಾರೆಂಬ ಅಳುಕಿನಿಂದ, ಕೆಲಸಿಗರ ಕಳಪೆ ಕೆಲಸಗಳನ್ನೂ ಮಾಲೀಕರು ಒಪ್ಪಿಕೊಳ್ಳುವ ಸ್ಥಿತಿ ಬಂದೊದಗಿದೆ. ನಾವೆಲ್ಲಾ ಚಿಕ್ಕವರಿದ್ದಾಗ ಆಗಷ್ಟೇ ಪ್ಲಾಸ್ಟಿಕ್ ಉಪಕರಣಗಳು ಮಾರುಕಟ್ಟೆಗೆ ಕಾಲಿಟ್ಟಿದ್ದರೂ ಮರದ ಬಾಚಣಿಗೆಗಳು ಸಿಗುತ್ತಿದ್ದವು; ಬಾಚಣಿಗೆಗಳಿಗೆ ಸಿಗುವ ಪ್ರತಿಫಲ ಎಷ್ಟು ಎಂಬುದನ್ನೇ ಯೋಚಿಸುತ್ತಾ ಅವುಗಳನ್ನು ಬೇಕಾಬಿಟ್ಟಿ ಎಂಬರ್ಥದಲ್ಲಿ ತಯಾರಿಸದೇ ಬಹಳ ನಾಜೂಕಾಗಿ ಸಿದ್ಧಪಡಿಸುತ್ತಿದ್ದುದು ಗಮನಕ್ಕೆ ಬರುತ್ತದೆ. ಗಡಿಗೆಮಾಡುವ ಕುಂಬಾರನಿಗೆ ಗಡಿಗೆ-ದಂಧೆ ತನ್ನ ಒಡಲನ್ನು ತುಂಬುತ್ತದೆ ಎಂಬುದು ಸ್ಪಷ್ಟವಿತ್ತಷ್ಟೆ; ಹೆಚ್ಚಿನದನ್ನು ಆತ ಅಪೇಕ್ಷಿಸಲಿಲ್ಲ.

ಜಾಗತೀಕರಣದಿಂದ ಮರದ ಬಾಚಣಿಗೆ, ಮಣ್ಣಿನಗಡಿಗೆ ಮಾಡುವ ಕುಲಕಸುಬುದಾರರಿಗೆ ಹೊಡೆತ ಬಿದ್ದಿದೆ ಎಂಬುದು ಒಪ್ಪಲೇಬೇಕಾದ ವಿಷಯ. ಆದರೆ ಜಾಗತೀಕರಣವೇ ಎಲ್ಲಾ ರಂಗಗಳನ್ನೂ ಹಾಳುಗೆಡವಿತು ಎಂಬುದನ್ನು ಒಪ್ಪಲು ಬರುವುದಿಲ್ಲ. ಹಾಗಂತ ಜಾಗತೀಕರಣ ಭಾರತದ ಕೆಲಸಗಾರರಮೇಲೆ ಪರಿಣಾಮ ಬೀರುತ್ತಾ, ಬಹುರಾಷ್ಟ್ರೀಯ ಕಂಪನಿಗಳು, ವಸಾಹತುಗಳು ಕೆಲಸಗಾರರನ್ನು ತಮ್ಮೆಡೆ ಸೆಳೆದವು. ಅವರು ಕೊಡುವ ಕೆಲಸ ಶಾಶ್ವತವಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾರದ ಜನ ಅವರಲ್ಲಿನ ಕೆಲಸಕ್ಕೆ ಮನಸೋತರು. ನಮ್ಮಲ್ಲಿನ ಕೆಲಸಗಾರರಿಂದ ತಮ್ಮ ಕೆಲಸಗಳನ್ನು ಪೂರೈಸಿಕೊಂಡು, ನಮ್ಮಲ್ಲಿನ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ತಾವೇ ಮೆದ್ದುಕೊಂಡ ವಿದೇಶಿಗರು, ದೇಶೀಯ ಕುಲಕಸುಬುಗಳಿಗೆ, ವ್ಯವಸಾಯೋತ್ಪನ್ನಗಳಿಗೆ, ಕೈಗಾರಿಕೋತ್ಪನ್ನಗಳಿಗೆ ಹಲವು ವಿಧದಲ್ಲಿ ಪರೋಕ್ಷವಾಗಿಯೂ ಮತ್ತು ಕೆಲವು ವಿಧದಲ್ಲಿ ನೇರವಾಗಿಯೂ ದುಷ್ಪರಿಣಾಮ ಬೀರಿದ್ದಾರೆ ಎಂಬುದು ಕನ್ನಡಿಯ ಪ್ರತಿಬಿಂಬದಷ್ಟೇ ಢಾಳಾಗಿ ಕಾಣುತ್ತಿರುವುದು ಖಚಿತ. 

