ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, November 11, 2012

ಗೋವು ಮತ್ತು ದೀಪಾವಳಿ

ಿತ್ರೃಪೆ : ಾಮ.ಇನ್ [http://www.hareraama.in]
ಗೋವು ಮತ್ತು ದೀಪಾವಳಿ

ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ
ಅಧ್ಯಾಯ-೨


೨೧ನೇ ದಿನ ಮಧ್ಯಾಹ್ನದ ಹೊತ್ತಿಗೆ  ಗಾಂವ್ ಗಾಂವ್ ಗಾಂವ್ ಗಾಂವ್...........ಕರುಳಲ್ಲಿ ನಡುಕ ಹುಟ್ಟಿಸುವಂತೇ ಆರ್ಭಟಿಸುತ್ತ ಭಯಂಕರವಾದ ಸಿಂಹವೊಂದು ನಂದಿನಿಮೇಲೆ ಎರಗಲು ಮುಂದೆ ಬಂದುಬಿಟ್ಟಿತು. ಸೇವೆಗೈಯ್ಯುತ್ತಿದ್ದ ದಿಲೀಪ ಸ್ತಂಭೀಭೂತನಾದನಾದರೂ ಸಿಂಹವನ್ನು ಹಿಮ್ಮೆಟ್ಟಿಸುವತ್ತ ಮುನ್ನಡೆದ. ಶಸ್ತ್ರಗಳೇ ಇಲ್ಲದ ಸನ್ನಿವೇಶದಲ್ಲಿ ಬೊಬ್ಬಿರಿಯುತ್ತಿರುವ ಸಿಂಹವನ್ನು ನಿಯಂತ್ರಿಸುವುದಾದರೂ ಹೇಗೆ? ಎದುರಾಗಿ ಬರುತ್ತಿರುವ ದಿಲೀಪನನ್ನು ಕುರಿತು ಸಿಂಹ ಮಾತನಾಡತೊಡಗಿತು. " ಎಲವೋ ಮಾನವನೇ ಇದು ನನ್ನ ಆಹಾರ, ನನ್ನ ಆಹಾರಕ್ಕೆ ಅಡ್ಡಿಪಡಿಸಬೇಡ."  ದಿಲೀಪ ಕೇಳಿದ " ಅಯ್ಯಾ ಸಿಂಹವೇ ನೀನು ಎಲ್ಲಿಂದ ಬಂದೆ? ನಿನಗೆ ಈ ಧೇನುವೇ ಏಕೆ ಬೇಕು?"  ಸಿಂಹ ಉತ್ತರಿಸಿತು " ಪರಶಿವನ ಸೇವಕ ನಾನು. ಈ ಪ್ರಾಂತದಲ್ಲಿ ಆತನ ಸೇವೆಗೆ ನಿಂತವನು. ಮೇಯಲು ಬರುವ ಜೀವಿಗಳು ದೇವದಾರು ಮರಗಳಿಗೆ ತಮ್ಮ ಮೈಯ್ಯುಜ್ಜುವಾಗ ಅಲ್ಲಾಡಿಸಿ ಮರಗಳನ್ನು ಹಾಳುಗೆಡವದಂತೇ ರಕ್ಷಿಸುವುದು ನನ್ನ ಕೆಲಸ. ಮಧ್ಯಾಹ್ನದ ಹೊತ್ತಿಗೆ ಯಾವ ಪ್ರಾಣಿ ಇಲ್ಲಿಗೆ ಮೊದಲಾಗಿ ಬರುವುದೋ ಅದನ್ನು ಆಹಾರವಾಗಿ ಸ್ವೀಕರುಸುವುದು ನನ್ನ ವಾಡಿಕೆ. ಇಂದು ಈ ಹಸು ಬಂದಿದೆ. ದಾರಿ ಬಿಡು ನಾನು ಈ ಹಸುವನ್ನು ತಿನ್ನಬೇಕು." "ಸಿಂಹವೇ, ನಿನ್ನ ಹಸಿವಿಗೆ ನಿನಗೆ ಹಸುವೊಂದೇ ಕಾಣುವುದೇ? ಇಗೋ ದಯವಿಟ್ಟು ನನ್ನನ್ನು ಸ್ವೀಕರಿಸು. ಹಸುವನ್ನು ಬಿಟ್ಟುಬಿಡು." --ಹೀಗೆ ಸಿಂಹದೆದುರು ವಿನೀತನಾಗಿ ಪ್ರಾರ್ಥಿಸಿ ತಲೆಬಾಗಿದ ದಿಲೀಪ. ಮರುಕ್ಷಣದಲ್ಲಿ ಸಿಂಹ ನಾಪತ್ತೆ ! ರಕ್ಷಣೆಗಾಗಿ ತನ್ನ ತನುವನ್ನೇ ತ್ಯಜಿಸಲು ಸಿದ್ಧನಾದ ದಿಲೀಪನ ಮನೋಗತವನ್ನು ನೋಡಿ ಅರಿತ ನಂದಿನಿ ಆತನಿಗೆ ತನ್ನ ಚಮತ್ಕಾರವನ್ನು ಅರುಹಿದಳು.

ಭಕ್ತ್ಯಾ ಗುರೌ ಮಯ್ಯನುಕಂಪಯಾ ಚ ಪ್ರೀತಾಸ್ಮಿ ತೇ ಪುತ್ರ ವರಂ ವೃಣೀಷ್ವ |
ನ ಕೇವಲಾಯಾಂ ಪಯಸಾಂ ಪ್ರಸೂತಿಂ ಅವೇಹಿ ಮಾಂ ಕಾಮದುಘಾಂ ಪ್ರಸನ್ನಾಂ ||  
--ಕಾಳಿದಾಸ ’ರುವಶ’ದ ಶ್ಲೋಕ

"ಮಗನೇ, ನಿನ್ನ ಗುರುಭಕ್ತಿ ಮತ್ತು ನನ್ನ ಮೇಲಿನ ದಯೆ ಇವುಗಳಿಂದ ನಾನು ಸಂತೋಷಗೊಂಡಿರುವೆನು. ನಿನಗೆ ಬೇಕಾದ ವರವನ್ನು ಕೇಳು ನಾನು ಕೊಡುವೆನು. ನಾನು ಬರಿಯ ಹಾಲನ್ನು ಮಾತ್ರ ಕರೆಯುವ ಒಂದು ಪ್ರಾಣಿಯಲ್ಲ, ನೀನು ಏನೇನು ಬಯಸುವಿಯೋ ಅದನ್ನು ಸುರಿಸುವ ಕಾಮಧೇನು." ಎನ್ನಲು ಚಕ್ರವರ್ತಿ ದಿಲೀಪ ವಿನೀತನಾಗಿ ಮಂಡಿಯೂರಿ ಆಕೆಯಲ್ಲಿ ಸಂತಾನಭಾಗ್ಯವನ್ನು ಮಾತ್ರ ಕೋರಿದ್ದಾನೆ. " ನಿನ್ನ ಮನದಿಚ್ಛೆಯಂತೇ ಅತ್ಯುತ್ತಮವಾದ ಸಂತಾನವನ್ನು ಪಡೆ" ಎಂದು ಹರಸಿ ತಾಯಿ ಕಾಮಧೇನುವಿನಿಂದ ಪ್ರಾಪ್ತವಾದ ಶಾಪದಿಂದ ಮುಕ್ತಗೊಳಿಸಿದಳು.

ಇಕ್ಷಾಕುವಂಶ ಅಥವಾ ಸೂರ್ಯವಂಶದ ಆರಂಭಪುರುಷ ವೈವಸ್ವತ ಮನು. ಮನು, ಇಂದ್ರ, ವ್ಯಾಸ ಈ ಎಲ್ಲ ಭಗವಂತನಿಂದ ಆಯ್ಕೆಮಾಡಲ್ಪಟ್ಟ ಕೆಲವರು ಕೆಲಸಮಾಡುವ ಅಧಿಕಾರದ ಸ್ಥಾನಗಳು ಮಾತ್ರ. ಅಲ್ಲಿರುವವರು ಅಲ್ಲೇ ಶಾಶ್ವತವಲ್ಲ! ಅಲ್ಲಿ ಬದಲಾವಣೆ ನಡೆಯುತ್ತಿರುತ್ತದೆ. ಹಾಗೆ ಬದಲಾಗುವ ಪರಿಕ್ರಮಗಳಲ್ಲಿ ವಿಭಿನ್ನ ೧೪ ಹೆಸರಿನ ಮನುಗಳು ಆಳುವ ಹಲವಾರು ಮನ್ವಂತರಗಳು ಬಂದುಹೋಗುತ್ತವೆ. ಈಗ ನಾವು ಇರುವುದು ೭ನೇ ಮನುವೆನಿಸಿದ ವೈವಸ್ವತ ಮನ್ವಂತರದಲ್ಲಿ; ಅಂದರೆ ವೈವಸ್ವತ ಮನು ಇದನ್ನು ಆರಂಭಿಸಿದಾತ, ನಡೆಸುವಾತ. ಮನು ಎಂದರೆ ರಾಜನೇ ಎಂದು ಶತಪಥ ಬ್ರಾಹ್ಮಣ ಗ್ರಂಥ ಹೇಳುತ್ತದೆ. ಆತನ ವಂಶವೇ ಮುಂದೆ ಸೂರ್ಯವಂಶವಾಯ್ತು. ಸೂರ್ಯವಂಶವನ್ನು ಕಾಲಾನಂತರ ರಘುವಂಶವೆಂದೂ ಕರೆದರು. ಖ್ಯಾತನಾಮನಾದ ರಘು ರಾಜಾ ದಿಲೀಪನ ಮಗ! ಮಾಲವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ ಮೊದಲಾದ ಮಹಾನ್ ನಾಟಕಕೃತಿಗಳನ್ನು ಬರೆದ ಮಹಾಕವಿ ಕಾಳಿದಾಸ ರಘುವಂಶ, ಕುಮಾರ ಸಂಭವ, ಋತುಸಂಹಾರ, ಮೇಘದೂತ ಮುಂತಾದ ಕಾವ್ಯಗಳನ್ನೂ ಬರೆದು ಪ್ರಸಿದ್ಧನಾದ. ನಮ್ಮ ಭಾರತದ ಪ್ರಾಗೈತಿಹಾಸದ ಬಗ್ಗೆ ಜಾಸ್ತಿ ತಿಳಿದುಕೊಳ್ಳಬಯಸುವವರು ಕಾಳೀದಾಸನ ರಘುವಂಶವನ್ನು ಉಂಡು ಅಗುಳಗುಳನ್ನೂ ಅರಗಿಸಿಕೊಳ್ಳಬೇಕು. ಆದಿಕವಿ ವಾಲ್ಮೀಕಿಯ ರಾಮಾಯಣ ಮಹಾಕಾವ್ಯಕ್ಕೆ ಪೂರಕ ಪೀಠಿಕೆಯನ್ನು ಕಲ್ಪಿಸುವುದು ಈ ’ರಘುವಂಶ’. ರಘುವಂಶವನ್ನು ಓದಿಕೊಂಡು ಆಮೇಲೆ ರಾಮಾಯಣವನ್ನು ತಿಳಿದುಕೊಂಡರೆ ಶ್ರೀರಾಮನ ಪೂರ್ವಜರ ಮತ್ತು ಆತನ ನಂತರದ ಪೀಳಿಗೆಯ ಪರಿಚಯ ನಮಗೆ ಲಭಿಸುತ್ತದೆ.       

ಅನುಷ್ಟುಪ್, ಇಂದ್ರವಜ್ರ, ಉಪಜಾತಿ, ಉಪೇಂದ್ರವಜ್ರ, ಔಪಚ್ಛಂದಸಿಕ, ತೋಟಕ, ಧೃತವಿಲಂಬಿತ, ಪುಷ್ಪಿತಾಗ್ರಾ, ಪ್ರಹರ್ಷಿಣೀ, ಮಂಜುಭಾಷಿಣಿ, ಮತ್ತಮಯೂರ, ಮಂದಕ್ರಾಂತ, ಮಾಲಿನಿ, ರಥೋದ್ಧತಾ, ವಂಶಸ್ಥ, ವಸಂತತಿಲಕ, ವೈತಲೀಯ, ಶಾರ್ದೂಲವಿಕ್ರೀಡಿತ, ಶಾಲಿನಿ, ಸ್ವಾಗತಾ, ಹರಿಣಿ ಮೊದಲಾದ ೨೧ ಛಂದಸ್ಸುಗಳ ಸಮಾಗಮದ ಚಂದವನ್ನು ರಘುವಂಶದಲ್ಲಿ ಕಾಣಬಹುದಾಗಿದೆ. ಹಾಗೆ ಅದನ್ನು ಅರ್ಥಮಾಡಿಕೊಳ್ಳುವಾಗ, ಕವಿಯ ಪರಿಶ್ರಮದ ಸಾಧನೆಯನ್ನು ಅರಿಯುವಾಗ, ನಾವೆಷ್ಟು ಕುಬ್ಜರು ಎಂಬ ಅರಿವು ತಂತಾನೇ ನಮಗೆ ಬಂದರೆ ಅಶ್ಚರ್ಯವಲ್ಲ! ಇಂದು ಕವಿ-ಸಾಹಿತಿಗಳೆನಿಸುವ ನಾವು ಹಿಮಾಲಯದೊಡನೆ ನಮ್ಮನ್ನು ಹೋಲಿಸಿಕೊಳ್ಳುವ ಮಾನವನಿರ್ಮಿತ ಚಿಕ್ಕ ಮಣ್ಣಿನಗುಡ್ಡವಾಗಿ ಕಾಣುತ್ತೇವೆ ಎಂಬುದರಲ್ಲಿ ಲವಲೇಶದಷ್ಟೂ ದೋಷವಿಲ್ಲ. ಅದಕ್ಕೇ ಪೂರ್ವಜರು ಹೇಳಿದರು, ’ದೇಶ ತಿರುಗು ಅಥವಾ ಕೋಶ ಓದು’-ಅಂದರೆ ಮಾತ್ರ ಜಗತ್ತು ಏನು ಎಂಬುದರ ಅರಿವು ನಮಗೆ ಸ್ವಲ್ಪವಾದರೂ ಆದೀತು. ಮಹಾಕವಿ ಕಾಳಿದಾಸನ ಪಾದಪದ್ಮಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿ ಕಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇನೆ.

ಸೂರ್ಯವಂಶದ ರಾಜಾ ದಿಲೀಪ ಬಹುದೊಡ್ಡ ಚಕ್ರವರ್ತಿ. ಸತ್ಯಯುಗದಲ್ಲಿ ದೇವತೆಗಳು ದಾನವರೊಡನೆ ಯುದ್ಧಮಾಡುವಾಗ ಇಂತಹ ಚಕ್ರವರ್ತಿಗಳ ಸಹಕಾರವನ್ನು ಕೋರುತ್ತಿದ್ದರು. ಸ್ವರ್ಗವನ್ನು ಸಶರೀರಿಯಾಗಿ ಪ್ರವೇಶಿಸುವ ಮತ್ತು ಹೋಗಿಬಂದು ಮಾಡುತ್ತಿರುವ ಅವಕಾಶ ಅಂದಿನ ಚಕ್ರವರ್ತಿಗಳಿಗಿತ್ತು! ಅಂತಹ ಸಮಯವೊಂದರಲ್ಲಿ ದೇವತೆಗಳ ನೆರವಿಗೆ ತೆರಳಿದ್ದ ದಿಲೀಪ ತನ್ನ ರಾಜ್ಯಕ್ಕೆ-ಅರಮನೆಗೆ-ಅಂತಃಪುರಕ್ಕೆ ಧಾವಿಸುವ ಆತುರದಲ್ಲಿದ್ದ. ಹಾಗೆ ಸ್ವರ್ಗದಲ್ಲಿ ದಾಪುಗಾಲು ಹಾಕುತ್ತಾ ಸಾಗುತ್ತಿರುವಾಗ ಕಾಮಧೇನುವನ್ನು ಅಲಕ್ಷ್ಯಿಸಿದ, ಕಾಮಧೇನುವಿಗೆ ಗೌರವ ನೀಡಲೇ ಇಲ್ಲ. ತತ್ಪರಿಣಾಮ ಕಾಮಧೇನುವಿನಿಂದ " ಸಂತಾನವಾಗದೇ ಹೋಗಲಿ" ಎಂಬ ಶಾಪಕ್ಕೆ ಪರೋಕ್ಷ ಗುರಿಯಾದ. ಬಹುಕಾಲ ಮಕ್ಕಳಾಗದ ಚಿಂತೆಯಲ್ಲಿ ಗುರು ವಶಿಷ್ಠರನ್ನು ಕಂಡು ರಣವನ್ನು ಕೇಳಿದ. ವಶಿಷ್ಠರು ನಡೆದ ಸಂಗತಿಯನ್ನು ಅವನಿಗೆ ತಿಳಿಸಿದರು. ಶಾಪಮುಕ್ತಿಗಾಗಿ ಕಾಮಧೇನುವಿನ ಮಗಳಾದ ನಂದಿನಿಯನ್ನು ಆರಾಧಿಸಿ ಅವಳ ಕರುಣೆಗೆ ಪಾತ್ರನಾಗೆಂದು ಬೋಧಿಸಿದರು. ಬ್ರಹ್ಮಮಾನಸ ಪುತ್ರರಾದ ವಶಿಷ್ಠರ ಆಶ್ರಮದಲ್ಲಿಯೇ ಇದ್ದ ನಂದಿನಿ ವಶಿಷ್ಠರ ಕರೆಯಮೇರೆಗೆ ನಡೆದು ಬಂದಳು. ಮುಂದೆ ೨೧ ದಿನಗಳ ಪರ್ಯಂತ ವ್ರತನಿಷ್ಠನಾಗಿ ನಂದಿನಿಯನ್ನು ಉಪಚರಿಸಿ ಸೇವೆಗೈಯ್ಯುವಲ್ಲಿ ರಾಜಾ ದಿಲೀಪ ಸನ್ನದ್ಧನಾದ, ಕಂಕಣಬದ್ಧನಾದ. ನಿತ್ಯವೂ ನಂದಿನಿಯ ಮೈತೊಳೆಯುವುದು, ಆಕೆ ಮಲಗುವ ಜಾಗವನ್ನು ಸ್ವಚ್ಛಗೊಳಿಸುವುದು, ಆಕೆ ಅಡವಿಗೆ ಮೇಯಲು ಹೋಗುವಾಗ ಹಿಂಬಾಲಿಸಿ ಹೋಗಿ ಆಕೆಯನ್ನು ಕಾಯುವುದು, ಆಕೆ ಮಲಗಿದರೆ ಮಲಗುವುದು, ಆಕೆ ಆಹಾರ ತಿಂದರೆ ತಾನು ಅಲ್ಪಾಹಾರ ಸೇವಿಸುವುದು... ಅಂತೂ ೨೧ ದಿನಗಳೂ ನಿರಂತರ ಸೇವೆ ನಡೆಸಿದ. ೨೧ನೇ ದಿನ ನಡೆದ ಘಟನೆಯನ್ನು ಮೇಲೆ ಓದಿದಿರಲ್ಲಾ...ನಂತರ ಜನಿಸಿದವನೇ ರಘುಚಕ್ರವರ್ತಿ. ಅದೇ ರಘುವಂಶ ಮುನ್ನಡೆದು ಮುಂದೆ ಭಗೀರಥ, ಅಜ, ದಶರಥ, ಶ್ರೀರಾಮ, ಲವ-ಕುಶ, ಶುದ್ಧೋಧನ, ಸಿದ್ಧಾರ್ಥ [ಬುದ್ಧ]ಪ್ರಸೇನ ಜಿತ್, ಸುಮಿತ್ರ ಹೀಗೇ ಸೂರ್ಯವಂಶ ಸತ್ಯಯುಗದಿಂದ ದ್ವಾಪರಯುಗದವರೆಗೂ ಹಬ್ಬಿದೆ!! 

ಮಹರ್ಷಿ ಗೌತಮರು ಆಂಧ್ರ ಪ್ರಾಂತದಲ್ಲಿ ಆಶ್ರಮವಾಸಿಯಾಗಿದ್ದರು. ತಪೋ ನಿರತರಾದ ಅವರಿಗೆ ಹಲವು ಜನ ವಟುಗಳು ಸೇವೆಗೈಯ್ಯುತ್ತಿದ್ದರು. ಕಾಲಾನಂತರದಲ್ಲಿ ವೇದಾಧ್ಯಯನ ಸಂಪನ್ನರಾದ ವಟುಗಳಿಗೆ ಸಂಸಾರಿಗಳಾಗುವ ಬಯಕೆ ಬಂತು. ಗೌತಮರ ಆಶ್ರಮವನ್ನು ತೊರೆಯಲು ಬಯಸಿದರು. ಅದಕ್ಕೆ ಗೌತಮರು ಅವಕಾಶ ನೀಡಲೇ ಇಲ್ಲ. "ನೀವೆಲ್ಲಾ ಮುಂದೆ ಸಂಸಾರಿಗಳಾದರೂ ಸಹಿತ ಈ ಆಶ್ರಮದಲ್ಲೇ ಇರತಕ್ಕದ್ದು" ಎಂದು ಅಪ್ಪಣೆ ಕೊಡಿಸಿಬಿಟ್ಟರು. ಗೌತಮರು ಹೊರಗೆ ಹೋದ ಸಮಯ ಸಾಧಿಸಿ ಬ್ರಾಹ್ಮಣರು ದರ್ಭೆಯನ್ನು ಅಭಿಮಂತ್ರಿಸಿ ಅದನ್ನು ಧೇನುವಾಗಿಸಿ ಆಶ್ರಮದ ಹೊಲದಲ್ಲಿ ಅದನ್ನು ಕಟ್ಟಿಹಾಕಿದರು. ಕಾರ್ಯನಿಮ್ಮಿತ್ತ ತೆರಳಿದ್ದ ಗೌತಮರು ಮರಳುವಾಗ ಹೊಲದಲ್ಲಿ ಮೇಯುತ್ತಿರುವ ದನವನ್ನು ನೋಡಿ ಸಂತೋಷದಿಂದ ಮೈದಡವಿದರು. ಮೈಮುಟ್ಟಿದ ತಕ್ಷಣವೇ ಆ ಹಸುವು ಹೆದರಿಕೆಯಿಂದ ಪ್ರಾಣಬಿಟ್ಟಿತು. ಗೋ ಹತ್ಯೆಗೆ ಕಾರಣನಾದೆ ಎಂದು ತನ್ನನ್ನೇ ಜರಿದುಕೊಳ್ಳುತ್ತಾ ಗೌತಮರು ಈಶ್ವರನ ಕುರಿತು ತಪಸ್ಸು ಮಾಡಿದರು. ಪ್ರತ್ಯಕ್ಷನಾದ ಈಶ್ವರ ಕಾರಣವನ್ನು ತಿಳಿದುಕೊಂಡ ಮತ್ತು ಅದು ದೋಷವೇ ಅಲ್ಲವೆಂತಲೂ ಅದು ದರ್ಭೆಯಿಂದ ನಿರ್ಮಿತವಾಗಿದ್ದ ದನವೆಂಬ ಸಂಗತಿ ಮುನಿಗಳ ಗೋಚಾರ ದೃಷ್ಟಿಗೆ ನಿಲುಕುವಂತೇ ಮಾಡಿದ. ಆದರೂ ಮನದ ಕ್ಲೇಶವನ್ನು ಕಳೆದುಕೊಳ್ಳುವ ಸಲುವಾಗಿ ಗೌತಮರು ತೀರ್ಥವನ್ನು ಸೃಜಿಸಿ ಅದರಲ್ಲಿ ಸ್ನಾನಮಾಡಿದರು. ಮುಂದೆ ಅದೇ ತೀರ್ಥ ನದಿಯಾಗಿ ಹರಿಯಿತು. ಅದು ಇಂದಿಗೂ ನಾವು ಕಾಣುವ ಸಪ್ತನದಿಗಳಲ್ಲಿ ಒಂದಾದ ಗೋ-ದಾವರಿ!       

ಹೀಗೇ ಈ ಕಥೆಗಳನ್ನು ಇಂದು ಹೇಳಲು ಕಾರಣ ಭಾರತ ಗೋ-ಪ್ರಧಾನ ದೇಶ. ಗೋವು ಬಹುತೇಕರ ಆರಾಧ್ಯ ಸ್ಥಾನದಲ್ಲಿರುವ ಮಾತೆ. ಗೋಜನ್ಯ  ವಸ್ತುಗಳ-ಆಹಾರಗಳ ವೈಜ್ಞಾನಿಕ ಉಪಯೋಗವನ್ನು ನಾವು ಇದೀಗಾಗಲೇ ಹಲವಾರು ಮಾರ್ಗಗಳಿಂದ ತಿಳಿದಿದ್ದೇವೆ. ಗೋಮಾತೆಯ ರಕ್ಷಣೆಯಲ್ಲಿ ಹಲವು ಸಾಧು-ಸಂತರು ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ. ಇದಲ್ಲಿ ಶ್ರೀ ರಾಮಂದ್ರಾಪುರ ಪ್ರಾನಾಗಿದೆ,  ಅವ ಆದರ್ಿಕ್ಕಿದಿಗೆ ಅನುಕೀಯಾಗಿದೆ.  ಿಶ್ವೋ ಸಮ್ಮೇಳ, ಅರೆ ಮೈದಾನಲ್ಲಿ ೋಮಾತೆಗೆ ಕೋಟಿನೀರಾಜ, ವಿಶ್ವಂಗೋಗ್ರಾಮಾತ್ರೆ [ಎರು ಕೋಟಿಿ ಸಂಗ್ರಹ ದೆ]ುಂತಾದು ಕಾರ್ಯಕ್ರು ಪಸ್-ಸಂಕಲ್ಪಿದ್ಿಪೆದ ಶ್ರಶ್ರೀರಶ್ವ ೀ ಮಾಸ್ವಾಮಿಗಿಂದೆಸಲ್ಪಟ್ಟಿವೆ. ಶ್ರೀಮ ೧೩ ಕ್ಕೂ ಹೆಚ್ಚು ಗಾಲೆಗನ್ನು ಸ್ವಃ ನೆಸುತ್ತಿದ್ದಈಗಿರುವ ಾರೀಯ ಎಲ್ಲಾ ತಿಗೂ ಇಲ್ಲಿ ಲಭ್ಯಿವೆ.  ಇಂಶ್ಲೀಯೆಲಾಡಿದ ಆಚಾರ್ಯಿಗಾರೀಯೆಲ್ಲಾಗಿ ಅನಂತೋಟಿ ಪ್ರಾಮು. ಗೋವಿಲ್ಲದೇ ಈ ಜಗತ್ತು ಒಂದೇ ದಿನವೂ ನಡೆಯುವುದು ಕಷ್ಟ. ನಾವು ತಿನ್ನುವ ಎಲ್ಲಾ ಆಹಾರಗಳ ಹಿನ್ನೆಲೆಯಲ್ಲಿ ಬಳಸುವ ಹಾಲು-ಹೈನ ಪದಾರ್ಥಗಳನ್ನು ನೆನೆಸಿಕೊಂಡಾಗ ಜನ್ಮ ಕೊಟ್ಟ ಮಾತೆಯ ನಂತರ ಸಾವಿನವರೆಗೂ ಹಾಲೂಡುವ ಎರಡನೇ ಮಾತೆ ಗೋವು ಎಂಬುದು ತಿಳಿದುಬರುತ್ತದೆ.
ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮದೃಢಾಶಯಃ |
ಗೋಭಕ್ತಃ ಭಾರತಗುರುಃ ಹಿಂದುಃ ಹಿಂಸನದೂಷಕಃ ||

ಮಾಧವ ದಿಗ್ವಿಜಯ ಕೃತಿಯಲ್ಲಿ ಹೇಳಲ್ಪಟ್ಟ ಈ ಶ್ಲೋಕ ಹಿಂದೂಗಳು ಯಾರು ಎಂಬ ಕಲ್ಪನೆಯಲ್ಲಿ ಹಿಂದೂಗಳು ಓಂಕಾರವನ್ನು ಮಂತ್ರವನ್ನಾಗಿ ಉಳ್ಳವರು, ಆತ್ಮನು ಅಮರನಾದ ಕಾರಣ ಪುನರ್ಜನ್ಮದಲ್ಲಿ ನಂಬಿಕೆಯುಳ್ಳವರು, ಅಹಿಂಸಾ ಪ್ರೇಮಿಗಳು-ಹಿಂಸೆಯನ್ನು ದೂಷಿಸುವವರು, ಗೋವಿನ ಭಕ್ತರು ಮತ್ತು ಭಾರತೀಯ ಗುರುಗಳನ್ನು ಗೌರವಿಸುವವರು ಎಂದಿದ್ದಾರೆ.

ಅಂತರ್ಜಾಲ ಕೃಪೆಯಿಂದ ಈ ಚಿತ್ರ , ಉತ್ತರಭಾರತದಲ್ಲಿ ದೀಪಾವಳಿಯಲ್ಲಿ ನಡೆಯುವ ಗೋವರ್ಧನ ಪೂಜೆಯ ಸಂದರ್ಭದ್ದು

ಯಾವುದು ಗೋವಿನ ತ್ಯಾಜ್ಯವೋ ಅದು ನಮ್ಮ ಶರೀರಕ್ಕೆ ದಿವ್ಯೌಷಧವಾಗಿರುತ್ತದೆ ಎಂದಮೇಲೆ ಗೋವಿನ ಮಹತ್ವವನ್ನು ಮತ್ತೆ ಬಿಡಿಸಿಹೇಳುವ ಪ್ರಮೇಯ ಬರುವುದಿಲ್ಲ ಎನಿಸುತ್ತದೆ. ಭಗವಾನ್ ಶ್ರೀಕೃಷ್ಣ ಗೋಕುಲದಲ್ಲೇ ಬೆಳೆದ, ಗೋವುಗಳನ್ನೇ ಕಾದ, ಗೋಪಾಲನೆನಿಸಿದ ಆತ ಇಂದ್ರ ಸುರಿದ ಮಳೆಗೆ ಗೋವರ್ಧನ ಗಿರಿಯನ್ನೇ ಕಿರುಬೆರಳಲ್ಲಿ ಎತ್ತಿಹಿಡಿದ! ಅದು ದೀಪಾವಳಿಯ ಸಂದರ್ಭದಲ್ಲಿ. ಭೂಮಿಪುತ್ರನಾಗಿ ಜನಿಸಿದ್ದ ನರಕಾಸುರ, ೧೬೦೦೦ ಹೆಣ್ಣುಮಕ್ಕಳನ್ನು ಕೂಡಿಟ್ಟುಕೊಂಡು ಸುಖಿಸುವ ಅಟ್ಟಹಾಸದಲ್ಲಿದ್ದ. ಅಂಥಾ ನರಕಾಸುರನನ್ನು ಶ್ರೀಕೃಷ್ಣ ಆಶ್ವೀಜ ಕೃಷ್ಣ ಚತುರ್ದಶಿಯ ಬೆಳಗಿನ ಜಾವ ವಧಿಸಿದ, ನೋವೆದ್ದ ಮೈಕೈಗೆ ಎಣ್ಣೆ ಪೂಸಿಕೊಂಡು ಅಭ್ಯಂಜನ ಮಾಡಿದ. ಭೂಮಿತಾಯಿಯ ಕೋರಿಕೆಯ ಮೇರೆಗೆ ಅಶ್ವಿನಕೃಷ್ಣ ಚತುರ್ದಶಿಯನ್ನು ಆಕೆಯ ಸತ್ತ ಮಗನ ಹೆಸರಲ್ಲೇ ನರಕ ಚತುರ್ದಶಿಯಾಗಿ ಆಚರಿಸಿ ಅಭ್ಯಂಜನ ನಡೆಸಲು ಆದೇಶಿಸಿದ. ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿಯ ವಚನಪಾಲನೆಗೆ ಮನಸೋತು ಮುಂದಿನ ಕಲ್ಪದಲ್ಲಿ ಇಂದ್ರನನ್ನಾಗಿಸುವ ವಚನವನ್ನಿತ್ತು ಆತನನ್ನು ಪಾತಾಳಕ್ಕೆ ಕಳುಹಿಸಿದ; ಆತನಾಳಿದ ಈ ಭೂಮಿಯಲ್ಲಿ ಸಿರಿಸಂಪತ್ತಿಗೆ ಕೊರತೆಯೇ ಇರಲಿಲ್ಲ! ಜನರೆಲ್ಲಾ ಉಂಡುಟ್ಟು ಸುಭಿಕ್ಷವಾಗಿದ್ದ ಆ ಸಮಯದಲ್ಲಿ ಬಲಿಯನ್ನು ಸದೆಬಡಿಯಲು ಕಾರಣವೇ ಇರಲಿಲ್ಲ. ಅಂಥಾ ಚಕ್ರವರ್ತಿ ಬಲಿ ದೇವಕಾರ್ಯದಲ್ಲಿ ಉದ್ಯುಕ್ತರಾದ ದೇವತೆಗಳ ಪಟ್ಟವನ್ನು ಕಸಿದುಕೊಳ್ಳುವ ಪ್ರಮೇಯವೇ ಬಂದಿದ್ದರಿಂದ ಅನಿವಾರ್ಯವಾಗಿ ಆತನನ್ನು ಪರೀಕ್ಷೆಗೆ ಒಳಪಡಿಸಿ ಉಪಾಯವಾಗಿ ಪಾತಾಳಕ್ಕೆ ಕಳಿಸಿದ್ದರೂ ವರ್ಷಂಪ್ರತಿ ದೀಪಾವಳಿಯಲ್ಲಿ ಮೂರುದಿನ ಭೂಮಿಯ ಆಳ್ವಿಕೆಯನ್ನು ಬಲಿಗೇ ಒಪ್ಪಿಸಿ ಆತನ ಸಾಮ್ರಾಜ್ಯದ ಬಾಗಿಲಭಟನಾಗಿ ಸೇವೆಗೈಯ್ಯುವುದಾಗಿ ಅನುಗ್ರಹಿಸಿದ ವಾಮನ ತ್ರಿವಿಕ್ರಮನ ಮಾತಿನ ಒಡಂಬಡಿಕೆಗೆ ಒಳಪಟ್ಟು ದೀಪಾವಳಿಯ ಮೂರುದಿನ ಈ ಭೂಮಿಯಲ್ಲಿ ಬಲಿಚಕ್ರವರ್ತಿ ಆಡಳಿತಾರೂಢನಾಗುತ್ತಾನೆ ಎನ್ನುವುದು ಪ್ರತೀತಿ. ಆತನ ನೆನಪಿಗಾಗಿ ಕೆಲವು ಸುವಸ್ತುಗಳನ್ನಿಟ್ಟು, ರಂಗೋಲಿಗಳನ್ನು ಬರೆದು, ದೀಪಗಳನ್ನು ಬೆಳಗಿಸಿ ಪೂಜಿಸುವುದು ಆರಾಧನೆಯ ಒಂದು ಪದ್ಧತಿ. ದಾನವಕುಲದಲ್ಲಿ ಜನಿಸಿಯೂ ದೇವರಿಂದಲೇ ಸೇವೆಪಡೆದ ಹೆಗ್ಗಳಿಕೆಗೆ ಪಾತ್ರನಾದ ಏಕಮೇವಾದ್ವಿತೀಯ ವ್ಯಕ್ತಿ ಬಲಿಚಕ್ರವರ್ತಿ!  

