ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, November 11, 2012

ಗೋವು ಮತ್ತು ದೀಪಾವಳಿ

ಿತ್ರೃಪೆ : ಾಮ.ಇನ್ [http://www.hareraama.in]
ಗೋವು ಮತ್ತು ದೀಪಾವಳಿ

ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ
ಅಧ್ಯಾಯ-೨


೨೧ನೇ ದಿನ ಮಧ್ಯಾಹ್ನದ ಹೊತ್ತಿಗೆ  ಗಾಂವ್ ಗಾಂವ್ ಗಾಂವ್ ಗಾಂವ್...........ಕರುಳಲ್ಲಿ ನಡುಕ ಹುಟ್ಟಿಸುವಂತೇ ಆರ್ಭಟಿಸುತ್ತ ಭಯಂಕರವಾದ ಸಿಂಹವೊಂದು ನಂದಿನಿಮೇಲೆ ಎರಗಲು ಮುಂದೆ ಬಂದುಬಿಟ್ಟಿತು. ಸೇವೆಗೈಯ್ಯುತ್ತಿದ್ದ ದಿಲೀಪ ಸ್ತಂಭೀಭೂತನಾದನಾದರೂ ಸಿಂಹವನ್ನು ಹಿಮ್ಮೆಟ್ಟಿಸುವತ್ತ ಮುನ್ನಡೆದ. ಶಸ್ತ್ರಗಳೇ ಇಲ್ಲದ ಸನ್ನಿವೇಶದಲ್ಲಿ ಬೊಬ್ಬಿರಿಯುತ್ತಿರುವ ಸಿಂಹವನ್ನು ನಿಯಂತ್ರಿಸುವುದಾದರೂ ಹೇಗೆ? ಎದುರಾಗಿ ಬರುತ್ತಿರುವ ದಿಲೀಪನನ್ನು ಕುರಿತು ಸಿಂಹ ಮಾತನಾಡತೊಡಗಿತು. " ಎಲವೋ ಮಾನವನೇ ಇದು ನನ್ನ ಆಹಾರ, ನನ್ನ ಆಹಾರಕ್ಕೆ ಅಡ್ಡಿಪಡಿಸಬೇಡ."  ದಿಲೀಪ ಕೇಳಿದ " ಅಯ್ಯಾ ಸಿಂಹವೇ ನೀನು ಎಲ್ಲಿಂದ ಬಂದೆ? ನಿನಗೆ ಈ ಧೇನುವೇ ಏಕೆ ಬೇಕು?"  ಸಿಂಹ ಉತ್ತರಿಸಿತು " ಪರಶಿವನ ಸೇವಕ ನಾನು. ಈ ಪ್ರಾಂತದಲ್ಲಿ ಆತನ ಸೇವೆಗೆ ನಿಂತವನು. ಮೇಯಲು ಬರುವ ಜೀವಿಗಳು ದೇವದಾರು ಮರಗಳಿಗೆ ತಮ್ಮ ಮೈಯ್ಯುಜ್ಜುವಾಗ ಅಲ್ಲಾಡಿಸಿ ಮರಗಳನ್ನು ಹಾಳುಗೆಡವದಂತೇ ರಕ್ಷಿಸುವುದು ನನ್ನ ಕೆಲಸ. ಮಧ್ಯಾಹ್ನದ ಹೊತ್ತಿಗೆ ಯಾವ ಪ್ರಾಣಿ ಇಲ್ಲಿಗೆ ಮೊದಲಾಗಿ ಬರುವುದೋ ಅದನ್ನು ಆಹಾರವಾಗಿ ಸ್ವೀಕರುಸುವುದು ನನ್ನ ವಾಡಿಕೆ. ಇಂದು ಈ ಹಸು ಬಂದಿದೆ. ದಾರಿ ಬಿಡು ನಾನು ಈ ಹಸುವನ್ನು ತಿನ್ನಬೇಕು." "ಸಿಂಹವೇ, ನಿನ್ನ ಹಸಿವಿಗೆ ನಿನಗೆ ಹಸುವೊಂದೇ ಕಾಣುವುದೇ? ಇಗೋ ದಯವಿಟ್ಟು ನನ್ನನ್ನು ಸ್ವೀಕರಿಸು. ಹಸುವನ್ನು ಬಿಟ್ಟುಬಿಡು." --ಹೀಗೆ ಸಿಂಹದೆದುರು ವಿನೀತನಾಗಿ ಪ್ರಾರ್ಥಿಸಿ ತಲೆಬಾಗಿದ ದಿಲೀಪ. ಮರುಕ್ಷಣದಲ್ಲಿ ಸಿಂಹ ನಾಪತ್ತೆ ! ರಕ್ಷಣೆಗಾಗಿ ತನ್ನ ತನುವನ್ನೇ ತ್ಯಜಿಸಲು ಸಿದ್ಧನಾದ ದಿಲೀಪನ ಮನೋಗತವನ್ನು ನೋಡಿ ಅರಿತ ನಂದಿನಿ ಆತನಿಗೆ ತನ್ನ ಚಮತ್ಕಾರವನ್ನು ಅರುಹಿದಳು.

ಭಕ್ತ್ಯಾ ಗುರೌ ಮಯ್ಯನುಕಂಪಯಾ ಚ ಪ್ರೀತಾಸ್ಮಿ ತೇ ಪುತ್ರ ವರಂ ವೃಣೀಷ್ವ |
ನ ಕೇವಲಾಯಾಂ ಪಯಸಾಂ ಪ್ರಸೂತಿಂ ಅವೇಹಿ ಮಾಂ ಕಾಮದುಘಾಂ ಪ್ರಸನ್ನಾಂ ||  
--ಕಾಳಿದಾಸ ’ರುವಶ’ದ ಶ್ಲೋಕ

"ಮಗನೇ, ನಿನ್ನ ಗುರುಭಕ್ತಿ ಮತ್ತು ನನ್ನ ಮೇಲಿನ ದಯೆ ಇವುಗಳಿಂದ ನಾನು ಸಂತೋಷಗೊಂಡಿರುವೆನು. ನಿನಗೆ ಬೇಕಾದ ವರವನ್ನು ಕೇಳು ನಾನು ಕೊಡುವೆನು. ನಾನು ಬರಿಯ ಹಾಲನ್ನು ಮಾತ್ರ ಕರೆಯುವ ಒಂದು ಪ್ರಾಣಿಯಲ್ಲ, ನೀನು ಏನೇನು ಬಯಸುವಿಯೋ ಅದನ್ನು ಸುರಿಸುವ ಕಾಮಧೇನು." ಎನ್ನಲು ಚಕ್ರವರ್ತಿ ದಿಲೀಪ ವಿನೀತನಾಗಿ ಮಂಡಿಯೂರಿ ಆಕೆಯಲ್ಲಿ ಸಂತಾನಭಾಗ್ಯವನ್ನು ಮಾತ್ರ ಕೋರಿದ್ದಾನೆ. " ನಿನ್ನ ಮನದಿಚ್ಛೆಯಂತೇ ಅತ್ಯುತ್ತಮವಾದ ಸಂತಾನವನ್ನು ಪಡೆ" ಎಂದು ಹರಸಿ ತಾಯಿ ಕಾಮಧೇನುವಿನಿಂದ ಪ್ರಾಪ್ತವಾದ ಶಾಪದಿಂದ ಮುಕ್ತಗೊಳಿಸಿದಳು.