ಮೇಲಾಗಿ ವಿದೇಶೀ ಕಂಪನಿಗಳತ್ತ ಬೆರಳು ತೋರಿಸುತ್ತಾ, ಸ್ವದೇಶೀ ಕಂಪನಿಗಳ/ಉದ್ಯಮಿಗಳ/ಕೃಷಿಭೂಮಾಲೀಕರ ಗಮನವನ್ನು ಅತ್ತಕಡೆ ಸೆಳೆದು, ನೈಪುಣ್ಯ ಇರುವ ಮಂದಿ ಹೆಚ್ಚಿನ ಸಂಬಳ ಕೇಳುವುದರ ಜೊತೆಗೆ,’ಕೆಲಸಗಾರರು ಬೇಕೆಂಬ ಬೇಡಿಕೆ ಹೆಚ್ಚಿದೆ’ ಎಂಬ ಊಹಾಪೋಹದಿಂದ    ಎಲ್ಲೆಡೆಗೂ ಅಲ್ಪಸ್ವಲ್ಪ ಕೆಲಸ ಗೊತ್ತಿದ್ದವರೂ ತಮ್ಮ ವೈಯ್ಯಕ್ತಿಕ ಬೇಡಿಕೆಗಳನ್ನು ಹೆಚ್ಚಿಸಿಕೊಂಡರು. ಅದರ ಪರಿಣಾಮವಾಗಿ ಕೆಲಸದ ಗಂಧಗಾಳಿಯೇ ಇಲ್ಲದ ಇನ್ನುಳಿದ ಜನ ಕೂಡ ಹೂವಿನ ಜೊತೆಗೆ ನಾರು ಕೂಡ ಸಾಗಿಹೋದಂತೇ ಕೆಲಸಗಳಿಗೆ ಸೇರಿಕೊಂಡರು. ಮಾಡುವ ಕೆಲಸಗಳಲ್ಲಿ ಸಾಮೂಹಿಕ ಕೆಲಸಗಳು ಕೆಲವಾದರೆ ಏಕವ್ಯಕ್ತಿ ಕೇಂದ್ರೀಕೃತ ಕೆಲಸಗಳು ಹಲವು. ಏಕವ್ಯಕ್ತಿ ಕೇಂದ್ರಿತ ಕೆಲಸಗಳಿಗೆ ಕೆಲಸಗಾರರು ಸಿಗುವುದು ದುರ್ಲಭವಾಯ್ತು. ರಸ್ತೆ-ಸೇತುವೆಗಳ ನಿರ್ಮಾಣ, ಅರಣ್ಯ ಇಲಾಖೆಯ ಕೆಲಸಗಳು ಮೊದಲಾದ ಸಾಮೂಹಿಕ ಕೆಲಸಗಳಲ್ಲಿ ಕೆಲಸ ಕಡಿಮೆ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸವನ್ನೇ ಮಾಡದಿದ್ದರೂ ಮಾಡಿದಂತೇ ತೋರಿಸಿದರೆ ಸಂಬಳ ಸಿಗುವುದರಿಂದ, ಅಸಂಘಟಿತ ವಲಯದ ಹಲವುಮಂದಿ ಯುವಕರು ಅವುಗಳನ್ನು ಆತುಕೊಂಡರು.

