ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, August 4, 2010


ಮಿತ್ರ ಓದುಗರೇ, ಇದೊಂದು ನನ್ನ ಹೊಸಮಾಲಿಕೆ 'ಸರಿಗಮಪದನಿ' . ಈಗಷ್ಟೇ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು ನೆಟ್ ನಲ್ಲೇ! ಕರೆಯಲು ಮರೆತಿದ್ದೆ, ಇರ್ಲಿ ಬಿಡಿ ಈಗ ಬನ್ನಿ ಓದಿ- ಇದರಲ್ಲಿ ನಿಮ್ಮೊಂದಿಗೆ ಕಂಗ್ಲಿಷ್ ಹಾಗೂ ಕೆಲವು ಧ್ವನಿ ವಾಹಿನಿ ಮತ್ತು ವೀಡಿಯೋಗಳನ್ನು ಕೊಡುವ ಪ್ರಯತ್ನ, ಮೊಟ್ಟಮೊದಲಾಗಿ ಇಂದು ಕಂಗ್ಲಿಷ್ ಕವನ. ಇದು ಪಕ್ಕಾ ಭಾವಗೀತೆಯಲ್ಲ, ಆದರೆ ಸ್ವಲ್ಪ ಹಾಸ್ಯ, ಸ್ವಲ್ಪ ನೋವು, ಸ್ವಲ್ಪ ನಲಿವು, ಸ್ವಲ್ಪ ತುರಿಕೆ ಹೀಗೇ ಎಲ್ಲವುಗಳ ಮಿಶ್ರಣದ ಮಿಸಳ್ ಭಾಜಿ ಈ ಮಾಲಿಕೆ. ಅನಿಸಿದ್ದನ್ನು ಯಾವ ಭಿಡೆಯವೂ ಇಲ್ಲದೇ ಹಾಗಿಂದ ಹಾಗೇ ಪ್ರಸ್ತುತ ಪಡಿಸುವ ಮಾಲಿಕೆ ಇದು.

ಇದರಲ್ಲಿ ಸ್ವಾನುಭವ, ಸ್ನೇಹಿತಾನುಭವ, ಪರಕಾಯಪ್ರವೇಶ, ಛೂ-ಮಂತರ್ ಇಂದ್ರಜಾಲ, ಕಷ್ಟಾನಿಷ್ಟ, ಸರಸ-ವಿರಸ-ಸಮರಸ, ಹಬ್ಬದ ಕಾಯಿ ಹೋಳಿಗೆ, ಅಬ್ಬರಿಸಿದ ಯಜಮಾನ, ಹಳಸಿದ ಹುಳಿಯನ್ನ, ಮುಗ್ಗಿದ ಬಟ್ಟೆ, ಒದ್ದೆ ತಲೆ, ಘಾಟಿನ ಒಗ್ಗರಣೆ, ಬ್ರಹ್ಮಾಂಡದಂತ ಹೊಟ್ಟೆ, ಅಂಬೊಡೆ-ಪತ್ರೊಡೆ-ಚಿತ್ರಾನ್ನ, ಗಜಕೇಸರಿ ಯೋಗದ ಜ್ಯೋತಿಷ್ಯ, ಪರರಗಂಟಿಗೇನಪಾಯ, ಸಪ್ತ ಸಮುದ್ರಗಳ ಮೇರೆ ಮೀರಿ, ಅಧಿಕ ಪ್ರಸಂಗ-ಅತ್ಯಧಿಕ ಪ್ರಸಂಗ, ಹಾರ್ಮೋನು-ಹಾರ್ಮೋನಿಯಮ್ಮು-ಇಂಬ್ಯಾಲೆನ್ಸು-ಮೊಬೈಲ್ ನಲ್ಲಿ ನೋ ಬ್ಯಾಲೆನ್ಸು ! ಇತ್ಯಾದಿ ಹಲವು ಹತ್ತು ಅನಿಸಿಕೆಗಳನ್ನೆಲ್ಲ ಮಧ್ಯೆ ಮಧ್ಯೆ ಒಂಚೂರು ಅದೂ ಇದೂ ಅಂತ ಕೊಡಲು ಉದ್ಯುಕ್ತನಾಗಿದ್ದೇನೆ. ಸ್ವಾಗಿತಿಸುವಿರಲ್ಲವೇ ? ಹೌದಾದರೆ ಓದಿ ಇಂದಿನ ಕವನ--ನಮಸ್ಕಾರ



ಚಿತ್ರಗಳ ಋಣ : ಅಂತರ್ಜಾಲ

ಮನದ ಹರತಾಳ


ಏಕೋ ಮುನಿಸಿದೆ ಈ ಮನವಿಂದು
ಬಿಕೋ ಎನ್ನುವುದು ಬರೆಯದ ಬದಕೊಂದು
ತಕೋ ಲೆಕ್ಕಣಿಕೆಯ ಕೈಯ್ಯೊಳಗೆ
ನಕೋ ಎನ್ನದಿರು ಈ ಘಳಿಗೆ !