ಇಕ್ಷಾಕುವಂಶ ಅಥವಾ ಸೂರ್ಯವಂಶದ ಆರಂಭಪುರುಷ ವೈವಸ್ವತ ಮನು. ಮನು, ಇಂದ್ರ, ವ್ಯಾಸ ಈ ಎಲ್ಲ ಭಗವಂತನಿಂದ ಆಯ್ಕೆಮಾಡಲ್ಪಟ್ಟ ಕೆಲವರು ಕೆಲಸಮಾಡುವ ಅಧಿಕಾರದ ಸ್ಥಾನಗಳು ಮಾತ್ರ. ಅಲ್ಲಿರುವವರು ಅಲ್ಲೇ ಶಾಶ್ವತವಲ್ಲ! ಅಲ್ಲಿ ಬದಲಾವಣೆ ನಡೆಯುತ್ತಿರುತ್ತದೆ. ಹಾಗೆ ಬದಲಾಗುವ ಪರಿಕ್ರಮಗಳಲ್ಲಿ ವಿಭಿನ್ನ ೧೪ ಹೆಸರಿನ ಮನುಗಳು ಆಳುವ ಹಲವಾರು ಮನ್ವಂತರಗಳು ಬಂದುಹೋಗುತ್ತವೆ. ಈಗ ನಾವು ಇರುವುದು ೭ನೇ ಮನುವೆನಿಸಿದ ವೈವಸ್ವತ ಮನ್ವಂತರದಲ್ಲಿ; ಅಂದರೆ ವೈವಸ್ವತ ಮನು ಇದನ್ನು ಆರಂಭಿಸಿದಾತ, ನಡೆಸುವಾತ. ಮನು ಎಂದರೆ ರಾಜನೇ ಎಂದು ಶತಪಥ ಬ್ರಾಹ್ಮಣ ಗ್ರಂಥ ಹೇಳುತ್ತದೆ. ಆತನ ವಂಶವೇ ಮುಂದೆ ಸೂರ್ಯವಂಶವಾಯ್ತು. ಸೂರ್ಯವಂಶವನ್ನು ಕಾಲಾನಂತರ ರಘುವಂಶವೆಂದೂ ಕರೆದರು. ಖ್ಯಾತನಾಮನಾದ ರಘು ರಾಜಾ ದಿಲೀಪನ ಮಗ! ಮಾಲವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ ಮೊದಲಾದ ಮಹಾನ್ ನಾಟಕಕೃತಿಗಳನ್ನು ಬರೆದ ಮಹಾಕವಿ ಕಾಳಿದಾಸ ರಘುವಂಶ, ಕುಮಾರ ಸಂಭವ, ಋತುಸಂಹಾರ, ಮೇಘದೂತ ಮುಂತಾದ ಕಾವ್ಯಗಳನ್ನೂ ಬರೆದು ಪ್ರಸಿದ್ಧನಾದ. ನಮ್ಮ ಭಾರತದ ಪ್ರಾಗೈತಿಹಾಸದ ಬಗ್ಗೆ ಜಾಸ್ತಿ ತಿಳಿದುಕೊಳ್ಳಬಯಸುವವರು ಕಾಳೀದಾಸನ ರಘುವಂಶವನ್ನು ಉಂಡು ಅಗುಳಗುಳನ್ನೂ ಅರಗಿಸಿಕೊಳ್ಳಬೇಕು. ಆದಿಕವಿ ವಾಲ್ಮೀಕಿಯ ರಾಮಾಯಣ ಮಹಾಕಾವ್ಯಕ್ಕೆ ಪೂರಕ ಪೀಠಿಕೆಯನ್ನು ಕಲ್ಪಿಸುವುದು ಈ ’ರಘುವಂಶ’. ರಘುವಂಶವನ್ನು ಓದಿಕೊಂಡು ಆಮೇಲೆ ರಾಮಾಯಣವನ್ನು ತಿಳಿದುಕೊಂಡರೆ ಶ್ರೀರಾಮನ ಪೂರ್ವಜರ ಮತ್ತು ಆತನ ನಂತರದ ಪೀಳಿಗೆಯ ಪರಿಚಯ ನಮಗೆ ಲಭಿಸುತ್ತದೆ.       

ಅನುಷ್ಟುಪ್, ಇಂದ್ರವಜ್ರ, ಉಪಜಾತಿ, ಉಪೇಂದ್ರವಜ್ರ, ಔಪಚ್ಛಂದಸಿಕ, ತೋಟಕ, ಧೃತವಿಲಂಬಿತ, ಪುಷ್ಪಿತಾಗ್ರಾ, ಪ್ರಹರ್ಷಿಣೀ, ಮಂಜುಭಾಷಿಣಿ, ಮತ್ತಮಯೂರ, ಮಂದಕ್ರಾಂತ, ಮಾಲಿನಿ, ರಥೋದ್ಧತಾ, ವಂಶಸ್ಥ, ವಸಂತತಿಲಕ, ವೈತಲೀಯ, ಶಾರ್ದೂಲವಿಕ್ರೀಡಿತ, ಶಾಲಿನಿ, ಸ್ವಾಗತಾ, ಹರಿಣಿ ಮೊದಲಾದ ೨೧ ಛಂದಸ್ಸುಗಳ ಸಮಾಗಮದ ಚಂದವನ್ನು ರಘುವಂಶದಲ್ಲಿ ಕಾಣಬಹುದಾಗಿದೆ. ಹಾಗೆ ಅದನ್ನು ಅರ್ಥಮಾಡಿಕೊಳ್ಳುವಾಗ, ಕವಿಯ ಪರಿಶ್ರಮದ ಸಾಧನೆಯನ್ನು ಅರಿಯುವಾಗ, ನಾವೆಷ್ಟು ಕುಬ್ಜರು ಎಂಬ ಅರಿವು ತಂತಾನೇ ನಮಗೆ ಬಂದರೆ ಅಶ್ಚರ್ಯವಲ್ಲ! ಇಂದು ಕವಿ-ಸಾಹಿತಿಗಳೆನಿಸುವ ನಾವು ಹಿಮಾಲಯದೊಡನೆ ನಮ್ಮನ್ನು ಹೋಲಿಸಿಕೊಳ್ಳುವ ಮಾನವನಿರ್ಮಿತ ಚಿಕ್ಕ ಮಣ್ಣಿನಗುಡ್ಡವಾಗಿ ಕಾಣುತ್ತೇವೆ ಎಂಬುದರಲ್ಲಿ ಲವಲೇಶದಷ್ಟೂ ದೋಷವಿಲ್ಲ. ಅದಕ್ಕೇ ಪೂರ್ವಜರು ಹೇಳಿದರು, ’ದೇಶ ತಿರುಗು ಅಥವಾ ಕೋಶ ಓದು’-ಅಂದರೆ ಮಾತ್ರ ಜಗತ್ತು ಏನು ಎಂಬುದರ ಅರಿವು ನಮಗೆ ಸ್ವಲ್ಪವಾದರೂ ಆದೀತು. ಮಹಾಕವಿ ಕಾಳಿದಾಸನ ಪಾದಪದ್ಮಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿ ಕಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇನೆ.

ಸೂರ್ಯವಂಶದ ರಾಜಾ ದಿಲೀಪ ಬಹುದೊಡ್ಡ ಚಕ್ರವರ್ತಿ. ಸತ್ಯಯುಗದಲ್ಲಿ ದೇವತೆಗಳು ದಾನವರೊಡನೆ ಯುದ್ಧಮಾಡುವಾಗ ಇಂತಹ ಚಕ್ರವರ್ತಿಗಳ ಸಹಕಾರವನ್ನು ಕೋರುತ್ತಿದ್ದರು. ಸ್ವರ್ಗವನ್ನು ಸಶರೀರಿಯಾಗಿ ಪ್ರವೇಶಿಸುವ ಮತ್ತು ಹೋಗಿಬಂದು ಮಾಡುತ್ತಿರುವ ಅವಕಾಶ ಅಂದಿನ ಚಕ್ರವರ್ತಿಗಳಿಗಿತ್ತು! ಅಂತಹ ಸಮಯವೊಂದರಲ್ಲಿ ದೇವತೆಗಳ ನೆರವಿಗೆ ತೆರಳಿದ್ದ ದಿಲೀಪ ತನ್ನ ರಾಜ್ಯಕ್ಕೆ-ಅರಮನೆಗೆ-ಅಂತಃಪುರಕ್ಕೆ ಧಾವಿಸುವ ಆತುರದಲ್ಲಿದ್ದ. ಹಾಗೆ ಸ್ವರ್ಗದಲ್ಲಿ ದಾಪುಗಾಲು ಹಾಕುತ್ತಾ ಸಾಗುತ್ತಿರುವಾಗ ಕಾಮಧೇನುವನ್ನು ಅಲಕ್ಷ್ಯಿಸಿದ, ಕಾಮಧೇನುವಿಗೆ ಗೌರವ ನೀಡಲೇ ಇಲ್ಲ. ತತ್ಪರಿಣಾಮ ಕಾಮಧೇನುವಿನಿಂದ " ಸಂತಾನವಾಗದೇ ಹೋಗಲಿ" ಎಂಬ ಶಾಪಕ್ಕೆ ಪರೋಕ್ಷ ಗುರಿಯಾದ. ಬಹುಕಾಲ ಮಕ್ಕಳಾಗದ ಚಿಂತೆಯಲ್ಲಿ ಗುರು ವಶಿಷ್ಠರನ್ನು ಕಂಡು ರಣವನ್ನು ಕೇಳಿದ. ವಶಿಷ್ಠರು ನಡೆದ ಸಂಗತಿಯನ್ನು ಅವನಿಗೆ ತಿಳಿಸಿದರು. ಶಾಪಮುಕ್ತಿಗಾಗಿ ಕಾಮಧೇನುವಿನ ಮಗಳಾದ ನಂದಿನಿಯನ್ನು ಆರಾಧಿಸಿ ಅವಳ ಕರುಣೆಗೆ ಪಾತ್ರನಾಗೆಂದು ಬೋಧಿಸಿದರು. ಬ್ರಹ್ಮಮಾನಸ ಪುತ್ರರಾದ ವಶಿಷ್ಠರ ಆಶ್ರಮದಲ್ಲಿಯೇ ಇದ್ದ ನಂದಿನಿ ವಶಿಷ್ಠರ ಕರೆಯಮೇರೆಗೆ ನಡೆದು ಬಂದಳು. ಮುಂದೆ ೨೧ ದಿನಗಳ ಪರ್ಯಂತ ವ್ರತನಿಷ್ಠನಾಗಿ ನಂದಿನಿಯನ್ನು ಉಪಚರಿಸಿ ಸೇವೆಗೈಯ್ಯುವಲ್ಲಿ ರಾಜಾ ದಿಲೀಪ ಸನ್ನದ್ಧನಾದ, ಕಂಕಣಬದ್ಧನಾದ. ನಿತ್ಯವೂ ನಂದಿನಿಯ ಮೈತೊಳೆಯುವುದು, ಆಕೆ ಮಲಗುವ ಜಾಗವನ್ನು ಸ್ವಚ್ಛಗೊಳಿಸುವುದು, ಆಕೆ ಅಡವಿಗೆ ಮೇಯಲು ಹೋಗುವಾಗ ಹಿಂಬಾಲಿಸಿ ಹೋಗಿ ಆಕೆಯನ್ನು ಕಾಯುವುದು, ಆಕೆ ಮಲಗಿದರೆ ಮಲಗುವುದು, ಆಕೆ ಆಹಾರ ತಿಂದರೆ ತಾನು ಅಲ್ಪಾಹಾರ ಸೇವಿಸುವುದು... ಅಂತೂ ೨೧ ದಿನಗಳೂ ನಿರಂತರ ಸೇವೆ ನಡೆಸಿದ. ೨೧ನೇ ದಿನ ನಡೆದ ಘಟನೆಯನ್ನು ಮೇಲೆ ಓದಿದಿರಲ್ಲಾ...ನಂತರ ಜನಿಸಿದವನೇ ರಘುಚಕ್ರವರ್ತಿ. ಅದೇ ರಘುವಂಶ ಮುನ್ನಡೆದು ಮುಂದೆ ಭಗೀರಥ, ಅಜ, ದಶರಥ, ಶ್ರೀರಾಮ, ಲವ-ಕುಶ, ಶುದ್ಧೋಧನ, ಸಿದ್ಧಾರ್ಥ [ಬುದ್ಧ]ಪ್ರಸೇನ ಜಿತ್, ಸುಮಿತ್ರ ಹೀಗೇ ಸೂರ್ಯವಂಶ ಸತ್ಯಯುಗದಿಂದ ದ್ವಾಪರಯುಗದವರೆಗೂ ಹಬ್ಬಿದೆ!! 

