ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, May 27, 2013

ಹೊಲೆಯನಾರೂರ ಹೊರಗಿರುವವನೆ ಹೊಲೆಯ ?


ಹೊಲೆಯನಾರೂರ ಹೊರಗಿರುವವನೆ ಹೊಲೆಯ ?

ಬಸವಣ್ಣನವರ ವಚನಗಳಲ್ಲಿ ಇಂಥಾದ್ದನ್ನು ನಾವು ಕೇಳಿದ್ದೇವೆ. ’ಹೊಲೆಯ’ ಎಂಬ ಪದ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ನಾವು ಪರಾಂಬರಿಸಿದರೆ ಆ ಪದದ ಬಳಕೆಯ ಅನಿವಾರ್ಯತೆ ಇಂದಿಗೂ ಇದೆ ಎಂಬುದು ಸ್ವಷ್ಟವಾಗುತ್ತದೆ. ನಾಯಿಯ ಬಾಲ ಜನ್ಮತಃ ಸಹಜವಾಗಿ ಡೊಂಕೇ ಇರುತ್ತದೆ; ಅದನ್ನು ದಿನ, ವಾರ, ತಿಂಗಳು, ವರ್ಷಗಟ್ಟಲೆ ನೆಟ್ಟಗಿರುವ ಪೈಪಿನಲ್ಲಿ ಹಾಕಿಟ್ಟು ಆಮೇಲೆ ತೆಗೆದು ನೋಡಿದರೂ ಅದು ಬದಲಾಗುವುದಿಲ್ಲ. ಬಸವಣ್ಣನವರೇನೋ ತಮ್ಮ ಉದಾತ್ತತೆಯಿಂದ ಹೊಲೆಯರೆಂಬವರನ್ನೂ ಬದಲಿಸಲು ಹೊರಟರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಹಾಗಾದರೆ ಯಾರು ಹೊಲೆಯ ಎಂದರೆ ಹಾಲು ಕುಡಿದ ಬಗ್ಗೆ ಕನಿಷ್ಠ ಕೃತಜ್ಞತೆ ಇಟ್ಟುಕೊಳ್ಳದೇ ಹಾಲೂಡಿದ ಹಸುವನ್ನೇ ಕತ್ತರಿಸಿ ಹೊಟ್ಟೆಗೆ ಇಳಿಸುವವ ಹೊಲೆಯ. ಕಾಂಗೈ ಬರುವಾಗಲೇ ಅದರ ಕೆಟ್ಟ ಗಾಳಿ ಬೀಸತೊಡಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ, ರಾಜರ ಆಳ್ವಿಕೆಯಲ್ಲಿ ಸುಭಿಕ್ಷದಿಂದಿದ್ದ ದೇಶವನ್ನು ಹಡಾಲೆಬ್ಬಿಸಿದವರೇ ಇಂದಿರಾ ಕಾಂಗ್ರೆಸ್ಸಿಗರು. ಮಹಾತ್ಮಾ ಗಾಂಧಿಯವರು ಮಡಿದಾನಂತರ ಕಾಂಗ್ರೆಸ್ಸು ತನ್ನ ವರ್ಚಸ್ಸನ್ನು ಕಳೆದುಕೊಂಡೇ ಬಿಟ್ಟಿತು. ನೆಹರೂ ಕುಟುಂಬದ ಅನುವಂಶೀಯ ಮೊಕ್ತೇಸರಿಕೆಯಲ್ಲಿ ನಡೆದುಬಂದ ಆ ಪಕ್ಷ ದೇಶಕ್ಕೆ ಎಸಗದ ಹಾನಿಯಿಲ್ಲ! ಪ್ರಮುಖವಾಗಿ ಅಧಿಕಾರ ಲಾಲಸೆಯಿಂದ ದೇಶದ ಸನಾತನ ಸಂಸ್ಕೃತಿಯನ್ನು ಬಲಿಗೊಟ್ಟಿರುವುದು ಕಾಣುತ್ತದೆ.   

ಅನೇಕ ಜನ ’ಬುದ್ಧಿಜೀವಿಗಳು’ ಬಂದು ಟಿವಿ ಚಾನೆಲ್ ಗಳಲ್ಲಿ ಅನಾವಶ್ಯಕವಾಗಿ ಗಂಟೆಗಟ್ಟಲೆ ಕಾಲಹರಣಮಾಡುತ್ತಾರೆ. ಎಲ್ಲರೂ ಡಾಕ್ಟರುಗಳೇ!! ಡಾಕ್ಟರೇಟ್ ಪಡೆದುಕೊಳ್ಳುವ ಬಗೆಯನ್ನು ಹಿಂದೊಂದು ಲೇಖನದಲ್ಲಿ ವಿವರಿಸಿದ್ದೆ, ಮತ್ತೆ ಅದನ್ನು ಈಗ ಪ್ರಸ್ತಾಪಿಸುವುದಿಲ್ಲ. ಅಂಥಾ ಡಾಕ್ಟರೇಟ್ ಪಡೆದವರಿಗೂ ಸನಾತನ ಸಂಸ್ಕೃತಿಗೂ ಯಾವುದೇ ಸಂಬಂಧವಿರುವುದಿಲ್ಲ; ಅವರೆಲ್ಲಾ ಸುಸಂಸ್ಕೃರೂ ಆಗಿರಬೇಕೆಂದಿಲ್ಲ. ಕಾಲದ ವೈಪರೀತ್ಯದಿಂದ ಮಾಂಸಾಹಾರವನ್ನು ತಿನ್ನದ ವರ್ಗವನ್ನು ಹೀಗಳೆಯುವ ಮಂದಿ ಹೇರಳವಾಗಿದ್ದಾರೆ. ಮಾಂಸಹಾರ ಯಾಕೆ ವರ್ಜ್ಯ ಎಂಬ ಕಾರಣಕ್ಕೆ ಮಹತ್ವ ಕೊಡದೇ ಕೇವಲ ವಾದಕ್ಕಾಗಿ ವಾದವನ್ನು ಮಂಡಿಸುತ್ತಾ, ತಮ್ಮದೇ ಸತ್ಯವೆಂದು ಜಯಭೇರಿ ಬಾರಿಸುತ್ತಾರೆ; ಸಂಖ್ಯಾಬಲದಲ್ಲಿ ಸಣ್ಣವರಾದ ಶಾಕಾಹಾರಿಗಳು ಸುಮ್ಮನಾಗುತ್ತಾರೆ. ಅಧುನಿಕ ಯುಗದಲ್ಲಿ ಮಾಹಿತಿತಂತ್ರಜ್ಞಾನದ ಬೆಳವಣಿಗೆಯಿಂದ ಮಾಹಿತೆಗೇನೂ ಕೊರತೆಯಿಲ್ಲ. ಆದರೆ ಪೂರ್ವಾಗ್ರಹ ಪೀಡಿತರಾಗದೇ ಮಾಹಿತಿಯನ್ನು ಸ್ವೀಕರಿಸುವ ಸ್ವಭಾವಜನಕೊರತೆಯುಂಟು. ಅಧುನಿಕ ವಿದ್ಯೆಯನ್ನು ಓದಿಕೊಂಡ ಮಾತ್ರಕ್ಕೆ ವ್ಯಕ್ತಿ ಸುಸಂಸ್ಕೃತನಾಗುವುದಿಲ್ಲ, ತಾನೇನು ಮಾಡಬೇಕು ಎಂಬುದನ್ನು ಅರಿತುಕೊಂಡು ತನ್ನಲ್ಲಿರುವ ಲೋಪಗಳನ್ನು ಬದಲಾಯಿಸಿಕೊಂಡರೆ ಮಾತ್ರ ವ್ಯಕ್ತಿ ಸುಸಂಸ್ಕೃತನೆನಿಸುತ್ತಾನೆ.

ಹುಟ್ಟಿದ ಎಲ್ಲಾ ಪ್ರಾಣಿಗಳೂ ಬದುಕುತ್ತವೆ, ಬದುಕಿಗಾಗಿ ಹೋರಾಡುತ್ತವೆ, ತಿನ್ನುತ್ತವೆ-ವಿಶ್ರಾಂತಿ ಪಡೆಯುತ್ತವೆ-ಸಂತತಿ ವೃದ್ಧಿಸುತ್ತವೆ ಹೀಗೇ ಬದುಕಿ ಒಂದು ದಿನ ಸಾಯುತ್ತವೆ. ಇದರ ಪುನರಾವರ್ತನೆ ಸೃಷ್ಟಿಯ ನಿಯಮ. ಆದರೆ ಜೀವಿಗಳಲ್ಲಿ ಅತಿ ಹೆಚ್ಚು ವಿಕಸಿತ ಬುದ್ಧಿಮಟ್ಟದ ಮೆದುಳನ್ನು ಹೊಂದಿದ ಜೀವಿಯೆಂದರೆ ಮನುಷ್ಯ. ಹುಟ್ಟಿನಿಂದ ಮಾನವನೆನ್ನಿಸಿಕೊಳ್ಳುವುದಕ್ಕೂ ಸಂಸ್ಕಾರದಿಂದ ಮಾನವನೆನಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ||ಮನುಷ್ಯ ರೂಪೇಣ ಮೃಗಾಶ್ಚರಂತಿ|| ಎಂಬ ಹಾಗೇ ಕೆಲವರು ಮನುಷ್ಯ ರೂಪದಲ್ಲೇ ಇದ್ದರೂ ಮೃಗಗಳಂತೇ ವರ್ತಿಸುತ್ತಾರೆ. ಹುಟ್ಟಿನಿಂದ ಎಲ್ಲರೂ ಸಂಸ್ಕಾರವಂತರಾಗಿರುವುದಿಲ್ಲ. ಸಂಸ್ಕಾರ ಪಡೆಯುವಲ್ಲಿ ವ್ಯಕ್ತಿಯೊಬ್ಬ ಹುಟ್ಟಿ ಬೆಳೆದ ಪರಿಸರವೂ ವ್ಯಕ್ತಿಯ ಮೇಲೆ ಹಲವು ಪರಿಣಾಮ ಬೀರುತ್ತದೆ.