ನ್ಯಾಸರ್ಮನ್ನಟ್ಟುನಿಟ್ಟಾಗಿ ೆಸೂಕಪ್ಪಾಮಿಗೆಂದಖ್ಯಾದು 

ದೀಪಾವಳಿಯ ಸಂದರ್ಭದಲ್ಲಿ ಅಖಂಡ ಭಾರತದಲ್ಲಿ ಗೋವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

ನಮಸ್ತೇ ಜಾಯಮಾನಾಯೈ ಜಾತಾಯಾ ಉತ ತೇ ನಮಃ |
ಬಾಲೇಭ್ಯಃ ಶಫೇಭ್ಯೋ ರೂಪಾಯಾಘ್ನ್ಯೇ ತೇ ನಮಃ || 
---ಅಥರ್ವಣವೇದ  ೧೦/೧೦/೧

ಕೊಲ್ಲಲು ಸರ್ವಥಾ ಅರ್ಹವಲ್ಲದ, ಕೊಲ್ಲಲ್ಪಡಬಾರದ ಗೋವೇ, ಹುಟ್ಟುತ್ತಿರುವ ಸಮಯದಲ್ಲಿ ನಿನಗೆ ನಮಸ್ಕಾರ. ಹುಟ್ಟಿದ ಮೇಲೆಯೂ ನಮಸ್ಕಾರ. ನಿನ್ನ ಕೂದಲುಗಳಿಗೂ ನಿನ್ನ ಗೊರಸುಗಳಿಗೂ ಮತ್ತು ನಿನ್ನ ರೂಪಕ್ಕೂ ಎಲ್ಲವುದಕ್ಕೂ ನಮಸ್ಕಾರ.

ಯಯಾ ದ್ಯೌಃ ಯಯಾ ಪೃಥಿವೀ ಯಯಾಪೋ ಗುಪಿತಾ ಇಮಾಃ |
ವಶಾಂ ಸಹಸ್ರಧಾರಾಂ ಬ್ರಹ್ಮಣಾಚ್ಛಾ ವದಾಮಸಿ || 
----ಅಥರ್ವಣವೇದ  ೧೦/೧೦/೪

ಗೋವಿನಿಂದ ಈ ಭೂಮಿ,  ಈ ಸ್ವರ್ಗ ಮತ್ತು ನೀರಿಗೆ ಆಶ್ರಯವಾದ ಅಂತರಿಕ್ಷ --ಈ ಲೋಕಗಳು ಕಾಪಾಡಲ್ಪಟ್ಟಿವೆ. ಅವಳು ಸುಲಭವಾಗಿ ಒಡೆಯನ ವಶದಲ್ಲಿ ಇರುವಂತಹ ಸೌಮ್ಯರೂಪಳು. ಸಹಸ್ರಧಾರೆಗಳ ಹಾಲಿನಿಂದ ನಮ್ಮನ್ನು ಪೋಷಿಸುವವಳು. ನಾನು ಇಂತಹ ಗೋವನ್ನು ವೇದಮಂತ್ರಗಳಿಂದ ಚೆನ್ನಾಗಿ ಹೊಗಳುವೆನು.

ನಮೋ ಗೋಭ್ಯಃ ಶ್ರೀಮತೀಭ್ಯಃ ಸೌರಭೇಯಿಭ್ಯ ಏವ ಚ |
ನಮೋ ಬ್ರಹ್ಮಸುತಾಭ್ಯಶ್ಚ ಪವಿತ್ರಾಭ್ಯೋ ನಮೋ ನಮಃ ||
  ---ಸ್ಮೃತಿ

ಎಲೈ ಗೋವುಗಳೇ, ನೀವು ಕಶ್ಯ-ಬ್ರಹ್ಮ ಮತ್ತು ಸುರಭೀದೇವಿಯರ ಸಂತಾನ. ನೀವು ಕಾಂತಿ, ಪುಷ್ಟಿ ಮುಂತಾದ ವಿವಿಧ ಸಂಪತ್ತಿನಿಂದ ಬೆಳಗುವಿರಿ. ನೀವು ಯಾವಾಗಲೂ ಅತ್ಯಂತ ಪವಿತ್ರರು. ನಿಮಗೆ ಮತ್ತೆ ಮತ್ತೆ ನಮಸ್ಕಾರಗಳು.

ಸರ್ವಕಾಮದುಘೇ ದೇವಿ ಸರ್ವತೀರ್ಥಾಭಿಷೇಚಿನಿ |
ಪಾಿ ಸುರಭಿ ಶ್ರೇಷ್ಠೇ ದೇವಿ ತುಭ್ಯಂ ನಮೋ ನಮಃ ||

ನೀನು ಪಾವನ ಮಾಡುವವಳು, ಶ್ರೇಷ್ಠಳು, ನಮ್ಮ ಎಲ್ಲ ಬಯಕೆಗಳನ್ನೂ ಪೂರೈಸುವ ದೇವಿಯು. ಸುರಭಿಯೇ! ನೀನು ಸುರಿಸುವ ಹಾಲೇ ಎಲ್ಲಾ ತೀರ್ಥಗಳು. ಇಂತಹ ನಿನಗೆ ಮತ್ತೆ ಮತ್ತೆ ನಮಸ್ಕಾರಗಳು.

ಮಾತರಃ ಸರ್ವಭೂತಾನಾಂ ಗಾವಃ ಸರ್ವಸುಖಪ್ರದಾಃ |
ವೃದ್ಧಿಮಾಕಾಂಕ್ಷತಾ ನಿತ್ಯಂ ಗಾವಃ ಕಾರ್ಯಾಃ ಪ್ರದಕ್ಷಿಣಾಃ ||

ಗೋವುಗಳು ಎಲ್ಲಾ ಪ್ರಾಣಿಗಳಿಗೂ ತಾಯಂದಿರು. ಎಲ್ಲರಿಗೂ, ಎಲ್ಲ ರೀತಿಯ ಸುಖಗಳನ್ನು ಕೊಡುವವರು. ಆದ್ದರಿಂದ ವೃದ್ಧಿಯನ್ನು ಬಯಸುವವನು ನಿತ್ಯವೂ ಗೋವುಗಳನ್ನು ಸ್ತುತಿ, ಪ್ರದಕ್ಷಿಣೆ, ನಮಸ್ಕಾರ ಮತ್ತು ಆಹಾರದಾನಗಳಿಂದ ಪೂಜಿಸಲಿ.    

ಚ್ಯವನ ಮಹರ್ಷಿ ಗಂಗೆಯಲ್ಲಿ ಮುಳುಗಿ ಬಹಕಾಲ ತಪಸ್ಸುಮಾಡುತ್ತಿರುವಾಗ ಬೆಸ್ತರು ಮೀನಿಗಾಗಿ ಬೀಸಿದ ಬಲೆಗೆ ಸಿಕ್ಕಿಬಿದ್ದುಬಿಟ್ಟನು. ಬೆಸ್ತರು ಮೀನುಗಳೊಂದಿಗೆ ಅವನನ್ನೂ ಎಳೆದು ದಡಕ್ಕೆ ಹಾಕಿದರು. ಸಮಾಧಿಯಿಂದ ಎಚ್ಚೆತ್ತ ಮುನಿ ಸುತ್ತಮುತ್ತಲೂ ನೋಡಿ ಒದ್ದಾಡುತ್ತಿರುವ ಮೀನುಗಳ ಬಗ್ಗೆ ದಯೆತಾಳಿ ದೀರ್ಘವಾಗಿ ನಿಟ್ಟುಸಿರು ಬಿಡತೊಡಗಿದನು. ಬೆಸ್ತರು ಈ ವಿಚಿತ್ರವನ್ನು ನೋಡಿ ಓಡಿಹೋಗಿ ರಾಜಾ ನಹುಷನನ್ನು ಕರೆತಂದರು. ರಾಜನು ಮುನಿಗೆ ಪ್ರಣಾಮ ಮಾಡಿ ಏನಾಗಬೇಕೆಂದು ಬೇಡಿದನು. "ಈ ಮೀನುಗಳ ಬಿಡುಗಡೆಯಾಗಿ ಪ್ರಾಣ ಉಳಿದರೆ ಮಾತ್ರ ನಾನೂ ಉಳಿಯುವೆನು ಇಲ್ಲದಿದರೆ ನಾನೂ ಸಾಯುವೆನು" ಎಂದ ಮುನಿಯ ಮಾತು ಕೇಳಿ ರಾಜನು ಬೆಸ್ತರಿಗೆ ಹಣ ಸಲ್ಲಿಸಿ ಮೀನುಗಳನ್ನು ಮರಳಿ ನೀರಿಗೆ ಹಾಕಿಸಿದನು. "ದಯಮಾಡಿ ಎದ್ದು ನಗರಕ್ಕೆ ಬನ್ನಿ" ಎಂದ ರಾಜನ ಮಾತಿಗೆ " ರಾಜಾ ನಾನೂ ಬೆಸ್ತರಿಗೆ ಸೇರಿದ ವಸ್ತು. ನನ್ನ ಬೆಲೆಯನ್ನು ಇವರಿಗೆ ಕೊಟ್ಟು ನನ್ನನ್ನು ಬಿಡುಗಡೆಮಾಡಿಕೋ" ಎಂದುತ್ತರಿಸಿದನು ಆ ಮುನಿ. ಸಾವಿರ ಚಿನ್ನದ ವರಹಗಳನ್ನು ಕೊಡಲು ಮುಂದಾದಾಗ "ಛೆ| ನನ್ನ ಬೆಲೆ ಅಷ್ಟೇ ಅಲ್ಲ" ಎಂದು ಮುನಿ ನಿರಾಕರಿಸಿದನು. ರಾಜನು ಹತ್ತುಸಾವಿರ, ಲಕ್ಷ್ಯ, ಕೋಟಿ ಹೀಗೇ ಏರಿಸುತ್ತಾ ಹೋದರೂ ಮುನಿ "ಇದು ನನಗೆ ಸಮನಾದ ಬೆಲೆಯೇ ಅಲ್ಲ" ಎನ್ನುತ್ತಲೇ ಇದ್ದನು. ಅರ್ಧರಾಜ್ಯವನ್ನು ಕೊಡಲು ಮುಂದಾದ ದೊರೆಗೆ ಇಡೀ ರಾಜ್ಯವನ್ನೇ ಕೊಟ್ಟ ಅದು ತನ್ನ ಬೆಲೆಯಲ್ಲವೆಂದುಬಿಟ್ಟನು. " ರಾಜಾ ನಿನ್ನ ಜೊತೆಯಲ್ಲಿ ಬಂದ ಜ್ಞಾನಿಗಳನ್ನು ಅವರು ಹೇಳಿದಹಾಗೇ ಆಗಬಹುದು "ಎಂದನು ಚ್ಯವನ ಮಹರ್ಷಿ. ರಾನ ಪಕ್ಕದಲ್ಲಿ ನಿಂತಿದ್ದ ವಾನಪ್ರಸ್ಥನೊಬ್ಬ ಮುಂದೆಬಂದು "ರಾಜಾ ಒಂದು ಒಳ್ಳೆಯ ಹಸುವನ್ನು ತರಿಸಿ ಬೆಸ್ತರಿಗೆ ನೀಡು, ಅದೇ ಈ ಮುನಿಯ ನ್ಯಾಯವಾದ ಬೆಲೆ" ಎಂದನು. ರಾಜ ಹಾಗೇ ಮಾಡಲು, ಮುನಿ ಎದ್ದುನಿಂತು "ಇದೀಗ ಸರಿಹೋಯ್ತು ರಾಜಾ, ನನಗೆ ಸರಿಯಾದ ಬೆಲೆ ಎಂದರೆ ಗೋವು ಮಾತ್ರ" ಎಂದನು. ನಂತರ ಗೋಮಾತೆಯ ಗುಣಗಾನವನ್ನು ಆರಂಭಿಸದನು.

"ಗೋವಿಗೆ ಸಮನಾದ ಧನವಿಲ್ಲ. ಗೋವುಗಳನ್ನು ನೋಡುವುದು, ಹೊಗಳುವುದು, ಹೊಗಳಿಕೆಯನ್ನು ಕೇಳುವುದು, ಗೋದಾನ-ಇವು ಎಲ್ಲಾ ಪಾಪಗಳನ್ನೂ ಪರಿಹರಿಸುವ, ಮಂಗಳಕರವಾದ, ಸ್ತುತ್ಯವಾದ ಕರ್ಮಗಳು. ಗೋವುಗಳು ಯಾವಾಗಲೂ ಐಶ್ವರ್ಯಕ್ಕೆ ಮೂಲ. ಗೋವಿನಲ್ಲಿ ಪಾಪವಿಲ್ಲ. ಗೋವು ಯಜ್ಞದ ಕಣ್ಣು; ಯಜ್ಞದ ಮುಖ್ಯ ಸಾಧನ. ವೇದಮಂತ್ರಗಳೂ ಗೋವಿನಲ್ಲಿ ನೆಲೆಸಿವೆ. ದಿವ್ಯ ಮತ್ತು ಅವ್ಯಯವಾದ ಅಮೃತ ಗೋವಿನಲ್ಲಿ ನೆಲೆಸಿದೆ ಮತ್ತು ನಮಗಾಗಿ ಗೋವು ಅದನ್ನು ಸುರಿಸುತ್ತದೆ. ಗೋವು ತೇಜಸ್ಸಿನಲ್ಲಿ ಬೆಂಕಿಗೆ ಸಮಾನ. ಗೋವಿನಿಂದ ಪ್ರಾಣಿಗಳಿಗೆಲ್ಲ ಸುಖ. ಗೋವುಗಳು ನಿರ್ಭಯವಾಗಿ ಉಸಿರಾಡಲು ಅವಕಾಶವಿರುವ ದೇಶವು ಬೆಳಗುತ್ತದೆ. ಗೋವೇ ಸ್ವರ್ಗಕ್ಕೆ ಸೋಪಾನ; ಸ್ವರ್ಗದಲ್ಲಿಯೂ ಗೋವು ಪೂಜ್ಯ. ಗೋವುಗಳು ಕಾಮಧೇನುಗಳು. ತನ್ನ ಹಾಲಿನಿಂದಲೂ ಹವಿಸ್ಸುಗಳಿಂದಲೂ ಪ್ರಜೆಗಳನ್ನು ಪೋಷಿಸುವಳು. ಎತ್ತುಗಳು ಕೃಷಿಕೆಲಸಗಳಲ್ಲಿ, ಭಾರ ಎಳೆಯುವುದರಲ್ಲಿ ಸಹಕಾರಿಗಳು. ತಮ್ಮ ಹಸಿವು, ನೀರಡಿಕೆ, ಬಳಲಿಕೆಗಳನ್ನು ಸಹಿಸಿಕೊಂಡು ನಮಗಾಗಿ ಅವು ಬದುಕುತ್ತವೆ. ಈ ವರೆಗೆ ನಾನು ಹೇಳಿದ್ದು ಗೋವಿನ ಮಹಿಮೆಯಲ್ಲಿ ಒಂದು ಭಾಗಮಾತ್ರ. ಅಷ್ಟನ್ನೇ ನಾನು ಹೇಳಲು ಸಾಧ್ಯ, ಪೂರ್ತಿ ಹೇಳಿ ಮುಗಿಸಲು ಸಾಧ್ಯವಿಲ್ಲ"

---ಇದು ಮಹಾಭಾರತದ ಅನುಶಾಸನದ ೫೧ನೇ ಅಧ್ಯಾಯದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.    

ಒಂದು ಸಂಗತಿಯನ್ನು ನಾನು ವೈಯ್ಯಕ್ತಿಕವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ನನ್ನ ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸುಮಾರು ೩೦-೩೨ ರಷ್ಟು ಹಸುಕರುಗಳಿದ್ದವು. ದೀಪಾವಳಿಯಲ್ಲಿ ಅಭ್ಯಂಜನದ ದಿನ ಬೆಳಗಿನ ಜಾವ ಅಜ್ಜಿ ಮನೆಯಿಂದ ದೀಪಮುಡಿಸಿ ಅದನ್ನು ಆಕ್ಕಿ ತುಂಬಿದ ಪಾತ್ರೆಯಲ್ಲಿ ಇಟ್ಟುಕೊಂಡೊಯ್ದು ಕೊಟ್ಟಿಗೆಯಲ್ಲಿ ಇಳಿಸಿ, ಎಲ್ಲಾ ಗೋವುಗಳಿಗೂ ಎಣ್ಣೆಯನ್ನು ಹಚ್ಚುತ್ತಿದ್ದರು. ಹಣೆಗೆ ಅರಿಶಿನ, ಕುಂಕುಮ ಮತ್ತು ಮಂಗಲ ಸೇಸೆಗಳನ್ನು ಹಚ್ಚುತ್ತಿದ್ದರು. ಪಾದಗಳಿಗೂ ಮಂಗಾಕ್ ಮತ್ತು ಹೂವುಗಳನ್ನು ಹಾಕಿ ನಮಸ್ಕರಿಸಿ ತಿನ್ನಲು ತೊಳೆದ ಅಕ್ಕಿಯನ್ನು ಬಾಳೆಲೆಯಲ್ಲಿ ಸುತ್ತಿ ಕೊಡುತ್ತಿದ್ದರು. ಅಂದಿನಿಂದ ಆರಂಭಗೊಳ್ಳುವ ದೀಪಾವಳಿ ಗೋಪೂಜೆ, ಮಾರನೇ ದಿನ ಅಮಾವಾಸ್ಯೆಯ ರಾತ್ರಿಯಲ್ಲಿ ವಿಶಿಷ್ಟ ತಿನಿಸಾದ ಕರಿಕೆಸವೆಯ ಕಡುಬನ್ನು ಮಾಡಿ, ಗೋವುಗಳನ್ನು ಪೂಜಿಸಿ, ಅವುಗಳಿಗೆ ತಿನ್ನಿಸುವುದರ ಮೂಲಕ ನಡೆಯುತ್ತಿತ್ತು. ಬಲಿಪಾಡ್ಯದ ದಿನ ಮಹಾಪೂಜೆಯ ಸಂಭ್ರಮ. ಅಂದು ಬೆಳಗಿನಜಾವ ಎಲ್ಲಾ ಗೋವುಗಳನ್ನೂ ಸ್ನಾನಮಾಡಿಸಿ ಮೈಗೆ ಮತ್ತು ಕೊಂಬುಗಳಿಗೆ ಕೆಮ್ಮಣ್ಣು ಮತ್ತು ಶೇಡಿ ಗಳಿಂದ ಹುಬ್ಬು ಹಾಕುತ್ತಿದ್ದರು. ಕೊರಳಿಗೆ ಗಂಟೆಗಳ ಸರ ಮತ್ತು ಹೊಸ ಹಗ್ಗಗಳನ್ನು ಹಾಕಲಾಗುತ್ತಿತ್ತು. ನಮ್ಮಲ್ಲಿನ ಪದ್ಧತಿಯಂತೇ ವೀಳ್ಯದೆಲೆ, ಅಡಕೆ, ಶಿಂಗಾರ, ದನಮಾಲೆ ಹೂವು ಎಂಬ ವಿಶಿಷ್ಟ ಪರಿಮಳಸೂಸುವ ಕಾಡು ಹೂವುಗಳ ತೆನೆ, ಪಚ್ಚೆತೆನೆ ಇತ್ಯಾದಿ ಹಲವು ಸಾಮಾಗ್ರಿಗಳಿಂದ ಕೊರಳನ್ನು ಅಲಂಕರಿಸುತ್ತಿದ್ದರು. ಶಾಸ್ತ್ರೋಕ್ತವಾಗಿ ಗಣಪತಿ ಪೂಜೆಯೊಂದಿಗೆ ಆರಂಭಗೊಳ್ಳುವ ಪೂಜೆ ಅಲಂಕೃತಗೊಂಡಿರುವ ಗೋವುಗಳ ಪಾದಗಳನ್ನು ತೊಳೆಸುವ ಸಾಂಕೇತಿಕ ಕ್ರಿಯೆಗಳೊಂದಿಗೆ ಮುಂದುವರಿಯುತ್ತಿತ್ತು. ಅನ್ನ-ತುಪ್ಪ-ಸಕ್ಕರೆ[ಅಥವಾ ಕಲ್ಲುಸಕ್ಕರೆ ಅಥವಾ ಬೆಲ್ಲ]-ಕಾಯಿತುರಿ-ಬಾಳೇಹಣ್ಣು ಮತ್ತು ಯಾಲಕ್ಕಿ ಭರಿತ ಸುವಾಸನೆಯುಳ್ಳ ಸುಮಧುರ ಗೋಗ್ರಾಸವನ್ನು ತಿನ್ನಲು ಕೊಡಲಾಗುತ್ತಿತ್ತು. ತಿಂದಾದ ನಂತರ ಅವುಗಳ ಬಾಯನ್ನು ಉದ್ದರಣೆಯ ನೀರಿನಿಂದ ತೊಳೆದ ಸಂಕೇತ ಮುಗಿದ ನಂತರ ಮಹಾಮಂಗಲಾರತಿ ಜರುಗುತ್ತಿತ್ತು. ನಂತರ ಅವುಗಳನ್ನು ಮೇಯಲು ಗೋಮಾಳಕ್ಕೆ ಬಿಡುವ ಕಾರ್ಯಕ್ರಮ ಶುಭಮುಹೂರ್ತದಲ್ಲಿ ನಡೆಯುತ್ತಿತ್ತು. ಹೊಲದಲ್ಲಿ, ಗೋಮಾಳದಲ್ಲಿ ನಮ್ಮ ದನಕರುಗಳನ್ನು ತಿನ್ನದಂತೇ ಪ್ರಾರ್ಥಿಸಿ ಹುಲಿಯಪ್ಪನ ಗುತ್ತುಗಳಿಗೆ ಪೂಜೆ ನಡೆಯುತ್ತಿತ್ತು. ಊರ ಆಯಕಟ್ಟಿನ ಸ್ಥಳಗಳಲ್ಲಿ ನೆಲೆಸಿರುವ ಚೌಡಿ-ಮಾಸ್ತಿ-ಜಟ್ಗ[ಜಟ್ಟುಗ] ಇತ್ಯಾದಿ ದೇವತೆಗಳಿಗೆ ವಿಶೇಷ ಪೂಜೆ-ಪ್ರಾರ್ಥನೆ ಅರ್ಪಣೆಯಾಗಿ ದನಕರುಗಳ ಬಾಲಕ್ಕೆ ಒಂದರಂತೇ ತೆಂಗಿನಕಾಯಿ ಸಮರ್ಪಿಸಿ ಅವುಗಳ ರಕ್ಷಣೆಯೆ ಭಾರವನ್ನು ಆ ಎಲ್ಲಾ ದೇವತೆಗಳಿಗೆ ವಹಿಸಲಾಗುತ್ತಿತ್ತು. ನೀವು ನಂಬಿ ಬಿಡಿ: ಗೋಮಾಳಕ್ಕೆ ಮೇಯಲು ಹೋಗಿ ತಪ್ಪಿಸಿಕೊಂಡ ದನ, ಚೌಡಿಗೆ ಪೂಜೆಯ ಹರಕೆ ಗೌರವ ಅರ್ಪಣೆಯಾದ ಮರುಘಳಿಗೆಯಲ್ಲೇ ಕೂಗುತ್ತಾ ಬಂದ ಘಟನೆಗಳನ್ನು ನಾನು ಸ್ವತಃ ಕಂಡಿದ್ದಿದೆ. ಬಲಿಪಾಡ್ಯದ ಸಂಜೆ  ಐದು ಗಂಟೆಗೆ ಕೊಟ್ಟಿಗೆಗೆ ಮರಳುವ ಹಸುಕರುಗಳಿಗೆ ಮಲಗಿಸಿದ ಕತ್ತಿ ಮತ್ತು ಹಾನ [ಓಕುಳಿ] ತೋರಿಸುವಲ್ಲಿಗೆ ದೀಪಾವಳಿ ಗೋಪೂಜೆಯ ಕಾರ್ಯ ಮುಗಿಯುತ್ತಿತ್ತು. [ಇಲ್ಲಿ ಕತ್ತಿಯನ್ನು ತೋರಿಸುವುದು  ಬಹುಶಃ ಅವುಗಳ ರಕ್ಷಣೆಯನ್ನು ನಾವು ಮಾಡುತ್ತೇವೆ ಎಂದು ಹೇಳುವ ಸಂಕೇತ ಇರಬಹುದೇ?] ಇವ್ತಿಗೂ ಇಂತ ಕಾರ್ಯಕ್ರಮಗಳು ನಡೆದರೂ ಗೋಮಾಳಗಳು ಇಲ್ಲವಾಗಿವೆ.

ಗೋ-ಗೀತೆಯೊಂದು ಹೀಗಿದೆ:

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೆ ಬಿಟ್ಟರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದು ನಾನಮೃತವೀವೆ
ಅದನುಂಡು ನನಗೆರಡು ಬಗೆವ ಮಾನವ ಕೇಳು
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಹಾಯ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯಿತು ಹೊಡೆಯೇ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಗೋವಿನ ಮನೋಗತವನ್ನು ಕವಿ ಹೀಗೆ ಬಣ್ಣಿಸಿದ್ದಾರೆ. ಪ್ರಾಯಶಃ ಗೋವು ಹೀಗೂ ಯೋಚಿಸಲಾರದು, ಯಾಕೆಂದರೆ ಗೋವೆಂದರೇ ನಿಷ್ಕಲ್ಮಶ ಮನಸ್ಸು, ದಯೆ-ಕಾರುಣ್ಯಗಳ ಅಗಾಧ ಸಾಗರ. ಗೋವುಗಳ ಬಗ್ಗೆ ಸಹಸ್ರಾರು ಘಟನೆಗಳು ನಮ್ಮ ಪ್ರಾಗೈತಿಹಾಸದುದ್ದಕ್ಕೂ ದೊರೆಯುತ್ತವೆ. ಗೋವುಗಳಿಲ್ಲದೇ ಮಾನವ ಬದುಕು ಸಾಗುವುದಿಲ್ಲ!  ಗೋವು ಯಾವುದಕ್ಕಿಲ್ಲ? ಇವತ್ತಿನ ವಿಜ್ಞಾನ ಪಂಚಗವ್ಯವನ್ನೂ ಪಂಚಾಮೃತವನ್ನೂ ಹೊಗಳುತ್ತಿದೆ ಯಾಕೆಂದರೆ ಅವೆರಡರ ಪ್ರಾಶನದಿಂದ ದೇಹದಲ್ಲಿ ಇನ್ನಿಲ್ಲದ ಬದಲಾವಣೆಗಳು ನಡೆಯುತ್ತವೆ. ಒಂದು ಅಮೃತತುಲ್ಯವಾದರೆ ಇನ್ನೊಂದು ಅಘನಾಶಿನಿಯಾಗಿದೆ-ಶರೀರದಲ್ಲಿರುವ ಕಲ್ಮಷಗಳನ್ನು ತೆಗೆದುಹಾಕುತ್ತದೆ. ಇವುಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿದವರಿಗೆ ಇವುಗಳ ಫಲಾನುಭವ ದೊರೆತಿರುತ್ತದೆ.

ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕಂ |
ಪ್ರಾಶನಂ ಪಂಚಗವ್ಯಸ್ಯ ದಹತು ಅಗ್ನಿರಿವ ಇಂಧನಂ ||

ನನ್ನ ಈ ದೇಹದಲ್ಲಿ ಚರ್ಮದಿಂದ ಮೊದಲುಮಾಡಿ ಮೂಳೆಯವರೆಗೆ ಏನೇನು ಪಾಪವು ಸೇರಿಕೊಂಡಿದೆಯೋ ಅದೆಲ್ಲವನ್ನೂ ಬೆಂಕಿಯು ಕಟ್ಟಿಗೆಯನ್ನು ಸುಡುವಂತೇ ಈ ಪಂಚಗವ್ಯವು ಸುಟ್ಟುಹಾಕಲಿ ಎಂಬುದು ಮೇಲಿನ ಶ್ಲೋಕದ ಅರ್ಥ. ಗುಣಪಡಿಸಲಾರದ ಹಲವು ರೋಗಗಳು ಭಾರತೀಯ ತಳಿಯ ಗೋವಿನ ಮೂತ್ರ ಸೇವನೆಯ ಚಿಕಿತ್ಸೆಯಿಂದ, ಪಂಚಗವ್ಯ ಚಿಕಿತ್ಸೆಯಿಂದ ವಾಸಿಯಾದ ದಾಖಲೆಗಳಿವೆ. ಗೋಮೂತ್ರ ಅರಿಶಿನ ಕಾಮಾಲೆಯ[ಜಾಂಡಿಸ್]ನ್ನು ತೊಡೆದುಹಾಕುತ್ತದೆ. ಆಯುರ್ವೇದದಲ್ಲಿ ಗೋವಿನ ಉಪಯೋಗದ ವಿಸ್ತಾರ ಬಹಳವಾಗಿದೆ. ಇಂಥಾ ಗೋವಿಗೆ ನಮೆಲ್ಲರ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುವುದರ ಜೊತೆಗೆ ಗೋವುಗಳ ರಕ್ಷಣೆ, ಪಾಲನೆ ನಮ್ಮೆಲ್ಲರ ದೈನಂದಿನ ಚಟುವಟಿಕೆಯ ಭಾಗವಾಗಬೇಕಾಗಿದೆ; ನೇರವಾಗಿ ಮಾಡಲಾಗದ ಅನಿವಾರ್ಯತೆಯಲ್ಲಿ ಮಾಡುವ ಸಂಘ-ಸಂಸ್ಥೆಗಳಿಗೆ ಸಹಕಾರವನ್ನೋ ಸಹಾಯಧನವನ್ನೋ ಕೊಡುವ ಮೂಲಕ ಗೋವುಗಳ ಪುನರ್ವಸತಿ ಮತ್ತು ಅವುಗಳ ಹತ್ಯೆ ನಿಷೇಧಿಸುವತ್ತ ನಾವು ಮುನ್ನಡೆಯಬೇಕಾಗಿದೆ. ವಿಪರ್ಯಾಸವೆಂದರೆ ಯಜ್ಞಭೂಮಿಯಾಗಿದ್ದ ಭಾರತದಲ್ಲೇ, ಗೋವುಗಳಿಗೆ ಅನಾದಿಯಿಂದಲೂ ಕೊಟ್ಟ ಮರ್ಯಾದೆಗಳನ್ನು ಹಿಂಪಡೆದು ಅವುಗಳನ್ನು ವಧಿಸಲೂ ಭುಂಜಿಸಲೂ ಕೆಲವರಿಗೆ ಅಧಿಕಾರ ನೀಡಿರುವುದು-ನೆನಪಿಡಿ ಈ ಲೇಖನ ಬರೆಯುವ ಹೊತ್ತಿನಲ್ಲೂ ಭಾರತದಲ್ಲಿ ನಿಮಿಷಕ್ಕೆ ೧೫,೦೦೦ ಹಸುಗಳು ಬಲಿಯಾಗುತ್ತಿರುತ್ತವೆ! ಎಂಥಾ ದುರ್ಭರ ಕಾಲ ಎಂಬುದನ್ನು ಊಹಿಸಿಕೊಳ್ಳಿ. ತಿನ್ನುತ್ತೇನೆ ಎಂಬ ಹುಲಿಯನ್ನಾದರೂ ನಿಗ್ರಹಿಸಬಹುದು ತಿನ್ನುವ ಕಟುಕ ಮನುಜರನ್ನು ನಿಗ್ರಹಿಸುವುದು ಕಷ್ಟ; ಅಂಥವರ ಮನೋಸ್ಥಿತಿ ಬದಲಾಗಲಿ ಎಂದು ದೇವರಲ್ಲೇ ಮೊರೆಯಿಡಬೇಕು, ದನ ತಿನ್ನುವವರಿಗೆ ಕೋಳಿ ಜ್ವರ ರೀತಿ ಏನಾದರೂ ಕಾಯಿಲೆ ಬಾಧಿಸಿದರೆ ಆಗಲಾದರೂ ದನಗಳಿಗೆ ನಿರುಮ್ಮಳ ಸಾಧ್ಯವಾಗಬಹುದು.