ಮಹರ್ಷಿ ಗೌತಮರು ಆಂಧ್ರ ಪ್ರಾಂತದಲ್ಲಿ ಆಶ್ರಮವಾಸಿಯಾಗಿದ್ದರು. ತಪೋ ನಿರತರಾದ ಅವರಿಗೆ ಹಲವು ಜನ ವಟುಗಳು ಸೇವೆಗೈಯ್ಯುತ್ತಿದ್ದರು. ಕಾಲಾನಂತರದಲ್ಲಿ ವೇದಾಧ್ಯಯನ ಸಂಪನ್ನರಾದ ವಟುಗಳಿಗೆ ಸಂಸಾರಿಗಳಾಗುವ ಬಯಕೆ ಬಂತು. ಗೌತಮರ ಆಶ್ರಮವನ್ನು ತೊರೆಯಲು ಬಯಸಿದರು. ಅದಕ್ಕೆ ಗೌತಮರು ಅವಕಾಶ ನೀಡಲೇ ಇಲ್ಲ. "ನೀವೆಲ್ಲಾ ಮುಂದೆ ಸಂಸಾರಿಗಳಾದರೂ ಸಹಿತ ಈ ಆಶ್ರಮದಲ್ಲೇ ಇರತಕ್ಕದ್ದು" ಎಂದು ಅಪ್ಪಣೆ ಕೊಡಿಸಿಬಿಟ್ಟರು. ಗೌತಮರು ಹೊರಗೆ ಹೋದ ಸಮಯ ಸಾಧಿಸಿ ಬ್ರಾಹ್ಮಣರು ದರ್ಭೆಯನ್ನು ಅಭಿಮಂತ್ರಿಸಿ ಅದನ್ನು ಧೇನುವಾಗಿಸಿ ಆಶ್ರಮದ ಹೊಲದಲ್ಲಿ ಅದನ್ನು ಕಟ್ಟಿಹಾಕಿದರು. ಕಾರ್ಯನಿಮ್ಮಿತ್ತ ತೆರಳಿದ್ದ ಗೌತಮರು ಮರಳುವಾಗ ಹೊಲದಲ್ಲಿ ಮೇಯುತ್ತಿರುವ ದನವನ್ನು ನೋಡಿ ಸಂತೋಷದಿಂದ ಮೈದಡವಿದರು. ಮೈಮುಟ್ಟಿದ ತಕ್ಷಣವೇ ಆ ಹಸುವು ಹೆದರಿಕೆಯಿಂದ ಪ್ರಾಣಬಿಟ್ಟಿತು. ಗೋ ಹತ್ಯೆಗೆ ಕಾರಣನಾದೆ ಎಂದು ತನ್ನನ್ನೇ ಜರಿದುಕೊಳ್ಳುತ್ತಾ ಗೌತಮರು ಈಶ್ವರನ ಕುರಿತು ತಪಸ್ಸು ಮಾಡಿದರು. ಪ್ರತ್ಯಕ್ಷನಾದ ಈಶ್ವರ ಕಾರಣವನ್ನು ತಿಳಿದುಕೊಂಡ ಮತ್ತು ಅದು ದೋಷವೇ ಅಲ್ಲವೆಂತಲೂ ಅದು ದರ್ಭೆಯಿಂದ ನಿರ್ಮಿತವಾಗಿದ್ದ ದನವೆಂಬ ಸಂಗತಿ ಮುನಿಗಳ ಗೋಚಾರ ದೃಷ್ಟಿಗೆ ನಿಲುಕುವಂತೇ ಮಾಡಿದ. ಆದರೂ ಮನದ ಕ್ಲೇಶವನ್ನು ಕಳೆದುಕೊಳ್ಳುವ ಸಲುವಾಗಿ ಗೌತಮರು ತೀರ್ಥವನ್ನು ಸೃಜಿಸಿ ಅದರಲ್ಲಿ ಸ್ನಾನಮಾಡಿದರು. ಮುಂದೆ ಅದೇ ತೀರ್ಥ ನದಿಯಾಗಿ ಹರಿಯಿತು. ಅದು ಇಂದಿಗೂ ನಾವು ಕಾಣುವ ಸಪ್ತನದಿಗಳಲ್ಲಿ ಒಂದಾದ ಗೋ-ದಾವರಿ!       

ಹೀಗೇ ಈ ಕಥೆಗಳನ್ನು ಇಂದು ಹೇಳಲು ಕಾರಣ ಭಾರತ ಗೋ-ಪ್ರಧಾನ ದೇಶ. ಗೋವು ಬಹುತೇಕರ ಆರಾಧ್ಯ ಸ್ಥಾನದಲ್ಲಿರುವ ಮಾತೆ. ಗೋಜನ್ಯ  ವಸ್ತುಗಳ-ಆಹಾರಗಳ ವೈಜ್ಞಾನಿಕ ಉಪಯೋಗವನ್ನು ನಾವು ಇದೀಗಾಗಲೇ ಹಲವಾರು ಮಾರ್ಗಗಳಿಂದ ತಿಳಿದಿದ್ದೇವೆ. ಗೋಮಾತೆಯ ರಕ್ಷಣೆಯಲ್ಲಿ ಹಲವು ಸಾಧು-ಸಂತರು ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ. ಇದಲ್ಲಿ ಶ್ರೀ ರಾಮಂದ್ರಾಪುರ ಪ್ರಾನಾಗಿದೆ,  ಅವ ಆದರ್ಿಕ್ಕಿದಿಗೆ ಅನುಕೀಯಾಗಿದೆ.  ಿಶ್ವೋ ಸಮ್ಮೇಳ, ಅರೆ ಮೈದಾನಲ್ಲಿ ೋಮಾತೆಗೆ ಕೋಟಿನೀರಾಜ, ವಿಶ್ವಂಗೋಗ್ರಾಮಾತ್ರೆ [ಎರು ಕೋಟಿಿ ಸಂಗ್ರಹ ದೆ]ುಂತಾದು ಕಾರ್ಯಕ್ರು ಪಸ್-ಸಂಕಲ್ಪಿದ್ಿಪೆದ ಶ್ರಶ್ರೀರಶ್ವ ೀ ಮಾಸ್ವಾಮಿಗಿಂದೆಸಲ್ಪಟ್ಟಿವೆ. ಶ್ರೀಮ ೧೩ ಕ್ಕೂ ಹೆಚ್ಚು ಗಾಲೆಗನ್ನು ಸ್ವಃ ನೆಸುತ್ತಿದ್ದಈಗಿರುವ ಾರೀಯ ಎಲ್ಲಾ ತಿಗೂ ಇಲ್ಲಿ ಲಭ್ಯಿವೆ.  ಇಂಶ್ಲೀಯೆಲಾಡಿದ ಆಚಾರ್ಯಿಗಾರೀಯೆಲ್ಲಾಗಿ ಅನಂತೋಟಿ ಪ್ರಾಮು. ಗೋವಿಲ್ಲದೇ ಈ ಜಗತ್ತು ಒಂದೇ ದಿನವೂ ನಡೆಯುವುದು ಕಷ್ಟ. ನಾವು ತಿನ್ನುವ ಎಲ್ಲಾ ಆಹಾರಗಳ ಹಿನ್ನೆಲೆಯಲ್ಲಿ ಬಳಸುವ ಹಾಲು-ಹೈನ ಪದಾರ್ಥಗಳನ್ನು ನೆನೆಸಿಕೊಂಡಾಗ ಜನ್ಮ ಕೊಟ್ಟ ಮಾತೆಯ ನಂತರ ಸಾವಿನವರೆಗೂ ಹಾಲೂಡುವ ಎರಡನೇ ಮಾತೆ ಗೋವು ಎಂಬುದು ತಿಳಿದುಬರುತ್ತದೆ.
ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮದೃಢಾಶಯಃ |
ಗೋಭಕ್ತಃ ಭಾರತಗುರುಃ ಹಿಂದುಃ ಹಿಂಸನದೂಷಕಃ ||

