ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, September 17, 2010

ಸ್ವಯಂ ಚಾಲಿತ


ಸ್ವಯಂ ಚಾಲಿತ

ಗಾಳಿ ಕೇಳಿ ಬೀಸಲಿಲ್ಲ
ನನ್ನ ನಿನ್ನ ಅವರನು
ವೇಳೆ ನಿಂತು ಕಾಯಲಿಲ್ಲ
ನಿನ್ನ ನನ್ನ ಬರವನು

ಮಳೆಯು ಹನಿದು ಬೀಳಲಿಲ್ಲ
ನಮ್ಮ ಇಚ್ಛೆ ಮೇರೆಗೆ
ಇಳೆಯು ಕುಸಿದು ಕಟ್ಟಲಿಲ್ಲ
ನಿಮ್ಮ ಆಜ್ಞೆ ಯಾರಿಗೆ ?

ಸೂರ್ಯ ಬೆಳಕ ಹರಿಸಲಿಲ್ಲ
ಕತ್ತಲಲ್ಲಿ ಬಾ ಎನೆ
ಚಂದ್ರ ಗುರುತು ಮರೆಸಿಕೊಂಡ
ಹಗಲು ನೋಡಬೇಕೆನೆ !

ನೀರ ಮಟ್ಟ ಏರಲಿಲ್ಲ
ಯಾರಿಗೋ ಬಾಯಾರಿಕೆ
ಬೆಂಕಿ ಕಸುವ ಕಳಚಲಿಲ್ಲ
ಉರಿಯಬೇಡ ಅನಲಿಕೆ !

ಬಾನು ಹೊಳೆಯದಿರದು ನಿತ್ಯ
ನಾನು ನೀನು ಮಲಗಿರೆ
ಏನು ನಿನ್ನ ಕೊಡುಗೆ ನೋಡು
ಇವುಗಳೆಲ್ಲ ನಡೆದಿರೆ !

14 comments:

  1. ಹೌದು.........
    ಇವರಿಗೆಲ್ಲ ಯಾರ ಅಪ್ಪಣೆ,
    ನಾವಿಲ್ಲಿ ತೃಣ ಸಮಾನ.
    ಆದರೂ ನಾವು ಕೊಡುವುದಿಲ್ಲ ಮನ್ನಣೆ........

    ಸುಂದರ ಕವನ........

    ReplyDelete
  2. ಪ್ರಾಸಬಧ್ಧ "ಸ್ವಯ೦ಚಾಲಿತ" ವಿಚಾರಪೂರಿತ ಕವನ..ಸೊಗಸಾಗಿ ಮೂಡಿ ಬ೦ದಿದೆ.

    ಶುಭಾಶಯಗಳು
    ಅನ೦ತ್

    ReplyDelete
  3. ಭಟ್ ಸರ್,
    ಎಂದಿನಂತೆ ತುಂಬಾ ಚೆನ್ನಾಗಿದೆ.... ಪ್ರಕ್ರತಿ ತಮ್ಮ ತಮ್ಮ ಕೆಲಸವನ್ನು ಸರಿಯಾಗಿ ನಡೆಸುತ್ತಿದೆ ... ನಾವು ಮಾತ್ರ ಸುಮ್ಮನಿದ್ದೇವೆ....

    ReplyDelete
  4. ಭಟ್ ಸರ್;ನಮ್ಮೊಳಗಿನ ಎಲ್ಲಾ ಕೆಲಸಗಳೂ ತಾನಾಗಿಯೇ ನಡೆಯುತ್ತಿವೆ.ಕವನದ ಭಾವಾರ್ಥ ಚೆನ್ನಾಗಿದೆ.ನಿಮ್ಮ ಜ್ಞಾನ ಗಂಗೆ ಹೀಗೇ ಹರಿಯುತಿರಲಿ.ನಮಸ್ಕಾರ.

    ReplyDelete
  5. ಅರ್ಥಪೂರ್ಣ ಕವನ, ಚೆನ್ನಾಗಿದೆ

    ReplyDelete
  6. ಪ್ರತಿಕ್ರಿಯಿಸಿದ ಎಲ್ಲಾ ಒದುಗ ಮಿತ್ರರಿಗೆ ಹಲವು ನೆನಕೆಗಳು, ಕಾರಣಾಂತರಗಳಿಂದ ಪ್ರತ್ಯೇಕ ಉತ್ತರಿಸಲು ಸಾಧ್ಯವಾಗುತ್ತಿಲ್ಲ, ದಿನವೊಂದೆರಡರಲ್ಲಿ ಮತ್ತೆ ನಿಮಗೆಲ್ಲ ಪ್ರತ್ಯೇಕವಾಗಿ ಸ್ಪಂದಿಸುತ್ತೇನೆ, ದಯವಿಟ್ಟು ಈ ಬಗ್ಗೆ ಕ್ಷಮೆಯಿರಲಿ.

    ReplyDelete
  7. ನಿಸರ್ಗದ ಚೈತನ್ಯಗಳು ಸ್ವಯಂಚಾಲಿತ ಶಕ್ತಿಗಳೇ. ಇವುಗಳ ಎದುರಿಗೆ ಮಾನವನ ಕ್ಷುದ್ರತೆ ಅರಿವಾಗದಿರದು. ಉತ್ತಮ ಕವನವನ್ನು ಕೊಟ್ಟಿದ್ದೀರಿ.

    ReplyDelete
  8. ಬಾನು ಹೊಳೆಯದಿರದು ನಿತ್ಯ
    ನಾನು ನೀನು ಮಲಗಿರೆ
    ಏನು ನಿನ್ನ ಕೊಡುಗೆ ನೋಡು
    ಇವುಗಳೆಲ್ಲ ನಡೆದಿರೆ !


    chennagide sir,

    ReplyDelete
  9. ಸುಂದರ, ಸರಳ, ಅರ್ಥಪೂರ್ಣ... ನಿಮ್ಮೊಳಗಿನ ಕವಿ ಶಕ್ತಿ ಅದ್ಭುತ..

    ReplyDelete
  10. Bhatre,

    tumbaa praasapurna, arthapurna kavana. Very Nice sir..

    ReplyDelete
  11. ತಮಗೆಲ್ಲರಿಗೂ ನಮಸ್ಕಾರಗಳು, ಮತ್ತೆ ಸಿಗುತ್ತೇನೆ.

    ReplyDelete
  12. ನಿಸರ್ಗದ ಸ್ವಯಂಚಾಲಿತವನ್ನು ವಿವರಿಸಿ, ಬದುಕು ನೋಡಬೇಕಾದ ಪರಿ ಹೇಳಿದ್ದಿರಾ

    ReplyDelete