ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 3, 2011

ಆಯುರ್ಭಾವ


ಆಯುರ್ಭಾವ

ನವರಸಗಳು ತುಂಬಿದ ಬೇರುಗಳಾ
ನವವಿಧದಾ ಭಾವದ ನಾರುಗಳಾ
ಹವಣಿಸಿ ತಂದೂ ನೆನೆಸೀ ಕಾಸಿ
ಹವೆಯಾಡಿಳಿಸಿದ ಪಾನಕ ಸೋಸಿ

ಭವದೊಳಗಿರುವುದು ಆರುದಿನ
ಅವ ಇವ ಎನ್ನುತ ಮೂರುದಿನ
ಯುವಜನತೆಯು ಕಣ್ತೆರೆಯುವ ಹೊತ್ತಿಗೆ
ಜವ ತೆರೆವನು ತನ್ಹೊತ್ತಗೆ ಮೆತ್ತಗೆ

ಹವನಿಸಿ ಮನಸಿನ ಮೆಣಸುಗಳಾ
ಭವಣೆಯು ತುಂಬಿದ ಕನಸುಗಳಾ
ನವೆಯಾಗಲಿ ಉಸಿರಾಡಲೂ ಆಗದೆ
ಅವನೋಡಲಿ ಮತ್ತೆಂದಿಗೂ ಬಾರದೆ !

ಕವನದ ಕಷಾಯ ಕುಡಿಯುತಿರಿ
ಚ್ಯವನಪ್ರಾಶವ ಜಡಿಯುತಿರಿ
ನವಯೌವ್ವನ ನಮದಾಗಿಸೆ ಸತತವು
ಅವು ಕೊಡುವಾ ಖುಷಿಯಪರಿಮಿತವು

10 comments:

  1. ಭಟ್ಟರ ಕಷಾಯವು ಅದ್ಭುತವಾಗಿದೆ!

    ReplyDelete
  2. Bhatre,,

    nimma kashaya tumbaane saviyagide...Very Sweeet...

    ReplyDelete
  3. ಈ ಕಷಾಯ ಕುಡಿದು ನಿಮ್ಮ ಗ೦ಟಲು ಸರಿ ಆಯ್ತೆನಿಸುತ್ತದೆ.

    ReplyDelete
  4. Oh.. bahala chennagidri kashaya.. adarakko sihi udarakku sihi.. kaasi kottare inta kashayava chambo....


    Pravi

    ReplyDelete
  5. ಭಟ್ಟರಿಗೆ ನಮಸ್ಕಾರ: ಚೆನ್ನಾಗಿದೆ. ಅಭಿನಂದನೆಗಳು.

    ReplyDelete
  6. ಆತ್ಮೀಯ ಓದುಗ ಮಿತ್ರರೇ, ತಮ್ಮೆಲ್ಲರ ಸ್ಪಂದಿಸುವಿಕೆಗೆ ಸದಾ ತಲೆಬಾಗುತ್ತಿದ್ದೇನೆ. ಕಾರಣಾಂತರಗಳಿಂದ ಹಲವು ಬ್ಲಾಗ್ ಗಳಿಗೆ ಬರಲಾಗಲಿಲ್ಲ, ಶೀಘ್ರವೇ ಬರುತ್ತೇನೆ. ತಮ್ಮೆಲ್ಲರ ಈ ಪ್ರೀತಿ ವಿಶ್ವಾಸಕ್ಕೆ ಚಿರಋಣಿ.

    ReplyDelete
  7. ಭಟ್ ಸಾರ್...
    ಕಷಾಯದ ಕವನ ನಿಜಕ್ಕೂ ಚೆನ್ನಾಗಿದೆ....

    ಶ್ಯಾಮಲ

    ReplyDelete
  8. Kashaya andre henu anta keluvaga, nenapisidira.
    Chennagide.

    ReplyDelete