ಮಾಧವ ದಿಗ್ವಿಜಯ ಕೃತಿಯಲ್ಲಿ ಹೇಳಲ್ಪಟ್ಟ ಈ ಶ್ಲೋಕ ಹಿಂದೂಗಳು ಯಾರು ಎಂಬ ಕಲ್ಪನೆಯಲ್ಲಿ ಹಿಂದೂಗಳು ಓಂಕಾರವನ್ನು ಮಂತ್ರವನ್ನಾಗಿ ಉಳ್ಳವರು, ಆತ್ಮನು ಅಮರನಾದ ಕಾರಣ ಪುನರ್ಜನ್ಮದಲ್ಲಿ ನಂಬಿಕೆಯುಳ್ಳವರು, ಅಹಿಂಸಾ ಪ್ರೇಮಿಗಳು-ಹಿಂಸೆಯನ್ನು ದೂಷಿಸುವವರು, ಗೋವಿನ ಭಕ್ತರು ಮತ್ತು ಭಾರತೀಯ ಗುರುಗಳನ್ನು ಗೌರವಿಸುವವರು ಎಂದಿದ್ದಾರೆ.

ಅಂತರ್ಜಾಲ ಕೃಪೆಯಿಂದ ಈ ಚಿತ್ರ , ಉತ್ತರಭಾರತದಲ್ಲಿ ದೀಪಾವಳಿಯಲ್ಲಿ ನಡೆಯುವ ಗೋವರ್ಧನ ಪೂಜೆಯ ಸಂದರ್ಭದ್ದು

ಯಾವುದು ಗೋವಿನ ತ್ಯಾಜ್ಯವೋ ಅದು ನಮ್ಮ ಶರೀರಕ್ಕೆ ದಿವ್ಯೌಷಧವಾಗಿರುತ್ತದೆ ಎಂದಮೇಲೆ ಗೋವಿನ ಮಹತ್ವವನ್ನು ಮತ್ತೆ ಬಿಡಿಸಿಹೇಳುವ ಪ್ರಮೇಯ ಬರುವುದಿಲ್ಲ ಎನಿಸುತ್ತದೆ. ಭಗವಾನ್ ಶ್ರೀಕೃಷ್ಣ ಗೋಕುಲದಲ್ಲೇ ಬೆಳೆದ, ಗೋವುಗಳನ್ನೇ ಕಾದ, ಗೋಪಾಲನೆನಿಸಿದ ಆತ ಇಂದ್ರ ಸುರಿದ ಮಳೆಗೆ ಗೋವರ್ಧನ ಗಿರಿಯನ್ನೇ ಕಿರುಬೆರಳಲ್ಲಿ ಎತ್ತಿಹಿಡಿದ! ಅದು ದೀಪಾವಳಿಯ ಸಂದರ್ಭದಲ್ಲಿ. ಭೂಮಿಪುತ್ರನಾಗಿ ಜನಿಸಿದ್ದ ನರಕಾಸುರ, ೧೬೦೦೦ ಹೆಣ್ಣುಮಕ್ಕಳನ್ನು ಕೂಡಿಟ್ಟುಕೊಂಡು ಸುಖಿಸುವ ಅಟ್ಟಹಾಸದಲ್ಲಿದ್ದ. ಅಂಥಾ ನರಕಾಸುರನನ್ನು ಶ್ರೀಕೃಷ್ಣ ಆಶ್ವೀಜ ಕೃಷ್ಣ ಚತುರ್ದಶಿಯ ಬೆಳಗಿನ ಜಾವ ವಧಿಸಿದ, ನೋವೆದ್ದ ಮೈಕೈಗೆ ಎಣ್ಣೆ ಪೂಸಿಕೊಂಡು ಅಭ್ಯಂಜನ ಮಾಡಿದ. ಭೂಮಿತಾಯಿಯ ಕೋರಿಕೆಯ ಮೇರೆಗೆ ಅಶ್ವಿನಕೃಷ್ಣ ಚತುರ್ದಶಿಯನ್ನು ಆಕೆಯ ಸತ್ತ ಮಗನ ಹೆಸರಲ್ಲೇ ನರಕ ಚತುರ್ದಶಿಯಾಗಿ ಆಚರಿಸಿ ಅಭ್ಯಂಜನ ನಡೆಸಲು ಆದೇಶಿಸಿದ. ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿಯ ವಚನಪಾಲನೆಗೆ ಮನಸೋತು ಮುಂದಿನ ಕಲ್ಪದಲ್ಲಿ ಇಂದ್ರನನ್ನಾಗಿಸುವ ವಚನವನ್ನಿತ್ತು ಆತನನ್ನು ಪಾತಾಳಕ್ಕೆ ಕಳುಹಿಸಿದ; ಆತನಾಳಿದ ಈ ಭೂಮಿಯಲ್ಲಿ ಸಿರಿಸಂಪತ್ತಿಗೆ ಕೊರತೆಯೇ ಇರಲಿಲ್ಲ! ಜನರೆಲ್ಲಾ ಉಂಡುಟ್ಟು ಸುಭಿಕ್ಷವಾಗಿದ್ದ ಆ ಸಮಯದಲ್ಲಿ ಬಲಿಯನ್ನು ಸದೆಬಡಿಯಲು ಕಾರಣವೇ ಇರಲಿಲ್ಲ. ಅಂಥಾ ಚಕ್ರವರ್ತಿ ಬಲಿ ದೇವಕಾರ್ಯದಲ್ಲಿ ಉದ್ಯುಕ್ತರಾದ ದೇವತೆಗಳ ಪಟ್ಟವನ್ನು ಕಸಿದುಕೊಳ್ಳುವ ಪ್ರಮೇಯವೇ ಬಂದಿದ್ದರಿಂದ ಅನಿವಾರ್ಯವಾಗಿ ಆತನನ್ನು ಪರೀಕ್ಷೆಗೆ ಒಳಪಡಿಸಿ ಉಪಾಯವಾಗಿ ಪಾತಾಳಕ್ಕೆ ಕಳಿಸಿದ್ದರೂ ವರ್ಷಂಪ್ರತಿ ದೀಪಾವಳಿಯಲ್ಲಿ ಮೂರುದಿನ ಭೂಮಿಯ ಆಳ್ವಿಕೆಯನ್ನು ಬಲಿಗೇ ಒಪ್ಪಿಸಿ ಆತನ ಸಾಮ್ರಾಜ್ಯದ ಬಾಗಿಲಭಟನಾಗಿ ಸೇವೆಗೈಯ್ಯುವುದಾಗಿ ಅನುಗ್ರಹಿಸಿದ ವಾಮನ ತ್ರಿವಿಕ್ರಮನ ಮಾತಿನ ಒಡಂಬಡಿಕೆಗೆ ಒಳಪಟ್ಟು ದೀಪಾವಳಿಯ ಮೂರುದಿನ ಈ ಭೂಮಿಯಲ್ಲಿ ಬಲಿಚಕ್ರವರ್ತಿ ಆಡಳಿತಾರೂಢನಾಗುತ್ತಾನೆ ಎನ್ನುವುದು ಪ್ರತೀತಿ. ಆತನ ನೆನಪಿಗಾಗಿ ಕೆಲವು ಸುವಸ್ತುಗಳನ್ನಿಟ್ಟು, ರಂಗೋಲಿಗಳನ್ನು ಬರೆದು, ದೀಪಗಳನ್ನು ಬೆಳಗಿಸಿ ಪೂಜಿಸುವುದು ಆರಾಧನೆಯ ಒಂದು ಪದ್ಧತಿ. ದಾನವಕುಲದಲ್ಲಿ ಜನಿಸಿಯೂ ದೇವರಿಂದಲೇ ಸೇವೆಪಡೆದ ಹೆಗ್ಗಳಿಕೆಗೆ ಪಾತ್ರನಾದ ಏಕಮೇವಾದ್ವಿತೀಯ ವ್ಯಕ್ತಿ ಬಲಿಚಕ್ರವರ್ತಿ!  