ಯಾಕಾದರೂ ಈ ದಿನ ಬಂತು
ಬೇಕಾಗಿತ್ತೇ ಬಡಪಾಯ್ಗೆ ?
ನಾಕಾದರೂ ಊಟವೇ ಇಲ್ಲ
ಸಾಕಾಯಿತು ತುಸು ತೆರಪಿಲ್ಲ !

ಬೆಳಗೆದ್ದು ದೇವರ ನೆನೆದೆ
ಒಳಗಡೆಗೆ ಬಿಸಿ ಚಾ ಕುಡಿದೆ
ಕಳುವಾಗಿದೆ ಎನ್ನುವ ಫೋನು !
ತಳಮಳಿಸದೆ ತಿರುಗಿದೆ ಫ್ಯಾನು

ಸಂಪಾದಕ ಕರೆಯನು ಮಾಡಿ
ಸೊಂಪಾಗಿದೆ ಕವನವದೆಂದ
ತಂಪಾದ ಗಾಳಿಯದಷ್ಟೇ
ಕೆಂಪಾಯ್ತು ಕಾಸಿಗೆ ಕಣ್ಣು !

ಬೈಟೂ ಕಾಫಿಯ ವ್ಯವಹಾರ
ಸೈಟಿಲ್ಲದ ಮನೆ ವ್ಯಾಪಾರ !
ಹೈಟಾಗಿದೆ ನೋಡುವುದಕ್ಕೆ
ಕೈಕಟ್ಟಿದೆ ಖರ್ಚಿಗದಕ್ಕೆ

9 comments:

  1. ನಿಮ್ಮ ಹೊಸ ಪ್ರಯತ್ನ ಚೆನ್ನಾಗಿದೆ. ಶುಭಾಶಯಗಳು.
    ಕವನರಚನೆಗೆ ಹರತಾಳವು ಅಡ್ಡಿ ಮಾಡದಿರಲಿ ಎಂದು ಹಾರೈಸುತ್ತೇನೆ.

    ReplyDelete
  2. ಓಂ ಹ್ರಾಂ ಹ್ರೀಂ ಪ್ರಂ ಪ್ರತಿಕ್ರಿಯಾತ್ಮಿಯೇ ನಮಃ || ಊ ಹಾ ಹಾ ಹಾ ಹಾ .....ಯಾರೋ ನರಮನುಷ್ಯರು ಬಂದಿದ್ದಾರಲ್ಲಾ....ಸಂತೋಷ ಸಂತೋಷ ...

    ಕೆಲವೊಂದು ಐಟಂಗಳು ನನ್ನ ಯಾವ ಮಾಲಿಕೆಗೂ ಹಿಡಿಸುವಂತಹುದಾಗಿರಲಿಲ್ಲ, ಅವುಗಳನ್ನು ಒಂದೋ ಕೈಬಿಡಬೇಕು ಅಥವಾ ಹೊಸ ಮಾಲಿಕೆ ಹುಟ್ಟುಹಾಕಬೇಕು, ಹಕೀಕತ್ತು ಹೀಗಿರುವಾಗ ನಿಮ್ಮಲ್ಲೇ ಹೇಳಿ ಸುಧಾರಿಸಿಕೊಂಡರಾಯ್ತು ಎಂದು ಶುರುಹಚ್ಚಿಕೊಂಡೆ, ಗೂಗಲ್ ಬಜ್ ನಲ್ಲಿ ಹತ್ತಕ್ಕೋ ಹೆಚ್ಚು ಜನ ಇಷ್ಟಪಟ್ಟಿದ್ದೀರಿ, ಇಲ್ಲಿ ಶ್ರೀ ಸುನಾಥರು ಹರಸಿದ್ದಾರೆ, ಸುಗುಣ ಮೇಡಂ ಇಷ್ಟಪಟ್ಟಿದ್ದಾರೆ, ಅಂದ ಮೇಲೆ ತದಮಾಡುವುದೇ ಇಲ್ಲಬಿಡಿ, ಸದ್ಯ ಪ್ರತಿಕ್ರಿಯಿಸಿದ ಸುಗುಣ ಮೇಡಂ ಮತ್ತು ಶ್ರೀ ಸುಧೀಂಧ್ರ ದೇಶಪಾಂಡೆ ತಮಗೆ ನಮನಗಳು.