ಬಾಲ್ಯದಲ್ಲಿ ಮಗುವಿಗೆ ತಂದೆ-ತಾಯಿ ಮತ್ತು ಪರಿಸರ ಕೊಡುವ ಸಂಸ್ಕಾರ ಬಹಳ ಮುಖ್ಯ. ಮಗುವಿನ ಮನಸ್ಸು  ಹಸಿಮಣ್ಣಿನ ಗೋಡೆಯಿದ್ದಂತೇ. ಹಸಿಮಣ್ಣಿನ ಗೋಡೆಗೆ ದೂರದಿಂದ ಚಿಕ್ಕ ಕಲ್ಲುಗಳನ್ನು ಎಸೆದರೆ ಹೇಗೆ ಅಂಟಿಕೊಳ್ಳುವುದೋ ಹಾಗೇ ಚಿಕ್ಕ ಮಗುವಿಗೆ ಗ್ರಾಹಕ ಶಕ್ತಿ ಜಾಸ್ತಿಯಿರುತ್ತದೆ. ತಾನು ಗ್ರಹಿಸಿದ್ದನ್ನು ನೆನಪಿನಲ್ಲಿಟ್ಟು ಅನುಕರಿಸುವ ಮನಸ್ಸೂ ಕೂಡ ಇರುತ್ತದೆ. ಕೂಡುಕುಟುಂಬದ ಪದ್ಧತಿಯನ್ನು ಕಳೆದುಕೊಂಡಿದ್ದೇವೆ. ಇಡೀ ಸಮಾಜ ಆಧುನಿಕೀಕರಣಕ್ಕೆ ಮೊರೆಹೋಗಿ ಎಲ್ಲಾ ಅಪ್ಪ-ಅಮ್ಮ-ಮಗು ಇಷ್ಟೇ. ಎಲ್ಲೋ ಅಪ್ಪಿ-ತಪ್ಪಿ ಇಬ್ಬರು ಮಕ್ಕಳಿದ್ದರೆ ಆಶ್ಚರ್ಯ. ಮಕ್ಕಳು ಜಾಸ್ತಿ ಬೇಕು ಎಂದು ಹೇಳುತ್ತಿಲ್ಲ, ಆದರೆ ಹಿಂದಿನ ದಿನಗಳಲ್ಲಿ ಹುಟ್ಟಿದ ಮಗುವಿಗೆ ಸುತ್ತಮುತ್ತ ಹತ್ತಾರು ಜನ ಎತ್ತಿ ಆಡಿಸುವವರಿರುತ್ತಿದ್ದರು. ಮನೆಯಲ್ಲಿ ಹಿರಿಯರು, ಅನುಭವಿಕರು ಇರುತ್ತಿದ್ದು ಮಕ್ಕಳಿಗೆ ರಾಮಾಯಣ-ಮಹಾಭಾರತಗಳಿಂದ ಹಾಗೂ ಇತರ ಅನೇಕ ನೀತಿಕಥೆಗಳಾದ ಪಂಚತಂತ್ರ ಮೊದಲಾದವುಗಳಿಂದಲೂ ಇದಲ್ಲದೇ ಜನಪದರು ಹೊಸೆದ ಗ್ರಾಮೀಣ ಕಥೆಗಳಿಂದಲೂ ಮಕ್ಕಳನ್ನು ರಂಜಿಸುತ್ತಾ, ಅವರಿಗೆ ಆ ಮೂಲಕ ತಿಳುವಳಿಕೆಯ ಮಾರ್ಗವನ್ನು ತೋರಿಸುತ್ತಿದ್ದರು, ಒಳ್ಳೆಯತನವನ್ನು ಬೋಧಿಸುತ್ತಿದ್ದರು. ಇಂದು ಇವೆಲ್ಲಾ ನೆನೆಸಲೂ ಸಾಧ್ಯವಿಲ್ಲದಷ್ಟು ನಾವೆಲ್ಲಾ ಬಿಡುವಿಲ್ಲದ ಕೆಲಸಗಳಲ್ಲಿ ನಿರತರು! ಹೀಗಾಗಿ ಮಕ್ಕಳು ಎಂದಿದ್ದರೂ ಮಕ್ಕಳೇ ಆಗಿರುವುದರಿಂದ ಅವರಿಗೆ ಸರಿಯಾಗಿ ತಿಳಿಹೇಳುವವರಾರು ಎಂಬುದು ಪ್ರಶ್ನೆಯಾಗಿದೆ.

ಸುಮಾರು ೪೦ ವರ್ಷಗಳ ಹಿಂದೆಯೇ ’ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಜನಾನುರಾಗಿಯಾಗಿದ್ದ ಸಿದ್ದಯ್ಯ ಪುರಾಣಿಕರು ತಮ್ಮ ಕಾವ್ಯದಲ್ಲಿ ಹೇಳುತ್ತಾರೆ:

ಏನಾದರೂ ಆಗು ನೀ ಬಯಸಿದಂತಾಗು
ಏನಾದರೂ ಆಗು ನಿನ್ನಿಚ್ಛೆಯಂತಾಗು
ಏನಾದರೂ ಸರಿಯೇ ಮೊದಲು ಮಾನವನಾಗು 

ಇವತ್ತಿನ ದಿನಮಾನದಲ್ಲಿ ನಾವು ನಮ್ಮ ಸುತ್ತಲ ಪರಿಸರದಲ್ಲಿ ನೋಡಿದಾಗ, ನಡೆಯುತ್ತಿರುವ ಕೊಲೆ-ಸುಲಿಗೆ-ದರೋಡೆಗಳು, ಅನ್ಯಾಯ-ಅತ್ಯಾಚಾರ-ಅನಾಚಾರ-ಮೋಸ ಇತ್ಯಾದಿ ಹೇಸಿಗೆಯ ಕೃತ್ಯಗಳು ಇವೆಲ್ಲಾ ಕಣ್ಣಿಗೆ ಬಿದ್ದಾಗ, ಸುದ್ದಿ ತಿಳಿದು ಮನಸ್ಸು ನೋವನ್ನು ಅನುಭವಿಸುತ್ತದೆ. ಎಷ್ಟೋ ಪ್ರಾಣಿಗಳು ಅವುಗಳಿಗೆ ಬುದ್ಧಿ ಕಮ್ಮಿ ಇದ್ದರೂ ಸಂಕೇತಗಳಿಂದಲೇ ತಮ್ಮ ತಮ್ಮ ತೊಂದರೆಗಳನ್ನು ಪರಸ್ಪರರಲ್ಲಿ ಹಂಚಿಕೊಂಡು ಅರ್ಥಮಾಡಿಕೊಂಡು ಬದುಕುತ್ತವೆ. ಇರುವೆಗೆ ಸಾಲಾಗಿ ಹೋಗಲು ಯಾರು ಹೇಳಿಕೊಟ್ಟರು, ಮೀನಿಗೆ ಈಜಲು ಯಾರು ಕಲಿಸಿದರು, ಹಕ್ಕಿಗೆ ಹಾರಲು ಯಾರು ತರಬೇತಿಕೊಟ್ಟರು....ಇವೆಲ್ಲಾ ನಿಸರ್ಗದ ನಿಯಮಗಳು. ದಯಾಮಯಿಯಾದ ಜಗನ್ನಿಯಾಮಕ ಮನುಷ್ಯನಿಗೆ ವಿಕಸಿತ ಮನಸ್ಸನ್ನು ಕೊಟ್ಟು ಅದರ ಕೀಲಿಯನ್ನೂ ನಮಗೇ ಕೊಟ್ಟ. ಆದರೆ ಆ ಕೀಲಿಯನ್ನು ನಾವೀಗ ದುರುಪಯೋಗಮಾಡಿಕೊಳ್ಳುತ್ತಿದ್ದೇವೆ. ಕವಿ ಮುಂದುವರಿದು ಹೇಳುತ್ತಾರೆ :

ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು ದುಡಿದು ಗಳಿಸಿ

ನಾವು ಇಚ್ಛಿಸಿದಂತೇ ನಮ್ಮ ವೃತ್ತಿ. ನಮ್ಮ ವೃತ್ತಿಯಿಂದಲೇ ನಮ್ಮ ಜಾತಿ. || ಚಾತುರ್ವಣ್ಯಂ    ಮಯಾಸೃಷ್ಟಂ  ಗುಣಕರ್ಮ ವಿಭಾಗಶಃ || ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ. ನಾವು ಯಾವ ಯಾವ ಕೆಲಸವನ್ನು ಮಾಡುತ್ತೇವೋ ಅದರಿಂದಲೇ ನಾವು ಆಯಾ ಜಾತಿಗೆ ಸೇರಿದವರೇ ವಿನಃ ಜಾತಿ ಜನ್ಮಜಾತವಲ್ಲ ಎಂದನಲ್ಲವೇ ?  ಚೆನ್ನಾಗಿ ಓದು, ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸ; ಉತ್ತಮ ಸಂಸ್ಕಾರ ಪಡೆ --ಈ ಮೂಲಕ ನೀನು ಬ್ರಾಹ್ಮಣನಾಗುತ್ತೀಯ. ದೇಶದ ರಕ್ಷಣೆಗಾಗಿ ಯೋಧನಾಗಿ ಮೆರೆ ನೀನಾಗ ಕ್ಷತ್ರಿಯನಾಗುತ್ತೀಯ. ವ್ಯಾಪಾರಮಾಡಿದಾಗ ವೈಶ್ಯನೂ ಹೊಲದಲ್ಲಿ ದುಡಿದಾಗ ಶೂದ್ರನೂ ಆಗುತ್ತೀಯ. ಅಂದರೆ ಈ ನಾಲ್ಕೂ ಅಂಶಗಳು ಒಬ್ಬ ವ್ಯಕ್ತಿಯಲ್ಲೇ ಇರಲು ಸಾಧ್ಯವಷ್ಟೇ ? ಸಮಯಕ್ಕೆ ತಕ್ಕಂತೆ ಒಬ್ಬನೇ ವ್ಯಕ್ತಿ ಈ ನಾಲ್ಕೂ ವರ್ಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ.  ಕವಿ ಮತ್ತೆ ಸಾರುತ್ತಾರೆ:

ಹಿಂದೂ ಮುಸ್ಲಿಮನಾಗು ಬೌದ್ಧ ಕ್ರೈಸ್ತನೇ ಆಗು
ಚಾರುವಾಕನೆ ಆಗು ಭೋಗ ಬಯಸಿ

ನೀನೊಬ್ಬ ಹಿಂದೂವೋ ಮುಸ್ಲಿಮನೋ ಬೌಧ್ಧನೋ ಕ್ರೈಸ್ತನೋ ಆಗು ಅಥವಾ ಭೋಗ ಬಯಸುವ ಚಾರ್ವಾಕನೇ ಆಗು ಆದರೆ ಅದೆಲ್ಲಕ್ಕೂ ಮೊದಲು ನೀನು ಮಾನವನಾಗು --ಎಷ್ಟು ಚೆನ್ನಾಗಿದೆ ನೋಡಿ !