ನ್ಯಾಸರ್ಮನ್ನಟ್ಟುನಿಟ್ಟಾಗಿ ೆಸೂಕಪ್ಪಾಮಿಗೆಂದಖ್ಯಾದು 

ದೀಪಾವಳಿಯ ಸಂದರ್ಭದಲ್ಲಿ ಅಖಂಡ ಭಾರತದಲ್ಲಿ ಗೋವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

ನಮಸ್ತೇ ಜಾಯಮಾನಾಯೈ ಜಾತಾಯಾ ಉತ ತೇ ನಮಃ |
ಬಾಲೇಭ್ಯಃ ಶಫೇಭ್ಯೋ ರೂಪಾಯಾಘ್ನ್ಯೇ ತೇ ನಮಃ || 
---ಅಥರ್ವಣವೇದ  ೧೦/೧೦/೧

ಕೊಲ್ಲಲು ಸರ್ವಥಾ ಅರ್ಹವಲ್ಲದ, ಕೊಲ್ಲಲ್ಪಡಬಾರದ ಗೋವೇ, ಹುಟ್ಟುತ್ತಿರುವ ಸಮಯದಲ್ಲಿ ನಿನಗೆ ನಮಸ್ಕಾರ. ಹುಟ್ಟಿದ ಮೇಲೆಯೂ ನಮಸ್ಕಾರ. ನಿನ್ನ ಕೂದಲುಗಳಿಗೂ ನಿನ್ನ ಗೊರಸುಗಳಿಗೂ ಮತ್ತು ನಿನ್ನ ರೂಪಕ್ಕೂ ಎಲ್ಲವುದಕ್ಕೂ ನಮಸ್ಕಾರ.

ಯಯಾ ದ್ಯೌಃ ಯಯಾ ಪೃಥಿವೀ ಯಯಾಪೋ ಗುಪಿತಾ ಇಮಾಃ |
ವಶಾಂ ಸಹಸ್ರಧಾರಾಂ ಬ್ರಹ್ಮಣಾಚ್ಛಾ ವದಾಮಸಿ || 
----ಅಥರ್ವಣವೇದ  ೧೦/೧೦/೪

ಗೋವಿನಿಂದ ಈ ಭೂಮಿ,  ಈ ಸ್ವರ್ಗ ಮತ್ತು ನೀರಿಗೆ ಆಶ್ರಯವಾದ ಅಂತರಿಕ್ಷ --ಈ ಲೋಕಗಳು ಕಾಪಾಡಲ್ಪಟ್ಟಿವೆ. ಅವಳು ಸುಲಭವಾಗಿ ಒಡೆಯನ ವಶದಲ್ಲಿ ಇರುವಂತಹ ಸೌಮ್ಯರೂಪಳು. ಸಹಸ್ರಧಾರೆಗಳ ಹಾಲಿನಿಂದ ನಮ್ಮನ್ನು ಪೋಷಿಸುವವಳು. ನಾನು ಇಂತಹ ಗೋವನ್ನು ವೇದಮಂತ್ರಗಳಿಂದ ಚೆನ್ನಾಗಿ ಹೊಗಳುವೆನು.

ನಮೋ ಗೋಭ್ಯಃ ಶ್ರೀಮತೀಭ್ಯಃ ಸೌರಭೇಯಿಭ್ಯ ಏವ ಚ |
ನಮೋ ಬ್ರಹ್ಮಸುತಾಭ್ಯಶ್ಚ ಪವಿತ್ರಾಭ್ಯೋ ನಮೋ ನಮಃ ||
  ---ಸ್ಮೃತಿ

ಎಲೈ ಗೋವುಗಳೇ, ನೀವು ಕಶ್ಯ-ಬ್ರಹ್ಮ ಮತ್ತು ಸುರಭೀದೇವಿಯರ ಸಂತಾನ. ನೀವು ಕಾಂತಿ, ಪುಷ್ಟಿ ಮುಂತಾದ ವಿವಿಧ ಸಂಪತ್ತಿನಿಂದ ಬೆಳಗುವಿರಿ. ನೀವು ಯಾವಾಗಲೂ ಅತ್ಯಂತ ಪವಿತ್ರರು. ನಿಮಗೆ ಮತ್ತೆ ಮತ್ತೆ ನಮಸ್ಕಾರಗಳು.

ಸರ್ವಕಾಮದುಘೇ ದೇವಿ ಸರ್ವತೀರ್ಥಾಭಿಷೇಚಿನಿ |
ಪಾಿ ಸುರಭಿ ಶ್ರೇಷ್ಠೇ ದೇವಿ ತುಭ್ಯಂ ನಮೋ ನಮಃ ||

ನೀನು ಪಾವನ ಮಾಡುವವಳು, ಶ್ರೇಷ್ಠಳು, ನಮ್ಮ ಎಲ್ಲ ಬಯಕೆಗಳನ್ನೂ ಪೂರೈಸುವ ದೇವಿಯು. ಸುರಭಿಯೇ! ನೀನು ಸುರಿಸುವ ಹಾಲೇ ಎಲ್ಲಾ ತೀರ್ಥಗಳು. ಇಂತಹ ನಿನಗೆ ಮತ್ತೆ ಮತ್ತೆ ನಮಸ್ಕಾರಗಳು.

ಮಾತರಃ ಸರ್ವಭೂತಾನಾಂ ಗಾವಃ ಸರ್ವಸುಖಪ್ರದಾಃ |
ವೃದ್ಧಿಮಾಕಾಂಕ್ಷತಾ ನಿತ್ಯಂ ಗಾವಃ ಕಾರ್ಯಾಃ ಪ್ರದಕ್ಷಿಣಾಃ ||

ಗೋವುಗಳು ಎಲ್ಲಾ ಪ್ರಾಣಿಗಳಿಗೂ ತಾಯಂದಿರು. ಎಲ್ಲರಿಗೂ, ಎಲ್ಲ ರೀತಿಯ ಸುಖಗಳನ್ನು ಕೊಡುವವರು. ಆದ್ದರಿಂದ ವೃದ್ಧಿಯನ್ನು ಬಯಸುವವನು ನಿತ್ಯವೂ ಗೋವುಗಳನ್ನು ಸ್ತುತಿ, ಪ್ರದಕ್ಷಿಣೆ, ನಮಸ್ಕಾರ ಮತ್ತು ಆಹಾರದಾನಗಳಿಂದ ಪೂಜಿಸಲಿ.    

ಚ್ಯವನ ಮಹರ್ಷಿ ಗಂಗೆಯಲ್ಲಿ ಮುಳುಗಿ ಬಹಕಾಲ ತಪಸ್ಸುಮಾಡುತ್ತಿರುವಾಗ ಬೆಸ್ತರು ಮೀನಿಗಾಗಿ ಬೀಸಿದ ಬಲೆಗೆ ಸಿಕ್ಕಿಬಿದ್ದುಬಿಟ್ಟನು. ಬೆಸ್ತರು ಮೀನುಗಳೊಂದಿಗೆ ಅವನನ್ನೂ ಎಳೆದು ದಡಕ್ಕೆ ಹಾಕಿದರು. ಸಮಾಧಿಯಿಂದ ಎಚ್ಚೆತ್ತ ಮುನಿ ಸುತ್ತಮುತ್ತಲೂ ನೋಡಿ ಒದ್ದಾಡುತ್ತಿರುವ ಮೀನುಗಳ ಬಗ್ಗೆ ದಯೆತಾಳಿ ದೀರ್ಘವಾಗಿ ನಿಟ್ಟುಸಿರು ಬಿಡತೊಡಗಿದನು. ಬೆಸ್ತರು ಈ ವಿಚಿತ್ರವನ್ನು ನೋಡಿ ಓಡಿಹೋಗಿ ರಾಜಾ ನಹುಷನನ್ನು ಕರೆತಂದರು. ರಾಜನು ಮುನಿಗೆ ಪ್ರಣಾಮ ಮಾಡಿ ಏನಾಗಬೇಕೆಂದು ಬೇಡಿದನು. "ಈ ಮೀನುಗಳ ಬಿಡುಗಡೆಯಾಗಿ ಪ್ರಾಣ ಉಳಿದರೆ ಮಾತ್ರ ನಾನೂ ಉಳಿಯುವೆನು ಇಲ್ಲದಿದರೆ ನಾನೂ ಸಾಯುವೆನು" ಎಂದ ಮುನಿಯ ಮಾತು ಕೇಳಿ ರಾಜನು ಬೆಸ್ತರಿಗೆ ಹಣ ಸಲ್ಲಿಸಿ ಮೀನುಗಳನ್ನು ಮರಳಿ ನೀರಿಗೆ ಹಾಕಿಸಿದನು. "ದಯಮಾಡಿ ಎದ್ದು ನಗರಕ್ಕೆ ಬನ್ನಿ" ಎಂದ ರಾಜನ ಮಾತಿಗೆ " ರಾಜಾ ನಾನೂ ಬೆಸ್ತರಿಗೆ ಸೇರಿದ ವಸ್ತು. ನನ್ನ ಬೆಲೆಯನ್ನು ಇವರಿಗೆ ಕೊಟ್ಟು ನನ್ನನ್ನು ಬಿಡುಗಡೆಮಾಡಿಕೋ" ಎಂದುತ್ತರಿಸಿದನು ಆ ಮುನಿ. ಸಾವಿರ ಚಿನ್ನದ ವರಹಗಳನ್ನು ಕೊಡಲು ಮುಂದಾದಾಗ "ಛೆ| ನನ್ನ ಬೆಲೆ ಅಷ್ಟೇ ಅಲ್ಲ" ಎಂದು ಮುನಿ ನಿರಾಕರಿಸಿದನು. ರಾಜನು ಹತ್ತುಸಾವಿರ, ಲಕ್ಷ್ಯ, ಕೋಟಿ ಹೀಗೇ ಏರಿಸುತ್ತಾ ಹೋದರೂ ಮುನಿ "ಇದು ನನಗೆ ಸಮನಾದ ಬೆಲೆಯೇ ಅಲ್ಲ" ಎನ್ನುತ್ತಲೇ ಇದ್ದನು. ಅರ್ಧರಾಜ್ಯವನ್ನು ಕೊಡಲು ಮುಂದಾದ ದೊರೆಗೆ ಇಡೀ ರಾಜ್ಯವನ್ನೇ ಕೊಟ್ಟ ಅದು ತನ್ನ ಬೆಲೆಯಲ್ಲವೆಂದುಬಿಟ್ಟನು. " ರಾಜಾ ನಿನ್ನ ಜೊತೆಯಲ್ಲಿ ಬಂದ ಜ್ಞಾನಿಗಳನ್ನು ಅವರು ಹೇಳಿದಹಾಗೇ ಆಗಬಹುದು "ಎಂದನು ಚ್ಯವನ ಮಹರ್ಷಿ. ರಾನ ಪಕ್ಕದಲ್ಲಿ ನಿಂತಿದ್ದ ವಾನಪ್ರಸ್ಥನೊಬ್ಬ ಮುಂದೆಬಂದು "ರಾಜಾ ಒಂದು ಒಳ್ಳೆಯ ಹಸುವನ್ನು ತರಿಸಿ ಬೆಸ್ತರಿಗೆ ನೀಡು, ಅದೇ ಈ ಮುನಿಯ ನ್ಯಾಯವಾದ ಬೆಲೆ" ಎಂದನು. ರಾಜ ಹಾಗೇ ಮಾಡಲು, ಮುನಿ ಎದ್ದುನಿಂತು "ಇದೀಗ ಸರಿಹೋಯ್ತು ರಾಜಾ, ನನಗೆ ಸರಿಯಾದ ಬೆಲೆ ಎಂದರೆ ಗೋವು ಮಾತ್ರ" ಎಂದನು. ನಂತರ ಗೋಮಾತೆಯ ಗುಣಗಾನವನ್ನು ಆರಂಭಿಸದನು.