ಭಗವಾನ್ ವಶಿಷ್ಠರ ಈ ಹೇಳಿಕೆಯೊಂದಿಗೆ ದೀಪಾವಳಿಯ ಸಂಪೂರ್ಣ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ :

ಗಾವೋ ಮಾಂ ಉಪತಿಷ್ಠಂತು ಹೇಮಶೃಂಗ್ಯಃ ಪಯೋಮುಚಃ
ಸುರಭ್ಯಃ ಸೌರಭೇಯ್ಯಶ್ಚ ಸರಿತಃ ಸಾಗರಂ ಯಥಾ |
ಗಾ ವೈ ಪಶ್ಯಾಮ್ಯಹಂ ನಿತ್ಯಂ ಗಾವಃ ಪಶ್ಯಂತು ಮಾಂ ಸದಾ
ಗಾವೋsಸ್ಮಾಕಂ ವಯಂ ತಾಸಾಂ ಯತೋ ಗಾವಃ ತತೋ ವಯಂ ||

ನದಿಗಳು ಸಮುದ್ರದೆಡೆಗೆ ಓಡಿಹೋಗಿ ಸೇರುವಂತೇ, ಹಸುಗಳು ನನ್ನಬಳಿಗೆ ಓಡಿಬರಲಿ....ನಾನು ನಿತ್ಯವೂ ಹಸುಗಳನ್ನು ನೋಡುವೆನು; ಹಾಗೆಯೇ ಹಸುಗಳೂ ನನ್ನನ್ನು ನೋಡಲಿ. ಹಸುಗಳು ನಮ್ಮವು, ನಾವು ಹಸುಗಳಿಗೆ ಸೇರಿದವರು.ಎಲ್ಲಿ ಹಸುಗಳಿರುವವೋ ಅಲ್ಲಿ ನಾವು ಇರುವೆವು.

Friday, November 9, 2012

ನೋವು ಎಲ್ಲರಿಗೂ ಒಂದೇ

ಿತ್ರಋಣ: ಅಂತರ್ಜಾಲ
ನೋವು ಎಲ್ಲರಿಗೂ ಒಂದೇ
ಅದೊಂದು ಊರು. ಒಂದು ಕಾಲಕ್ಕೆ ಡಾಂಬರು ಕಾಣದ ಮಣ್ಣು ರಸ್ತೆಯ ಊರು. ಸುಮಾರು ೪೫ ವರ್ಷಗಳ ಹಿಂದೆ ಅಲ್ಲಿಗೆ ಡಾಂಬರು ರಸ್ತೆ ಬಂತು. ರಸ್ತೆ ರಾಜ್ಯ ಹೆದ್ದಾರಿಯಾಗಿ ಮಾರ್ಪಟ್ಟಿತು. ಬರುಬರುತ್ತಾ ತಿರುಗುವ ಜನರ ಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಜಾಸ್ತಿ ಆದುದರಿಂದ ಅದೀಗ ರಾಷ್ಟ್ರೀಯ ಹೆದ್ದಾರಿಯಾಗಿದೆ. ರಸ್ತೆ ಅಗಲೀಕರಣವಾಗಿದೆ. ಈ ಕಾರ್ಯದ ನಂತರ ಜನ-ಜಾನುವಾರುಗಳು ನಿರಂತರ ಸಾವಿಗೀಡಾಗುತ್ತಲೇ ಇದ್ದಾರೆ! ರಸ್ತೆಯಲ್ಲಿ ಯಾವ ಕೊಳ್ಳಿ ದೆವ್ವವೂ ಇಲ್ಲ!! ಆದರೆ ವಾಹನ ಚಾಲಕರ ದರ್ಪದ ವೇಗ ಮತ್ತು ರಸ್ತೆಗಳಲ್ಲಿನ ಹೊಂಡಗಳನ್ನು ತಪ್ಪಿಸಿ ಗಾಡಿ ಚಲಾಯಿಸುವ ವಿಧಾನ ಇದಕ್ಕೆ ಕಾರಣವಾಗಿದೆ. ೮-೧೦ ದಿನಗಳ ಹಿಂದೆ ನಡೆದ ಒಂದು ಘಟನೆಯಿಂದ ಮನಸ್ಸಿಗೆ ಇನ್ನಿಲ್ಲದ ನೋವುಂಟಾಯ್ತು. ಭಿಕ್ಷುಕ ದಂಪತಿ ಮಗನೊಂದಿಗೆ ರಸ್ತೆ ದಾಟುತ್ತಿದ್ದರು. ಭಿಕ್ಷುಕಿಯ ಬಗಲಲ್ಲಿ ಚಿಕ್ಕದೊಂದು ಮಗುವಿತ್ತು. ಇನ್ನೊಂದು ಕೈಯ್ಯಲ್ಲಿ  ಮಗನ ಕೈಹಿಡಿದು ದಾಟುತ್ತಿದ್ದರೆ ಆಕೆಯ ಗಂಡ ಜೋಳಿಗೆ ವಗೈರೆ ಸಾಮಾನುಗಳನ್ನು ಹೊತ್ತಿದ್ದ. ಒಂದು ನಿಮಿಷ ಕಳೆದರೆ ಅವರು ರಸ್ತೆ ದಾಟಿ ಸಾಗಿಹೋಗುತ್ತಿದ್ದರು, ಆದರೆ.....ಆದರೆ ಕೊನೆಯ ನಿಮಿಷದಲ್ಲಿ ಹಠಾತ್ತನೇ ಬಡಿದ ಲಕ್ಸುರಿ ಬಸ್ಸಿನ ಚಕ್ರ ಮೈಮೇಲೆ ಹಾದುಹೋಗಿ ಬಾಲಕ ಸ್ಥಳದಲ್ಲೇ ಅಪ್ಪಚ್ಚಿಯಾಗಿಹೋದ. ಹಸಿದ ಹೊಟ್ಟೆಯಲ್ಲಿದ್ದನೋ, ನಿತ್ರಾಣನಾಗಿ ಹೆಜ್ಜೆ ಹಾಕುತ್ತಿದ್ದನೋ ದೇವರೇಬಲ್ಲ. ಅಮ್ಮ ಕರೆದೊಯ್ಯುವೆಡೆಗೆ ಹೆಜ್ಜೆ ಹಾಕುತ್ತಿದ್ದ. ವೇಗದ ಆವೇಗದಲ್ಲಿ ರಸ್ತೆಯಲ್ಲಿರುವ ಹೊಂಡವನ್ನು ತಪ್ಪಿಸಲು ಹೋಗಿ ಚಾಲಕ ಪಾದಚಾರಿಗಳೆಡೆಗೆ ಹಾಯಿಸಿದ್ದಾನೆ. ವೇಗ ಮಿತಿಯಲ್ಲಿರುತ್ತಿದ್ದರೆ ನಿಧಾನವಾಗಿ ದಾಟಬಹುದಾದ ಹೊಂಡದ ರಸ್ತೆಯದು, ಮಿತಿಮೀರಿದ ವೇಗ ಭಿಕ್ಷುಕ ಬಾಲಕನ ಸಾವಿಗೆ ಕಾರಣವಾಯ್ತು. ಚಾಲಕ ಓಡಿ ತಪ್ಪಿಸಿಕೊಂಡ, ಹೇಳಿಕೇಳಿ ಭಿಕ್ಷುಕರು-ಅವರ ಆರ್ತನಾದ ಕೇಳುವವರಾರು ? ಬಂಧು-ಬಾಂಧವರು ಎಂದು ಯಾರಾದರೂ ಅಷ್ಟಾಗಿ ಇರುತ್ತಾರೆಯೇ? ಇದ್ದರೂ ನಾಕುಜನರ ಮುಂದೆ ಮಾತನಾಡುವ ಧೈರ್ಯ ಅವರಿಗೆ ಬರುತ್ತದೆಯೇ? 

ಭಿಕ್ಷುಕರಿಗೆ ಎಲ್ಲಿಯ ವ್ಯವಸ್ಥೆ? ಅವರೂ ಕೆಲಭಾಗ ಸನ್ಯಾಸಿಗಳ ಹಾಗೆಯೇ. ಸನ್ಯಾಸಿಗಳು ತ್ಯಾಗ ಮನೋಭಾವದಿಂದ ವ್ಯವಸ್ಥೆಗಳನ್ನು ತ್ಯಜಿಸಿದ್ದರೆ ಭಿಕ್ಷುಕರು ಇಲ್ಲದೇಯೇ ಬದುಕುವ ಅನಿವಾರ್ಯತೆ ಉಳ್ಳವರು. ಭಿಕ್ಷುಕರಾಗುವುದು ಯಾರಿಗೂ ಬಹುಶಃ ಇಷ್ಟದ ಕೆಲಸವಾಗಿರಲಿಕ್ಕಿಲ್ಲ. ಆದರೆ ಭಿಕ್ಷುಕರಿಗೆ ಮಕ್ಕಳಾಗಿ ಜನಿಸಿದವರ ಪಾಡು ಹಾಗೇ ಮುಂದುವರಿಯುವಂತೇ ಪ್ರೇರೇಪಿಸುತ್ತದೆ. ಅವರಿಗೆ ಅನ್ನ-ಬಟ್ಟೆಗಳ ಪೂರೈಕೆಗೆ ನಿಗದಿತ ವ್ಯವಸ್ಥೆ ಇಲ್ಲ, ಕೆಲಸಮಾಡಲು ಬರುವುದಿಲ್ಲ, ವಿದ್ಯೆ-ಉದ್ಯೋಗದ ಆಕಾಂಕ್ಷೆಯಂತೂ ಬಹುದೂರ. ಪ್ರಾಣಿಗಳಾದರೂ ಹುಟ್ಟಬಹುದು ಭಿಕ್ಷುಕರಾಗಬಾರದು ಎಂಬುದು ಒಂದು ಹೇಳಿಕೆ.

|| ವಿನಾ ದೈನ್ಯೇನ ಜೀವನಂ || ---ಎಂದಿದ್ದಾರೆ ಹಿರಿಯರು. ಉದರಂಭರಣೆಗಾಗಿ ದೇಹಿ ಎನ್ನಬಾರದಂತಹ ಸ್ಥಿತಿಯಲ್ಲಿ ಇಡಿಸು ಎಂಬುದೇ ಅದರ ಅರ್ಥ. ಮನುಷ್ಯನಾಗಿ ಹುಟ್ಟಿದಮೇಲೆ ಉದರ ಪೋಷಣೆಗಾಗಿ ದೇಹಿ ಎನ್ನದೇ ಕರ್ತವ್ಯಪರನಾಗಿರಬೇಕು ಎನ್ನುತ್ತದೆ ಆ ಉಲ್ಲೇಖ. ಹಾಗೆ ಮಾಡಲು ಕೆಲವರಿಗೆ ಅವರ ಮನೋಧರ್ಮ ಒಪ್ಪುವುದಿಲ್ಲ, ಇನ್ನು ಕೆಲವರು ಆರ್ಥಿಕವಾಗಿ ಸೋತು ಎಲ್ಲವನ್ನೂ ಕಳೆದುಕೊಂಡು ಅನಿವಾರ್ಯತೆಯಲ್ಲಿ ಭಿಕ್ಷುಕರಾಗಿಬಿಡುತ್ತಾರೆ. ಭಿಕ್ಷುಕರಲ್ಲೇ ಸುಧಾರಿಸಿ ಸರಕಾರೀ ನೌಕರಿ ಹಿಡಿದು ಕುಟುಂಬವನ್ನೇ ಉದ್ಧರಿಸಿದ ಜನರನ್ನೂ ಕೂಡ ನೋಡಿದ್ದೇನೆ. ಭಿಕ್ಷುಕರಾದವರು ಮೇಲೇಳಲು ಅವರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಕೈಯ್ಯಲ್ಲಿ ಬಿಡಿಗಾಸೂ ಇಲ್ಲದೇ ಈ ಕಾಲದಲ್ಲಿ ಏನಾದರೂ ಮಾಡಲು ಸಾಧ್ಯವೇ? ಇನ್ನೊಂದು ರೀತಿ ಹೇಳುವುದಾದರೆ ಅವರು ಅದಕ್ಕೇ ಹೊಂದಿಕೊಂಡುಬಿಡುತ್ತಾರೆ. ಬೇಡುವುದರಲ್ಲಿ ಮಾನಾಪಮಾನದ ಪ್ರಶ್ನೆ ಅವರಿಗೆ ಕಾಡುವುದಿಲ್ಲ. ಕೊಟ್ಟರೂ ಸರಿ ಕೊಡದಿದ್ದರೂ ಸರಿ ಕೇಳುತ್ತಾರೆ; ಉಟ್ಟರೂ ಸರಿ ಉಡದಿದ್ದರೂ ಸರಿ ಯಾವುದೋ ಸಿಕ್ಕ ಬಟ್ಟೆಗೇ ಸೀಮಿತಗೊಳಿಸಿಕೊಳ್ಳುತ್ತಾರೆ. ಅದಕ್ಕೇ ಅಲ್ಲವೇ ’ಬೆಗ್ಗರ್ಸ್ ಆರ್ ನಾಟ್ ಚೂಸರ್ಸ್’ ಎಂಬ ಆಂಗ್ಲ ಗಾದೆ ಹುಟ್ಟಿಕೊಂಡಿದ್ದು?  ಇಂದಿನದು ಇಂದಿಗೆ ನಾಳೆಯದು ನಾಳೆಗೆ. ಕಟ್ಟಿದ ಮನೆಯಿಲ್ಲ, ಹುಟ್ಟಿದ ಊರೆಂಬ ಹಂಗೂ ಇಲ್ಲ, ಇಟ್ಹಾಂಗೆ ಇರುವೆನೋ ಶಿವನೇ ಎನ್ನುವಂತೇ ಊರಿಂದ ಊರಿಗೆ ಊರಿಂದ ಊರಿಗೆ ಸಾಗುತ್ತಾ, ಜಾಗ ಸಿಕ್ಕಲ್ಲಿ ತಂಬು ಹೂಡುತ್ತಾ, ಜೋಳಿಗೆ ಇಳಿಸಿ-ವಾರಗಳ ಕಾಲ ಇದ್ದು ಮತ್ತೆ ಮುಂದಿನ ಊರಿಗೆ ಪಯಣ.

ಬಗಲಿಗೆ ಜೋಳಿಗೆಯಲ್ಲಿ ಜೋತುಬಿದ್ದ ಪಾಪದ ಕಂದಮ್ಮಗಳನ್ನು ಹೊತ್ತು ಬೇಡುವ ಹೆಂಗಸರನ್ನು ಕಂಡಾಗ ಆ ಕಂದಮ್ಮಗಳ ಹೊಟ್ಟೆಗೆ ಕೊಡುತ್ತಾರೋ ಇಲ್ಲವೋ ಎನಿಸುತ್ತದೆ. ಬೆಳಿಗ್ಗೆ ಎದ್ದರೆ ತಿಂಡಿ ಸಿಗುವುದೆಂದು ಖಂಡಿತಾ ನಂಬಲಾಗದು. ಸ್ನಾನ-ಶೌಚ-ಅನುಪಾನ ಊಹುಂ ಆದರೂ ಬಿಟ್ಟರೂ ಒಂದೇ. ಹಬ್ಬ-ಹರಿದಿನಗಳಲ್ಲಿ ನಮ್ಮೆಲ್ಲರ ಮನೆಗಳಲ್ಲಿ ಕಷ್ಟವೋ ಸುಖವೋ ಇದ್ದುದರಲ್ಲಿ ನಾವು ಏನನ್ನೋ ಮಾಡಿಕೊಳ್ಳುತ್ತೇವೆ, ಭಿಕ್ಷುಕರಿಗೆ ಹಬ್ಬವೇ ಹರಿದಿನವೇ?  ನೂರೆಂಟು ರೀತಿಯ ಶುದ್ಧೀಕರಣ ಯಂತ್ರಗಳಲ್ಲಿ ಶುದ್ಧಗೊಂಡರೂ ಕುಡಿಯುವ ಮೊದಲು ಮತ್ತಷ್ಟು ಯೋಚಿಸಿ ನೀರು ಕುಡಿಯುವ ಜನ ನಾವು. ಸಿಕ್ಕಿದಲ್ಲಿ ಸಿಕ್ಕರೀತಿಯಲ್ಲೇ ಯಾವ ನೀರನ್ನಾದರೂ ಕುಡಿಯುವ ಜನ ಭಿಕ್ಷುಕರು. ಬಿಸಿಲು, ಮಳೆ, ಚಳಿ ನಮ್ಮಂತೇ ಅವರನ್ನೂ ಬಾಧಿಸುತ್ತವೆ. ನಮಗೆಲ್ಲಾ ಬೆಳಕು ನೀಡುವ ಸೂರ್ಯ-ಚಂದ್ರರೇ ಅವರುಗಳಿಗೂ ಬೆಳಕು ನೀಡುತ್ತಾರೆ. ಕಾಯಿಲೆ-ಕಸಾಲೆ ನಮಗೆಲ್ಲಾ ಇರುವಂತೇ ಅವರಿಗೂ ಬರುವುದಿಲ್ಲವೇ? ಬರುತ್ತದೆ, ಅವರ ಸಾವು-ನೋವನ್ನು ಕೇಳಲು ನಾಗರಿಕ ಸಮಾಜ ಸಿದ್ಧವಿದೆಯೇ? ಹೀಗಾಗಿ ಅವರಲ್ಲಿನ ಸಾವು-ನೋವುಗಳ ಸುದ್ದಿ ಎಲ್ಲೂ ದೊಡ್ಡ ಸುದ್ದಿಯಾಗುವುದಿಲ್ಲ. ನಾಗರಿಕ ಸಮಾಜದಲ್ಲಿ ಸಾಕಿದ ನಾಯಿ ಸತ್ತರೂ ಟಿವಿಯಲ್ಲಿ ಸುದ್ದಿ ಬರುತ್ತದೆ, ಬರಬಹುದು. ಆದರೆ ಭಿಕ್ಷುಕರಾಗಿ ಸತ್ತರೆ, ನೊಂದರೆ ಅದು ಲೆಕ್ಕಕ್ಕೆ ಬರುವ ವಿಷಯವಲ್ಲ. ಜನ್ಮಾಂತರಗಳ ಕರ್ಮಬಂಧನದಿಂದ ಭಿಕ್ಷುಕರಾಗಿ ಜನಿಸುತ್ತಾರೆ- ಹಾಗೇ ಜೀವನ ಸಾಗಿಸುತ್ತಾರೆ.   

ಮನುಷ್ಯ ಯಾವುದೇ ವೃತ್ತಿಯನ್ನು ಮಾಡಲಿ, ಇನ್ನೊಂದು ಜೀವಕ್ಕೆ ತನ್ನಿಂದ ಘಾಸಿಯಾಗದಂತೇ, ಹಾನಿಯಾಗದಂತೇ ಬದುಕಬೇಕೆಂಬುದು ಹಿಂದೂ ಜೀವನದ ನೀತಿ. ಸೊಳ್ಳೆ-ತಿಗಣೆ ಇತ್ಯಾದಿಗಳ ಕಡಿತಕ್ಕೆ ಒಳಗಾಗಿ ಅವುಗಳನ್ನು ಸಾಯಿಸುತ್ತೇವೆ. ಇಲಿ,ಇರುವೆ-ಜಿರಲೆಗಳನ್ನೂ ಕೆಲವೊಮ್ಮೆಅನಿವಾರ್ಯವಾಗಿ ಸಾಯಿಸುತ್ತೇವೆ. ಹಾಗಾದರೆ ಅವುಗಳೂ ಜೀವಗಳಲ್ಲವೇ? ಹೌದು. ಅವುಗಳಿಂದ ನಮಗೆ ಉಂಟಾಗುವ ಬಾಧೆ ಅಧಿಭೌತಿಕ ತಾಪ--ತಾಪತ್ರಯಗಳಲ್ಲಿ ಒಂದು. ಹೀಗಿದ್ದೂ ಅವುಗಳನ್ನೂ ಆದಷ್ಟರ ಮಟ್ಟಿಗೆ ಘಾಸಿಗೊಳಿಸಬಾರದು. ಅರಿತೋ ಅರಿವಿಲ್ಲದೆಯೋ ಪ್ರತಿನಿತ್ಯ ನಮ್ಮ ಜೀವನದಿಂದ ಅನೇಕ ಸಾವುನೋವುಗಳು ಸಂಭವಿಸುತ್ತವೆ. ದಾರಿಯಲ್ಲಿ ಹರೆಯುತ್ತಿದ್ದ ಹಾವನ್ನು ವಿನಾಕಾರಣ ಹೆದರಿಕೊಂಡು ಬಡಿದು ಸಾಯಿಸುತ್ತೇವೆ. ಬೆಳೆಗಳನ್ನು ತಿಂದು ಹಾಕುತ್ತಿದ್ದ ಮಂಗಗಳನ್ನೋ ಹಂದಿ-ನರಿಗಳನ್ನೋ ಯಾವುದೋ ರೀತಿಯಲ್ಲಿ ನಾಶಪಡಿಸುತ್ತೇವೆ. ವಾಹನಗಳಲ್ಲಿ ಓಡಾಡುವಾಗ ಅಡ್ಡಬರುವ ಬೆಕ್ಕು-ನಾಯಿ-ಹಸು ಇತ್ಯಾದಿ ಅನೇಕ ಜೀವಿಗಳನ್ನು ಸಾಯಿಸುತ್ತೇವೆ. ನಡೆದಾಡುವಾಗ ಕಾಲ್ತುಳಿತದಿಂದ ಇರುವೆ,ಗೆದ್ದಲು ಮೊದಲಾದವುಗಳು ಸಾಯಲೂ ಬಹುದು. ಇಷ್ಟೇ ಏಕೆ ನಾವು ತಿನ್ನುವ ಮೊಸರಿನಲ್ಲಿ, ಇನ್ನನೇಕ ಪದಾರ್ಥಗಳಲ್ಲಿ ಕಣ್ಣಿಗೆ ಕಾಣಿಸದ ಬ್ಯಾಕ್ಟೀರಿಯಾಗಳು ಇರುತ್ತವೆ, ಅವುಗಳನ್ನು ದೂರದರ್ಶಕದಲ್ಲಿ ನೋಡಿದರೆ ಕೆಲವರು ಮೊಸರನ್ನು ಬಳಸದೇ ಇದ್ದಾರು! ಇಂತಹ ಅದೆಷ್ಟೋ ಹಿಂಸೆಗಳಿಗೆ ಪ್ರತ್ಯಕ್ಷವೋ ಪರೋಕ್ಷವೋ ನಾವು ಕಾರಣೀಭೂತರಾಗುತ್ತೇವೆ.

ಸಾಯಮಧೀಯಾನೋ ದಿವಸ ಕೃತಂ ಪಾಪಂ ನಾಶಯತಿ |
ಪ್ರಾತರಧೀಯಾನೋ ರಾತ್ರಿಕೃತಂ ಪಾಪಂ ನಾಶಯತಿ |

ಗಣಪತಿ ಉಪನಿಷತ್ತಿನ ಫಲಶ್ರುತಿಯಲ್ಲಿ ಈ ಪ್ರಾರ್ಥನೆ ಬರುತ್ತದೆ. ಿ ಉಪಿತ್  ಮಂತ್ರಗಳನ್ನು ಸಾಯಂಕಾಲ ಉಚ್ಚರಿಸುವುದರಿಂದ ದಿನವಿಡೀ ಮಾಡಿದ ಪಾಪ ನಾಶವಾಗುತ್ತದೆ, ಮುಂಜಾವಿನಲ್ಲಿ ಮಾಡುವುದರಿಂದ ರಾತ್ರಿಯಲ್ಲಿ ನಡೆಸಿರಬಹುದಾದ ಪಾಪಗಳು ನಶಿಸುತ್ತವೆ ಎಂಬೇಳಿಕೆಗಿವ. ವಾಸ್ತವವಾಗಿ ಗಣಪತಿಯನ್ನು ಈಶ್ವರನ ಮಗ ಎಂಬುದಾಗಿ ಮಾತ್ರ ಭಾವಿಸುತ್ತೇವೆ. ಆದರೆ ವಿಷಯ ಹಾಗಿಲ್ಲ. ಗಣಗಳಿಗೆ ಅಧಿಪತಿಯಾದವನೇ ಗಣಪತಿ. ಯಾವ ಗಣ? ಪ್ರಮಥಗಣ. ಪ್ರಮಥಗಣ ಎಂದರೆ ಯಾವುದು ಎಂಬೆಲ್ಲದರ ಬಗ್ಗೆ ಇನ್ನೊಮ್ಮೆ ತಿಳಿಯೋಣ. ಆದರೆ ಈ ಬ್ರಹ್ಮಾಂಡದ ಸಮಸ್ತ ಜೀವ-ನಿರ್ಜೀವ ಅಥವಾ ಜಡ-ಚೇತನಗಳ ಕುಲಕೋಟಿಗಳ ಗಣಗಳಿಗೆ ಅಧಿನಾಯಕನಾದವನೇ ಗಣಪತಿ-ಬ್ರಹ್ಮಾಂಡನಾಯಕ, ಪರಬ್ರಹ್ಮ. ತಪ್ಪು-ಒಪ್ಪಿನ ಲೆಕ್ಕಾಚಾರವನ್ನು ಆತನಲ್ಲೇ ನಿವೇದಿಸಬೇಕಲ್ಲದೇ ಇನ್ನಾರಲ್ಲಿ ಹೇಳಿಕೊಳ್ಳಲು ಸಾಧ್ಯ? ನಮ್ಮಷ್ಟಕ್ಕೇ ನಮ್ಮ ತೃಪ್ತಿಗೆ ನಾವು ಯಾವುದೋ ರೂಪದಲ್ಲಿ ಉದಾಹರಣೆಗೆ ಕೃಷ್ಣನಲ್ಲೋ ರಾಮನಲ್ಲೋ ನಾರಾಯಣನಲ್ಲೋ ಶಂಭುಲಿಂಗೇಶ್ವರನಲ್ಲೋ ಹೇಳಿಕೊಳ್ಳಬಹುದು, ಆದರೆ ಅದೆಲ್ಲಾ ತಲ್ಪುವುದು ಒಂದೇ ಮೂಲಕ್ಕೆ. 

ಆಚಾರ್ಯ ಶಂಕರರು ಏನೂ ಇಲ್ಲದೇ ಇರುವಲ್ಲೇ, ಇದ್ದ ಸ್ಥಿತಿಯಲ್ಲೇ ಪರಬ್ರಹ್ಮನ ಆರಾಧನೆಗೆ ಶಿವಮಾನಸ ಸ್ತೋತ್ರವನ್ನು ಕರುಣಿಸಿದರು. ಆ ಸ್ತೋತ್ರದಲ್ಲಿ ಏನುಂಟು ಏನಿಲ್ಲ? ಪೂಜೆಗೆ ಕುಳಿತ ನಾವು ಮನಸಾ ಕುಬೇರರೇ ಆಗಿರುತ್ತೇವೆ! ಅದನ್ನು ಹಿಂದೊಮ್ಮೆ ಸವಿಸ್ತಾರ ಹೇಳಿದ್ದೇನೆ, ಹೀಗಾಗಿ ಮತ್ತೆ ವಿವರಿಸುವ ಅಗತ್ಯತೆ ಕಾಣುವುದಿಲ್ಲ. ಆದರೆ ಆ ಸ್ತೋತ್ರದ ಕೊನೆಯ ಭಾಗದಲ್ಲಿ ಭಗವಂತನಿಗೆ ಎಲ್ಲವನ್ನೂ ಅರ್ಪಿಸಿ ಪೂಜೆ ಮುಗಿದ ನಂತರ ಅವನ ಮುಂದೆ ಸಾಷ್ಟಾಂಗ ನಮಸ್ಕರಿಸಿ ಪ್ರಾರ್ಥಿಸುವ ಹಂತದ ಸ್ತುತಿಯೊಂದಿದೆ.

ಕರಚರಣಕೃತಂ ವಾಕ್-ಕಾಯಜಂ ಕರ್ಮಜಂ ವಾ  
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||

ಕರಚರಣಗಳಿಂದಾಗಲೀ, ದೇಹದಿಂದಾಗಲೀ, ಮಾತು-ನಡವಳಿಕೆಗಳಿಂದಾಗಲೀ, ಮಾಡುವ ಕೆಲಸಗಳಿಂದಾಗಲೀ, ಕೇಳುವುದರಿಂದಾಗಲೀ, ನೋಡುವುದರಿಂದಾಗಲೀ, ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದರಿಂದಾಗಲೀ, ವಿಹಿತವೋ ಅವಿಹಿತವೋ ಎಂಬ ಅರಿವಿಲ್ಲದೇ ಜರುಗಿರಬಹುದಾದ ಎಲ್ಲ ಅಪರಾಧಗಳನ್ನೂ ಕ್ಷಮಿಸು ಎಂದು ಭಗವಂತನಲ್ಲಿ ಪ್ರಾರ್ಥಿಸುವುದು ಇದಾಗಿದೆ. ಬೋಧಿಸುವುದು ಸಸಾರ, ಆಚರಿಸುವುದು ಕಷ್ಟವೆನಿಸಿದ ಈ ಕಾಲದಲ್ಲಿಯೂ ಅನೇಕರು ಅಕ್ಷರಶಃ ಇಂತಹ ರಿವಾಜುಗಳನ್ನು ಇಟ್ಟುಕೊಂಡಿದ್ದಾರೆ. ಹಾಗೆ ನೋಡಿದರೆ ಹುಟ್ಟುವುದು ಸಂಭ್ರಮವಲ್ಲ, ಸಾಯುವುದು ದುಃಖಕರವೂ ಅಲ್ಲ. ಆದರೆ ಜೀವಾತ್ಮನಾಗಿ ಅನುಭವಿಸುವ ಯಮಯಾತನೆ ಇದೆಯಲ್ಲಾ ಅದನ್ನು ಮಾತ್ರ ಸಾಮಾನ್ಯವಾಗಿ ಯಾರೂ ತಪ್ಪಿಸಿಕೊಳ್ಳಲಿಕ್ಕೆ ಆಗುವುದಿಲ್ಲ.