ರಾಜಕಾರಣಿಯಾಗು ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು

ರಾಜಕಾರಣಿಯಾದರೂ ಆಗಬಹುದು, ದೇಶಭಕ್ತನಾಗಿ ಹಲವಾರು ರೀತಿಯಲ್ಲಿ ಸೇವೆಸಲ್ಲಿಸಬಹುದು,  ಶಿಲ್ಪಿ-ಕಲೆಗಾರ-ವಿಜ್ಞಾನಿ-ವೈದ್ಯ ಇತ್ಯಾದಿ ಯಾವುದೇ ಉದ್ಯೋಗಲ್ಲೂ ತೊಡಗಬಹುದು...ಆದರೆ ಇದೆಲ್ಲಕ್ಕೂ ಮೊದಲು ಮಾನವರಾಗುವುದನ್ನು ಕಲಿಯಬೇಕು ಎಂಬುದು ಕಾವ್ಯದ ಸಾರ, ಸಂದೇಶ.

ಒಬ್ಬ ದರ್ಜಿ, ಒಬ್ಬ ಮೋಚಿ ಮತ್ತು ಒಬ್ಬ ನಾಪಿಕ ಈ ಮೂರು ಜನರಿದ್ದರೆ ಯಾವ ವ್ಯಕ್ತಿಯೂ ಹೊರಗಿನಿಂದ ಸಿಂಗಾರಗೊಂಡು ಚೆನ್ನಾಗಿ ಕಾಣಬಹುದು. ಆದರೆ ಅದೇ ಆತನ ನಡವಳಿಕೆಗೆ ಇವರಾರೂ ಏನೂ ಮಾಡಲಾರರು. ಹರುಕು ಬಟ್ಟೆಯನ್ನೇ ತೊಟ್ಟಿದ್ದರೂ ಉತ್ತಮ ಗುಣನಡತೆ ಹೊಂದಿದ್ದರೆ ಆತ ಮಾನ್ಯನೇ ಸರಿ. ಏನೋ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಧನಿಕನಾಗದವನು ಹೃದಯಶ್ರೀಮಂತಿಕೆಯಲ್ಲಿ ಕೊರತೆ ಹೊಂದಿದವನಾಗಿರಲೇ ಬೇಕೆಂದೇನಿಲ್ಲ.

ಇವತ್ತಿನ ಮಾಧ್ಯಮ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲವು ಬೇಡದ ಪ್ರಸಂಗಗಳನ್ನು, ಮನಕಲಕುವ ದೃಶ್ಯಗಳನ್ನೂ ಮಕ್ಕಳು ನೋಡುತ್ತಿರುತ್ತಾರೆ. ನಾವು ಒಳ್ಳೆಯ ಸಂಸ್ಕಾರವನ್ನು ಪಡೆದಮೇಲೆ ಮಕ್ಕಳನ್ನೂ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೇ ತಿದ್ದಬೇಕಲ್ಲವೇ?  ಮೊನ್ನೆ ದೀಪಾವಳಿಯ ಸಡಗರದಲ್ಲಿ ದೇಶವೇ ನಲಿಯುತ್ತಿದ್ದರೆ ಒಂದು ಹಳ್ಳಿಯ ಒಬ್ಬರ ಮನೆಯಲ್ಲಿ ಹುಡುಗನೋರ್ವ ಅಡುಗೆ ಮನೆಗೆ ಬಂದ. ಅಮ್ಮ ಮಾಡುತ್ತಿದ್ದ ಹೋಳಿಗೆ ಪಡೆದು ತಿಂದ. ಅಮ್ಮ ಕೆಲಸದಲ್ಲಿ ನಿರತರಾಗಿರುವಾಗ ಈ ಹುಡುಗ ಮಹಡಿಯೇರಿ ಹೋಗಿ ಅಲ್ಲಿ ಮೊದಲೇ ತಾನು ತಂದಿಟ್ಟಿದ್ದ ನೇಣನ್ನು ಹಾಕಿಕೊಂಡು ನೇತಾಡಿದ !  ಏನಾಗುತ್ತದೆ ಎಂಬುದನ್ನು ಅನುಭವಿಸಿ ನೋಡಲು ಆತ ಹಾಗೆ ಮಾಡಿದ್ದು. ಹುಡುಕುತ್ತಾ ಅಮ್ಮ ಮತ್ತು ಮಿಕ್ಕುಳಿದವರು ಬರುವಷ್ಟರಲ್ಲಿ ಆತ ಶಿವನಪಾದ ಸೇರಿದ್ದ. ಇದು ಇಂದಿನ ಧಾರಾವಾಹಿ ಹಾಗೂ ಚಲನಚಿತ್ರಗಳ ಒಂದು ಮುಖದ ಪರಿಣಾಮ.

ದಿನಾಲೂ ಅನೇಕ ಮನೆಗಳಲ್ಲಿ ಮಲಗುವ ಮುನ್ನ ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಕೊಲೆಸುಲಿಗೆಯ ದೃಶ್ಯಗಳ ವಿವರಣೆಗಳನ್ನು ನೋಡುತ್ತಾರೆ. ಇದರಿಂದ ಮನಸ್ಸಿಗೆ ಋಣಾತ್ಮಕ ಭಾವಗಳು ಆವರಿಸಿಕೊಂಡು ಒಳಗೊಳಗೇ ಮನಸ್ಸು ಚಡಪಡಿಸುತ್ತದೆ. ಪೂರ್ವಜರು ಹಿಂದಕ್ಕೆ ರಾಮಾಯಣದಂತಹ ಕಥೆಯ ರಾಮನಿರ್ಯಾಣ, ಮಹಾಭಾರತದ ಕರ್ಣಾವಸಾನ ಇಂಥದ್ದನ್ನೆಲ್ಲಾ ಕೂಡ ರಾತ್ರಿ ಮಲಗುವ ಮುನ್ನ ಓದುವುದೋ, ಕೇಳುವುದೋ, ಗಮಕವಾಚಿಸುವುದೋ ಮಾಡುತ್ತಿರಲಿಲ್ಲ. ರಾತ್ರಿ ಮಲಗುವ ಮುನ್ನ ಮನಸ್ಸಿಗೆ ಧನಾತ್ಮಕ ಸಂದೇಶಗಳನ್ನು ಕೊಡಬೇಕು. ಬೇಳಿಗ್ಗೆ ಎದ್ದಾಗಲೂ ಅಷ್ಟೇ. ಇದೆಲ್ಲವನ್ನೂ ಕಡ್ಡಾಯವಾಗಿ ಅನುಸರಿಸಲಿ ಎಂಬ ದೃಷ್ಟಿಯಿಂದ ಕೆಲವು ಸಂಪ್ರದಾಯಗಳನ್ನೂ ಕಟ್ಟುಪಾಡುಗಳನ್ನೂ ಆ ಕಾಲದ ಜನ ಜಾರಿಯಲ್ಲಿಟ್ಟುಕೊಂಡಿದ್ದರು. ಆದರೆ ಇಂದು ಅಂತಹ ಯಾವುದೇ ಸಂಪ್ರದಾಯವನ್ನು ನಾವು ಪಾಲಿಸುತ್ತಿಲ್ಲ. ಎಲ್ಲದಕ್ಕೂ ನಮ್ಮ ಕುತ್ಸಿತ ಬುದ್ಧಿ ಕಡ್ಡಿಹಾಕಿ ವೈಜ್ಞಾನಿಕವಾಗಿ ನೋಡತೊಡಗುತ್ತದೆ. ವಿಜ್ಞಾನ ಶಾಸ್ತ್ರ ಕೂಡ ಮಾನವನೇ ಮಾಡಿರುವುದರಿಂದ ಅದಕ್ಕೆ ಗೋಚರವಾಗದ ಎಷ್ಟೋ ಕ್ರಿಯೆ-ಪ್ರಕ್ರಿಯೆಗಳಿವೆ ! ಮನಸನ್ನು ಶುದ್ಧೀಕರಿಸಲು ವಿಜ್ಞಾನದಲ್ಲಿ ಯಾವುದೇ ಯಂತ್ರಗಳಿಲ್ಲ. ಬದಲಾಗಿ ಧ್ಯಾನವೇ ನಾವು ಮನಸ್ಸಿಗೆ ಮಾಡಿಸಬಹುದಾದ ಸ್ನಾನವಾಗಿರುತ್ತದೆ. 