"ಗೋವಿಗೆ ಸಮನಾದ ಧನವಿಲ್ಲ. ಗೋವುಗಳನ್ನು ನೋಡುವುದು, ಹೊಗಳುವುದು, ಹೊಗಳಿಕೆಯನ್ನು ಕೇಳುವುದು, ಗೋದಾನ-ಇವು ಎಲ್ಲಾ ಪಾಪಗಳನ್ನೂ ಪರಿಹರಿಸುವ, ಮಂಗಳಕರವಾದ, ಸ್ತುತ್ಯವಾದ ಕರ್ಮಗಳು. ಗೋವುಗಳು ಯಾವಾಗಲೂ ಐಶ್ವರ್ಯಕ್ಕೆ ಮೂಲ. ಗೋವಿನಲ್ಲಿ ಪಾಪವಿಲ್ಲ. ಗೋವು ಯಜ್ಞದ ಕಣ್ಣು; ಯಜ್ಞದ ಮುಖ್ಯ ಸಾಧನ. ವೇದಮಂತ್ರಗಳೂ ಗೋವಿನಲ್ಲಿ ನೆಲೆಸಿವೆ. ದಿವ್ಯ ಮತ್ತು ಅವ್ಯಯವಾದ ಅಮೃತ ಗೋವಿನಲ್ಲಿ ನೆಲೆಸಿದೆ ಮತ್ತು ನಮಗಾಗಿ ಗೋವು ಅದನ್ನು ಸುರಿಸುತ್ತದೆ. ಗೋವು ತೇಜಸ್ಸಿನಲ್ಲಿ ಬೆಂಕಿಗೆ ಸಮಾನ. ಗೋವಿನಿಂದ ಪ್ರಾಣಿಗಳಿಗೆಲ್ಲ ಸುಖ. ಗೋವುಗಳು ನಿರ್ಭಯವಾಗಿ ಉಸಿರಾಡಲು ಅವಕಾಶವಿರುವ ದೇಶವು ಬೆಳಗುತ್ತದೆ. ಗೋವೇ ಸ್ವರ್ಗಕ್ಕೆ ಸೋಪಾನ; ಸ್ವರ್ಗದಲ್ಲಿಯೂ ಗೋವು ಪೂಜ್ಯ. ಗೋವುಗಳು ಕಾಮಧೇನುಗಳು. ತನ್ನ ಹಾಲಿನಿಂದಲೂ ಹವಿಸ್ಸುಗಳಿಂದಲೂ ಪ್ರಜೆಗಳನ್ನು ಪೋಷಿಸುವಳು. ಎತ್ತುಗಳು ಕೃಷಿಕೆಲಸಗಳಲ್ಲಿ, ಭಾರ ಎಳೆಯುವುದರಲ್ಲಿ ಸಹಕಾರಿಗಳು. ತಮ್ಮ ಹಸಿವು, ನೀರಡಿಕೆ, ಬಳಲಿಕೆಗಳನ್ನು ಸಹಿಸಿಕೊಂಡು ನಮಗಾಗಿ ಅವು ಬದುಕುತ್ತವೆ. ಈ ವರೆಗೆ ನಾನು ಹೇಳಿದ್ದು ಗೋವಿನ ಮಹಿಮೆಯಲ್ಲಿ ಒಂದು ಭಾಗಮಾತ್ರ. ಅಷ್ಟನ್ನೇ ನಾನು ಹೇಳಲು ಸಾಧ್ಯ, ಪೂರ್ತಿ ಹೇಳಿ ಮುಗಿಸಲು ಸಾಧ್ಯವಿಲ್ಲ"

---ಇದು ಮಹಾಭಾರತದ ಅನುಶಾಸನದ ೫೧ನೇ ಅಧ್ಯಾಯದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.    