ಬುದ್ಧ ಜಾತಕ ಕಥೆಗಳಂತೇ ಹಲವು ಕಥೆಗಳು ಮಾರ್ಮಿಕವಾಗಿ ಈ ಹುಟ್ಟು-ಸಾವುಗಳ ಚಕ್ರದ ಗತಿಯ ಬಗ್ಗೆ ತಿಳಿಸುತ್ತವೆ. ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು, ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಿದ್ದರು. ವರ್ಷಗಳ ನಂತರ ಕಾಯಿಲೆಯಾಗಿ ಹೆಂಡತಿ ತೀರಿಹೋದಳು. ಅದೇ ದುಃಖದಲ್ಲಿ ಕೆಲವು ವರ್ಷಗಳು ಕಳೆದುಹೋದವು. ಒಮ್ಮೆ ತೋಟದಲ್ಲಿ ಕೆಲಸಮಾಡುತ್ತಿದ್ದ [ಗಂಡನಿಗೆ]ಯಜಮಾನನಿಗೆ ಹೆಣ್ಣುಹಂದಿಯೊಂದು ನಾಕಾರು ಮರಿಗಳೊಂದಿಗೆ ಮೇಯುತ್ತಿರುವುದು ಕಾಣಿಸಿತು. ಹತ್ತಿರ ಹೋದ ಯಜಮಾನನನ್ನು ಕಂಡು ಹೆಣ್ಣು ಹಂದಿ ಕಣ್ಣೀರು ಸುರಿಸಿತು. ಹೆಂಡತಿಯಾಗಿ ತಾನು ಬಹಳಕಾಲ ಜೊತೆಗಿರಲಾರದೇ ಇದ್ದುದಕ್ಕೆ ವಿಷಾದ ವ್ಯಕ್ತಪಡಿಸಿತು. "ಹಾಗಾದರೆ ಮರಳಿ ನಿನ್ನನ್ನು ಪಡೆದುಕೊಳ್ಳುತ್ತೇನೆ ಈಗಲೇ ನಿನ್ನನ್ನು ಈ ಜನ್ಮದಿಂದ ಬಿಡುಗಡೆಗೊಳಿಸಲು ಗುಂಡಿಕ್ಕಿಬಿಡುತ್ತೇನೆ." ಎಂದ ಯಜಮಾನನಲ್ಲಿ ತನ್ನ ಮರಿಗಳ ಮುಂದಿನ ಗತಿಯ ಬಗ್ಗೆ ಹೇಳಿಕೊಂಡು ಮತ್ತಷ್ಟು ಅತ್ತಿತು, ತನ್ನನ್ನು ಹಾಗೇ ಇರಗೊಡೆಂದು ಪ್ರಾರ್ಥಿಸಿತು. ’ಹಂದಿಗೆ ಅದೇ ಸುಖ ಇಂದಿಗೆ ಇದೇ ಸುಖ’ ಎಂಬ ಗಾದೆ ಆ ಮೂಲಕ ಉದ್ಭವವಾಯ್ತು! ಆಫ್ರಿಕಾದಲ್ಲಿ ಮೊಸಳೆಯೊಂದು ಯಜಮಾನನಿಗಾಗಿ ಓಡಿಬರುವ ಕಣ್ಣೀರು ಸುರಿಸುವ ಕಥೆ ಕೇಳಿದ್ದೇನೆ. ಇದೇ ರೀತಿ ಈ ಜಗದ ನೀತಿ-ನಿಯಮಗಳೆಲ್ಲವೂ ನಾವು ಮಾಡಿಕೊಂಡಷ್ಟೇ ಅಲ್ಲವೆಂಬುದಂತೂ ಸತ್ಯ.

ವಿಜ್ಞಾನದಲ್ಲಿ ಗಣನೀಯ ಸಾಧನೆಗಳನ್ನು ಸಾಧಿಸಿದ್ದೇವೆ. ಆದರೂ ಬೀಸುವ ಪ್ರಚಂಡ ಮಾರುತವನ್ನು ತಡೆಯಲು ಸಾಧ್ಯವಿಲ್ಲ, ಉಕ್ಕೇರಿ ಬರುವ ಸುನಾಮಿಯನ್ನು ತಹಬಂದಿಗೆ ತರಲು ಸಾಧ್ಯವಿಲ್ಲ, ನಡುಗುವ ಭೂಮಿಯನ್ನು ನಡುಗದಂತೇ ನಿರ್ದೇಶಿಸಲು ಆಗುವುದಿಲ್ಲ. ಸೂರ್ಯನನ್ನೋ ಚಂದ್ರನನ್ನೋ ನಮ್ಮಿಚ್ಛೆಗನುಸಾರವಾಗಿ ಬದಲಾಯಿಸಿದ ದಿಕ್ಕುಗಳಲ್ಲಿ ಬರಿಸಲಾಗಲೀ ಅವರ ಚಟುವಟಿಕೆಗಳನ್ನು ನಿಲ್ಲಿಸಲಾಗಲೀ ಸಾಧ್ಯವಾಗುವುದಿಲ್ಲ. ಜಗತ್ತಿನ ವಿಶಾಲ ಭೂಪ್ರದೇಶಕ್ಕೆ ಬೇಕಾಗುವ ಮಳೆಯಾಗುವಂತೇ ಸೂರ್ಯ ಸಮುದ್ರದ ನೀರನ್ನು ಹೀರಿ ಮೋಡಕಟ್ಟಬೇಕು. ಕಟ್ಟಿದಮೋಡವನ್ನು ಹಲವೆಡೆ ಸಾಗಿಸಿ ಮಳೆಸುರಿಸಲು ತಂಗಾಳಿ ಬೇಕು. ಬಿತ್ತಿದ ಬೆಳೆ ಸಫಲಭರಿತವಾಗಲು ಹೆತ್ತ ಭೂಮಿ ಸಹಕರಿಸಲೇಬೇಕು. ಇಂತಹ ಪಂಚಭೂತಗಳ ನಡುವೆ ನಮ್ಮ ಹುಟ್ಟು-ಸಾವುಗಳ ಚಕ್ರ ನಿರಂತರ. ಹಂದಿಗೆ ಮರಿಗಳ ಮುಂದಿನ ಜೀವನವೇ ದೊಡ್ಡದೆನಿಸಿದಂತೇ ಬದುಕಿನ ಬಂಧುರಕ್ಕೆ ಮಾನವಸಹಜ ಭಾವಗಳು ನಿತ್ಯ-ನಿರಂತರ. ತಿರುಗುವ ಈ ಚಕ್ರದ ಹಲ್ಲುಗಳಿಂದ ನುಣುಚಿಕೊಳ್ಳಲು ಮಾಡಬೇಕಾದ ಸಾಧನೆ ಅಪಾರ. ಅಲ್ಲಿಯವರೆಗೂ ನಾವರಿತು ನಡೆಯಬೇಕಾದ ದಾರಿ ಬಲುದೂರ, ಬದುಕೋಣ, ಬದುಕಲು ಬಿಡೋಣ, ಜೀವಹಾನಿಯನ್ನು ತಡೆಗಟ್ಟೋಣ ಎಂಬ ವಿನಮ್ರ ಅನಿಸಿಕೆಯನ್ನು ನಿಮಗೆಲ್ಲಾ ನಿವೇದಿಸುತ್ತಾ ಸರ್ವಭೂತಾತ್ಮನಾದ ಪರಬ್ರಹ್ಮನಲ್ಲಿ ನೋವು ಕೊಡಬೇಡವೆಂದು ಪ್ರಾರ್ಥಿಸುತ್ತಾ ಶ್ರೀನಂದಂವತ್ಸ ದೀಪಾವಳಿಯ ಪ್ರಥಮ ಹಣತೆಯನ್ನು ನಿಮ್ಮೆಲ್ಲರ ಪರವಾಗಿ ಹಚ್ಚುತ್ತಿದ್ದೇನೆ, ನಿಮ್ಮೆಲ್ಲಲ್ಲೂ ಸನ್ನಿಹಿತಾಗಿರುವ ಂತಿಗ ನಮಸ್ಕಾರ, ನಿಮೆಲ್ಲಾ ಅಡ್ವಾನ್ಸ್ಡ್ ು.    

Monday, November 5, 2012

ಮೇರಿ ಅಲಿಯಾಸ್ ಶುಭದಾ ಹಬ್ಬು

ಚಿತ್ರಕೃಪೆ : ಅಂತರ್ಜಾಲ
ಮೇರಿ ಅಲಿಯಾಸ್ ಶುಭದಾ ಹಬ್ಬು

ಮಳೆಗಾಲದ ಎಡಬಿಡದ ತುಡಿತಕ್ಕೆ ಬೋಳುಗುಡ್ಡೆಯ ಎಲ್ಲಾ ಮಗ್ಗುಲಿಗೂ ಹಸಿರು ಹೊದಿಕೆ ಬಂದಿತ್ತು. ತೊಟ ತೊಟ ತೊಟ್ಟಿಕ್ಕುವ ಸೋನೆಮಳೆಯ ತುಸುಹೊತ್ತಿನ ಬಿಡುವಿನಲ್ಲೇ ಬೋಳುಗುಡ್ಡೆಯ ತುದಿಯೇರಿ ನಿಂತಾಗ ಕಾಣುವ ಸೌಂದರ್ಯ ಅಪಾರ. ದೂರದಲ್ಲಿ ಗದ್ದೆ, ಗದ್ದೆ ಮಧ್ಯದಲ್ಲಿ ಹಾದುಹೋಗುವ ಹಾದಿ, ಹಾದಿಯಲ್ಲಿ ಜನರ ಓಡಾಟ. ಇನ್ನೊಂದು ಪಕ್ಕದಲ್ಲಿ ಅಮ್ಮನವರ ದೇವಸ್ಥಾನ, ಬೆಳಗಿನ ಹೊತ್ತು ಅಲ್ಲಿ ಆಗಾಗ ಬಾರಿಸಲ್ಪಡುವ ಗಂಟೆಯ ಶಬ್ದ, ದೇವಸ್ಥಾನದ ಪಕ್ಕದಲ್ಲಿರುವ ಸೀಯಾಳ ನೀರಿನಂಥಾ ನೀರಿನ ಚಿಕ್ಕ ಪುಷ್ಕರಣಿ, ದೇವಸ್ಥಾನಕ್ಕೆ ನಸುದೂರದಲ್ಲಿ ಇರುವ ಸರ್ಕಾರೀ ಜಾಗದಲ್ಲಿರುವ ಗೋಮಾಳದಲ್ಲಿ ಮೇಯುವ ಮಲೆನಾಡ ಗಿಡ್ಡ ತಳಿಯ ದನಗಳ ಅಂಬಾ ಅಂಬಾ ಎನ್ನುವ ಕೂಗು, ಪಕ್ಕದ ಇನ್ಯಾವುದೋ ಗುಡ್ಡದಲ್ಲಿ ನರ್ತಿಸುವ ನಲಿಲಿನ ಈ ಹಾಂ ಈ ಹಾಂ ಈ ಹಾಂ.......ಎಂಬ ಕೇಕೇ ಆಹಹ ಅನುಭವಿಸಲು ಪಡೆದುಬಂದಿರಬೇಕು. ಕಂಬಳಿ ಕೊಪ್ಪೆ ಹೊದ್ದು ಮೋಟು ಬೀಡಿ ಹಚ್ಚಿಕೊಂಡು ತಲೆಯಮೇಲೆ ಸಾಮಾನು ಹೊತ್ತು ಓಡಾಡುತ್ತಿದ್ದ ಕೆಲಸದ ಆಳುಗಳನ್ನು ನೋಡಿದಾಗಲಂತೂ ಬತ್ತಿಹೋಗಿದ್ದ ನರಗಳಲ್ಲೂ ಜೀವಂತಿಕೆಯ ಸಂಚಲನ ...ಪ್ರಾಯಶಃ ಜೀವಿತಕ್ಕಾಗಿ ಅವರ ದುಡಿಮೆಯನ್ನು ಕಂಡು ನೂ ಪ್ರಯತ್ನಿಸಬೇಕು...ಬದುಕು ಇಷ್ಟೇ ಅಲ್ಲ.. ಇನ್ನೂ ಇದೆ ಎಂಬ ಅನಿಸಿಕೆ ಇರಬಹುದು. 

ಬೋಳುಗುಡ್ಡೆ ಇಳಿದರೆ ಸಿಗುವ ಮಾಲಂಗೆರೆಯಲ್ಲಿ ಅಪ್ಪ-ಅಮ್ಮನ ನೆನಪಿಗಾಗಿ ಇದ್ದಿತ್ತು ಆ ಮನೆ. ಮನೆಯಲ್ಲಿ ಅಣ್ಣ ಮಾತ್ರ ಇದ್ದಾನೆ. ಅಣ್ಣ ಬ್ರಹ್ಮಚಾರಿ.. ಮದುವೇನೇ ಆಗಲಿಲ್ಲ ಪಾಪ! ಮದುವೆ ಆಗದ್ದಕ್ಕೆ ನಾನೇ ಕಾರಣವೇನೋ ಎಂದೂ ಅನಿಸುತ್ತದೆ. ಅದು ನನ್ನ ತಪ್ಪೇ? ನನ್ನನ್ನು ಕರೆದೊಯ್ದ ವ್ಯಕ್ತಿಯ ತಪ್ಪೇ? ನನಗೆ ವಿದ್ಯೆ ಕಲಿಸಿದ ಪಲಕರ ತಪ್ಪೇ? ಅಥವಾ ನನ್ನ ಉಕ್ಕೇರುತ್ತಿದ್ದ ಹರೆಯದ ತಪ್ಪೇ? ಅರ್ಥವಾಗದೇ ಇರುವ ವಿಷಯ. ಮಿಂಚಿಹೋದ ಆ ಕಾಲ ಮತ್ತೆ ಹಿಂದಕ್ಕೆ ಓಡಲು ಸಾಧ್ಯವೇ? ಆಗದಲ್ಲಾ? ಹಾಗೊಮ್ಮೆ ಆಗಿಬಿಡುತ್ತಿದ್ದರೆ ನಾನು ಮತ್ತೆಂದೂ ಅಪ್ಪ-ಅಮ್ಮನಿಗೆ ತೊಂದರೆ ಕೊಡ್ತಾ ಇರಲಿಲ್ಲ. ಬೇಸರವನ್ನೂ ಮಾಡ್ತಾ ಇರಲಿಲ್ಲ. ನನಗೆ ಯಾವುದಕ್ಕೆ ಕಮ್ಮಿ? ಹಣ, ಬಂಗಲೆ, ಓಡಾಟಕ್ಕೆ ಕಾರು, ಮುದ್ದಾದ ಮಕ್ಕಳು ಎಲ್ಲವೂ ಇದೆ. ಆದರೆ ಕೊರತೆಯೊಂದೇ ಮುಪ್ಪಿನಕಾಲದಲ್ಲೂ ಅಪ್ಪ-ಅಮ್ಮನನ್ನು ಮಾತನಾಡಿಸಲು ಆಗಲಿಲ್ಲವಲ್ಲ ಎಂಬುದು. ಮಕ್ಕಳಿಂದ ಅಗಲಿರುವ ಕೊರಗು ಬಹಳ ವೇದನೆಯಂತೆ. ಅದನ್ನು ಅನುಭವಿಸಿದವರೇ ಬಲ್ಲರು ಎಂದು ಕೆಲವರು ಹೇಳುತ್ತಾರೆ. ಶ್ರವಣ ಕುಮಾರನ ತಂದೆ ದಶರಥನ ಬಾಣಕ್ಕೆ ಬಲಿಯಾದಾಗ ದಶರಥನಿಗೂ ಪುತ್ರಶೋಕ ತಟ್ಟಲಿ ಎಂದು ಶ್ರವಣನ ತಂದೆ ಶಪಿಸಿದ್ದರಂತೆ. ಪಾಪ ಶಾಪಗ್ರಸ್ತ ದಶರಥ ಸರ್ವಸಮರ್ಥನಾದರೂ, ಚಕ್ರವರ್ತಿಯೇ ಆಗಿದ್ದರೂ ಕೈಕೇಯಿಗೆ ಕೊಟ್ಟ ವರಗಳು ತನ್ನನ್ನೇ ಹುರಿದು ಮುಕ್ಕುತ್ತವೆ ಎಂದು ಅಂದುಕೊಂಡಿರಲಿಲ್ಲ. ವರ ಕೇಳಿದ ಕೈಕೇಯಿಯ ಮಾತನ್ನು ಅಲಿಸಿದ ಕ್ಷಣದಿಂದ ನಿಜವಾದ ದಶರಥನ ಅವಸಾನ ನಡೆದೇ ಹೋಗಿತ್ತು!! ಆತ ಮನಸಾ ಕುಗ್ಗಿದ್ದರೂ ಕೈಕೇಯಿಗೆ ತಿಳಿಹೇಳಿ ನಿಲುವನ್ನು ಬದಲಾಯಿಸಿಕೊಳ್ಳುವಂತೇ ಪ್ರಯತ್ನಿಸಿ ರಾಮನನ್ನು ಅಯೋಧ್ಯೆಯಲ್ಲೇ ಇಟ್ಟುಕೊಳ್ಳುವ ಕೊನೆಯ ಆಸೆಯನ್ನು ಇಟ್ಟುಕೊಂಡಿದ್ದ. ಪ್ರೀತಿಯ ಮಗನನ್ನು ಬಿಟ್ಟಿರಲಾರ, ಕಾಡಿಗೆ ಕಳಿಸಲಾರ. ಆದರೂ ವಿಧಿ ರಾಮನನ್ನು ದಶರಥನಿಂದ ಅಗಲಿಸಿತು. ಪುತ್ರವಿಯೋಗದಿಂದ ಬಳಲೀ ಬಳಲೀ ಗತಿಸಿಹೋದ ದಶರಥನಿಗೆ ಆ ಕ್ಷಣಗಳು ಅದೆಷ್ಟು ಅಸಹನೀಯವಾಗಿದ್ದವೋ ತಿಳಿಯದು; ಅಷ್ಟೇ ವೇದನೆಯನ್ನು ನನ್ನ ಅಪ್ಪ-ಅಮ್ಮ ಅನುಭವಿಸಿದ್ದರೆ ಅದಕ್ಕೆ ಕಾರಣ ನಾನೇ ಅಲ್ಲವೇ? ಇಲ್ಲಿ ಕೈಕೇಯಿಯಿಲ್ಲ ಆದರೆ ಕಲಿಸಿದ್ದ ವಿದ್ಯೆ ಕೈಕೇಯಿಗೆ ಇತ್ತ ವರಗಳಂತೇ ಆಗಿತ್ತಲ್ಲಾ....ಬದುಕಿನ ಮಜಲುಗಳ ಅರ್ಥವ್ಯಾಪ್ತಿ ಗೊತ್ತಿರದ ಆ ದಿನಗಳಲ್ಲಿ ಆತನೊಬ್ಬ ಸಿಗದಿದ್ದರೆ ಅಥವಾ ನಾನು ಆ ಕಾಲೇಜಿಗೆ ಹೋಗದೇ ಇದ್ದಿದ್ದರೆ ಇಷ್ಟೆಲ್ಲಾ ಅಗುತ್ತಿರಲಿಲ್ಲ ಎನಿಸುತ್ತದೆ.   

"ಹಬ್ಬುಮಾಸ್ತರು ಅಂದ್ರೆ ಮರ್ಯಾದೆಗೆ ಅಂಜೋ ಜನ ಅಂತ ಎಲ್ಲರಿಗೂ ಗೊತ್ತಿದೆ. ಕರ್ತವ್ಯದಲ್ಲಿ ಕಿಂಚಿತ್ತೂ ಲೋಪವಿಲ್ಲದಂತೇ ವ್ಯವಹರಿಸುತ್ತಾ ಬಂದವನು ನಾನು. ಮಕ್ಕಳಿಗೊಂದು ಒಳ್ಳೆ ವಿದ್ಯೆ ಕಲಿಸಿ ದಡಹತ್ತಿಸಿಬಿಟ್ಟರೆ ನನ್ನ ಕೆಲಸ ಮುಗೀತು" ಎಂದು ಸದಾ ಸ್ನೇಹಿತರುಗಳ ಹತ್ತಿರ ಹೇಳಿಕೊಳ್ಳುತ್ತಿದ್ದ ಅಪ್ಪಯ್ಯನ ಹೆಸರಿಗೇ ಮಸಿಬಳಿದೆನಲ್ಲಾ ಎಂಬುದೇ ಸದಾ ಕಾಡುತ್ತಿದೆ. ಅಪ್ಪ ನಮ್ಮನ್ನೆಲ್ಲಾ ಎಷ್ಟೊಂದು ಪ್ರೀತಿಯಿಂದ ಸಲಹಿದ್ದರು. ಶಾಲೆ ಮುಗಿಸಿ ಎಲ್ಲಿಗೇ ಹೋದರೂ ಸಾಧ್ಯವಾದ ಕಡೆಗೆಲ್ಲಾ ಕರೆದುಕೊಂಡೇ ಹೋಗುತ್ತಿದ್ದರು. "ಜಗತ್ತಿನಲ್ಲಿ ಕೋಟಿವಿದ್ಯೆಗಳಿವೆ ಮಗಾ. ಅಲ್ನೋಡು ಜಮೀನಿನಲ್ಲಿ ದುಡೀತಾರಲ್ಲಾ ...ಮೇಟಿ ಹಿಡಿದು ಕೆಲಸಮಾಡ್ತಾರಲ್ಲಾ ...ಅವರೇ ಎಲ್ಲರಿಗೂ ಅನ್ನದಾತರು. ಅವರು ಕೆಲಸ ಮಾಡ್ದಿದ್ರೆ ದೇಶ ಉಪವಾಸ ಬೀಳ್ತದೆ. ಬೇರೇ ವಿದ್ಯೆಗಳನ್ನೆಲ್ಲಾ ಕಲಿತರೂ ಮೇಟಿವಿದ್ಯೆಯಲ್ಲೂ ಆಸಕ್ತಿ ಇಟ್ಕೊಂಡಿರಬೇಕು. ಗದ್ದೆ-ತೋಟಗಳಲ್ಲಿ ಕೆಲಸಮಾಡುವುದು, ದನಗಳ ಆರೈಕೆ, ಹಾಲು-ಹೈನದ ಕೆಲಸ, ಬೀಸುವ-ಕಾಸುವ ಕೆಲಸ ಎಲ್ಲವನ್ನೂ ಕಲಿತಿರಬೇಕು. ಸಮಯ ಬಂದ್ರೆ ಯಾವುದನ್ನೇ ಮಾಡಲೂ ತಯಾರಾಗಿರಬೇಕು. ಬರೇ ಪುಸ್ತಕದ ವಿದ್ಯೆ ಸಾಲದು." ಎನ್ನುತ್ತಾ ತನ್ನ ಅನುಭವಗಳ ಮೂಟೆಯನ್ನು ಬಿಚ್ಚಿ ಹಿತನುಡಿಗಳನ್ನು ಹೇಳುತ್ತಿದ್ದರು.    

ವರ್ಗಾವರ್ಗೀ ಕೆಲಸದಲ್ಲಿ ಆ ಕಾಲದಲ್ಲಿ ಲಂಚ-ರುಷುವತ್ತು ಇರಲಿಲ್ಲ. ಎಲ್ಲಿಗೆ ಹಾಕಿದರೋ ಅಲ್ಲಿಗೆ ಹೋಗುವುದು ವಾಡಿಕೆಯಾಗಿತ್ತು. ಮೂಲ ಊರನಿಂದ ಹಲವು ಊರುಗಳಿಗೆ ತಿರುಗಿದವರು ಅಪ್ಪ. ಜಿಲ್ಲೆಯ ಪಕ್ಕದ ಜಿಲ್ಲೆಯ ಹಳ್ಳಿಗಳ ಮೂಲೆಯ ಶಾಲೆಗಳಿಗೆ ವರ್ಗಾ ಮಾಡಿದಾಗ ಬೆಕ್ಕು ತೊಟ್ಟಿಲು ತೆಗೆದುಕೊಂಡು ಹೋಗುವಂತೇ ನಮ್ಮನ್ನೆಲ್ಲಾ ಕಟ್ಟಿಕೊಂಡು ಅಲ್ಲಲ್ಲಿಗೇ ಹೋಗಿ, ಬಾಡಿಗೆಮನೆಮಾಡಿ ಬದುಕು ಸಾಗಿಸಿದವರು ನಮ್ಮಪ್ಪ. ಇರುವ ಚಿಕ್ಕ ನೌಕರಿಯಲ್ಲೇ ತೃಪ್ತಿಯನ್ನು ಕಂಡವರು. ಯಾವುದೇ ಚಟಗಳನ್ನು ಅಂಟಿಸಿಕೊಂಡವರಲ್ಲ. ಎಲ್ಲಿಗೇ ಹೋದರೂ ಆ ಗ್ರಾಮಗಳಲ್ಲೆಲ್ಲಾ ಹಬ್ಬುಮಾಸ್ತರು ಎಂದರೆ ಎಲ್ಲರೂ ಮೆಚ್ಚುವಂತೇ ಬದುಕಿದ್ದವರು. ತೂರಾಡುವ ತುಂಬಾಲೆಯಂತಿದ್ದ ಕೃಶಶರೀರದ ಅಪ್ಪ ಹಕ್ಕಿಹಾರುವಷ್ಟು ಸಲೀಸಾಗಿ ಓಡಾಡುತ್ತಿದ್ದರು. ಇರುವ ಗ್ರಾಮಗಳ ಪ್ರತೀ ಮನೆಮನೆಯೂ ಅವರಿಗೆ ಗೊತ್ತು. ಗ್ರಾಮಸ್ಥರ ನಡುವೆ, ಅಣ್ಣ-ತಮ್ಮಂದಿರ ನಡುವೆ  ಯಾವುದೇ ಚಿಕ್ಕ ಪುಟ್ಟ ಜಗಳ-ವೈಮನಸ್ಸು ಬಂದಾಗ ಖುದ್ದಾಗಿ ಹೋಗಿ ಅದನ್ನು ಬಗೆಹರಿಸಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಪೂಜೆ, ಪ್ರಾರ್ಥನೆ, ರಾಗವಾಗಿ ಹಾಡುವುದು, ಯಕ್ಷಗಾನ ಒಂದೇ ಎರಡೇ ಅವರ ಕಲಾಕೌಶಲಗಳ ಪಟ್ಟಿ ಮಾಡುತ್ತಾ ಹೋದರೆ ಮಕ್ಕಳಾದ ನಾವು ಅಲ್ಪರು ಎಂಬುದರಲ್ಲಿ ಸಂಶಯವೇ ಇಲ್ಲ. ಹೊಸಾಕುಳಿ ಶಾಲೆಯಲ್ಲಿ ಮಾಸ್ತರಿಕೆ ಮುಗಿಸಿ ವರ್ಗವಾಗಿ ಹೊರಡುವ ದಿನ ನಡೆದ ಬೀಳ್ಕೊಡುವ ಸಮಾರಂಭದಲ್ಲಿ ಅಲ್ಲಿನ ಜನ ಕಣ್ಣೀರು ಹಾಕಿದ್ದನ್ನು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಊರಕೇರಿಲಿದ್ದಾಗ ಭಾಗೊತ್ರ ಮನೇಲಿ ಕೊಟ್ಟ ಆದರಾತಿಥ್ಯದ ಬಗ್ಗೆ ಹೇಳ್ತಾ ಇದ್ರು. ನಾವೆಲ್ಲಾ ಚಿಕ್ಕವರಾಗಿದ್ರಿಂದ ನಮಗೆ ಎಲ್ಲವೂ ಮೊದಮೊದಲು ತಿಳೀತಿರ್ಲಿಲ್ಲ. ಕುಮಟಾ ಹೆಗಡೆ ಗ್ರಾಮದಲ್ಲಿ ಶಾಂತಿಕಾಂಬಾ ದೇವಸ್ಥಾನದ ಎದುರಿನ ಬಯಲಿನಲ್ಲಿ ನಡೆದ ಕರ್ಣಪರ್ವ ಯಕ್ಷಗಾನದಲ್ಲಿ ಕರ್ಣನ ಪಾತ್ರ ನೋಡಿದವರು ಇವತ್ತಿಗೂ ಹಬ್ಬು ಮಾಸ್ತರ ಕರ್ಣ ಅಂದ್ರೆ ಸಾಕ್ಷಾತ್ ಕರ್ಣನೇ ಬಂದ ಹಾಗಾಗಿತ್ತು ಅಂತಾರೆ. "ಇಂಥಾ ಒಬ್ಬ ಅಪ್ಪನನ್ನು ಪಡೆಯಲು ಏಳೇಳು ಜನ್ಮಗಳ ಪುಣ್ಯ ಪಡೀಬೇಕು ಮರೀ" ಎಂದು ಶಾನಭಾಗ್ ಮಾಸ್ತರು ನನ್ನ ಕೆನ್ನೆ ಹಿಂಡಿದ ನೆನಪು ಇಂದು-ನಿನ್ನೆಯೇ ನಡೆದ ಘಟನೆಯಂತೇ ಕಾಣುತ್ತದೆ.      

ಅಪ್ಪನಿಗೆ ಯಾವ ವಿಷಯದಲ್ಲೂ ಅಡ್ಡಿಮಾಡದೇ ಇರುವ ಅಮ್ಮ ಕೂಡ ಹಾಗೇ ಇದ್ದರು. ಅಪ್ಪ ವರ್ಗವಾಗಿ ಊರೂರು ಸುತ್ತುವಾಗ ಎಂದೂ ಬರಲಾರೆ ಎಂದವಳಲ್ಲ. ಅಪ್ಪ ಕರೆದಲ್ಲಿಗೆ ಕರೆದಾಗೆಲ್ಲಾ ನಡೆದುಹೋಗಿ ಅವರ ನೆರಳಿನಂತೇ ಬದುಕಿದವರು ನನ್ನ ಸಾಧ್ವಿ ತಾಯಿ. ಮನೆಯಲ್ಲಿ ಅಪ್ಪ ಬಡ ಮಕ್ಕಳಿಗೆ ನಿಶ್ಶುಲ್ಕವಾಗಿ ಪಾಠ ಹೇಳುತ್ತಿದ್ದರು, ಪಾಠ ಹೇಳಿಸಿಕೊಳ್ಳಲು ಬಂದ ಮಕ್ಕಳಿಗೆ ಕೆಲವೊಮ್ಮೆ ಊಟ-ತಿಂಡಿಯೆಲ್ಲಾ ನಮ್ಮನೆಯಲ್ಲೇ ನಡೆಯುತ್ತಿತ್ತು. ಕೆಲವು ಮಕ್ಕಳಿಗಂತೂ ಬಟ್ಟೆ-ಪುಸ್ತಕ ವಗೈರೆ ಕೊಡಿಸುತ್ತಿದ್ದರು. ಹಳೆಯ ಪಠ್ಯಪುಸ್ತಕಗಳನ್ನು ಸಂಪಾದಿಸಿ ಮಾರ್ನೇವರ್ಷದ ಬಡಮಕ್ಕಳಿಗೆ ಕೊಟ್ಟುಬಿಡುತ್ತಿದ್ದರು. ಇದಕ್ಕೆಲ್ಲಾ ಅಮ್ಮನ ಸಹಾಯ ಕೂಡ ಇತ್ತು.ಇರುವ ದಿನಸಿಗಳಲ್ಲಿ ಅದಷ್ಟೂ ರುಚಿರುಚಿಯಾದ ಅಡುಗೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ದುರ್ಗಾನಮಸ್ಕಾರ, ಮಂಗಳಗೌರೀವ್ರತ, ಶನಿವಾರ ಒಪ್ಪೊತ್ತು ಹೀಗೇ  ನೇಮನಿಷ್ಠೆ ಮಾತ್ರ ಬಹಳ ಜೋರಾಗೇ ಇತ್ತು. ಒಪ್ಪೊತ್ತಿನ ದಿನ ರಾತ್ರಿ ಊಟಮಾಡ್ತಿರಲಿಲ್ಲ. ಸ್ವಲ್ಪವೇ ಸ್ವಲ್ಪ ಒಗ್ಗರಣೆ ಅವಲಕ್ಕಿನೋ ಮೊಸರವಲಕ್ಕಿನೋ ತಿನ್ನುತ್ತಿದ್ದರು. ಆಗೆಲ್ಲಾ ಅಪ್ಪ ಸುಮ್ನೇ ಛೇಡಿಸ್ತಿದ್ರು

ಆಚೆಮನೆ ಸುಬ್ಬಮ್ಮಂಗೆ ಏಕಾದಶಿ ಉಪವಾಸ
ಏನೋ ಸ್ವಲ್ಪ ತಿಂತಾರಂತೆ ಅವಲಕ್ಕಿ ಉಪ್ಪಿಟ್ಟು ಪಾಯಸ .....