ಇದನ್ನೆಲ್ಲಾ ಅರಿತೇ ಪ್ರಾಜ್ಞರು ಹೇಳಿದ್ದು : ’ ಸಜ್ಜನರ ಸಂಗವದು ಹೆಜ್ಜೇನು ಸವಿದಂತೇ ’ ಎಂದು. ಉತ್ತಮ ಸಂಸ್ಕಾರವನ್ನು ಪಡೆಯಬೇಕಾದರೆ ಉತ್ತಮರನ್ನು ಹುಡುಕಿಕೊಳ್ಳಬೇಕು. ಅಂಥವರ ಸಮಯವನ್ನು ನಿರೀಕ್ಷಿಸಿ ಅವರಿಂದ ಹಲವನ್ನು ಕಲಿಯಬೇಕು, ಅಂಥವರು ತಿಳಿಸುವ ಉತ್ತಮ ಪುಸ್ತಕಗಳನ್ನು ಓದಬೇಕು, ಸತ್ಯ, ಅಹಿಂಸೆ, ಪ್ರಾಮಾಣಿಕತೆಗಳೇ ಮೊದಲಾದ ಅಂಶಗಳನ್ನು ಸಕ್ರಿಯವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೋಗಬೇಕು. ನಾವು, ನಮ್ಮ ನಾಲಿಗೆ, ನಮ್ಮ ನಡತೆ ಒಳ್ಳೆಯದಾದಾಗ ನಾಡೆಲ್ಲಾ ಒಳ್ಳೆಯದಾಗುತ್ತಾ ಹೋಗುತ್ತದೆ. ಇದಕ್ಕೆಂತಲೇ ಮಹಾತ್ಮರಾದ ಸ್ವಾಮೀ ವಿವೇಕಾನಂದರು ಹೇಳಿದರು : ’ ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು’  ನಾವು ನಮ್ಮ ನ್ಯೂನತೆಗಳನ್ನು, ದೌರ್ಬಲ್ಯಗಳನ್ನು ಅರಿಯೋಣ, ಸನ್ಮಾರ್ಗದಲ್ಲಿ ನಡೆಯೋಣ, ಮಾನವರಾಗೋಣ.

ಗೋವುಗಳನ್ನು ಹಿಂಸಿಸಬೇಡಿ, ಮಾಂಸಕ್ಕಾಗಿ ಕತ್ತರಿಸಬೇಡಿ ಎಂದು ಎಷ್ಟೇ ಹೇಳಿದರೂ ಅದು ನಿತ್ಯವೂ ನಡೆದೇ ಇದೆ. ಕಾಂಗ್ರೆಸ್ಸಿನ ಪಟ್ಟಭದ್ರ ಹಿತಾಸಕ್ತಿಯಿಂದ ಭಾರತೀಯ ಮೂಲನಿವಾಸಿಗಳು ತಮ್ಮತನವನ್ನೂ ತಮ್ಮ ಸಂಸ್ಕೃತಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಅದರಲ್ಲೂ ಮಹಮ್ಮದೀಯರ ಓಲೈಕೆಗಾಗಿ ಕಾಂಗೈ ತಾನು ಹೋದೆಡೆಯಲ್ಲೆಲ್ಲಾ ಅವರ ಹಿತಾಸಕ್ತಿಯನ್ನು ಎತ್ತಿಹಿಡಿಯುತ್ತದೆ! ಕಳೆದ ೯ ವರ್ಷಗಳಿಂದ ಕೇಂದ್ರಾಡಳಿತವನ್ನು ನಡೆಸುತ್ತಿರುವ ಯುಪಿಏ ಗುಂಪಿನ ನಾಯಕತ್ವ ವಹಿಸಿರುವ ಕಾಂಗೈ, ಮಾಡಬಾರದ ಅನಾಚಾರಗಳನ್ನು ಮಾಡಿದ್ದಕ್ಕೆ ಹೊಸ ಪುರಾವೆಗಳು ಬೇಕೆ? ಭ್ರಷ್ಟಾಚಾರದಲ್ಲಿ ನಿತ್ಯವೂ ಹೊಸದೊಂದು ದಾಖಲೆ ನಿರ್ಮಿಸುತ್ತಾ ನಿನ್ನೆ ನಿರ್ಮಿಸಿದ್ದ ತನ್ನ ದಾಖಲೆಯನ್ನು ತಾನೇ ಮುರಿಯುತ್ತಾ ಹೊರಟ ಕಾಂಗೈ, ಹಿಂದೂಗಳನ್ನು ಅವ್ಯಾಹತವಾಗಿ ಮತಾಂತರಿಸಿದ್ದ ಮಹಾಪಾತಕಿ ಟಿಪ್ಪುವಿನ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಹೊರಟಿದೆ! ಬನವಾಸಿಯ ಮಯೂರವರ್ಮ ಕನ್ನಡದ ಪ್ರಥಮ ದೊರೆ, ಆತನ ಹೆಸರಿಡಬಹುದಲ್ಲವೇ? ರನ್ನಮ್, ಪೊನ್ನ, ಜನ್ನ, ಕುಮಾರವ್ಯಾಸಾದಿ ಕವಿಗಳ ಹೆಸರಲ್ಲಿ ಒಂದನ್ನು ಇಡಬಹುದಲ್ಲವೇ? ಅಷ್ಟಕ್ಕೂ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿಯ ಅಗತ್ಯ ಇದೆಯೇ? ಹಾಗೆ ಅವಕಾಶ ಕೊಟ್ಟರೆ ಅದೊಂದು ಭಯೋತ್ಪಾದಕರ ಆಶ್ರಯತಾಣವಾಗಲೂಬಹುದಲ್ಲವೇ? ಅಥವಾ ವಿಶೇಷ ಮದರಸಾ ಆಗಿ ಕೆಲಸಮಾಡಬಹುದಲ್ಲವೇ? 

ಗೋವು ಭಾರತೀಯರಿಗೆ ಪೂಜನೀಯ ಎಂಬುದು ಗೊತ್ತಿದ್ದೂ, ಭಾರತದಲ್ಲಿ ಬದುಕಿರುವ ಮುಸ್ಲಿಂ ಸಂಘಟನೆಗಳು ಗೋವುಗಳನ್ನು ಕಡಿಯುವುದನ್ನು ನಿಲ್ಲಿಸಲು ಮುಂದಾಗರಲ್ಲಾ! ಅವರಿಗೆ ತಿಳಿಹೇಳಿ ಪ್ರಯೋಜನವಿದೆಯೇ? ಸಾಧ್ಯವಾದಲ್ಲೆಲ್ಲಾ ಪಾಕಿಸ್ತಾನದ ಬಾವುಟವನ್ನು ಕದ್ದುಮುಚ್ಚಿ ಹಾರಿಸುತ್ತಿರುವ, ಕ್ರಿಕೆಟ್ಟಿನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಾಗ ಪಟಾಕಿ ಸಿಡಿಸಿ ಆನಂದಿಸುವ ಮನೋವೈಕಲ್ಯತೆ ಹೊಂದಿರುವ ಮುಸ್ಲಿಮರನ್ನು ಭಾರತೀಯರೆಂದು ನಾವು ಒಪ್ಪಿಕೊಳ್ಳಬೇಕೆ? ಭಾಯಿ-ಭಾಯಿ ಎಂದು ಅಪ್ಪಿಕೊಳ್ಳಬೇಕೆ? ಭಾರತೀಯರ ಹಿತಾಸಕ್ತಿಗಳಿಗೆ, ಭಾವನೆಗಳಿಗೆ ಕಿಂಚಿತ್ತೂ ಬೆಲೆನೀಡದ ಜನರನ್ನು, ಭಯೋತ್ಪಾದಕರಿಗೆ ಆಶ್ರಯನೀಡಿ ರಕ್ಷಿಸಿ ಅದಕ್ಕೆ ಕುಮ್ಮಕ್ಕು ನೀಡುವ ಜನರನ್ನು ಬಗಲಲ್ಲಿ ಇರಿಸಿಕೊಂಡು ಪ್ರೀತಿಯಿಂದ ಕಾಣಬೇಕೆ? ಹೆಜ್ಜೆಹೆಜ್ಜೆಯಲ್ಲೂ ತಮ್ಮ ಮತವನ್ನೇ ದೇಶವ್ಯಾಪಿ ಕಡ್ಡಾಯಗೊಳಿಸಲು ಸಿದ್ಧರಾಗಿ, ಸನ್ನದ್ಧರಾಗಿ ನಿಂತಿರುವ ಮಂದಿಯನ್ನು ಪರಧರ್ಮ ಸಹಿಷ್ಣುಗಳೆಂದು ನಂಬಿಕೊಂಡು ಅವರ ಬಲವಂತದ ಮತಾಂತರಕ್ಕೆ ತಲೆಬಾಗಬೇಕೆ? ಹಿಂದೆಂದೋ ಅಲ್ಪಸಂಖ್ಯಾರಾಗಿದ್ದರು ಎಂದ ಮಾತ್ರಕ್ಕೆ ದೇಶದ  ಜನಸಂಖ್ಯೆಯ ಕಾಲುಭಾಗಕ್ಕಿಂತ ಅಧಿಕಸಂಖ್ಯೆಯಲ್ಲಿ ಬೆಳೆದ ಅವರ "ನಮಗೆ ಅನ್ಯಾಯವಾಗುತ್ತಿದೆ, ಯಾರೂ ಬೆಂಬಲಿಸುವುದಿಲ್ಲ" ಎಂಬ ಮೊಸಳೆಗಣ್ಣೀರಿಗೆ ನಾವು ಕರಗಿಹೋಗಬೇಕೆ?