    ReplyDelete
  3. ಹೊಸ ಪ್ರಯೋಗ ಸೊಗಸಾಗಿದೆ..

    ReplyDelete
  4. ಹೊಸ ಪ್ರಯೋಗ ಹೊಚ್ಚ ಹೊಸದಾಗಿದೆ ಭಟ್ ಸಾರ್... :-) ಅಂತು ಏನಾದರೂ ಒಂದು ವಿಶಿಷ್ಟವಾದದ್ದು ಹುಟ್ಟು ಹಾಕುತ್ತೀರಿ. ಚೆನ್ನಾಗಿದೆ...

    ಶ್ಯಾಮಲ

    ReplyDelete
  5. ಮಿಸಳ್ ಭಾಜಿ ತು೦ಬಾ ರುಚಿಕಟ್ಟಾಗಿದೆ. ಬಿಡುಗಡೆ ಸಮಾರ೦ಭವನ್ನೂ ಖರ್ಚಿಲ್ಲದೆ ಮಾಡಿದ್ದೀರಿ. ಮುಂದುವರಿಯಲಿ

    ReplyDelete
  6. ಅಬ್ರಕದಬ್ರ ಲಾ ಳಾ ಲಾ ಳಾ ಳಾ ಹೂಂ ಫಟ್ ............ಯಾರೂ ಓಹೋಹೋಹೋ ನೀವೋ ? .....

    ಪ್ರತಿಕ್ರಿಯಿಸಿದ ಶಶಿ ಮೇಡಂ, ಶ್ಯಾಮಲ ಮೇಡಂ ಮತ್ತು ಶ್ರೀ ಪರಾಂಜಪೆ ತಮಗೆಲ್ಲಾ ಅನಂತ ಧನ್ಯವಾದಗಳು

    ReplyDelete
  7. ಬಂದು ಅರುಹಿಹರು
    ಬರದೆ ಅರುಹಿಹರು
    ಬಂದೂ ಬಾರದಂತಿರುವರು
    ಬರದೆ ತಿಣುಕುವರು
    ಬಂದು ಮುಲುಗುವರು
    ಬಂದೂ ಬಾರದೆ ಮತ್ತು ಬರದೆ ಬಂದೂ ಹಾಯಾಗಿಹರು
    ಮನದ ಮೂಲೆಯ
    ಹರತಾಳದ ಭಾವಬರಹಕ್ಕೆ ಸಿಕ್ಕು ಸಿಲುಕಿಲ್ಲ, ಸಿಲುಕಿ ಸಿಗಲಿಲ್ಲ.
    ಪಾತಾಳಗರಡಿಯಲ್ಲಿ
    ಜಾಲಾಡಿಸಿ ಹೆಕ್ಕಿ ತಂದಿಹೆವೆಲ್ಲಾ!
    ತಂದು ತಂದಂತಿಲ್ಲ
    ತಂದಿಲ್ಲಲ್ಲೇ ತಂದಂತಿದೆ.
    ಭಾವ ಹರತಾಳ!
    ಚೆಂದದ ಕವನ ಮಾಂತ್ರಿಕ ಭಟ್ಟರೇ! ಓಂ!ಹಿಂ! ಕ್ರಿ೦! ಫಾಟ್!

    ReplyDelete
  8. ಯರಲವಹ ಶಂ ಶಂ ಶಾಮ್ ಸ್ವಾಹಾ ,,,,,,ಶ್ರೀಯುತ ಸೀತಾರಾಮರೇ ತಮ್ಮ ಕವನ ತುಂಬಾ ಅದ್ಬುತ , ಪ್ರತಿಕ್ರಿಯೆಯೇ ಕವನವಾದಾಗ ಇನ್ನು ನಮಗೆ ಸ್ಫೂರ್ತಿ ಹೇಗಿರಬೇಡ, ನಿಮ್ಮ ಆಗಮನ ಬಹಳ ಸಂತಸ ತಂದಿದೆ, ಅಸಂಖ್ಯ ಧನ್ಯವಾದಗಳುಂ ಸ್ವಾಹಾ ||

    ReplyDelete