ಸದಾ ಕೆಲಸಗಳ ಏಕತಾನತೆಯಲ್ಲಿ ಬೇಸರವಾಗಬಹುದು ಎಂಬ ಅನಿಸಿಕೆಯಿಂದ ಅಮ್ಮನನ್ನು ಗೋಳುಹುಯ್ದುಕೊಳ್ಳುತ್ತಿದ್ದ ಅಪ್ಪನ ಆ ವರಾತವೂ ಒಂದರ್ಥದಲ್ಲಿ ಅಮ್ಮನಿಗೂ ಬೇಕಾಗಿಯೇ ಇರುತ್ತಿತ್ತು. ಸೌಂದರ್ಯದಲ್ಲಿ  ಕಾಶ್ಮೀರೀ ಸೇಬಿನ ಹಾಗೇ ಗುಲಾಬಿ-ಬಿಳಿ ಮಿಶ್ರಬಣ್ಣದ ಅಮ್ಮ ನಿರಾಭರಣ ಸುಂದರಿ. ಕಡೆದಿಟ್ಟ ಶಿಲಾಬಾಲಿಕೆಯಂತಹ ಅಂಗಸೌಷ್ಟವ, ದಾಳಿಂಬೆ ಬೀಜಗಳಂತಹ ದಂತಪಂಕ್ತಿ, ಸಂಪಿಗೆ ಎಸಳಿನ ನಾಸಿಕ, ಕಾಮನಬಿಲ್ಲಿನ ಹುಬ್ಬಿನ ಆಕೆ ಕಮಲನಯನೆ. ಅಲಂಕರಿಸಿಕೊಂಡರೆ ಥೇಟ್ ಶ್ರೀಮನ್ಮಹಾಲಕ್ಷ್ಮಿ! ಕ್ಷುಲ್ಲಕ ಕಾರಣಕ್ಕೆ ಕೋಪಮಾಡಿಕೊಂಡು ಮಲಗಿದ್ದಾಗ ಬಂದು ಮುದ್ದಿಸಿ, ರಮಿಸಿ ಕರೆದೊಯ್ದು ಊಟಾನೋ ತಿಂಡೀನೋ ಕೊಡುತ್ತಿದ್ರು. ಬೆಣ್ಣೆಮನೆ ಮಾಣಿ ನನಗೆ ಕಲ್ಲಿನಲ್ಲಿ ಹೊಡೆದು ಕಣ್ಣ ಹತ್ತಿರ ಆದ ಗಾಯಕ್ಕೆ ಅವರ ಸೀರೆಯನ್ನೇ ಹರಿದು ಕಟ್ಟಿ ಹಿಯತ್ತಿದ್ದ ರಕ್ತವನ್ನು ತಡೆಯಲು ಯತ್ನಿಸಿದ್ದರು. ಗುಡುಗಿಗೆ ಹೆದರುತ್ತಿದ್ದ ನನ್ನನ್ನು ತನ್ನ ಹೊದಿಕೆಯೊಳಗೇ ಸೇರಿಸಿಕೊಂಡು ಮಲಗಿಸಿ ಮೈದಡವಿ ಧೈರ್ಯ ಹೇಳುತ್ತಿದ್ದರು. ನವರಾತ್ರಿ, ದೀಪಾವಳಿ ಕಾಲದಲ್ಲಿ ಮುತ್ತೈದೆಯರಲ್ಲಿ ಹಲವರನ್ನು ಕರೆದು ಅರಿಶಿನ-ಕುಂಕುಮ-ಬಳೆ-ಕಣ-ಕಾಣಿಕೆ ಕೊಟ್ಟು ನಮಿಸುತ್ತಿದ್ದುದು ಹಬ್ಬಗಳ ಸಾಲು ಬಂದಾಗ ನೆನಪಾಗುವಂಥಾ ವಿಷಯ. ಹಬ್ಬುಮಾಸ್ತರಿಗೆ ತಕ್ಕ ಜೋಡಿ ಎನಿಸಿಕೊಂಡ ಅಮ್ಮ ಆದರ್ಶ ಗೃಹಿಣಿಯ ಅಷ್ಟೂ ಲಕ್ಷಣಗಳನ್ನು ಮೈವೆತ್ತವರು.

ಇಂಥಾ ಅಪ್ಪ-ಅಮ್ಮನಿಗೆ ನಾನಾದರೂ ಯಾಕೆ ಹುಟ್ಟಿ ಅವರ ನೋವಿಗೆ ಕಾರಣವಾದೆ ಎಂದೂ ಅನಿಸುತ್ತಿದೆ. ನಿವೃತ್ತರಾಗುವ ಕಾಲಕ್ಕೆ ಸ್ವಂತ ಊರಾದ ಮಾಲಂಗೆರೆಗೆ ಬಂದು ಪಿತ್ರಾರ್ಜಿತವಾಗಿ ಇದ್ದ ಮನೆಯಲ್ಲೇ ಉಳಿದುಕೊಂಡರಂತೆ. ಅಣ್ಣನಿಗೆ ಮದುವೆ ವಯಸ್ಸಾಗಿತ್ತು. ಎಂ ಕಾಂ ಓದಿದ್ದರೊ ಒಬ್ಬನೇ ಮಗನಾದುದರಿಂದ ಕೆಲಸಕ್ಕಾಗಿ ತಮ್ಮಿಂದ ದೂರ ಹೋಗುವುದು ಬೇಡವೆಂದು ಹೇಳಿದ್ದರಂತೆ. ನಿತ್ಯವೂ ನನ್ನನ್ನು ನೆನೆದು ಆಗಾಗ ಕಣ್ಣೀರು ಹಾಕುತ್ತಿದ್ದರಂತೆ. ಇದ್ದೊಬ್ಬ ತಂಗಿ ಈ ರೀತಿ ಮಾಡಿಬಿಟ್ಟಮೇಲೆ ತನಗೆ ಮದುವೆಯೇ ಬೇಡವೆಂದು ಅಣ್ಣ ಮದುವೆಯೇ ಆಗಲಿಲ್ಲ. ಅರವತ್ತು ದಾಟಿದ ಅಣ್ಣನನ್ನು ಈಗ ನೋಡಿದರೆ ಪಾಪಾ ಎನಿಸುತ್ತದೆ. ಮಾಡಿಬಡಿಸಲು ಯಾರೂ ಇಲ್ಲ, ಕಾಯಿಲೆ ಕಸಾಲೆಗೆ ಆಗಿಬರುವವರಿಲ್ಲ. ನೆಂಟರು-ಇಷ್ಟರು ಊಹುಂ ಬ್ರಹ್ಮಚಾರಿಯ ಮನೆಗೆ ಯಾಕಾದರೂ ಬರುತ್ತಾರೆ?  

ಹಳದೀಪುರದಲ್ಲಿರುವಾಗ ಹೊನ್ನಾವರ ಕಾಲೇಜಿಗೆ ನಾನು ಹೋಗುತ್ತಿದ್ದೆನಲ್ಲಾ ಅಲ್ಲಿಯೇ ನನಗೆ ಮ್ಯಾಥ್ಯೂ ಪರಿಚಯವಾಯ್ತು. ಸುಂದರ ಹುಡುಗ ಕೇರಳಕಡೆಯವನು; ಮಲೆಯಾಳಿ. ಅತನ ತಂದೆ ಮರದ ಹಾಗೂ ಸತ್ತ ಎಮ್ಮೆಗಳ ಕೊಂಬಿನಿಂದ ಬೊಂಬೆಗಳನ್ನು ತಯಾರಿಸಿಕೊಡುವ ಚಿಕ್ಕ ಕೈಗಾರಿಕಾ ಮಳಿಗೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಅವರು ಹೊನ್ನಾವರಕ್ಕೆ ಬಂದುಳಿದಿದ್ದು. ರಾಜಕುಮಾರ್ ನಟಿಸಿದ ನಾನೊಬ್ಬಕಳ್ಳ, ಶಂಕರ್ ಗುರು ಸಿನಿಮಾಗಳನ್ನೆಲ್ಲಾ ನೋಡಿದ್ದ ನನಗೆ ಮ್ಯಾಥ್ಯೂ ತುಂಬಾ ಇಷ್ಟವಾಗಿದ್ದ. ಇಷ್ಟವಾಗಲು ಕಾರಣವೂ ಇತ್ತು. ಆತ ಒಮ್ಮೆ ಇಷ್ಟಪಡುವುದಾಗಿ ಹೇಳಿದ್ದ. ಎಷ್ಟೋ ದಿನಗಳ ನಂತರ ಕಷ್ಟಪಟ್ಟು ತಾನು ಅದನ್ನು ಹೇಳಿದುದಾಗಿಯೂ ಕಾಲೇಜು ಮುಗಿಸಿ ಒಳ್ಳೆಯ ನೌಕರಿ ಹಿಡಿದು ಮದುವೆ ಆಗುತ್ತೇನೆಂದೂ ಒಂದೊಮ್ಮೆ ನಾನು ತಿರಸ್ಕರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದೂ ಹೇಳಿಬಿಟ್ಟ. ಹಾಗೆಲ್ಲಾ ಎಲ್ಲರ ಎದುರಿಗೆ ಹೇಳಿಕೊಳ್ಳುವ ವಿಷಯ ಅದಾಗಿರಲಿಲ್ಲ. ಬಹಳ ದಿನಗಳ ತನಕ ನಾನು ಉತ್ತರಿಸಲೇ ಇಲ್ಲ, ಒಮ್ಮೆ ಒಂದು ವಾರದ ಕಾಲ  ಸತತವಾಗಿ ಮ್ಯಾಥ್ಯೂ ಕಾಲೇಜಿಗೆ ಬರಲೇ ಇಲ್ಲ. ಇಂದಿನಂತೇ ಅಂದು ಮೊಬೈಲು ವಗೈರೆ ಇರಲಿಲ್ಲ. ಎಲ್ಲಿಗೆ ಹೋದನೆಂಬ ಸುಳಿವೇ ಇರಲಿಲ್ಲ. ಬೊಂಬೆ ತಯಾರಿಕಾ ಕೇಂದ್ರದ ಸುತ್ತಮುತ್ತ ಹೋಗಿ ನೋಡಿದೆ, ಅಲ್ಲೂ ಕಾಣಲಿಲ್ಲ. ಅಲ್ಲಿರುವ ಯಾರಲ್ಲಾದ್ರೂ ಕೇಳೋಣಾ ಎಂದುಕೊಂಡೆ.....ಏನಂತ ಕೇಳಲಿ? .......ಅವರು ಏನು ತಿಳಿದಾರು?....ಅಲ್ಲವೇ? ಸುಮ್ಮನೇ ಮರಳಿದೆ. ನನ್ನ ಸಲುವಾಗಿ ಆತ ಸಾಯದಿರಲಿ ಎಂದು ಅದೆಷ್ಟು ದೇವರಲ್ಲಿ ಪ್ರಾರ್ಥಿಸಿದೆನೋ ಗೊತ್ತಿಲ್ಲ. ಎಣ್ಣೆ ಆರಿಹೋದ ದೀಪದಂತೇ ದಿನದಿನವೂ ನಿಸ್ತೇಜಳಾಗುತ್ತ ನಡೆಯುತ್ತಿದ್ದೆ. ಮಾರನೇ ವಾರ, ಯಾವದೇವರ ಅನುಗ್ರಹವೋ ತಿಳಿಯದು...ಮ್ಯಾಥ್ಯೂ ಕಾಲೇಜಿಗೆ ಬಂದ. ಕೇಳಿದೆ ಯಾಕೆ ಬರಲಿಲ್ಲವೆಂದು? ಅವರ ಮನೆಯಲ್ಲಿ ಎಲ್ಲರೂ ಊರಿಗೆ ಹೋಗಿದ್ರಂತೆ. ನೀನು ಹೇಗೂ ಪ್ರೀತಿಸುವುದಿಲ್ಲ ಅದೆಲ್ಲಾ ನಿನಗ್ಯಾಕೆ? ಎಂದ. ನಾನು ಸುಮ್ಮನೇ ಇದ್ದೆ. ಆತನೂ ಮಾತನಾಡಲಿಲ್ಲ. ಆ ನಂತರ ನಿತ್ಯವೂ ನೋಡ್ತಿದ್ದೆವು. ನನ್ನೊಳಗೆ ನನಗೇ ಅರಿವಿಲ್ಲದಂತೇ ಆತನ ಪ್ರತಿಷ್ಠಾಪನೆಯಾಗಿತ್ತು.

ದೇಹವೆಂಬ ದೇಗುಲದಲ್ಲಿ
ಆತ್ಮವೆಂಬ ಶಿವಲಿಂಗದ ಮೇಲೆ
ಪ್ರೀತಿ ಎಂಬ ಪುಷ್ಪ ಎಂದೆಂದೂ ಬಾಡದಿರಲಿ

ಎಂದು ಕೊನೆಯವರ್ಷದ ಕಾಲೇಜು ಹುಡುಗರು ಹುಡುಗಿಯರಿಗೆ ಆಟೋಗ್ರಾಫ್ ಬರೆದುಕೊಡುವುದನ್ನು ನೋಡಿದ್ದೆ. ಎಂತೆಂಥಾ ಬರಹಗಳು! ಪ್ರೀತಿಗಾಗಿ ಜ್ ಮಹಲ್ ಕಟ್ಟಿಸಿದ ಎಂಬ ಶಹಜಹಾನ್ ಕಥೆ ಕೇಳಿದ್ದೆ. ಲೈಲಾ-ಮಜನೂ ಕಥೆನೂ ಕೇಳಿದ್ದೆ. ಜಗತ್ತು ಬಹಳ ಸುಂದರವಾಗಿ ಕಾಣುತ್ತಿತ್ತು. ಮ್ಯಾಥ್ಯೂ ರಾಜಕುಮಾರನ ರೀತಿ ಕಾಣ್ತಿದ್ದ. ನಿಂತಲ್ಲಿ, ಕುಳಿತಲ್ಲಿ, ಹೋದಲ್ಲಿ, ಬಂದಲ್ಲಿ ಎಲ್ಲೆಲ್ಲೂ ಮ್ಯಾಥ್ಯೂ ...ಮ್ಯಾಥ್ಯೂ.......ಮ್ಯಾಥ್ಯೂ....... ಆತನಿಗೆ ಹೇಳಿಬಿಡುವುದೇ ಸರಿ ಎನಿಸಿತು. ಒಪ್ಪಿಗೆ ಕೊಟ್ಟುಬಿಟ್ಟೆ. 

ಒಂದುದಿನ ಅಪ್ಪ ಬಹಳ ಕೆಲಸಗಳ ಒತ್ತಡದಲ್ಲಿದ್ದರು. ನಾನು ಕಾಲೇಜಿಗೆ ಹೋಗುತ್ತೇನೆಂದು ಹೊರಟೆ. ಅದೇ ಕೊನೆ. ನಾನೂ ಮ್ಯಾಥ್ಯೂ ಮೊದಲೇ ನಿರ್ಧರಿಸಿದಂತೇ ಒಟ್ಟಿಗೆ ಸೇರಿ ಕೇರಳದ ಹಾದಿ ಹಿಡಿದುಬಿಟ್ಟೆವು. ಕೇರಳ ತಲ್ಪುವ ವರೆಗೆ ಬಸ್ಸುಗಳಲ್ಲಿ ನಮ್ಮಂಥಾ ರಾಜ-ರಾಣಿ ಇನ್ಯಾರಿದ್ದಾರೆ ಅನಿಸುತ್ತಿತ್ತು. ಅಂತೂ ಕೇರಳ ತಲುಪಿಬಿಟ್ಟೆವು. ನನಗೋ ಮಲಯಾಳ ಬರದು. ಅಲ್ಲಿ ಗುಟ್ಟಾಗಿ ಒಂದು ಕೊಠಡಿಯಲ್ಲಿದ್ದೆವು. ಮ್ಯಾಥ್ಯೂ ಮನೆಗೂ ಸುದ್ದಿ ಗೊತ್ತಿರಲಿಲ್ಲ. ಒಂದು ವರ್ಷ ಹಾಗೂ ಹೀಗೂ ಕಳೆದುಹೋಯ್ತು. ಮ್ಯಾಥ್ಯೂ ಅದೆಲ್ಲೋ ಕೆಲಸಕ್ಕೆ ಹೋಗುತ್ತಿದ್ದ. ಅವನಿಗೆ ಕೇರಳದ ಸ್ನೇಹಿತರು ಬಹಳ ಮಂದಿ ಇದ್ದರು. ಅವರ ಸಂಗದಿಂದ ಮ್ಯಾಥ್ಯೂ ಚಟಗಳನ್ನು ಅಂಟಿಸಿಕೊಳ್ಳ ತೊಡಗಿದ್ದು ನನಗೆ ತಿಳಿಯಲೇ ಇಲ್ಲ. ಬರಬರುತ್ತಾ ಮ್ಯಾಥ್ಯೂ ನನ್ನನ್ನು ನಿರ್ಲಕ್ಷಿಸ ತೊಡಗಿದ. ನನ್ನೊಡನೆ ದೇಹಸಂಪರ್ಕ ಬೆಳೆಸುವುದನ್ನೇ ನಿಲ್ಲಿಸಿದ್ದ. ಆತನಿಗೆ ಅದೇನು ಕಾಯಿಲೆಯೋ ತಿಳಿಯದಾಯ್ತು, ಒಂದು ದಿನ ಕುಡಿದ ಅಮಲಿನಲ್ಲೇ ನರಳಿ ಸತ್ತುಹೋದ.  

ನಾನು ಅನಾಥಳಾಗಿದ್ದೆ. ಮ್ಯಾಥ್ಯೂಗೆ ಕೊಟ್ಟ ಶರೀರವನ್ನು ಹೊತ್ತು ಮತ್ತೆ ಊರಿಗೆ ಹೋಗುವ ಮನಸ್ಸು ಇರಲಿಲ್ಲ. ಮೇಲಾಗಿ ನಾನು ಹಾಗೆ ಯೋಚಿಸುವ ಮುನ್ನವೇ ನನಗೆ ಪ್ರಜ್ಞೆ ತಪ್ಪಿತ್ತು. ಎಚ್ಚರಗೊಂಡಾಗ ನಾನು ಯಾರದೋ ಮನೆಯಲ್ಲಿದ್ದೆ. ಅಲ್ಲಿ ಕಂಡಾತ ಹೇಳಿದ ಆತ ಮ್ಯಾಥ್ಯೂವಿಗೆ ಹಣ ಕೊಟ್ಟಿದ್ದನಂತೆ. ಮ್ಯಾಥ್ಯೂ ಸತ್ತುಹೋದುದರಿಂದ ತನ್ನ ಮನೆಯಲ್ಲೇ ಇರಲಿ ಎಂದು ಕರೆದುಕೊಂಡು ಬಂದೆನೆಂದೂ ಮೇರಿ ಎಂದು ನಾಮಕರಣ ಮಾಡಿದ್ದೇನೆಂದೂ ಕ್ರಿಸ್ತಿಯನ್ ಮತವನ್ನು ಸ್ವೀಕರಿಸಿ ತನ್ನೊಂದಿಗೆ ಬಾಳಬೇಕೆಂದೂ ಒಂದೊಮ್ಮೆ ಹಾಗೆ ಮಾಡದಿದ್ದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲವೆಂದೂ ಆಗ್ರಹಪೂರ್ವಕ ತಿಳಿಸಿದ. ಗೊತ್ತುಗುರಿಯೇ ಇಲ್ಲದ ಬದುಕಿಗೆ ಯಾವುದನ್ನು ಎಲ್ಲಿ ಹೇಗೆ ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳುವ ತಾಕತ್ತಿರಲಿಲ್ಲ. ನನ್ನತನ ಎಂಬುದು ಅಳಿಸಿಹೋಗಿತ್ತು. ಪ್ರೀತಿಯ ಆದರ್ಶಗಳೆಲ್ಲಾ ಕೇವಲ ಆಮಿಷಗಳಾಗಿ ನನ್ನೆದುರೇ ಧಗ ಧಗ ಧಗ ಧಗನೇ ಹೊತ್ತು ಉರಿದಂತೇ ಭಾಸವಾಗುತ್ತಿತ್ತು. ಊಟಕ್ಕೂ ಅನುಕೂಲವಿಲ್ಲದ ಸ್ಥಿತಿಯಲ್ಲಿ ಆ ಶ್ರೀಮಂತನ ಮನೆಯಲ್ಲಿ ಆತನ ಹೇಳಿಕೆಗಳನ್ನು ಕೇಳುತ್ತಾ ಕೆಲವು ದಿನಗಳನ್ನು ಕಳೆದೆ. ಒಂದಷ್ಟು ದಿನ ಆತ ನನ್ನನ್ನು ಬೇಕಷ್ಟು ಭೋಗಿಸಿದ. ಆತನ ಮುಖ್ಯ ಕಸುಬು ಹೆಣ್ಣುಮಕ್ಕಳ ಸರಬರಾಜು ಎಂಬುದು ಅಮೇಲೆ ತಿಳಿಯಿತು. ತಿಂಗಳುಗಳು ಕಳೆದು ಆತ ನನ್ನನ್ನು ಇನ್ಯಾರಿಗೋ ಮಾರಿಬಿಟ್ಟ.

ದಾರಿಯಲ್ಲಿ ಹಾರಿಬಿದ್ದ ಹಾರದ ನಡುವಿನ ಹೂವಿಗೆ ತೇರನೇರಿ ಮೆರೆವ ಭಾರೀಯೋಗ ಬರುವುದಾದರೂ ಎಂತು? ಆದರೂ ನನ್ನನ್ನು ಕೊಂಡುಕೊಂಡ ಮನುಷ್ಯ ಒಳ್ಳೆಯವನಿದ್ದ. ಖರೀದಿಸುವ ವ್ಯಕ್ತಿಯಲ್ಲೂ ದೇವರು ನನಗಾಗಿ ಒಬ್ಬ ಕರುಣಾಮಯಿಯನ್ನು ಅನುಗ್ರಹಿಸಿದ್ದ. ಆತನಲ್ಲಿ ನನ್ನೆಲ್ಲಾ ವಿಷಯವನ್ನೂ ತೋಡಿಕೊಂಡೆ. ಆತನಿಗೆ ಅದೇನು ಅನ್ನಿಸಿತೋ ಅರಿವಾಗಲಿಲ್ಲ. ಆತ ಹೇಳಿದ "ನೀನು ಹಿಂದೆ ಏನೇ ಆಗಿರು, ಇಂದಿನಿಂದ ನೀನು ನನ್ನವಳೆಂದು ಭಾವಿಸುತ್ತೇನೆ. ನನಗೆ ಎರಡು ಮಕ್ಕಳು-ಹೆಂಡತಿಯಿಲ್ಲ. ಆರ್ಥಿಕವಾಗಿ ಬೇಕಷ್ಟಿದೆ, ಆದರೆ ಮಕ್ಕಳನ್ನು ನೋಡಿಕೊಳ್ಳಲು ಮತ್ತು ನನ್ನ ಅವಶ್ಯಕತೆಗಳನ್ನು ಪೂರೈಸಲು ಒಬ್ಬರು ಬೇಕು. ಅದಕ್ಕಾಗಿ ಹುಡುಕುತ್ತಿದ್ದೆ. ಅನಿರೀಕ್ಷಿತವಾಗಿ ಯಾರದೋ ಮೂಲಕ ನನಗೆ ನೀನು ಸಿಕ್ಕಿದೆ. ಇನ್ನು ಚಿಂತಿಸಬೇಡ, ಇಲ್ಲೇ ಇದ್ದುಬಿಡು" ಎಂದ. ಅಲ್ಲಿಯೇ ಕಾಲಹಾಕುತ್ತಿದ್ದೇನೆ. ಆತನ ಮಕ್ಕಳ ಲಾಲನೆಪಾಲನೆಯಲ್ಲಿ ತೊಡಗಿಕೊಂಡು ಅವೇ ನನ್ನ ಮಕ್ಕಳಾಗಿಬಿಟ್ಟಿವೆ. ನನಗೆ ಬೇರೇ ಮಕ್ಕಳ ಅಗತ್ಯತೆ ಕಾಣಲಿಲ್ಲ. ಜೀವನದಲ್ಲಿ ಹಲವು ಅಧ್ಯಾಯಗಳು ತೆರೆದಿವೆ, ಕೆಲವು ಮುಗಿದಿವೆ, ಕೆಲವು ಮುಗಿಯುತ್ತಿವೆ ಇನ್ನೂ ಕೆಲವು ಇನ್ಯಾವಾಗ ಮುಗಿಯುತ್ತವೋ ತಿಳಿಯದು. ಹಳೆಯ ಹೊತ್ತಗೆಯ ಹರಿದ ಹಾಳೆಗಳಂತೇ ಬದುಕಿನ ಪುಟಗಳು ಹರಿದುಹೋಗಿವೆ. ಹರಿದ ಹಾಳೆಗಳಿಗೆ ಅದೆಷ್ಟೇ  ತೇಪೆ ಹಾಕಿದರೂ ಮೂಲರೂಪ ಬರುವುದಿಲ್ಲವಷ್ಟೇ ? ಅದೇ ರೀತಿ ನನ್ನ ಕಥೆಯೂ ಕೂಡಾ.  

ಐವತ್ತೈದರ ಹೊಸ್ತಿಲಲ್ಲಿರುವ ನನಗೆ ಅನೇಕ ವರ್ಷಗಳಿಂದ ಅಪ್ಪ-ಅಮ್ಮನ ನೆನಪು, ಮನೆಯ ನೆನಪು, ಒಡಹುಟ್ಟಿದ ಅಣ್ಣನ ನೆನಪು ತಡೆದುಕೊಳ್ಳಲಾಗದಷ್ಟು ಆಗತೊಡಗಿತು. ಒಮ್ಮೆ ನೋಡಿಬರಬೇಕು.....ಒಮ್ಮೆ ಕಂಡುಬರಬೇಕು ಎಂಬ ಆಸೆ. ಅವರು ಏನೇ ಅಂದರೂ ಸರಿಯೇ .....ಅವರನ್ನೊಮ್ಮೆ ಕಾಣಬೇಕು ಎಂಬ ಅದಮ್ಯ ಬಯಕೆ ಯನ್ನು ತಿಳಿಸಿ, ಈಗಿನ ನನ್ನವರನ್ನೂ ನನ್ನೊಟ್ಟಿಗೆ ಕರೆದುಕೊಂಡು ಮಾಲಂಗೆರೆಗೆ ಬಂದೆ. ಊರು ಬದಲಾಗಿ ಹೋಗಿದೆ. ಆದರೂ ನಮ್ಮ ಹಳ್ಳಿಯ ಸೊಗಡನ್ನು ಇಷ್ಟಾದರೂ ಉಳಿಸಿಕೊಂಡಿದೆ ಎನಿಸಿತು. ಮುಪ್ಪಿನ ದಿನಗಳು ಸಮೀಪಿಸಿದ ಅಣ್ಣ ಪಾಪ ಒಬ್ಬನೇ ಇದ್ದಾನೆ. ಆತನೇ ಅಡಿಗೆ ಮಾಡಿಕೊಳ್ಳುತ್ತಾನೆ. ಪ್ರೀತಿಯ ಅಪ್ಪ-ಅಮ್ಮ ಕಾಲವಾಗಿ ಹದಿಮೂರು ವರ್ಷಗಳೇ ಕಳೆದುಹೋದವಂತೆ. ಗೋಡೆಯಮೇಲೆ ಅಣ್ಣಹಾಕಿರುವ ಅವರ ಭಾವಚಿತ್ರಗಳನ್ನು ಕಂಡು ಕಣ್ಣೀರು ಕೋಡಿ ಹರಿಯಿತು. ಎಂಥಾ ಅಪ್ಪ, ಎಂಥಾ ಅಮ್ಮ, ಅಂತಹ ಅಪ್ಪ-ಅಮ್ಮಂದಿರಿಗೆ ಇಂಥಾ ಮಗಳು.....ಓದಲಿ ಎಂದು ಕಾಲೇಜಿಗೆ ಕಳಿಸಿದರೆ ವಿಶ್ವಾಸದ್ರೋಹಮಾಡಿಬಿಟ್ಟೆ. ಅದೆಷ್ಟು ನೊಂದರೋ, ಮುದ್ದಿನ ಮಗಳಿಗಾಗಿ ಅದೆಷ್ಟು ಅಲವತ್ತುಕೊಂಡರೋ....ಅದೆಷ್ಟು ದಿನ ಯಾರೋ ಹುಡುಗಿ ದೂರದಲ್ಲಿ ಬಸ್ಸಿನಿಂದಿಳಿದು ಬರುವಾಗ ನಾನೇ ಬಂದಿರಬೇಕೆಂದು ಭಾವಿಸಿದರೋ.......ಅವರ ಯಾವ ಜನ್ಮದ ಪಾಪಕ್ಕಾಗಿ ನನ್ನನ್ನು ಅವರ ಮಗಳಾಗಿ ದೇವರು ಅವರಿಗಿತ್ತನೋ..........ಯೋಚನಾಲಹರಿ ಅಸಾಧ್ಯವಾಗಿ ಧುಮುಗುಡುತ್ತಿತ್ತು; ಮೆದುಳಿನೊಳಗೆ ಭೋರ್ಗರೆವ ಕಡಲ ಸಾವಿರ ಅಲೆಗಳ ಅಬ್ಬರ ! ನಾನು ಮಾಡಿದ ತಪ್ಪಿಗೆ ನನಗೆ ತಕ್ಕ ಶಿಕ್ಷೆ ಎಂದುಕೊಂಡೆ....ಆದರೆ ಏನೂ ತಪ್ಪುಮಾಡದ ಅಣ್ಣನಿಗೆ, ಅಪ್ಪ-ಅಮ್ಮನಿಗೆ ನನ್ನಿಂದಾಗಿ ಪ್ರಾಪ್ತವಾದ ಮಾನಸಿಕ ಹಿಂಸೆಯನ್ನು ನೆನೆಸಿಕೊಂಡು ಅತ್ತೆ...ಆತ್ತೆ. ಹದಿಹರೆಯದ ಹುಡುಗ-ಹುಡುಗರಿಗೆ ಹೇಳುತ್ತೇನೆ--ಆ ವಯಸ್ಸಿನ ಪ್ರೀತಿ ಶಾಶ್ವತವಲ್ಲ, ಅದು ನಿಜವಾದ ಪ್ರೀತಿಯಲ್ಲ. ಮನಸ್ಸು ಮಾಗಿದಮೇಲೆ ಒಡಮೂಡುವ ಪ್ರೀತಿ ಶಾಶ್ವತ. ರೂಪ, ಯೌವ್ವನ, ಅಧಿಕಾರ ಯಾವುದೂ ಶಾಶ್ವತವಲ್ಲ, ಅವುಕೊಡುವ ಸುಖವೂ ಶಾಶ್ವತವಲ್ಲ. ನಾನು ಬದಲಾಗಿದ್ದೇನೆ. ಅಪ್ಪ-ಅಮ್ಮಂದಿರ ಹೆಸರಿನಲ್ಲಿ ಅನಾಥಾಶ್ರಮ ನಡೆಸಬೇಕೆಂದುಕೊಂಡಿದ್ದೇನೆ. ಅಣ್ಣ ಹೇಗೂ ನನ್ನೊಂದಿಗೆ ಬರಲಾರ. ಅದಕ್ಕಾಗಿ ಅಣ್ಣನಿಗೂ ಒಂದಷ್ಟು ಜನರ ಸಾಂಗತ್ಯ ಇರುತ್ತದೆ ಎಂಬ ಅನಿಸಿಕೆ ಇದೆ. ಬಡ-ನಿರ್ಗತಿಕ ಮಕ್ಕಳಿಗೆ ಆಶ್ರಯ ಕೊಡುವ, ಕೊಟ್ಟು ಅವರ ಬಾಳಿಗೆ ದಾರಿ ತೋರಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವ ಮನಸ್ಸಾಗಿದೆ. ಹಾಗೆಂದುಕೊಳ್ಳುತ್ತಿರುವಾಗಲೇ ಅದೋ ಅಲ್ಲಿ ಎದುರುಗೋಡೆಯಲ್ಲಿದ್ದ ಅಪ್ಪ-ಅಮ್ಮನ ಫೋಟೋ ಪಕ್ಕದಲ್ಲಿ ಭಗವದ್ಗೀತೆಯ ಚಿತ್ರವೊಂದು ಕಾಣುತ್ತಿದೆ. ಅಲ್ಲಿ ಬರೆದಿದೆ : ’ಪರಿವರ್ತನೆ ಜಗದ ನಿಯಮ’ 


Wednesday, October 31, 2012

ಪದ್ಯ ರಾಜ್ಯೋತ್ಸವ !


ಪದ್ಯ ರಾಜ್ಯೋತ್ಸವ !