ಕಥೆಯೊಂದು ಹೀಗಿದೆ: ಇಬ್ಬರು ಮಿತ್ರರು ಒಟ್ಟಿಗೇ ಸತ್ತರಂತೆ. ಪೂರ್ವಜನ್ಮದ ಸುಕೃತದ ಫಲವಾಗಿ ಒಬ್ಬಾತ ಸ್ವರ್ಗವಾಸಿಯಾದ, ತನ್ನ ಕುಕೃತದ ಫಲವಾಗಿ ಇನ್ನೊಬ್ಬಾತ ನರಕವಾಸಿಯಾದ. ಇನ್ನೂ ಘನಘೋರ ಶಿಕ್ಷೆಯನ್ನು ಅನುಭವಿಸುವುದಕ್ಕಾಗಿ ನರಕವಾಸಿಯಾಗಿದ್ದಾತ ಬಚ್ಚಲಕೊಚ್ಚೆಹೊಂಡದ ಹುಳವಾಗಿ ಜನಿಸಿದ. ಸ್ವರ್ಗವಾಸಿಗೆ ತನ್ನ ಪರಮ ಸ್ನೇಹಿತನ ನೆನಪಾಯ್ತಂತೆ. ಆತ ದೈವಕೃಪೆಯಿಂದ ಒಮ್ಮೆ ಭೂಮಿಗೆ ಬಂದ, ಹುಡುಕಾಡುತ್ತಾ ಬಚ್ಚಲಕೊಚ್ಚೆಯಲ್ಲಿ  ಹುಳವಾಗಿ ಬದುಕುತ್ತಾ ಬಿದ್ದಿರುವ ಸ್ನೇಹಿತನನ್ನು ದೂರದಿಂದ ಕೂಗಿ ಕರೆದನಂತೆ. ಒಂದನೇ ಕರೆ ಹುಳಕ್ಕೆ ಕೇಳಲಿಲ್ಲ, ಎರಡನೇ ಕರೆಯಲ್ಲಿ ಹುಳ ಮೇಲಕ್ಕೆ ಬಂದು ಒದ್ದಾಡಿತು, ಮೂರನೇ ಕರೆಯನ್ನು ಕೇಳಿಯೂ ತನಗಿದೇ ಸುಖವೆಂದು ತೀರ್ಮಾನಿಸಿದ ಆ ಹುಳ ಮತ್ತದೇ ಕೊಚ್ಚೆಗುಂಡಿಯಲ್ಲಿ ಮುಳುಗಿಹೋಯ್ತು! ಔನ್ನತ್ಯಕ್ಕೆ ಕರೆಯಲು ಬಂದ ಸ್ನೇಹಿತ ಮರುಗುತ್ತ ಮರಳಿದ; ಹುಳಸತ್ತು ಇನ್ನಷ್ಟು ಜನ್ಮಗಳನ್ನು ಉತ್ತರಿಸಿ, ಮತ್ತೆ ಮನುಷ್ಯನಾಗಿ ಬರುವುದು ಇನ್ನೆಂದೋ, ಮನುಷ್ಯನಾದಾಗಲೂ ಹೊಲೆಯನಾಗದೇ, ಪುಣ್ಯಪುರುಷನಾಗಿ ಬಾಳುವುದು ಮತ್ತೆಂದೋ, ಒಂದೂ ತನ್ನ ಊಹೆಗೂ ನಿಲುಕದ ಭವಿಷ್ಯವೆಂದು ಸ್ನೇಹಿತನಿಗಾಗಿ ಕಂಬನಿಗರೆದ.
ನಿಮ್ಮಲ್ಲಿ ಯಾರೇ ವಿಜ್ಞಾನಿಗಳು, ತಾರ್ಕಿಕರು ಇರಬಹುದು, ದನದ ಮಾಂಸವನ್ನು ತಿನ್ನುವ ಜನರ ಮೆದುಳಿನ ವ್ಯವಹಾರದ ಸ್ಥಿತಿಗತಿಗೂ ಮತ್ತು ಶುದ್ಧ ಶಾಕಾಹಾರಿಗಳಾದವರ ಮೆದುಳಿನ ವ್ಯವಹಾರದ ಸ್ಥಿತಿಗತಿಗೂ ವೈಜ್ಞಾನಿಕವಾಗಿ ತುಲನೆಮಾಡಿ ಏನನ್ನೂ ಮರೆಮಾಚದೇ ಸಂಶೋಧನೆ ನಡೆಸಿನೋಡಿ, ಅಲ್ಲಿ ವ್ಯತ್ಯಾಸ ಕಾಣುವುದಿಲ್ಲವೆಂದರೆ ನಾನಿನ್ನೆಂದೂ ನನ್ನ ಬರವಣಿಗೆಯನ್ನು ಮುಂದುವರಿಸುವುದಿಲ್ಲ!! ವ್ಯತ್ಯಾಸವನ್ನು ನೀವು ಕಂಡಿರಾದರೆ ಮತ್ತೆ ಸನಾತನೆಯ ಮೌಲ್ಯವನ್ನು ಸುಖಾಸುಮ್ಮನೆ ಪ್ರಶ್ನಿಸುವ ಹಕ್ಕು ನಿಮಗಿರುವುದಿಲ್ಲ. ಎಲ್ಲಾ ಜೀವಿಗಳಂತೇ ಮನುಷ್ಯ ಹುಟ್ಟುವುದು-ಬದುಕುವುದು-ಸಾಯುವುದು ಇಷ್ಟೇ ಅಲ್ಲ, ಆದರಾಚೆ ಇರುವ ಇನ್ನೊಂದು ಲೋಕವನ್ನು ತೆರೆದಿಟ್ಟ ಮಹಾನ್ ಮನೀಷಿಗಳು ನಮಗೆ ಆದರ್ಶರಾಗಿದ್ದಾರೆ. ಅವರ ಕಳಕಳಿಯ ಸಂದೇಶವೆಂದರೆ ಮಾಂಸಾಹಾರವನ್ನು ಭುಂಜಿಸಬೇಡಿ ಎಂಬುದು. ಸಾಧ್ಯವಿಲ್ಲವೇ?ಹೋಗಲಿಬಿಡಿ. ಅಮ್ಮನ ಹಾಲನ್ನು ಶೈಶವಾವಸ್ಥೆಯಲ್ಲಿ ಎರಡುವರ್ಷವಷ್ಟೇ ಕುಡಿಯುತ್ತೇವೆ, ಎರಡನೇ ಅಮ್ಮನಾಗಿ ಗೋವು ಕೊಡುವ ಹಾಲನ್ನು ಜೀವನಪೂರ್ತಿ ಕುಡಿಯುತ್ತಿರುತ್ತೇವೆ ! ಕೊನೇಪಕ್ಷ, ಅಮ್ಮನಂತೇ ಹಾಲನ್ನು ಉಣಿಸುವ ಗೋವುಗಳನ್ನು ಕತ್ತರಿಸದೇ ಇದ್ದರೆ ನಾವು ಮನುಷ್ಯರೆಂದುಕೊಳ್ಳಬಹುದು. ಗೋವುಗಳನ್ನು ನಾವು ಕೊಂದರೆ ತಿಂದರೆ ಮತ್ತು ನಮ್ಮೀ ಭಾರತದಲ್ಲಿ ಅದನ್ನು ತಿನ್ನುವವರನ್ನು ಉಳಿಯಗೊಟ್ಟರೆ ನಾವು ಮನುಷ್ಯರೆಂಬುದನ್ನು ನಮ್ಮ ಪೂರ್ವಜರು ಒಪ್ಪಿಕೊಳ್ಳುವುದಿಲ್ಲ, ಅವರ ಆತ್ಮಗಳು ಒಪ್ಪಿಕೊಳ್ಳುವುದಿಲ್ಲ, ಇಂದಿಗೂ ಚಿರಂಜೀವಿಗಳಾಗಿರುವ ಅನೇಕ ಋಷಿಮುನಿಗಳು ಒಪ್ಪಿಕೊಳ್ಳುವುದಿಲ್ಲ. ಅದರರ್ಥ ದನಗಳನ್ನು ತಿನ್ನುವ ಜನ ಹೊಲೆಯರಾಗಿರುತ್ತಾರೆ. ಬಚ್ಚಲಕೊಚ್ಚೆಗುಂಡಿಯ ಹುಳಗಳಾಗಿ ಅವರು ಮರುಹುಟ್ಟು ಪಡೆದು, ಮತ್ತೆ ಮುಂದೆಂದೋ ದೈವಕಾರುಣ್ಯ ಒಲಿದರೆ ಹಸುಗಳಾಗಿ, ಈಗ ಹಸುಗಳಿಗೆ ನೀಡುತ್ತಿರುವ ಹಿಂಸೆಯನ್ನು ಆಗ ತಾವು ಅನುಭವಿಸುತ್ತಾರೆ ಎಂಬುದು ನಿಶ್ಚಿತ. ಹೊಲೆಯರು ಊರ ಹೊರಗಿಲ್ಲ, ಅಧುನಿಕ ಯುಗದಲ್ಲಿ ಹೊಲೆಯರು ನಮ್ಮನಡುವೆಯೇ ಇದ್ದಾರೆ, ಅದು ವ್ಯಕ್ತಿಯ ಸಂಸ್ಕಾರ-ಸಂಸ್ಕೃತಿಗೆ ಸಂಬಂಧಿಸಿದ ವಿಷಯ. ಭಾರತದಲ್ಲಿದ್ದೂ, ಇಲ್ಲಿನ ಸ್ಕಲ ಸೌಲಭ್ಯಗಳನ್ನೂ ಅನುಭವಿಸಿಯೂ, ಯಾರು ಭಾರತೀಯ ಸನಾತನ ಸಂಸ್ಕೃತಿಯನ್ನು ಮೆಚ್ಚುವುದಿಲ್ಲವೋ ಅವರೇ ಹೊಲೆಯರು.    


ಭಾರತೀಯ ಸನಾತನ ಸಂಸ್ಕೃತಿಗೆ ಒತ್ತುಕೊಡುವ ಬಿಜೆಪಿ ಸರಕಾರ, ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರುವಲ್ಲಿ ಬಹಳ ಶ್ರಮವಹಿಸಿತ್ತು. ಮತಗಳ ಪೆಟ್ಟಿಗೆಯ ಮೇಲೆ ಕಣ್ಣಿಟ್ಟ ಕಾಂಗೈ ಮತ್ತು ಇನ್ನಿತರ ಪಕ್ಷಗಳು ಅದನ್ನು ಜಾರಿಗೆ ತರದಂತೇ ಬಹಳ ಶ್ರಮಿಸಿದ್ದವು. ಗೋವು ಪೂಜನೀಯವೆಂದು ಲಿಖಿತವಾದ ಈ ನಾಡಿನಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಬರದಂತೇ ನೋಡಿಕೊಂಡವರನ್ನು ಏನೆನ್ನಬೇಕು? ಈಗ ಮತ್ತೆ ಸರಕಾರ ಬದಲಾಗಿದೆ, ಗೋಹತ್ಯಾ ನಿಷೇಧವನ್ನು ತೆರವುಗೊಳಿಸುತ್ತೇವೆ ಎಂಬ ಹೇಳಿಕೆ ಬಂದಾಗಲೇ ಗೋವುಗಳ ಕಳ್ಳಸಾಗಾಣಿಕೆಗಳು ವಿಪರೀತ ಹೆಚ್ಚಿವೆ. ಯಾರೂ ಕಾಯ್ವವರಿಲ್ಲ, ಗೋಳು ಕೇಳ್ವವರಿಲ್ಲ. ಈ ನಾಡಿನ ಹುಲಿಗಾದರೂ ಒಂದಷ್ಟು ನೀತಿಯಿತ್ತು, ಆದರೆ ಇಂದಿನ ಹೊಲೆಯರಿಗೆ ನೀತಿ ಎಂಬ ಪದವೇ ಗೊತ್ತಿಲ್ಲ.

