ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 23, 2011

ಪಂಚ ಭೂತಗಳ ನೆನಕೆ


ಪಂಚ ಭೂತಗಳ ನೆನಕೆ

ಆಸರೆಯನು ನೀಡಿ ನಿಂತ
ಭುವಿಯೆ ನಿನಗೆ ನಮಿಸುವೆ
ಹಾಸಲು ವಿಧಿಸದ ಆಗಸ
ನಿನ್ನ ನೆನೆದು ಎರಗುವೆ

ಬೀಸಿ ಬಂದು ಕೋಶಪೊರೆವ
ಗಾಳಿ ನಿನ್ನ ಮರೆಯೆನೂ
ರಾಶಿ ಅನ್ನ ಬೇಯಿಸುವೊಲು
ಬೆಂಕಿ ನಿನ್ನ ಕರೆವೆನು

ದೋಷಗಳನು ನೀಗಿ ಹೊರಗೆ
ಒಳಗೆ ಇರುವ ಜಲವನೂ
ಆಸರಿಗೆ ಕುಡಿಯುವಾಗ
ಬಾಗುತಾ ವಂದಿಸುವೆನು

ಮಲಿನವಾಗೆ ಮತ್ತೆ ಶುದ್ಧ
ಕಲಿ ಕಲ್ಮಷ ತೊಳೆವೊಲು
ಹುಲುಮಾನವ ಜಾತಿ ಪೆದ್ದ
ಒಲಿದ ನಿಮ್ಮ ಕಾಣದು !

ನಿಮ್ಮೈವರ ಘನಕಾರ್ಯವು
ಹೆಮ್ಮೆಯ ತರುವಂಥದು
ನಮ್ಮ ಸುತ್ತ ನೀವಿರದಿರೆ
ಎಮ್ಮ ಪಾಡದೆಂಥದು ?

9 comments:

  1. Bhatre,

    Sundara kavana, nela,jala, gaali, benki ivellavu namma jeevanadalli avibhajya...ondu irade iddaru badukuvudu kasta....

    ReplyDelete
  2. pancha bhootagaLalli yaarobbaru illade iddaru jeevana durbhara

    ReplyDelete
  3. ಪಂಚಭೂತಗಳ ಬಣ್ಣನೆ ಸರಳವಾಗಿ ಮೂಡಿಸಿದ್ದೀರಿ.ಕವನ ಚೆನ್ನಾಗಿದೆ

    ReplyDelete
  4. ಭಟ್ಟರೇ;ಮೊದಲಿಗೆ ಕೆಲಸದ ಒತ್ತಡದಿಂದ ಬಹಳ ದಿನಗಳಿಂದ ಬ್ಲಾಗಿಗೆ ಬರಲಾಗದೆ ಇದ್ದದ್ದಕ್ಕೆ ಕ್ಷಮೆ ಇರಲಿ.ಪಂಚಭೂತಗಳ ಮಹತ್ವದ ಬಗ್ಗೆ ಸುಂದರ ಕವನ.

    ReplyDelete
  5. ಪಂಚ ಭೂತಗಳಿಗೆ ನಾನು ನಮಿಸುವೆ.. ಅವುಗಳ ಋಣ ನೆನಪಿಸಿದ್ದಕ್ಕೆ ಧನ್ಯವಾದಗಳು.

    ReplyDelete
  6. ಭಟ್ಟರೆ,
    ಪಂಚಮಹಾಭೂತಗಳ ಆಸರೆ ಇರದಿದ್ದರೆ, ಯಾವ ಜೀವಿಗೂ ಜೀವಿಸಲು ಸಾಧ್ಯವೆ? ಅವುಗಳನ್ನು ಕೃತಜ್ಞತೆಯಿಂದ ನೆನೆಯಲೇ ಬೇಕು. ಉಪಕಾರದ ಋಣವನ್ನು ನಮ್ರತೆಯಿಂದ ಸ್ಮರಿಸುವ ಶೈಲಿ ಹಾಗು ಛಂದಸ್ಸು ಕವದ ಮೆರಗನ್ನು ಹೆಚ್ಚಿಸಿದೆ.

    ReplyDelete
  7. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ.

    ReplyDelete
    Replies
    1. ಸಾರ್ ನನ್ನ ಹೆಸ್ರು ವಿಶನಾಥ ಮಣಿವಾಲ
      ನನ್ನ ಮೊಬೈಲ್ ನಂ.೯೭೪೦೪೪೬೪೦೫
      ನಿಮ್ಮೊಡನೆ ಮಾತಾಡುವುದಿದೆ ದಯವಿಟ್ಟು ಕರೆ ಮಾಡುವಿರಾ??

      Delete
  8. ಅದ್ಭುತವಾದ ಕವನ, ನಿಮ್ಮೊಡನೆ ಸಂಬಾಷಿಸಬೇಕೆಂಬ ಹಂಬಲ, ಅವಕಾಶಕ್ಕಾಗಿ ಕಾಯುವೆ.

    ReplyDelete