ಕನ್ನಡದಲ್ಲಿ ಅನೇಕ ಬರಹಗಾರರು ಆಗಿಹೋಗಿದ್ದಾರೆ. ಒಬ್ಬೊಬ್ಬರ ಬರಹಗಳೂ ರೋಚಕ, ವಿಶಿಷ್ಟ. ಯಾವುದೋ ಹೊಸತನ ಅಲ್ಲಿ ಕಾಣುತ್ತದೆ. ಕನ್ನಡದ ಸೊಬಗನ್ನು ಹೆಚ್ಚಿಸಲು ಶ್ರಮಿಸಿದ ಅಂತಹ ಕವಿ-ಸಾಹಿತಿಗಳಿಗೆ ರಾಜ್ಯೋತ್ಸವದ ಸಮಯದ ವಂದನೆಗಳು. ಈ ಸಲ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಬಾರದೇಕೆ ಎಂಬ ಅನಿಸಿಕೆ ನನ್ನದಾಗಿತ್ತು. ದಾನ ಎಂಬುದನ್ನು ಯಾರಿಗೂ ಎಲ್ಲೂ ಹೇಳದೇ ಮಾಡಬೇಕಂತೆ. ರಾಜಕಾರಣಿಗಳ ಹಾಗೇ ಹತ್ತು ರೂಪಾಯಿ ಕೊಟ್ಟಿದ್ದಕ್ಕೇ ಹತ್ತತ್ತು ಸರ್ತಿ ಟಿವಿ ಜಾಹೀರಾತು ಬಿತ್ತರಿಸಿಕೊಳ್ಳುವ ಬದಲು ದಾನ ಪ್ರಚಾರವಿಲ್ಲದೇ ನಡೆಯಬೇಕಾದಂತಹ ಕೆಲಸವಂತೆ. ಹಾಗಾದರೆ ರಾಜ್ಯೋತ್ಸವದ ಆಚರಣೆಯಲ್ಲಿ ದಾನವಿದ್ದರೆ ಅದನ್ನು ಹೇಳಬಾರದು ಎಂದಾಯ್ತು! ಹೀಗಾಗಿ ಹಾಗೆ ಮಾಡುವ ಬದಲು ಜೀವದಾನ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡರೆ ಕೆಲವರಲ್ಲಿ ಅದನ್ನು ಕೇಳಬಹುದು ಎನ್ನಿಸಿತು. ಅದೇ ವಿಷಯವನ್ನಿಟ್ಟುಕೊಂಡು ಬರೆಯಲು ಹೊರಟೆ. ಹಾಗೆ ಹೊರಟಾಗ ದಾಸರು ಎದುರಾದರು. ಅವರ ಗಿಳಿಯ ಮರಿಯನು....ಎಂಬ ಹಾಡು ನೆನಪಿಗೆ ಬಂತು.

ಕುರಿಯಮರಿಗಳ ತಂದು ಮನೆಗಳ
ಹೊರಗೆ ಕಟ್ಟುತ ಸೊಪ್ಪು ಸದೆಗಳ
ಹೊರೆಯ ಚೆಲ್ಲಿಸಿ ಕೊಯ್ವ ಪರಿಯನು ತೋರಬೇಡೆನಗೆ |
ಹಿರಿದು ಕತ್ತಿಯ ದನದ ಕುತ್ತಿಗೆ
ಹರಿವ ಮಂದಿಯು ಹಂದಿ ಜೀವನ
ತೊರೆದು ಮಾನವರಾಗುವಂತೆಯೆ ಮತಿಯ ನೀಡುವುದು || 

ಭಾರತೀಯರಲ್ಲಿ ಎಲ್ಲರೂ ಶಾಕಾಹಾರಿಗಳಲ್ಲ ಎಂಬುದನ್ನು ಒಪ್ಪುತ್ತೇನೆ. ಆದರೆ ತನ್ನ ಬದುಕಿಗಾಗಿ ಇನ್ನೊಂದು ಜೀವಿಯ ಬದುಕನ್ನು ಕಸಿದುಕೊಳ್ಳುವುದು, ನಾಶಪಡಿಸುವುದು  ಆಗಬಾರದ ಕೆಲಸ. ಕೇಳಿದರೆ ’ಬುದ್ಧಿಜೀವಿಗಳು’ ವೈಜ್ಞಾನಿಕ ಕಾರಣ ಕೊಡುತ್ತಾರೆ: ಆಹಾರ ಸರಪಳಿ ಮೊದಲಾದ ವಾದವನ್ನು ಮಂಡಿಸುತ್ತಾರೆ. ಸನಾತನ ಧರ್ಮದ ಮೂಲ ಆದರ್ಶವೇ ಅಹಿಂಸೆ. ನಮಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳು ಆಗಾಗ ವರದಿಯಾಗುತ್ತಿರುತ್ತವೆ; ಅವುಗಳನ್ನು ನೋಡಿಯಾದರೂ ತಿಳಿದುಕೊಳ್ಳಬೇಕು ಮಾನವೀಯತೆ ಎಂದರೇನು ಎಂಬುದನ್ನು. ಕೋಲಂಬಿಯಾದಲ್ಲಿ ಜನಿಸಿದ ಒಂದು ಮಗುವಿನ ಕುರಿತು ದಿನಪತ್ರಿಕೆಯಲ್ಲಿ ಓದಿದೆ. ಒಂದು ತಿಂಗಳ ಗಂಡು ಮಗು ತನ್ನನ್ನು ಹಾಸಿಗೆ, ಸೂಟ್ ಕೇಸ್, ಫ್ರಿಜ್ ಮೊದಲಾದ ಜಾಗಗಳಲ್ಲಿ ಬಚ್ಚಿಟ್ಟುಕೊಳ್ಳುವುದಂತೆ. ಕಣ್ಣುಬಿಟ್ಟರೆ ಕೆಂಡದುಂಡೆಯ ರೀತಿಯಂತೆ, ಉಸಿರಿನಲ್ಲಿ ಬೆಂಕಿಯಂತೆ! ಬಟ್ಟೆ-ಸೋಫಾ ಎಲ್ಲಾ ಸುಟ್ಟ ಕಲೆಗಳಿವೆಯಂತೆ. ಯಾರೋ ಭಸ್ಮಾಸುರನೇ ಇರಬೇಕು!!  ಹಿಂಸ್ರಪ್ರಾಣಿಗಳಿಗೂ ಪಕ್ಷಿಗಳಿಗೂ ಬುದ್ಧಿ ಮಾನವ ಮಟ್ಟದಲ್ಲಿಲ್ಲ. ಅವು ಹೊಟ್ಟೆಗಾಗಿಯೇ ಹುಟ್ಟಿವೆ. ಅದಕ್ಕಾಗೇ ಬದುಕುತ್ತವೆ. ಆದರೆ ಮಾನವ ಹಾಗಲ್ಲವಲ್ಲ?

ಯಾವುದೇ ಜನ್ಮವಿದ್ದರೂ ಕುರಿ, ಕೋಳಿ, ದನ, ಮೊಲ, ಎಮು, ಒಂಟೆ, ಊರ ಹಂದಿ ಈ ರೀತಿಯಾದ ಜನ್ಮಗಳನ್ನು ಮಾತ್ರ ನೀಡಬೇಡವೆಂದು ಭಗವಂತನಲ್ಲಿ ನನ್ನ ಪ್ರಾರ್ಥನೆ. ಅವುಗಳನ್ನು ಎಳೆಯುವುದು, ಕಾಲು ಮುರಿಯುವುದು, ಸಾಗಿಸುವುದು, ಕತ್ತರಿಸುವುದು,  ಸಾಯುವ ಮುನ್ನ ಕೊಡುವ ಚಿತ್ರಹಿಂಸೆಗಳು ಅಯ್ಯೋ ಶಿವನೇ .....

ಭರದೆ ಎಳೆಯುತ ಗಾಡಿಗೇರಿಸಿ
ಗರಗರನೆ ತಿರುಗಿಸುತ ಕೋಳಿಯ
ಜರಿದು ಜಾಗವೆ ಇರದ ಪಂಜರದೊಳಗೆ ತೂರಿಸುತ |  
ಸರಿಸಿ ತೆರೆಯುತ ಕದವನಾಪರಿ
ಬಿರುಸಿನಿಂದಾಚೆಯಲಿ ಕತ್ತನು
ತಿರುಚಿ ಎಸೆಯುತ ಸುಡಿಸಿಕೊಳ್ಳುವ ಜನ್ಮಬೇಡೆನಗೆ || 

’ಕೊಂದು ಪಾಪ ತಿಂದು ಪರಿಹಾರ’ ಎಂಬುದರ ಅರ್ಥವ್ಯಾಪ್ತಿ ಬೇರೇನೇ ಇದೆ. ಆದರೆ ಅನುಕೂಲಕ್ಕಾಗಿ ನಮ್ಮ ಜನ ಮಾಡಿಕೊಂಡ ರೀತಿ ಏನೆಂದರೆ ಜೀವಿಗಳನ್ನು ಕೊಂದರೆ ತಮಗೆ ಪಾಪವಿಲ್ಲ, ಅವು ನಮ್ಮ ಆಹಾರವಾದ್ದರಿಂದ ಆ ಪಾಪದಿಂದ ನಾವು  ವಿಮುಕ್ತಿ ಪಡೆಯುತ್ತೇವೆ -ಎಂದು. ಇದು ಅಕ್ಷರಶಃ ಅಸತ್ಯ! ಸಾಯುವಾಗ ಪ್ರಾಣಿಯೋ ಪಕ್ಷಿಯೋ ತನ್ನನ್ನು ಸಾಯಿಸಿದವರನ್ನು, ವ್ಯವಹಾರಿಕ ಲಾಭಕ್ಕಾಗಿ ತನ್ನ ಸಾವಿಗೆ ಕಾರಣರಾದವರನ್ನೂ, ಸಾಯಿಸಿದ ನಂತರ ತಿಂದು ಪರೋಕ್ಷ ಸಾವಿಗೆ ಕಾರಣರಾದವರನ್ನೂ ಶಪಿಸುತ್ತದಂತೆ. ಕೋಳಿಯೊಂದು ಸಾಯುವಾಗ ಹಾಗೆ ಶಪಿಸಿದರೆ ಅದಿಷ್ಟೂ ಜನ ಕೋಳಿಗಳಾಗಿ ಜನಿಸಬೇಕಾಗುತ್ತದೆ..ಅದೇ ರೀತಿ, ವಧೆಗೊಳಗಾಗುವ ಯಾವುದೇ ಜೀವಿ ಇರಲಿ ತನ್ನ ಜನ್ಮವೇ ಬರಲಿ ಎಂದು ಅವರಿಗೆ ಶಪಿಸುವುದಂತೆ. ಕೊಂದು ಪಾಪ ಪರಿಹಾರ ಆಗುವುದು ಆ ಪಾಪದಿಂದ ಎದುರಾಗಬಹುದಾದ ಸಮಸ್ಯೆಗಳನ್ನೂ ದುಃಖವನ್ನೂ ಜನ್ಮಾಂತರಗಳವರೆಗೂ ಉಂಡು ಎಂದುದೇ ಆ ಗಾದೆಯ ಅರ್ಥವಾಗಿದೆ.  ಆಹಾರ ವಿಷಯಕವಾಗಿ ’ಹಿಂದೂ ಜೀವನಧರ್ಮ’ದಲ್ಲಿ ಮುಂದೆ ಪ್ರತ್ಯೇಕ ಅಧ್ಯಾಯ ಬರುತ್ತದೆ, ಅಲ್ಲಿ ಬಹಳ ವಿಸ್ತೃತ ಮಾಹಿತಿ ಕೊಡಲು ಉದ್ಯುಕ್ತನಾಗುತ್ತೇನೆ.   

ಕರೆದು ಊಡಿಸಿ ಮುದ್ದುಗರೆವರೆ
ತೊರೆದು ಕರುಣಾಭಾವವೆಲ್ಲವ
ನೆರೆದು ಸುತ್ತಲು ಎತ್ತಿ ಕತ್ತರಿಸುವರು ಮೊಲಗಳನು |
ಹರಣವಪ್ಪುವ ಜೀವಿಗಳನೇ 
ಕರಿದು ತಿಂದರೆ ಪಾಪ ಪೋಪುದು
ಅರರೆ ನಿಮಗೇನಷ್ಟು ಸಂಕಟವೆಂಬ ಧೋರಣೆಯು ||   

ನಿತ್ಯ ಬೆಳಿಗ್ಗೆ ಎದ್ದರೆ ಅಮ್ಮನ ಹಾಲಿಲ್ಲದಿದ್ದರೂ ಪರವಾಗಿಲ್ಲ ಗೋವಿನ ಹಾಲು ಬೇಕೇಬೇಕು. ಅದನ್ನು ಯಾಂತ್ರಿಕವಾಗಿ ತಯಾರಿಸಲು ಸಾಧ್ಯವೇ ಇಲ್ಲ! ಸಿಗುವ ಹಾಲಿನ ಪುಡಿಗಳೆಲ್ಲಾ ಹಾಲನ್ನು ಆವಿಯಾಗಿಸಿ ಘನೀಕೃತರೂಪಕ್ಕೆ ತಂದವುಗಳೇ. ಎಂದಮೇಲೆ ಹಾಲು ಕೊಟ್ಟು ನಮ್ಮ ಬದುಕನ್ನು ಹಸನುಮಾಡುವ ಜೀವಿಯನ್ನು ಕೊಂದು ತಿನ್ನುವುದು ಎಂಥಾ ದುಷ್ಟತನ ಅಲ್ಲವೇ? ಮೊನ್ನೆ ಯಾರದೋ ಚಿತ್ರವನ್ನು ನೋಡಿದೆ: ಮನೆಯಂಗಳದಲ್ಲಿ ದಪ್ಪನೆಯ ಕುರಿ ಕಟ್ಟಿಹಾಕಿದ್ದರು. ಮಗುವಿನೊಡನೆ ಅಜ್ಜ ಕುರಿಯ ಪಕ್ಕ ನಿಂತಿದ್ದಾರೆ. ಮಗು ಕುರಿಯನ್ನು ನೋಡಿ ಆಡುತ್ತಿದೆ. ತಿಂಗಳುಗಳ ಕಾಲ ಸಾಕಿದ ಒಡೆಯನೇ ತನನ್ನು ಕತ್ತರಿಸುವಾಗ ಕುರಿಗೋ ಮೊಲಕ್ಕೋ ಆಗಬಹುದಾದ ಮಾನಸಿಕ ಯಾತನೆ ಎಷ್ಟಿರಬಹುದು ? ಮುದ್ದಾದ ಮೊಲ ಕಾಡಲ್ಲಿ ಆಡಿಕೊಂಡಿತ್ತು, ಅದನ್ನೂ ನಾಡಿಗೆ ತಂದು ಬೆಳೆಸುವ ಪರಿ ಬೆಳೆಯಿತು. ಮೊಲಗಳ ವಂಶಾಭಿವೃದ್ಧಿಯನ್ನು ಕೃತಕವಾಗಿಯಾದರೂ ಮಾಡಿಸುವ ಮಂದಿ ಕಚಕ್ಕನೆ ಅವುಗಳನ್ನು ಕತ್ತರಿಸುವಾಗ ಯಾವ ಕರುಣಾಭಾವವೂ ಬಾರದಲ್ಲಾ ಶಿವನೇ...

ದಾಸರಿಗೆ ಕೈಮುಗಿದು ಬೀಳ್ಕೊಟ್ಟು ಸ್ವಲ್ಪ ಮುಂದೆ ಸಾಗುತ್ತಿದ್ದಾಗ ಸರ್ವಜ್ಞ ಎದುರಾದ.

ಖಂಡಿಸದೆ ಕರಣವನು ದಂಡಿಸದೆ ದೇಹವನು
ಉಂಡುಂಡು ಸ್ವರ್ಗವನು ಬಯಸಿದೊಡೆ ಅದನೇನು
ರಂಡೆಯಾಳುವಳೇ -ಸರ್ವಜ್ಞ

ಎಂದಿದ್ದ ಸರ್ವಜ್ಞನ ದರುಶನ ಸಿಗುತ್ತಿದ್ದಂತೆಯೇ ಅನ್ನಿಸಿದ್ದು ಹೀಗೆ :

ಗಂಡುಬೀರಿಗಳೊಡನೆ ಗುಂಡನ್ನೂ ತುಂಡನ್ನೂ
ಉಂಡುಂಡು ಅಡ್ಡಡ್ಡ ಉದ್ದುದ್ದ ಮಲಗುವುದೇ
ಭಂಡ ಕಲಿಗಾಲ-ಗರ್ಮಜ್ಞ

ಸರ್ವಜ್ಞ ನನ್ನ ಒಂದೇ ಹಾಡಿಗೆ ಸುಸ್ತಾದ ಹಾಗೇ ಕಂಡಿತು! ಯಾಕೆಂದರೆ ಅವರೆಲ್ಲಾ ಬಾಳಿದ್ದು ರೀತಿನೀತಿಯಲ್ಲಿ. ಈಗ ಅದನ್ನೆಲ್ಲಾ ಅಕ್ಷರಗಳಲ್ಲಿ ಮುದ್ರಿಸಿ ಕಟ್ಟುಹಾಕಿಸಿ ಗೋಡೆಗಳ ಮೇಲೋ ಅವುಗಳ ಛಾಯಾಮುದ್ರಣವನ್ನು ಫೇಸ್ ಬುಕ್ಕಿನಲ್ಲೋ ಹಾಕಿ ದೊಡ್ಡತನ ತೋರಿಸಿಕೊಳ್ಳುವ ಕಾಲ. ಸರ್ವಜ್ಞರನ್ನು ಅಷ್ಟಕ್ಕೇ ಬೀಳ್ಕೊಟ್ಟೆ.

ಉದಯವಾಗಲಿ ನಮ್ಮ ಚಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು...... ಹಾಡು ದೂರದಿಂದ ಕೇಳಿಬಂತು. ದೂರದಲ್ಲಿ ಕೂತ ಹುಯಿಲಗೋಳ ನಾರಾಯಣರಾಯರು ಹಾಡುತ್ತಿದ್ದರು ಎಂದರು ಬೇರೇ ಹೇಳಬೇಕೇ?

ಡೀನೋಟಿಫೈ ಮಾಳ್ಪ ಯಡ್ಡಿಗಳು ಇಹ ನಾಡು
ಡಾನುಗಳು ಧನಮದದಿ ಆಳುತಿಹ ಬೀಡು
ಢಾಳಾಗಿ ಕಾಣುತಿಹ ಹಾಳು ಹಂಪೆಯ ಗೂಡು
ಡಾಮಿನನ್ಸ್ ಗಣಿಧಣಿಗಳುಂಡುಳಿದ ಬಾಡು !

ನಾನು ಪ್ರಯತ್ನಿಸುತ್ತಿರುವಾಗಲೇ ನಾರಾಯಣರಾಯರಿಗೆ ಏನನ್ನಿಸಿತೋ.. ಆಯ್ಯಯ್ಯೋ ತಾನು ಕಂಡ ಸುಂದರ ಕನ್ನಡ ನಾಡು ಈ ರೀತಿ ಆಧ್ವಾನಕ್ಕೆ ಒಳಗಾಗಿದೆಯೇ ಅನ್ನಿಸಿರಬೇಕು. ಹಾಡುವುದನ್ನೇ ನಿಲ್ಲಿಸಿಬಿಟ್ಟರು.

ಪಂಪ, ರಾಘವಾಂಕ, ಕುಮಾರವ್ಯಾಸ, ರನ್ನ, ಜನ್ನ, ಪೊನ್ನ- ಕನ್ನಡದ ಇಂತಿಂಥಾ ಕವಿಗಳು ಬರುತ್ತಾರೇನೋ ಎಂದು ದಾರಿ ಕಾದೆ. ಹೊಸಗನ್ನಡದ ಅದರಲ್ಲೂ ನವ್ಯೋತ್ತರ ಕಾವ್ಯಗಳ ಭರಾಟೆಯಲ್ಲಿ ಮೂಲ ಕನ್ನಡದ ಸೊಬಗು, ಛಂದಸ್ಸು, ವ್ಯಾಕರಣಾದಿ ಅಂಗಸೌಷ್ಠವ ಕಳೆದು ಹೋಗಿದ್ದುದರಿಂದ ಬಹಳ ಖೇದ ವ್ಯಕ್ತಪಡಿಸಿದರು. ಆ ನಡುವೆ ಅಲ್ಲೆಲ್ಲೋ ಆದಿಶಂಕರರು ಹಾದುಹೋದಹಾಗೇ ಭಾವಸಾಯ್ತು, ಅವ ಬಹುದೊಡ್ಡ ಆಶುಕವಿಯೇ ತಾನೇ? ಅವರ ಕ್ಷಮೆಕೋರಿ ಹೀಗೊಂದು ಕವನದ ಪಾದ ಮೂಡಿಬಿಟ್ಟಿತು: [ಜಯ ಜಯಹೇ ಮಹಿಷಾಸುರ ಮರ್ದಿನಿ ಎಂಬ ಮಹಿಷಾಸುರ ಮರ್ದಿನೀಸ್ತೋತ್ರದ ಛಾಪಿನಲ್ಲೇ ಬಂದುಬಿಡಬೇಕೆ? ನವರಾತ್ರಿ ಮೊನ್ನೆಯಷ್ಟೇ ಮುಗಿಯಿತಲ್ಲವೇ ಅದಕ್ಕೇ ಇರಬಹುದು!]

ಭಲೆಭಲೆಯಕ್ರಮಸಕ್ರಮಸಕ್ರಮ ಅಕ್ರಮಸಕ್ರಮನಡೆದಿಪುದೈ
ಅಲೆಯಲೆಯೇಳುತ ಗಣಿಧಣಿಗಳ ಹಲ ಹಾಲಾಹಲವನು ನುಂಗಿಪುದೈ
ಕಲುಷಿತಗೊಂಡವು ನದಿಗಳು ವಾಯುವು ನಗರೀಕರಣದ ಆರ್ಭಟದಿ
ಮಲಿನವದೆಲ್ಲವು ನಲಿವದೆ ಇಲ್ಲವು ಜಯಕರ್ನಾಟಕದೀ ನೆಲದಿ

ಕಲರವವಿಲ್ಲದ ಹಕ್ಕಿಗಳಿಂಚರ ಹೊಟ್ಟೆಯಪಾಡಿಗೆ ನಡೆದಿಹುದು !
ಗುಲಗುಂಜಿಯ ಆಕಾರದ ಹಾರವು ಆನೆಯ ಹೊಟ್ಟೆಗೆ ಲಭಿಸುವುದು !
ಗೆಲುವಿನ ನಗೆಯೊಳು ಆಳ್ವರು ಮೆರೆದಿರೆ ಪ್ರಜೆಗಳು ಕಾಲ್ಕಸವಾಗಿಹರು
ಕಲಿತ ಭುಶುಂಡಿಗಳೆಲ್ಲರು ಸಂದರು ಝಣಝಣವೆಣಿಸುತಲೀನೆಲದಿ !!

ಶಂಕರಾಚಾರ್ಯರ ಆಕೃತಿಗೆ ನಾನೇ ಸಾಷ್ಟಾಂಗ ನಮಸ್ಕಾರ ಹಾಕಿಬಿಟ್ಟೆ ಬಿಡಿ, ಯಾಕೆಂದರೆ ಅವರ ಸ್ತೋತ್ರದ ರಾಗ ಬಳಸಿಕೊಂಡಿರುವೆನಲ್ಲಾ-ಅದಕ್ಕೇ.

ಮೆಚ್ಚಿನ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಮನೆ ಹಾದಿಯಲ್ಲೇ ಇತ್ತು.

ದೂರದೊಂದು ತೀರದಿಂದ 
ತೇಲಿ ಪಾರಿಜಾತ ಗಂಧ
ದಾಟಿಬಂತು ಬೇಲಿಸಾಲ 
ಮೀಟಿ ಹಳೆಯ ಮಧುರ ನೋವ ........

ಇದು ಯಡ್ಯೂರಣ್ಣೋರಿಗೆ ಹಾಡಿದ್ದೇ ಅಂತ ಅನಿಸಿಬಿಟ್ಟಿತು. ಅವರಿಗೆ ಪಾರಿಜಾತದ ಗಂಧ ಬೇಲಿದಾಟಿ ಬರುತ್ತದೆ ಎಂದು ಹೇಳ್ತಾರಲ್ಲಾ........! ಹಳೆಯ ಕುರ್ಚಿಯ ಹೊಸ ಮಧುರನೋವುಗಳನ್ನು ಸದಾ ಅನುಭವಿಸುತ್ತಿರುವ ಅವರ ಸಲುವಾಗೇ ಭಟ್ಟರು ಬರೆದಿರಬಹುದೇ?? ಕೇಳೋಣ ಎಂದುಕೊಳ್ಳುತ್ತಿರುವಾಗಲೇ ಯಾರೋ ಹೇಳಿದರು "ಭಟ್ಟರು ಮನೇಲಿಲ್ಲಾ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿದ್ದಾರೆ" ಎಂದು, ಅನಿವಾರ್ಯ ನಮ್ಮ ಗಾಡಿ ಮತ್ತೆ ಚಾಲೂ ಆಯ್ತು. ಭಟ್ಟರ ಮನೆಯಿಂದ ಕಿಲೋಮೀಟರು ಹೋಗಿತ್ತೋ ಇಲ್ವೋ ಬಿ.ಆರ್.ಎಲ್ಲು ಬಂದುಬಿಡಬೇಕೆ? "...ಮಿತ್ರ ಎಚ್ಚೆಸ್ವಿಯವರನ್ನು ಕಾಣಲು ಬಂದಿದ್ದೆ" ಎಂದು ಕನ್ನಡಕ ಹಿಂದಕ್ಕೆ ಜಾರಿಸಿ ಕೂರಿಸಿದರು. ಕೆಲವು ದಿನಗಳ ಹಿಂದೆ ’ಮಯೂರ’ಕ್ಕೆ ಡುಂಡಿರಾಜರ ಬಗ್ಗೆ ಬುಕೊಟ್ಟ ಲೇಖನದ ಗುಂಗಿನಲ್ಲೇ ಇನ್ನೂ ಇದ್ದರೋ ಎನ್ನಿಸಿತು. ಆಗಾಗ ನಡೆಸುವ ಸಂಜೆಯ ’ಸಾಂಸ್ಕೃತಿಕ’ ಕಾರ್ಯಕ್ರಮಕ್ಕೆ ಡುಂಡಿ ಬರುತ್ತಿಲ್ಲ ಎಂಬ ಬೇಸರದಲ್ಲೇ ದನಿ ಎತ್ತಿದ ಹಾಗಿತ್ತು. " ಏನ್ ಸ್ವಾಮೀ ನೀವು ಜಾಲಿ ಬಾರಿನಲ್ಲಿ .......ಹಾಡುಬರೆದಿದ್ದು ಯಾವಾಗ?" ಎಂದೆ. ಅದನ್ನು ನೆನಪಿಸಿಕೊಂಡು ಹೇಳುತ್ತೇನೆ ಎನ್ನುವಾಗ ಕೆಮ್ಮುತ್ತಲ್ಲೇ ಇದ್ದರು. ಬೆಂಗಳೂರಿನ ಹವಾಮಾನ ಸರಿಯಿಲ್ಲ..ಇನೂ ಎರಡುಮೂರು ದಿನ ಜಿನುಗು ಮಳೆ ಸೈಕ್ಲೋನು ಆಮೇಲೆ ಒಂದಿನ ಸಿಗೋಣ ಹೇಳ್ತೇನೆ ಎಂದ್ರು. ಸರಿ ಎಂದು ಧನ್ಯವಾದ ಅರ್ಪಿಸಿದೆ. ಎಂದಿನಂತೇ ಅದೇ ದೇಶಾವರಿ ನಗೆ ಕಂಡಾಗ

ಬಾರೇ ರಾಜಕುಮಾರಿ ....ಹೋಗೋಣ ನಾವ್ ಜಂಬೂ ಸವಾರಿ ಎಂದು ಹಿನ್ನೆಲೆಯಲ್ಲಿ ಯಾರೋ ಹಾಡಿದ ಹಾಗಿತ್ತು!

ಎಚ್ಚೆಸ್ವಿ ಮನೆಗೆ ಹೋಗಿದ್ದೆ ಎಂದ ಬಿ.ಆರ್.ಎಲ್ಲು ಎಚ್ಚೆಸ್ವಿ ಹಾಡಿನ ನೆನಪಿಗೆ ಕಾರಣರಾಗಿಬಿಟ್ಟಿದ್ದರು.

ಲೋಕದ ಕಣ್ಣಿಗೆ ಶೋಭಕ್ಕ ಕೂಡ ಎಲ್ಲರಂತೇ ಒಂದು ಹೆಣ್ಣು
ಆದರೆ ಪಕ್ಷದ ಎಲ್ಲಾ ಜನರಿಗು ಶೋಭಕ್ಕನಾಟದೆ ಕಣ್ಣು !

ಮಂತ್ರಿ ಶೋಭಾ ಅವರು ಏನುಮಾಡ್ತಿದ್ದಾರೆ ಎಂಬುದರಮೇಲೆ ಬಿ.ಜೆ.ಪಿಯ ಎಲ್ಲರಿಗೂ ಕಣ್ಣು ಇರುವುದು ಸುಳ್ಳಲ್ಲ. ಅಲ್ಲಾಸ್ವಾಮೀ ಕವಿಗಳಿಗೆ ಇದೆಲ್ಲಾ ಹೇಗೆ ಮೊದಲೇ ತಿಳಿದುಹೋಗುತ್ತದೆ ಎಂಬುದು ನನಗೆ ತಿಳಿಯುತ್ತಿಲ್ಲ! ಜಾಸ್ತಿ ತಲೆಕೆಡಿಸಿಕೊಳ್ಳಲು ಸಮಯ ಇರಲಿಲ್ಲ. ಗಾಡೀಲಿ ಪೆಟ್ರೋಲು ಖಾಲಿ ಆಗಿಬಿಟ್ರೆ ಎಂಬ ಹೆದರಿಕೆ ಇತ್ತು-ಈಗೀಗ ೯-೬ ಮಾತ್ರ ಪೆಟ್ರೋಲ್ ಸಿಗುವುದಲ್ಲವೇ ಹೀಗಾಗಿ, ಸಮಯ ಮೀರಿಹೋದ್ರೆ ಕಷ್ಟ ಎಂದು ಅಲ್ಲಿಂದ ಗಾಡಿ ಹೊರಟಿದ್ದೇ ಹೊರಟಿದ್ದು ಟಿ.ಆರ್. ಮಿಲ್ಲಿನ ತಿರುವಿನಲ್ಲಿ ಡುಂಡಿ ನಿಂತುಕೊಂಡಿದ್ದರು. "ಬನ್ನಿ ಬನ್ನಿ ಮಳೆ ಬರ್ತಾ ಇದೆ, ನಾಳೆ ನಿಮ್ಮ ಪುಸ್ತಕ ’ಹನಿದರ್ಶಿನಿ’ ಬಿಡುಗಡೆ ಬೇರೇ ಇದೆ, ನೆಗಡಿ ಆದ್ರೆ ಕಷ್ಟ " ಎಂದೆ. ಹಾಗೇನಿಲ್ಲ ಬಸ್ ಬರುತ್ತಲ್ಲ ಈಗ ಎಂದವರಿಗೆ ಬಿ.ಆರ್.ಎಲ್ಲು ಹೇಳಿದ ಸೈಕ್ಲೋನಿನ ಹಕೀಕತ್ತು-ವರದಿ ಒಪ್ಪಿಸಿದೆ.

ಬೆಂಗಳೂರಿನಲ್ಲೀಗ
ಮೂರುದಿನ ಸೈಕ್ಲೋನು
ಇಲ್ಲ ಏನೂ ಪರಿಹಾರ
ಹಾಕಿಕೊಳ್ಳಿ ಹೆಡ್ ಫೋನು
ಆನಂದಿಸಿ ಕದ್ರಿ
ಗೋಪಾಲನಾಥರ ಸ್ಯಾಸ್ಕ್ಸೋಫೋನು
ಇದೊಂದೇ ಪನಿವಾರ

ಆಯ್ತಾಯ್ತು ಸ್ವಾಮೀ ರಾಜ್ಯೋತ್ಸವಕ್ಕೆ ಮಿತ್ರರಾದ ನಿಮ್ಮನ್ನು ಬಿಡಲಾಗುತ್ಯೇ ? ಎಂದೆ. ಥಂಢಿಯಲ್ಲೇ ಕೈಕುಲುಕಿ ಹೋಂಡಾ ಹತ್ತಿ ಮತ್ತೆ ಹೊರಟೆ, ಸೀದಾ ಮನೆಗೆ. ದಾರಿಯುದ್ದಕ್ಕೂ ಅಡಿಗ, ಬೇಂದ್ರೆ, ಡೀವೀಜಿ, ಅನಕೃ, ಮಾಸ್ತಿ, ಕುವೆಂಪು, ಕಣವಿಯವರು ಎಲ್ಲರೂ ಹಚ್ಚಿದ ಹಣತೆಗಳು ಹಲವರ ಮನೆಗಳಲ್ಲಿ ಬೆಳಗಿದ ಹಾಗೇ ಕಾಣುತ್ತಿತ್ತು.