ಒಂದು ಸಂಗತಿಯನ್ನು ನಾನು ವೈಯ್ಯಕ್ತಿಕವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ನನ್ನ ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸುಮಾರು ೩೦-೩೨ ರಷ್ಟು ಹಸುಕರುಗಳಿದ್ದವು. ದೀಪಾವಳಿಯಲ್ಲಿ ಅಭ್ಯಂಜನದ ದಿನ ಬೆಳಗಿನ ಜಾವ ಅಜ್ಜಿ ಮನೆಯಿಂದ ದೀಪಮುಡಿಸಿ ಅದನ್ನು ಆಕ್ಕಿ ತುಂಬಿದ ಪಾತ್ರೆಯಲ್ಲಿ ಇಟ್ಟುಕೊಂಡೊಯ್ದು ಕೊಟ್ಟಿಗೆಯಲ್ಲಿ ಇಳಿಸಿ, ಎಲ್ಲಾ ಗೋವುಗಳಿಗೂ ಎಣ್ಣೆಯನ್ನು ಹಚ್ಚುತ್ತಿದ್ದರು. ಹಣೆಗೆ ಅರಿಶಿನ, ಕುಂಕುಮ ಮತ್ತು ಮಂಗಲ ಸೇಸೆಗಳನ್ನು ಹಚ್ಚುತ್ತಿದ್ದರು. ಪಾದಗಳಿಗೂ ಮಂಗಾಕ್ ಮತ್ತು ಹೂವುಗಳನ್ನು ಹಾಕಿ ನಮಸ್ಕರಿಸಿ ತಿನ್ನಲು ತೊಳೆದ ಅಕ್ಕಿಯನ್ನು ಬಾಳೆಲೆಯಲ್ಲಿ ಸುತ್ತಿ ಕೊಡುತ್ತಿದ್ದರು. ಅಂದಿನಿಂದ ಆರಂಭಗೊಳ್ಳುವ ದೀಪಾವಳಿ ಗೋಪೂಜೆ, ಮಾರನೇ ದಿನ ಅಮಾವಾಸ್ಯೆಯ ರಾತ್ರಿಯಲ್ಲಿ ವಿಶಿಷ್ಟ ತಿನಿಸಾದ ಕರಿಕೆಸವೆಯ ಕಡುಬನ್ನು ಮಾಡಿ, ಗೋವುಗಳನ್ನು ಪೂಜಿಸಿ, ಅವುಗಳಿಗೆ ತಿನ್ನಿಸುವುದರ ಮೂಲಕ ನಡೆಯುತ್ತಿತ್ತು. ಬಲಿಪಾಡ್ಯದ ದಿನ ಮಹಾಪೂಜೆಯ ಸಂಭ್ರಮ. ಅಂದು ಬೆಳಗಿನಜಾವ ಎಲ್ಲಾ ಗೋವುಗಳನ್ನೂ ಸ್ನಾನಮಾಡಿಸಿ ಮೈಗೆ ಮತ್ತು ಕೊಂಬುಗಳಿಗೆ ಕೆಮ್ಮಣ್ಣು ಮತ್ತು ಶೇಡಿ ಗಳಿಂದ ಹುಬ್ಬು ಹಾಕುತ್ತಿದ್ದರು. ಕೊರಳಿಗೆ ಗಂಟೆಗಳ ಸರ ಮತ್ತು ಹೊಸ ಹಗ್ಗಗಳನ್ನು ಹಾಕಲಾಗುತ್ತಿತ್ತು. ನಮ್ಮಲ್ಲಿನ ಪದ್ಧತಿಯಂತೇ ವೀಳ್ಯದೆಲೆ, ಅಡಕೆ, ಶಿಂಗಾರ, ದನಮಾಲೆ ಹೂವು ಎಂಬ ವಿಶಿಷ್ಟ ಪರಿಮಳಸೂಸುವ ಕಾಡು ಹೂವುಗಳ ತೆನೆ, ಪಚ್ಚೆತೆನೆ ಇತ್ಯಾದಿ ಹಲವು ಸಾಮಾಗ್ರಿಗಳಿಂದ ಕೊರಳನ್ನು ಅಲಂಕರಿಸುತ್ತಿದ್ದರು. ಶಾಸ್ತ್ರೋಕ್ತವಾಗಿ ಗಣಪತಿ ಪೂಜೆಯೊಂದಿಗೆ ಆರಂಭಗೊಳ್ಳುವ ಪೂಜೆ ಅಲಂಕೃತಗೊಂಡಿರುವ ಗೋವುಗಳ ಪಾದಗಳನ್ನು ತೊಳೆಸುವ ಸಾಂಕೇತಿಕ ಕ್ರಿಯೆಗಳೊಂದಿಗೆ ಮುಂದುವರಿಯುತ್ತಿತ್ತು. ಅನ್ನ-ತುಪ್ಪ-ಸಕ್ಕರೆ[ಅಥವಾ ಕಲ್ಲುಸಕ್ಕರೆ ಅಥವಾ ಬೆಲ್ಲ]-ಕಾಯಿತುರಿ-ಬಾಳೇಹಣ್ಣು ಮತ್ತು ಯಾಲಕ್ಕಿ ಭರಿತ ಸುವಾಸನೆಯುಳ್ಳ ಸುಮಧುರ ಗೋಗ್ರಾಸವನ್ನು ತಿನ್ನಲು ಕೊಡಲಾಗುತ್ತಿತ್ತು. ತಿಂದಾದ ನಂತರ ಅವುಗಳ ಬಾಯನ್ನು ಉದ್ದರಣೆಯ ನೀರಿನಿಂದ ತೊಳೆದ ಸಂಕೇತ ಮುಗಿದ ನಂತರ ಮಹಾಮಂಗಲಾರತಿ ಜರುಗುತ್ತಿತ್ತು. ನಂತರ ಅವುಗಳನ್ನು ಮೇಯಲು ಗೋಮಾಳಕ್ಕೆ ಬಿಡುವ ಕಾರ್ಯಕ್ರಮ ಶುಭಮುಹೂರ್ತದಲ್ಲಿ ನಡೆಯುತ್ತಿತ್ತು. ಹೊಲದಲ್ಲಿ, ಗೋಮಾಳದಲ್ಲಿ ನಮ್ಮ ದನಕರುಗಳನ್ನು ತಿನ್ನದಂತೇ ಪ್ರಾರ್ಥಿಸಿ ಹುಲಿಯಪ್ಪನ ಗುತ್ತುಗಳಿಗೆ ಪೂಜೆ ನಡೆಯುತ್ತಿತ್ತು. ಊರ ಆಯಕಟ್ಟಿನ ಸ್ಥಳಗಳಲ್ಲಿ ನೆಲೆಸಿರುವ ಚೌಡಿ-ಮಾಸ್ತಿ-ಜಟ್ಗ[ಜಟ್ಟುಗ] ಇತ್ಯಾದಿ ದೇವತೆಗಳಿಗೆ ವಿಶೇಷ ಪೂಜೆ-ಪ್ರಾರ್ಥನೆ ಅರ್ಪಣೆಯಾಗಿ ದನಕರುಗಳ ಬಾಲಕ್ಕೆ ಒಂದರಂತೇ ತೆಂಗಿನಕಾಯಿ ಸಮರ್ಪಿಸಿ ಅವುಗಳ ರಕ್ಷಣೆಯೆ ಭಾರವನ್ನು ಆ ಎಲ್ಲಾ ದೇವತೆಗಳಿಗೆ ವಹಿಸಲಾಗುತ್ತಿತ್ತು. ನೀವು ನಂಬಿ ಬಿಡಿ: ಗೋಮಾಳಕ್ಕೆ ಮೇಯಲು ಹೋಗಿ ತಪ್ಪಿಸಿಕೊಂಡ ದನ, ಚೌಡಿಗೆ ಪೂಜೆಯ ಹರಕೆ ಗೌರವ ಅರ್ಪಣೆಯಾದ ಮರುಘಳಿಗೆಯಲ್ಲೇ ಕೂಗುತ್ತಾ ಬಂದ ಘಟನೆಗಳನ್ನು ನಾನು ಸ್ವತಃ ಕಂಡಿದ್ದಿದೆ. ಬಲಿಪಾಡ್ಯದ ಸಂಜೆ  ಐದು ಗಂಟೆಗೆ ಕೊಟ್ಟಿಗೆಗೆ ಮರಳುವ ಹಸುಕರುಗಳಿಗೆ ಮಲಗಿಸಿದ ಕತ್ತಿ ಮತ್ತು ಹಾನ [ಓಕುಳಿ] ತೋರಿಸುವಲ್ಲಿಗೆ ದೀಪಾವಳಿ ಗೋಪೂಜೆಯ ಕಾರ್ಯ ಮುಗಿಯುತ್ತಿತ್ತು. [ಇಲ್ಲಿ ಕತ್ತಿಯನ್ನು ತೋರಿಸುವುದು  ಬಹುಶಃ ಅವುಗಳ ರಕ್ಷಣೆಯನ್ನು ನಾವು ಮಾಡುತ್ತೇವೆ ಎಂದು ಹೇಳುವ ಸಂಕೇತ ಇರಬಹುದೇ?] ಇವ್ತಿಗೂ ಇಂತ ಕಾರ್ಯಕ್ರಮಗಳು ನಡೆದರೂ ಗೋಮಾಳಗಳು ಇಲ್ಲವಾಗಿವೆ.

ಗೋ-ಗೀತೆಯೊಂದು ಹೀಗಿದೆ:

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೆ ಬಿಟ್ಟರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದು ನಾನಮೃತವೀವೆ
ಅದನುಂಡು ನನಗೆರಡು ಬಗೆವ ಮಾನವ ಕೇಳು
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಹಾಯ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯಿತು ಹೊಡೆಯೇ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಗೋವಿನ ಮನೋಗತವನ್ನು ಕವಿ ಹೀಗೆ ಬಣ್ಣಿಸಿದ್ದಾರೆ. ಪ್ರಾಯಶಃ ಗೋವು ಹೀಗೂ ಯೋಚಿಸಲಾರದು, ಯಾಕೆಂದರೆ ಗೋವೆಂದರೇ ನಿಷ್ಕಲ್ಮಶ ಮನಸ್ಸು, ದಯೆ-ಕಾರುಣ್ಯಗಳ ಅಗಾಧ ಸಾಗರ. ಗೋವುಗಳ ಬಗ್ಗೆ ಸಹಸ್ರಾರು ಘಟನೆಗಳು ನಮ್ಮ ಪ್ರಾಗೈತಿಹಾಸದುದ್ದಕ್ಕೂ ದೊರೆಯುತ್ತವೆ. ಗೋವುಗಳಿಲ್ಲದೇ ಮಾನವ ಬದುಕು ಸಾಗುವುದಿಲ್ಲ!  ಗೋವು ಯಾವುದಕ್ಕಿಲ್ಲ? ಇವತ್ತಿನ ವಿಜ್ಞಾನ ಪಂಚಗವ್ಯವನ್ನೂ ಪಂಚಾಮೃತವನ್ನೂ ಹೊಗಳುತ್ತಿದೆ ಯಾಕೆಂದರೆ ಅವೆರಡರ ಪ್ರಾಶನದಿಂದ ದೇಹದಲ್ಲಿ ಇನ್ನಿಲ್ಲದ ಬದಲಾವಣೆಗಳು ನಡೆಯುತ್ತವೆ. ಒಂದು ಅಮೃತತುಲ್ಯವಾದರೆ ಇನ್ನೊಂದು ಅಘನಾಶಿನಿಯಾಗಿದೆ-ಶರೀರದಲ್ಲಿರುವ ಕಲ್ಮಷಗಳನ್ನು ತೆಗೆದುಹಾಕುತ್ತದೆ. ಇವುಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿದವರಿಗೆ ಇವುಗಳ ಫಲಾನುಭವ ದೊರೆತಿರುತ್ತದೆ.

ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕಂ |
ಪ್ರಾಶನಂ ಪಂಚಗವ್ಯಸ್ಯ ದಹತು ಅಗ್ನಿರಿವ ಇಂಧನಂ ||

ನನ್ನ ಈ ದೇಹದಲ್ಲಿ ಚರ್ಮದಿಂದ ಮೊದಲುಮಾಡಿ ಮೂಳೆಯವರೆಗೆ ಏನೇನು ಪಾಪವು ಸೇರಿಕೊಂಡಿದೆಯೋ ಅದೆಲ್ಲವನ್ನೂ ಬೆಂಕಿಯು ಕಟ್ಟಿಗೆಯನ್ನು ಸುಡುವಂತೇ ಈ ಪಂಚಗವ್ಯವು ಸುಟ್ಟುಹಾಕಲಿ ಎಂಬುದು ಮೇಲಿನ ಶ್ಲೋಕದ ಅರ್ಥ. ಗುಣಪಡಿಸಲಾರದ ಹಲವು ರೋಗಗಳು ಭಾರತೀಯ ತಳಿಯ ಗೋವಿನ ಮೂತ್ರ ಸೇವನೆಯ ಚಿಕಿತ್ಸೆಯಿಂದ, ಪಂಚಗವ್ಯ ಚಿಕಿತ್ಸೆಯಿಂದ ವಾಸಿಯಾದ ದಾಖಲೆಗಳಿವೆ. ಗೋಮೂತ್ರ ಅರಿಶಿನ ಕಾಮಾಲೆಯ[ಜಾಂಡಿಸ್]ನ್ನು ತೊಡೆದುಹಾಕುತ್ತದೆ. ಆಯುರ್ವೇದದಲ್ಲಿ ಗೋವಿನ ಉಪಯೋಗದ ವಿಸ್ತಾರ ಬಹಳವಾಗಿದೆ. ಇಂಥಾ ಗೋವಿಗೆ ನಮೆಲ್ಲರ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುವುದರ ಜೊತೆಗೆ ಗೋವುಗಳ ರಕ್ಷಣೆ, ಪಾಲನೆ ನಮ್ಮೆಲ್ಲರ ದೈನಂದಿನ ಚಟುವಟಿಕೆಯ ಭಾಗವಾಗಬೇಕಾಗಿದೆ; ನೇರವಾಗಿ ಮಾಡಲಾಗದ ಅನಿವಾರ್ಯತೆಯಲ್ಲಿ ಮಾಡುವ ಸಂಘ-ಸಂಸ್ಥೆಗಳಿಗೆ ಸಹಕಾರವನ್ನೋ ಸಹಾಯಧನವನ್ನೋ ಕೊಡುವ ಮೂಲಕ ಗೋವುಗಳ ಪುನರ್ವಸತಿ ಮತ್ತು ಅವುಗಳ ಹತ್ಯೆ ನಿಷೇಧಿಸುವತ್ತ ನಾವು ಮುನ್ನಡೆಯಬೇಕಾಗಿದೆ. ವಿಪರ್ಯಾಸವೆಂದರೆ ಯಜ್ಞಭೂಮಿಯಾಗಿದ್ದ ಭಾರತದಲ್ಲೇ, ಗೋವುಗಳಿಗೆ ಅನಾದಿಯಿಂದಲೂ ಕೊಟ್ಟ ಮರ್ಯಾದೆಗಳನ್ನು ಹಿಂಪಡೆದು ಅವುಗಳನ್ನು ವಧಿಸಲೂ ಭುಂಜಿಸಲೂ ಕೆಲವರಿಗೆ ಅಧಿಕಾರ ನೀಡಿರುವುದು-ನೆನಪಿಡಿ ಈ ಲೇಖನ ಬರೆಯುವ ಹೊತ್ತಿನಲ್ಲೂ ಭಾರತದಲ್ಲಿ ನಿಮಿಷಕ್ಕೆ ೧೫,೦೦೦ ಹಸುಗಳು ಬಲಿಯಾಗುತ್ತಿರುತ್ತವೆ! ಎಂಥಾ ದುರ್ಭರ ಕಾಲ ಎಂಬುದನ್ನು ಊಹಿಸಿಕೊಳ್ಳಿ. ತಿನ್ನುತ್ತೇನೆ ಎಂಬ ಹುಲಿಯನ್ನಾದರೂ ನಿಗ್ರಹಿಸಬಹುದು ತಿನ್ನುವ ಕಟುಕ ಮನುಜರನ್ನು ನಿಗ್ರಹಿಸುವುದು ಕಷ್ಟ; ಅಂಥವರ ಮನೋಸ್ಥಿತಿ ಬದಲಾಗಲಿ ಎಂದು ದೇವರಲ್ಲೇ ಮೊರೆಯಿಡಬೇಕು, ದನ ತಿನ್ನುವವರಿಗೆ ಕೋಳಿ ಜ್ವರ ರೀತಿ ಏನಾದರೂ ಕಾಯಿಲೆ ಬಾಧಿಸಿದರೆ ಆಗಲಾದರೂ ದನಗಳಿಗೆ ನಿರುಮ್ಮಳ ಸಾಧ್ಯವಾಗಬಹುದು.

ಭಗವಾನ್ ವಶಿಷ್ಠರ ಈ ಹೇಳಿಕೆಯೊಂದಿಗೆ ದೀಪಾವಳಿಯ ಸಂಪೂರ್ಣ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ :

ಗಾವೋ ಮಾಂ ಉಪತಿಷ್ಠಂತು ಹೇಮಶೃಂಗ್ಯಃ ಪಯೋಮುಚಃ
ಸುರಭ್ಯಃ ಸೌರಭೇಯ್ಯಶ್ಚ ಸರಿತಃ ಸಾಗರಂ ಯಥಾ |
ಗಾ ವೈ ಪಶ್ಯಾಮ್ಯಹಂ ನಿತ್ಯಂ ಗಾವಃ ಪಶ್ಯಂತು ಮಾಂ ಸದಾ
ಗಾವೋsಸ್ಮಾಕಂ ವಯಂ ತಾಸಾಂ ಯತೋ ಗಾವಃ ತತೋ ವಯಂ ||

ನದಿಗಳು ಸಮುದ್ರದೆಡೆಗೆ ಓಡಿಹೋಗಿ ಸೇರುವಂತೇ, ಹಸುಗಳು ನನ್ನಬಳಿಗೆ ಓಡಿಬರಲಿ....ನಾನು ನಿತ್ಯವೂ ಹಸುಗಳನ್ನು ನೋಡುವೆನು; ಹಾಗೆಯೇ ಹಸುಗಳೂ ನನ್ನನ್ನು ನೋಡಲಿ. ಹಸುಗಳು ನಮ್ಮವು, ನಾವು ಹಸುಗಳಿಗೆ ಸೇರಿದವರು.ಎಲ್ಲಿ ಹಸುಗಳಿರುವವೋ ಅಲ್ಲಿ ನಾವು ಇರುವೆವು.

5 comments:

  1. ಭಟ್ಟರೆ,
    ಎಷ್ಟೆಲ್ಲ ವಿಸ್ತಾರವಾದ, ಅಷ್ಟೇ ವಿಚಾರಪೂರ್ಣವಾದ ಲೇಖನವನ್ನು ನೀಡಿರುವಿರಿ! ನಿಮಗೆ ಧನ್ಯವಾದಗಳು.

    ReplyDelete
    Replies
    1. ಸುಧೀಂದ್ರರೇ, ತಮಗೆ ನಮನ ಪೂರ್ವಕ ಧನ್ಯವಾದಗಳು.

      Delete
  2. ವಿ . ಆರ್ . ಭಟ್ಟರೇ -- ಈ ಬರಹವು ಅತ್ಯಂತ ಸಮಯೋಚಿತವು---- ಗೋವಿನ ವಿಷಯದಲ್ಲಿ ಭಕ್ತಿ ಜನಕವಾದ ಜ್ಞಾನವನ್ನು ಹುಟ್ಟಿಸಬಲ್ಲ ಅದ್ಭತ ಲೇಖನ ವಾಗಿದೆ

    ReplyDelete
    Replies
    1. ಸರ್, ಈ ಲೇಖನದಲ್ಲಿ ಪರೋಕ್ಷ ತಮ್ಮ ಆಶೀರ್ವಾದದ ಬಲ ಅಡಗಿದೆ ಎಂದು ಭಾವಿಸುತ್ತೇನೆ, ಹೆಚ್ಚುವರಿ ದೀಪಾವಳಿಯ ಶುಭಾಶಯಗಳ ಜೊತೆಗೆ ತಮಗೂ ಸಾಷ್ಟಾಂಗ ನಮಸ್ಕಾರಗಳು.

      Delete
  3. Thank you for sharing a few good thoughts on Gomatha.

    ReplyDelete