ದಿನಗಳೆದಂತೇ ಯುವಜನಾಂಗಕ್ಕೆ ಮಾಡುವ ಕೆಲಸಕ್ಕಿಂತಾ ಆಡುವ ಕೆಲಸಗಳತ್ತ ದೃಷ್ಟಿ ಹರಿಯಿತು. ಆಡುತ್ತಾ ಆಡುತ್ತಾ 8 ಗಂಟೆ ಕಾರ್ಯ ನಿರ್ವಹಿಸಿದಂತೇ ತೋರಿಸಿದರೆ ಸಾಕಾಗುವ ಕೆಲಸಗಳತ್ತ ಮನಸ್ಸು ಹರಿಯಿತು. ಹೀಗಾಗಿ ಕೃಷಿ ಅಥವಾ ಕೈಗಾರಿಕಾ ವಲಯಗಳಲ್ಲಿ ಮೈಮುರಿದು ದುಡಿಯುವ ಜವಾಬ್ದಾರಿ ಹುದ್ದೆಗಳಿಗಿಂತಾ ಆಡುತ್ತಾ ಮಾಡುವ ಕೆಲಸಗಳಿಗೆ ಯುವಕರು ಆದ್ಯತೆ ನೀಡಿದರು. ಅದರಲ್ಲೂ ಯುವಕರು ಮತ್ತು ಯುವತಿಯರು ಒಟ್ಟಾಗಿ ಆಡುತ್ತಾ ಮಾಡುವ ಕೆಲಸಗಳನ್ನು ಯುವಕರು ತಮ್ಮ ಗುರಿಯಾಗಿಸಿಕೊಂಡರು; ಎಂಜಾಯ್ ಮಾಡಿದರು. ಪರಿಣಾಮವಾಗಿ ವೃತ್ತಿಪರ ಕೆಲಸಗಳಲ್ಲಿನ ನೈಪುಣ್ಯ ಕಳೆಗುಂದುತ್ತಾ ನಡೆದು ಕೆಲಸಗಳು ಒಟ್ಟಾರೆ ಹೇಗೋ ನಡೆಯುತ್ತಿವೆ; ಕೆಲಸ ಕೊಡುವವರು ಗೊಣಗುತ್ತಲೇ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ.  ಇದೇ ಕಾರಣದಿಂದ ಇಂದು ಶೆಟ್ಟರ ಅಂಗಡಿಯಲ್ಲಿ ಸಾಮಾನು ಕೊಡಲೂ ಹುಡುಗರಿಲ್ಲ, ಭಟ್ಟರ ಗದ್ದೆಯಲ್ಲಿ ನಾಟಿಮಾಡಲೂ ಜನರಿಲ್ಲ!

ಕೆಲವುಕಡೆ ಜನಜೀವನದಲ್ಲಿ, ಹಾಸಿಗೆಗಿಂತಾ ಉದ್ದ ಕಾಲುಚಾಚಿದ ಪರಿಣಾಮವಾಗಿಯೋ, ಪ್ರಕೃತಿ ವೈಪರೀತ್ಯದಿಂದ ಬೆಳೆಯಾಗದುದರಿಂದಲೋ ಅಥವಾ ರಫ್ತು ವ್ಯವಹಾರ ಕಂಗೆಟ್ಟುಹೋಗಿರುವುದರಿಂದಲೋ, ತಮ್ಮ ಹಿರಿಯರು ಮಾಡಿಕೊಂಡ ಸಾಲವನ್ನು ಕಂಡ ಯುವಜನಾಂಗಕ್ಕೆ, ಕಷ್ಟದ ಕೆಲಸಗಳು ಮತ್ತು ಫಲಾಫಲದ ಸಾಧ್ಯಾಸಾಧ್ಯತೆಗಳು ಸಿಂಹಸ್ವಪ್ನವಾಗಿ ಕಾಡಿದ್ದರಿಂದ, ಹಿರಿಯರು ಮಾಡುತ್ತಿದ್ದ ಕೆಲಸಗಳಲ್ಲಿ ಕಷ್ಟವೇ ಹೆಚ್ಚೆನಿಸಿ, ದೀರ್ಘಕಾಲೀನ ಉತ್ತಮ ಪ್ರತಿಫಲದ ಇತಿಹಾಸವನ್ನು ಅವರು ಮರೆತು, ಕ್ಷಣಿಕ ಪ್ರತಿಫಲವನ್ನೇ ಬಯಸುತ್ತಾ ಸಾಂಪ್ರದಾಯಿಕ ಕುಲಕಸುಬು ಮತ್ತು ಕೃಷಿ, ಕೈಗಾರಿಕೆಗಳನ್ನು ಅವಗಣಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಈಜಾಡುತ್ತಾ ಬಂದ ವಿದೇಶೀ ಕಂಪನಿಗಳ ಪೈಪೋಟಿ ಅತಿಯಾಗಿ, ದೇಶೀಯ ಕೃಷಿ-ವ್ಯವಸಾಯ-ಕೈಗಾರಿಕೆಗಳು ಅವುಗಳಿಗೆ ಸಡ್ಡುಹೊಡೆದು ನಿಲ್ಲುವುದು ಕಷ್ಟವಾಗುತ್ತಿದೆ. ಹಳ್ಳಿಗಳಲ್ಲಿ ಕೃಷಿ ಭೂಮಿಗಳಲ್ಲಿ ಕೆಲಸಕ್ಕೆ ಜನರಿಲ್ಲ, ಕೈಗಾರಿಕೆಗಳಲ್ಲಿ ಕಾರ್ಮಿಕರಿಲ್ಲದ ಕೊರತೆ ನೀಗುತ್ತಿಲ್ಲ, ದೇಶೀಯ ಉದ್ಯಮಗಳಲ್ಲೂ ಕೆಲಸಗಾರರ ಅಭಾವ ಬಹಳವಾಗಿದೆ.        

ಸಾಲದ್ದಕ್ಕೆ, ಅದಾಗಲೇ ಇದ್ದ ಯಮಯಾತನೆಯ ಹುಲಿಹುಣ್ಣುಗಳಮೇಲೆ ಬರೆ ಎಳೆದಂತೇ, ಸರಕಾರ ಕೊಡಮಾಡುವ ಒಂದು ರೂಪಾಯಿಗೆ ಕೆಜಿ ಅಕ್ಕಿಯಂತಹ ಸೌಲಭ್ಯಗಳಿಂದ ಹಳ್ಳಿಗಳಲ್ಲಿ ಯುವಜನತೆಯಲ್ಲಿ ಮೈಗಳ್ಳತನ ವಿಪರೀತ ಹೆಚ್ಚಿ, ವಿದೇಶೀ ಉತ್ಪನ್ನಗಳನ್ನೇ ದೇಶವಾಸಿಗಳು ಅವಲಂಬಿಸಬೇಕಾದ ಅನಿವಾರ್ಯತೆ ಬಂದರೂ ಅಚ್ಚರಿಯೆನಿಸುವುದಿಲ್ಲ, ವಿಶೇಷವೂ ಎನಿಸುವುದಿಲ್ಲ. ಮುಂಬರುವ ಲೋಕಸಭೆಯ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ’ಬಡಜನರ, ದೀನದಲಿತರ ಕಣ್ಣೀರೊರೆಸುವ ಯೋಜನೆ’ ಎಂಬ ಸ್ಲೋಗನ್ ಅಡಿಯಲ್ಲಿ ಪಕ್ಷವೊಂದು ಮಾಡುತ್ತಿರುವ ಇಂಥಾ ’ಘನಂದಾರಿ’ ಕೆಲಸಗಳಿಂದ ಯುವಜನತೆ ಕೆಲಸ ಮಾಡುವುದನ್ನೇ ಮರೆಯುತ್ತಾರೆ; ಪರಮ ಆಳಸಿಗಳಾಗುತ್ತಾರೆ. ಕುಂತಲ್ಲೇ 30 ಕೆಜಿ ಅಕ್ಕಿ ತಿಂಗಳಿಗೆ ದೊರೆಯುವಾಗ ಕೆಲಸವಾದರೂ ಏಕೆ ಬೇಕು? ಅಲ್ಲವೇ? ಅದರಲ್ಲಂತೂ ಹಡಾಲೆದ್ದುಹೋದ ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ, ಅನೇಕ ಹಳ್ಳಿಗಳಲ್ಲಿ/ಪಟ್ಟಣಗಳಲ್ಲಿ ಮನೆಗಳ ಪ್ರತಿಯೊಬ್ಬ ಸದಸ್ಯನೂ ಪ್ರತ್ಯೇಕ ಪ್ರತ್ಯೇಕ ಬೇನಾಮಿ ಬಿ.ಪಿಎಲ್. ಕಾರ್ಡನ್ನು ಹೊಂದಿರುವುದು ಕಂಡುಬರುತ್ತಿದೆ.

’ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬ ಗಾದೆಯನ್ನು ನಮ್ಮ ಪೂರ್ವಜ-ಪ್ರಾಜ್ಞರು ಮಾಡಿಟ್ಟು ಹೋದರು, ಅದರಂತೇ ರೂಪಾಯಿಗೆ ಕೆಜಿ ಅಕ್ಕಿ ಕೊಡುವ ಅಥವಾ ಪಡೆಯುವ ಕಾರ್ಯ ಎಲ್ಲಿಯವರೆಗೆ ಶಾಶ್ವತವಾಗಿದ್ದೀತು? ಅಂತಹ ಯೋಜನೆಗಳನ್ನು ಜಾರಿಯಲ್ಲಿಡಲು ವಿದೇಶೀಯ ಮೂಲಗಳಿಂದ ಸರಕಾರ ಪಡೆಯುವ ಸಾಲದಿಂದ ಭಾರತ ಎಂದಿಗೆ ಮುಕ್ತವಾದೀತು? ಅಥವಾ ಸಾಲದ ಶೂಲ ದೇಶದ ಬೆನ್ನೆಲುಬಿಗೇ ನಾಟಿ ದೇಶ ಮರಳಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಸ್ಥಿತಿ ಬಂದೀತೇ? ಗೊತ್ತಿಲ್ಲ. ಆಳಸಿಗಳಾಗಿ ಬದಲಾಗುವ ಜನರನ್ನು ಮತ್ತೆ ಕೆಲಸಗಳತ್ತ ಗಮನ ಹರಿಸುವಂತೇ ಮಾಡುವುದು ಸರಕಾರಕ್ಕೆ ಸಾಧ್ಯವೇ? ಉತ್ತರವಿಲ್ಲ. ನಮ್ಮ ದುಡಿಮೆಯನ್ನು ನಾವು ಮಾಡಿಕೊಳ್ಳಬೇಕು, ನಮ್ಮ ಅನ್ನವನ್ನು ನಾವೇ ಸಂಪಾದಿಸಿಕೊಳ್ಳಬೇಕು ಎಂಬ ಭಾರತೀಯ ಮೂಲ ಸಂಸ್ಕೃತಿಯ ಸಂದೇಶವನ್ನೇ ಕಡೆಗಣಿಸಿ, ದೇಶೋದ್ಧಾರದ ನೆಪವೊಡ್ಡಿ, ಕೆಲಸಿಗರಲ್ಲಿ ಮೈಗಳ್ಳತನ ಹೆಚ್ಚಿಸುತ್ತಿರುವ ಆಳರಸರಿಗೆ, ಭವಿಷ್ಯದ ದಿನಗಳ ದೂರಾಲೋಚನೆ ಇಲ್ಲವೆಂಬುದಂತೂ ಸ್ಪಷ್ಟ; ಇದೇ ಗತಿಯ-ಇದೇ ಸ್ಥಿತಿಯ-ಇದೇ ರೀತಿಯ ಯೋಜನೆಗಳು ಮುಂದರಿದರೆ, ದೇಶ ಮುಂದೊಮ್ಮೆ ಅನುಭವಿಸಲಿಕ್ಕಿದೆ: ತುಂಬಲಾರದ ನಷ್ಟ !