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪಾ
ಹಚ್ಚೇವು ಕನ್ನಡದ ದೀಪ  

ಕರ್ಕಿಯವರ ಹಾಡನ್ನು ಹಾಡುವ ಮನಸ್ಸು....ಯಾಕೇಂತ ನಿಮಗೂ ನನಗೂ ಖಂಡಿತಾ ಗೊತ್ತು. ನಾಳೆ ರಾಜ್ಯೋತ್ಸವ; ಇದು ಕೇವಲ ವರ್ಷಕ್ಕೆ ಒಂದುದಿನ ಆಚರಿಸುವ ಔಪಚಾರಿಕತೆಗೆ ಸೀಮಿತವಾಗದಿರಲಿ ಎಂದುಕೊಳ್ಳುತ್ತೇನೆ. ಎಷ್ಟು ಹೊತ್ತೂಂತ ನಿಮ್ಮನ್ನೆಲ್ಲಾ ನನ್ನ ಗಾಡೀಲೇ ಕೂರಿಸಿಕೊಳ್ಳಲಿ. ಇಲ್ಲೇ ಇಳಿಸಿಬಿಡುತ್ತೇನೆ. [ೆಲ್ಲೊಡಾಗಿದ್ದೆ ಬೆಲ್ಲ ಿಗಲ್ಲೆಯನ್ನಾದೂ ತೋರಿಸು ಎಂಬುದು ನಮ್ಮೂರ್ವಾದೆ, ಅದಕ್ಕೆಲ್ಲನ್ನಂತೂ ಕೊಡಿಲ್ಲೆಲ್ಲಿಗುವಾರಿ ತೋರಿಸೋಣ ಅಂತ.]ಹಾಂ...ಹಾಂ.. ಹೊರಡುವ ಮೊದಲು ಕೆ.ಎಸ್.ನರಸಿಂಹ ಸ್ವಾಮಿಯವರ ಚಂದದ ಒಂದು ನಾಡಭಕ್ತಿ ಗೀತೆಯನ್ನು ಕೇಳಲು ದಾರಿ ತೋರಿಸಿಬಿಡುತ್ತೇನೆ, ತಗೊಳಿ ಇಲ್ಲಿದೆ:

http://www.kannadaaudio.com/Songs/Patriotic/home/YerisiHarisiKannadadaBavuta.php

ಇಲ್ಲಿಗೆ ಹೋಗಿ, ’ಪಡುವಣ ಕಡಲಿನ’[ಯಾದಿಯಲ್ಲಿ ಮೂರನೇ ಹಾಡು] ಎನ್ನುವ ಹೆಸರಿನ ಕರ್ನಾಟಕ ಗೀತೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ, ಆನಂದಿಸಿ, ರಮ್ಯ-ಮನೋಹರ ಕನ್ನಡ ಹಾಡು.



             ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 

Saturday, October 27, 2012

ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ


ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ 
ಅಧ್ಯಾಯ-೧

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದ ಕುಣಿವ ಕುಂತಳದ |
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿಸ್ತ
ರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿಪುರಾಣಾಗಮ ಸಿದ್ಧಿದಾಯಕಿಯೆ |
ಶೌರಿಸುರಪತಿ ಸಕಲಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ||

ತನ್ನ ದೇಶ ಕಾಲಗಳ ಬಗ್ಗಾಗಲೀ ತನ್ನ ಬಗ್ಗಾಗಲೀ ಏನೂ ತಿಳಿಸದೇ ಮಹಾಕವಿ ಕುಮಾರವ್ಯಾಸ ತನ್ನದೇ ಆದ ವಿಶಿಷ್ಟ ಛಾಪಿನಲ್ಲಿ ಕರ್ಣಾಟ ಭಾರತ ಕಥಾಮಂಜರಿ ಅರ್ಥಾತ್ ಕುಮಾರವ್ಯಾಸ  ಭಾರತವನ್ನು ಬರೆದ. ಋಷಿಸಂಸ್ಕೃತಿಯ ಕವಿ-ಸಾಹಿತಿಗಳ ಮನದಲ್ಲಿ ಚಣಕಾಲ ನೆಲೆನಿಂತು ಬರೆಯಿಸುವ ಶಕ್ತಿ ಕಣ್ಣಿಗೆ ಗೋಚರವಲ್ಲ! ಒಮ್ಮೆ ಬರೆದಿದ್ದನ್ನು ಮತ್ತೆ ತೆರೆದು ಓದಿದರೆ ತಾವೇ ಬರೆದದ್ದು ಹೌದೇ ಎನಿಸುವ ಅನೇಕ ಅದ್ಭುತ ಕಥಾನಕಗಳ ಕೃತಿಕಾರರ ಮನದಲ್ಲಿ ಉತ್ತಮಕೃತಿಗಳ ರಚನೆಯನ್ನು ರಚಿಸುವಂತೇ, ನಿಂತು ನಡೆಸಿದ ಅಂತಹ ದಿವ್ಯ ಶಕ್ತಿಯ ಜಾಡು ಹಿಡಿದು ಹೊರಟರೆ ತಿಳಿಯುವುದು ಪರಬ್ರಹ್ಮ ಸ್ವರೂಪ!! ಅಂತಹ ಶಕ್ತಿಯನ್ನು ಆದಿಯಲ್ಲಿ ಗುರುವಾಗಿ, ಗಣಪತಿಯಾಗಿ, ಶಾರದೆಯಾಗಿ, ಶೌರಿ-ಸುರಪತಿ-ವರವಿರಂಚಿ-ಮಹೇಶ್ವರನಾಗಿ ಕಂಡು ಕೈಮುಗಿಯುವುದು ಸತ್ಸಂಪ್ರದಾಯ. ಹಾಗೊಮ್ಮೆ ಎಲ್ಲ ದೇವಾನುದೇವತೆಗಳಿಗೂ ನಮಿಸುತ್ತಾ, ಕವಿಜನಸಂದಣಿಗೆ ಬಲಬಂದು,  ’ಸನಾತನ ಜೀವನ ಧರ್ಮ’ ದ ಬಗೆಗೆ ಬರೆಯಲು ಅನುವು ಮಾಡಿಕೊಡಿರೆಂದು ಪ್ರಾರ್ಥಿಸುತ್ತಿದ್ದೇನೆ.  

ಬಹುಕಾಲದಿಂದ ಅನೇಕರ ಪ್ರಶ್ನೆ ನನ್ನಲ್ಲಿ: "ನೀವು ಯಾಕೆ ಯಾವಾಗಲೂ ಧಾರ್ಮಿಕ ವಿಷಯಗಳ ಬಗ್ಗೆ ಜಾಸ್ತಿ ಒತ್ತುಕೊಡುತ್ತೀರಿ?"

ಅನೇಕಾವರ್ತಿ ಹೇಳಿದ್ದನ್ನೇ ಮತ್ತೊಮ್ಮೆ ಹೇಳುತ್ತಿದ್ದೇನೆ: ನನ್ನದು ವೇದ ಸಂತುಲಿತ ಜೀವನ. ಅಪೌರುಷೇಯವಾದ ವೇದಗಳನ್ನು ಸದಾ ಭಾಗಶಃ ಆಸ್ವಾದಿಸುತ್ತಾ, ಆಮೋದಗೊಳ್ಳುತ್ತಾ ಆ ಗುಂಗಿನಲ್ಲಿಯೇ ಮನದ ಕೆಳಸ್ತರಗಳಲ್ಲಿ ಉದ್ಭವಗೊಳ್ಳುವ ಲೌಕಿಕಭಾವಗಳನ್ನು ಕವನ-ಲೇಖನಗಳ ರೂಪದಲ್ಲಿ ಬರೆಯುವುದು ನನ್ನ ಅಭ್ಯಾಸ. ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ನನ್ನಿಂದ ಬರೆಯಿಸಿದ ಆ ಶಕ್ತಿ ಎಲ್ಲವನ್ನೂ ಒಂದು ಮೂಲಾಧಾರಸೂತ್ರದಲ್ಲಿ ಬಂಧಿಸುತ್ತದೆ-ಅದು ಮಾನವ ಸಹಜ ಜೀವನ ಧರ್ಮ. ಧಾವಂತದ ಜೀವನದಲ್ಲಿ ಅನೇಕರಿಗೆ ಬಿಡುವಿಲ್ಲ, ಕೆಲವರಿಗೆ ಆಸಕ್ತಿಯೂ ಇಲ್ಲ, ಇನ್ನು ಕೆಲವರಿಗೆ ಸಮರ್ಪಕ ವಿಷಯ ಸಿಗುತ್ತಿಲ್ಲ. ಜನಸಾಮಾನ್ಯರಾದ ನಮಗೆ ಸನಾತನ ಧರ್ಮದ ಮಹತ್ವದ ಅರಿವಿಲ್ಲದೇ ಯಾರೋ ಹೇಳಿದ ಇನ್ಯಾವುದನ್ನೋ ಹಿಂಬಾಲಿಸಿ ನಡೆಯುತ್ತಿದ್ದೇವೆ. ಒಮ್ಮೆ ಸನಾತನ ಧರ್ಮ ಎಷ್ಟು ನಿಸರ್ಗ ಸಹಜವಾಗಿದೆ ಮತ್ತು ಅತ್ಯುತ್ತಮವಾಗಿದೆ ಎಂಬುದನ್ನು ತಿಳಿದರೆ, ಮತ್ತೆ ಪ್ರಶ್ನೆಗಳು/ಸಂದೇಹಗಳು ಹುಟ್ಟುವುದಿಲ್ಲ. ಈ ಒಂದು ಕಾರಣಕ್ಕಾಗಿ ಅಕ್ಷರಪ್ರಿಯ ಸ್ನೇಹಿತರೆಲ್ಲರ ಓದಿಗಾಗಿ ಆರಂಭಗೊಂಡಿದ್ದು ಈ ಮಾಲಿಕೆ. ಜನಸಾಮಾನ್ಯರ ಎಲ್ಲಾ ಪ್ರಶ್ನೆಗಳನ್ನೂ ಮನದಲ್ಲಿ ಒಡಮೂಡಿಸಿಕೊಂಡು ಬರೆಯುವ ಉತ್ತರರೂಪೀ ಕಥಾನಕಗಳ ಮಾಲಿಕೆ ಇದಾಗಿರುತ್ತದೆ. ತೆಂಗಿನಕಾಯಿಯೇ ಮಧುರ-ಅದಕ್ಕೆ ಬೆಲ್ಲವನ್ನು ಸೇರಿಸಿದಾಗ ಹೇಗೆನಿಸಬಹುದು?  ಕಾಯಿ-ಬೆಲ್ಲ ಮೆಲ್ಲುವುದು ಬಹುಸಂಖ್ಯಾಕರಿಗೆ ಸಂತಸ ತರುವ ವಿಷಯ; ಅದೇ ರೀತಿ ಸಾಹಿತ್ಯಕ ಕ್ರೀಡೆಗಳಲ್ಲಿ ಆಸಕ್ತರಾದವರಿಗೆ ಮಹಾಕವಿಗಳ ಕಾವ್ಯಧಾರೆ ಕಾಯಿ-ಬೆಲ್ಲ ಇದ್ದಹಾಗೇ. ಕವಿಗಳ ಹೇಳಿಕೆಗಳ ಸಹಯೋಗದೊಂದಿಗೆ, ಅನೇಕ ಕಂತುಗಳಲ್ಲಿ ಈ ಕಥಾನಕ ನಡೆದುಬರುತ್ತದೆ.

ಹಿಂದುತ್ವ-ಭಾರತೀಯತೆ, ಸಂಸ್ಕೃತಿ-ನಾಗರಿಕತೆ, ಧರ್ಮ-ಮತ, ಪಂಚಾಂಗ, ಸ್ನಾನ-ಶೌಚ, ಆಹಾರ, ಜಪ-ಧ್ಯಾನ, ಯೋಗ-ಪ್ರಾಣಾಯಾಮ-ಸೂರ್ಯನಮಸ್ಕಾರ, ವೇದಗಳು, ಹಬ್ಬಗಳು, ಹಿಂಸೆ-ಅಹಿಂಸೆ, ಸತ್ಯ-ಅಸತ್ಯ, ಸ್ವಾಧ್ಯಾಯ, ದೇಹಾಲಂಕಾರ, ಪೂಜೆ-ಪುನಸ್ಕಾರ-ದಾನ, ಸಂಸ್ಕಾರಗಳು, ದೈನಂದಿನ ಚರ್ಯೆಗಳು ಹೀಗೆ ಹಲವು ಹತ್ತು ಅಧ್ಯಾಯಗಳು ಈ ಮಾಲಿಕೆಯಲ್ಲಿ ಪ್ರಸ್ತಾಪಿತಗೊಳ್ಳುತ್ತವೆ. ಸೀಮಿತ ಪರಿಮಿತಿಯಲ್ಲಿ ಸಂವಾದಗಳಿಗೆ ಅವಕಾಶವೂ ಇರುತ್ತದೆ.

ಹಿಂದೂಗಳು ಎಂದರೆ ಯಾರು ?

ಹಿಂದೂಗಳು ಎಂದರೆ ಯಾರು ಎಂಬುದನ್ನು ಅರಿಯುವ ಮೊದಲು ಒಂದು ನಿವೇದನೆ: ಜಗತ್ತಿನಲ್ಲಿರುವ ಎಲ್ಲರ ಶಾಂತಿಗಾಗಿ, ಸಮೃದ್ಧಿಗಾಗಿ, ಸಂತೃಪ್ತಿಗಾಗಿ ಎಲ್ಲರೂ ವಿವಿಧ ರೂಪಗಳಲ್ಲಿ ಪರಾಶಕ್ತಿಯನ್ನು ಕಾಣಲು ಬಯಸುತ್ತಾರೆ. ಯಾರು ಯಾವ ರೂಪದಲ್ಲೇ ಕಂಡರೂ, ನೆನೆದರೂ ಶಕ್ತಿಯಿರುವುದು ಒಂದೇ ಎರಡಲ್ಲ ಎಂಬುದನ್ನು ನೆನಪಿಸುವ ಶ್ಲೋಕ ಈ ರೀತಿ ಇದೆ:

ಯಂ ವೈದಿಕಾಃ ಮಂತ್ರದೃಶಃ ಪುರಾಣಾಃ ಇಂದ್ರಂ ಯಮಂ ಮಾತರಿಶ್ವಾನಮಾಹುಃ |
ವೇದಾಂತಿನೋ ನಿರ್ವಚನೀಯಮೇಕಂ ಯಂ ಬ್ರಹ್ಮಶಬ್ದೇನ ವಿನಿರ್ದಿಶಂತಿ ||
ಶೈವಾಯಮೀಶಂ ಶಿವ ಇತ್ಯವೋಚನ್ ಯಂ ವೈಷ್ಣವಾಃ ವಿಷ್ಣುರಿತಿಸ್ತುವಂತಿ |
ಬುದ್ಧಸ್ತಥಾರ್ಹನ್ನಿತಿ ಬೌದ್ಧಜೈನಾಃ ಸತ್ಶ್ರೀ ಅಕಾಲೇತಿ ಚ ಸಿಖ್ಖಸಂತಃ ||
ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ |
ಯಂ ಪ್ರಾರ್ಥಯಂತೇ ಜಗದೀಶಿತಾರಂ ಸ ಏಕ ಏವ ಪ್ರಭುರದ್ವಿತೀಯಃ ||  

ಸನಾತನಿಗಳ ಪರಮೋಚ್ಚ ಆದರ್ಶವೆಂದರೆ ಯಾರನ್ನೂ ಹಿಂಸಿಸದೇ ಬದುಕುವುದು. ವಿವಿಧ ಮತಗಳಿಂದ ಕೂಡಿದ ಭಾರತ ಹಿಂದೊಮ್ಮೆ ಸಂಪೂರ್ಣ ಸನಾತನಿಗಳಿಂದಲೇ ತುಂಬಿತ್ತು! ಕಾಲಗತಿಯಲ್ಲಿ, ಐಹಿಕ ಸುಖವನ್ನಷ್ಟೇ ಪ್ರಧಾನವನ್ನಾಗಿ ಬಯಸಿದ ಮನಸ್ಸುಗಳು ಯಾವುದೋ ಹೊಸತನವನ್ನು ಬಯಸಿ ಬೇರೇನನ್ನೋ ಹುಡುಕಹೊರಟವು. ಏನನ್ನೋ ಕಂಡಹಾಗೇ ಭಾವಿಸಿದವು. ಹಾಗೆ ಸ್ಥಾಪಿತವಾದ ಹೊಸಮತಗಳ ಪ್ರತಿಪಾದಕರಿಗೆ ಅನುಯಾಯಿಗಳೂ ಜನಿಸಿದರು. ಹಾಗೇ ಮತಗಳ ಸಂಖ್ಯೆಯಲ್ಲೂ ಮತ್ತು ಅವುಗಳ ಅನುಯಾಯಿಗಳ ಸಂಖ್ಯೆಯಲ್ಲೂ ವೃದ್ಧಿಯಾಯ್ತು. ಸನಾತನಿಗಳಲ್ಲೇ ಹಲವು ಮತಗಳು ಹುಟ್ಟಿಕೊಂಡರೂ ಮೂಲದಲ್ಲಿ ಎಲ್ಲರೂ ಸನಾತನಿಗಳೇ ಆಗಿದ್ದರು; ಮತ್ತು ಅರಿಯದೇ ತಾವು ಆಚರಿಸುತ್ತಿರುವ ಇಂದಿನ ಹೊಸ ಮತಗಳೇ ಸರಿಯೆಂದು ವಾದಿಸುವ ಅವರಿಗೆ ನಿಜದ ನೆಲೆಯ ಅರಿವಾದರೆ ಸನಾತನಿಗಳ ದೊಡ್ಡತನದ ಅರಿವೂ ಆದೀತು. ಹುಟ್ಟಾ ಯಾರೂ ಏನನ್ನೂ  ತರಲಿಲ್ಲ, ಹೋಗುವಾಗ ಕೊಂಡೊಯ್ಯುವುದಿಲ್ಲ ಎಂಬುದೆಲ್ಲಾ ಸರಿ. ಆದರೆ ಬದುಕಿರುವವರೆಗೆ ಯಾವ ರೀತಿ ಇದ್ದರೆ ಎಲ್ಲೂ ಎಂದೂ ಯಾರಿಗೂ ಯಾವುದಕ್ಕೂ ಘಾಸಿಯಾಗುವುದಿಲ್ಲ ಎಂಬುದನ್ನು ಪ್ರತಿಪಾದಿಸುವ ಏಕೈಕ ಧರ್ಮವೆಂದರೆ ಅದು ಸನಾತನ ಧರ್ಮ. ಇದ್ದುದನ್ನು ಇದ್ದಹಾಗೇ ಇರಲು/ಬಾಳಲು ಬಿಡು ಎಂಬ ಸನಾತನ ತತ್ವವನ್ನು ಇಲ್ಲೊಮ್ಮೆ ಅವಲೋಕಿಸಬೇಕು. 

ಹಿಂದೂ ಸಮಾಜವನ್ನು ದೂಷಿಸುವವರು ಕ್ರೈಸ್ತ ಮಿಶನರಿಗಳೋ ಮುಸ್ಲಿಂ ಮದರಸಾಗಳವರೋ ಅಥವಾ ಪಾಶ್ಚಾತ್ಯರ ಮಾನಸ ಪುತ್ರರಂತಾಗಿರುವ ನಮ್ಮವರೋ ಸನಾತನ ಧರ್ಮವನ್ನು ಸರಿಯಾಗಿ ಅರ್ಥೈಸದೇ ಹಾಗೆ ಮಾಡುತ್ತಾರೆ. ವಿಶೇಷವೆಂದರೆ ಪಾಶ್ಚಾತ್ಯ ವಿದ್ವಾಂಸರನೇಕರಲ್ಲಿ ಸರಿಯಾದುದನ್ನು ಅರಿಯುವ, ಅರಿತು ಅಳವಡಿಸಿಕೊಳ್ಳುವ ಔದಾರ್ಯ ಇದೆಯೆಂಬುದನ್ನು ಅಲ್ಲಗಳೆಯಲಾಗದು. ಹಿಂದೂ ಎಂಬ ಪದ ಪರಕೀಯರು ನಮಗಿಟ್ಟಿದ್ದು ಎಂಬ ತಪ್ಪುಕಲ್ಪನೆ ಇದೆ. ಹಿಂದೂ ಎಂದರೆ ಬೇರೇ ಭಾಷೆಗಳಲ್ಲಿ ಹೇಡಿ, ತಿರಸ್ಕಾರ ಸೂಚಕ ಶಬ್ದ ಎಂಬೆಲ್ಲಾ ಹೇಳಿಕೆಗಳೂ ಇವೆ. ಆದರೆ ವಾಸ್ತವ ಅದಲ್ಲ. ಹಿಂದೂ ಎಂದರೆ ಸಿಂಧೂ ಎಂಬ ಪದದ ಅಪಭ್ರಂಶ. ಸಪ್ತ ಮಹಾನದಿಗಳು ಅಥವಾ ಸಪಸಿಂಧೂ ಭೂಮಿ ಈ ಭಾರತ. ಸಪ್ತ ಎಂಬ ಪದ ಹಪ್ತ ಎಂದಾಗಿದ್ದು ನಮಗೆ ಗೋಚರಿಸುತ್ತದೆ. ಅದೇ ರೀತಿ ಸಪ್ತಸಿಂಧೂ ಹೋಗಿ ಹಪ್ತಹಿಂದೂ ಆಗಿ ಅದರಲ್ಲೂ ಹಿಂದೂ ಉಳಿದುಕೊಂಡಿದೆ. ಹಿಂದೂ ಎಂಬುದಕ್ಕಿಂತಾ ಭಾರತೀಯ ಅಥವಾ ಸನಾತನ ಎಂಬುದು ಉತ್ತಮ ಪದ. ಭಾರತದ ನಿವಾಸಿಗಳೆಲ್ಲಾ ಹಿಂದೂಗಳೇ. ಹಿಂದೂ ಎಂಬ ಒಂದೇ ಪದ ಪ್ರಸಕ್ತ ಭಾರತ ನಿವಾಸಿಗಳೆಲ್ಲರನ್ನೂ ತನ್ನೊಳಗೆ ಅಡಕಮಾಡಿಕೊಳ್ಳುತ್ತದೆ. ಯಾಕೆಂದರೆ ಹಿಂದೂ ಎಂದರೇ ಭಾರತೀಯತೆಯಲ್ಲದೇ ಬೇರೇ ಅಲ್ಲ. ಹಿಂದೂ  ಎನಿಸಿಕೊಂಡ ಮಾತ್ರಕ್ಕೆ ಆತ ಸನಾತನ ದೇವರುಗಳನ್ನೇ ಪೂಜಿಸಬೇಕೆಂಬ ಅರ್ಥವಲ್ಲ; ಆದರೆ ಹಿಂದೂ ಎನಿಸಿಕೊಂಡವನು ವೈಜ್ಞಾನಿಕ ನೆಲೆಗಟ್ಟಿನ ಭಾರತೀಯ ಮೂಲದ್ದಾದ ಸತ್ಸಂಪ್ರದಾಯಗಳನ್ನು [ಯಾವುದೇ ಪೂರ್ವಾಗ್ರಹಪೀಡಿತನಾಗದೇ] ಪಾಲಿಸುವುದು ಆತನ ಧರ್ಮವಾಗುತ್ತದೆ. ಹಾಗಾದ್ರೆ ಇಲ್ಲೊಂದು ಪ್ರಶ್ನೆ ನಿಮ್ಮಲ್ಲೇಳುವುದು ಸಹಜ. ಭಾರತೀಯರಲ್ಲಿ ಅನ್ಯ ಮತಗಳಿಗೆ ಸೇರಿದವರೂ ಇದ್ದಾರಲ್ಲಾ ..ಅವರೇನು ಮಾಡಬೇಕು. ಇದಕ್ಕೆ ಉದಾಹರಣೆ ಇಷ್ಟೇ: ಅಮೇರಿಕಾದಲ್ಲಿ ನೆಲೆಸಿದವರು ಅಲ್ಲಿನ ಕಾಯ್ದೆ-ಕಾನೂನು ಸಂಪ್ರದಾಯಗಳನ್ನು ಮೀರುವಂತಿಲ್ಲವಷ್ಟೇ? ಅದೇ ರೀತಿ ಭಾರತದಲ್ಲಿ ನೆಲೆಸಿದ ಪ್ರತೀ ವ್ಯಕ್ತಿಯೂ ಇಲ್ಲಿನ ಮೂಲ ಸಂಸ್ಕೃತಿ-ಸಂಪ್ರದಾಯಗಳಿಗೆ ಧಕ್ಕೆಯಾಗದಂತೇ ನಡೆದುಕೊಳ್ಳುವುದು ಭಾರತವಾಸಿಗಳ ಧರ್ಮ.

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |
ವರ್ಷಂ ತದ್ ಭಾರತಂ ನಾಮ ಭಾರತೀಯತ್ರ ಸಂತತಿಃ ||

ಪ್ರಸಕ್ತ ಸಮುದ್ರದಿಂದ ಉತ್ತರಕ್ಕೂ ಹಿಮಾಲಯದಿಂದ ದಕ್ಷಿಣಕ್ಕೂ ಇರುವ ಭೂಭಾಗದ ನಿವಾಸಿಗಳೆಲ್ಲಾ ಭಾರತೀಯರೇ ಆಗಿದ್ದಾರೆ. ಆಂಗ್ಲರು ಭಾರತಕ್ಕೆ ಬಂದರು, ಭಾರತವನ್ನು ಒಡೆದು ಆಳಿದರು. ಒಡೆದಾಳುವುದೇ ನೀತಿಯೆಂದುಕೊಂಡ ಅವರು ಆರ್ಯರು ಭಾರತಕ್ಕೆ ಬಂದು ಭಾರತೀಯ ಮೂಲನಿವಾಸಿಗಳನ್ನು ಯುದ್ಧಮಾಡಿ ಗೆದ್ದು ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದರು ಎಂಬ ಕಥೆ ಕಟ್ಟಿದರು. ಆ ಕಥೆ ಎಷ್ಟು ವ್ಯಾಪಕವಾಯ್ತೆಂದರೆ ಇವತ್ತಿಗೂ ಇತಿಹಾಸವನ್ನು ಓದುವ ವಿದ್ಯಾರ್ಥಿಗಳನೇಕರು ಆರ್ಯರು ಭಾರತಕ್ಕೆ ಬಂದರು ಎಂಬುದಾಗಿಯೇ ಓದುತ್ತಾರೆ, ಭಾವಿಸುತ್ತಾರೆ. ಆರ್ಯರು ಹೊರಗಿನವರಲ್ಲಾ ಅವರೂ ಭಾರತದಲ್ಲೇ ಯುಗಯುಗಗಳಿಂದಲೂ ಇದ್ದರು ಎಂಬುದಕ್ಕೆ ಪ್ರಾಗೈತಿಹಾಸ ಮತ್ತು ತತ್ಸಂಬಂಧೀ ಹಲವು ದಾಖಲೆಗಳು, ಕುರುಹುಗಳು ಇಂದಿಗೂ ಸಿಗುತ್ತವೆ! ಆಂಗ್ಲ ಭಾಷೆಯ ರೆಲಿಜನ್ ಎಂಬ ಪದವನ್ನು ತರ್ಜುಮೆಮಾಡುವಾಗ ಅನುವಾದಕರಿಗೆ ಅದರ ಅರಿವಿರದ ಕಾರಣ ಧರ್ಮ ಮತ್ತು ಮತ ಎಂಬ ಪದಗಳನ್ನು ಒಂದೇ ಎಂಬಂತೇ ಭಾವಿಸಿ ರೆಲಿಜನ್ ಎಂಬುದನ್ನು ಧರ್ಮ ಎಂದಿದ್ದಾರೆ. ನಮ್ಮ ಪೂರ್ವಜರು ಮತಕ್ಕಿಂತಾ ಭಿನ್ನವಾದ ಧರ್ಮವನ್ನು ಸನಾತನ ಎಂದು ಕರೆಯುತ್ತಿದ್ದರು, ಸನಾತನ ಪದವೇ ಅವರಿಗೆ ಇಷ್ಟವಾಗಿತ್ತು. ಯಾವುದು ಯಾರಿಂದಲೂ ಸ್ಥಾಪಿತವಾಗದ ಧರ್ಮವೋ ಯಾವುದು ಮಾನವನ ಅತಿ ಸಹಜ ಬದುಕುವ ಧರ್ಮವೋ ಅದು ಸನಾತನ ಧರ್ಮ ಅರ್ಥಾತ್ ಹಿಂದೂ ಧರ್ಮ. ಈ ಭುವಿಗೆ ಬಂದ ವ್ಯಕ್ತಿಯೋರ್ವ ತನ್ನ ಇರುವಿಕೆಯಿಂದ, ತನ್ನ ಬದುಕಿಗಾಗಿ, ತನ್ನ ಬೆಳವಣಿಗೆಗಾಗಿ ಇನ್ನೊಂದು ಜೀವಿಗೆ, ಪರಿಸರಕ್ಕೆ ಹಾನಿಯುಂಟುಮಾಡಬಾರದೆಂಬುದೇ ಹಿಂದೂ ಧರ್ಮದ ಮೂಲ ಸಂದೇಶ. ಧರ್ಮ ಮತ್ತು ಮತಗಳ ವ್ಯತ್ಯಾಸ ತಿಳಿಯದಿದ್ದುದೇ ಇಂದಿನ ಸಮಾಜದಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಯೋಣ.

ನಮ್ಮ ದೇಶದಲ್ಲಿ ಬಹುಸಂಖ್ಯಾಕರು ವೇದ ಮತಾನುಯಾಯಿಗಳಿರಬಹುದು. ಆದರೆ ರಾಷ್ಟ್ರೀಯತಾ ಸೂಚಕವಾದ ಹಿಂದೂ ಪದದಲ್ಲಿ ವೇದೇತರ ಮತಾನುಯಾಯಿಗಳೂ ಚಿಂತಕರೂ ಇದ್ದಾರೆ. ವೈದಿಕ ಮತವೇ ಹಿಂದುತ್ವ ಎಂಬುದು ದುರಾಗ್ರಹ. ಸರ್ವ ಸಂಗ್ರಾಹಕಗುಣ ಹಿಂದೂ ಪದದ ವ್ಯಾಪ್ತಿ. ತಾವು ವೈದಿಕ ಪಂಗಡಕ್ಕೆ ಸೇರಿದವರು ಎಂಬ ಭಾವನೆ ತೊಡೆದುಹಾಕಲು ಬೌದ್ಧರು, ಜೈನರು, ಪಾರಸಿಕರು, ವೀರಶೈವರು, ಸಿಖ್ಖರೇ ಮೊದಲಾದವರು ತಮ್ಮನ್ನು ಹಿಂದೂಗಳಲ್ಲ ಎಂದುಕೊಂಡರು! ಹಿಂದೂ ಒಂದು ರಾಷ್ಟ್ರೀಯತೆಯೇ ವಿನಃ ಅದು ಮತದ ಸಂಕೇತವಲ್ಲ, ಮತವನ್ನು ಬಣ್ಣಿಸುವ ಪದವೂ ಅಲ್ಲ. ಮೊದಲೇ ಹೇಳಿದಹಾಗೇ  ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ ಈ ಏಳ ಮಹಾನದಿಗಳ [ಸಪ್ತ ಸಿಂಧೂಗಳ ಮತ್ತು ಅವುಗಳ ಉಪನದಿಗಳ] ಸರಹದ್ದಿನಲ್ಲಿ ವಾಸಿಸುವ ಎಲ್ಲಾ ಜನರೂ ಹಿಂದೂಗಳೇ. ಬ್ರಹ್ಮ ಸಮಾಜ, ಅರ್ಯಸಮಾಜ ಕೆಲವು ಸುಧಾರಿತ ಪಂಥಗಳು ಹಿಂದಿನಿಂದ ನಾವು ನಡೆಸಿಬಂದ ಕೆಲವು ಪದ್ಧತಿಗಳನ್ನು ಅಲ್ಲಗಳೆದರು ಎಂದಮಾತ್ರಕ್ಕೆ ಅವರು ಹಿಂದೂಗಳಲ್ಲ ಎನ್ನಲಾಗುವುದಿಲ್ಲ. ನೂರಾರು ಮಂದಿ ಮಹಾಪುರುಷರು ನಮ್ಮ ಸಮಾಜದಲ್ಲಿ ಹುಟ್ಟಿ, ಹೊಸ ಆಧ್ಯಾತ್ಮಿಕ  ಮತ್ತು ಮತೀಯ ಅಚಾರ-ವಿಚಾರಗಳನ್ನು ರೂಪಿಸಿ, ಪಂಥಗಳನ್ನು ಸ್ಥಾಪಿಸಿ ಸಮಾಜ ಸುಧಾರಣೆಗೆ ಯತ್ನಿಸಿದ್ದಾರೆ. ಇಂತಹ ಪ್ರಯತ್ನಗಳು ಈ ಹಿಂದೆ ನಡೆದಂತೇ ಮುಂದೆಯೂ ಹಲವು ನಡೆಯಬಹುದಾಗಿದೆ. ಆದರೆ ಹಿಂದುತ್ವದ ಮೂಲಸ್ವರೂಪಕ್ಕೆ ಧಕ್ಕೆಯಾಗದು. ಕೆಲವೊಂದು ರೂಢಿಗಳನ್ನು ಮಾತ್ರ ಹಿಂದುತ್ವದ ಲಕ್ಷಣಗಳು ಎಂದು ಬಗೆದಲ್ಲಿ ಅನೇಕರನ್ನು ಹಿಂದೂಗಳೇ ಅಲ್ಲ ಎನ್ನಬೇಕಾದೀತು, ಹೀಗಾಗಿ ಹಿಂದೂ ಶಬ್ದವನ್ನು ರಾಷ್ಟ್ರೀಯತೆಯ ಪದವನ್ನಾಗಿ ಬಳಸಲಾಗಿದೆ.  

