ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 22, 2011

ನೋವ ಭಾವಗಳು


ನೋವ ಭಾವಗಳು


ನನ್ನಾಳದಲ್ಲಿರುವ ನೋವ ಭಾವಗಳಲ್ಲಿ
ಬಿನ್ನಹವು ನೀವಲ್ಲೇ ಕರಗಿ ನೀರಾಗಿ
ಚೆನ್ನಾಗಿರಲಿ ಎನ್ನ ಸುತ್ತಲಿನ ಜನಮನವು
ಹೊನ್ನು ಬೆಳೆದುಂಡುಟ್ಟು ಸುಖವವರದಾಗಿ

ಬೆನ್ನುಬಿಡದಲೆ ಹಿಡಿದು ಎಳೆದಾಡಿ ಕೇಳಿದಿರಿ
ಸನ್ನೆಯಲೇ ತಾವೆಂದು ಹೊರಬರುವುದೆಂದು !
ನನ್ನಿನುಡಿದವಗಿಲ್ಲಿ ಬದುಕು ಮುಳ್ಳಿನಮಂಚ
ಬೆನ್ನುಹಾಕುವೆ ನಿಮಗೆ ದಮ್ಮಯ್ಯ ಬೇಡ

ಅನ್ನ ನೀರಿನ ಋಣಕೆ ಭುವಿಗೆ ಬಂದಿದ್ದಾಯ್ತು
ಕನ್ನಹಾಕುವ ಬುದ್ಧಿ ಬಾರದಿರಲೆನಗೆ
ಮುನ್ನ ಎಲ್ಲರ ಮೊಗದಿ ನಗುವನ್ನು ಕಾಣುವೊಲು
ನನ್ನಿಷ್ಟಗಳನೆಲ್ಲ ಬಲಿಹಾಕುವುದಕೆ !!

ತನ್ನ ಜೀವಿತ ಸವೆಸಿ ಅಣ್ಣ ಹಜಾರದಲಿ
ಮೊನ್ನೆ ನಿನ್ನೆಯು ಇಂದು ಕುಳಿತನುಪವಾಸ
ತಿನ್ನುವುದೆ ಮಂತ್ರವೆನುವಾ ಖೂಳರುಗಳೆಲ್ಲ
ಗುನ್ನೆಗಳ ಗುರುತಳಿಸಿ ಮೆರೆದಟ್ಟಹಾಸ !!

7 comments:

  1. ಭಟ್ ಸರ್;ಸಮಯೋಚಿತ ಕವನ .ಇಷ್ಟವಾಯ್ತು.ನನ್ನ ಮನೆಗೂ ಬನ್ನಿ.ನಮಸ್ಕಾರ.

    ReplyDelete
  2. ...ಚೆನ್ನಾಗಿರಲಿ ಎನ್ನ ಸುತ್ತಲಿನ ಜನಮನವು....... ಅದ್ಬುತ ಕವನ .

    ReplyDelete
  3. ಸರಿಯಾಗಿದೆ, ಚೆನ್ನಾಗಿದೆ.

    ReplyDelete
  4. ಅಣ್ಣಾ ಹಜಾರೆಯವರ ಮನದಳಲನ್ನು ಚೆನ್ನಾಗಿ ಬಿಂಬಿಸಿದ್ದೀರಿ.

    ReplyDelete
  5. ಅಣ್ಣನಂಥವರು ದೇಶಕ್ಕೆ ಒಬ್ಬರೋ ಇಬ್ಬರೋ ಅಷ್ಟೇ! ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮಸ್ಕಾರಗಳು.

    ReplyDelete