ತಬ್ಬಲಿಯು ನೀನಾದೆ ಮಗನೇ ಹೆಬ್ಬೊಲೆಯರ ಬಾಯನ್ನು ಸೇರುವೆ
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಗೋವಿನಹಾಡಿನಲ್ಲಿ ಸಾಯುವ ಕೊನೇ ಘಳಿಗೆಯಲ್ಲಿ, ಹುಲಿಗಾದರೂ ಯತ್ಕಿಂಚಿತ್ ಚಣಕಾಲ ಗೋವಿನ ಕೊನೆಯಾಸೆಯನ್ನು ಆಲೈಸುವ ಸಂಸ್ಕಾರವಿತ್ತು! ಇಲ್ಲಿ ಸಾಯುವ ಗೋವಿಗೆ ಕೊನೇಕ್ಷಣ ಯಾವಾಗ ಎಂಬುದೂ ತಿಳಿದಿಲ್ಲ; ತಿನ್ನುವ ಹೊಲೆಯರಿಗೆ ಅವೆಲ್ಲಾ ಬೇಕಾಗಲೇ ಇಲ್ಲ!! ದನದ ಮಾಂಸತಿಂದ ಪರಿಣಾಮವಾಗಿ ಜಗತ್ತಿನಲ್ಲೇ ಕ್ರೌರ್ಯ, ಮತಾಂಧತೆ ಹೆಚ್ಚುತ್ತಿದೆ, ದನದ ಮಾಂಸ ಭುಂಜಿಸಿದ ಫಲವಾಗಿ ಜನ ಮಾನಸಿಕವಾಗಿ ಅಧೋಗತಿಗೆ ಧಾವಿಸುತ್ತಿದ್ದಾರೆ. ಮಾನಸಿಕವಾಗಿ ಅದಾಗಲೇ ಬಚ್ಚಲಕೊಚ್ಚೆಯಲ್ಲಿ ಬಿದ್ದಿರುವ ಮನಸ್ಸು ಅದಕ್ಕೇ ಅಂಟಿಕೊಂಡಿದೆ; ಮತ್ತಿನ್ನೇನೂ ಬೇಡವಾಗಿದೆ. ಬಸವಣ್ಣನಂತಹ ಧಾರ್ಮಿಕ ನಾಯಕರೂ ಹೊಲೆಯರನ್ನು ಪರಿವರ್ತಿಸ ಹೊರಟರು, ಆದರೆ ಅವರು ಪರಿವರ್ತಿತವಾಗಿದ್ದು ಬೇರೇ ಮತಕ್ಕೆ ಎಂಬುದು ಇತಿಹಾಸ!! ಸನಾತನ ಮತದಲ್ಲಿ ಅವರಿಗೆ ಆದ್ಯತೆ ಇರಲಿಲ್ಲವೆಂಬ ಕಾರಣಕ್ಕೆ ಅವರು ಮತಾಂತರ ಗೊಂಡು ಮ್ಲೇಚ್ಛರಾದರು. ಹುಟ್ಟುಗುಣ ಘಟ್ಟಹತ್ತಿದರೂ ಹೋಗದು ಎಂಬಂತೇ ಬಚ್ಚಲಕೊಚ್ಚೆ ಹುಳಗಳ ಬಾಣಂತನವನ್ನು ಅನ್ಯಮತವೊಂದು ಮಾಡಿಸಿತು; ಮಾಡಿಸುತ್ತಲೇ ಇದೆ.

ಹೊಲೆಯರಾರೂರ ಹೊರಗಿರುವವನೆ ಹೊಲೆಯ?
ಚಾಡಿಮಾತನು ಹೇಳಿ  ಮತಾಂತರ ಮಾಡುವವ ಹೊಲೆಯ
ಬೇಡಿದ್ದನ್ನು ನೀಡುತ್ತೇವೆಂದು ಭರವಸೆ ಹುಟ್ಟಿಸಿ
ಮತಾಂತರಗೊಳಿಸುವವ ಹೊಲೆಯ
ಕಾಡಿ-ದೂಡಿ-ಬಡಿದು-ಸಾಗಿಸಿ-ಕೊಂದು ಹಸುಗಳನ್ನು
ಹರಿದು ತಿಂಬವನೇ ಹೊಲೆಯ
ನೋಡ ನೋಡುತ್ತಾ ಬಚ್ಚಲಕೊಚ್ಚೆಯ ಹುಳವಾಗಬಲ್ಲವನೆ ಹೊಲೆಯ

ಝಾಡಿಸಿ ಒದ್ದು ಅಂಥವರನ್ನು ದೇಶದಿಂದಾಚೆ ಓಡಿಸಲಾರೆಯಾ ಸನಾತನೀ ಗೆಳೆಯಾ?
ನಿನ್ನ ಮನೆ-ಮಡದಿ-ಮಕ್ಕಳು ಎಂದೆಂದೂ ಸುಖವಾಗಿರಲಿ, ರೋಗನಿರೋಧಕವಾದ ನನ್ನ ಹಾಲನ್ನೇ ಉಂಡು ನೆಮ್ಮದಿಯಿಂದ ಜೀವಿಸಲಿ....ನಿನಗಿದೋ ನಿತ್ಯ ಹಾಲುಕೊಡುತ್ತಿರುವ ಭಾರತೀಯ ಪುಣ್ಯಕೋಟಿಯ ಜನ್ಮಾಂತರಗಳ ರಕ್ತಕಣ್ಣೀರಿನ ನಮಸ್ಕಾರ. 

8 comments:

  1. ನನಗೆ ಅನ್ನಿಸುವ ಪ್ರಕಾರ ಸದ್ಯದ ಅವಶ್ಯಕತೆ ಈ ಕಾನೂನಿಗಿಂತಲೂ ಮುಖ್ಯವಾಗಿ ಇರುವ ಕಾನೂನನ್ನು ಭದ್ರಪಡಿಸುವ ಅವಶ್ಯಕತೆ ಇದೆ. ಈ ಕಾನೂನು ಬಂದರೂ ಮುಗ್ಧ ಪ್ರಾಣಿಬಲಿ ಅವ್ಯಾಹತವಾಗಿ ಸಾಗುವುದರಲ್ಲಿ ಸಂಶಯವಿಲ್ಲ . ಬೀಜೇಪಿ ಆಡಳಿತದಲ್ಲೂ ಕರ್ನಾಟಕ ಕರಾವಳಿ ಕೇರಳ ಗಡಿಗಳಲ್ಲಿ ಗೋ-ಕಳ್ಳತನ ಅಕ್ರಮ ಕಸಾಯಿಖಾನೆಗಳು ಅಭಾಧಿತವಾಗಿ ನಡೆಯುತ್ತಿದ್ದವು, ಈಗಳೂ ನಡೆಯುತ್ತಿವೆ. ಇದನ್ನ್ನು ನಿಲ್ಲಿಸುವ ಬಗೆಯೆಂತು?

    ReplyDelete
    Replies
    1. ಯಕ್ಷರೇ ನೀವು ಹೇಳಿದ್ದು ನಿಜ, ಮಾರುವವರನ್ನೇ ಮೊದಲು ಹೊಲೆಯರು ಎನ್ನಬೇಕು. ಎಲ್ಲಿಯವರೆಗೆ ಮಾರುವವರು ಇರುತ್ತಾರೋ ಅಲ್ಲಿಯವರೆಗೆ ಕೊಳ್ಳುವವರು ಇದ್ದೇ ಇರುತ್ತಾರೆ. ಕೊಂಡಮೇಲೆ ಅವರಿಗೆ ಬೇಕಾದಂತೇ ಬಳಸಿಕೊಳ್ಳುತ್ತಾರೆ. ಧನ್ಯವಾದ.

      Delete
    2. This comment has been removed by the author.

      Delete
    3. ಈ ವಿಷಯದಲ್ಲಿ ಕೇವಲ ಮಾರುವವರನ್ನೇ ದೂಷಿಸುವುದೂ ಪೂರ್ತಿ ಸರಿಯಲ್ಲವೆಂದು ನನ್ನ ಅಭಿಪ್ರಾಯ.. ನನ್ನ ಪರಿಚಯದ ಕೆಲವು ಸಣ್ಣ ಪ್ರಮಾಣದ ಕೃಷಿಕರು ೧-೨ ದನ ಸಾಕುತ್ತಾರೆ. ಅವುಗಳನ್ನು ಸಾಕುವುದೇ ಬಲು ಕಷ್ಟದ ಕೆಲಸ- ಕೂಲಿ ಅಭಾವ, ಮೇವು ಅಭಾವ ಇತ್ಯಾದಿ. ಇಂತಿರುವಾಗ ಹುಟ್ಟಿದ ಗಂಡು ಕರುಗಳ ಪಾಡೇನು? ಇಟ್ಟು ಸಾಕುವ ತಾಕತ್ತಿಲ್ಲ - ಅದು ತುಂಬಾ ಖರ್ಚಿನ ಬಾಬತ್ತು. ಇನ್ನು ಮಾರಲು ಮನಸ್ಸು ಒಪ್ಪುವುದಿಲ್ಲ.. ಗೊಶಾಲೆಗಳಿಗೆ ಕೊಡೋಣವೆಂದರೆ ಅಲೂ ಸ್ವೀಕಾರ ಇಲ್ಲ- ಅವರಾದರೂ ಎಷ್ಟು ಗಂಡು ಕರುಗಳನ್ನು ಸಾಕಲು ಸಾಧ್ಯ?