ಇವತ್ತು ಭಾರತವಲ್ಲದೇ ಜಗದ ನಾನಾ ದೇಶಗಳಲ್ಲಿ ಹಿಂದೂಗಳು ನೆಲೆಸಿದ್ದಾರೆ. ಗಯಾನಾ, ಫಿಜಿ ಮೊದಲಾದ ಕೆಲವು ದೇಶಗಳಲ್ಲಂತೂ ಅವರೇ ಬಹುಸಂಖ್ಯಕರು! ಮಾರಿಷಸ್ ನಂತಹ ಕೆಲವು ಕಡೆ ಹಿಂದೂಗಳ ಸಂಖ್ಯೆಯೇ ದೊಡ್ಡದು. ಅವರಲ್ಲಿ ಬಹಳಮಂದಿ ಅಲ್ಲಲ್ಲಿಯೇ ಹುಟ್ಟಿಬೆಳೆದ ರತೀಯ ಮೂಲದವರ ವಂಶಸ್ಥರು ಅಷ್ಟೇ. ಅನೇಕರು ಅಲ್ಲಲ್ಲಿನ ರಾಷ್ಟ್ರೀಯತೆಯನ್ನೇ ಪಡೆದುಕೊಂಡಿದ್ದಾರೆ. ಆದರೂ ಸಾಂಸ್ಕೃತಿಕವಾಗಿ ಅವರು ಹಿಂದೂಗಳಾಗಿದ್ದಾರೆ. ಅಮೇರಿಕೆಯಂತಹ ಮುಂದುವರಿದ ರಾಷ್ಟ್ರಗಳಲ್ಲಿನ ಜನ ಹಿಂದೂ ಸಂಸ್ಕೃತಿಯನ್ನು ಒಪ್ಪಿದ್ದಾರೆ, ಭಾರತಕ್ಕೆ ಬಂದು ಇಲ್ಲಿನ ವೇದ-ಆಯುರ್ವೇದಗಳ ಬಗ್ಗೆ ಯೋಗ-ಪ್ರಾಣಾಯಾಮಗಳ ಬಗ್ಗೆ ಆಸ್ಥೆಯಿಂದ ಅಭ್ಯಾಸ ನಡೆಸುತ್ತಾರೆ, ತಾವು ಹಿಂದೂಗಳೆಂದೇ ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಅಂಥವರನ್ನು ನಾವು ಸಾಂಸ್ಕೃತಿಕ ಹಿಂದೂಗಳೆಂದು ಕರೆಯಬೇಕಾಗುತ್ತದೆ. ಮಹರ್ಷಿ ಅರವಿಂದರು ಹೇಳುತ್ತಾರೆ " ಒಂದುಕಡೆ ಹಿಮಾಲಯ ಮತ್ತೊಂದು ಕಡೆ ಸಮುದ್ರ ಈ ನಡುವಿನ ಭೂಭಾಗದಲ್ಲಿ ಬೆಳೆದುಬಂದ ಪವಿತ್ರವೂ ಪ್ರಾಚೀನವೂ ಆದ ಈ ಧರ್ಮವನ್ನು, ಈ ಪರ್ಯಾಯ ದ್ವೀಪದಲ್ಲಿ ಯುಗಯುಗಗಳ ಕಾಲಪ್ರವಾಹದಲ್ಲೂ ಸುರಕ್ಷಿತವಾಗಿ ಇಡಲೋಸುಗ ಆರ್ಯಜನಾಂಗಕ್ಕೆ ಭಗವಂತನಿಂದ ನೀಡಲ್ಪಟ್ಟ ನಿಧಿ ಇದು. ಆದರೆ ಇದು ಒಂದು ದೇಶಕ್ಕೆ ಸೀಮಿತವಲ್ಲ. ಇದು ನಿಜವಾಗಿಯೂ ಸನಾತನ ಧರ್ಮ ಮತ್ತು ಇತರ ಮತಗಳನ್ನು ಒಳಗೊಂಡಿರುವ ವಿಶ್ವಧರ್ಮ." 

ಭಾರತೀಯರ್ಷಿ ಸಂಪ್ರೋಕ್ತಾನ್ ಇಹಾಮುತ್ರಾರ್ಥಸಾಧಕಾನ್ |
ಯೋsಂಗೀಕರೋತಿ ಸಶ್ರದ್ಧಂ ಸತ್ ಸಿದ್ಧಾಂತಾನ್ ಸನಾತನಾನ್ ||
ಮಹಾತ್ಮಿಭಿಃ ದಿವ್ಯಶೀಲೈಃ ಕಾಲೇ ಕಾಲೇ ಪ್ರವರ್ತಿತಾನ್ |
ಸಂಪ್ರದಾಯಾನಾದ್ರೀಯತೇ ಯಃ ಸರ್ವಾನ್ ಪಾರಮಾರ್ಥಿಕಾನ್ ||
ಯತ್ರಕುತ್ರಾಪಿ ಜಾತೋsಸೌ ಅಸ್ತು ಯಃ ಕೋsಪಿ ಜನ್ಮನಾ |
ಸಚ್ಛೀಲೋದಾರಚರಿತಃ ಸೋsತ್ರ ಹಿಂದುರಿತಿ ಸ್ಮೃತಃ ||

ದೇವ ಮಂದಿರ ಭಜನೆ ಪೂಜೆ ಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ
ಭಾವವಂ ಕ್ಷುಲ್ಲ ಜಗದಿಂ ಬಿಡಿಸಿ ಮೇಲೊಯ್ವು
ದಾವುದಾದೊಡಮೊಳಿತು -ಮಂಕುತಿಮ್ಮ

ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಾಡುವ ಪೂಜೆ, ಅರತಿ, ಭಜನೆ, ಪ್ರಸಾದ ಸ್ವೀಕರಣೆ, ಜಪ-ತಪ, ಹೋಮ-ನೇಮ ಇವೆಲ್ಲಾ ಜೀವನಕ್ಕೆ ಅಲಂಕಾರವಾಗಿವೆ ಮತ್ತು ಮನಸ್ಸನ್ನು ಮುದಗೊಳಿಸಿ ಉನ್ನತ ವೈಚಾರಿಕತೆಗೆ ಏರುವಲ್ಲಿ ಸಹಾಯಕವಾಗಿವೆ. ಕ್ಷುಲ್ಲಕ ಭಾವಗಳೇ ಮನದಲ್ಲಿ ಸದಾ ತುಂಬಿದ್ದರೆ ಬದುಕಿನ ನಿಜಧ್ಯೇಯವನ್ನು ಸಾಧಿಸುವುದು ಸಾಧ್ಯವಾಗುವುದಿಲ್ಲ. ಕ್ಷಣಿಕವಾದ ಈ ಜಗದಲ್ಲೇ ಸುತ್ತುತ್ತಾ ಬಳಲುವ ನಮಗೆ ಉನ್ನತ ವಿಚಾರಗಳು ಮನದಲ್ಲಿ ಒಡಮೂಡಲು ತನ್ಮೂಲಕ ಮೋಕ್ಷವನ್ನು ಪಡೆಯುವತ್ತ ನಾವು ನಡೆಯಲು ಸಹಕಾರಿಯಾಗುವ ಕಾರ್ಯಗಳೇ ಪೂಜಾ ಕಾರ್ಯಗಳು. ಉನ್ನತ, ಉದಾತ್ತ ವಿಚಾರಗಳನ್ನು  ಹೇಳುವ ಯಾವ ಕೆಲಸವೇ ಆದರೂ, ಸಂಸ್ಕಾರವಾದರೂ ಅವು ಒಳ್ಳೆಯವೇ. ದೈವ ಸಾನ್ನಿಧ್ಯದಲ್ಲಿ ವಿಶೇಷವಾದ ಶಕ್ತಿ ಸಂಚಯನವಾಗುತ್ತದೆ ಮತ್ತು ಅದು ಮೋಕ್ಷವನ್ನು ಪಡೆಯುವ ಮಾರ್ಗವನ್ನು ತೋರುತ್ತದೆ ಎಂಬುದು ಡಿ.ವಿ.ಜಿಯವರ ಹೇಳಿಕೆಯಾಗಿದೆ. ಸಮಾಜದಲ್ಲಿ ಬೇಕಾದ್ದು ಬೇಡಾದ್ದು ಎಲ್ಲಾ ತುಂಬಿರುತ್ತವೆ. ಎಲವೊಮ್ಮೆ ಯಾವುದು ಒಳಿತು  ಮತ್ತು ಯಾವುದು ಕೆಡುಕು ಎಂಬುದನ್ನು ನಿರ್ಣಯಿಸುವುದೇ ಕಷ್ಟವಾಗಿಬಿಡಬಹುದು. ಇಂತಹ ಸಂದಿಗ್ಧದಲ್ಲಿ ಸನಾತನ ಸೂತ್ರಗಳು ನಮಗೆ ಸಹಕಾರಿಯಾಗಿವೆ. ಹಲವು ಸಹಸ್ರಮಾನಗಳ ಅನುಭವಗಳಿಂದಲೂ ಮತ್ತು ದರ್ಶನಗಳಿಂದಲೂ ಅವು ನಿಖರವಾದ ಮಾಹಿತಿಯನ್ನು ಒದಗಿಸುತ್ತವೆ. 

ಚಿಕ್ಕವರಿರುವಾಗ ನಮ್ಮ ನಿರ್ಧಾರಗಳಿಗೆ ಅಡ್ಡಿಪಡಿಸುವ ನಮ್ಮ ಅಪ್ಪನಿಗೆ ಬುದ್ಧಿ ಇಲ್ಲವೆಂದು ನಾವೆಂದುಕೊಳ್ಳುತ್ತೇವೆ. ಬೆಳೆಯುತ್ತಾ ನಮ್ಮಪ್ಪ ಮಾಡಿದ್ದು ಕೆಲವು ಭಾಗ ಸರಿ ಎಂದು ಒಪ್ಪುತ್ತೇವೆ. ಇನ್ನೂ ಬೆಳೆದು ವಯಸ್ಸು ಜಾಸ್ತಿಯಾಗತೊಡಗಿದಾಗ ಅಪ್ಪ ನಮ್ಮ ಸಲುವಾಗಿ ಮಾಡಿದ ಅನೇಕ ಕೆಲಸಗಳು ಮತ್ತು ನಿರ್ಧಾರಗಳು ಸರಿ ಎಂಬ ಅನುಭವ ನಮ್ಮದಾಗುತ್ತದೆ. ಆದರೂ ಅಪ್ಪನದು ಪೂರ್ತಿ ಸರಿಯೆಂದು ನಾವು ಒಪ್ಪುವ ಹಂತಕ್ಕೆ ಇನ್ನೂ ಬಂದಿರುವುದಿಲ್ಲ. ಯಾವಾಗ ನಮಗೆ ಮದುವೆಯಾಗಿ ಮಕ್ಕಳಾಗಿ ನಾವೇ ’ಅಪ್ಪ’ ಎನಿಸಿಕೊಳ್ಳುತ್ತೇವೋ ಆಗ ಅಪ್ಪಮಾಡಿದ್ದು ಸಂಪೂರ್ಣ ಸರಿಯೆನಿಸುತ್ತದೆ; ಅಪ್ಪನ ಅನುಭವ ಸುಳ್ಳಲ್ಲವೆಂಬುದನ್ನು ತೆಪ್ಪಗೆ ಒಪ್ಪಿಕೊಳ್ಳುತ್ತೇವೆ. ಒಬ್ಬ ಸಾಮಾನ್ಯ ಅಪ್ಪ ತನ್ನ ಮಗುವಿಗಾಗಿ ಇರುವುದರಲ್ಲಿ ಉತ್ತಮ ನಿರ್ಧಾರಗಳನ್ನೇ ಕೈಗೊಂಡಿರುತ್ತಾನೆ ಎಂದಮೇಲೆ ಜಗತ್ತಿನ ಜನರನ್ನೆಲ್ಲಾ ತಮ್ಮ ಮಕ್ಕಳೆಂದೇ ತಿಳಿದ ಆರ್ಷೇಯ ಋಷಿಗಳ ಪಾರಂಪರಿಕ ಅನುಭವ ಸುಳ್ಳೆನಲು ಸಾಧ್ಯವೇ? ಪರಂಪರಾಗತವಾಗಿ ಶ್ರುತಿಯಾಗಿ ಹರಿದುಬಂದ ಜೀವನಧರ್ಮ ಸೂತ್ರಗಳೇ ವೇದಗಳು ಎಂದರೆ ತಪ್ಪಾಗುವುದಿಲ್ಲ. ಅವುಗಳಿಗೆ ಲೇಖಕರು ಇಲ್ಲ; ತಯಾರಿಸಿದ ವಸ್ತುವೊಂದಕ್ಕೆ ತಯಾರಕರೇ ಉಪಯೋಗಿಸುವ ರೀತಿನೀತಿಗಳನ್ನೂ, ಗುಣಮಟ್ಟಕ್ಕೆ ಸಮಯಾಧಾರಿತ ಖಾತ್ರಿಯನ್ನೂ ಕೊಡುವಂತೇ ವೇದಗಳ ಸೃಷ್ಟಿಕರ್ತ ಅವುಗಳ ಸಮಯವನ್ನು ಸಾರ್ವಕಾಲಿಕವನ್ನಾಗಿ ಮಾರ್ಪಡಿಸಿದ್ದಾನೆ. ಸರಿಯಾಗಿ ಅರಿತು ಬಳಸಿದರೆ ಅವುಗಳಲ್ಲಿನ ಜ್ಞಾನ ನಮ್ಮ ಅಧುನಿಕ ವಿಜ್ಞಾನಕ್ಕಿಂತಲೂ ಮಿಗಿಲು ಎಂಬುದನ್ನು ಕಾಣಬಹುದಾಗಿದೆ. ಯಾವ ಮತದ ಯಾವುದೇ ಸೂತ್ರವೂ ತಪ್ಪಾಗಿ ಗ್ರಹಿತವಾಗಿರಬಹುದು, ಯಾಕೆಂದರೆ ಅನೇಕ ಮತಗಳು ಮಾನುಷ ನಿರ್ಮಿತವಾಗಿವೆ. ಅವು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಜೀವನಧರ್ಮಗಳಾಗುವ ಪರಿಪಕ್ವತೆಯನ್ನು ಹೊಂದಿಲ್ಲದಿರುವುದು ತುಲನೆಮಾಡಿದಾಗ ತಿಳಿದುಬರುತ್ತದೆ. ಪಕ್ವವಾದ ಮತ್ತು ಯುಕ್ತವಾದ ಮಾಹಿತಿಯನ್ನು ಮಾತ್ರ ವೇದಗಳು ಒಳಗೊಂಡಿರುವುದರಿಂದ ಯಾವ ರೀತಿಯಲ್ಲೂ ಯಾವ ನೀತಿಯಲ್ಲೂ ಅವು ನಗಣ್ಯವಲ್ಲ, ಲೋಪಗಳನ್ನು ಹೊಂದಿರುವುದಿಲ್ಲ.     

ಪಂಚತಂತ್ರದ ಒಂದು ಚಿಕ್ಕ ಕಥೆಯೊಂದಿಗೆ ಆರಂಭಿಕ ಅಧ್ಯಾಯವನ್ನು ಮುಗಿಸೋಣ. ದೇಶವೊಂದರಲ್ಲಿ ಧರ್ಮಬುದ್ಧಿ ಮತ್ತು ಪಾಪ ಬುದ್ಧಿ ಎಂಬಿಬ್ಬರು ಗೆಳೆಯರಿದ್ದರು. ಹೆಸರೇ ಸೂಚಿಸುವಂತೇ ಧರ್ಮಬುದ್ಧಿ ಧರ್ಮಾತ್ಮ ಮತ್ತು ಪಾಪಬುದ್ಧಿ ಪಾಪಾತ್ಮನೆಂದು ತಿಳಿದುಕೊಳ್ಳಿ. ಪಾಪಬುದ್ಧಿಗೆ ವಿಶೇಷವಾದ ವಿದ್ಯೆಯಾಗಲೀ ಪರಿಣತಿಯಾಗಲೀ ಇರಲಿಲ್ಲ. ಆದರೆ ಧರ್ಮಬುದ್ಧಿ ಘನಪಾಠಿಯಾಗಿದ್ದ. ಕುತಂತ್ರಗಳಲ್ಲಿ ಪಾಪಬುದ್ಧಿ ಬಹಳ ಮುಂದಿರುತ್ತಿದ್ದ. ಒಮ್ಮೆ ಹೇಗಾದರೂ ಮಾಡಿ ಧರ್ಮಬುದ್ಧಿಯನ್ನು ಬಳಸಿಕೊಂಡು ಒಂದಷ್ಟು ಹಣಗಳಿಸಬೇಕೆಂಬ ಆಸೆ ಪಾಪಬುದ್ಧಿಯದು.

ಧರ್ಮಬುದ್ಧಿಗೆ ಪಾಪಬುದ್ಧಿ ಹೇಳಿದ "ಮಿತ್ರಾ ನೋಡು ನೀನು ಪಂಡಿತನಾದ ಮಾತ್ರಕ್ಕೆ ಜನ ನಿನ್ನನ್ನು ಹಾಗೆ ಮೆಚ್ಚುವುದಿಲ್ಲ. ದೇಶಗಳನ್ನು ಪರ್ಯಟನೆಮಾಡಿ ಹಲವು ಜನರನ್ನು ಸಂಪರ್ಕಿಸುವುದರಿಂದ ಹೆಚ್ಚಿನ ಧನ-ಕನಕ ಸಂಪಾದನೆಯಾಗುತ್ತದೆ. ಬರುವುದಾದರೆ ಬಾ ನಾನು ವಿದೇಶಯಾತ್ರೆಗೆ ಹೋಗುವವನಿದ್ದೇನೆ." ಗೆಳೆಯನ ಮಾತಿನಲ್ಲಿ ಧೂರ್ತ ಭಾವವನ್ನು ಗ್ರಹಿಸದ ಧರ್ಮಬುದ್ಧಿ ಗೆಳೆಯನೊಟ್ಟಿಗೆ ವಿದೇಶ ಯಾತ್ರೆಗೆ ನಡೆದ. ವಿದೇಶ ಸಂಚಾರದಲ್ಲಿ ಅವರೀರ್ವರೂ ಹೇರಳ ಧನ-ಕನಕಗಳನ್ನು ಸಂಪಾದಿಸಿ ಮನೆಗೆ ಮರಳಲು ಮುಂದಾದರು. ಊರು ಸಮೀಪಿಸುತ್ತಿರುವ ಸಮಯದಲ್ಲಿ ಪಾಪಬುದ್ಧಿ ಧರ್ಮಬುದ್ಧಿಗೆ ಹೇಳಿದ: "ಗೆಳೆಯಾ, ನಾವೀಗ ಹೇರಳ ಸಂಪತ್ತುಗಳನ್ನು ಗಳಿಸಿದ್ದೇವೆ. ಇದು ಪರಭಾರೆಯಾಗಬಾರದಷ್ಟೇ? ಊರಿಗೆ ಕೊಂಡೊಯ್ದರೆ ಮನೆಯಲ್ಲಿನ ಜನರಿಗೋ ನೆಂಟರಿಗೋ ಪಾಲುಕೊಡಬೇಕಾದ ಪ್ರಮೇಯ ಬರುತ್ತದೆ. ಮೇಲಾಗಿ ನೀರಿನಲ್ಲಿರುವ ಮೀನು, ಹಾರುವ ಹಕ್ಕಿ, ಭೂಮಿಯಮೇಲಿರುವ ಪ್ರಾಣಿಗಳು ಮಾಂಸಭಕ್ಷಕರ ಪಾಲಾಗುವುದು ಸರಿಯಷ್ಟೇ? ಅದೇರೀತಿ ನಗದು ಸಂಪತ್ತನ್ನು ಇಟ್ಟುಕೊಂಡವರಿಗೆ ಕಳ್ಳರಕಾಟ ತಪ್ಪಿದ್ದಲ್ಲ, ಸಂಪತ್ತನ್ನು ಕಾದುಕೊಳ್ಳುವುದು ಕಠಿಣ ಕೆಲಸ. ಹೀಗಾಗಿ ಇಲ್ಲೇ ಕಾಡಿನಲ್ಲಿ ಮರವೊಂದರ ಬುಡದಲ್ಲಿ ಸಂಪತ್ತನ್ನು ಹೂತಿಡೋಣ ಮತ್ತು ಖರ್ಚಿಗೆ ಬೇಕಾದಾಗ ಬೇಕಾದಷ್ಟನ್ನೇ ತೆಗೆದುಕೊಳ್ಳುತ್ತಾ ಇರೋಣ ಆಗದೇ?" ಎಂದ. ಧರ್ಮಬುದ್ಧಿ ಅದಕ್ಕೂ ಸಮ್ಮತಿಸಿದ. ತಂದಿದ್ದ ಸಂಪತ್ತನ್ನು ಮರವೊಂದರ ಬುಡದಲ್ಲಿ ಹೂತಿಟ್ಟು ಈರ್ವರೂ ಊರಿಗೆ ಮರಳಿ ನಿಶ್ಚಿಂತೆಯಿಂದಿದ್ದರು.

ಕೆಲವುದಿನಗಳ ನಂತರ ಒಂದು ಮಧ್ಯರಾತ್ರಿ ಪಾಪಬುದ್ಧಿ ಕಾಡಿಗೆ ತೆರಳಿ, ಮರದ ಬುಡದಲ್ಲಿದ್ದ ಸಂಪತನ್ನು ಪೂರ್ತಿಯಾಗಿ ಎತ್ತಿಕೊಂಡು ಪುನಃ ಆ ಜಾಗಕ್ಕೆ ಮಣ್ಣುತುಂಬಿಸಿ ಮನೆಗೆ ಮರಳಿದ. ಮಾರನೇದಿನ ಧರ್ಮಬುದ್ಧಿಯನ್ನು ಕರೆದು ತನಗೆ ಹಣದ ಅಗತ್ಯ ಹೆಚ್ಚಿರುವುದಾಗಿಯೂ ಕಾಡಿಹೋಗಿ ತರೋಣವೆಂತಲೂ ಒತ್ತಾಯಿಸಿದ. ಸಮ್ಮತಿಸಿದ ಧರ್ಮಬುದ್ಧಿಯ ಜೊತೆ ಕಾಡಿಗೆ ತೆರಳಿ ಮರದಬುಡದಲ್ಲಿ ಅಗೆಯಲಾಗಿ ಹುದುಗಿಸಿಟ್ಟಿದ್ದ ಸಂಪತ್ತು ಇಲ್ಲವಾಗಿತ್ತು! ತನಗೇನೂ ಸಂಶಯವೇ ಇಲ್ಲವೆಂದೂ ಧರ್ಮಬುದ್ಧಿಯೇ ಅದನ್ನು ತೆಗೆದುಕೊಂಡಿದ್ದಾನೆಂದೂ ಪಾಪಬುದ್ಧಿ ಜಗಳ ತೆಗೆದ. ಜಗಳ ರಾಜ್ಯದ ರಾಜನ ನ್ಯಾಯಾಲಯಕ್ಕೆ ಹೋಯ್ತು. ನ್ಯಾಯಾಧಿಕಾರಿಗಳ ಸಮ್ಮುಖದಲ್ಲಿ ವಿಷಯ ಮಂಡಿತವಾಯ್ತು. ಸಂಪತ್ತು ಇಟ್ಟಬಗ್ಗೆಯಾಗಲೀ, ಕದ್ದಬಗ್ಗೆಯಾಗಲೀ ಲಿಖಿತ ರೂಪದ ದಾಖಲೆಗಳು, ಸಾಕ್ಷಿಗಳು ಇಲ್ಲದಿರುವುದರಿಂದ ದೇವರಮುಂದೆ ಆಣೆಪ್ರಮಾಣ ಮಾಡಬೇಕೆಂದು ನ್ಯಾಯಾಧೀಶರು ಹೇಳಿದರು. ತನಗೆ ದೇವರಮೇಲೆ ನಂಬಿಕೆಯಿದ್ದು ಮರದಲ್ಲಿರುವ ವನದೇವಿ ತನ್ನ ಪರವಾಗಿ ಸಾಕ್ಷಿ ನುಡಿಯುವ ಖಾತ್ರಿ ಇರುವುದರಿಂದ ಕಾಡಿಗೇ ತೆರಳಿ ಮರದ ಸಾಕ್ಷಿ ಕೇಳಲು ಅನುಮತಿಸಬೇಕೆಂದು ಪಾಪಬುದ್ಧಿ ವಿನಂತಿಸಿದ. ನ್ಯಾಯಾಲಯ ಅದಕ್ಕೆ ಸಮ್ಮತಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಕಳಿಸಲು ಒಪ್ಪಿತು. ಅಂದಿನ ನ್ಯಾಯಾಲಯದ ಕಲಾಪ ಮುಗಿಸಿಕೊಂಡ ಪಾಪಬುದ್ಧಿ ಶೀಘ್ರ ಮನೆಗೆ ದೌಡಾಯಿಸಿದ. ತಂದೆಯನ್ನು ಕಂಡು ನಡೆದ ಘಟನೆ ತಿಳಿಸಿ, "ಅಪ್ಪಾ ನೀನು ಮನಸ್ಸುಮಾಡಿ ಒಂದು ವಾಕ್ಯ ಉಸುರಿದರೆ ಸಂಪತ್ತೂ ನಮ್ಮದಾಗುತ್ತದೆ ಮತ್ತು ನನ್ನ ತಯೂ ಉಳಿಯುತ್ತದೆ" ಎಂದ. ಮಗನ ಒತ್ತಾಯಕ್ಕೆ ಅಪ್ಪ ಮಣಿದ. ಮರದಲ್ಲಿ ದೊಡ್ಡ ಪೊಟರೆಯೊಂದು ಇರುವುದೆಂದೂ ಅದರಲ್ಲಿ ಅಪ್ಪ ಅವಿತಿರಬೇಕೆಂದೂ ಮಗ ತಿಳಿಸಿದ.

ಮಾರನೇ ಬೆಳಿಗ್ಗೆ ಸ್ನಾನ ಮುಗಿಸಿ ಹೊಸ ಬಟ್ಟೆ ತೊಟ್ಟ ಪಾಪಬುದ್ಧಿ,  ಧರ್ಮಬುದ್ಧಿ ಮತ್ತು ನ್ಯಾಯಾಲಯದ ಅಧಿಕಾರಿಗಳೊಡನೆ ಅಡವಿಯ ಮರದ ಹತ್ತಿರ ಬಂದ. ಮರದಮುಂದೆ ನಿಂತು " ಎಲೈ ಸೂರ್ಯ-ಚಂದ್ರರೇ, ವಾಯು-ಅಗ್ನಿಗಳೇ, ಸ್ವರ್ಗ ಮತ್ತು ಭೂಮಿಗಳೇ, ಹೃದಯ ಮತ್ತು ಮನಸ್ಸುಗಳೇ, ಹಗಲು ರಾತ್ರಿಗಳೇ, ಸೂರ್ಯೋದಯ ಮತ್ತು ಸೂರ್ಸ್ತಗಳೇ ನೀವೆಲ್ಲವೂ ಧರ್ಮಮಯವಾಗಿದ್ದೀರಿ. ಮನುಷ್ಯನ ಪ್ರತಿಯೊಂದು ಕರ್ಮಗಳನ್ನೂ ನೀವು ಪ್ರತ್ಯಕ್ಷವಾಗಿ ನೋಡುತ್ತೀರಿ. ಮರದಲ್ಲಿರುವ ದೇವತೆಯೇ ನಿನ್ನಲ್ಲಿ ಪ್ರಾರ್ಥಿಸುತ್ತೇನೆ. ನಮ್ಮೀರ್ವರಲ್ಲಿ ಯಾರು ಕಳ್ಳರು ಎಂಬುದನ್ನು ಸಾರಿಬಿಡು" ಎಂದು ಜೋರಾಗಿ ಕೂಗಿ ಹೇಳಿದ. ಮಗನ ಮಾತನ್ನು ಆಲೈಸಿದ ಪಾಪಬುದ್ಧಿಯ ತಂದೆ ಅವಿತಿದ್ದ ಪೊಟರೆಯಿಂದ ಹೇಳಿದ:" ಕೇಳೀ ಕೇಳೀ ಹಣವನ್ನು ಕದ್ದಿದ್ದು ಧರ್ಮಬುದ್ಧಿಯೇ." ದಂಡಾಧಿಕಾರಿಗಳಿಗೆ ಅಶರೀರವಾಣಿಯಿಂದ ಅಚ್ಚರಿಯಾಯ್ತು! ನ್ಯಾಯಲಯದ ಅಪ್ಪಣೆಯಂತೇ ಧರ್ಮಬುದ್ಧಿಗೆ ಶಿಕ್ಷೆನೀಡಲು ಅವರು ಸಿದ್ಧತೆ ನಡೆಸಿದರು. ಧರ್ಮಬುದ್ಧಿ ಮರುಮಾತನಾಡಲಿಲ್ಲ. ಮರದ ಸುತ್ತ ಒಮ್ಮೆ ಸುತ್ತಿದ ಧರ್ಮಬುದ್ಧಿ ತ್ವಿತಾಗಿ ಉರಿಯುವಸ್ತುವಿನಿಂದ ಮರದ ಬುಡಕ್ಕೆ ಬೆಂಕಿಹಚ್ಚಿದ. ಧಗಧಗನೇ ಮರ ಹೊತ್ತಿ ಉರಿಯುವಾಗ ಮರದ ಪೊಟರೆಯೊಳಗೆ ಅವಿತಿದ್ದ ಪಾಪಬುದ್ಧಿಯ ತಂದೆ ಚೀರುತ್ತಾ ಕೆಳಕ್ಕೆ ಉರುಳಿದ. ದಂಡಾಧಿಕಾರಿಗಳು " ಏನಪ್ಪಾ ಇದು?" ಎಂದು ಆತನನ್ನು ಗದರಿದರು. ಆತ ನಿಜವನ್ನು ಒಪ್ಪಿಕೊಂಡ ಮತ್ತು ಮರುಘಳಿಗೆಯಲ್ಲೇ ಪ್ರಾಣಬಿಟ್ಟ. ತಪ್ಪುಮಾಡುವುದರೊಂದಿಗೆ ತಪ್ಪನ್ನು ಮುಚ್ಚಲು ಮತ್ತಷ್ಟು ತಪ್ಪುಮಾಡಿರುವ ಪಾಪಬುದ್ಧಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತು. ಅನ್ಯಾಯವಾಗಿ ಕಾಡಿನ ಮರ ಬೆಂಕಿಗೆ ಆಹುತಿಯಾಗುವಂತೇ ಮಾಡಿದ ಪಾಪಬುದ್ಧಿ ತನ್ನಪ್ಪನ ಹಾಗೂ ತನ್ನ ಸಾವನ್ನು ತಾನೇ ತಂದುಕೊಂಡ.

ಈ ಕಥೆಯಲ್ಲಿ ನೀತಿಯನ್ನು ಹೊಸದಾಗಿ ಹೇಳಬೇಕಿಲ್ಲ. ತಪ್ಪುಮಾಡುವುದು ಮಾನವ ಸಹಜವಾಗಿರಬಹುದು; ಆದರೆ ತಪ್ಪನ್ನೇ ಮಾಡದಂತೇ ಆಧಾರಸಹಿತವಾಗಿ ಆದೇಶ ನೀಡುವುದು ಹಿಂದೂಧರ್ಮ. ಇನ್ಯಾವುದೋ ಧರ್ಮ  ಕಳ್ಳತನ ಮಾಡು-ಆದರೆ ಸಿಕ್ಕಿಬೀಳಬೇಡ ಎಂದೂ ಹೇಳಬಹುದು, ಆದರೆ ಅದು ನಿಜವಾದ ಮಾರ್ಗವಲ್ಲ. ಕಳ್ಳತನ ತರವಲ್ಲ ಎಂದು ತಿಳಿಸುವುವೇ ನಿಜವಾದ ಜೀವನಧರ್ಮ. ಅಂತಹ ಧರ್ಮ ಜಗತ್ತಿನಲ್ಲಿಯೇ ಏಕೈಕ, ಅದು ನಮ್ಮ ಸನಾತನ ಜೀವನಧರ್ಮ ಎಂದು ಹೇಳುತ್ತಾ ಪ್ರಥಮೋಧ್ಯಾಯವನ್ನು ಪೂರೈಸಿದ್ದೇನೆ, ನಮಸ್ಕಾರ.