      Delete
    4. ಹೌದು, ಗೂಳಿಗಳ ಪಾಡು ಯಾರಿಗೂ ಬೇಡದ್ದು, ಹಿಂದೆಲ್ಲಾ ಗೂಳಿಗಳನ್ನು ಉಳುವುದಕ್ಕೆ, ಗಾಡಿ ಎಳೆಯುವುದಕ್ಕೆ ಬಳಸುತ್ತಿದ್ದರು, ಆದರೆ ಇಂದು ಅವುಗಳ ಅವಲಂಬನೆ ಕಮ್ಮಿಯಾಗಿದೆ. ಬೀಜದ ಹೋರಿಗಳನ್ನು ಬಿಟ್ಟರೆ ಮಿಕ್ಕುಳಿದ ಎತ್ತುಗಳು ಯಾವ ಕೆಲಸಕ್ಕೂ ಬಾರ ಎಂಬ ಸ್ಥಿತಿಯನ್ನು ಅನುಭವಿಸಿ, ರೈತರ-ಸಾಕುವವರ ಅವಜ್ಞೆಗೆ ಗುರಿಯಾಗಿದ್ದಾವೆ ಮತ್ತು ಚಿಕ್ಕಂದಿನಲ್ಲೇ ಕಸಾಯಿಖಾನೆಗೆ ಸಾಗಿಸಲ್ಪಟ್ಟು ವಧೆಗೊಳಗಾಗುತ್ತಿರುವ ಕರುಗಳಲ್ಲಿ ಗೂಳಿಗಳೇ ಹೇರಳವಾಗಿವೆ. ಸಾಕುವಾತ ಬಡವನೇ ಇರಬಹುದು, ಸಾಕುವುದು ಆತನಿಗೆ ಭಾರವೇ ಆಗಬಹುದು, ಹಿಂದೆಯೂ ಕೂಡ ಇದಕ್ಕಿಂತಾ ಹೆಚ್ಚಿನ ಬಡತನವಿತ್ತು, ಆದರೆ ಹೇಗೋ ತಮ್ಮ ಕಷ್ಟಾರ್ಜಿತದಿಂದ ಸಾಕಿದ ಜನ ಅದನ್ನು ಸರಿದೂಗಿಸುತ್ತಿದ್ದರು. ಇಂದು ವಿಜ್ಞಾನ-ಆಯುರ್ವೇದ ಬೆಳೆದಿದೆ, ಅಲ್ಲಿ ಗೂಳಿಗಳ ಗೋಮಯ-ಗೋಮೂತ್ರಗಳೂ ಆದಾಯದಾಯಕವಾಗಿವೆ. ಸಗಣಿ ಹೇಗೂ ಸಿಕ್ಕೇ ಸಿಗುತ್ತದೆ. ಇದನ್ನು ಹೊರತುಪಡಿಸಿ ಗೂಳಿಗಳನ್ನು ಸಣ್ಣದಾಗಿ ಇನ್ನೆಲ್ಲಿ ದುಡಿಸಿಕೊಳ್ಳಬಹುದು ಎಂಬುದನ್ನು ಚಿಂತಿಸಬೇಕು. ತೆಳುವಾದ ಬಳ್ಳಿಗೆ ಅಷ್ಟಗಲದ ಕಾಯಿ ಭಾರವೆನಿಸದು ಎಂದಮೇಲೆ ಸಾಕುವ ರೈತರಿಗೆ ಗೂಳಿಗಳು ಭಾರವಾಗಿ ಕಾಣಬಾರದು. ಮಾರುವ ರೈತ ಯಾರಿಗೆ ಯಾವಕಾರಣಕ್ಕೆ ಮಾರುತ್ತಿದ್ದೇನೆ ಎಂಬುದನ್ನು ಗಮನಿಸಬೇಕು. ಹಳ್ಳಿಗಳಲ್ಲಿ ಅನೇಕ ಏಜೆಂಟರು ಸಾಕುತ್ತೇವೆ ಎಂದೇ ಖರೀದಿಸಿ ನಂತರ ಕಸಾಯಿಖಾನೆಗಳಿಗೆ ಮಾರುತ್ತಾರೆ--ಈ ವಿಷಯದಲ್ಲಿ ಹದ್ದಿನಕಣ್ಣಿಟ್ಟು ಅಂಥವರನ್ನು ಹತ್ತಿರಬಿಟ್ಟುಕೊಳ್ಳದಂತೇ ಇರಬೇಕಾಗುತ್ತದೆ, ಧನ್ಯವಾದ.

      Delete
    5. ಇಷ್ಟೇ ಅಲ್ಲ ದ. ಕ. ದ ಹಳ್ಳಿಗಳ ಸಮಸ್ಯೆಗಳು ಇನ್ನೂ ಅನೇಕ. ಕೃಷಿ ಕೂಲಿ ಕೆಲಸಕ್ಕೆ ಕೇಳಿದಷ್ಟು ಸಂಬಳ ಕೊಡಲು ತಯಾರಿದ್ದರೂ ಕೆಲಸಕ್ಕೆ ಯಾರೂ ಬರುವುದಿಲ್ಲ. ಕೃಷಿ ಕುಟುಂಬಗಳಲ್ಲಿ ೧-೨ ಜನ ಇದ್ದರೆ ಹೆಚ್ಚು. ಹಸು ಸತ್ತಿತು ಅಂತ ಇಟ್ಕೊಳ್ಳಿ- ಅದರ ಅಂತ್ಯ ಸಂಸ್ಕಾರಕ್ಕೆ ದಿನವಿಡೀ ಹೆಣಗಾಡಿದ ಪ್ರಸಂಗಗಳನ್ನು ನೋಡಿದ್ದೇನೆ. ಇನ್ನು ದನ-ಕರು-ಆಕಳನ್ನು ಮೇವು ಸಮ್ರುಧ್ಧವಾಗಿದ್ದರೂ ಗುಡ್ಡ/ಬಯಲಿಗೆ ಬಯಲುಗಳಿಗೆ ಬಿಡುವಂತೆಯೇ ಇಲ್ಲ- ಬಿಟ್ಟ ದನ ಕದ್ದು ಕಸಾಯಿಖಾನೆಗೆ ಸಾಗಿಸುವ ದೊಡ್ಡ ಜಾಲವೇ ಇದೆ ಇಲ್ಲಿ. ಇದನ್ನು ಹತ್ತಿಕ್ಕಲು ಯಾವ ಗೋ ಹತ್ಯೆ ನಿಷೇಧ ಮಸೂದೆ, ಬೀಜೇಪಿ ಗಳಿಗೂ ಸಾಧ್ಯವಾಗಿಲ್ಲ. ಅಲ್ಪಟ್ಟಿಗೆ ಇದನ್ನು ವಿರೋಧಿಸಿದ್ದು ಮಾಧ್ಯಮಗಳಲ್ಲಿ ನಿತ್ಯ ನಿಂದೆಗೊಳಗಾಗುವ ಭಜರಂಗ ದಳ ಮಾತ್ರ..

      Delete
  2. ಆತ್ಮೀಯ ವಿ.ಆರ್. ಭಟ್ ಅವರೇ.... ನಿಮ್ಮ ಲೇಖನಗಳು ನನಗೆ ತುಂಬಾ ಇಷ್ಟವಾಗುತ್ತವೆ ಏನು ಹೇಳಬೇಕೋ ಅದನ್ನು ನಿರ್ಭಯವಾಗಿ ನೇರವಾಗಿ ಹೇಳುತ್ತೀರಿ.... ಪ್ರಸ್ತುತ ಈ ಲೇಖನವೂ ಹಾಗೇ ಇದೆ... ಓದುತ್ತಿದ್ದಂತೆ ರೋಮಾಂಚನವಾಗುತ್ತದೆ.... ಆದರೆ ಈ ಲೇಖನದ ಬಗ್ಗೆ ನನ್ನ ಅನಿಸಿಕೆ ಏನೆಂದರೆ ಎಲ್ಲಿಯ ವರೆಗೆ ಗೋವುಗಳನ್ನು ಮಾರುವವರು ಇರುವರೋ ಅಲ್ಲಿಯವರೆಗೆ ಗೋ ಹತ್ಯೆ ನಡೆಯುತ್ತದೆ ಎಂಬುದೇ ನನ್ನ ಭಾವನೆ ಏಕೆಂದರೆ ಸಮೃದ್ಧವಾಗಿ ಮೇವು ದೊರೆಯುವಂಥಹಾ ಊರುಗಳಲ್ಲೇ ಗೋವುಗಳನ್ನು ಸಾಕುವವರು ಇಲ್ಲವಾಗಿದ್ದಾರೆ. ಏಕೆಂದರೆ ಕೆಲಸ ಮಾಡುವುದಕ್ಕೆ ಸೋಮಾರಿತನ... ದುಡ್ಡುಕೊಟ್ಟು ಕೆಲಸ ಮಾಡಿಸುವುದಾದರೆ ಖರ್ಚು ಜಾಸ್ತಿಯಾಗಿ ಹಾಲಿನ ಬೆಲೆಯು ಕೊಳ್ಳುವುದಕ್ಕಿಂತ ಹೆಚ್ಚಿಗೆಯೇ ಆಗುತ್ತದೆ. ಗೋವುಗಳನ್ನು ಮನೆಯಲ್ಲಿ ಸಾಕುವುದಾದರೆ ಮನೆಯಲ್ಲಿ ಒಬ್ಬರಲ್ಲ ಒಬ್ಬರು ಇರಲೇ ಬೇಕಾಗುತ್ತದೆ ಮನೆ ಬಿಟ್ಟು ಎಲ್ಲೂ ಸ್ವತಂತ್ರವಾಗಿ ಹೋಗುವುದಕ್ಕಾಗುವುದಿಲ್ಲ.... ಈ ಎಲ್ಲಾ ಕಾರಣಗಳಿಂದ ಗೋವುಗಳನ್ನು ಸಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ಪಟ್ಟಣಗಳಲ್ಲಂತೂ ಕೇಳುವುದೇ ಬೇಡ.. ಹಳ್ಳಿಗಳಲ್ಲಿ ಸಗಣಿ ಗೊಬ್ಬರವನ್ನು ಈಗ ಕೇಳುವವರೇ ಇಲ್ಲವಾಗಿದೆ ಏಕೆಂದರೆ ಸಗಣಿ ಗೊಬ್ಬರವನ್ನು ಗಿಡಗಳಿಗೆ ಹಾಕಬೇಕೆಂದರೆ ಕೆಲಸ ಜಾಸ್ತಿ ಆಳುಗಳು ಜಾಸ್ತಿ ಬೇಕು ಹಾಗಾಗಿ ಎಲ್ಲರು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುತ್ತಿದ್ದಾರೆ.. ಹೇಳ ಹೋದರೆ ಇನ್ನೂ ಅನೇಕ ವಿಷಯಗಳು ಇವೆ... ನಾನೂ ಕೂಡಾ ಮಲೆನಾಡಿನವನು.... ನನಗೂ ಗೋ ಹತ್ಯೆ ವಿರುದ್ಧ ಪ್ರತಿಭಟಿಸಬೇಕೆಂದು ಹಲವಾರು ಬಾರಿ ಕಂಡರೂ... ದ್ವಿಜರ ಕೂಗು ಸರ್ಕಾರದ ಕಿವಿಗೆ ಎಂದಿಗೂ ಕೇಳುವುದಿಲ್ಲವೆಂದು ಸುಮ್ಮನಾಗುತ್ತೇನೆ... ನನಗೆ ಒಂದು ವಿಷಯ ಹೇಳಬೇಕೆನಿಸುತ್ತದೆ.... ಗೋವುಗಳನ್ನು ಮಾರುವಲ್ಲಿಂದ ಸಾಕುವಲ್ಲಿಗೆ ತಲುಪಿಸಬೇಕು ಹಾಗೂ ಸಾಕುವವರಿಗೆ ಸಾಕಲಾಗದೆ ಇರುವವರು ಸಹಕಾರ ಕೊಡಬೇಕು... ಪ್ರತಿಯೊಬ್ಬ ಹಿಂದುವೂ "ನಾನೊಂದು ಗೋಮಾತೆಯನ್ನು ರಕ್ಷಿಸುತ್ತೇನೆ" ಎಂದು ಪಣ ತೊಟ್ಟು ಒಂದೊಂದು ಗೋವನ್ನು ಸಾಕಿದರೆ ಕಸಾಯಿ ಖಾನೆಯಲ್ಲಿ ಗೋ ಹತ್ಯೆ ತನ್ನಿಂದ ತಾನೇ ನಿಲ್ಲುತ್ತದೆ ಎಂದು ನನ್ನ ಅನಿಸಿಕೆ.... ನಾನೂ ಕೂಡಾ ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕಿಕೊಂಡಿದ್ದೇನೆ ಎಲ್ಲವೂ ಮಲೆನಾಡ ಗಿಡ್ಡಗಳು ಒಟ್ಟು ಸಂಖ್ಯೆ ಹದಿನೈದು ನಮ್ಮ ಮನೆಯಲ್ಲಿರುವ ಮನುಷ್ಯರ ಸಂಖ್ಯೆಗಿಂತ (ಮೂರು) ಗೋವುಗಳ ಸಂಖ್ಯೆ ಹೆಚ್ಚಿದೆ. ಇಷ್ಟೂ ದನಗಳಿಂದ ನಮಗೆ ದೊರಕುವ ಹಾಲು ದಿನಕ್ಕೆ ಕೇವಲ ಮನೆ ಖರ್ಚಿಗಾಗುವಷ್ಟು ಮಾತ್ರ ನನಗೆ ಒಂದು ಲೀಟರ್ ಹಾಲಿಗೆ ಹೆಚ್ಚು ಕಮ್ಮಿ ಎಂಭತ್ತರಿಂದ ನೂರು ರೂಪಾಯಿಗಳು ಬೀಳುತ್ತದೆ.... ಆದರೂ ಗೋ ಸೇವೆ ಎಂಬ ಒಂದೇ ಉದ್ದೇಶದಿಂದ ಕಟ್ಟಿಕೊಂಡಿದ್ದೇನೆ.... ಇದು ಗೋಮಾತೆಯ ರಕ್ಷಣೆಗೆ ಸಮಸ್ತ ಹಿಂದೂಗಳು ಪಣ ತೊಡಬೇಕಾದ ಸಮಯ... ಇದಲ್ಲದೇ ಬೇರೇನು ಮಾಡಿದರೂ ವ್ಯರ್ಥ ಪ್ರಯತ್ನ.. ಸರ್ಕಾರ ಕಾನೂನು ತಂದರೂ ಕಳ್ಳತನದಲ್ಲಿ ಕಡಿಯುವವರು ಇದ್ದೇ ಇರುತ್ತಾರೆ.... ಆದ್ದರಿಂದ ಪ್ರತಿಯೊಬ್ಬರು ಒಂದೊಂದು ಗೋವನ್ನು ರಕ್ಷಿಸುವುದೇ ಒಳಿತೆಂದು ನನ್ನ ಅನಿಸಿಕೆ....

    ReplyDelete
    Replies
    1. ಗುರುಪ್ರಸಾದರೇ, ನಿಮ್ಮ ಅದಮ್ಯ ಹೇಳಿಕೆಗಳನ್ನೂ ಮತ್ತು ಗೋವುಗಳ ಬಗ್ಗೆ ನೀವು ಇಟ್ಟ ಪ್ರೀತ್ಯಾದರಗಳನ್ನು ಕಂಡು ಬಹಳ ಸಂತೋಷಗೊಂಡು ಮೂಕವಿಸ್ಮಿತನಾಗಿದ್ದೇನೆ. ನೀವು ಪ್ರಸ್ತಾಪಿಸಿದ ಸಮಸ್ಯೆಗಳ ಕುರಿತು ಮಠಮಾನ್ಯಗಳಲ್ಲಿ ಕೆಲವು ಪ್ರಯತ್ನಗಳು ನಡೆದಿವೆ. ೮೦ ರೂಪಾಯಿ ಲೀಟರಿಗೆ ವ್ಯಯಿಸಿ ಹಾಲು ಕುಡಿದರೂ ನಿಮ್ಮೆಲ್ಲರ ಆರೋಗ್ಯ ರೋಗಗಳಿಂದ ಅಬಾಧಿತವಾಗಿ ಆರೋಗ್ಯಕರ-ತೃಪ್ತ ಜೀವನ ನಿಮ್ಮದಾಗಿರುತ್ತದೆ ಎಂದಷ್ಟೇ ಹೇಳಬಯಸುತ್ತೇನೆ. ಇನ್ನು ಗೊಬ್ಬರವನ್ನು ಸಾಗಿಸುವುದು, ಅದನ್ನು ಬಳಸುವುದು ಬಹಳ ಖರ್ಚಿನ ಬಾಬ್ತು ಎಂದಿದ್ದೀರಿ, ಈಗಾಗಲೇ ಮರಳಿ ಎರೆಹುಳು ಗೊಬ್ಬರ, ಸಾವಯವ ಕೃಷಿಗೆ ಜನ ಮರಳುತ್ತಿದ್ದಾರೆ-ಕೆಲವು ತಿಂಗಳು ತಡೆದುಕೊಳ್ಳಿ-ನಿಮಗೂ ಅದರಿಂದ ವಿಮುಕ್ತಿ ಸಿಗುತ್ತದೆ. ಗೊಬ್ಬರವನ್ನು ಮಾರಿದರೆ ಕೊಳ್ಳುವ ಜನ ಈಗಾಗಲೇ ಇದ್ದಾರೆ. ಇನ್ನು ಗೋ ಮೂತ್ರದಿಂದ ಗೋ ಅರ್ಕ ತಯಾರಿಸುವುದು ಸುಲಭದ ಕೆಲಸ ಮತ್ತು ಅದರ ಬಳಕೆ ಆಯುರ್ವೇದೀಯ ಔಷಧಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಅದರ ಬೇಡಿಕೆ ಕೂಡ ಕುಸಿಯಲಾರದು ಎಂದುಕೊಳ್ಳುತ್ತೇನೆ. ಕೈಗೆ ಗ್ಲೌಸು ಹಾಕಿಕೊಂಡು ಸಗಣಿ ತಟ್ಟಿ ಬೆರಣಿ[ಕುರುಳು]ತಯಾರಿಸಿ ಇಟ್ಟುಕೊಂಡರೆ[ಮಳೆಗಾಲದಲ್ಲೂ ಅದನ್ನೇ ಸ್ವಲ್ಪ ಉರಿಸಿ ಶಾಖದಿಂದ ಒಣಗಿಸಿಡುವ ತಂತ್ರಗಳಿವೆ] ಬಳಕೆಗೆ ಬರುತ್ತದೆ. ನೇರವಾಗಿ ಗೋವಿನ ಹಾಲನ್ನೇ ಉತ್ಪನ್ನವೆಂದು ಭಾವಿಸದೇ, ಗೋಜನ್ಯ ಸಕಲ ಪದಾರ್ಥಗಳನ್ನೂ ವಿವಿಧ ರೀತಿಯಲ್ಲಿ ಪರಿಷ್ಕರಿಸಿ ಬಳಕೆಮಾಡುವ ಸಹಕಾರ ಸಂಘಗಳನ್ನು ನಿಮ್ಮಂಥಾ ಪೂಜನೀಯ ಮನಸ್ಕರು ಸ್ಥಾಪಿಸಿದಲ್ಲಿ ಅದು ಪರಿಣಾಮಕಾರಿ ಆಗುವುದರಲ್ಲಿ ಸಂದೇಹವಿಲ್ಲ. ಸಮಸ್ಯೆಗಳಿರುವಾಗ ಪರಿಹಾರ ಇರಲೇಬೇಕಾದುದು ನಿಸರ್ಗ ನಿಯಮ, ಆದರೆ ಪರಿಹಾರಗಳು ನಮಗೆ ನೇರವಾಗಿ ದಕ್ಕುವುದಿಲ್ಲ ಎಂಬುದನ್ನಷ್ಟೇ ತಮ್ಮ ನಜರಿಗೆ ತರಬಯಸುತ್ತೇನೆ, ಧನ್ಯವಾದಗಳು.

      Delete